ಬಿಳಿಯ ಹಾಳೆಯೊ೦ದನ್ನು ಕೊಟ್ಟು ಬರಿ ಎ೦ದರೆ ನಾ ಏನು ಬರೆಯಲಿ
ನಾನಿರುವುದು ಪ್ರೀತಿಯ ಸುಳಿಯಲಿ
Bookmark/Search this post with

ಮುಂದೆ ಓದಿ...
Posted by sudhakarkrishna on October 11, 2011 09:59 AM· permalink
ಆತ ...
ಮುಖ ತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...
ನನಗೂ.. ಅಸಾಧ್ಯ ಕೋಪ ಬಂತು..
ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇಲ್ಲಿಗೆ ಮುಗಿದ ಇಟ್ಟಿಗೆ ಸಿಮೆಂಟಿನ ಪ್ರಕಾಶರ ಕಥೆ "ನೀತಿ" ಯ ಮುಂದುವರೆದ ಭಾಗ ಕೊಂಡಿ: http://ittigecement.blogspot.com/2011/09/blog-post.html
ಆತ...
ಅಬ್ಬಾ ಎಷ್ಟೊಂದು ಅನುಮಾನ ಇವಳಿಗೆ
ಇಂದು ಮೊದಲ ರಾತ್ರಿಯೇ ಹೀಗೆ
ಆದರೆ ಇನ್ನು ಜೀವನ ಪರ್ಯಂತರ ಹೇಗೆ?
"ಆದರೆ ಹೇಗೆ ನಂಬಲಿ" ಎಂದರೆ... ನಾನೇನು ಹೇಳಬೇಕಿತ್ತು...??
ನಾನು ಮಾಡಿದ್ದೆ ಸರೀ!
ಒಮ್ಮೆಲೆ ಮೊದಲ ರಾತ್ರಿ ನಾನು ಅದು ಇದು ನೇರ ಅಂಥಾ ಎಲ್ಲವನ್ನೂ ಒಮ್ಮೆ ಹೇಳಿದ್ದೆ ತಪ್ಪಾಯಿತು .....ಸ್ವಲ್ಪ ಸಮಯದ ನಂತರ ಹೇಳಬಹುದಿತ್ತು... ಹೇಳದೆ ಮುಚ್ಚಿಟ್ಟಿದ್ದಾರೆ ಏನಾಗುತ್ತಿತ್ತು...??? ಸುಮ್ಮನೆ ನೆರವೆಂದು ಎಲ್ಲವನ್ನೂ ಬಿಚ್ಚಿಟ್ಟು ಅನುಮಾನಕ್ಕೆಡೆ ಮಾಡಿಸಿದೆನಲ್ಲಾ ...ಹೋಗಲಿ ಅಷ್ಟಕ್ಕೂ ಅನುಮಾನಪಟ್ಟಿದ್ದು ಅವಳು... ಅದಕ್ಕೆ ಸಿಟ್ಟು ಬಂದು ನಾನು ತಿರುಗಿದೆ... ಅಬ್ಬಾ.. ಅದಕ್ಕೆ ತಾನೂ ತಿರುಗಿ ಮಲಗಬೇಕೆ...? ಹೋಗಲಿ ಹೆಣ್ಣಿಗೆ ಹಠ ಎನ್ನುತ್ತಾರೆ ನಾನೆ ಒಮ್ಮೆ ಮಾತಾಡಿಸಲೇ... ಮಾತಾಡಿಸಿ ಸೋತು ...ಮೊದಲ ರಾತ್ರಿ ಗೆಲ್ಲಲೇ ????.....ಮೆಲ್ಲ ಅರೆ ನಿದ್ದೆಯಲ್ಲಿದ್ದ೦ತೆ ... ಕೈ ಅವಳ ಮೈ ಮೇಲೆ ಹಾಕಲೇ...ಗಂಡಿಗೆ ಹೇಗಿದ್ದರೂ ಚಟ ವಲ್ಲವೇ? ಹಾಕಿ ಬಿಡುತ್ತೇನೆ.... ಇನ್ನು ಸಿಟ್ಟಿದ್ದರೆ ಕೈ ಬಿಸಾಕುತ್ತಾಳೆ ... ಇಲ್ಲಿದಿದ್ದರೆ ನಾನೆಂದು ಕೊಂಡ೦ತೆ ಮೊದಲ ರಾತ್ರಿ ಮಿಲನ ಮಹೋತ್ಸವ...
ಆಕೆ .....
"ನಾನೇಗೆ ನಂಬುವದು" ಎಂಬ ನನ್ನ ಪ್ರಶ್ನೆ ಅವರ ಅಸ್ತಿತ್ವವನ್ನೇ ಕೆಣಕುವ೦ತಿತ್ತಲ್ಲವೆ ??
ನಾನು ಅದನ್ನು ಕೇಳಬಾರದಿತ್ತು ...
ಪರಸ್ಪರರನ್ನು ನಂಬದೆ ಸಂಭಂಧ ಗಟ್ಟಿ ಮಾಡುವದು ಹೇಗೆ?...
ಅದು ಪ್ರಾರಂಭದಲ್ಲೇ...
ಅವರು ಆದನ್ನು ಹೇಳದೆ ಮುಚ್ಚಿಡಬಹುದಿತ್ತು...
ಹೇಳಿದ ಮೇಲೆ ಅದ್ದನ್ನು ನಾನು ನಂಬದೆ ಅನುಮಾನಿಸುವದು ತಪ್ಪು ನಾನು
ಅವರು ಹೇಳಿದ್ದರಲ್ಲಿ ಅರ್ಧವನ್ನೇ ನಂಬಿದೆ ಇನ್ನರ್ಧ ಅನುಮಾನಿಸಿದೆ...
ಅದನ್ನು ಅನುಮಾನಿಸಬಹುದಿತ್ತು...
ಇಲ್ಲ ಇದನ್ನು... ನ೦ಬಬಹುದಿತ್ತು...
ಹೆಣ್ಣಿಗೆ ಹಠ ಎನ್ನುವದು ಇವರಿಗೆ ಗೊತ್ತಿಲ್ಲವೇ/.... ಒಮ್ಮೆ ಅವರ ಕೈ ನನ್ನ ಮೇಲೆ ಬಿದ್ದರೆ ನಾನೆಲ್ಲಾ ಮರೆತು ಅವರನ್ನ ತಬ್ಬಿ ಬಿಡುತ್ತೇನೆ....
ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನು ಬದಿ ತಿರುಗಿಸಿ ಅವಳೆಡೇಗೆ ಮುಖ ಮಾಡಿ ತಿರುಗುತ್ತಾನೆ...
ಅವನು ತನ್ನ ಕಡೆ ತಿರುಗಿದ್ದು ಅವಳಿಗೆ ಅರಿವಾಗುತ್ತೆ...ನಿದ್ದೆಯಲ್ಲಿದ್ದಾನೋ...? ಅಥವಾ ಬೇಕಂತಲೇ ತಿರುಗಿರುವನೋ? ತಿರುಗಿ ನೋಡಲು ಕಾತರ... ಆದರೆ ನೇರ ನೋಡಲಾಗುವದಿಲ್ಲ... ಆದ್ದರಿಂದಲೇ ನಿದ್ರೆಯಲಿಂದಲೇ ಮೇಲ್ಮುಖಕ್ಕೆ ತಿರುಗಿ ನಿಮಿಲಿತ ನೇತ್ರದಲ್ಲಿ ಅವನನ್ನು ನೋಡುತ್ತಾಳೆ... ನಿದ್ರೆಯಲ್ಲಿದ್ದಂತೆ ನಟಿಸುತ್ತಿರುವದು ಗೊತ್ತಾಗುತ್ತೆ ....ಇರಲಿ ನೋಡೋಣ....ಗಂಡಿಗೆ ಚಟವಂತೆ... ಸರಿಯೇ ನೋಡೋಣ...
ಅವಳು ಮೇಲ್ಮುಖ ಮಾಡಿ ತಿರುಗಿದ್ದು ಇವನು ನಿಮಿಲಿತನಾಗೆ ಗಮನಿಸುತ್ತಾನೆ... ಅಬ್ಬ ಹೆಣ್ಣೇ ಇನ್ನು ಹಟವೇ? ಇರಲಿ ಮೆಲ್ಲ ಕೈ ಮೇಲೆ ಹಾಕುತ್ತೇನೆ ನೋಡೋಣ...ಕೈ ನಿದ್ರೆಯಲ್ಲಿ ಬಂದಂತೆ ಅವಳ ಮೇಲೆ ಬಳಸಿಯೂ ಬಳಸದಂತೆ ಇರಿಸಿದ...
ಕೈ ಬೀಳುತ್ತಲೇ ಇವಳು ಅವನೆಡೆಗೆ ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನೆಡೆಗೆ ಸರಿಯುತ್ತಾಳೆ... ಈಗ
ಈಗ ನಟನೆಯಲ್ಲಿ ಮುಚ್ಚಿದ ಇಬ್ಬರ ಕಣ್ಣುಗಳಲ್ಲಿ ಅಪಾರ ಆಶೆ ತುಂಬಿದೆ... ಪರಸ್ಪರರ ಮುಖಕ್ಕೆ ಪರಸ್ಪರರ ಬಿಸಿಯುಸಿರು ಬೀಸುತ್ತಿದೆ...ತಂಗಾಳಿಯಂತೆ..ಮಂದಾನಿಲದಂತೆ .... ಮಾರುತವಾಗಿ... ಅದರೊಡನೆ ಮನದ ಸುಪ್ತ ಬಯಕೆಗಳು ಹೊತ್ತಿ ಕಂಬಾರನ ತಿದಿಗೇ ಬೆದೆಯೋಡಿವ ಬೆಂಕಿಯಂತೆ ಹರಡಿ ಸುತ್ತೆಲ್ಲಾ ಮುತ್ತಿ, ಜಗಳ ಕದನಗಳ ಕಾರಣಗಳು ಗೌಣವಾಗಿ ಅದರಲ್ಲಿ ಸುಟ್ಟು ಕರಗಿತು ... ಕೇವಲ ಬಯಕೆ ಪ್ರೀತಿಯ ಬೆಂಕಿ ಹೊತ್ತೊಡೆದು ...ಪರಸ್ಪರರನ್ನು ಅಪ್ಪಿಸಿ ಮುತ್ತಾಡಿಸಿ ಮಿಲನಕ್ಕೆ ಮುಂದುವರೆಸುತ್ತದೆ... ಮುಚ್ಚಿದ ಕಂಗಳು ತೆರೆಯದೆ ಎಲ್ಲವನ್ನೂ ನೋಡಿ ಸವಿಯಿತು... ತೆಗೆದಾಗ ಕಾಣದ್ದು ಮುಚ್ಚಿದಾಗಲೇ ಕಂಡಿತು...ಕತ್ತಲು ಆಪ್ತವಾಯಿತು... ಬಯಕೆ ಮುಗಿಲ ಮುತ್ತಿಟ್ಟು ಮುತ್ತಿಕ್ಕಿ ... ಮೊದಲಿನ ಮಾತಿನ ಕದನ ಕಾಣದಾಗಿ ಈಗ ಇಲ್ಲಿ ಮಾತಿಲ್ಲದ ಪ್ರೇಮದ ಕದನ ಆರಂಭವಾಯಿತು ...ಒಬ್ಬರಲ್ಲಿ ಒಬ್ಬರು ಕಳೆದು ಹೋದರು....!
ಮಿಲನದ ಕದನದಲ್ಲಿ ಸುಸ್ತಾಗಿ ಅಪ್ಪಿ ವಿರಮಿಸಿದ ಪರಸ್ಪರ ಮೈ ಮನಗಳಲ್ಲಿ ಧನ್ಯತೆ ತುಂಬಿ ....
ಆತ "ಪುಟ್ಟಾಣಿ ನಾನು ತಿರುಗಿ ಮಲಗಿದ್ದು ತಪ್ಪು" ಎಂದ
ಅವಳು " ಪೋಲಿ ಕಿಟ್ಟಾಣಿ ಅನುಮಾನಿಸಿದ್ದು ನನ್ನ ತಪ್ಪು"
ಆಮೇಲೆ ಇಬ್ಬರು ಒಟ್ಟಿಗೆ ಅರಿವಿಲ್ಲದೆ ಅಂದಿದ್ದು "ಇರಲಿ ಬಿಡು ಅದೊಂದು ಕಹಿ ಕಾಲ -ಸುಖದಲ್ಲಿ ಅದೆನೇಕೆ ನೆನೆವ"
"ಹೆಣ್ಣಿಗೆ ಹಠ - ಗಂಡಿಗೆ ಚಟ " ಇದು ಸತ್ಯ.... ಇದರಲ್ಲಿ ಸಹಸ್ರಾರು ವಿಚ್ಚೆದನಕ್ಕೆ ಕಾರಣವಾಗಬಹುದಾದ ಘಟನೆಗಳು ಸತ್ತು ಮತ್ತು ಸುಟ್ಟು ಹೋಗಿವೆ....
ಅದಕ್ಕೆ ಹೇಳಿದ್ದು " ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ "
Posted by ಸೀತಾರಾಮ. ಕೆ. / SITARAM.K (noreply@blogger.com) on October 11, 2011 09:40 AM· permalink
ಸಹ ಬ್ಲೋಗಿತ್ತಿ-ಸುಗುಣಾರ " ಮೃದಮನಸ್ಸು" ಬ್ಲಾಗ್ ನ ಶೂನ್ಯ ಕಥೆಯ ಮುಂದುವರೆದ ಭಾಗ..........
(ಮೊದಲ ಭಾಗದ ಕೊಂಡಿ : http://mrudhumanasu.blogspot.com/2011/10/blog-post_09.html)
ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆ ಯ
ಶೂನ್ಯ ಸಿಂಹಾಸನದಡಿ
ನನ್ನ ಬದುಕು ಜೋತಾಡುತಿದೆ.....
ಇಪ್ಪತ್ತು ವರ್ಷಗಳ ಗಂಡನ ಅಪರಿಮಿತ ಪ್ರೀತಿಯಲ್ಲಿ ನಾನು ನನ್ನೆಲ್ಲಾ ಕೊರತೆಯನ್ನು ಮರೆತು ಆನಂದದಿಂದ ಮರೆತಿದ್ದೆ ...
ತವರ ನೆನಪು ಮಾಸಿತ್ತು ....
ಮಕ್ಕಿಳಿಲ್ಲದ ಕೊರಗು ಕಾಡಲಿಲ್ಲ.....
ಬದುಕು ಸಾಗಿದ ಬಗೆಯೇ ಅರಿವಾಗಲಿಲ್ಲ....
ಇಂದು ಆ ಅಪರಿಮಿತ ಪ್ರೀತಿ ನೀಡಿದ ಸಹೃದಯ ಜೀವ ನನ್ನಿನಿಯ ನಡುವಿನಲ್ಲೇ ಬಿಟ್ಟಗಲಿದಾಗ ....
ಮೇಲಿನ ಗೀತೆ ಮನದಲ್ಲಿ ಗವ್ವೆನ್ನುವಂತೆ ಬಾರಿ ಬಾರಿ ಸುಳಿಯುತಿದೆ ...
ಮಕ್ಕಳಿಲ್ಲದ ಕೊರಗು ಕಾಡುತಿದೆ...
ದತ್ತು ಮಗುವನ್ನೂ ತಂದು ಸಾಕಲಿಲ್ಲವಲ್ಲಾ ಆಸರೆಗೆ... ಎಂಬ ಭಾವ ಅಪರಾಧೀ ಪ್ರಜ್ಞೆಯಾಗಿ ಕಾಡುತಿದೆ ಎನಿಸಹತ್ತಿತು ....
ವೃದ್ಧ ಅತ್ತೆಮಾವರು ನನಗೆ ಆರ್ಥಿಕ ಭಾರವಾಗಬಾರದೆಂದು ಈಗ ಮೈದುನನ ಮನೆಗೆ ನಡೆದಿಹರು......
ಮೈದುನ -ತಂಗಿ ತಮ್ಮಲ್ಲಿಗೆ ನನ್ನನ್ನು ಕರೆದರೂ ಇವರೊಡನೆ ಇಪ್ಪತ್ತುವರ್ಷ ಬಾಳಿದ ನೆನಪುಗಳ ಹೊತ್ತ ಈ ಸ್ವಂತ ಮನೆಯ ತ್ಯಜಿಸಲು ಮನಸಿಲ್ಲ.....
ಅಪ್ಪ-ಅಮ್ಮರೇ ಅಣ್ಣ ಅತ್ತಿಗೆಯರ ಆಡಳಿತದ ನಡುವೆ ತವರಲ್ಲಿ ನೇಪಥ್ಯವಾಗಿರುವಾಗ ಮತ್ತು ಇಷ್ಟು ದಿನ ಅದನ್ನು ಬಯಸದೆ ಇದ್ದು ಇಂದು ಅದನ್ನು ಆಸರೆ ಎ೦ದು ಕಲ್ಪಿಸಲಾಗದು.....
ದೀಪ ನೋಡುತ್ತಾ ಕುಳಿತಿದ್ದ ಅನ್ನಪೂರ್ಣಾ ಒಮ್ಮೆ ಕಣ್ಣು ತಿರುಗಿಸಿ.... ಸುತ್ತೆಲ್ಲಾ ನೋಡಿದಾಗ,
ಕತ್ತಲು ಅಡರಿದ೦ತೆಸಿತು...ಸೂರ್ಯ ಸಂಪೂರ್ಣ ಮರೆಯಾಗಿ ಸಂಜೆ ದಾಟಿ ಕತ್ತಲು ಸುತ್ತೆಲ್ಲಾ.. ಮುತ್ತಿತ್ತು...
ಒಮ್ಮೆ ಭಯವು ಎನಿಸಹತ್ತಿತು....
.............ಹೀಗೆ ಅನ್ನಪೂರ್ಣಾಳ ಮನ, ಭೂತ-ವರ್ತಮಾನ-ಭವಿಷ್ಯತ್ತುಗಳ ಯೋಚನೆಯಲ್ಲಿ, ಗತಿಸಿದ ಗಂಡ ಅನುರಾಗನ ನೆನಪಲ್ಲಿ, ಅಂಗಳದಲ್ಲಿ ಹಚ್ಚಿಟ್ಟ ಹಣತೆಯ ಜ್ಯೋತಿಯಲ್ಲಿ , ಎವೆಯಿಕ್ಕದೆ ನೆಟ್ಟ ನೋಟದಲ್ಲಿ.... ಗರ ಗರ ತಿರುಗುತ್ತಿತ್ತು....
-೧-ಕತ್ತಲಿನ ಭಯದಲ್ಲಿಯೇ ಅನ್ನಪೂರ್ಣ ಬೆಳುಕು ಚೆಲ್ಲುತ್ತಿದ್ದ ದೀಪವನ್ನು ಮತ್ತೆ ತದೇಕ ಚಿತ್ತವಾಗಿ ನೋಡಲಾರ೦ಭಿಸಿದಳು....ಕ ದೀಪದಲ್ಲಿನ ಬೆಳಕು ಈಗ ಮೆಲ್ಲ ಮೆಲ್ಲ ಸುತ್ತಾ ಹರಡುತ್ತಾ ಕತ್ತಲನ್ನು ನು೦ಗುತ್ತಿದ್ದ೦ತೆನಿಸಿತು...
ಆಶೆ ಬೆಳಕಾಗಿ ಚೆಲ್ಲುತ್ತಿದೆ ಎನಿಸುತ್ತಲೇ...
ಮನ ಮತ್ತೆ ವಿಚಾರಕ್ಕೆ ತಿರುಗಹತ್ತಿತು...
ನೆನಪಿನ ಸರಣಿ ಮತ್ತೆ ಮುಂದು ವರೆಯಿತು.....
"ಅನ್ನು ನೀನೇಕೆ ಕೆಲಸಕ್ಕೆ ಸೇರಬಾರದು "
"ಏಕೆ ಅನು ನೀನು ದುಡಿಯುತ್ತಿರುವದು ನಮಮ್ಮಿಬ್ಬರಿಗೆ ಸಾಲದೇ?"
"ಹಾಗಲ್ಲ ಅನ್ನು ನಿನಗೂ ಹೊರ ಪ್ರಪಂಚದ ಸಂಪರ್ಕವಿರಬೇಕು ... ಸಾಮಾಜಿಕ ಸಂಪರ್ಕ ಒಳ್ಳೆಯದು ... ಜೊತೆಗೆ ಆರ್ಥಿಕ ಸ್ವಾಯುತ್ತತೆ ಹೆಣ್ಣಿಗೆ ಅವಶ್ಯ ಸಹಾ.....ಗಂಡನಿಗೆ ಪೂರ್ತಿ ಅಲವತ್ತಿಕೊಂಡ ಜೀವನ... ಮುಂದೆ... ನಾನೇನಾದರೂ ನಿನ್ನ ಒಂಟಿ ಬಿಟ್ಟು ಹೋಗಬೇಕಾದ..."
"ಛೀ ಬಿಡ್ತು ಎನ್ನಿ... ನಿಮಗೂ ಏನಾಗೋಲ್ಲ..... ನನಗೂ ಏನಾಗೋಲ್ಲ.....ನನಗೆ ಯಾವ ಸಾಮಾಜಿಕ ಸಂಪರ್ಕವು ಬೇಡ.. ಆರ್ಥಿಕ ಸ್ವಾಯುತ್ತತೆಯು ಬೇಡ.... ನೀವಿದ್ದರೆ ಸಾಕು..." ಎಂದು ಅವನ ಬಾಯಲ್ಲಿ ಕೈ ಇಟ್ಟು ನುಡಿದ್ದದ್ದು ನೆನಪಿಗೆ ಸಳ್ಳೇ೦ದು ಬಂತು....
ಅಂದು ಅವನ ಮಾತು ಕೇಳಿ ಕೆಲಸಕ್ಕೆ ಸೇರಿದ್ದರೆ... ಕೆಲಸದ ನಡುವೆ... ಮಿತ್ರರ ಸಂಪರ್ಕದ ನಡುವೆ ....
ಇಂದಿನ ಅವನ ಅಗಲಿಕೆಯಲ್ಲಿನ ಈ ಒಂಟಿತನ ಇಷ್ಟೊಂದು ಕಾಡುತ್ತಿರಲಿಲ್ಲವೇನೋ ಎನಿಸಿತು......
ಇಗಲೂ ಕಾಲ ಮಿಂಚಿಲ್ಲ.... ಇನ್ನು ಮುಂದೆಯೂ... ಕೆಲಸಕ್ಕೆ ಸೇರಿ ಅವರ ಮನಸ್ಸಿನಂತೆ ನಡೆದು ಈ ಒಂಟಿತನದ ಹಾದಿಯನ್ನು ಮರೆಯಬಹುದು......ಎನ್ನಿಸಹತ್ತಿತು..
ಮಧ್ಯೆ ಮೊನ್ನೆ ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಇವರ ಮೇಲಧಿಕಾರಿ ಕಿರಣ ದಂಪತಿಗಳು- ಇವರನ್ನು ಕೊಂಡಾಡುತ್ತಾ..." ಮೇಡಂ ನೀವು ಕೆಲಸಕ್ಕೆ ಸೇರಿ..ನಿಮ್ಮ ದುಖ ಮರೆಯಲು ಇಡು ಒಂದು ದಾರಿ... ಜೊತೆಗೆ ಸ್ವಲ್ಪ ಸಂಪಾದನೆಯು ಆಗುತ್ತೆ... ಯೋಚಿಸಿ ... ನಿಮಗೆ ನನ್ನ ಸಲಹೆ ಸೂಕ್ತ ಎನಿಸಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ " ಎಂದದ್ದು ನೆನಪಿಗೆ ಸುಳಿಯಿತು..
ಕಿರಣ ದಂಪತಿಗಳನ್ನು ಅನು ಸದಾ ಹೊಗಳುತ್ತಿದ್ದುದು ಮತ್ತು ಅವರ ಸಹಾಯದ ಗುಣವನ್ನೂ ಕೊಂಡಾಡುತ್ತಿದ್ದು ಆ ಕ್ಷಣ ನೆನಪಾಗಿತ್ತು...
ತಾನು ಕೆಲಸಕ್ಕೆ ಸೇರಬೇಕು ಎನ್ನುವ ತುಡಿತ ಬಲವಾಗತೊಡಗಿತು....
ತಾನು ಕೆಲಸಕ್ಕೆ ಸೇರಿದರೆ ಅತ್ತೆ -ಮಾವ ಖಂಡಿತ ಬಂದು ಜೊತೆಯಲ್ಲಿರುತ್ತಾರೆ....
-೨-
ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರೆ??....
ಎಂಬ ವಿಷಯ ತಲೆಗೆ ಬಂದದ್ದನ್ನು ಮತ್ತೆ ನೆನಸುತ್ತಲೇ ಅನ್ನಪೂರ್ಣಾಳ ಮನ ಮತ್ತೆ ಯೋಚಿಸತೊಡಗಿತು....
ಅನಾಥ ಮಗುವನ್ನು ಇಗಲೂ ತಂದು ಸಾಕಬಹುದು...
ಇವರು ಮಾಡಿದ ಆಸ್ತಿಯಲ್ಲಿ ಮಗುವೊಂದನ್ನು ಸಾಕಿ ಸಲುಹಬಹುದೆನಿಸಹತ್ತಿತು..
ಆ ಮಗುವ ಲಾಲನೆ ಪಾಲನೆಯಲ್ಲಿ ...ಒಂಟಿತನದ ಮುಂದಿನ ಬದುಕು ಸ್ವಲ್ಪ ಹಗುರವಾಗಬಹುದು....
ನಲವತ್ತರ ನಾನು ಅರವತ್ತಾಗುವಲ್ಲಿ ಮಗು ಇಪ್ಪತ್ತರದ್ದಾಗಿ ನನ್ನ ಮುದಿಕಾಲಕ್ಕೆ ಆಸರವಾಗಳು ಬಹುದು....
ಅತ್ತೆಮಾವರ ಜೊತೆ ಮಗುವ ಲಾಲನೆ ಪಾಲನೆಗೇ ಜೊತೆಯೂ ಆಗಬಹುದ೦ತೆನಿಸಿ ಮನ ಮುದವ೦ತೆನಿಸಿತು...
ದೀಪದ ಬೆಳಕಲ್ಲಿ ಈಗ ಕತ್ತಲೆ ಕಾದಿಮೆಯಾಗುತ್ತಿದೆ ಎನಿಸಹತ್ತಿತ್ತು....
-೩-
ಮತ್ತೆ ಯೋಚನೆ ಭೂತಕ್ಕೆ ತಿರುಗಿತು.....
ಅಂದು ಮನೆಯಿಂದ ದೂರದಲ್ಲಿ ..ಇಬ್ಬರು ಸಂಜೆ ವಿಹಾರಕ್ಕೆ ಮನೆಯ ದೂರದಲ್ಲಿರುವ ಉದ್ಯಾನವನದಲ್ಲಿ ತಿರುಗುತ್ತಿದ್ದಾಗ ವೃಧ್ದರ ತಂಡವೊಂದು ಮೋಜಿನಿಂದ ಆಟವಾಡುತ್ತಿದ್ದರು...... ಮಧ್ಯವಯಸ್ಕ ದಂಪತಿಗಳು ಅವರೊಡನೆ ಮೋಜಿನಲ್ಲಿ ನಿರತರಾಗಿದ್ದು ಅವರನ್ನೆಲ್ಲಾ ಆಟಕ್ಕೆ ಹುರಿದು೦ಬಿಸುತ್ತಿದ್ದು ಕಂಡಿತು....
"ಅನು ಇವರೆಲ್ಲಾ ಯಾರು"
" ಅನ್ನು ಆ ದಂಪತಿಗಳು ಪಕ್ಕದ ಕಾರ್ಖಾನೆ ಮಾಲೀಕರು...ನಮ್ಮ ಹಾಗೆ ಮಕ್ಕಳಿಲ್ಲ... ಅವರು ಒಂದು ವ್ರುಧ್ಧಾಶ್ರಮ ನಡೆಸುತ್ತಿದ್ದಾರೆ.. ವಾರಾ೦ತ್ಯದಲ್ಲಿ ಅವರು ಎಲ್ಲರೊಡನೆ ಸೇರಿ ಸಮಯ ಕಳೆಯುತ್ತಾರೆ... ಕೆಲೋವೊಮ್ಮೆ .... ಹೀಗೂ ಹೊರ ಪ್ರವಾಸಕ್ಕೂ ಬರುತ್ತಾರೆ..."
"ಹೌದಾ!!...ನಿಜಕ್ಕೂ ಒಳ್ಳೆ ಕೆಲಸ"
" ಹೌದು ಅನ್ನು ನಾವು ಒಂದಿಷ್ಟು ಹಣ ಮಾಡಿದ ಮೇಲೆ ಹೀಗೆ ಒಂದು ವ್ರುಧ್ಧಾಶ್ರಮಕ್ಕೆ ಸೇರಿ ಬಿಡುವಾ....ಮುಪ್ಪಲ್ಲಿ ಎಲ್ಲರೊಡನೆ ಹೀಗೆ ಇರುವದು ಮಜವಲ್ಲವೇ...."
"ಹೌದು ನಿಜ ಅನು ಇಗಲೇ ಸೇರಿ ಬಿಡುವಾ ಈಗ ಅವರ ಸೇವೆ ಮಾಡುತ್ತಾ ಇರುವಾ...ಮುಪ್ಪಲ್ಲಿ ನಮಗೆ ಯಾರೋ ಆಸರೆ ಆಗುತ್ತಾರೆ..ಅಲ್ಲವಾ..."
ಅಂದು ಹೇಳಿದ್ದು ಪೂರ್ತಿಗ೦ಭೀರವಾಗಿಲ್ಲದಿದ್ದರೂ ಮನದ ಮೂಲೆಯಲ್ಲೇನು ತುಡಿತವಿತ್ತು ಎಂದು ಇಂದು ಅನ್ನಿಸುತಿದೆ .....
ಗಂಡ ಸಂಪಾದಿಸಿದ ಹಣದಲ್ಲಿ ಅದನ್ನು ಇಂದು ಸಾಕಾರಮಾಡಿಕೊಳ್ಳಬಹುದೆನಿಸಹತ್ತಿತು....
ಜೊತೆಗೆ ತಾನು ಕೆಲಸ ಮಾಡುತ್ತಿದ್ದರೆ .......
ಆ ಹಣದಿಂದ ಇನ್ನೂ ಹೆಚ್ಚಿನ ಸಾರ್ಥಕತೆ ಇಂತಹುವುಗಳಲ್ಲಿ ಹೊಂದಬಹುದಲ್ಲವೇ.....
ಬೆಳಸಿದ ಮಕ್ಕಳು ಮುಪ್ಪಿನಲ್ಲಿ ನೋಡದಿದ್ದರೂ ಇ೦ತಹ ಕಾರ್ಯಗಳು ಮುಂದೊ೦ದು ದಿನ ಬದುಕಿಗೆ ಆಸರೆಯಾಗಬಹುದಲ್ಲವೇ...
ಈಗ ದೀಪದ ಬೆಳಕು ಮನೆಯಲ್ಲಿನ ಕತ್ತಲೆ ಓಡಿಸಿದ೦ತೆನಿಸಹತ್ತಿತ್ತು.....
-೪-
ಕತ್ತಲ ಬಗ್ಗೆ ಯೋಚಿಸುವಾಗ ಅನುಗೆ ಆ ಘಟನೆ ನೆನಪಾಗದೆ ಇರದು.....
ಅಂದು ಸಂಜೆ ಭಾರೀ ಗುಡುಗು... ಸಿಡಿಲು.....
ಅನು ಅಂದು ಆಫಿಸಿನಿಂದ ಇನ್ನು ಬಂದಿರಲಿಲ್ಲ.....
ಗಾಳಿ ಮಳೆ ಗುಡುಗು ಸಿಡಿಲು ಜೋರಾಗಿ..... ವಿಧ್ಯುತ್ ಬಂದಾಗಿತ್ತು....ಮನೆ ಕತ್ತಲು ಗವ್ವೆನಿಸಹತ್ತಿತು... ಸ೦ಜೆ ರಾತ್ರಿಗೆ ಸರಿದು ...ಅನು ಇನ್ನು ಬರದೆ...ಅವನ ಫೋನ್ ಇರದೇ.... ಮನವನ್ನ ಭಯವಾವರಿಸಿತ್ತು....ಮೇಣಬತ್ತಿ ಹಚ್ಚಲು ತಡಕಾಡಿ ಸಿಗದೇ ದೇವರ ಮನೆಯ ದೀಪದಲ್ಲಿಯೇ ಮನೆಯಲ್ಲಿ ಹೆದರಿ ಮುದ್ದೆಯಾಗಿದ್ದಳು ಅನ್ನಪೂರ್ಣಾ..
ಬಾಗಿಲು ತಡಬಡ ಬಡೆದ ಶಬ್ದಕ್ಕೆ ಭಯದಿಂದಲೇ ದೇವರ ಮನೆಯಿಂದ ಹೊರತು ಬಾಗಿಲು ತೆರೆದಿದ್ದ ಅವಳು ಅನುವನ್ನ ನೋಡುತ್ತಲೇ ...ಅವನನ್ನು ಜೋರಾಗಿ ಆಪ್ಪಿ ಅಳುತ್ತಾ..
" ಅನು ಏಕೆ ತಡ? ಫೋನ್ ಏಕೆ ಮಾಡಲಿಲ್ಲ? ಮನೆಯೆಲ್ಲಾ ಕತ್ತಲು ...ಮಳೆ... ಗುಡುಗು... ಸಿಡಿಲು.. ಮಿಂಚು... ನನಗೆ ಎಸ್ತ್ತೊಂದು ಭಯ ಆಗಿತ್ತು ಗೊತ್ತಾ???"
ಅವಳನ್ನು ಒಂದು ಕೈಯಲ್ಲಿ ಬಳಸಿ ಜೋರಾಗಿ ಅಪ್ಪಿ, ಇನ್ನೊಂದು ಕೈಯಲ್ಲಿ ತಲೆ ನೇವರಿಸುತ್ತಾ "ಅನ್ನು ಹೀಗೆ ಭಯ ಪಟ್ಟರೆ ಹೇಗೆ ಆಫೀಸಿನಿಂದ ಹೊರಟ ನನಗೆ.. ಬಸ್ಸ ಸಿಗದೇ... ಆಟೋ ಸಿಗದೇ... ಮೊಬಿಲ್ ಸಂಪರ್ಕ ಬಂದ ಆಗಿ... ಯಾರದೋ ಕಾರಲ್ಲಿ ಬೇಡಿ ಸಹಾಯ ಪಡೆದು ಇಲ್ಲಿಗೆ ಬಂದೆ..ಕ್ಷಮಿಸು... ಆದರೆ ನೀನು ಹೀಗೆ ಹೆದರಿದರೆ ಹೇಗೆ .... ನಾನೆ ಇಲ್ಲವಾದರೆ ಇನ್ನು ಹೇಗೆ ?...."
ಅವನ ಬಾಯಿಗೆ ಕೈ ಇಟ್ಟು " ಛೀ ಹಾಗೆ ಹೇಳಬೇಡಿ" ಎಂದಳು.
" ಅನ್ನು ಹೀಗೆ ಹೆದರಿದರೆ ಹೇಗೆ... ಬದುಕನ್ನು ಎದುರಿಸಬೇಕು... ಎಂಥ ಕತ್ತಲು ಬಂದರು ಮೆಟ್ಟಿ ನಿಲ್ಲುವ ಛಲವಿರಬೇಕು... ನಾನಿಲ್ಲ ಎಂದರು ನೀನು ಬಾಳಿ ತೋರಿಸಬೇಕು... ಹೀಗೆ ಎದೆಗು೦ದಬಾರದು..." ಎಂದೆಲ್ಲಾ ಸಂತೈಸಿದ್ದು ನೆನಪಿಗೆ ಬರಹತ್ತಿತ್ತು....
ಆ ಮಾತೆಲ್ಲಾ ನೆನಪಾದಂತೆ ಅನ್ನಪೂರ್ಣಾಳ ಮನ ಗಟ್ಟಿಯಾದನ್ತೆನಿಸಿತು... ದೀಪದ ಬೆಳಕು ಪ್ರಕಾರವಾಗಿ... ಮನೆಯ ಕತ್ತಲು... ಮನದ ಭಯವು...ಇಲ್ಲವಾದ೦ತೆನಿಸಿ ಮುಂದಿನ ದಾರಿ ಸ್ಪಷ್ಟವೆನಿಸತೊಡಗಿತು...
......ಮುಕ್ತಾಯ ಅಲ್ಲ ಪ್ರಾರ೦ಭ........
ಅನ್ನಪೂರ್ಣಳ ಮನ ಈಗ ದೀಪದ ಜ್ಯೋತಿಯಲ್ಲಿ ಬೆಳಕಾಗಿತ್ತು... ಮನೆ-ಮನದಲ್ಲಿ ಆವರಿಸಿದ್ದ ಕತ್ತಲೆ ಓಡಿದ೦ತೆನಿಸಿತು....ಅವಳ ನಿರ್ಧಾರಗಟ್ಟಿಯಾಗಿತ್ತು. ಬೆಳಿಗ್ಗೆ ಎದ್ದವಳೇ ಕಿರಣ ದಂಪತಿಗಳನ್ನು ಕಂಡು ಕೆಲಸವೊಂದಕ್ಕೆ ಸೇರುವದು...ಅತ್ತೆ-ಮಾವರನ್ನು ಜೊತೆಗೆ ಕರೆದುಕೊಂಡು ತ೦ದಿಟ್ಟುಕೊಳ್ಳುವದು... ಆಮೇಲೆ ಅವರೊಡನೆ ಅನಾಥಾಶ್ರಮಕ್ಕೆ ಹೋಗಿ ಮಗುವೊಂದನ್ನು ದತ್ತು ಪಡೆದು ಬೆಳೆಸುವದು...ಸಮಯ ಸಿಕ್ಕಾಗ ವ್ರುಧ್ಧಾಶ್ರಮದಲ್ಲಿ ತನು -ಮನ-ಧನಗಳ ಸೇವೆ ಸಲ್ಲಿಸಿ ಬದುಕ ಸಾರ್ಥಕಪಡಿಸಿಕೊಳ್ಳುವ ಕಾಯಕಕ್ಕೆ ತೊಡುಗುವದು... ಈಗ ಮನ ಶೂನ್ಯದಿ೦ದ ಪರಿಪೂರ್ಣದೆಡೆಗೆ ಸಾಗುತ್ತಿದೆ ಎನಿಸಹತ್ತಿತ್ತು..ಮನದ ಮೂಲೆಯಲ್ಲೋ ಸುಶ್ರಾ ವ್ಯವಾಗಿ ...."ಸೂರ್ಯನಿಲ್ಲದಿದ್ದರೇನು ??
ಹಣತೆ ಬೆಳಕ ನೀಡದೇ.......?
ಜಗವ ಬೆಳಗದಿದ್ದರೇನು?
ಮನೆಯ ಬೆಳಗಲಾಗದೇ...?
ಮನಕೆ ಮನವು ಇಲ್ಲದಿದ್ದರೇನು?
ಮನವೇ ಮನಕೆ ಆಗದೆ?"
Posted by ಸೀತಾರಾಮ. ಕೆ. / SITARAM.K (noreply@blogger.com) on October 11, 2011 09:40 AM· permalink
(ಚಿತ್ರ ಕೃಪೆ - ಕೆ ಶಿವೂ -ಛಾಯಾ ಕನ್ನಡಿ ಅಂಕಣದ ಒಡೆಯರು )
ಅಷಿಪ್ರಿನಿಯಾದ ಹಸಿವೆಗೆ ಚಿಟ್ಟೆ ಸಿಕ್ಕಿತ್ತು......
ಹೊಂಚಿ ಹಾಕಿದ ಬೇಟೆ ತಿನ್ನೋ ಗಮ್ಮತ್ತು....
ತಪ್ಪಿಸಿ ಹಾರಲು ಅವಿರತದ ಹೋರಾಟ..
ಸುತ್ತಮುತ್ತೆಲ್ಲಾ ಚದುರಿದ್ದು ಬಣ್ಣ ಓಕುಳಿಯಾಟ...
ರೆಕ್ಕೆಗಂಟಿದ ವರ್ಣ ಹುಡಿಯಾ ಚೆಲ್ಲಾಟ...
ತಂದಿತ್ತುದು ಪ್ರಾಣ ಸಂಕಟ....
ದೂರದಲ್ಲೆಲೋ ಕ್ಯಾಮರ ಕಣ್ಣಿನ ನೋಟ....
ಜುಮಾಯಿಸಿ ತೆಗೆದುದು ವರ್ಣ ಪಟ....
ನನ್ನ ಪ್ರಾಣದ ಜೊತೆಯಾಟ.....
ಒಬ್ಬರಿಗೆ ಹಬ್ಬದೂಟ...
ಇನ್ನೊಬ್ಬರಿಗೆ ಬಹುಮಾನಕ್ಕೆ ಚಿತ್ರಪಟ....
ನೋಡಿ ವಾ ಎನ್ನುವ ಕಂಗಳಿಗೆ ರಸದೂಟ....
ಕೆಲವು ಕವಿಗಳ ಕಾವ್ಯಕ್ಕೆ ಸ್ಫೂರ್ತಿಯ ಪಟ ....
Posted by ಸೀತಾರಾಮ. ಕೆ. / SITARAM.K (noreply@blogger.com) on October 11, 2011 09:39 AM· permalink
ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ
ನೀ ಮೌನವಾದರೆ ನನ್ನ ಮಾತುಗಳಿಗೇನು ಬೆಲೆ...
ಚಂದಾದ ಆ ಮುಖದಲ್ಲಿ ಕೋಪದ ಗೆರೆಯೇಕೆ
ಹುಣ್ಣಿಮೆಯ ಚಂದ್ರನಲಿ ಕಪ್ಪನೆ ಕಲೆಯಿದ್ದಂತೆ..
ಅರಳು ಹುರಿದಂತೆ ಪಟಪಟನೆ ಮಾತನಾಡುವ ನೀನು
Bookmark/Search this post with

ಮುಂದೆ ಓದಿ...
Posted by Jayanth Ramachar on October 11, 2011 09:23 AM· permalink
ಕಣ್ಣು
ಬಯಸಿದ..
ಹೃದಯ ಪೂಜಿಸಿದ..
ಈ..
ಹೂ..
ಕೆನ್ನೆಗಳ ಮೇಲೆ..
ಬಿಸಿಯುಸಿರ ರಂಗೇರಿಸಿ..
ನಾ..
ಕಟ್ಟಿ ..
ಕೊಡಲೇನೆ ನಲ್ಲೆ..
ನಿನ್ನ..
ಕತ್ತಿನ ಮೇಲೆ..
ನನ್ನ ..
ಸಿಹಿ ಮುತ್ತುಗಳ ಮಾಲೆ ?...
Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on October 11, 2011 09:22 AM· permalink
ಎಲ್ಲಿ ನೋಡಿದರೂ ರಕ್ತದ ಕಲೆಗಳು...
ಮಚ್ಚಿನಿಂದ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ...
ಮಚ್ಚು ಹಿಡಿದ ವ್ಯಕ್ತಿಯ ಬಟ್ಟೆಯ ಮೇಲೆಲ್ಲಾ ರಕ್ತದ ಕಲೆಗಳು...
ಮಚ್ಚಿನಿಂದ ಕಚಕಚನೆ ಕತ್ತರಿಸುತ್ತಿದ್ದಾನೆ..ಆದರೂ ಅವನ ಮುಖದಲ್ಲಿ ಯಾವುದೇ ಭಾವನೆ ಗಳು ಇರಲಿಲ್ಲ...
Bookmark/Search this post with

ಮುಂದೆ ಓದಿ...
Posted by Jayanth Ramachar on October 11, 2011 09:21 AM· permalink
ಶೄ೦ಗಾರವಿಲ್ಲದ ಜೀವನ ವನಕ್ಕೆ ಸಮಾನ ಅಲ್ವೆ
Bookmark/Search this post with

Posted by sudhakarkrishna on October 11, 2011 09:05 AM· permalink
ಯಾರನ್ನು ಎಷ್ತೇ ಹೊಗಳಿ ಕೊಟ್ಟರೂ ಪಟ್ಟ
ಕೊನೆಗೆ ಹೇರೋದು ಚಟ್ಟ
ಇದನ್ನು ತಿಳದೋನಿಗಿಲ್ಲ ಬುದ್ಧಿ ಮಟ್ಟ
ಇದನ್ನ ಹೇಳಿದೋನೆ ಕಿಲಾಡಿ ಕಿಟ್ಟ
Bookmark/Search this post with

Posted by sudhakarkrishna on October 11, 2011 08:59 AM· permalink
ನೀ ಪ್ರೀತಿಸದಿದ್ದರು
ನೀನಿರುವೆ ಮನದಲ್ಲಿ
ಸಾಯುವ ತನಕವಾದರು
ನಾ ಕಾಯುವೆ.....
ನೀ ಹೇಳುವ ತನಕ ...
Bookmark/Search this post with

Posted by sudhakarkrishna on October 11, 2011 08:37 AM· permalink
ಮೈಸೂರಿನ ವಿಸ್ಮಯ ಪ್ರಕಾಶನವು ಅಕ್ಟೋಬರ್ 13ರಂದು "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಕೃತಿಯನ್ನು ಲೋಕಾರ್ಪಣೆ ಮಾಡಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಂಸ್ಥಾಪಕರು ಹಾಗೂ ಕರ್ನಾಟಕವನ್ನು ಭ್ರಷ್ಟಾಚಾರಮುಕ್ತಗೊಳಿಸಬೇಕೆಂದು ಹೋರಾಡುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ಡಾ.ಆರ್.ಬಾಲಸುಬ್ರಹ್ಮಣ್ಯಂರವರು ಈ ಕೃತಿಯನ್ನು ರಚಿಸಿದ್ದಾರೆ. ಕರ್ನಾಟಕದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿ ಅಪಾರ ಜನಮನ್ನಣೆ ಗಳಿಸಿರುವ ಜಸ್ಟೀಸ್ ಸಂತೋಶ್ ಹೆಗ್ಡೆಯವರು ಪುಸ್ತಕ ಬಿಡುಗಡೆಗೊಳಿಸಿ "ಭಾರತದಲ್ಲಿ ಭ್ರಷ್ಟಾಚಾರ" ಕುರಿತು ಉಪನ್ಯಾಸ ನೀಡಲಿದ್ದಾರೆ.
Bookmark/Search this post with

ಮುಂದೆ ಓದಿ...
Posted by shashikannada on October 11, 2011 07:45 AM· permalink
1994 ರಲ್ಲಿ ದಾಂಡೇಲಿಯ ಸಮೀಪದ ಅಂಬಿಕಾ ನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ "ಸಿದ್ಧ ಸಮಾಧಿ ಯೋಗದ"
ಹತ್ತು ದಿನಗಳ ತರಬೇತಿ ಪಡೆದು, ಬೆಳಗಾವಿ ಬಳಿಯ 'ಸೊಗಲ ಶ್ರೀ ಕ್ಷೇತ್ರ'ದಲ್ಲಿ ಮೂರು ದಿನಗಳ A.M.C.ಯಲ್ಲಿ (Advanced meditation course) ಭಾಗ ವಹಿಸಿದ್ದೆ.ಎರಡನೇ ದಿನ ಗುರುಗಳು ಅಲ್ಲೇ ಹತ್ತಿರವಿದ್ದ ಬೆಟ್ಟವೊಂದಕ್ಕೆ ಕರೆದೊಯ್ದರು.ಬೆಟ್ಟ ಹತ್ತುವ ಮೊದಲು ಕಣ್ಣಿಗೆ ಬಟ್ಟೆ ಕಟ್ಟಲಾಯಿತು .ಮನಸ್ಸಿನಲ್ಲಿ"ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪ ಮಾಡುತ್ತಾ ಬೆಟ್ಟ ಹತ್ತುವಂತೆ ಹೇಳಿದರು.ಕಲ್ಲು ಮುಳ್ಳು ಗಳಿಂದ ಆವೃತವಾದ ಬೆಟ್ಟವನ್ನು ಹತ್ತಿಸುವ ಸಂಪೂರ್ಣ ಜವಾಬ್ದಾರಿಯನ್ನು ಜೊತೆಯಲ್ಲಿದ್ದ ಇಬ್ಬರಿಗೆ ವಹಿಸಿ,ಭಗವನ್ನಾಮ ಸ್ಮರಣೆ ಮಾಡುತ್ತಾ,ನಿಶ್ಚಿಂತೆಯಿಂದ ಸುಮಾರು ದೊಡ್ಡದಾಗಿದ್ದ ಬೆಟ್ಟವನ್ನು ಒಂದು ಗಂಟೆಯ ಅವಧಿಯಲ್ಲಿ ಅನಾಯಾಸವಾಗಿ ಹತ್ತಿದ್ದೆವು.ನಮ್ಮ ಜೊತೆಯಲ್ಲಿ ಮಂಡಿ ನೋವಿನಿದ ನರಳುತ್ತಿದ್ದ ಒಂದಿಬ್ಬರು ವಯೋ ವೃದ್ಧರೂ ಇದ್ದರು.ಅವರೂ ಯಾವ ತೊಂದರೆ ಇಲ್ಲದೆ ಬೆಟ್ಟವನ್ನು ಹತ್ತಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು!ಹತ್ತುವ ಮೊದಲು ಇಷ್ಟು ದೊಡ್ಡ ಬೆಟ್ಟವನ್ನು ಕಲ್ಲು ಮುಳ್ಳುಗಳ ಹಾದಿಯಲ್ಲಿ ಹತ್ತಲು ಸಾಧ್ಯವೇ ಎಂದು ಅನುಮಾನ ಪಟ್ಟಿದ್ದ ನಮಗೆ, ಬೆಟ್ಟದ ತುದಿ ತಲುಪಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಕೆಳಗೆ ನೋಡಿದಾಗ ನಾವು ನಿಜಕ್ಕೂ ಇಷ್ಟು ದೊಡ್ಡ ಬೆಟ್ಟವನ್ನು ,ಸ್ವಲ್ಪವೂ ಕಷ್ಟವಿಲ್ಲದೆ ಹತ್ತಿದ್ದು ಅದ್ಭುತವೆನಿಸಿತ್ತು.ಅದಕ್ಕೆ ಗುರುಗಳು 'ಭಗವನ್ನಾಮ ಸ್ಮರಣೆ ಮತ್ತು ಸಂಪೂರ್ಣ ಶರಣಾಗತಿಯಿಂದ ಜೀವನದಲ್ಲಿ ಎಂತಹ ಕಠಿಣ ಹಾದಿಯನ್ನಾದರೂ ಕ್ರಮಿಸಬಹುದು ಎನ್ನುವುದಕ್ಕೆ ಇಂದಿನ ನಿಮ್ಮ ಈ ಅನುಭವವೇ ಉದಾಹರಣೆ'ಎಂದರು.ಬೆಟ್ಟದ ತುದಿಯಲ್ಲಿ ಅಸ್ತಮಿಸುತ್ತಿದ್ದ ಕೆಂಪಾದ ಸೂರ್ಯನನ್ನು ನೋಡುತ್ತಾ ನಿಂತಿದ್ದೆವು.ಬೆಟ್ಟದ ಮೇಲಿನ ತಣ್ಣನೆ ಗಾಳಿ ಹಿತವಾಗಿ ಬೀಸಿ ಆ ವಿಶಿಷ್ಟ ಸಂಜೆ ಮತ್ತಷ್ಟು ವಿಶೇಷ ವೆನಿಸುವಂತೆ ಮಾಡಿತ್ತು
Posted by Dr.D.T.Krishna Murthy. (noreply@blogger.com) on October 11, 2011 07:45 AM· permalink
ಸೂಪರ್.. ಕೊನೆಗೂ ಸಂಪದದಲ್ಲಿ ಮೊಬೈಲ್ನಿಂದ ನೇರವಾಗಿ ಬರಿತಾ ಇದೀನಿ. ಅಂದ್ರೆ ಸಂಪದದಲ್ಲಿ ನನ್ನ ಮೊಬೈಲ್ ಬ್ಲಾಗಿಂಗ್ ಶುರು.
ವಿಶಯ ಏನು ಬರಿಬೇಕು ಅಂತ ಯೋಚುಸ್ತಾ ಇದ್ದಾಗ.. ಕನ್ನನಡವನ್ನ ಮೊಬೈಲ್ನಲ್ಲ್ಲಿ ಹೇಗೆ ಓದೋದು ಮತ್ತು ಬರಿಯೋದು ಅನ್ನೋದರ ಬಗ್ಗೇನೆ ಬರಿಯೋಣ ಅಂತ ಈ ಬರಹ.
ನಾನು ಅಂಡ್ರಾಯ್ಡ ಮೊಬೈಲ್ ಬಳಸಕ್ಕೆ ಶುರು ಮಾಡಿ ಸುಮಾರು ಒಂದೆರಡು ತಿಂಗಳುಗಳೆ ಆಯ್ತು..
ನನ್ ಮೊಬೈಲ್ ತಗೊಂಡ ಮೊದಮೊದಲು ಹುಡಕಿದ್ದೇ ಕನ್ನಡ ಹೇಗೆ ಬರಿಯೋದು , ಓದೋದು ಅಂತ.
ಒಪೆರ ಮಿನಿ ಬ್ರವ್ಸರ್ನಲ್ಲಿ 'ಮಾತ್ರ' ಕನ್ನಡ ಹೇಗೆ 'ಓದೋದು ' ಅಂತ ಗೊತ್ತಾದ್ರೂ … ಹೇಗೆ 'ಬರಿಯೋದು' ಅಂತ ಮಾತ್ರ ಗೊತ್ತಾಗಿರ್ಲಿಲ್ಲ. ಇನ್ ಫ್ಯಾಕ್ಟ್ , ಆಂಡ್ರಾಯ್ಡ್ ನಲ್ಲಿ ಕನ್ನಡದ ಯುನಿಕೋಡ್ ಫಾಂಟ್ ಸಪೋರ್ಟ ಇರಲೇ ಇಲ್ಲ. ಈಗ್ಲೂ ಇಲ್ಲ.
Bookmark/Search this post with

ಮುಂದೆ ಓದಿ...
Posted by savithru on October 11, 2011 05:33 AM· permalink
ಬಾಳ ಸಿಹಿಯ ತಂದಿಟ್ಟ ಸಿರಿಯೆ
ಬೆಳಕಿನಲಿ ಬೆಳೆಸುವೆನು ನಗುಚೆಲ್ಲು ನೀ
ನಿನ್ನ ಒಳದನಿ ಕೇಳಿಸುವುದೆನ್ನಂತರಂಗಕೆ
ತೋಳತೊಟ್ಟಿಲಲಿ ತೂಗುವೆನು ನಾನು
ಬರುವುದು ಕಂದ ಹಾಯಾದ ನಿದ್ದೆ
ಜಗದನಿಧಿ ಅರಳುತಿರುವ ಬೆಳಕೆ
ಹಿಗ್ಗಿ ನಲಿದಾಡುತ ನೀಡುವೆ ವಾತ್ಸಲ್ಯಧಾರೆ
ಸುರಿಸುವೆ ಒಲವ ಅಮೃತಧಾರೆ
ಮಡಿಲಲ್ಲಿ ತಟ್ಟಿ ಮಲಗಿಸುವೆನು ನಾನು
ಮಾಡುತಿರು ಕಂದ ಹಾಯಾಗಿ ನಿದ್ದೆ
ಚೈತನ್ಯದ ಚಿಲುಮೆ ಜೇನಹನಿಯೆ
ಸಂಭ್ರಮದ ಬೀಜ ಬಿತ್ತಿದೆನ್ನಲಿ
ನಿನ್ನಮ್ಮನಿಗಿಂತ ನನ್ನಮ್ಮ ಹೆಚ್ಚು
ಎಲ್ಲರಿಗು ನೀನು ಅಚ್ಚುಮೆಚ್ಚು
ತೂಗುವೆನು ತೊಟ್ಟಿಲನು ನಾನು
ಸಾಗಲಿ ಕಂದ ಸವಿನಿದ್ದೆ
Bookmark/Search this post with

Posted by Premashri on October 11, 2011 04:16 AM· permalink
ಕಾರಂತರ ಬಾಳ್ವೆಯೇ ಬೆಳಕು ಪುಸ್ತಕ ಓದುತ್ತಿರುವೆ. ಬದುಕು, ಹುಟ್ಟು ಸಾವುಗಳು, ಜೀವನವನ್ನು ಎದುರಿಸಬೇಕಾದ ಕ್ರಮ ಮುಂತಾದವುಗಳ ಕುರಿತಾದ ಲೇಖನಗಳಿರುವ ಪುಸ್ತಕವಿದು.
ಹಟ್ಟಿ ಹರಳಿನಂತಹ ವಾಕ್ಯಗಳನ್ನು ಓದುತ್ತ ಕಾರಂತರನ್ನು ಮೆಚ್ಚಿದ್ದೇ ಹೆಚ್ಚು ಓದಿದ್ದು ಕಡಿಮೆ ಎನ್ನಿಸತೊಡಗಿತು.
ದೇವರು, ಧರ್ಮ, ಸಂಪ್ರದಾಯಗಳ ಬಗ್ಗೆ ಬರೆಯುವುದಕ್ಕೆ, ಚರ್ಚಿಸುವುದಕ್ಕೆ ನನಗೆ ಆಸಕ್ತಿ ಇತ್ತು. ಇವುಗಳ ವಿರುದ್ಧ ಮಾತನಾಡುವಾಗ ಬಳಸುತ್ತಿದ್ದ ಚಿಂತನೆಗಳು, ಕಟ್ಟಿಕೊಳ್ಳುತ್ತಿದ್ದ ವಾದ ಸರಣಿ, ಅವುಗಳಿಗೆ ಭೂಮಿಕೆಯಾಗಿರುತ್ತಿದ್ದ ನನ್ನ ಗ್ರಹಿಕೆ ಇವು ತೀರಾ ಭಿನ್ನವಾಗಿರುವಂತಹ ಪುಸ್ತಕ 'ಬಾಳ್ವೆಯೇ ಬೆಳಕು'. ನಾನು ಪರವಾಗಿದ್ದೇನೆ ಎಂದು ತಿಳಿದ ವಿಚಾರ ಧಾರೆಯೇ ನನಗೆಷ್ಟು ಅಪರಿಚಿತ, ನಾನು ವಿರೋಧ ಮಾಡುತ್ತಿದ್ದ ಚಿಂತನೆ ನಾನು ತಿಳಿದದ್ದಕ್ಕಿಂತ ಎಷ್ಟು ಭಿನ್ನ ಎಂಬ ಜಿಜ್ಞಾಸೆ ಹುಟ್ಟು ಹಾಕುವಂತೆ ಮಾಡಿದೆ.
ಸತ್ಯಕ್ಕೆ ಹತ್ತಿರವಾಗಿರುವುದಕ್ಕೆ ಬರಹಗಾರನಿಗೆ ಬರವಣಿಗೆಯೇ ದೊಡ್ಡ ಅಡ್ಡಿಯಾಗುವುದೇ- ಮೊದಲಾದ ಪ್ರಶ್ನೆಗಳು ಈ ಓದಿನಿಂದ ಟಿಸಿಲೊಡೆಯುತ್ತಿವೆ.
Bookmark/Search this post with

ಮುಂದೆ ಓದಿ...
Posted by uniquesupri on October 11, 2011 04:10 AM· permalink
(ಚಿತ್ರ ಕೃಪೆ: ಅಂತರ್ಜಾಲ)
'ನೋಟ್ ಬುಕ್ಕಿನ ಕೊನೆಯ ಪೇಜು' ಇದೊಂದು ತೀರ ಪರಿಚಯದ, ಆದರೆ ಅದೇನೋ ವಿಶಿಷ್ಟ ಎನಿಸುವ ಶಬ್ದ. ಆ ಪೇಜಿನ ಮೇಲೆ ಅದೊಂಥರದ ಮೋಹ, ಮಮತೆ ಎಲ್ಲ. ! ಪಟ್ಟಿ-ಪುಸ್ತಕಗಳೆಂದ ಮೇಲೆ ಅದಕ್ಕೊಂದು ಮೊದಲನೆಯ ಹಾಗೂ ಕೊನೆಯ ಪೇಜುಗಳೆಂದು ಇರಲೇ ಬೇಕು. ಎಲ್ಲದಕ್ಕೂ ಒಂದು ಆದಿ ಹಾಗು ಅಂತ್ಯ ಎಂದು ಇರುವಂತೆ! ಮೊದಲ ಪೇಜಿನಲ್ಲಿ ಆದಷ್ಟು ಸುಂದರವಾಗಿ ಹೆಸರನ್ನೂ ತರಗತಿಯನ್ನೂ ರೋಲ್ ನಂಬರ್ ಗಳನ್ನೆಲ್ಲ ಬರೆಯುತ್ತಿದ್ದೆವು ಅಲ್ವಾ? ನಾವು ನಮ್ಮ ಶಾಲಾ ದಿನಗಳಲ್ಲಿ. ಕೊನೆಗೆ ಕಾಲೇಜಿನ ಮೆಟ್ಟಿಲೇರುತ್ತಿದ್ದಂತೆ ಆ ಹೆಸರು ಬರೆಯುವ ಹುಮ್ಮಸ್ಸು ಮಾಸುತ್ತ ಸಾಗುತ್ತದೆ. ಥೇಟ್ ನೆನಪುಗಳಂತೆ. !ಕೊನೆಗೆ ಕಾಲೇಜಿನಲ್ಲಿ ನೋಟ್ ಪುಸ್ತಕ ಒಯ್ಯುವುದೇ ಒಂದು ರಗಳೆ ಎನಿಸಿಬಿಡುತ್ತದೆ. (ಅದಕ್ಕೆ ನಮ್ಮ ಹುಡುಗರು folding front page ಇರುವ ನೋಟ್ ಪುಸ್ತಕಗಳನ್ನು ಸುರುಳಿ ಸುತ್ತಿ ಒಯ್ಯುತ್ತಾರೆ.) ನೋಡಿ ಇಂಥ ಹರಟೆ ಹೊಡೆಯುವಾಗಲೇ ನನ್ನ ರೈಲು ಹಳಿ ತಪ್ಪುತ್ತದೆ. ಇರಲಿ ಬಿಡಿ ! ಓಡಿಸಿದ್ದೇನೆ ಓದಿ.
ವಿ.ಸೂ: ಇಲ್ಲಿ ಯಾರದ್ದೇ ಮನ ನೋಯಿಸುವ ಉದ್ದೇಶವಿಲ್ಲ .ಇಲ್ಲಿನ ಹಾಸ್ಯವನ್ನಷ್ಟೇ ಸ್ವೀಕರಿಸಬೇಕಾಗಿ ವಿನಂತಿ .
ನಾನು ಜನರನ್ನು ಎರಡೇ ಎರಡು ವಿಧವಾಗಿ ವಿಂಗಡಿಸುತ್ತೇನೆ.
೧. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಬರೆದವರು (ಬರೆಯುವವರು )
೨. ಬರೆಯದೇ ಇರುವವರು.(ಇದ್ದವರು )
ನಿಮ್ಮ ಶಾಲಾ ಕಾಲೇಜು ದಿನಗಳನ್ನು ಒಮ್ಮೆ ನೆನಪಿಸಿ ಕೊಳ್ಳಿ ಅದರಲ್ಲಿ ಕೊನೆಯ ಪೇಜಿನದೊಂದು ಅಧ್ಯಾಯ ಇದ್ದೇ ಇರುತ್ತದೆ. ಇನ್ನು ಕೆಲವರು 'ನಾನು ಏನು ಬರೆಯುತ್ತಿರಲಿಲ್ಲ ಮಾರಾಯ್ರೆ' ಎನ್ನಬಹುದು. ನಿಮ್ಮ ಬಗ್ಗೆ ಏನೂ ಹೇಳಲೂ ಆಗುವುದಿಲ್ಲ. ಸಿಕ್ಕಾಪಟ್ಟೆ ಪಂಕ್ಚುವಲ್ ನೀವು..! ಈ ಲೇಖನವನ್ನು ಓದುತ್ತ ಹೋಗಿ ನೀವು ಏನನ್ನು ಮಿಸ್ ಮಾಡಿಕೊಂಡಿದ್ದೀರಿ ಎಂಬುದು ತಿಳಿಯುತ್ತದೆ.!
ಮನದಲ್ಲಿ ಮುಚ್ಚಿಟ್ಟ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಈ ಕೊನೆಯ ಪೇಜು. ನಮ್ಮ ಮನಸ್ಸಿಗೆ ಪ್ರಬುದ್ಧತೆ ಬರುವುದನ್ನು ಸಲೀಸಾಗಿ ಈ ಕೊನೆಯ ಪೇಜು ಹೇಳಿ ಬಿಡುತ್ತದೆ. ಬೇಕಿದ್ದರೆ ನಿಮ್ಮ ಶಾಲಾ ದಿನಗಳ ಹಾಗೂ ಕಾಲೇಜಿನ ದಿನಗಳ ನೋಟ್ ಬುಕ್ ತೆಗೆದು ನೋಡಿ. ವ್ಯತ್ಯಾಸ ಕಂಡು ಬರುತ್ತದೆ.ನೋಟ್ ಬುಕ್ಕಿನ ಕೊನೆಯ ಪೇಜನ್ನು ನೋಡಿ ನೀವು ಎಂಥವರು ಎಂಬುದನ್ನು ಹೇಳಬಹುದಂತೆ. !
ನನಗಂತೂ ಅದೇನೋ ವಿಚಿತ್ರ ಪ್ರೀತಿ ಈ ಹಾಳೆಯ ಮೇಲೆ. ನೋಟ್ ಬುಕ್ ರದ್ದಿಗೆ ಕೊಡುವಾಗ ಕೊನೆಯ ಹಾಳೆಯನ್ನು ಹರಿದು ಕೊಡುವುದೂ ಇತ್ತು. ಅದೇ ಹಾಳೆಗಳ ಸಂಗ್ರಹ ಮತ್ತೊಂದು ನೋಟ್ ಬುಕ್ ಆಗುವಷ್ಟಿದೆ..!
ಅದೆಷ್ಟೋ ಸಲ ಅಂದು ಕೊಂಡಿದ್ದೆ, ಈ ಸಲ ಕೊನೆಯ ಪೇಜಿನಲ್ಲಿ ಬರೆಯಲೇ ಬಾರದು ಎಂದು. ಆದರೆ ಹಾಳಾದ ಪೆನ್ನು ಕೆಲವೊಮ್ಮೆ ಬರೆಯುವುದೇ ಇಲ್ಲ ನೋಡಿ, ಆಗ ಗೀಚಲು ಹಿಂಬದಿಯ ಪೇಜೇ ಬೇಕು..! ಅದೊಂದು ನೆವದಲ್ಲಿ ಶುರುವಾದ ಬರೆಹ ಅದೊಂದು ಪೇಜು ಮುಗಿದು ಅದರ ಹಿಂಬದಿಯ ಪೇಜಿಗೆ ಬರುತ್ತಿತ್ತು.! ಅದೆಷ್ಟೋ ಸಲ ಕೊನೆಯ ಪೇಜುಗಳ ಸಂಖ್ಯೆಯೇ ನೋಟ್ಸ್ ಬರೆದ ಪುಟಗಳಿಗಿಂತ ಜಾಸ್ತಿ ಆದದ್ದೂ ಇತ್ತು.!
ಇನ್ನು ಈ ಕೊನೆಯ ಪೇಜಿನಿಂದ ಶುರುವಾದ ಅದೆಷ್ಟೋ love storyಗಳಿವೆ ಮಾರಾಯ್ರೆ. ಆಗಾಗ ನೋಟ್ ಬುಕ್ ತೆಗೆದುಕೊಂಡು ಹೋಗುತ್ತಿದ್ದ ಹುಡುಗ i love you ಎಂದು ಬರೆದು ಕೊಟ್ಟಿದ್ದನಂತೆ ನನ್ನ ಗೆಳತಿ ಒಬ್ಬಳಿಗೆ ಇದೇ ಕೊನೆಯ ಪೇಜಿನಲ್ಲಿ .! (ಇದೆಲ್ಲ ಮೊಬೈಲ್ ಫೋನ್ ಹಾವಳಿಗಿಂತ ಹಿಂದಿನ ಸುದ್ದಿ. ಈಗೆಲ್ಲ i love you ಎಂದು ಹೇಳಲು ನೋಟ್ ಬುಕ್ಯಾಕೆ ಬೇಕು ಹೇಳಿ? ಪ್ರಪೋಸ್ ಮಾಡೋದ್ರಿಂದ ಹಿಡಿದು ಬ್ರೇಕ್ ಅಪ್ ವರೆಗೂ ಮೆಸ್ಸೇಜಿನಲ್ಲೇ ಆಗೋ ಕಾಲ ಇದು..! )
ಸ್ಕೂಲಿನ ದಿನಗಳಲ್ಲಿ ನೋಟ್ ಬುಕ್ ತೆಗೆದುಕೊಂಡು ಹೋದ ಹುಡುಗ ನಿಮ್ಮ ಕೊನೆಯ ಪೇಜಿನಲ್ಲಿ ಚಿತ್ರ ಬರೆದನೋ ಅವನೇನೋ ವಿಶಿಷ್ಟವಾದುದನ್ನು ಹೇಳಲಿದ್ದಾನೆ ಎಂದೇ ಅರ್ಥ..! 'ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ' ... (ಇದನ್ನು ಮುಂದೆ ನಿಮ್ಮ ಮಕ್ಕಳಿಗೆ ಇರಲಿ ಎಂದು ಹೇಳಿದೆ )
ಇನ್ನು ಈ crushಗಳ ಕಥೆ ಕೇಳಿ: ಹುಡುಗನೊಬ್ಬ ಇಷ್ಟವಾದರೆ ಅವನ ಹೆಸರನ್ನು ಅದ್ಹೇಗೋ ಕದ್ದು ಮುಚ್ಚಿ ಕೊನೆಯ ಪೇಜಿನ ಅಕ್ಷರಗಳ ನಡುವೆ ಬರೆಯುತ್ತಿದ್ದಳು ಹುಡುಗಿ. ಹಾಗೆ ಅಂಥ ಹೆಸರುಗಳ ಬರೆಯಲು ಆ ಹಾಳೆ ಸಾಕಾಗದೆ ಹಿಂದಿನ ಪೇಜಿನಲ್ಲಿ ಶುರುಮಾಡಿದಳಂತೆ..!
ನಾನೂ ನನ್ನ ಹೈಸ್ಕೂಲಿನ ದಿನಗಳಲ್ಲಿ ಕೊನೆಯ ಪೇಜಿನಲ್ಲಿ ಸೌರವ ಗಂಗೂಲಿ ಹೆಸರಿನ ಜೊತೆಗೆ ನನ್ನ ಹೆಸರನ್ನು ಬರೆದಿಡುತ್ತಿದ್ದೆ..!
ಇಂಥದ್ದೇ ಒಂದು ನೈಜ ಘಟನೆ ಕೇಳಿ :ನಾನು ಕನ್ನಡ ಶಾಲೆಯಲ್ಲಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿ ಡಿಗ್ರೀ ಕೊನೆಯ ವರ್ಷದಲ್ಲಿದ್ದ ಹುಡುಗನೊಬ್ಬನಿದ್ದ, ನಾನು 'ಮಾಧವಣ್ಣ' ಎಂದೇ ಕರೆಯುತ್ತಿದ್ದೆ. ನಮ್ಮ ಮನೆಗೆ ಕ್ರಿಕೆಟ್ ನೋಡಲು ಬರುತ್ತಿದ್ದ ಪರೀಕ್ಷೆಯಿದ್ದರೂ.! ಹೆಸರಿಗೆ ಮಾತ್ರ ನೋಟ್ ಬುಕ್ ಕೈಯಲ್ಲಿ, ಗಮನವೆಲ್ಲ ಟಿವಿಯಲ್ಲಿಯೇ.! ಒಮ್ಮೆ ಸುಮ್ಮನೆ ಅವನ ನೋಟ್ ಬುಕ್ ತೆಗೆದು ನೋಡಿದ್ದೆ. ಹಿಂಬದಿಯ ಪೇಜಿನಲ್ಲಿ ಎಲ್ಲಿ ನೋಡಿದರಲ್ಲಿ shamadhav .. shamadhav ಎಂದು ಬರೆದಿರುತ್ತಿತ್ತು. ಕೊನೆಗೆ ತಿಳಿದದ್ದು, ಅವನು shama (ಶಮಾ) ಎನ್ನುವ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ..!
ನಾವು satellite communication ಪಾಠ ಮಾಡುವ ಸರ್ ಒಬ್ಬರ ಕುರಿತು pappu can't teach saala ಎಂದು remix ಹಾಡೊಂದನ್ನು ಕೊನೆಯ ಪೇಜಿನಲ್ಲಿ ಬರೆದೂ ಆಗಿತ್ತು. ಈ ಹಾಡು ಭಯಂಕರ ಪ್ರಸಿದ್ಧಿಯಾಗಿತ್ತು ಒಮ್ಮೆ.!
ಇನ್ನು ಕೆಲವರಿರುತ್ತಾರೆ ನೋಡಿ, ಮೊದಲ ಪೇಜಿನಿಂದ ನೋಟ್ಸ್ ಬರೆಯಲು ಶುರು ಮಾಡಿ, ಮಾರ್ಜಿನ್ ಕೂಡ ಬಿಡದೆ. ಕೊನೆಯ ಪೇಜಿನ ಕೊನೆಯ ಸಾಲಿನ ವರೆಗೂ ನೋಟ್ಸ್ ಬರೆಯುವಷ್ಟು ನಿಷ್ಠಾವಂತರು.! ಅವರನ್ನು ಅದ್ಹೇಗೆ ನಮ್ಮ ಸಾಲಿನಲ್ಲಿ ಕೂರಿಸಿಕೊಳ್ಳುವುದು ನೀವೇ ಹೇಳಿ ?
ಕೆಲವರು ನೋಟ್ ಬುಕ್ಕಿಗೆ ಕವರ್ ಹಾಕಿ. ಹಿಂಬದಿ ಮುಂಬದಿ ತಿಳಿಯದೆ ಎರಡೂ ಕಡೆ ನೋಟ್ಸ್ ಬರೆಯುವ ಪುಣ್ಯಾತ್ಮರೂ ಇದ್ದಾರೆ .! ಅವರದು ಕೊನೆ ಮೊದಲು ಎಲ್ಲೆಲ್ಲೋ ಇರುವ ನೋಟ್ ಬುಕ್ .! ಅಥವಾ ಕೊನೆ ಮೊದಲು ಇದ್ದೂ ಇಲ್ಲದಂತಿರುವ ನೋಟ್ ಬುಕ್ ..!
ಈ ಕೊನೆಯ ಪೇಜಿನಲ್ಲಿ ಬರೆಯುವ ಚಟ assignment ನೋಟ್ ಬುಕ್ ಕೂಡ ಬಿಡಲು ಬಿಡುವುದಿಲ್ಲ..! assignment ಅದನ್ನು ಅದೇನೋ ನೆನಪಾಗಿ ಹಿಂಬದಿಯ ಪೇಜಿನಲ್ಲಿ ಬರೆದು ಬಿಡುತ್ತೇವೆ. ಅದ್ಯಾವುದೋ ಹಾಡು, ಸಾಲು, ಮೆಸ್ಸೇಜು ಹೀಗೆ ಏನೋ ಒಂದು ನಂತರ ಲೆಕ್ಚರರ್ ಕೇಳಿದಾಗ ಅದನ್ನು ಅಂಟಿಸಿ ತಿಳಿಯದಂತೆ ಮಾಡಲು ಹರ ಹರಿ ಸಾಹಸ ಮಾಡಿದ್ದೂ ಇದೆ .! ಈ ಲೆಕ್ಚರರ್ ಗಳಿಗೂ ಹಿಂಬದಿಯ ಪೇಜು ಓದುವ ಘೀಳು ಇದೆ. ನಂತರ ಕ್ಲಾಸಲ್ಲಿ ಬಂದು ಸುಮ್ಮನೆ ಮರ್ಯಾದೆ ಹರಾಜು ಮಾಡಿಬಿಡುತ್ತಾರೆ ಮಾರಾಯ್ರೆ!
ಹಿಂಬದಿಯ ಪೇಜಿನಲ್ಲಿ ಏನಿರುತ್ತದೆ ?
* ಕೆಲವರು ಹಿಂಬದಿಯ ಪೇಜಿನಲ್ಲಿ ವಿವಿಧ ರೀತಿಯ ಅಕ್ಷರ ವಿನ್ಯಾಸವನ್ನ್ನು practice ಮಾಡುತ್ತಾರೆ. ಕೆಲವರು ಎದುರಿಗೆ ಪಾಠ ಮಾಡುವವರ ಚಿತ್ರ ಬರೆಯುತ್ತಾರೆ .! ಹೊರಗಡೆ ಕಿಟಕಿಯಲ್ಲಿ ಕಂಡಿದ್ದನ್ನೆಲ್ಲ ಚಿತ್ರಿಸುತ್ತಾರೆ. !
ತುಂಬಾ ಜನರು ಅವರವರ signature ಹಾಕಿರುತ್ತಾರೆ. ಮಾರ್ಕ್ಸ್ ಕಮ್ಮಿ ಬಂದರೆ ಇರಲಿ ಎಂದು, ಅಪ್ಪನ ಸಹಿ ನಕಲು ಮಾಡಲೂ ಕಲಿಯುವುದು ಈ ಹಿಂಬದಿಯ ಪೇಜಲ್ಲೇ..!
*ಹುಡುಗಿಯರ ನೋಟ್ ಬುಕ್ ಹಿಂಬದಿಯ ಪೇಜಿನಲ್ಲಿ ರಂಗೋಲಿ, ಬಂಡಿ ಆಟ (ನಾಲ್ಕು ಮನೆಮಾಡಿ ಆಡುತ್ತಾರೆ), ಹಾಡುಗಳ ಸಾಲುಗಳು, ಸಹಿ, ಪ್ರೀತಿಯ ಹುಡುಗನ ಹೆಸರು (ಅಸ್ಪಷ್ಟವಾಗಿ), ಓಂ, ಶ್ರೀ, 687 ಇತ್ಯಾದಿ ಇತ್ಯಾದಿ ಕಂಡು ಬರುತ್ತವೆ..!
*ಇನ್ನು ಹಲವರಿಗೆ ಹಿಂಬದಿಯ ಪೇಜಿನ ಮೇಲೆ ಫೋನ್ ನಂಬರ್ಗಳ ಬರೆದಿಡುವ ಚಟ.! ಅದೂ ಎಲ್ಲೂ ಯಾರ ನಂಬರ್ ಎಂದು ಹೆಸರು ಬರೆಯದೆ..! ಯಾವ್ಯಾವುದೋ ನಂಬರಿಗೆ ಫೋನ್ ಮಾಡಿ ಪೇಚಾಡುತ್ತಾರೆ ಆಮೇಲೆ!
* ಇಬ್ಬರು ಹುಡುಗಿಯರು ಬೆಂಚ್ ಮೇಟ್ಸ್, ಎದುರುಗಡೆ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಸರ್ ಪಾಠ ಮಾಡುತ್ತಿದ್ದರೂ ಇವರು ಅವರ ಕ್ಲಾಸಿನ chocolate boy ಲುಕ್ಕಿನ ಹುಡುಗನ ಹೊಸ hair style ಕುರಿತು ಮಾತನಾಡುತ್ತಲೇ ಇರುತ್ತಾರೆ. ಅದೂ ಕೊನೆಯ ಪೇಜಿನ ಮೂಲೆಯಲ್ಲಿ ಬರೆದು ..!
*ಇನ್ನು ಕೆಲವರಿಗೆ ಲಾಸ್ಟ್ ಪೇಜ್ ಎಂದರೆ ಅದೊಂದುತರಹದ ರಫ್ ನೋಟ್ ಬುಕ್ ..! ಎಲ್ಲ ವಿಷಯಗಳ ಕಲಸು ಮೇಲೋಗರ ಅಲ್ಲಿ ..!
* ಕೆಲವರು 'ಫಾರ್ಮುಲ' ಬರೆದಿಟ್ಟರೆ ಮತ್ತು ಕೆಲವರು' ಫಾರ್ಮುಲ ಒನ್' ಕಾರ್ ಚಿತ್ರ ಬಿಡಿಸುತ್ತಾರೆ..!
*ಹೈಸ್ಕೂಲಿನ ದಿನಗಳಲ್ಲಿ ಹಿಂಬದಿಯ ಪೇಜಿನಲ್ಲಿ ಭಾರತದ ನಕ್ಷೆ ಇರುತ್ತಿತ್ತು. ಅದೇನು ದೇಶಪ್ರೇಮ ಎನ್ನಬೇಡಿ.ಕೆಲವೊಮ್ಮೆ ಕಾಪಿ ಹೊಡೆಯಲು ಬೇಕಾಗುತ್ತದೆ ಎಂದು .!
*quick referenceಗೆ ಬಳಕೆಯಾಗುವುದು ಈ ಕೊನೆಯ ಪೇಜೆ! ವೆಬ್ ಸೈಟ್ ಗಳ ಹೆಸರುಗಳು, ಮೊಬೈಲ್ ಸೆಟ್ಟಿಂಗ್ ಕೋಡ್ ಇವೆಲ್ಲ ಬರೆಯಲು ಕೊನೆಯ ಪೇಜಿಗೆ ಶರಣಾಗುತ್ತೇವೆ..!
ಕೊನೆಯ ಪೇಜಿನೊಂದಿಗೆ ಸೇರಿಹೋಗಿರುವ ನೆನಪುಗಳು:
ನಮಗೋರ್ವರು ಸರ್ ಇದ್ದರು, in particular cases ಎಂದು ಪ್ರತಿ ವಾಕ್ಯದ ಹಿಂದೆ ಸೇರಿಸುವ ಚಟ ಅವರಿಗೆ.! ಒಮ್ಮೆ ನಾನು ನನ್ನ ಗೆಳತಿ ಒಂದು ಕ್ಲಾಸಿನಲ್ಲಿ ಅವರು ಎಷ್ಟು ಬಾರಿ ಹೇಳಬಹುದೆಂದು ಲೆಕ್ಕ ಹಾಕಲು ಶುರು ಮಾಡಿದೆವು, ಅವರು in particular cases ಎಂದು ಹೇಳಿದಾಗಲೆಲ್ಲ ಒಂದು ಗೀಟು ಹಾಕುತ್ತ ಸಾಗಿದ್ದು ನಮ್ಮ ಕೆಲಸ ! ಕೊನೆಗೆ ಕ್ಲಾಸು ಮುಗಿದು ಲೆಕ್ಕ ಮಾಡಿದರೆ ಬರೋಬ್ಬರಿ 147 ಗೀಟುಗಳು..! ಗೀಟು ಹಾಕಿದ್ದು ಹಿಂಬದಿಯ ಪೇಜಿನಲ್ಲೇ ಎಂದು ಬೇರೆ ಹೇಳಬೇಕಿಲ್ಲ ಅಲ್ಲವೆ ? !
ಕ್ಲಾಸು ನಡೆಯುತ್ತಿರುವಾಗಲೇ ಅದೇನೋ ಒಂದು ವಿಷಯ ಜ್ಞಾಪಕಕ್ಕೆ ಬಂದು ಬಿಡುತ್ತದೆ. (ಅದ್ಯಾಕೆ ಮಾರಾಯ್ರೆ ಕ್ಲಾಸು ನಡೆಯುವಾಗಲೇ ಈ ಅಸಂಬದ್ಧ ವಿಷಯಗಳು ಜ್ಞಾಪಕಕ್ಕೆ ಬರುವುದು?) ಕೊನೆಯ ಬೆಂಚಿನ ಹುಡುಗಿಗೆ ವಿಷಯ ಹೇಳಬೇಕು, ಅದೂ ತುರ್ತಾಗಿ, ಆಗ ನೋಡಿ ಮತ್ತೆ ಹೆಲ್ಪಿಗೆ ಬರುವುದು ಇದೇ ಕೊನೆಯ ಪೇಜು..! ಅದರ ಮೂಲೆಯೊಂದನ್ನು ಹರಿದು ಅದರಲ್ಲಿ ವಿಷಯವ ಬರೆದು ಹಿಂಬದಿಗೆ ಪಾಸು ಮಾಡುವುದು. ಈ ಹುಡುಗಿಯರಿಗೆ ಸಿಕ್ಕಾಪಟ್ಟೆ ಕುತೂಹಲ. ಅದೇನು ಬರೆದಿದೆ ಎಂದು ಓದಿಯೇ ಹಿಂದೆ ಪಾಸ್ ಮಾಡುವುದು..!
ಒಮ್ಮೆ ಹೀಗಾಗಿತ್ತು:
ನಮಗೆ ಒಂದೇ ಶರ್ಟ್ ಒಂದು ವಾರ ಹಾಕುವ ಸರ್ ಒಬ್ಬರಿದ್ದರು. ಅವರ ಕುರಿತು ಆ ದಿನ ಅವರದ್ದೇ ಕ್ಲಾಸಿನಲ್ಲಿ ನಾವು (ನಾನು & ಬೆಂಚ್ ಮೇಟ್) ಬರೆದಿದ್ದು ಹೀಗೆ "RDX ಚೆಸ್ ಬೋರ್ಡ್ ಶರ್ಟು ಸತತ 6ನೆಯ ದಿನದ ಯಶಸ್ವೀ ಪ್ರದರ್ಶನದತ್ತ..!" ಇಡೀ ಕ್ಲಾಸಿಗೆ ಅದರ ಸುದ್ದಿಯಾಗಿ,ಅವೈರೂ ತಿಳಿದು.. ಕ್ಲಾಸನ್ನೇ ಸಸ್ಪೆಂಡ್ ಮಾಡಿದ್ದರು ! ಇಂಥ ನೆನಪುಗಳು ಕೊನೆಯ ಪೇಜಿನಲ್ಲಿ ಸೇರಿಕೊಂಡಿವೆ ..!
ಒಬ್ಬ ಸ್ನೇಹಿತನಿದ್ದ ಅವನು autograph ಬರೆದಿದ್ದು ಕೊನೆಯ ಪೇಜಿನಲ್ಲೇ. ಕೇಳಿದರೆ ಹೇಳುತ್ತಿದ್ದ, 'ಜೀವನದ ಕೊನೆಯವರೆಗೂ ಇರಲಿ ಸ್ನೇಹ' ಎಂದು ..! ಅವರವರ ಭಾವಕ್ಕೆ ಅಲ್ಲವೇ ?
ನಾನು, ನನ್ನ ಒಂದಿಷ್ಟು ಕೊನೆಯ ಪೇಜಿನ ಸಾಲುಗಳ ಕುರಿತೇ ಒಂದು ಲೇಖನವನ್ನು ಬರೆದಿದ್ದೆ ಅಲೆಮಾರಿ ಸಾಲುಗಳು ಎಂದು. ಹೀಗೆ ಸಾಗುತ್ತದೆ ಕೊನೆಯ 'ಪೇಜಾಯಣ'..!
ನೋಡಿ.. ಹುಡುಗಿಗೆ ಹೇಳಲಾಗದ ಮಾತುಗಳನ್ನೆಲ್ಲ ಈ ಕೊನೆಯ ಪೇಜು ಕೇಳಿಸಿಕೊಳ್ಳುತ್ತದೆ, ಸಾಂತ್ವನ ಹೇಳುತ್ತದೆ. ಆ ಪೇಜಿನೊಂದಿಗೆ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ನೀವು ಒಮ್ಮೆ ನಿಮ್ಮ ಹಳೆಯ ನೋಟ್ ಬುಕ್ ತೆಗೆದು ನೋಡಿ.! ನಿಮ್ಮ ನೆನಪುಗಳ ಸುರುಳಿ ಬಿಚ್ಚುತ್ತದೆ....
ನೋಟ್ ಬುಕ್ ಗಳು ಇರುವವರೆಗೂ ಕೊನೆಯ ಪೇಜುಗಳು ಇರುತ್ತವೆ. ಅಲ್ಲಿ ಅಕ್ಷರಗಳ ಚಿತ್ರಗಳ ಮೆರವಣಿಗೆ ಇರುತ್ತದೆ.
ಶ್ರೀ ಕೃಷ್ಣ ಪ್ರತಿಯೊಂದು ಯುಗದಲ್ಲೂ ಅವತರಿಸಿದರೆ, ಲಾಸ್ಟ್ ಪೇಜ್ ಪ್ರತಿಯೊಂದು ನೋಟ್ ಬುಕ್ ನಲ್ಲೂ ಅವತರಿಸುತ್ತದೆ ..!
ಎಲ್ಲರೂ ಹೇಳಿ ಬಿಡಿ :ಜೈ 'ಲಾಸ್ಟ್ ಪೇಜ್' ..!
ಹಾಗೆ ಬರಹ ಹೇಗಿದೆ ಎಂದೂ ತಿಳಿಸಿರಿ.
Posted by Soumya. B (noreply@blogger.com) on October 10, 2011 10:33 AM· permalink
ಇತ್ತೀಚೆಗೆ ನಡೆದ ಒಂದು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ತಮ್ಮ ತಾಲ್ಲೂಕಿನವಳು ಎಂಬ ಅಭಿಮಾನದಿಂದ ಕವಿಗೋಷ್ಠಿಗೆ ಅಧ್ಯಕ್ಷತೆಯನ್ನು ವಹಿಸಲು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ಕವನ-ಕವಿಯ ಬಗ್ಗೆ, ಮಾತುಗಳನ್ನು ಆಡುವುದು ಅಗತ್ಯವೆನಿಸಿತು. ಸಾಮಾನ್ಯವಾಗಿ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಅಥವಾ ಅನುಭವವನ್ನು ಕವನವನ್ನಾಗಿಸುವ ಸಂದರ್ಭದಲ್ಲಿ ಬಳಸುವ ಭಾಷೆ, ರಚಿಸುವ ರೀತಿ ಒಬ್ಬೊಬ್ಬರದು ಒಂದೊಂದು ವಿಧವಾಗಿರುತ್ತದೆ. ಕವಿಯ ಈ ವೈಶಿಷ್ಟ್ಯವನ್ನೇ ‘ಶೈಲಿ(style)' ಎನ್ನುವುದರಿಂದ ಈ ಬಗ್ಗೆ ಮಾತನಾಡುವುದೇ ಸೂಕ್ತ ಎಂದುಕೊಂಡು ನನ್ನ ಬಳಿ ಇದ್ದ ಕೆ. ವಿ. ನಾರಾಯಣ ಅವರ ‘ಶೈಲಿಶಾಸ್ತ್ರ' ಎನ್ನುವ ಪುಸ್ತಕದಿಂದ ಕೆಲವು ಅಂಶಗಳನ್ನು ಗುರುತುಮಾಡಿಕೊಂಡೆ:
‘*ಈಗಾಗಲೇ ವಿಮರ್ಶಾ ಪರಂಪರೆಯಲ್ಲಿ ಕವಿಯ ಕೃತಿಗಳನ್ನು ಚರ್ಚಿಸುವಾಗ ಆಯಾ ಕವಿಗಳ ಭಾಷಿಕ ವೈಶಿಷ್ಟ್ಯಗಳನ್ನು ಆಯಾ ಕವಿಗಳ ಶೈಲಿ ಎಂದು ವಿವರಿಸುವುದು ವಾಡಿಕೆಯಿದೆ.
*ಅನುಭವಗಳನ್ನು, ಅವುಗಳ ಪರಿಣಾಮವಾದ ಭಾವತೀವ್ರತೆಯನ್ನು ಕಾವ್ಯವನ್ನಾಗಿ ಪರಿವರ್ತಿಸಲು ಕವಿ ‘ಭಾಷೆಯೊಡನೆ ನಡೆಸುವ ಹೋರಾಟ'ದಿಂದ ಅವನ ಶೈಲಿಯು ರೂಪುಗೊಳ್ಳುತ್ತದೆ. ಯುಕ್ತ ಶೈಲಿ ಎಂದರೆ ಅಭಿವ್ಯಕ್ತಿಯಲ್ಲಿ ಪರಿಪೂರ್ಣತೆ ಎಂದರ್ಥ.
*ಕೃತಿರಚನೆಯನ್ನು ‘ಅನುಭವ ಗ್ರಹಿಕೆ' ಹಾಗೂ ‘ಅನುಭವ ಮಂಡನೆ' ಎಂಬ ಎರಡು ಸ್ತರದಲ್ಲಿ ನೋಡುವ ಸಾಹಿತ್ಯ ತತ್ವಗಳು, ಇವೆರಡರ ಸಮತೋಲನವನ್ನು ಸಾಧಿಸಿದ ಸಂದರ್ಭವನ್ನು ‘ಶೈಲಿ'ನಿರ್ಮಾಣವೆನ್ನುತ್ತಾರೆ. ಅನುಭವ ಮತ್ತು ಶೈಲಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ.
*ಸಂಸ್ಕೃತ, ಇಂಗ್ಲಿಷ್.... ಪದಗಳನ್ನು ಬೆರೆಸುವ 'ನುಡಿಬೆರಕೆ'(code mixing)ಯು ಕನ್ನಡ ಕಾವ್ಯಗಳ ಶೈಲಿ ನಿರ್ವಹಿಸುವಲ್ಲಿ ಅನಿವಾರ್ಯ ಅಂಶವಾಗುತ್ತದೆ. ನುಡಿಬೆರಕೆಯ ವೈವಿಧ್ಯತೆಯಿಂದಲೇ ಶೈಲಿಯ ವೈವಿಧ್ಯ ರೂಪುಗೊಂಡಿದೆ.'
ನಾವು ಶಾಲೆಯಲ್ಲಿ ಓದುವಾಗ ‘ಪದ್ಯ'ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದುದು ಏಕೆಂದು ನೆನಪಿರಬಹುದು. ಅವುಗಳಲ್ಲಿದ್ದ ಗೇಯತೆಯ ಗುಣ ಪದೇಪದೇ ಮನಸ್ಸಿನಲ್ಲಿ ಗುಣಗುಣಿಸುವಂತೆ ಮಾಡಿ ಈಗಲೂ ಅವು ನಮ್ಮ ನೆನಪಿನ ಕೋಶದಲ್ಲಿ ಭದ್ರವಾಗಿ ಉಳಿದಿವೆ. ‘ಪದ್ಯಗಳು ಕಾವ್ಯೇತರ ವಾಞ್ಮಯದಲ್ಲೂ ಬಳಕೆಯಾಗಲು ಎರಡು ಮುಖ್ಯ ಕಾರಣಗಳಿವೆ' ಎಂದು ತಿಳಿಸುತ್ತಾ ಹೀಗೆ ಹೇಳುತ್ತಾರೆ, ‘ಅ) ಪದ್ಯಗಳು ಸಂಕ್ಷಿಪ್ತ ನಿರೂಪಣೆಯನ್ನು ಬಯಸುವುದರಿಂದ ಖಚಿತವಾಗಿಹೇಳುವುದು ಸಾಧ್ಯವಾಗುತ್ತದೆ.
ಆ) ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಶಿಕ್ಷಣವು ಮೌಖಿಕ ವಿಧಾನವನ್ನು ಅನುಸರಿಸುತ್ತಿದ್ದ ಕಾಲದಲ್ಲಿ ಇಂಥಾ ವಿಧಾನಗಳು ಅತ್ಯಂತ ಉಪಯುಕ್ತವೆನಿಸುತ್ತಿದ್ದಿರಬಹುದು.
ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ' ಗೆಳೆಯನೊಬ್ಬನಿಗೆ ಚರಿತ್ರೆಯ ಪಾಠದ ಇಸವಿಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಅನುವಾಗುವಂತೆ ಆ ಇಸವಿಗಳೆಲ್ಲಾ ಬರುವ ಪದ್ಯವೊಂದನ್ನು ಬರೆದು ಕೊಟ್ಟಿದ್ದರಂತೆ ಎಂದು ಹೇಳುತ್ತಾರೆ.'
ಕವಿಗೋಷ್ಟಿಯಲ್ಲಿ ವಾಚಿಸಿದ ಕವನಗಳು ವೈವಿಧ್ಯತೆಯಿಂದ ಕೂಡಿದ್ದವು. ಕನ್ನಡನಾಡು-ನುಡಿಗೆ ಸಂಬಂಧಿಸಿದವು, ರೈತರ ಅನುಭವಗಳು-ಸಮಸ್ಯೆಗಳು, ಸಮಾಜದ ಕುಂದು-ಕೊರತೆಗಳು, ರಾಜಕೀಯ, ಶಿಶುಗೀತೆ, ಪ್ರೀತಿ-ವಿರಹ......ಬಳ್ಳಾರಿಯ ಗಣಿಯ ಧೂಳೂ ವೇದಿಕೆಯನ್ನೇರಿ ಶ್ರೋತೃಗಳನ್ನು ಚಿಂತಿಸುವಂತೆ ಮಾಡಿತು! ಕವನಗಳನ್ನು ಆಲಿಸುತ್ತಾ ಇದ್ದಂತೆಯೇ ಸಮ್ಮೇಳನದ ಅಧ್ಯಕ್ಷರು ಹಂಚಿಕೊಂಡ ಅಭಿಪ್ರಾಯ ಮೌಲ್ಯಯುತವೆನಿಸಿತು,
*‘ರೂಪಕ ಪ್ರತಿಮೆ ಇಲ್ಲದಿದ್ದರೆ ಕವನ ಪಟ್ಟಿಯಾಗುತ್ತದೆ.'
ನೇರ-ನೇರವಾಗಿ ಮುಖಾಮುಖಿಯಾದಂತೆನಿಸುವಂತಿದ್ದ ಕೆಲವು ಕವನಗಳು ಅವರನ್ನು ಹಾಗೆ ಚಿಂತಿಸುವಂತೆ ಮಾಡಿದ್ದವು.
ಕವನ ಎಂದರೆ ಏನು? ಅದು ಗದ್ಯಕ್ಕಿಂತ ಹೇಗೆ ಭಿನ್ನವಾಗಿರುತ್ತದೆ? ಎನ್ನುವುದನ್ನು ಅರ್ಥಮಾಡಿಕೊಳ್ಳದೇ ಬರೆಯಲು ಹೊರಟಾಗ ಉಂಟಾಗುವ ಅಭಾಸದಿಂದ ಕವನವನ್ನು ರಚಿಸುವ ವಿಧಾನವನ್ನೂ ಕಲಿಯುವುದು ಅಗತ್ಯವಿದೆ ಎನಿಸುತ್ತದೆ. ಅದಕ್ಕೆ ಅಧ್ಯಕ್ಷರು ತಿಳಿಸಿದಂತೆ *‘ಶಾಲೆಗಳಲ್ಲಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು.' ಗದ್ಯದ ಸಾಲುಗಳನ್ನು ಕತ್ತರಿಸಿ ಬರೆದರೆ ಅದೇ ಪದ್ಯವಾಗುತ್ತದೆ ಎಂಬಂಥಾ ಕಲವು ಬಾಲಿಶ ಭಾವನೆಗಳಿಂದ ನಾವು ಹೊರಬರಬೇಕಾಗುತ್ತದೆ ಎನಿಸಬಹುದು ಆದರೆ ಈ ಮೊದಲು ನಾನು ಬರೆದಿದ್ದ ‘ಹಾರ' ಎಂಬ ಕಥೆಯಲ್ಲಿನ ಕವನವೆಂದರೇನೆಂದೇ ಅರಿಯದ ನಾಯಕಿ ತನ್ನ ಜೀವನದ ಕಷ್ಟಗಳಿಂದ ನೊಂದು-ಬೆಂದು, ತನ್ನ ಭಾವನೆಗಳನ್ನು ತನಗರಿವಿಲ್ಲದಂತೆಯೇ ಕವನದ ರೂಪದಲ್ಲಿ ಪ್ರಚುರ ಪಡಿಸುತ್ತಾಳೆ. ‘........ಆದರೂ ಆತನ ಅನುಪಸ್ಥಿತಿ ನೀಡಿದ ಏಕಾಂತ ಅವಳಿಗೆ ತನ್ನೊಳಗನ್ನು ತಾನೇ ಜಾಲಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆತನ ಸಾಮೀಪ್ಯ ತನ್ನ ಬದುಕಿಗೆ ಸಾರ್ಥಕ್ಯ ನೀಡಿತ್ತೇ ಎನ್ನುವ ಗೊಂದಲದಲ್ಲಿ ನೆನಪುಗಳು ಭೂತವ ಮೀಟಿ ನವೋದಯದ ದಾಟಿ ಹಿಡಿದವು. ಓದೇ ಜೀವಾಳವಾಗಿದ್ದವಳ ಕೈಗೆ ಲೇಖನಿ ಬಂತು. ಖಡ್ಗ ಹಿಡಿದ ‘ಸಮುರೈ'ನಂತೆ ಅವಳು ಬರೆಯುವುದರಲ್ಲಿ ತನ್ನಲ್ಲೇ ತಾನು ಲಯವಾದಳು. ಮನದಲ್ಲಿ ಮೊಳೆದ ನೂರಾರು ಪ್ರಶ್ನೆಗಳು-ಪ್ರಶ್ನೆಗಳಿಗೇ ಹುಟ್ಟು ನೀಡಿದವು. ಭಾವನೆಗಳನ್ನು ಮೆಟ್ಟಿನಿಂತ ವಿಚಾರ ಶಕ್ತಿ ವಿರಾಟರೂಪ ತಾಳಿತು. ಒಂಟಿ ಬದುಕು ಬಯಲಿಗಿಟ್ಟಂತಾಗಿ ಭಂಡಕಣ್ಣುಗಳ ಬೇಟೆಯ ವಸ್ತುವಾದ ಅರಿವಾಗಿ ಬಂಡಾಯಗೊಂಡರೂ ಸಮಸ್ಥಿತಿ ಸಾಧಿಸಿ ನವೋದಯ, ನವ್ಯ, ಬಂಡಾಯಗಳ ಅರಿವೇ ಇಲ್ಲದ ಅವಳು ತನ್ನದೇ ಹಾದಿಯಲ್ಲಿ ಸಾಗಲಾರಂಭಿಸಿದಳು. ‘ಸಂಗೀತದ ಸ್ವರ ಸಾಧನೆಯ ಅರಿವಿಲ್ಲದ ಮಗುವಿನ ಅಳುವಿನಂತೆ ತನ್ನ ಕವನ' ಎಂದುಕೊಂಡಳು.'
‘ಕವಿ ಕೇವಲ ಕವಿಯಲ್ಲ......' ಎನ್ನುವ ಕವನದಲ್ಲಿ ‘ಕವಿ'ಏನೇನೆಲ್ಲಾ ಆಗಿದ್ದಾನೆ ಎನ್ನುವ ಬಗ್ಗೆ ಕೇಳುವಾಗ........
‘ಒಮ್ಮೆ ಒಬ್ಬ ಹುಡುಗಿಯು ಬೇಂದ್ರೆಯವರಿಗೆ ತನ್ನ ಒಂದು ಕವನವನ್ನು ನೀಡಿ, ‘ಕವಿಯಾಗಲು ಎಷ್ಟು ಕವನಗಳನ್ನು ಬರೆಯಬೇಕು?' ಎಂದು ಕೇಳುತ್ತಾಳೆ. ಆಗ ಬೇಂದ್ರೆಯವರು, ‘ಒಂದು ಮಗುವನ್ನು ಪಡೆದ ತಾಯಿಯೂ ತಾಯಿಯೇ, ಒಂದು ಕವನವನ್ನು ಬರೆದರೂ ಕವಿ' ಎಂದು ಹೇಳುತ್ತಾರೆ!' ಎನ್ನುವುದು ನೆನಪಾಯಿತು.
ಮಾತನಾಡಲು ನಿಂತಾಗ ನಾನು ಗುರುತುಮಾಡಿಕೊಂಡಿದ್ದ ಆಂಶಗಳೆಲ್ಲಾ ಪರದೆಯ ಹಿಂದೆ ಸರಿದು ಬೇರೆಯದೇ ಧಾಟಿಯನ್ನು ಹಿಡಿಯಿತು. ನನ್ನೊಳಗಿನ ಪ್ರಾಮಾಣಿಕ ಅನಿಸಿಕೆಗಳೆಲ್ಲವೂ ಶಬ್ದರೂಪ ಪಡೆಯಲು ಹಂಬಲಿಸಿದವು. ಸಮಯದ ಅಭಾವದಿಂದ ಹೇಳಲು ಸಾಧ್ಯವಾದವುಗಳನ್ನು ಹೇಳಿ ಅವಕಾಶ ನೀಡಿದವರಿಗೆ ವಂದಿಸಿದೆ.
Posted by prabhamani nagaraja (noreply@blogger.com) on October 09, 2011 12:14 PM· permalink
ಸರಸ್ವತಿ ಪೂಜೆ
Bookmark/Search this post with

ಮುಂದೆ ಓದಿ...
Posted by govind123 on October 09, 2011 11:48 AM· permalink
ಚಲೋ ಮಲ್ಲೇಶ್ವರ ಸೀರಿಯಲ್ಲು ಓದುತ್ತಿರುವವರಿಗೆ ಅಂಡಾಂಡ ಬಂಡ ಜ್ಯೋತಿಷಿಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ನಾನೀಗ ಹೇಳ ಹೊರಟಿರುವುದು, ಧರಣಿ ಮಂಡಲ ಮಧ್ಯದೊಳಗೆ, ಕರ್ಣಾಟ ದೇಶದೊಳಿದ್ದ ಭಂಡ-ಗುಂಡನ ಕಥೆಯನ್ನು. ಪುರಾತನ ಸಮಸ್ಯೆಯನ್ನು ಈ ಭಂಡ-ಗುಂಡ ಸ್ವಾಮಿಗಳು ಬಗೆಹರಿಸಿದ ಪರಿಯ ನಾನ್ವಿಂತು ಪೇಳ್ವೆನು, ಕೇಳಿ ಆನಂದಿಸುವಂತಾಗಿರೈ ಸಂಪದಿಗರೇ! ಈ ಕತೆಯನ್ನು ಈ ಮೊದಲು ನೀವು ಬೇರೆಯಲ್ಲಿಯಾದರೂ ಓದಿರಬಹುದು ಅಥವಾ ಕೇಳಿರಬಹುದು; ಇರಲಿ ಇನ್ನು ಮೂಲ ಕಥೆಗೆ ಬರೋಣ, ಅದು ಹೀಗಿದೆ:
Bookmark/Search this post with

ಮುಂದೆ ಓದಿ...
Posted by makara on October 09, 2011 09:19 AM· permalink
ಡಾ. ಕೋಟ ಶಿವರಾಮ ಕಾರಂತರು ನಮ್ಮ ನಡುವೆ ಬಾಳಿ ಬದುಕಿದ ಒಂದು ದೈತ್ಯ ಪ್ರತಿಭೆ. ನಡೆದಾಡುವ ವಿಷ್ವವಿದ್ಯಾಲಯ ಎನ್ನುವ ಅನ್ವರ್ಥ ನಾಮಕ್ಕೆ
ದಿಟವಾಗಿಯು ಅರ್ಹರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಸಾಹಿತ್ಯದಲ್ಲಿ ಕೈಯಾಡಿಸದ ವಿಭಾಗವೇ ಇಲ್ಲವೆನ್ನಬಹುದು ಕತೆ , ಕಾದಂಬರಿ, ನಾಟಕ, ಗೀತರೂಪಕ, ಯಕ್ಷಗಾನ, ಪ್ರವಾಸ ಕಥನ,ಚಿಂತನೆ, ಆತ್ಮಚರಿತ್ರೆ,ಮಕ್ಕಳ ಸಾಹಿತ್ಯ, ಚಿತ್ರಕಲೆ ಇತ್ಯಾದಿ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.
ಕಡಲ ತಡಿಯ ಭಾರ್ಗವರೆಂದು ಪ್ರಸಿದ್ಧರಾದ ಕಾರಂತರು ಜನಿಸಿದ್ದು ೧೯೦೨ರ ಅಕ್ಟೋಬರ್ ೧೦ರಂದು. ೯೬ ವರ್ಷ ಸಾರ್ಥಕ ಜೀವನ ನಡೆಸಿದ್ದ ಕಾರಂತರು ಮರಣ ಹೊಂದಿದ್ದು ೧೯೯೭ರ ದಶಂಬರ್ ೯ರಂದು. ನುಡಿದಂತೆ ನಡೆದ ಕಾರಂತರು ತಮ್ಮ ಕೃತಿಗಳ ಮೂಲಕ ಇನ್ನೂ ನಮ್ಮ ನಡುವೆ ಜೀವಂತವಾಗಿದ್ದಾರೆ.
Bookmark/Search this post with

ಮುಂದೆ ಓದಿ...
Posted by basho aras on October 09, 2011 08:48 AM· permalink

ಮದುವೆಯಾಗಿ ಇಲ್ಲಿಗೆ ಆಗಲೇ ೨೦ ವರ್ಷಗಳು ತುಂಬಿದೆ, ತವರನ್ನು ಮುಕ್ಕಾಲು ಮರೆತಾಯ್ತು, ಗಂಡನ ಮನೆಯೇ ಎಲ್ಲಾ. ಬೇಕು ಬೇಡಗಳ ತೀರಿಸುವುದೆಲ್ಲವೂ ಇಲ್ಲಿಯೇ, ನಾನು ಪೂರ್ಣ ಗಂಡ ಮತ್ತು ಈ ಮನೆಯವಳಾಗಿ ಬಿಟ್ಟಿದ್ದೇನೆ. ಅಂದು ಬಂದಾಗ ಎಲ್ಲವೂ ಹೊಸದಾಗಿತ್ತು, ತವರಿನ ಸಿರಿಯೇ ಕಣ್ಣ ಮುಂದಿತ್ತು... ಆದರೆ ಈಗ ಈ ಮನೆಯ ಸಿರಿಯ ಮುಂದೆ ತವರಿನ ಸಿರಿ ಮಾಸಿಹೋಗಿದೆ......
ಎಲ್ಲವೂ ಚೆನ್ನಾಗಿತ್ತು ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ನನ್ನದೆಂಬ ಆಸ್ತಿ ಸಂಪಾದಿಸಲೇ ಇಲ್ಲ, ಗಂಡನ ಜೊತೆಗೆ ಅತ್ತೆ ಮಾವ ಮೈದುನಂದಿರು, ನಾದಿನಿಯರು, ತಂಗಿಯರು ಎಲ್ಲರ ಪ್ರೀತಿ ಸಂಪಾದಿಸಿದೆ, ಆದರೆ ಇಲ್ಲಿ ನನ್ನದೇ ಇದು ಎಂದು ಹಕ್ಕು ಚಲಾಯಿಸುವುದಾಗಲಿ, ಪ್ರೀತಿಯಿಂದ ಜೋರುಮಾಡುವುದಕ್ಕಾಗಲಿ ಆಗುತ್ತಿಲ್ಲವಲ್ಲ.... ಅದೇನು ಕೊರತೆಯೋ ಏನೋ ನಾನು ನನ್ನ ಕರುಳ ಕುಡಿ ಕೊಟ್ಟು ಕತ್ತರಿಸಿಕೊಳ್ಳುವಂತಹ ಯಾವುದೇ ಸಂದರ್ಭ ಬರಲೇ ಇಲ್ಲ....
ನಾನು ಸುಮಾರು ೨೦ ವರ್ಷಗಳೇ ಕಾದು ಬಿಟ್ಟೆ... ಅನಾಥ ಮಗುವಿಗಾದರೂ ಆಸರೆ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅದು ಸಹ ನಾನು ಮಾಡಲೇ ಇಲ್ಲ......... ಈಗ ಯಾಕೋ ಎಲ್ಲವೂ ನನ್ನನ್ನು ತುಂಬಾ ಕಾಡುತ್ತಲಿದೆ ಕಾರಣ ನನ್ನವನ ಇಲ್ಲದಿರುವಿಕೆ..!!!
ಪ್ರತಿ ಮನುಷ್ಯನಿಗೂ ಹೃದಯ ಇರಲೇಬೇಕು... ಪ್ರೀತಿಸೋಕೆ, ಮೆಚ್ಚಿ ಮಾತನಾಡೋಕೆ, ಉಸಿರು ಗಟ್ಟಿಯಾಗಿ ನಿಲ್ಲೋಕೆ, ರಕ್ತ ಹರಿದಾಡೋಕೆ ಎಲ್ಲಕ್ಕೂ ಬೇಕಾದದ್ದು ಹೃದಯ.. ಹಾ!! ಹೃದಯ ಇದೆ ನನ್ನಲ್ಲೂ, ಆದರೆ ಅದು ನಿಶಬ್ಧವಾಗಿದೆ ಏಕೋ ಏನೋ ಕೆಲಸನೇ ಮಾಡ್ತಾ ಇಲ್ಲ ಅನ್ನಿಸ್ತಾ ಇದೆ ಯಾಕೆ ಗೊತ್ತ... ಇತ್ತೀಚೆಗಷ್ಟೆ ನನ್ನವನೇ ಎಂದುಕೊಂಡಿದ್ದ ನನ್ನ ಹೃದಯ ಕಾಣದ ಊರಿಗೆ ತೆರಳಿಬಿಟ್ಟಿದೆ... ಹೃದಯ ಇಷ್ಟೆಲ್ಲಾ ಕಷ್ಟ ಕೊಡುತ್ತೆ ಅಂತ ಗೊತ್ತೇ ಇರಲಿಲ್ಲ... ನನಗೆ ನನ್ನವರು ಎಂಬುವರೇ ಇಲ್ಲದಾಗಿದೆ.
ಇನ್ನು ಪ್ರೀತ್ಸೋ ಗಂಡ ಇರುವಾಗ ಮಕ್ಕಳ ಹಂಗೇಕೆ ಎಂದು ೨೦ ವರ್ಷ ಕಾಲ ಹಾಕಿದೆ ಆದ್ರೆ ಇವತ್ತು ಏಕೋ ಅನಾಥ ಪ್ರಜ್ಞೆ ಕಾಡ್ತಾ ಇದೆ. ಪ್ರೀತ್ಸೋ ಗಂಡ ಇದ್ದಿದ್ದ್ರೆ ಈ ಯೋಚನೆ ಖಂಡಿತಾ ಬರ್ತಾ ಇರಲಿಲ್ಲ... ಆ ಹೃದಯ ಅವರಿಗೆ ಕೈಕೊಡ್ತು ಈಗ ನನ್ನ ಅನಾಥಳನ್ನಾಗಿ ಮಾಡ್ತು...
ತವರು ಮನೆಗೆ ವಾಪಸ್ಸ್ ಹೋಗೋಣ ಎಂದರೆ ಅಲ್ಲಿ ನಾನ್ನಿದ್ದಾಗ ಇದ್ದಂತ ಮನೆಯಂತಿಲ್ಲ ಎಲ್ಲವೂ ಬದಲಾಗಿದೆ. ಅಮ್ಮ ಅಪ್ಪ ತಮ್ಮ ಸ್ವಂತಿಕೆನ ಕಳೆದುಕೊಂಡಿದ್ದಾರೆ. ಅವರೇ ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯಲ್ಲಿ ಮಜ ಮಾಡುವುದಕ್ಕೂ ಹಿಂದೂಮುಂದು ನೋಡ್ತಾ ಇದ್ದಾರೆ, ಕಾರಣ ಅಣ್ಣಂದಿರ ದರ್ಬಾರು ಅತ್ತಿಗೆಯರ ವ್ಯವಹಾರ, ನಮ್ಮವರೇ ಅಪರಿಚತರಂತೆ ಕಾಣ್ತಾ ಇದಾರೆ. ನಾನು ಇನ್ನು ಹೋಗಿ ಆ ಮನೆಯಲ್ಲಿ ಹೇಗೆ ಜೀವಿಸೋಕೆ ಆಗುತ್ತೆ.... ಇನ್ನು ೨೦ ವರ್ಷ ದೂಡಿದ ಗಂಡನ ಮನೆಯಲ್ಲಿ ಇರಬೇಕು. ಇವರೆಲ್ಲ ನನ್ನವರೇ ಆದರೆ ನನ್ನವನು ಇಲ್ಲದ ಮೇಲೆ ನನ್ನವರೆಲ್ಲ ಪರಕೀಯರೆಂಬ ಭಾವನೆ ಮೂಡ್ತಾ ಇದೆ. ಅತ್ತೆ ಮಾವನಿಗೆ ಕೊನೆಗಾಲದಲ್ಲಿ ಆಸರೆಯಾಗುವ ಆಸೆ ಇದೆ, ಆದರೆ ನನ್ನ ಮುಖ ನೋಡಿ ಅವರ ಮಗ ಇಲ್ಲವೇ ಎಂಬ ಕೊರಗು ದಿನವೂ ಅವರಿಗೆಲ್ಲ ಕಾಡದೆ ಇರುತ್ತಾ....
"ಗಂಡನನ್ನು ಕಳೆದುಕೊಂಡ ನಾನು ಅತ್ತೆಮಾವರಿಗೆ ಇತ್ತ ಮಗಳೂ ಆಗಲಾರೆ ಸೊಸೆಯೂ ಆಗಲಾರೇನೋ... ಎಂದೆನಿಸಿದೆ..."
ಮನೆಯಲ್ಲಿ ಮನೆಯೊಡಯನು ಇರಬೇಕು... ಕುಂಟನೋ ಕುರುಡನೋ ಏನಾಗಿದ್ದರೂ ಪರವಾಗಿ ಮನೆಯ ಮೂಲೆಯಲ್ಲಿ ಕುಳಿತಿದ್ದರೆ ಸಾಕಿತ್ತು.... ನನಗೂ ಧೈರ್ಯವಿತ್ತು, ೪೦ ದಾಟಿದ ವಯಸ್ಸು, ಆಸರೆಯೇ ಇಲ್ಲದ ಮನಸ್ಸು , ಸ್ವಂತಂತ್ರ ನಿರ್ಧಾರಗಳು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟ, ಗಂಡನಿದ್ದರೆ ನನಗೆ ಅವನು ಅವನಿಗೆ ನಾನು ಎಂದು ಇದ್ದುಬಿಡುತ್ತಿದ್ದೆವು.... ಇನ್ನೂ ನಾನು ಸುಮಾರು ೨೦ ವರ್ಷಗಳಷ್ಟೇನಾದರೂ ಬದುಕಿದ್ದರೆ ಅಥವಾ ನನ್ನ ಕೈಕಾಲಾಡದಂತ ಕಾಲದಲ್ಲಿ ಯಾರ ಆಸರೆ ಬಯಸಲಿ, ಅಮ್ಮ ಅನ್ನೋ ಸ್ವರವಿಲ್ಲ, ಪ್ರೀತಿಯಿಂದ ಅಮ್ಮಿ ಎಂದು ಕರೆಯೋ ಗಂಡನಿಲ್ಲ....... "ಬದುಕೇ ಶೂನ್ಯ"ವಾಗಿದೆ ಮುಂದೇನು ಗತಿ...ಎಂಬ ಭಯ ಕಾಡ್ತಾ ಇದೆ...????

ಮಗನೋ, ಮಗಳೊ ಇದ್ದಿದ್ದರೆ ಸ್ವಲ್ಪವಾದರೂ ಮರೆಯುತ್ತಲಿದ್ದೆನೋ ಏನೋ.... ಮುಂದಿನ ಜೀವನದ ಭಯವನ್ನಾದರೂ ಆ ಕೂಸು ಮರೆಮಾಚಿಸುತ್ತಿತ್ತೇನೋ ಗೊತ್ತಿಲ್ಲ... ಎಲ್ಲರೂ ಹೇಳಿದಂತೆ ಮಕ್ಕಳು ಬೆಳದ ಮೇಲೆ ಕೈಗೆ ಸಿಗುವುದಿಲ್ಲ ಅಂತಾರೆ... ಆದರೆ ಕೈಗೆ ಸಿಗದಿದ್ದರೂ ಎಲ್ಲೋ ನನ್ನವರು ಅನ್ನೋರು ಇದ್ದಾರೆ ಸತ್ತಾಗ ಮಣ್ಣಾಕುವ ಜೀವವೊಂದಿದೆ ಎಂದೆನಿಸುತ್ತೆ..!!! ಆದರೆ ಈಗ ಇದಾವುದೂ ನನಗಿಲ್ಲ.. ಯಾವ ಭಾಗ್ಯವೂ ನನಗಿಲ್ಲವೇ ಹೇ!! ದೇವರೆ... ಮುಂದಿನ ಶೂನ್ಯ ಬದುಕು ದೂಡುವುದು ಹೇಗೆ...???????? ಎಲ್ಲವೂ ಪ್ರಶ್ನಾರ್ಥಕ..??? ಕಂಬನಿಯೇ ನನ್ನ ಸಮಾದಾನಕ್ಕೆ ನಿಂತಿದೆ ಬೇರಾವ ಸಾಂತ್ವಾನ ನನ್ನೊಳಗಿಲ್ಲದಾಗಿದೆ..
ನನ್ನವನ ಜೊತೆ ನಾನು ಹೋಗುವ ಹಾಗೆ ಆ ದೇವರು ಕರುಣಿಸಿದ್ದರೆ ಎಲ್ಲವೂ ಚೆನ್ನಾಗಿತ್ತು...ಈಗ ನನ್ನಲ್ಲಿ "ಸಾಯುವ ಧೈರ್ಯ" ಕೂಡಾ ಇಲ್ಲ...
ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ.....
-----
ಚಿತ್ರಗಳು: ಅಂತರ್ಜಾಲ
Posted by ಮನಸು (noreply@blogger.com) on October 09, 2011 07:36 AM· permalink
ಭಾರತ ಸರಕಾರದ ಒಂದು ದೊಡ್ಡ ಹುದ್ದೆಯಲ್ಲಿರುವ ಒಬ್ಬ ಮಹನೀಯರು ಮಾಡಿದ ಭಾಷಣದ ಪ್ರತಿಯೊಂದನ್ನು ನೋಡಿದೆ. ಏಳು ಪುಟಗಳ ಭಾಷಣ ಅದು.
ಶುರುವಾಗೋದು ಹೀಗೆ.
ಶ್ರೀ ..... ಯವರನ್ನು ಸ್ವಾಗತಿಸಲು ನನಗೆ ಸಂತೋಷ ಆಗುತ್ತದೆ. ಅವರು ಈಗ "...." ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಇದು ಅವರು ಇತ್ತೀಚೆಗೆ ಬರೆದಿರುವ ಪುಸ್ತಕ "...." ದ ಬಗ್ಗೆ ಇರಬಹುದೆಂದು ನಾನು ತಿಳಿದುಕೊಂಡಿದ್ದೇನೆ.
(ಆಮೇಲೆ ಅವರ ಪರಿಚಯ )
" ಅವರು ಇತ್ತೀಚೆಗೆ ಬರೆದ ಪುಸ್ತಕದಿಂದ ತುಂಬ ಪ್ರಸಿದ್ಧಿ ಪಡೆದಿದ್ದಾರೆ. ನಾನು ಆ ಪುಸ್ತಕ ಓದಿಲ್ಲವಾದರೂ ನಾನಿರುವ ಹುದ್ದೆಯ ಕಾರಣದಿಂದ ಪುಸ್ತಕಗಳನ್ನು ಓದದಿದ್ದರೂ ಅವುಗಳ ಬಗೆಗೆ ಮಾತನಾಡಬಹುದಾಗಿದೆ. ಆದರೆ ನಾನು ಈ ಪುಸ್ತಕದ ಬಗೆಗೆ ಓದಿಕೊಂಡಿದ್ದೇನೆ. ಆದ್ದರಿಂದ ಈ ಪುಸ್ತಕದಲ್ಲಿನ ಅವರ ಸಿದ್ಧಾಂತದ ಕುರಿತು ನಾನು ಇನ್ನು ಮಾತನಾಡುತ್ತೇನೆ."
ಇದೀಗ ಮೂರನೇ ಪುಟಕ್ಕೆ ಬಂದೆ.
"ಶ್ರೀಯುತ .... ರ ಸಿದ್ಧಾಂತದಲ್ಲಿ ಮೂರು ಅಂಶಗಳಿವೆ......
೧)...
೨)...
Bookmark/Search this post with

ಮುಂದೆ ಓದಿ...
Posted by shreekant.mishrikoti on October 09, 2011 05:36 AM· permalink
ಜಯತು ಜಯ - ಎಂಕ್ಟೇಸಾ
"ಇದೇನಪ್ಪಾ ಮೀನಿನ ರೋಗ ನಿವಾರಣೆಗೆ ಮೀನಿನ ಡಾಕ್ಟರು ವೆಂಕಟೇಶನ ಜಪ ಹೊರಡಿಸ್ತಾ ಇದ್ದಾರಾ ಮೀನಿನ ಬಾಯಿಂದ...!!!" ಅಂದ್ಕೊಂಡ್ರಾ..?? ಅಯ್ಯೋ ಇಲ್ಲಾರೀ... ನಮ್ಮ ಪಕ್ಕು ಮಾಮನ ಪ್ರಭಾವ ಇದು..., ಎಂಕ್ಟೇಸಾ!?...ಪಕ್ಕೂ ಮಾಮಾ??.....
ಬ್ಯಾಡ್ವೇ ಬ್ಯಾಡ ಕನ್ ಪೂಸನ್ನು....ಹಹಹ.
ಬಂದೇ ಬಿಡ್ತೀನಿ ವಿಷಯಕ್ಕೆ.
ಶುಕ್ರವಾರ ನನಗೆ ರಜಾ...ಹಾಗಾಗಿ ನಮಾಜ್ ಗೆ ಮುಂಚೆ ಚಾಟಲ್ಲಿ ನಮ್ಮ ಪಕ್ಕು ಮಾಮನ ಭೇಟಿ ಆಯ್ತು, ಪ್ರೇಯರ್ ಗೆ ಮುಂಚೆ. ಹಾಗೇ ಲೋಕಾಭಿರಾಮ ಚಾಟ್ ಆಗ್ತಿದ್ದಾಗ...ನನಗೆ ಅನಾಯಾಸವಾಗಿ ನೆನಪಿಗೆ ಬಂದಿದ್ದು ಈ ಸುಲಲಿತ, ಮಧುರ, ಭಕ್ತಿಭಾವಪೂರಿತ ಆಲ್ ಟೈಮ್ ಹಿಟ್ ಹಾಡು "ಜಯತು ಜಯ ವಿಠಲ..ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮಾ...”
ಈ ಹಾಡನ್ನ ಹಾಕಿದೆ ಚಾಟ್ ಬಾಕ್ಸಲ್ಲಿ....
“ಇದೇನೋ..ಶುಕ್ರವಾರ ನಮಾಜ್ ಅಂತ ಹೇಳಿ ದೇವರನಾಮ ಶುರು ಮಾಡಿದ್ದೀಯಾ..??” ಅಂತ ಪ್ರಕಾಶನ ಚಾಟ್ ಉತ್ತರ.
ಅದಕ್ಕೆ ನಾನು..
“ಒಂದು ಸ್ವಾರಸ್ಯಕರ ಘಟನೆ ನಮ್ಮ ಸ್ಕೂಲಲ್ಲಿ ನಡೆದದ್ದು” ಅಂತ ಚಾಟಲ್ಲೇ ಸಂಕ್ಷಿಪ್ತವಾಗಿ ಹಾಕ್ದೆ...
ಅವನಿಗೆ ಏನನ್ನಿಸ್ತೋ..
“ಬ್ಲಾಗಲ್ಲಿ ಹಾಕೋ ಮಾರಾಯಾ”.....
ನಾನು “ಎಸ್ ಬಾಸ್” ಎಂದವನೇ ಟೈಪಿಸೋದಕ್ಕೆ ಸುರು ಅಚ್ಕಂಡೆ.... ಅದರ ಫಲವೇ ಈ ಭಾನುವಾರದ ಕಚಗುಳಿ....
ಅದು ಹಳ್ಳಿ ಹೈಯರ್ ಪ್ರೈಮರಿ ಸ್ಕೂಲ್ ನ ಏಳನೇ ತರಗತಿ ಕ್ಲಾಸ್ ರೂಮು, ಹಳ್ಳಿ ಸ್ಕೂಲು ಅಂದ್ರೆ ಗೊತ್ತಲ್ಲ...?? ಕೆಳಗಡೆ ಮಣೆಗಳು.. ಸುಮಾರು ೬ ಅಡಿ ಉದ್ದ ಒಂದೊಂದೂ...ಹೆಚ್ಚು ಅಂದ್ರೆ ಅರ್ಧ ಅಡಿ ಎತ್ತರ...!!! ಹೂಂ...
ನೆಲದ ಮೇಲೆ ಕೂತಿಲ್ಲ.... ಅಥವಾ ಪಟ್ಟಣದ ಸ್ಸೂಕ್ಲೂಲಿನಲ್ಲಿರುವಂತೆ ಬೆಂಚಿನ ಎತ್ತರದಲ್ಲೂ ಕೂತಿಲ್ಲ... ಅನ್ನೋ ರೀತಿಯ ಎಡಬಿಡಂಗಿ ಸೀಟಿಂಗ್... ಈಗ್ಲೂ ಇದೆಯೇನೋ ಆ ಸಿಸ್ಟಮ್ ಗೊತ್ತಿಲ್ಲ....
ಓಕೆ...ಬಂದೆ..ಪ್ರಸಂಗಕ್ಕೆ...
ಕ್ಲಾಸಿನಲ್ಲಿ ಆ ದಿನ ಏನೋ ಕಾತರ ಮತ್ತೆ ಆಸಕ್ತಿ ಎಲ್ಲಾರಿಗೂ... ಯಾಕಂದ್ರೆ ಆ ದಿನ ನಮ್ಮ ಹಳ್ಳಿಗಿಂತಾ ಹಳ್ಳಿ ಅನ್ನೋ ಸ್ಕೂಲಿಗೆ ಹತ್ತಿರದ ಪಟ್ಟಣಾಂತ ಅನ್ನಲಾಗದ ಪಟ್ಟಣದ ಹೊಸಾ ಮೇಡಂ ವರ್ಗವಾಗಿ ಬರ್ತಿದ್ದುದು.
ಸರಿ.. ಮೂರನೇ ಪಿರಿಯಡ್ಡು ಗಣಿತದ್ದು. ಪ್ರವೇಶ ಆಯ್ತು ಮೇಡಂ ದು...
“ಗೂಡ್ ಮಾರ್ನಿಂಗ್ ಸಾ....”
ಎಲ್ಲಾ ಒಕ್ಕೊರಲಲ್ಲಿ ಹೇಳ್ತಿದ್ದುದು ಬೆಳಿಗ್ಗೆ ಇದನ್ನು ಮಾತ್ರ. ಗಂಡಸಾಗಲೀ...ಹೆಂಗಸಾಗಲೀ...ಹೇಳ್ತಿದ್ದುದು “ಸಾ” ಅಂತಲೇ...
“Attention... please...ಇಲ್ಲಿ ಕೇಳಿ...” ಅಂತ ಮೇಡಂ ಕೋಮಲ ದನಿ ಕೇಳಿ ಎಲ್ಲರೂ ಗಪ್-ಚಿಪ್.
“ನನ್ನ ಹೆಸರು- ಸುವರ್ಣ ನಾನು ಪಕ್ಕದ ವಿಜಯಪುರ ಪಟ್ಟಣದವಳು...ಇಂದಿನಿಂದ ನಿಮಗೆ ಗಣಿತ ಪಾಠ ನಾನೇ ಮಾಡುವುದು... ಓಕೆ...” ಹೊಸ ಮೇಡಂ ತನ್ನ ಬಗ್ಗೆ ಪರಿಚಯಕೊಟ್ಟರು.
“ಎಸ್ಸಾ” ಮತ್ತೆ ಎಲ್ಲರ ಒಕ್ಕೊರಲು...
“ನಾನು ಸರ್ ಅಲ್ಲ... ಮಿಸ್ ಅನ್ನಿ ಇಲ್ಲಾ ಮ್ಯಾಮ ಅನ್ನಿ” ಎನ್ನುತ್ತಾ
“ಸರಿ ಈಗ ಎಲ್ಲ ನಿಮ್ಮ ನಿಮ್ಮ ಪರಿಚಯ ಮಾಡ್ಕೊಳ್ಳಿ... ಹಾಂ...”
ಮೊದಲ ಸಾಲಿನ ಹುಡುಗಿಯರಲ್ಲಿ ಮೊದಲಿನ ಹುಡುಗಿಯನ್ನ ನೋಡಿ..
“ನೀನು ಹೇಳಮ್ಮ... ನಿನ್ನ ಹೆಸರು ಯಾವ ಊರು..ಅಂತ”...
ಹೀಗೇ...ಒಬ್ಬೊಬ್ಬರಾಗಿ ಎಲ್ಲರ ಪರಿಚಯ ಆದಮೇಲೆ.. ಮೇಡಂ ...
“ನಿಮ್ಮ ಕ್ಲಾಸಿನಲ್ಲಿ ಯಾರು ಚನ್ನಾಗಿ ಹಾಡು ಹಾಡ್ತಾರೆ..?” ಎಂದು ಕೇಳಿದರು. ಒಡನೆಯೇ ಮತ್ತೆ ಒಕ್ಕೊರಲಲ್ಲಿ.... “ಎಂಕ್ಟೇಸಾ”....ಎಂದರು ಎಲ್ಲರೂ...
“ಏನಿದು...?? ಏನು..?? ಎಂಕ್ಟೇಸಾ!! ..ಅಂದ್ರೆ??” ಕೇಳಿದ್ರು ಮೇಡಂ ಏನೂ ಗೊತ್ತಾಗದೇ.
ಶೈಲಜಾ ಎದ್ದು ನಿಂತು... “ಮ್ಯಾಮ್ ವೆಂಕಟೇಶ್ ..ಅದೇ ಮೂರನೇ ಬೆಂಚಲ್ಲಿ ಕುಳಿತಿದ್ದಾನಲ್ಲಾ.....ಹಾಂ..ಅಲ್ಲಿ..., ಅವನು ಚನ್ನಾಗಿ ಹಾಡ್ತಾನೆ” ಎಂದಳು.
“ಬನ್ರೀ ವೆಂಕಟೇಶ್.....” ಎಂದರು ಮೇಡಂ.... ಒಡನೇ ಹುಡುಗರೆಲ್ಲಾ...
“ಓ ಓ.. ಏನು ಮರ್ವಾದೆ,,??!!! ಎಂಕ್ಟೇಸನ್ಗೆ..” ಎಂದರು ಉದ್ಗಾರ ತೆಗೆಯುತ್ತಾ,,,,
“ಓಗೋ ಎಂಕ್ಟೇಸಾ..” ಎನ್ನುತ್ತ ಮೆಲ್ಲಗೆ ತಳ್ಳಿದ ಅವನ ಬೆನ್ನ ಮೇಲೆ ಕೈಯಿಟ್ಟು ಅವನ ಸ್ನೇಹಿತ ಪಕ್ಕದಲ್ಲೇ ಕುಳಿತಿದ್ದ ಸುಲೇಮಾನ್. "ಓಗೋ..ಓಗೋ..." ಎಂದರು ಎಲ್ಲಾ ಹುಡುಗರು.
ಆದರೆ....
ಯಾಕೋ ..ಬೆಳಿಗ್ಗೆಯಿಂದ ಒಂಥರಾ ಮುಖ ಮಾಡಿದ್ದ ವೆಂಕಟೇಶ... ಮೂಡಲ್ಲಿ ಇರ್ಲಿಲ್ಲ..... ಇಲ್ಲಾಂದ್ರೆ..ಸಿಳ್ಳೆ ಸೀನ, ಎಂಕ್ಟೇಸ ಇಬ್ರದ್ದು ಆರ್ಕೆಸ್ಟ್ರಾನೇ ಶುರು ಆಗ್ತಿತ್ತು. ಅದಕ್ಕೆ ತಕ್ಕ ಹಾಗೆ ಸಿಲ್ವರ್ ಸುಲೇಮಾನ್ ಬೆಂಚನ್ನೇ ತಬಲ ಮಾಡ್ತಿದ್ದ.
ಮೇಡಂ ಮೂರ್ನ್ಲಾಲ್ಕು ಬಾರಿ ಹೇಳಿ .. ಅವನ ಸ್ನೇಹಿತ್ರು..ಬಲವಂತ ಮಾಡಿದ ಮೇಲೆ...ವೆಂಕಟೇಶ ಬೋರ್ಡ್ ಬಳಿ ಹೋಗಿ ಕೈ ಕಟ್ಟಿ ನಿಂತ. ಮಕ್ಕಳೆಲ್ಲಾ ಅವನ ಹಾಡನ್ನು ಕೇಳಲು ನಿಶ್ಶಬ್ದರಾಗಿ ಕುಳಿತರು.
ವೆಂಕಟೇಶ ಪ್ರಾರಂಭಿಸಿದ...
“ಜಯತು... ಜಯ... ವಿಠಲಾ... ನಿನ್ನ ನಾಮವು..ಶಾಂತಿ..........."
ಎಲ್ಲರೂ ಮೌನ.... ಹುಡುಗ ಹುಡುಗಿಯರ ಮುಖದ ಮೇಲೆ ಅತ್ಯಾಶ್ಚರ್ಯದ ಮುಖಭಾವ.... ಮೇಡಂ ಸಹಾ...ಸ್ಟನ್....!!!!
ಸುಶ್ರಾವ್ಯ ಹಾಡು ಬಯಸಿದವರಿಗೆ!!!
ಪಾಠವನ್ನು ಒಪ್ಪಿಸೋ ಎರಡನೇ ತರಗತಿ ಹುಡುಗ... “ಶಾಲೆ” ಪಾಠವನ್ನು ಓದಿದಂತಿತ್ತು ವೆಂಕಟೇಶನ ಹಾಡು....
“ಜಯತು ಜಯ ವಿಠಲ (ಇದು ನನ್ನ ಶಾಲೆ). ನಿನ್ನ ನಾಮವು ಶಾಂತಿಧಾಮವು (ನನ್ನ ಶಾಲೆ ನಮ್ಮ ಅಕ್ಕ ಪಕ್ಕದ ಊರುಗಳಿಗೆಲ್ಲಾ ಮಾದರಿ ಶಾಲೆ). ಸೌಖ್ಯದಾರಾಮಾ (ನನ್ನ ಶಾಲೆಯಲ್ಲಿ ಹದಿನಾಲ್ಕು ಕೊಠಡಿಗಳಿವೆ)” ಇತ್ಯಾದಿ......
ಕ್ಲಾಸೆಲ್ಲಾ ನಗುವಿನ ಗುಲ್ಲೋ ಗುಲ್ಲು...
ಮೇಡಂ...ಸಹನೆ ಕಟ್ಟೆ ಒಡೆಯಿತು....
“ಏಯ್... ಏಯ್.ಏಯ್.....ಸಾಕು ನಿಲ್ಲಿಸಿ...” ಎನ್ನುತ್ತಾ ಎಲ್ಲರನ್ನು ಗದರಿಸಿ, ವೆಂಕಟೇಶನ್ನ ನೋಡುತ್ತಾ
“ನಿಲ್ಲಿಸ್ರೀ ...ವೆಂಕಟೇಶ್!!....ನಾನು ಪಾಠ ಓದಿ ಅಂತ ಅಲ್ಲಾ ಹೇಳಿದ್ದು!!!,...ಹಾಡು ಹಾಡಿ ಅಂತಾ....!!” ಎಂದರು ಬೇಸರದಿಂದ
“ಹಾಡೋಕೆ ಬರೋಲ್ಲಾ ಅಂದ್ರೆ ಮುಂಚೆನೇ ಹೇಳ್ಬೇಕಪ್ಪಾ.... ಏನಮ್ಮ ಶೈಲಜಾ ನಿಮ್ಮ ಕ್ಲಾಸಿನ ಗಾನ ಗಂಧರ್ವ ಇವರೇನಾ??!!... ಬಹಳ ಚನ್ನಾಗಿದೆ....!!!!” ಎಂದರು ಬೇಸರದಿಂದ.
ಎಲ್ಲರೂ.. “ ಇಲ್ಲಾ ಮೇಡಂ ಚನ್ನಾಗಿ ಹಾಡ್ತಾನೆ ಇವನು....ಯಾಕೋ ಈವೊತ್ತು...ಗೊತ್ತಿಲ್ಲ....”
ಮೇಡಂ ಗೆ ರೇಗಿತ್ತು...
“ಸಾಕು ನಿಲ್ಲಿಸ್ರೀ ನಿಮ್ಮ ರೆಕಮೆಂಡೇಶನ್ನು... ಅಲ್ಲಾ ಹಾಡಿನ ಗಂಧಾನೇ ಗೊತ್ತಿಲ್ಲ ಇವರಿಗೆ...ಹಾಡ್ತಾರಂತೆ..ಹಾಡು...!!!”
ಎಂದು.. ಮುಖ ಗಂಟಿಕ್ಕಿ...
“ಆಯ್ತು ಬಿಡಿ.. ನಾಳೆಯಿಂದ ಪಾಠ ಪ್ರಾರಂಭಿಸ್ತೇನೆ... ಈ ದಿನ ನೀವು ಕೊಟ್ಟಿರೋ ಶಾಕೇ ಸಾಕು...” ಎನ್ನುತ್ತಾ...ತಮ್ಮ ಪುಸ್ತಕಗಳನ್ನು ಕೈಲಿ ಹಿಡಿದು ಹೊರನಡೆದರು.
ತಿಂಗಳಲ್ಲಿ ಒಮ್ಮೆ ನಡೆಯುವ ’ಶಾರದಾ” ಪೂಜೆಯೂ ಮೂರುದಿನಗಳಲ್ಲಿ ನಡೆಯುವುದಿತ್ತು.. ಆ ದಿನದ ಬೆಳಿಗ್ಗೆ ಪ್ರಾರ್ಥನೆ ನಂತರ HM ಘೋಷಣೆ ಮಾಡಿದರು...
“ನಿಮಗೆಲ್ಲಾ ಗೊತ್ತಿರೋ ಹಾಗೆ ತಿಂಗಳ ಶಾರದಾ ಪೂಜೆ ಶುಕ್ರವಾರ ಸಂಜೆ ೩.೦ ಗಂಟೆಗೆ ಎಲ್ಲಾ ಕ್ಲಾಸು ಮುಗಿದ ನಂತರ ಸ್ಕೂಲಿನ ಸಭಾಂಗಳದಲ್ಲಿ ಆಗುತ್ತೆ... ಸುಲೇಮಾನ್ ನೀನು ಪೂಜೆ ಮೆಮೋ ಪುಸ್ತಕಾನ ಊರಿನ ಹಿರಿಯರಿಗೆ ತೋರಿಸಿ ಅವರನ್ನ ಆಹ್ವಾನಿಸಿ ಬಾ... ಇನ್ನು ಪೂಜೆಯ ಸಮಯದ ಪ್ರಾರ್ಥನೆ ಜವಾಬ್ದಾರಿ... ವೆಂಕಟೇಶನದ್ದು” ಎಂದರು...
ತಕ್ಷಣ ಹೊಸ ಮೇಡಂ ಸುವರ್ಣ...
"ಸರ್ ಸರ್.. ವೆಂಕಟೇಶಾನಾ??... ಏಳನೇ ಕ್ಲಾಸಿನ ವೆಂಕಟೇಶಾನಾ..???. ಅಯ್ಯೋ ಅವನು ಮಾತ್ರ ಬೇಡ ಸರ್..ಎಷ್ಟು ಕೆಟ್ಟದಾಗಿರುತ್ತೆ ಗೊತ್ತಾ ಅವನು ಹಾಡೋದು ..?? ಅವನು ಹಾಡೋದೂಂದ್ರೆ ಏನು..??!!!”
ಎನ್ನುತ್ತಾ ತಮ್ಮ ಆತಂಕ ತೋಡಿಕೊಂಡರು..
ಅವರ ಮಾತನ್ನು ಕೇಳಿ HM ಮತ್ತೆ ಇತರ ಉಪಾದ್ಯಾಯರು ಚಕಿತರಾದರು. ..ಆದ್ರೆ...
ಮಕ್ಕಳೆಲ್ಲಾ...ಅದರಲ್ಲೂ ಏಳನೇ ತರಗತಿ ಮಕ್ಕಳು ನಗಲು ಪ್ರಾರಂಭಿಸಿದರು.
“ಸೈಲೆನ್ಸ್.... ಯಾಕೆ ..ಯಾಕೆ ಎಲ್ಲಾರೂ ನಗೋದು...??” ಎನ್ನುತ್ತಾ HM ರವರು ಹೊಸ ಮೇಡಂ ಕಡೆ ನೋಡಿ...
“ಯಾಕಮ್ಮಾ ..ಯಾಕೆ ಹಾಗೆ ಹೇಳಿದ್ರಿ?... ವೆಂಕಟೇಶ್ ನಮ್ಮ ಶಾಲೆಯ ಒಳ್ಳೆಯ ಗಾಯಕ...” ಎಂದಾಗ ಶಾಕ್ ಆಗೋ ಸರದಿ ಹೊಸ ಮೇಡಂದು....
“ಅಲ್ಲ ಸರ್..ಮೊನ್ನೆ ಇವರ ಕ್ಲಾಸಿಗೆ ಹೋಗಿ..........................” ಎಂದು ಪೂರ್ತಿ ವಿಷಯ ತಿಳಿಸಿದಾಗ ....
ಉಪಾದ್ಯಾಯರೂ ಸೇರಿಕೊಂಡರು ಈಗಾಗಲೇ ನಗಲು ಪ್ರಾರಂಭಿಸಿದ್ದ ಮಕ್ಕಳ ಜೊತೆ.
ಆ ನಂತರವೇ ಗೊತ್ತಾಗಿದ್ದು.... ಆ ದಿನ ಗೌಡರ ತೋಟದ ಸೀಬೇ ಕಾಯಿ ಕದ್ದು ಬಂದಿದ್ದರಿಂದ ಅವನ ಅಪ್ಪನ ಬೈಗುಳ ತಿಂದು ಬಂದಿದ್ದೂ ಅಲ್ಲದೇ ಆ ದಿನದ ಖರ್ಚಿನ ಎಂಟಾಣೆಗೂ ಖೋತಾ ಮಾಡ್ಕೊಂಡಿದ್ದ ಎಂಕ್ಟೇಸಾ ಅಂತ!!. ಹಾಡೋಕೆ ಆಗೊಲ್ಲ ಅಂತ ಸುಲೇಮಾನ್ ಗೆ ಹೇಳಿದ್ನಂತೆ...
ಅದಕ್ಕೆ ಸುಮೇಮಾನ್ “ಲೇ ಎಂಕ್ಟೇಸಾ ..ಮ್ಯಾಡಮ್ಮು ಮ್ಯಾತ್ಸ್ ಪಾಠ ಮಾಡೋದು ಆಮ್ಯಾಕೆ ಇನ್ನೂ ಟಫ್ ಮಾಡ್ಬಿಡ್ತಾರೆ ಹೋಗಿ ಹಾಡೋ” ಅಂತ ಹೆದರ್ಸಿದ್ದನಂತೆ.
ಹೊಸ ಮೇಡಂ ಗೆ ಬೇಸರ ತರಿಸೋದು ಬೇಡ ಅಂತ ತೋರಿಸಿದ್ದು ಈ ವರಸೆ...!!! ಆಗ್ಲಿಂದ ಸ್ಕೂಲ್ ಮಕ್ಕಳೆಲ್ಲಾ... ಎಂಕ್ಟೇಸಾ ಅಂದ್ರೆ .... "ಓ..ಜಯತು ಜಯ ಎಂಕ್ಟೇಸಾ ನಾ" ಅಂತ ಹೇಳ್ತಿದ್ದರಂತೆ.
Posted by ಜಲನಯನ (suruaz@gmail.com) on October 08, 2011 05:52 PM· permalink
ಕೆಲ ತಿಂಗಳ ಹಿಂದೆ ಒಂದು ಆಂಡ್ರಾಯ್ಡ್ ಮೊಬೈಲ್ ತಗೊಂಡೆ. ತಗೊಂಡ ಮೊದಲ ದಿನವೇ ನನಗೆ ಕೆಲವು ಆಶ್ಚರ್ಯಗಳು ಕಾದಿದ್ವು! ಅವುಗಳಲ್ಲಿ ಒಂದು ಕನ್ನಡವನ್ನು ನನ್ನ ( ಅರ್ಥಾತ್ ಆಂಡ್ರಾಯ್ಡ್) ಮೊಬೈಲ್ನಲ್ಲಿ ಓದಕ್ಕೇ ಆಗಲಿ ಅತ್ವ ಬರಿಯಕ್ಕೇ ಆಗಲಿ ಆಗಲ್ಲ ಅನ್ನುವುದು.
ಅಂದಿನಿಂದ ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ನೋಡಕ್ಕೆ ಅತ್ವ ಬರಿಯಕ್ಕೇ ಯಾಕೆ ಆಗ್ತಾ ಇಲ್ಲ, ಮತ್ತು ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ತರುವ ಯಾವ್ಯಾವ್ ಪ್ರಯತ್ನಗಳು ನಡಿತಾ ಇದವೆ ಅನ್ನೋ ಬಗ್ಗೆ ದಿನವೂ ಒಂದು ಕಣ್ಣಿಟ್ಟಿರುತ್ತಿದ್ದೆ. ಕೆಲ ವಾರಗಳ ಹಿಂದೆ ಒಂದು ಅಪ್ಲಿಕೇಶನ್ ಕಣ್ಣಿಗೆ ಬಿತ್ತು ಮತ್ತು ಅವತ್ತಿಂದ ನಾನು ಕನ್ನಡವನ್ನು ನನ್ನ ಮೊಬೈಲ್ನಲ್ಲಿ ಓದ್ತಾ ಇದೀನಿ ಜೊತೆಗೆ ಕನ್ನಡದಲ್ಲೇ ಕಾಮೆಣ್ಟ್ ಹಾಕ್ತಾ ಇದೀನಿ.
Bookmark/Search this post with

ಮುಂದೆ ಓದಿ...
Posted by savithru on October 08, 2011 03:47 PM· permalink

ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!
ಮತ್ತೂರು ಕೃಷ್ಣಮೂರ್ತಿಗಳು ದಿವಂಗತರು ಎಂಬ ಸುದ್ದಿ ಕೇಳಿಬಂದಿದ್ದು ವಿಜಯದಶಮಿಯ ಬೆಳ್ಳಂಬೆಳಿಗ್ಗೆಯ ೯ ಗಂಟೆಯ ವಾರ್ತೆಯಲ್ಲಿ. ನಾವೆಲ್ಲಾ ಹಬ್ಬದ ಸಡಗರದಲ್ಲಿ ಮೈಸೂರಿನ ಜಂಬೂಸವಾರಿ, ೯ ದಿನಗಳ ಮಟ್ಟಿಗೆ ಗತವೈಭವ ಮರುಕಳಿಸುವ ಈಗಿನ ಅರಸರ ಭಾಗ್ಯ, ಶೃಂಗೇರಿ-ಕೊಲ್ಲೂರು ಮುಂತಾದ ಕ್ಷೇತ್ರಗಳಲ್ಲಿನ ಉಪಾಸನಾ ವೈಖರಿ ಇವುಗಳ ಬಗ್ಗೆ ಕುತೂಹಲಿಗಳಾಗಿ ಮಾಧ್ಯಮವಾಹಿನಿಗಳನ್ನು ಅವಲೋಕಿಸುತ್ತಾ ಕುಂತಾಗಲೇ ಈ ವಿಷಯ ತಿಳಿಯಿತು. ಹಳ್ಳಿಯ ಮೂಲೆಯ ಬಡ ಹುಡುಗನೊಬ್ಬ ವಾರಾನ್ನವನ್ನುಂಡು ಸಂಸ್ಕೃತವನ್ನು ಕಲಿತು ಬೆಂಗಳೂರು ಸೇರಿ ಭಾರತೀಯ ವಿದ್ಯಾಭವನದ ನಿರ್ದೇಶಕರ ಸಾಲಿಗೆ ಸೇರುವ ಎತ್ತರಕ್ಕೆ ಬೆಳೆದಿದ್ದು, ಪದ್ಮಶ್ರೀ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಪಡೆದಿದ್ದು ಎಲ್ಲವೂ ನೆನಪಾದವು. ಸಂಸ್ಕೃತಗ್ರಾಮವೆಂದೇ ಖ್ಯಾತವಾದ ಶಿವಮೊಗ್ಗೆಯ ಮತ್ತೂರಿನಲ್ಲಿ ಜನಿಸಿದರೂ ಬ್ರಿಟಿಷರ ಕಾಲದಲ್ಲಿ ಅಲ್ಲೆಲ್ಲಾ ಬಡತನವೇ ಹಾಸುಹೊಕ್ಕಾಗಿತ್ತು.
ಸಹಜವಾಗಿ ರಾಜಾಶ್ರಯ ತಪ್ಪಿದ ಹಲವು ಬ್ರಾಹ್ಮಣ ವರ್ಗಗಳಲ್ಲಿ ಒಂದಾದ ಸಾಂಕೇತಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹುಡುಗನಿಗೆ ಅಧ್ಯಯನ ಮತ್ತು ಅಧ್ಯಾಪನಗಳೇ ಹಿಡಿಸಿದವು. ಉದರಂಭರಣೆಗಾಗಿ ಖಾಸಗೀ ಬಸ್ಕಂಡಕ್ಟರ್ ಆಗಿ ಕೆಲವುಕಾಲ ಕೆಲಸಮಾಡಿದರೂ ಮಾನಸಿಕ ಹಸಿವು ಭರಿಸುವುದಕ್ಕೆ ಅಥವಾ ಮನೋದರಂಭರಣೆಗೆ ಮಾಡುವ ಆವೃತ್ತಿ ಹಿಡಿಸುತ್ತಿರಲಿಲ್ಲ. ’ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ’ ಎಂದ ದಾಸವಾಣಿಯಂತೇ ಬದುಕಿನಲ್ಲಿ ಬೇರೇಯದನ್ನೇ ಬಯಸಿದ ವ್ಯಕ್ತಿ ಕೃಷ್ಣಮೂರ್ತಿಗಳು. ಅಲ್ಲಲ್ಲಿ ಉನ್ನತಮಟ್ಟದ ವ್ಯಾಖ್ಯಾನಗಳನ್ನು ನಡೆಸಿಕೊಡುತ್ತಿದ್ದ ಅವರ ಉಪನ್ಯಾಸಗಳನ್ನೂ, ಅರ್ಥವಿವರಣೆಗಳನ್ನೂ ಸ್ವತಃ ಕಂಡ ನಟ ಶ್ರೀನಾಥ್ ಹಿಂದಕ್ಕೆ ಉದಯ ವಾಹಿನಿಯ ನಿರ್ವಾಹಕ ಮುಖ್ಯಸ್ಥರಾಗಿದ್ದಾಗ ಕೃಷ್ಣಮೂರ್ತಿಗಳಲ್ಲಿ ಒಂದು ಬೇಡಿಕೆ ಇಟ್ಟರಂತೆ. ಅದರ ಫಲವಾಗಿ ಉದಯವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಮಹಾಭಾರತದ ವ್ಯಾಖ್ಯಾನ ನಡೆಯಿತು. ಗಮಕ ವಿದ್ವಾನ್ ಹೊಸಳ್ಳಿ ಕೇಶವಮೂರ್ತಿ ಮತ್ತು ಮತ್ತೂರು ಕೃಷ್ಣಮೂರ್ತಿ -ಈ ಮೂರ್ತಿದ್ವಯರ ಸಾಂಗತ್ಯ ಬೆಳಗಿನ ಅರ್ಧಗಂಟೆ ಕನ್ನಡ ಸಾರಸ್ವತಲೋಕದ/ಭಾವುಕ ಜನರ, ವಿದ್ವಾಂಸರ ಮನೋರಂಜನೆಗೆ ಕಾರಣವಾಗಿತ್ತು. ಕುಮಾರವ್ಯಾಸ ಭಾರತದ ಕಥಾಮಾಲಿಕೆ ಹರಿದು ಬರುವಾಗ ಸಮಯಾನುಕೂಲವುಳ್ಳ ಬಹಳಜನ ಅದನ್ನು ಇಷ್ಟಪಟ್ಟು ನೋಡುತ್ತಿದ್ದರು.
ಹಲವು ಜನರೊಡನೆ ಬೆರೆತು, ದೇಶವಿದೇಶಗಳಲ್ಲಿ ಸಂಚರಿಸಿ ಉಪನ್ಯಾಸಗಳನ್ನು ನೀಡಿ, ೭ ಭಾಷೆಗಳಲ್ಲಿ ಪ್ರೌಢಿಮೆ ಸಾಧಿಸಿ, ಇತಿಹಾಸದ ಪುಟಗಳನ್ನು ಸೇರಬೇಕಿದ್ದ ಕೆಲವು ಶಾಲೆಗಳನ್ನು ಊರ್ಜಿತಗೊಳಿಸಿ, ನವೀಕರಿಸಿ, ಹೊಸದಾಗಿ ಒಂದೆರಡು ಶಾಲೆಗಳನ್ನೂ ಆರಂಭಿಸಿ ಸಮಾಜಕ್ಕೆ ಈ ರೀತಿಯಲ್ಲಿ ಸೇವೆಮಾಡಿದವರು ಕೃಷ್ಣಮೂರ್ತಿಗಳು. ಇದು ಅವರಿಗೆ ನನ್ನ ಭಾವನಮನ. ಇವರಂತಹ ಆದರ್ಶ ಜನ ಇವತ್ತಿನಲ್ಲಿ ಕಡಿಮೆ ಇದ್ದಾರೆ. ಆಡಂಬರವನ್ನೇ ಆಲಿಂಗಿಸಿಕೊಂಡ, ಅಹಂಕಾರವೇ ಮೈವತ್ತ ಅನೇಕ ವಿದ್ವನ್ಮಣಿಗಳಿದ್ದಾರೆ. ಅಂಥವರಲ್ಲಿ ವಿದ್ವತ್ತಿಗಿಂತ ಅವರ ’ಮಣಿ’ಗಳೇ ಎದ್ದು ಕಾಣುತ್ತವೆ! ಅಂಥವರ ಮಧ್ಯೆ ಇಂಥವರೂ ಅಲ್ಲಲ್ಲಲ್ಲಲ್ಲಿ ಇದ್ದಾರೆ ಎಂಬುದನ್ನು ತೆಗೆದುಹಾಕುವ ಹಾಗಿಲ್ಲ.
ದಸರೆಯ ಮರುದಿನ ಅಂದರೆ ನಿನ್ನೆ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ಸಂಚರಿಸುವಾಗ ಟ್ರಾಫಿಕ್ ಸಿಗ್ನಾಲ್ನಲ್ಲಿ ನನ್ನ ವಾಹನ ನಿಲ್ಲಿಸಿಕೊಂಡೆ. ೬ ವರ್ಷದ ಚಿಕ್ಕ ಹುಡುಗ ಗಿಜಿಗುಡುವ ಹಲವು ವಾಹನಗಳ ಜಂಗುಳಿಯ ಮಧ್ಯೆ ಓಡೋಡಿ ಬೇಡುತ್ತಿದ್ದ. ಇನ್ನೇನು ಹಸಿರು ನಿಶಾನೆ ಬಂದರೆ ಆತ ಯಾವುದದರೂ ವಾಹನದ ಚಕ್ರಕ್ಕೆ ಸಿಲುಕಬಹುದೇ ಎಂಬ ಆತಂಕ ನನ್ನಲ್ಲಿತ್ತು. ಆದರೆ ಆತನಿಗೆ ಅದ್ಯಾವ ಭಯವೂ ಇದ್ದಿರಲಿಲ್ಲ. ಜನ್ಮಕೊಟ್ಟ ಅಪ್ಪ-ಅಮ್ಮ ಹೇಳಿಕೊಟ್ಟು ಹೆದರಿಸಿ ಬೇಡುವಂತೇ ಮಾಡಿದರೋ ಅಥವಾ ಯಾವುದೋ ಕಾಣದ ಧೂರ್ತ ಇಂತಹ ಮಕ್ಕಳನ್ನು ಹೀಗೆಲ್ಲಾ ದುಡಿಸಲು ತೊಡಗಿದ್ದಾನೋ ತಿಳಿಯಲಿಲ್ಲ. ಮನದತುಂಬ ಹಲವು ಭಾವನೆಗಳ ಅಲೆಗಳು ಎದ್ದವು. ನಾವು ಕೊಡಬಹುದಾದ ಒಂದು ನಾಣ್ಯ ಆತನ ಜೀವನಕ್ಕೇನೂ ಸಾಲುವುದಿಲ್ಲ, ಆದರೆ ಅವನಂತಹ ಅಸಂಖ್ಯ ಮಕ್ಕಳು ಇದೇ ರೀತಿ ರಸ್ತೆಗಳ ಬದಿಯಲ್ಲಿ ಡೊಂಬರಾಟ ತೋರಿಸುತ್ತಾ, ಇನ್ನೇನೋ ಮಾರುತ್ತಾ ಅಲ್ಲಲ್ಲಿ ಕಾಣಸಿಗುತ್ತಾರೆ. ಬಾಲ್ಯದ ಆಡುವ ವಯಸ್ಸಿಗೇ ಸ್ವಯಂ ಬಾಲಕಾರ್ಮಿಕರಾಗಿದ್ದಾರೆ; ಇಲ್ಲದಿದ್ದರೆ ಅವರಿಗೆ ಹೊತ್ತಿಗೆ, ತುತ್ತಿಗೆ ಕಾಸಿಲ್ಲ!
ನಮ್ಮಗಳ ಮನೆಯಲ್ಲಿ ಒಂದನ್ನೇ ಹಡೆಯುತ್ತೇವೆ, ಹಲವು ರೀತಿಯಲ್ಲಿ ಪ್ರಯತ್ನಿಸಿದರೂ ಊಟಮಾಡಿಸುವುದೇ ಒಂದು ಯಜ್ಞ. ಅದಕ್ಕೇ ಇರಬೇಕು ನಮ್ಮೂರಲ್ಲೊಂದು ಗಾದೆ-’ಕಂಡು ಸಾಕಿದ ಎಮ್ಮೆಯ ಕಣ್ಣು ಕುರುಡು’ ಎಂಬುದಾಗಿ. ವಯೋಮಾನದಲ್ಲಿ ಚಿಕ್ಕವರು ಮಾಡಲು ಕಷ್ಟವದುದನ್ನು ಹೊಟ್ಟೆಪಾಡಿನ ಅನಿವಾರ್ಯತೆಗೆ ಮಾಡುವ ಆ ಕಂದಮ್ಮಗಳಿಗೂ ಹೊತ್ತಿಗೆ ನಿಮಗೇನೂ ಕೊರತೆಮಾಡುವುದಿಲ್ಲ ತಿಂದುಂಡು ಸುಖವಾಗಿರಿ ಎಂದರೂ ರಂಪಮಾಡುತ್ತಾ ಮಾಧ್ಯಮಗಳ ಕಾರ್ಟೂನುಗಳಿಗಂಟಿಕೊಳ್ಳುವ ನಮ್ಮ ಮಕ್ಕಳಿಗೂ ತುಲನೆಮಾಡಿಕೊಂಡೆ. ಎಂತಹ ವಿಪರ್ಯಾಸ ನೋಡಿ: ಅಲ್ಲಿಗೂ ಇಲ್ಲಿಗೂ ಅಜಗಜಾಂತರ, ’ಪರಿಸ್ಥಿತಿ ಮನುಷ್ಯನನ್ನು ನಿರ್ಮಿಸುತ್ತದೆ’ ಎಂಬುದು ಸುಳ್ಳಲ್ಲ.
ಕೊನೆಯದಾಗಿ ನಿನ್ನೆಯ ಸಾಯಂಕಾಲದ ಒಂದು ಘಟನೆ. ಪತ್ನೀಪೀಡಕನಾಗಿ ಜೈಲು ಸೇರ್ರಿದ್ದ ಕನ್ನಡದ ನಟ ದರ್ಶನನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಆತನ ಮನೆಹತ್ತಿರ ಜಮಾಯಿಸಿಬಿಟ್ಟರಂತೆ! ಪಟಾಕಿ ಹಚ್ಚಿದರಂತೆ, ಕೇಕು ತಂದರಂತೆ. ಇಂತಹ ಅಭಿಮಾನಿಗಳೆಲ್ಲಾ ಪೊರ್ಕಿಜನ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ. ಅಂತಹ ಜನರನ್ನು ಹಾಗೆ ಕಲೆಹಾಕಲು ನಟನಟಿಯರಿಗೆ ತಗಲುವ ಖರ್ಚು ಸುಮಾರು ಜಾಸ್ತಿಯೇ ಇರಬಹುದು! ಆದರೂ ಸಮಾಜದಲ್ಲಿ ಏನೂ ಬಿಲ್ಡಪ್ ತೋರಿಸದಿದ್ದರೆ ವರ್ಚಸ್ಸಿಗ್ಗೇ ಕಮ್ಮಿ ಎಂಬ ಅಂತ[ಸ್ತು]ರಂಗದ ಅನಿಸಿಕೆಯಿಂದ ಸಹೋದರನಿಗೋ ಇನ್ನಾರಿಗೋ ಹೇಳಿ ಹೀಗೆ ಮಾಡಿಸಿರಬಹುದು ಬಿಡಿ. ಎಲ್ಲಾರಂಗಗಳೂ ಗಬ್ಬೆದ್ದು ನಾರುವಾಗ ಮೊದಲೇ ವೇಷಧಾರಿಗಳಾಗಿ ವಿಜೃಂಭಿಸುವ ಸಿನಿಮಾರಂಗದಲ್ಲಿರುವವರ ನಾಟಕ, ವೇಷ, ರಾಜಕೀಯ, ರುಷುವತ್ತು ಇವುಗಳ ಬಗ್ಗೆ ಬರೆಯುವಾತನಿಗೆ ನಿತ್ಯವೂ ಒಂದಿಲ್ಲೊಂದು ಸುದ್ದಿ ದೊರೆಯಬಹುದು.
ಸಮಾಜ ವಿಚಿತ್ರವಾಗಿದೆ. ದರ್ಶನ್ ಮಾಡಿದ ಕೆಲಸವನ್ನು ಇನ್ಯಾರೋ ಶ್ರೀಸಾಮಾನ್ಯ ಮಾಡಿದರೆ ಜನತೆ ಕ್ಷಮಿಸುತ್ತಿರಲಿಲ್ಲ. ಯಾವ ಹೆಂಡತಿಗೂ ಕೊಟ್ಟ ದೂರನ್ನು ಮರಳಿಪಡೆಯುವ ಒತ್ತಡ ಅಷ್ಟಾಗಿ ಬರುತ್ತಿರಲಿಲ್ಲ! ಖೈದಿಯಾಗಿ ಒಮ್ಮೆ ಒಳಸೇರಿ ಹೊರಬಂದಮೇಲೆ ಮನೆಯವರನ್ನುಳಿದು ಯಾರೂ ಆತನನ್ನು ಸ್ವಾಗತಿಸುವ ಮನೋಸ್ಥಿತಿ ಉಳ್ಳವರಾಗಿರುವುದಿಲ್ಲ. ಖರ್ಚಿಗೆ ಕೊಟ್ಟು ಕರೆದರೂ ಬರುವುದಿಲ್ಲ! ಅದೇ ನಟನೊಬ್ಬ ಅಥವಾ ರಾಜಕಾರಣಿಯೊಬ್ಬ ಮಾಡಿದ ಅಪರಾಧಗಳು ಆಗಸದಲ್ಲಿ ಮಿಂಚು ಮಿಂಚಿ ಮರೆಯಾದಹಾಗೇ ಗುಡುಗಿ ಮಳೆಸುರಿಸದೇ ಸುಮ್ಮನಾಗುವ ಕೆಲವು ಮೋಡಗಳ ಹಾಗೇ ಏನೂ ನಡೆದೇ ಇಲ್ಲವೆಂಬ ರೀತಿ ಮಾಯವಾಗಿಬಿಡುತ್ತವೆ. ಈ ದಿಸೆಯಲ್ಲಿ ಅಧಿಕಾರಶಾಹಿಯಾದ ಬೀಜೇಪಿಯ ಉಡುಪಿ ಶಾಸಕ ರಘುಪತಿ ಭಟ್ಟ ಒಬ್ಬಾತ ಧುತ್ತನೇ ಕಾಣುತ್ತಾನೆ. ಹೋದ ಹೆಂಡತಿ ಹೋದಳು-ಇರುವಶಾಸಕನಿಗೆ ಜೀವದಾನ ಕೊಡಿ ಎಂದು ಮೇಲ್ದರ್ಜೆಯ ರಾಜಕಾರಣಿಗಳು ಉಸುರಿದರೇ ? ಗೊತ್ತಿಲ್ಲ.
ಸದಾ ಹೊಸಬಟ್ಟೆಯಲ್ಲೇ ಮಿರುಗಿತ್ತಿದ್ದ ಸಭೆಗಳಲ್ಲಿ ಸಮಾಜಕ್ಕೆ ಸದ್ಬೋಧನೆಗೈತಿದ್ದ ಹಾಲಪ್ಪನೆಂಬ ಮಂತ್ರಿ , ಸಿನಿಮಾರಂಗದಲ್ಲಿ ಮಸಲ್ ಪೂರಿ ಸಿನಿಮಾ ಗೀತಸಾಹಿತ್ಯವನ್ನು ಬರೆದು ಇಂದಿನ ಯುವ ಜನಾಂಗಕ್ಕೆ ಬೇಕಾದ್ದನ್ನೇ ಕೊಡುತ್ತಿರುವ ಯೋಗರಾಜ ಭಟ್ಟರ ’ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದುರೀ’ ಹಾಡಿಗೆ ತಕ್ಕವನಾದ ಜಯಲಕ್ಷ್ಮೀ ಹೃದಯಾಂತರ್ಗತ ’ಜಗದ್ಗುರು ನರ್ಸ್ ರೇಣುಕ’ ಇನ್ನೂ ನೇಪಥ್ಯದಲ್ಲಿ ಖಾಯಂ ಪರಸ್ತ್ರೀಯರ ಶೀಲವನ್ನೇ /ಮೈಸುಖವನ್ನೇ ಮೇಯುತ್ತಿರುವ ಬಹುತೇಕ ರಾಜಕಾರಣಿಗಳು, ಸಿನಿಮಾ ರಂಗದ ದಿಗ್ಗಜ, ಆಗಜ ಈಗಜ, ಗಜ ಎಲ್ಲಾ ತೆರನಾದ ಗಜಗಳು ಇವರುಗಳನ್ನೆಲ್ಲಾ ನೆನಪಾದಾಗ ಸಾಮಜಿಕ ಸ್ವಾಸ್ಥ್ಯ ಎಂಬುದು ಬರೀ ಕಲ್ಪನೆಯೇ ಅಥವಾ ವಾಸ್ತವವೇ ಎಂಬ ಇಬ್ಬಂದಿತನ ಕಾಡುತ್ತದೆ.
ಮನುಷ್ಯ ಸಹಜವಾಗಿ ತಪ್ಪು ಮಾಡುತ್ತಾನೆ-ಸಮಾಜ ಅದನ್ನು ಕ್ಷಮಿಸಬೇಕು ಎನ್ನುವ ಹಲವರಲ್ಲಿ ನನ್ನದೊಂದು ಸಣ್ಣ ಪ್ರಶ್ನೆ, ಮನುಷ್ಯ ತಪ್ಪುಮಾಡದಿರಲಿ ಎಂಬ ಕಾರಣಕ್ಕೆ ನಮ್ಮ ಪೂರ್ವಜರು ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಬರೆದರು ಮತ್ತು ಅವುಗಳಲ್ಲಿ ತಮ್ಮಕಾಲಘಟ್ಟದ ಜೀವನಾನುಭವಗಳನ್ನು ಕಥೆಗಳನ್ನಾಗಿ ಉಪಕಥೆಗಳನ್ನಾಗಿ ಜೋಡಿಸಿದರು ಅಲ್ಲವೇ ? ಅವುಗಳನ್ನು ಓದುವ ವ್ಯವಧಾನ ಸಮಾಜದ ಮುಖಂಡಿರಿಗಿದೆಯೇ ? ಮಹತ್ವಾಕಾಂಕ್ಷಿಗಳಾಗಿ ದಿಲ್ಲಿ ಸರಕಾರದಲ್ಲೇ ಮಹೋನ್ನತ ಸ್ಥಾನವನ್ನು ಬಯಸುವವರು ಯಾರನ್ನೋ ಬಿಟ್ಟು ’ಮಹಾನ್ವೇಷಣ’ ಬರೆಸುತ್ತಾರೆ-ಬರೆದವರಿಗಾಗಲೀ ಬರೆಸಿದವಗಾಗಲೀ ಅದರ ತಲೆಬುಡ ಗೊತ್ತಿರುವುದಿಲ್ಲ! ಕೆಟ್ಟುಹೋದ ಸಮಾಜದಲ್ಲಿ ಮುಂದಾದರೂ ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತೆ ಚಿಗುರಲಿ ಎಂಬ ಕಾರಣಕ್ಕಾಗಿ. ವಿಜೃಂಭಿಸುತ್ತಿರುವ ವಿದೇಶೀ ಸಂಸ್ಕೃತಿಯ ಕೊಡೆಯಾದ ಲಿವ್-ಇನ್, ಒನ್ ನೈಟ್ ಸ್ಟೇ, ಡೇಟಿಂಗ್ ಮುಂತಾದ ಅನೈತಿಕ ಸಂಪರ್ಕ-ಸಂಬಂಧಗಳು ನಾಶವಾಗಲಿ ಎಂಬ ಕಾರಣಕ್ಕಾಗಿ, ಪರೀಕ್ಷೆಗಳಲ್ಲಿ ಮತ್ತು ಜೀವನದಲ್ಲಿ ಹತಾಶೆಯಿಂದ, ನಿರಾಸೆಯಿಂದ, ನೋವಿನಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಅಧಃಪತನಕ್ಕೆ ಇಳಿಯುವ ಜನರನ್ನು ಉದ್ದೇಶಿಸಲಾಗಿ ಕೆಲವು ಮಠಮಾನ್ಯಗಳು ಭಾರತೀಯ ಮೂಲದ್ದಾಗಿ ವಿಶ್ವವೇ ನಿಬ್ಬೆರಗಾಗಿ ಓದುವ ಬೌದ್ಧಿಕ ತರಬೇತಿ ಗ್ರಂಥ ’ಭಗವದ್ಗೀತೆ’ಯನ್ನು ಬೋಧಿಸಲು ಮುಂದಾದರೆ ರಾಜಕೀಯದ ಕೊಳಕರು ಅದರ ವಿರುದ್ಧ ಜನಾಂಗಗಳನ್ನು ಎತ್ತಿಕಟ್ಟುತ್ತಾರೆ; ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ ! ಇದು ಇಂದಿನ ಜೀವನದ ಮತ್ತೊಂದು ಮಜಲು.
ಮಾನಸಿಕ, ದೈಹಿಕ ಹಲವು ನೋವುಗಳನ್ನು ಸಹಿಸಿಯೂ ಕುಟುಂಬ ಒಡೆಯದಿರಲಿ, ತನ್ನ ಮಗನ ಭವಿಷ್ಯ ಹಾಳಾಗದಿರಲಿ, ತನ್ನಿಂದ ತನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸಿದವನ ಕಲಾಬದುಕಿನ ಭವಿಷ್ಯ ಕೆಡದಿರಲಿ ಎಂಬ ಕಾರಣಕ್ಕೆ ಭಾರತೀಯತೆಯನ್ನು ಮೆರೆದ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರಿಗೆ ನನ್ನದೊಂದು ಸಲಾಮು. ತನ್ನ ನೋವನ್ನೆಲ್ಲಾ ನುಂಗಿ ತಾನು ತಿರುಗಿ ಬಿದ್ದಿದ್ದೇ ಸುಳ್ಳೆಂದು ವಾದಿಸುತ್ತಾ ಯಾವುದೋ ವಿಷಮ ಘಳಿಗೆ ನಮ್ಮ ಬದುಕಿನಲ್ಲಿ ಘಟಿಸಿಹೋಗಿದೆ, ಅದನ್ನೆಲ್ಲಾ ಮರೆತಿದ್ದೇವೆ ಮತ್ತೆ ಒಂದಾಗಿ ಬದುಕುತ್ತೇವೆ ಎಂಬ ಅವರ ಮನೋವೃತ್ತಿಗೆ ಎಂತಹ ತಾಕತ್ತಿರಬೇಕು ಅನಿಸಿತು, ಅವರ ಕ್ಷಮಾಗುಣದ ಅರಿವಾಯಿತು. ಬಣ್ಣದ ರಂಗದಲ್ಲಿರುವ ಬಹುತೇಕರ ಹಿಂದೆ ಸದಾ ಅಪಸ್ವರಗಳು ಕೇಳುತ್ತಲೇ ಇರುತ್ತವೆ. ಅವು ಬೆಂಕಿಯಿರದೇ ಎದ್ದ ಹೊಗೆಯ ಸುರುಳಿಗಳಲ್ಲ! ಕೆಲವು ಆರುತ್ತವೆ; ಮತ್ತೆ ಕೆಲವು ಮುಂಬರುವ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರತಿಫಲನಗೊಳ್ಳುತ್ತವೆ!
ಮನುಷ್ಯನ ಬದುಕಿಗೆ ಕಲಾವಿದರು, ನಟನಟಿಯರು, ಸಂಗೀತಜ್ಞರು, ವಿದ್ವಾಂಸರು ಮಾದರಿಯೆನಿಸುತ್ತಾರೆ ! ಆ ಯಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಆ ಜನ ಕಚ್ಚೆಹರುಕರಾಗಿದ್ದರೆ ಸಮಾಜಕ್ಕೆ ಅವರಿಂದ ದುಷ್ಪರಿಣಾಮ ಉಂಟಾಗುತ್ತದೆ. ಪ್ರತಿಭಾವಂತರಬೇಕರು ಕೆಲವೊಮ್ಮೆ ಮಾನಸಿಕ ಉದ್ವಿಗ್ನರೂ ಒಂಥರಾ ಹುಚ್ಚರೂ ಆಗಿರುತ್ತಾರೆ. ಕೆಲವು ಸಂಗೀತಗಾರರ ಕೂದಲು, ದಿರಿಸುಗಳನ್ನು ಗಮನಿಸಿ! ಯಾಕೆ ಅವರೂ ಮನುಷ್ಯರಲ್ಲವೇ ಅನಿಸುತ್ತದೆ ತಾನೇ ? ನಾವು ಶ್ರೀಸಾಮಾನ್ಯರು, ಯುವಜನಾಂಗ ಇನ್ನಾದರೂ ತಿಳಿಯಬೇಕು ಏನೆಂದರೆ ಇಂತಹ ಯಾರೂ ನಮಗೆ ರೋಲ್ ಮಾಡೆಲ್ ಅಲ್ಲ. ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದರಲ್ಲಾ ಹಲವು ಗಣ್ಯರು ಅಂತಹ ದೇಶಭಕ್ತರು, ನೈತಿಕ ನಿಷ್ಠೆಯಿದ್ದವರು ನಮಗೆ ಆದರ್ಶವೆನಿಸಬೇಕೇ ಶಿವಾಯಿ ಇಂದಿನ ರಾಜಕಾರಣಿಗಳು,ಕಲಾವಿದರು, ಸಂಗೀತಗಾರರು [ಕ್ಷಮಿಸಿ ಕೆಲವು ಅಪವಾದಗಳು ಇರಲೂ ಸಾಕು] ನಮಗೆ ರೋಲ್ ಮಾಡೆಲ್ ಅಲ್ಲ. ಸರ್ವಜ್ಞನ ಕಾಲದಲ್ಲೂ ಕಚ್ಚೆಹರುಕರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಯಾಕೆಂದ್ರೆ ಕವಿ ಹೇಳಿದ್ದಾನೆ
ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಲೋಕದೊಳು
ನಿಶ್ಚಿಂತನಪ್ಪ | ಸರ್ವಜ್ಞ
-ಎಂಥಾ ಹಿತವಚನ ಅಲ್ಲವೇ ? ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದರೆ ಆಗ ಜಗವನ್ನೂ ಜಯಿಸಬಹುದಂತೆ! ಕಾಲ, ದೇಶ ಯಾವುದೇ ಇದ್ದರೂ ಉತ್ತಮ ಅಂಶಗಳನ್ನು, ಉಚ್ಚ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮೊಳಗೇ ಅವಿತಿರುವ ಕಾಮ,ಕ್ರೋಧ, ಲೋಭ, ಮೋಹ, ಮದ, ಮತ್ಸರ ಗಳೆಂಬ ರಾಕ್ಷಸೀ ಪ್ರವೃತ್ತಿಯನ್ನು ದಮನಗೊಳಿಸುವರೇ ಶರನ್ನವರಾತ್ರಿಯ / ವಿಜಯದಶಮಿಯ/ ದಸರೆಯ ಈ ಸಂದೇಶವನ್ನು ತಮ್ಮಲ್ಲಿ ಈ ಅಂಕಣದ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿದ್ದೇನೆ
ಮುಗಿಸುವ ಮುನ್ನ ಒಂದು ಸಣ್ಣ ಜೋಕು-- ’ ಮಾಡಿದ್ದುಣ್ಣೋ ಮಹರಾಯ ’ ಎಂಬ ನಾಟಕ ವೇದಿಕೆಯೇರುತ್ತಿದೆ. ಪರಿಕಲ್ಪನೆ ಮತ್ತು ಮೂಲ ಕಥೆ: ಶ್ರೀ ಅಣ್ಣಾ ಹಜಾರೆ. ಕದ್ದು ದುರುದ್ದೇಶಕ್ಕೆ ಗೀತರೂಪಕಕ್ಕೆ ಅಳವಡಿಸಿದವರು : ಕೇಂದ್ರ ಕಾಂಗೈ, ಚಪ್ಪರ ಚಾವಡಿ ಮತ್ತು ನೃತ್ಯ ಸಂಯೋಜನೆ : ಸಿಬಿಐ. ಪ್ರಧಾನ ಭೂಮಿಕೆಯಲ್ಲಿ : ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ, ಇವರಿಂದ ಕೃತಜ್ಞತಾ ಪೂರ್ವಕ ರಂಗಸಜ್ಜಿಕೆಯನ್ನು ನಿರ್ಮಿಸಿಕೊಳ್ಳಲಾಗಿದೆ : ಕರ್ನಾಟಕ ಲೋಕಾಯುಕ್ತ. ಪ್ರಾಂತೀಯ ಜೋಕರ್ಗಳಾಗಿ ಕಟ್ಟಾ ಸುಬ್ರಹ್ಮಣ್ಯ ಮತ್ತು ಕಟ್ಟಾ ಜಗದೀಶ್. ಮೊದಲಬಾರಿಗೆ ಖಳನಾಯಕನಾಗಿ ಕುಮಾರಣ್ಣ. ಮರದಕೆಳಗೆ ಬಿದ್ದ ಮಂಗನ ಪಾತ್ರದಲ್ಲಿ ಯಡ್ಯೂರಣ್ಣ. ಹಿನ್ನೆಲೆ ಗಾಯನ : ’ಮಣ್ಣಿನಮಕ್ಕಳಿ’ಂದ! ನಾಟಕ ಪೊಗದಸ್ತಾಗಿದೆ! ಅಂತೂ ಜನತೆಗೆ ಜೀವ ಇಲ್ಲದಿದ್ದರೂ ನಿಸರ್ಗ ಒಬ್ಬರಮೇಲೆ ಇನ್ನೊಬರನ್ನಾದರೂ ಛೂ ಬಿಟ್ಟು ಕೊನೆಗೊಮ್ಮೆ ನಿಯಂತ್ರಿಸುವುದೇ ಕಥೆಯ ಮೂಲವಸ್ತು! ಇನ್ನೂ ಹಲವು ಪಾತ್ರಗಳು ಚೌಕಿಯಲ್ಲಿ [ಗ್ರೀನ್ ರೂಮ್] ಬಣ್ಣ ಮೆತ್ತಿಸಿಕೊಳ್ಳುತ್ತಾ ವೇಷ ಕಟ್ಟಿಕೊಳ್ಳುತ್ತಾ ಇವೆ, ವಿದ್ಯುತ್ ಅಭಾವ ಇರುವುದರಿಂದ ಸ್ತ್ರೀರಾಮುಲು ಸೀಮೆ ಎಣ್ಣೆ ಗ್ಯಾಸ್ಲೈಟುಗಳನ್ನು ಸಂಗ್ರಹಿಸುವತ್ತ ಹೋಗಿದ್ದಾರೆ! ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ,
ಮಧ್ಯೆ ಹೀಗೊಂದು ಹಾಡು ಹರಿದುಬರುತ್ತದೆ --
ಜೈಲಲ್ಲಿ ಕರಡೀಗೆ ಜಾಮೀನು ಕೊಡಿಸೋಕೆ
ಯಾವತ್ತು ಹೋಗ್ಬಾರ್ದುರೀ
ಲಾರೀಲಿ ಲೋಡ್ಮಾಡಿ ಮುಟ್ಟುಗೋಲ್ಹಾಕ್ಕೊಳಕೆ
ಯಾವತ್ತು ಮರಿಬಾರ್ದುರೀ
ಅವ್ನೊಬ್ಬ ಇವ್ನೊಬ್ಬ ಮತ್ತೊಬ್ಬ ಮಗದೊಬ್ಬ
ಗಣಿಗೊಬ್ಬ ಧಣಿಗೊಬ್ಬ ೨ಜಿ ಸ್ಪೆಕ್ಟ್ರಂಗೊಬ್ಬ
ಯಾರನ್ನೂ ಹೊರಗಡೆಗೆ ಬಿಡಬಾರ್ದುರೀ.........
[ದೇಶಾದ್ಯಂತ ಒಂದೇ ಪ್ರದರ್ಶನ. ಆಕಸ್ಮಿಕವಾಗಿ ಸಂಭವಿಸಿಬಹುದಾದ ರಾಜಕೀಯ ಅವಘಡಗಳಿಂದ ಪ್ರದರ್ಶನ ರದ್ದಾದರೆ ಯಾವುದೇಕಾರಣಕ್ಕೂ ಹಣಮರುಪಾವತಿ ಸಾಧ್ಯವಿಲ್ಲ, ಸಹೃದಯೀ ಪ್ರೇಕ್ಷಕರು ಸಹಕರಿಸಲು ಕೋರಿದೆ] ನಮಸ್ಕಾರ.
Posted by ವಿ.ಆರ್.ಭಟ್ (vrbhat06@gmail.com) on October 08, 2011 02:48 PM· permalink
ಯೋಗರಾಜ ಭಟ್ಟರ ಹೊಸ ಪರಮಾತ್ಮ
ಪರಮ ಆತ್ಮ ವಿಶ್ಲೇಶಿಸುತ್ತಾ ತನ್ನ ಖುಷಿಯೋ ಶಾಂತಿಯೋ ಅನ್ವೇಷಣೆಯನ್ನು ಕ್ಲಾಸಿನಲ್ಲಿ ಡುಮ್ಕಿ ಹೊಡೆದೋ, ಹೊಡೆದಾಟದಲ್ಲೋ ಸಿಗದೆ ಹಿಮಾಲಯದಲ್ಲೂ ಅರಸಿ ಕಾಣದೇ ನೇಪಾಲದಲ್ಲೂ ಅರಸಿ ಸಿಗದೇ, ಅವನಿಗೆ ಒಪ್ಪೂ ಹಾಕದ ಗಂಡು ಹುಡುಗಿಯಲ್ಲಿ ಕಂಡು ಅವಳ ಪ್ರೇಮದಲ್ಲಿ, ಸಂಗದಲ್ಲಿ ತನ್ನ ಸುಖವನ್ನರಸುತ್ತಾನೆ ಪಾಪ ಪರಮಾತ್ಮ.
Bookmark/Search this post with

ಮುಂದೆ ಓದಿ...
Posted by gopinatha on October 08, 2011 02:18 PM· permalink
ಹೆದ್ದಾರಿ,ಕಾಲುದಾರಿ ,
ಅಡ್ಡ ದಾರಿ,ಕವಲು ದಾರಿ ,
ಆ ದಾರಿ,ಈ ದಾರಿ,
ಹಲ ಕೆಲವು ದಾರಿ!
ದಾರಿಗಳಲ್ಲಿ ಹಲವು ಪರಿ!
ಕೆಲವರದ್ದು ಬರೀ ಪಿರಿ ಪಿರಿ!
ಬದುಕುವುದಕ್ಕೆ........
ಒಬ್ಬೊಬ್ಬರಿಗೊಂದೊಂದು ದಾರಿ!
ಕೆಲವರಿಗೆ.............,
ತಾವು ಹಿಡಿದಿದ್ದೇ ದಾರಿ!
ಬಡವನಿಗೆ ಪಾಪ
ಎಲ್ಲವೂ ದುಬಾರಿ !
ಹಣವಿದ್ದವರಿಗೋ ......,
ಎಲ್ಲದಕ್ಕೂ ರಹ ದಾರಿ!
ಕೆಲವೊಮ್ಮೆ ದಾರಿ ಕಾಣದೇ
ರಾಘವೇಂದ್ರನಿಗೆ............,
ಮೊರೆಯಿಡುವುದೊಂದೇ ದಾರಿ!
ನನಗೆ ನನ್ನ ದಾರಿ!
ನಿಮಗೆ ನಿಮ್ಮ ದಾರಿ!
ಅವರವರ ದಾರಿಯಲ್ಲಿ
ಅವರವರು ನಡೆದೂ ನಡೆದೂ
ಕೊನೆಗೆ................,
ಅವರೂ.......... ಇಲ್ಲ!
ದಾರಿಯೂ...... ಇಲ್ಲ !
ಎಲ್ಲವೂ ...............,
ಬಯಲು.... ದಾರಿ!!!
ಅದಕ್ಕೇ ಅಲ್ಲವೇ
ದಾಸರು ದಾರಿ ಕಾಣದೇ
ಕೊನೆಗೆ ................,
ದಾರಿ ಯಾವುದಯ್ಯಾ....?
ಎಂದು ಹಾಡಿದ್ದು ........!!!
Posted by Dr.D.T.Krishna Murthy. (noreply@blogger.com) on October 08, 2011 01:41 PM· permalink
ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ಅನ್ನು ಭಾರತದಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಣೆ ಮಾಡಿ
Bookmark/Search this post with

ಮುಂದೆ ಓದಿ...
Posted by NarsimhaMurthyAnegundi on October 08, 2011 08:36 AM· permalink
ಇದು ಪ್ರಕಾಶ್ ಹೆಗಡೆಯವರು ಬರೆದ "ರೀತಿ" ಕಥೆಯ ಮುಂದುವರಿದ ಭಾಗ ನನಗಿಂತ ಮೊದಲು ಪ್ರಕಾಶ್ ಹೆಗಡೆಯವರು, ಅಜಾದ್, ದಿನಕರ್ ಸರ್, ಪ್ರವೀಣ್, ಬಾಲು ಸರ್, ಬದರಿನಾಥ ಪಾಲವಳ್ಳಿ, ಸುಗುಣಕ್ಕ ಮತ್ತು ಸೀತರಾಂ ಸರ್ ಬರೆದಿದ್ದಾರೆ. ಅದರ ಮುಂದಿನ ಭಾಗ ನಾನು ಬರೆದಿದ್ದೀನೆ. ನೀವೆಲ್ಲ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..
ಪುಟ್ಟಣ್ಣಿ ತನ್ನ ಇಷ್ಟುದಿನದ ಬದುಕಿನಲ್ಲಿ ಎಂದೂ ಅಷ್ಟು ಗಟ್ಟಿಯಾಗಿ ಆತನ ಸುಕ್ಕುಗಟ್ಟಿದ್ದ ಕೈಗಳನ್ನು ಹಿಡಿದಿರಲಿಲ್ಲ. ಹಾಗಂತ ಅವಳ ಕೈಗಳೇನು ಯುವತಿಯ ಅಂಗೈನಂತೆ ಸುಕೋಮಲವಾಗಿರಲಿಲ್ಲ. ಅವಳ ಕೈಗಳು ಅವನಷ್ಟೇ ಸುಕ್ಕುಗಟ್ಟಿದ್ದವು. ಕಿಟ್ಟಾಣಿ ಸುಕ್ಕುಗಟ್ಟಿದ್ದ ತನ್ನ ಕೈಯಲ್ಲಿ ಅವಳ ಅಂಗೈಯನ್ನು ಹಿಡಿದಿದ್ದರೂ ಅದರಲ್ಲಿ ಸುಕ್ಕಿರಲಿಲ್ಲ. ಬದಲಾಗಿ ಆಗ ತಾನೆ ಹೊಸದಾಗಿ ಮದುವೆಯಾದ ಗಂಡು ಹೆಣ್ಣು ಸಪ್ತಪದಿ ತುಳಿದ ಮೇಲೆ ಅವಳ ಸೆರಗನ್ನು ಅವನ ಹೆಗಲ ಮೇಲಿನ ವಸ್ತ್ರಕ್ಕೆ ಗಂಟುಹಾಕಿ ಅವನ ಎಡಗೈ ಅಸ್ತದಿಂದ ಅವಳ ಬಲಗೈ ಅಸ್ತವನ್ನು ಹಿಡಿಸಿದಾಗ ಮೊದಲ ಭಾರಿಗೆ ಉಂಟಾಗುತ್ತದಲ್ಲ ಕಂಪರ್ಟ್ ಎನ್ನುವ ಅನುಭೂತಿ ಅದೇ ಇವತ್ತು ಅವಳಿಗೆ ಆಗಿತ್ತು. ಅವನ ಮಿದುವಾದ ಹಿಡಿತದಲ್ಲಿ ವಾತ್ಸಲ್ಯಮಯ ಅಪ್ಪನಿರಬಹುದಾ, ಮಮತೆಯ ಅಮ್ಮನಿರಬಹುದಾ, ಪುಟ್ಟ ಮಕ್ಕಳ ಅಂಗಾಲಿನಷ್ಟೇ ಮಿತವೆನಿಸುವ ಮುಗ್ದ ಮಗ ಅಥವ ಮಗಳಿರಬಹುದಾ, ಬದುಕಿಗೆ ದಾರಿ ತೋರುವ ಗುರುವಿರಬಹುದಾ, ಕೇಳಿದ್ದೆಲ್ಲಾ ಕೊಡುವ ದೇವರಿರಬಹುದಾ, ಇವೆಲ್ಲ ಭಾವಗಳ ಜೊತೆಗೆ ಕಾಮವನ್ನು ಪ್ರೇಮಮಯವನ್ನಾಗಿಸುವ ಗಂಡನಿರಬಹುದಾ? ನಿರೀಕ್ಷೆಯಿಲ್ಲದ ನಿಶ್ಕಲ್ಮಶ ಮನಸ್ಸಿನ ಜೀವದ ಗೆಳೆಯನಿರಬಹುದಾ? ಆ ಕ್ಷಣ ಅವಳೆಷ್ಟು ಯೋಚಿಸಿದರೂ ಉತ್ತರ ಸಿಗಲಿಲ್ಲ.
ಮೊದಲ ಭಾರಿಗೆ ಬದುಕಿನಲ್ಲಿ ಇಷ್ಟು ಗಾಢವಾದ ದಟ್ಟ ಅನುಭವವನ್ನು ಕೊಡುತ್ತಿರುವ ಆತನ ಅಂಗೈ ಹಿಡಿತವನ್ನು ಅನುಭವಿಸುತ್ತಿರುವ ನಾನು ಉತ್ತರವನ್ನೇಕೆ ಹುಡುಕಲು ಪ್ರಯತ್ನಿಸುತ್ತಿರುವೆ, ನಾನೆಂತ ದಡ್ಡಿ, ಕೆಲವೊಮ್ಮೆ ಇಂಥವಕ್ಕೆ ಅರ್ಥ ಹುಡುಕಲು ಪ್ರಯತ್ನಿಸಬಾರದು ಅನುಭವಿಸಿಬಿಡಬೇಕು ಅಂದುಕೊಂಡು ಎಲ್ಲವನ್ನು ಮರೆತು ಮಗುವಿನಂತೆ ಆತನ ಜೊತೆ ನಿದಾನವಾಗಿ ಹೆಜ್ಜೆ ಹಾಕತೊಡಗಿದಳು. ಅವರಿಬ್ಬರ ಹೆಜ್ಜೆಗಳು ಮುಂದೆ ಸಾಗಿದಂತೆ ಅವಳ ನೆನಪುಗಳ ಸುರುಳಿ ಹಿಂದಕ್ಕೆ ಓಡಲಾರಂಭಿಸಿತ್ತು.
ಅವರಿಬ್ಬರ ಹೆಜ್ಜೆಗಳು ಅದ್ಯಾಕೋ ವೇಗವಾಗಿರಲಿಲ್ಲ ಮತ್ತು ಒತ್ತಡವಂತೂ ಇರಲೇ ಇಲ್ಲ. ಏಕೆಂದರೆ ಅವರಿಬ್ಬರೂ ನವದಂಪತಿಗಳಾಗಿರಲಿಲ್ಲ. ಮದ್ಯವಯಸ್ಕರಂತೂ ಆಗಿರಲೇ ಇಲ್ಲ. ಈ ಮದ್ಯ ವಯಸ್ಕ ದಂಪತಿಗಳ ಬದುಕೇ ಹಾಗೆ. ಮಗ ಅಥವ ಮಗಳನ್ನು ಒಳ್ಳೆ ಸ್ಕೂಲಿಗೆ ಸೇರಿಸಬೇಕು, ಮಕ್ಕಳನ್ನು ಮದುವೆ ಮಾಡಬೇಕು, ಎದುರು ಮನೆಯ ಗೆಳತಿ ಕಾಂಜಿವರಂ ಸೀರೆ ಉಟ್ಟಿದ್ದಾಳೆ ನಾನು ಕೊನೇ ಪಕ್ಷ ಕ್ರೇಪ್ ಸಿಲ್ಕ್ ಸೀರೆಯನ್ನಾದರೂ ಉಡಬೇಕು, ಆತ ಸ್ಕೋಡ ತಗೊಂಡಿದ್ದಾನೆ ನಾನು ಕೊನೇ ಪಕ್ಷ ಮಾರುತಿ ಆಲ್ಟೋ ಕಾರಿನಲ್ಲಿ ಅವನ ಮುಂದೆ ಸಾಗಬೇಕು, ಅವನು ಮನೆ ಕಟ್ಟಿಸಿಬಿಟ್ಟಿದ್ದಾನೆ ನಾನು ಸೈಟಾನ್ನಾದರೂ ಕೊಳ್ಳಬೇಕು...ಹೀಗೆ. ಆದ್ರೆ ಆಗ ತಾನೆ ಮದುವೆಯಾದ ನವ ದಂಪತಿಗಳಿಗೆ ಪ್ರಪಂಚದ ಪರಿವೇ ಇಲ್ಲ. ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಅವರಿಬ್ಬರೂ ಮೈಮರೆತು ಕುಳಿತರೆ, ನಿಂತರೆ, ನಡೆದರೆ, ಸಾಗಿದರೆ....ಹೀಗೇ ಏನಾದರಾಗಲಿ, ಪ್ರತಿಕ್ಷಣವೂ ವರ್ಣಿಸಲಾಗದ ಆನಂದ. ಅವರ ಕಣ್ಣಿಗೆ ಪ್ರಪಂಚ ಕಾಣುವುದಿಲ್ಲ. ಕಾಣುವುದೆಲ್ಲಾ ಅವರಿಬ್ಬರ ಬದುಕು ಮಾತ್ರ. ಹಾಗೆ ವಯಸ್ಸಾದ ದಂಪತಿಗಳಿಗೂ ಒಂಥರ ಹೀಗೇನೇ. ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ, ಒಬ್ಬರಿಗೊಬ್ಬರು ಹೆಗಲ ಮೇಲೆ ಕೈಗಳನ್ನು ಹಾಕಿಕೊಂಡು ಪ್ರಪಂಚವನ್ನು ಮರೆತು ಅನುಭವದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಇಲ್ಲಿಯೂ ಹಾಗೆ ಅರವತ್ತು ದಾಟಿದ ಪುಟ್ಟಣ್ಣಿ ಮತ್ತು ಕಿಟ್ಟಾಣಿ ಸಾಗುತ್ತಿದ್ದಾರೆ ಅಂದುಕೊಂಡಿದ್ದರೆ ಕಿಟ್ಟಾಣಿ ಪ್ರಕಾರ ಹೌದು. ಅವನು ಬದುಕಿನ ಪ್ರತಿಕ್ಷಣ ಅನುಭವಿಸುತ್ತಾ ಇದ್ದವನು ಈಗಲೂ ಆಕೆಯ ಹಸ್ತದ ಹಿತವಾದ ಬಿಸಿಯನ್ನು ಅನುಭವಿಸುತ್ತಾ ಪ್ರಪಂಚವನ್ನೇ ಮರೆತು ತನ್ನದೇ ಲೋಕದಲ್ಲಿ ತೇಲುತ್ತಿದ್ದಾನೆ. ಆದ್ರೆ ಪುಟ್ಟಾಣಿ ವಿಚಾರದಲ್ಲಿ ಆಗಿಲ್ಲ. ಏಕೆಂದರೆ ಅವಳು ಈ ಕ್ಷಣವನ್ನು ಪೂರ್ತಿಯಾಗಿ ಅನುಭವಿಸದೇ ತನ್ನ ಯೌವ್ವನದ ನೆನಪಿನಲ್ಲಿ ಹಿಂದಕ್ಕೆ ಓಡುತ್ತಿದ್ದಾಳೆ.
ಅಪ್ಪನ ಇಷ್ಟದಂತೆ ಮದುವೆ, ನಾವಿಬ್ಬರೂ ಮೊದಲ ರಾತ್ರಿ ಒಬ್ಬರ ಮನಸ್ಸನ್ನು ಮತ್ತೊಬ್ಬರು ಅರಿತುಕೊಳ್ಳಲು ಪ್ರಯತ್ನಿಸಿದ್ದು ಆತನ ಹಳೆಯ ಪ್ರೇಮದ ಬಗ್ಗೆ ನನಗೆ ಮೂಡಿದ ಅಸಮದಾನ, ಅದೆಷ್ಟೋ ರಾಗಿಣಿ, ಜಯಂತುಗಳಿಂದ ಬಂದರು ಅವರಿಂದ ಉಂಟಾದ ಸಂಶಯಗಳು, ಗೆಳೆಯ ಗೆಳೆತಿಯರ ಬಗ್ಗೆ ಮೂಡಿದ ಸಂಶಯಗಳು.... ಒಂದಾ ಎರಡಾ,... ಮುಂದೆ ನಮ್ಮಿಬ್ಬರಲ್ಲಿ ಪುಟ್ಟ ವಿಚಾರಗಳಿಗೆ ಉಂಟಾದ ಹಟಗಳು, ಹೀಗೋಯಿಸಂಗಳು,...ಇವು ನಮ್ಮ ಬದುಕನ್ನೇ ನುಂಗಿ ನೀರು ಕುಡಿದಿದ್ದವು. ಇದರಲ್ಲಿ ತಪ್ಪು ಯಾರದು? ನನ್ನದ ಅಥವ ಕಿಟ್ಟಾಣಿದಾ! ಉತ್ತರ ಹುಡುಕಲು ಪ್ರಯತ್ನಿಸುತ್ತಿರುವಾಗಲೇ ನಮಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಾದವು. ಅವರ ಬೆಳವಣಿಗೆ, ಓದು, ಮದುವೆ....ಇವೆಲ್ಲದರ ನಡುವೆ ತಪ್ಪು ಯಾರದೂ ಅಂತ ಕಂಡುಕೊಳ್ಳುವ ಪ್ರಯತ್ನದಲ್ಲಿ ನಮ್ಮ ವಯಸ್ಸು ಅರವತ್ತು ದಾಟಿಬಿಟ್ಟೆವಲ್ಲ! ಉತ್ತರ ಸಿಕ್ಕಿತಾ ಅಂದುಕೊಂಡರೆ ಇಲ್ಲ.
ನಿತ್ಯ ಸಣ್ಣ ಸಣ್ಣದಕ್ಕೂ ಒಬ್ಬರಿಗೊಬ್ಬರೂ ಮುನಿಸಿಕೊಳ್ಳುತ್ತಿದ್ದನ್ನು ಬೆಳೆದ ಮಕ್ಕಳು ಗಮನಿಸಿದ್ದಾರೆ. ಅವರಿಬ್ಬರಿಗೂ ಅವರಿಷ್ಟಪಟ್ಟಂತೆ ಮದುವೆಯಾಗಿದೆ. ಈಗಿನ ಮಕ್ಕಳ ರೀತಿಯೇ ಬೇರೆ. ಬದುಕಿನ ಪ್ರತಿಕ್ಷಣವನ್ನು ಅನಂದಿಸುತ್ತಾರೆ. ಅವರ ಆನಂದದ ನಡುವೆ ನಮ್ಮನ್ನು ಗಮನಿಸಿದ್ದಾರೆ. ನಾವು ಏನನ್ನೋ ಕಳೆದುಕೊಂಡಿದ್ದೇವೆ ಅಂತ ಅವರಿಗನ್ನಿಸುವ ಹೊತ್ತಿಗೆ ನನಗೆ ಅರವತ್ತು ಚಿಟ್ಟಾಣಿಗೆ ಅರವತ್ತೈದು. ಒಂದು ವಾರ ನಮ್ಮನ್ನೆಲ್ಲಾ ಮರೆತು ಸುತ್ತಾಡಿಕೊಂಡು ಖುಷಿಯಾಗಿ ಬನ್ನಿ ಅಂತ ಒಂದು ಪ್ರವಾಸದ ಪ್ಯಾಕೇಜ್ ಮಾಡಿ ಕಳಿಸಿದ್ದಾರೆ. ಈ ಪ್ರವಾಸವಾದರೂ ಎಂಥದ್ದು ನಮ್ಮ ವಯಸ್ಸಿಗೆ ತಕ್ಕಂತೆ ದೇವಸ್ಥಾನ ತೀರ್ಥಕ್ಷೇತ್ರಗಳೊಂದು ಇಲ್ಲ. ಮೊದಲೆರಡು ದಿನ ರಿಸಾರ್ಟು, ನಂತರ ಕೆಮ್ಮಣ್ಣುಗುಂಡಿಯಂತ ಗಿರಿಧಾಮದಲ್ಲಿ ರೆಲ್ಯಾಕ್ಸು, ಅಲ್ಲಿಂದ ಮುಂದಕ್ಕೆ ನೇರವಾಗಿ ಪ್ರಖ್ಯಾತ ಜೋಗ್ ಫಾಲ್ಸ್. ನನ್ನ ತುಂಟ ಮಗಳಂತೂ "ಅಮ್ಮ ಇದು ನಿಮ್ಮಿಬ್ಬರಿಗೂ ಛಾನ್ಸ್ ಎರಡನೇ ಹನಿಮೂನ್ ಮುಗಿಸಿಕೊಂಡು ಬನ್ನಿ" ಅಂತ ಕಣ್ ಹೊಡೆದು ಕಳಿಸಿದ್ದು ಯಾಕೆಂದು ಈಗ ಅರ್ಥವಾಗುತ್ತಿದೆ.
ತಾವು ಉಳಿದುಕೊಂಡಿದ್ದ ರಿಸಾರ್ಟ್ನಿಂದ ಜೋಗ್ ಫಾಲ್ಸ್ ಒಂದು ಕಿಲೋಮೀಟರ್ ಇದ್ದಿದ್ದರಿಂದ ಇಬ್ಬರು ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ. ಅರ್ಧ ಕಿಲೋಮೀಟರ್ ದಾರಿ ಸಾಗಿರಬೇಕು ತನ್ನದೇ ಹಳೆಯ ನೆನಪುಗಳಲ್ಲಿ ಮುಳುಗಿ ಹೋಗಿದ್ದ ಪುಟ್ಟಾಣಿ ಸಣ್ಣದೊಂದು ಕಲ್ಲನ್ನು ಎಡವಿ ಮುಗ್ಗರಿಸಿ ಬೀಳಬೇಕೆನ್ನುವಷ್ಟರಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ಕಿಟ್ಟಾಣಿ ಅವಳನ್ನೊಮ್ಮೆ ನೋಡಿ " ಯಾವ ಲೋಕದಲ್ಲಿದ್ದೀಯ" ಕೇಳಿದ. ಅವಳು ಉತ್ತರಿಸಲಿಲ್ಲ ಅವನನ್ನೊಮ್ಮೆ ನೋಡಿ ನಕ್ಕಳಷ್ಟೇ. ಮುಂದೆ ಇಬ್ಬರ ನಡುವೆ ಮಾತಿರಲಿಲ್ಲ. ನಡುವೆ ಒಮ್ಮೆ ಕಿಟ್ಟಾಣಿಯ ಮುಖವನ್ನೊಮ್ಮೆ ಪುಟ್ಟಾಣಿ ತಿರುಗಿ ನೋಡಿದಳಲ್ಲ! ಅರೆರೆ ಇವತ್ತು ಇವರ ಮುಖ ತುಂಬಾ ಚೆನ್ನಾಗಿ ಕಾಣುತ್ತಿದೆಯಲ್ಲ! ಮುಖದಲ್ಲಿ ವಯಸ್ಸಾಗಿರುವುದು ಕಾಣುತ್ತಿದ್ದರೂ ನನ್ನ ಗಂಡನೆನ್ನುವ ಕಾರಣಕ್ಕೆ ತುಂಬಾ ಇಷ್ಟವಾಗುತ್ತಿದೆಯಲ್ಲಾ! ಈ ಇಷ್ಟಕ್ಕೆ ಕಾರಣವೇನು? ಮದುವೆಯಾದ ಹೊಸತರಲ್ಲಿ, ಮೊದಲ ರಾತ್ರಿಯಲ್ಲಿ ನಂತರದ ದಿನಗಳಲ್ಲಿ ಯುವ ಸುರಸುಂದರಾಂಗನಾಗಿದ್ದರೂ ಅವತ್ತಿಗಿಂತ ಇವತ್ತಿನ ಅವರ ತೃಪ್ತಿ ತುಂಬಿದ ಮುಖ ತುಂಬಾ ಅಪ್ಯಾಯಮಾನವಾಗುತ್ತಿದೆಯಲ್ಲ! ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆಯಲ್ಲ! ಈ ರೀತಿ ಕದ್ದು ಮುಚ್ಚಿ ನೋಡುವುದರಲ್ಲಿ ಅದೊಂತದೋ ವರ್ಣಿಸಲಾಗದ ಖುಷಿಯಿದೆ. ಸಿಹಿಯನ್ನು ಸ್ವಲ್ಪ ಸ್ವಲ್ಪ ತಿಂದಷ್ಟು ರುಚಿ ಹೆಚ್ಚು. ಹಾಗೆ ಸ್ವಲ್ಪ ಸ್ವಲ್ಪವೇ ಆತನ ಮುಖವನ್ನು ಕಿರುಗಣ್ಣಿನಿಂದ ನೋಡುವುದರಲ್ಲಿ ವರ್ಣಿಸಲಾಗದ ಖುಷಿ ಮನಸ್ಸಿಗೆ. ಹಾಗೆ ದಾರಿಯುದ್ದಕ್ಕೂ ಅವನಿಗರಿವಿಲ್ಲದಂತೆ ಕಿರುಗಣ್ಣಿನಲ್ಲೇ ನೋಡುತ್ತಾ ಸಾಗಿದಳು. ಜೋಗ್ ಫಾಲ್ಸ್ ಬಂದೇ ಬಿಡ್ತು.
ಅದೆಷ್ಟೋ ವರ್ಷಗಳ ನಂತರ ಜೋಗ್ ಫಾಲ್ಸ್ ಇವತ್ತು ಈ ಕ್ಷಣದಲ್ಲಿ ಅವರಿಗೆ ತುಂಬಾ ಚೆನ್ನಾಗಿ ಕಾಣುತ್ತಿದೆ. "ಅರೆರೆ ಅಲ್ಲಿ ನೋಡ್ರಿ, ಜೋಗ್ ಫಾಲ್ಸ್ ನಡುವೆ ಕಾಮನ ಮೂಡಿದೆ" ವಾಹ್! ಸೂಪರ್ ಅಲ್ಲೇ ಮಗುವಿನಂತೆ ಕುಣಿದಾಡಿದಳು ಪುಟ್ಟಾಣಿ. ಜೋಗ್ ಫಾಲ್ಸ್ ಮುಂದೆ ಕಾಮನಬಿಲ್ಲು ಯಾವಾಗಲೂ ಬರುವುದಿಲ್ಲ. ಮತ್ತು ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಕಾಣಿಸುವ ಅದನ್ನು ನೋಡುವವರೇ ಅದೃಷ್ಟವಂತರು. ಅಂತ ಅದೃಷ್ಟ ನಮಗಿದೆಯಲ್ಲ ಅವರಿಬ್ಬರೂ ಕುಣಿದಾಡಿದರು.
"ಪುಟ್ಟಾಣಿ, ನಿನಗೊಂದು ವಿಶೇಷವನ್ನು ತೋರಿಸಲೇನೋ" ಹೇಳಿದ ಕಿಟ್ಟಾಣಿ ಪ್ರೀತಿಯಿಂದ.
ಕಾಮನಬಿಲ್ಲನ್ನು ಮೈಮರೆತು ಕಣ್ತುಂಬಿಕೊಳ್ಳುತ್ತಿದ್ದ ಪುಟ್ಟಾಣಿ ಆತನ ಮಾತು ಕೇಳಿ ಅವನತ್ತ ತಿರುಗಿದಳು.
" ಇಲ್ಲಿ ನೋಡೋ" ಅಂತ ಪ್ರೀತಿಯಿಂದ ಕರೆದು, "ನಿನಗೆ ಇದೇ ಕಾಮನಬಿಲ್ಲನ್ನು ನನ್ನ ಕಣ್ಣಲ್ಲಿ ತೋರಿಸುತ್ತೇನೆ"
"ಹೌದಾ, ಹೇಗೆ ತೋರಿಸ್ತೀರಿ"
ಆದ್ರೆ ಒಂದು ಷರತ್ತು. ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಂದು ಕ್ಷಣವೂ ಮಿಟುಕಿಸದೇ ನೋಡಬೇಕು.
"ಒಹ್! ಖಂಡಿತ. ಆದ್ರೆ ನೀವು ಕಣ್ಣು ಮಿಟುಕಿಸುವುದಿಲ್ಲವೇ?
"ಇಲ್ಲ ಇಲ್ಲ ನಿನಗೆ ಕಾಮನಬಿಲ್ಲು ತೋರಿಸಲಿಕ್ಕಾಗಿ ನಾನು ಒಮ್ಮೆಯೂ ಕಣ್ಣು ಮಿಟುಕಿಸುವುದಿಲ್ಲ
ಇದೇ ಮಾತಾ? ನೀವು ಮಿಟುಕಿಸಿ ಸೋತರೇ?
ಸೋತರೆ ನೀನು ಏನು ಕೇಳಿದರೂ ಕೊಡಿಸುತ್ತೇನೆ, ನೀನು ಸೋತರೆ?
ನಾನು ಒಮ್ಮೆಯೂ ಕಣ್ಣು ಮಿಟುಕಿಸದೇ ನಿಮ್ಮ ಕಣ್ಣನ್ನೇ ನೋಡುತ್ತೇನೆ. ನಾನು ಮಿಟುಕಿಸಿದಲ್ಲಿ ನೀವು ಕೇಳಿದ್ದನ್ನು ಕೊಡುತ್ತೇನೆ. ಕಿಟ್ಟಾಣಿ ಒಂದು ಕಲ್ಲುಬೆಂಚಿನ ಮೇಲೆ ಕಾಮನ ಬಿಲ್ಲಿಗೆ ಅಭಿಮುಖವಾಗಿ ಖುಳಿತ.
ಆಯ್ತು ಈಗ ಪ್ರಾರಂಭಿಸೋಣವಾ? ಕೇಳಿದ ಕಿಟ್ಟಾಣಿ. ಆಯ್ತು ಎಂದಳು.
ಕಣ್ಣು ನಿದಾನವಾಗಿ ತೆರೆದ. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು ಪುಟ್ಟಾಣಿ.
ಐದು ಸೆಕೆಂಡುಗಳಾಯಿತು. ಜೋಗ್ ಫಾಲ್ಸ್ ಜಲಪಾತದ ಮುಂದೆ ಸೃಷ್ಟಿಯಾಗಿದ್ದ ಕಾಮನಬಿಲ್ಲು ಅವನ ಕಣ್ಣಿನಲ್ಲಿ ನಿದಾನವಾಗಿ ಅಸ್ಪಸ್ಟವಾಗಿ ಅವಳಿಗೆ ಕಾಣತೊಡಗಿತು. ಹತ್ತು ಸೆಕೆಂಡುಗಳು ಕಳೆದವು. ಈಗ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಕಾಣುತ್ತಿದೆ ಕಾಮನಬಿಲ್ಲು. ಇಬ್ಬರಲ್ಲೂ ಗೆಲ್ಲಬೇಕೆನ್ನುವ ಚಲದಲ್ಲಿ ಒಮ್ಮೆಯೂ ಮಿಟುಕಿಸಲಿಲ್ಲ. ಅವಳ ದೃಷ್ಟಿ ಅವನ ದೃಷ್ಟಿಗೆ ಮತ್ತಷ್ಟು ನೇರವಾಯಿತು. ಇಬ್ಬರಲ್ಲಿ ಒಬ್ಬರೂ ಒಮ್ಮೆಯೂ ಮಿಟುಕಿಸುತ್ತಿಲ್ಲ. ಇನ್ನತ್ತು ಸೆಕೆಂಡುಗಳು ಕಳೆದವು. ನಿದಾನವಾಗಿ ಸ್ಪರ್ಧೆಯನ್ನು ಮರೆತ ಅವರಿಬ್ಬರ ಕಣ್ಣುಗಳು ನಿದಾನವಾಗಿ ಒಂದಾಗುತ್ತಿವೆ. ಈಗ ಪುಟ್ಟಣ್ಣಿಯ ಕಣ್ಣುಗಳಲ್ಲಿ ಅದೆಂತದೋ ವರ್ಣಿಸಲಾಗದ ಪ್ರೀತಿ ಮತ್ತು ಮಮತೆ ತುಂಬಿದ ಭಾವುಕತೆ ತುಂಬಿ ತುಳುಕುತ್ತಿರುವುದು ಅವನಿಗೆ ಅರಿವಾಗುತ್ತಿದೆ. ಜೊತೆಗೆ ತಾನು ಬದುಕಿನ ಇಷ್ಟು ವರ್ಷಗಳು ಅಹಂನಿಂದ ಅನುಭವಿಸಿದ ನೋವುಗಳು ಕಿಟ್ಟಾಣಿಗೆ ಕೊಟ್ಟ ಮಾನಸಿಕ ತೊಂದರೆಗಳೆಲ್ಲಾ ನೆನಪಾಗಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವೆನ್ನುವ ಅವಳ ಕಣ್ಣು ತುಂಬಿಕೊಳ್ಳುತ್ತಿವೆ. ಅವನ ಕಣ್ಣುಗಳಲ್ಲಿ ಮೂಡಿದ ಕಾಮನಬಿಲ್ಲು ನಿದಾನ ಪ್ರೀತಿಯ ಸಂಕೇತವಾಗಿ, ಪ್ರೀತಿಯಾಗಿ ಕಾಣುತ್ತಿದೆ. ಅವಳಿಗೆ ಕಿಟ್ಟಾಣಿಯ ಕಣ್ಣುಗಳನ್ನೇ ನೋಡುತ್ತಿದ್ದರೆ, ಮನಸ್ಸಿನಲ್ಲಿ ವರ್ಣಿಸಲಾಗದ ಭಾವ ತುಂಬಿಹೋಗುತ್ತಿದೆ. ಇನ್ನು ತಡೆಯಲಾಗುತ್ತಿಲ್ಲ ಆಹಂಕಾರವೆಲ್ಲಾ ನೀರಿನಂತೆ ಕರಗಿಹೋಗುತ್ತಿವೆ. ಪಶ್ಚಾತಾಪ ಮನದಲ್ಲಿ ತುಂಬಿಕೊಳ್ಳುತ್ತಿದೆ. ಮತ್ತೈದು ಸೆಕೆಂಡು ಕಳೆಯಿತಷ್ಟೆ ಅವಳಿಗರಿವಿಲ್ಲದಂತೆ ಮನತುಂಬಿ ಕಣ್ಣುಗಳಲ್ಲಿ ಆನಂದ ಭಾಸ್ಪ ಉಕ್ಕಿ ಬಂದೇ ಬಿಟ್ಟಿತ್ತು. ಅದನ್ನು ನೋಡುತ್ತಿದ್ದ ಚಿಟ್ಟಾಣಿಯ ಕಣ್ಣುಗಳಲ್ಲಿ ಆನಂದ ಬಾಷ್ಪ. ಅದ್ಯಾವ ಕ್ಷಣದಲ್ಲಿ ಕಿಟ್ಟಾಣಿಯ ಎದೆಗೆ ಅವಚಿಕೊಂಡಳೋ, ಅಷ್ಟೇ ವೇಗವಾಗಿ ಪುಟ್ಟಾಣ್ಣಿಯನ್ನು ಮಗುವಿನಂತೆ ತನ್ನ ತೋಳ ತೆಕ್ಕೆಯೊಳಗೆ ಸೆಳೆದುಕೊಂಡುಬಿಟ್ಟಿದ್ದಾನೆ. ಅವರಿಲ್ಲದಂತೆ ಈ ರೀತಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಅಕ್ಕಪಕ್ಕದಲ್ಲಿ, ಅದರಾಚೆಗೆ ಹತ್ತಾರು ಜನರು ನೂರಾರು ಜನರು, ಎದುರಿಗೆ ಕಾಣುತ್ತಿರುವ ಜೋಗ್ ಫಾಲ್ಸ್, ಅದರೊಳಗೆ ಮೂಡಿಬಂದ ಕಾಮನಬಿಲ್ಲು ಅದರ ಮೇಲಿನ ಆಕಾಶ, ಕೆಳಗಿನ ಭೂಮಿ ಇದ್ಯಾವುದರ ಪರಿವೆ ಇಲ್ಲ. ಅದೆಷ್ಟು ಹೊತ್ತು ಹಾಗೆ ಗಾಡ ಆಲಿಂಗನದಲ್ಲಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಇತ್ತ ಜೋಗ್ ಪಾಲ್ಸ್ನ ರಾಜ ರಾಣಿ, ರಾಕೆಟ್ ರೋರರ್, ಮತ್ತು ಕಾಮನಬಿಲ್ಲು ಇವರಿಬ್ಬರಲ್ಲಿ ಗೆದ್ದವರಾರು ಅಂತ ಮಾತಾಡುತ್ತಿದ್ದರೆ ಇತ್ತ ಪುಟ್ಟಾಣಿಯ ಬಲಗೈ ಕಿಟ್ಟಾಣಿಯ ಸೊಂಟವನ್ನು ಬಳಸಿದರೆ ಕಿಟ್ಟಾಣಿಯ ಎರಡೈ ಆಕೆಯ ಹೆಗಲನ್ನು ಬಳಸಿತ್ತು. ಇವರ ಕಣ್ಣಳತೆ ದಾರಿಯ ಕೊನೆಯಲ್ಲಿ ಇವರನ್ನೇ ನೋಡಿ ಆಶೀರ್ವಾದಿಸಿದ ಸೂರ್ಯ ನಿದಾನ ಅಸ್ತಂಗತನಾಗುತ್ತಿದ್ದ.
ಶಿವು.ಕೆ
Posted by shivu.k (shivuu.k@gmail.com) on October 08, 2011 08:08 AM· permalink
ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ ಕಾರು ತಯಾರಿಸಿದ ಕೀರ್ತಿ ಭಾರತಕ್ಕೆ ಸಲ್ಲಬೇಕು. ಟಾಟಾ ಕಂಪನಿ ನ್ಯಾನೋ ಅನ್ನೋ ಈ ಕಾರು ಹೊರ ತಂದಿದ್ದಾಗ ಇಡೀ ವಿಶ್ವ ಬೆರಗಾಗಿ ನೋಡಿತ್ತು.. ಈಗ ಮತ್ತೆ ಇಂಥಾ ಕೀರ್ತಿ ಭಾರತ ದೇಶಕ್ಕೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ touchscreen tablet ಕಂಪ್ಯೂಟರ್ ಬರುತ್ತಿದೆ.. ಹೆಸರು "ಆಕಾಶ್".
ಇದು ಪ್ರಾರಂಭವಾಗಿ ತುಂಬಾ ದಿನಗಳೇ ಆದವು. DataWind ಅನ್ನೋ ಕಂಪನಿ ಅತೀ ಕಡಮೆ ಬೆಲೆಯ ಕಂಪ್ಯೂಟರ್ ಮಾಡಿ ಕೊಡಬೇಕು ಅನ್ನೋ ಕನಸು ಕಂಡು ಬರೋಬ್ಬರಿ ಎರಡು ವರ್ಷಗಳಾದವು. ಇದ್ಯವತ್ತೋ ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಕೊಡಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಮುಂದೂಡುತ್ತಲೇ ಹೋದ ಇಂಥಾ ಒಂದು ಪ್ಲಾನ್ ಕೊನೆಗೂ ಈಗ ಸಾಕಾರಗೊಂಡಿದೆ. ಕೇವಲ ೧,೫೦೦ ರೂಪಾಯಿಗೆ touchscreen ಕಂಪ್ಯೂಟರ್!!!
ಏನಿದು tablet PC :
Tablet PC ಅಂದರೆ ಕಂಪ್ಯೂಟರ್ ಥರದ್ದೇ ಒಂದು ಸಾಧನ ಆದರೆ ಇದರ ಗಾತ್ರ ಮಾತ್ರ ಕಂಪ್ಯೂಟರ್ ಗಿಂತ ತುಂಬಾ ಚಿಕ್ಕದು. ಕಂಪ್ಯೂಟರ್ ನಲ್ಲಿ ಮಾಡಲಾಗುವ ಬಹುತೇಕ ಎಲ್ಲ ಕೆಲಸಗಳನ್ನು ಇದರಲ್ಲಿ ಮಾಡಬಹುದು. ಇಂಥ ಒಂದು ಐಡಿಯಾ ಬಂದಿದ್ದು ಮೊದಲು ೨೦೦೧ ರಲ್ಲಿ. ಆಗ ಮೈಕ್ರೋಸಾಫ್ಟ್ ಅನ್ನೋ ಸಾಫ್ಟ್ವೇರ್ ನ ದೈತ್ಯ ಕಂಪನಿ ಇಂಥ ಒಂದು ಸಾಧನ ಹೊರತಂದಿತ್ತು. ಆದರೆ ಆನಂತರದ ಕೆಲವು ವರ್ಷ ಅದು ಮೊಬೈಲ್ ಫೋನ್ ಗಳಿಗೆ ಸೀಮಿತ ವಾಯಿತಲ್ಲದೆ ಮಾರುಕಟ್ಟೆಗೆ ಬರಲೇ ಇಲ್ಲ.
ಮುಂದೆ?
ಆಮೇಲೆ ನಮಗೆಲ್ಲರಿಗೂ ತಿಳಿದಿರುವಂತೆ ಬೇರೆ ಕಂಪನಿಯ ಇಂಥ Tablet PC ಗಳು ಜನಪ್ರಿಯವಾದವು. ಸುಮಾರು ೭ ರಿಂದ ೧೦ ಇಂಚು ಪರದೆಯ ಈ ಸಾಧನಗಳು ಎಲ್ಲರ ಕೈಗೂ ಬರತೊಡಗಿದವು. ಆದರೆ ಇದರ ಬೆಲೆ ಸಾಮಾನ್ಯರ ಕೈಗೆ ಎಟಕುವ೦ತಿರಲಿಲ್ಲ . ಇಂಥ ಸಾದನಗಳು ಸುಮಾರು ೩೦ ರಿಂದ ೫೦ ಸಾವಿರ ಬೆಲೆಯದ್ದಾಗಿದ್ದು ಶ್ರೀಮತರಿಗೆ ಮೀಸಲು ಎನ್ನುವಂತಿತ್ತು. ಆದರೆ ಎರಡು ವರ್ಷ ಗಳಿಗೆ ಹಿಂದೆ ಭಾರತ ಸರ್ಕಾರ ಇಂಥ ಸಾಧನಗಳು ವಿದ್ಯಾರ್ಥಿಗಳಿಗೂ ಸಿಗಬೇಕು ಅಂತ ತೀರ್ಮಾನಿಸಿ Datawind ಅನ್ನೋ ಕಂಪನಿ ಗೆ ಇದರ ಜವಾಬ್ದಾರಿ ವಹಿಸಿತು. ಆನತರ Datawind ಮತ್ತು ಸಿಕಂದರಾಬಾದ್ ಮೂಲದ Quad Electronics ಕಂಪನಿ ಜೊತೆ ಸೇರಿ ಈಗ ಇಂಥ ಒಂದು Tablet PC ಹೊರತಂದಿದೆ.
ಇದರಲ್ಲಿ ಏನಿದೆ?
ಆಕಾಶ್ ಕಂಪ್ಯೂಟರ್ ನ configuration ಈ ಕೆಳಗಿನಂತಿದೆ.
ಹೆಸರು : ಆಕಾಶ್
ಪರದೆ : ೭ ಇಂಚಿನ ಸ್ಪರ್ಶಜ್ಞಾನದ ಪರದೆ (Touchscreen )
ಒಪೆರಟಿಂಗ್ ಸಿಸ್ಟಮ್ (Operating System ) : ಗೂಗಲ್ ಅನ್ದ್ರೊಇದ್
ಪ್ರೋಸೆಸರ್ : ೩೬೬ MHz
RAM : ೨೫೬ MB
ಮೆಮೊರಿ: ೨ GB (೩೨ GB ವಿಸ್ತರಿಸಬಹುದಾಗಿದೆ)
ಇಂಟರ್ನೆಟ್: Wi -Fi ಮೂಲಕ
ಎರಡು USB ಸ್ಲಾಟ್ ಇದೆ.
ಮೂರು ಗಂಟೆ ಯಾ ತನಕ ಕೆಲಸ ಮಾಡಬಹುದಾದ ಬ್ಯಾಟರಿ.
ಬೆಲೆ: ವಿದ್ಯಾರ್ಥಿ ಗಳಿಗೆ ಸರಕಾರದ ಮೂಲಕ ರೂಪಾಯಿ :೧೧೦೦-೧೨೦೦ (ಉಚಿತವಾಗಿ ನೀಡಲಾಗುತ್ತದೆ ಅಂತನೂ ಹೇಳಿದ್ದಾರೆ. ಬಹುಶ ಶೀಘ್ರದಲ್ಲಿ ಮತದಾನ ಇರುವ ರಾಜ್ಯಗಳಲ್ಲಿ ಸಿಗಬಹುದೇನೋ :))
ಉಳಿದ ನನ್ನ ನಿಮ್ಮಂಥ ನಾಗರಿಕರಿಗೆ ಇದು ನವೆಂಬರ್ ತಿಂಗಳಿನಿಂದ ಮಾರುಕಟ್ಟೆಯಲ್ಲಿ ದೊರಕುತ್ತದೆ. ಬೆಲೆ ೩೦೦೦ ರೂಪಾಯಿ.
ಇತರ ಇಂತಹ ಸಾಧನಗಳು ಮತ್ತು ಅವುಗಳ ಬೆಲೆ ಈ ಕೆಳಗಿನಂತಿದೆ
ರಿಲೆಯಾನ್ಸೆ ಕಂಪನಿಯ Tablet PC :೧೩೦೦೦ ರೂಪಾಯಿ
ಎಂ ಎಸ್ಸ್ ಎಯೇ ಕಂಪನಿಯ Tablet PC :೧೪೦೦೦ ರೂಪಾಯಿ
ಬೀಟಲ್ ಕಂಪನಿಯ Tablet PC :೧೦೦೦೦ ರೂಪಾಯಿ
ಮರ್ಕುರಿ ಕಂಪನಿಯ Tablet PC :೯೫೦೦ ರೂಪಾಯಿ
ಹೆಚ್ ಸಿ ಎಲ್ ಕಂಪನಿಯ Tablet PC :೧೩೦೦೦ - ೩೨೦೦೦ ರೂಪಾಯಿ
ಆಪ್ಪಾಲ್ ಕಂಪನಿಯ Tablet PC :೨೭೦೦೦ -೩೮೦೦೦ ರೂಪಾಯಿ
LACS ,Infibeam Phi, OlivePad ,Creative ,Binatone ,Spice , Samsung ಮುಂತಾದ ಕಂಪೆನಿಯವೂ ಸಿಗುತ್ತವೆ. ಬೆಲೆ ೧೪೦೦೦ ದಿಂದ ೩೮೦೦೦ ತನಕ.
ಇತ್ತೀಚಿಗೆ ಎಲ್ಲರ ಕೈಲೂ ಮೊಬೈಲ್ ಗಳಿದ್ದವು.. ಇನ್ನು ಮುಂದೆ Tablet PC . ಭಾರತದಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಸುಮಾರು ೭ % . ಚೀನಾದಲ್ಲಿ ೪೦ %. ಇನ್ನು ಕೆಲವೇ ವರ್ಷಗಳಲ್ಲಿ ನಾವು ಎಲ್ಲರನ್ನೂ ಮೀರಿಸಿ ಮುಂದೆ ಸಾಗುವುದರಲ್ಲಿ ಅನುಮಾನವಿಲ್ಲ.
ಗೋರೆ ಉವಾಚ :
ಅಮೆರಿಕಾಕ್ಕೆ ಹೊರಟಿದ್ದ ನಮ್ಮ ಸದಾನಂದ "ಆಕಾಶ್" ಅನ್ನೋ ಚಿಕ್ಕ TouchScreen ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ವಯರುಗಳೇ ಇಲ್ಲದೆ ಇಂಟರ್ನೆಟ್ ನೋಡುವ ಈ ಸಾಧನ ಅತ್ಯಂತ ಕಡಿಮೆ ಬೆಲೆಯದ್ದು ಅಂತ ತನ್ನ ಪಕ್ಕದವರೊಡನೆ ಕೊಚ್ಚಿಕೊಂಡ. ಅಷ್ಟರಲ್ಲೇ ಈ ವಯರ್ ಲೆಸ್ ಟೆಕ್ನಾಲಜಿ ಪ್ರಾರಂಭವಾಗಿದ್ದು ಎಲ್ಲಿ ಅನ್ನೋ ಚರ್ಚೆ ಶುರುವಾಯಿತು.
ಅಮೇರಿಕಾದವ: ನಾವೊಂದು ಸಾರಿ ಭೂಮಿ ಅಗೆದ್ವಿ. ೧೦೦ ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಷ್ಟು ವರ್ಷ ಗಳ ಹಿಂದೇನೆ ನಾವು ವಯರು ಗಿಯರು ಎಲ್ಲ ನಿಷ್ಪ್ರಯೋಜಕ ಅಂತ ಹೂತು ಬಿಟ್ಟಿದ್ವಿ.. ಅಂದ್ರೆ ನೂರು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.
ಚೀನಾದವ :ನಾವೊಂದು ಸಾರಿ ಭೂಮಿ ಅಗೆದ್ವಿ. ೩೦೦ ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಂದ್ರೆ ಮುನ್ನೂರು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.
ಜಪಾನಿನವ : ನಾವೊಂದು ಸಾರಿ ಭೂಮಿ ಅಗೆದ್ವಿ. ೫೦೦ ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಂದ್ರೆ ಐನೂರು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.
ಇದನ್ನೆಲ್ಲಾ ಕೇಳಿದ ನಮ್ಮ ಸದಾನಂದ ಏನಂದ ಗೊತ್ತೇ?
ನಾವೊಂದು ಸಾರಿ ಭೂಮಿ ಅಗೆದ್ವಿ. ೧೦೦ ಫೀಟ್ ಬಿಡಿ , ೧೦೦೦, ೨೦೦೦ ೧೦೦೦೦ ಕೆಳಗೆ ಹೋದರು ನಮಗೆ ಒಂದೇ ಒಂದು ವಯರು ಸಿಗಲಿಲ್ಲ . ಅಂದ್ರೆ ಅಷ್ಟು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು. !!
ಅಷ್ಟು ಹೇಳಿ ಸದಾನಂದ ತನ್ನ ಕಂಪ್ಯೂಟರ್ ನಲ್ಲಿ ಕೆಲಸ ಮುಂದುವರೆಸಿದ.
ಎಲ್ಲರೂ ಮೂಕರಾಗಿ ಬಿಟ್ಟರು..
Posted by ರವಿಕಾಂತ ಗೋರೆ (noreply@blogger.com) on October 08, 2011 08:00 AM· permalink
Posted by Sarvesh Kumar M V on October 08, 2011 06:54 AM· permalink
ನಮ್ಮಮ್ಮ ಕನ್ನಡತಿ ಅವಳಮ್ಮ ಭಾರತಿ
ಕೋಟಿ ನಮನಗಳು ನಿನ ಚರಣದಲಿ ತಾಯೆ
ಖನಿಜ ಸಂಪತ್ತಿನ ರಾಶಿ ನಿನ್ನ ಒಡಲಲಿ ತಾಯೆ
ಶ್ರೀಗಂಧ ಫಲ ಪುಷ್ಪ ನಿನ್ನ ಮಡಿಲಲಿ ತಾಯೆ
ಗಿರಿ ಶೃಂಗ ಪರ್ವತಗಳು ನಿನ ಮುಕುಟದಲಿ ತಾಯೆ
ಹಸಿರ ವನಸಿರಿ ನದಿಗಳು ನಿನಗೆ ಹೊದಿಕೆಯು ತಾಯೆ
ಕೋಟೆ ಕೊತ್ತಲಗಳು ನಿನ್ನ ಸಮ್ರಾಜ್ಯದಲಿ ತಾಯೆ
ಶಿಲ್ಪ ಕಲೆಗಳ ಮೆರುಗು ನಿನ್ನ ತವರಲಿ ತಾಯೆ
ಕವಿ ಶರಣ ದಾಸರು ನಿನ್ನ ನಾಡಲಿ ತಾಯೆ
ಹರಿಸಿಹರು ಕಾವ್ಯದೊಳೆ ನಿನ್ನ ಲೇಖನಿಯಲಿ ತಾಯೆ
ಬಣ್ಣಿಸಲು ಪದಗಳಿಲ್ಲ ನಿನ್ನ ಚೆಲುವನು ತಾಯೆ
ಸೆಳೆದಿಹೆ ನಮ್ಮೆಲ್ಲರ ಏನು ನಿನ್ನಯ ಮಾಯೆ
ಎಷ್ಟು ಸಲುಹಿ ಸಾಕಿರುವೆ ನಿನ್ನ ಮಕ್ಕಳನು ತಾಯೆ
ಅವರೆಲ್ಲ ಮರೆತಿಹರು ನಿನ್ನ ವಾತ್ಸಲ್ಯವ ತಾಯೆ
ಕೊಳ್ಳೆ ಹೊಡೆದಿಹರು ನಿನ್ನ ಮಡಿಲನು ತಾಯೆ
ಬಗೆದಿಹರು ನಿನ್ನೊಡಲ ಖನಿಜ ಸಂಪತ್ತನು ತಾಯೆ
ನಿನ್ನ ವನಸಿರಿ ನದಿಗಳು ಬತ್ತುತ್ತಲಿವೆ ತಾಯೆ
ಪ್ರಾಣಿ ಪಕ್ಷಿಗಳ ಸಂಕುಲ ಹಳಿವಿನಂಚಲಿ ತಾಯೆ
ಅನ್ನ ಬೆಳೆಯುವವರಿಗೆ ಬರ ನಿನ್ನ ನೆಲದಲಿ ತಾಯೆ
Bookmark/Search this post with

ಮುಂದೆ ಓದಿ...
Posted by Sarvesh Kumar M V on October 08, 2011 06:48 AM· permalink
Posted by Sarvesh Kumar M V on October 08, 2011 06:44 AM· permalink

|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||
’ಅಮ್ಮ’ ಎಂಬ ಶಬ್ದದ ಬಗ್ಗೆ ವರ್ಣನೆ ಮಾಡುವುದು ಬೇಕಾಗುವುದಿಲ್ಲ ಯಾಕೆಂದರೆ ಅದರ ತಾಕತ್ತೇ ಅಂಥದ್ದಿದೆ. ಹುಟ್ಟಿದ ಪ್ರತಿಯೊಂದೂ ಜೀವಿಗೂ ಅಮ್ಮ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜನ್ಮವೀಯುತ್ತಾಳೆ. ಬಹುತೇಕ ಸಸ್ತನಿಗಳಲ್ಲಿ ನೇರವಾದ ಜನ್ಮವಾದರೆ ಕೆಲವು ಸರೀಸೃಪಗಳಲ್ಲಿ, ಪಕ್ಷಿಗಳಲ್ಲಿ, ಜಲಚರಗಳಲ್ಲಿ ಮೊಟ್ಟೆಯ ರೂಪದಲ್ಲಿ ಅಮ್ಮ ಜನ್ಮವೀಯುತ್ತಾಳೆ. ಅಂತಹ ಸಾವಿರಕೋಟಿ ಅಮ್ಮಂದಿರ ಹುಟ್ಟಿಗೂ ಕಾರಣವಾದ ಒಬ್ಬ ಅಮ್ಮ ಇರಬೇಕಲ್ಲ ? ಆ ರೂಪವನ್ನೇ ’ಆದಿಶಕ್ತಿ’ ಎಂದೂ ಜಗನ್ಮಾತೆ ಎಂದೂ ಋಷಿಗಳು ಹೆಸರಿಸಿದರು. ದೇವನೊಬ್ಬನೇ ಆದರೂ ಆತನ ಬಹುರೂಪಗಳನ್ನು ಕಂಡ ಅದೇ ಮಹನೀಯರು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಅಲ್ಲಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳಲ್ಲಿ ನವದುರ್ಗೆಯರು, ಸಪ್ತಮಾತೃಕೆಯರು, ತ್ರಿಮೂರ್ತಿಗಳ ಹೆಂಡಂದಿರು ಮತ್ತು ಆ ಮೂರು ರೂಪಗಳ ಸಮ್ಮಿಲನದ ಶ್ರೀರಾಜರಾಜೇಶ್ವರೀ ರೂಪವನ್ನೂ ಅವರು ಗುಣಗಾನಮಾಡಿದರು. ಆರಾಧನೆಯ ಕಾಲದಲ್ಲಿ ವರ್ಷದ ಕೆಲವು ಭಾಗಗಳನ್ನು ಹೀಗೀಗೆ ಅಂತ ತಿಳಿಸಿಕೊಟ್ಟು ಅವುಗಳ ಸಂದರ್ಭದ ಮಹತ್ವವನ್ನೂ ಔಚಿತ್ಯವನ್ನೂ ತಿಳಿಸಿಕೊಟ್ಟರು. ವೇದಗಳಲ್ಲಿ ಅಡಕವಾಗಿರುವ ರೀತಿಯಲ್ಲಿ ಹೇಳಬಹುದಾದರೆ ಶ್ರೀಸೂಕ್ತ, ಸರಸ್ವತೀ ಸೂಕ್ತ, ದುರ್ಗಾಸೂಕ್ತಗಳೇ ಮೊದಲಾದ ಕೆಲವು ಸೂಕ್ತಗಳಿಂದ ಅಮ್ಮನನ್ನು ಅರ್ಚಿಸಿದರು. ಇದನ್ನೇ ಪ್ರತಿಪಾದಿಸಿದ ನಮ್ಮ ಯುಗದ ಪ್ರಮುಖ ಅದ್ವರ್ಯುವಾದ ಭಗವತ್ಪಾದ ಶ್ರೀ ಆದಿಶಂಕರರು ಅಮ್ಮನನ್ನು ಆಜನ್ಮ ಪರ್ಯಂತ ಹಲವು ರೂಪಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಕಂಡರು, ಹಲವು ಕಾರಣಿಕ ಸನ್ನಿಧಾನಗಳನ್ನು ಸೃಜಿಸಿ ಅಲ್ಲೆಲ್ಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು ಎಂಬುದನ್ನು ನಾವೆಲ್ಲಾ ಓದುತ್ತಾ ತಿಳಿದಿದ್ದೇವೆ, ತಿರುಗುತ್ತಾ ಅವರು ಸ್ಥಾಪಿಸಿದ ಮೂರ್ತಿಗಳಲ್ಲಿ ಅಮ್ಮನನ್ನು ದರ್ಶನಮಾಡಿದ್ದೇವೆ. ಆಚಾರ್ಯ ಶಂಕರರಷ್ಟು ಅಮ್ಮನನ್ನು ಭಜಿಸಿದ ಸನ್ಯಾಸಿಗಳು, ಸಂತರು ಭೂಮಿಯಲ್ಲಿ ಈಗ ಸಿಗುವುದು ವಿರಳ. ಅವರು ರಚಿಸಿದ ಸ್ತೋತ್ರಗಳು, ಸ್ತುತಿಗೀತೆಗಳು ಗೇಯವೂ ಮನೋಹರವೂ ಆಗಿವೆ ಎಂಬುದಕ್ಕೆ ನಿತ್ಯವೂ ನಾವು ರೇಡಿಯೋ, ಮಾಧ್ಯಮಗಳಲ್ಲಿ ಕೇಳುವ ಅವರ ಹಲವು ಕೃತಿಗಳೇ ಸಾಕ್ಷಿಯಾಗಿವೆ. ಪ್ರಾಸಬದ್ಧವಾಗಿ ಅನೇಕ ಸ್ತೋತ್ರಗಳನ್ನು ಅವರು ರಚಿಸುವಾಗ ಅವುಗಳಲ್ಲಿ ಜಗತ್ತಿನ ಭಾಷೆಗಳಿಗೆ ಮಾತೃಭಾಷೆಯಾದ ಸಂಸ್ಕೃತಭಾಷೆಯ ಉತ್ಕೃಷ್ಟ ಪದಗಳನ್ನು ಪೋಣಿಸಿದ ಶೈಲಿಯನ್ನು ನೋಡಿದರೆ ಮೈ ರೋಮಾಂಚನಗೊಳ್ಳುತ್ತದೆ.ಅಂತಹ ಕೃತಿಗಳನ್ನು ಅರ್ಥವಿಸಿಕೊಂಡು ಆಸ್ವಾದಿಸಿದರೆ ಮಾತ್ರ ಶಂಕರರು ಯಾಕೆ ಹೀಗೆ ಹೇಳಿದರು ಎಂಬುದು ತಿಳಿಯುತ್ತದೆಯೇ ವಿನಃ ಬರಿದೇ ಕಿವಿಗೆ ಮುದನೀಡುತ್ತದೆ ಎಂಬ ಕಾರಣಕ್ಕೆ ಸಿನಿಮಾ ಹಾಡುಗಳಂತೇ ಕೇಳಿಬಿಟ್ಟರೆ ಅವುಗಳ ಮೂಲ ರಸಾಭಿಜ್ಞತೆ ನಮಗೆ ನಿಲುಕುವುದಿಲ್ಲ. ಭಗವಾನ್ ಶ್ರೀಧರ ಸ್ವಾಮಿಗಳು ಒಮ್ಮೆ ಊರೊಂದಕ್ಕೆ ಭೇಟಿ ನೀಡಿ ಗುಡ್ಡದಲ್ಲಿ ನೆಲೆಸಿರುವ ಅಮ್ಮನನ್ನು ದರ್ಶಿಸುತ್ತಾರೆ. ಅಲ್ಲಿನ ಬಡ ಬ್ರಾಹ್ಮಣ ಅರ್ಚಕರಿಗೆ ಯಾವುದೇ ಸೌಲತ್ತು ಇಲ್ಲವಾಗಿ ಅಲ್ಲಿ ಪೂಜೋಪಕರಣಗಳ ಕೊರತೆ ಇದ್ದುದು ಶ್ರೀಧರರಿಗೆ ಕಾಣುತ್ತದೆ. [ತಾವು ಮೊದಲು ಉಪಯೋಗಿಸುತ್ತಿದ್ದ ಮರದ ಪಂಚಪಾತ್ರೆ-ಉದ್ದರಣೆಗಳನ್ನೇ ಇಟ್ಟುಕೊಂಡು]ತಮಗೆ ಯಾರೋ ಶ್ರೀಮಂತ ಭಕ್ತರು ಅರ್ಪಿಸಿದ್ದ ಬೆಳ್ಳಿಯ ಪೂಜೋಪಕರಣಗಳನ್ನು ಅಲ್ಲಿನ ಅರ್ಚಕರಿಗೆ ಬಳಸಲು ನೀಡಿ ಅಮ್ಮನಿಗೆ ಹೊಸ ಸೀರೆಯೊಂದನ್ನು ತರಿಸಿಕೊಟ್ಟು ಅಲಂಕರಿಸಿ ಪೂಜಿಸಿದ್ದನ್ನು ತಾವು ನೋಡುವಾಗ ವಿಗ್ರಹದ ಕಣ್ಣಲ್ಲಿ ಧಾರಾಕಾರವಾಗಿ ನೀರುಹರಿಯಿತಂತೆ! ಇದಕ್ಕೆ ದಾಖಲೆಗಳಿವೆ ಎಂದರಾದರೂ ನೀವು ನಂಬುತ್ತೀರೇನೋ. ಇಂಥಾ ಅಮ್ಮನನ್ನು ಶರತ್ ಕಾಲದಲ್ಲಿ ನವದಿನಗಳಲ್ಲಿ ನವದುರ್ಗೆಯರೂಪದಲ್ಲಿ, ಲಕ್ಷ್ಮೀ ಪಾರ್ವತೀ ಸರಸ್ವತೀ ರೂಪದಲ್ಲಿ ಆರಾಧಿಸುವುದನ್ನು ಭಾರತವಾಸಿಗಳು ಸಹಸ್ರಮಾನಗಳಿಂದ ಆಚರಿಸುತ್ತಿದ್ದಾರೆ. || ನವೋ ನವೋ ಭವತಿ ಜಾಯಮಾನಃ || ಜಾಯಮಾನ ಕಾಲಮಾನ ಬದಲಾದರೂ ಅಮ್ಮನನ್ನು ಮರೆಯಲು ಸಾಧ್ಯವಾಗುವುದಿಲ್ಲ ಮತ್ತು ಅದು ವಿಹಿತವೂ ಅಲ್ಲ. ನವರಾತ್ರಿ ಪ್ರತೀ ಸಂವತ್ಸರದಲ್ಲೂ ಮೂರು ಬಾರಿ ಬರುತ್ತದೆ, ಆದರೆ ಬರುವ ಮೂರು ನವರಾತ್ರಿಗಳಲ್ಲಿ ಎರಡು ಬಹಳ ವಿಶೇಷ, ಮೊದಲನೆಯದು ವಸಂತ ನವರಾತ್ರಿ ಮತ್ತು ಇನ್ನೊಂದು ಈ ಶರನ್ನವರಾತ್ರಿ. ಇಂತಹ ಪರ್ವಕಾಲದಲ್ಲೇ ಶ್ರೀರಾಮ ರಾವಣನನ್ನು ವಿಜಯದಶಮಿಯ ದಿನ ವಧಿಸಿದನಂತೆ, ಪಾಂಡವರು ಅಜ್ಞಾತವಾಸಕ್ಕೆ ಹೊರಡುವಾಗ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಮೂಟೆ ಕಟ್ಟಿ ಬನ್ನಿ ಮರಕ್ಕೆ ಎತ್ತರದಲ್ಲಿ ಬಿಗಿದಿಟ್ಟು ಹೋಗಿದ್ದು ವಿಜಯದಶಮಿಯ ದಿನ ತಮ್ಮ ಆಯುಧಗಳಿಗೆ ಆಶ್ರಯನೀಡಿ ಕಾಪಾಡಿದ ಬನ್ನಿ ಮರವನ್ನು ಪೂಜಿಸಿ ಆಯುಧಗಳನ್ನು ಮರಳಿ ಎತ್ತಿಕೊಂಡರಂತೆ. ಹೀಗೇ ಹಲವು ಕಾರ್ಯಗಳು ನಡೆದು ಸಾತ್ವಿಕ ಶಕ್ತಿ ವಿಜೃಂಭಿಸಿ ವಿಜಯ ಲಭಿಸಿದ ದಿನವನ್ನು ಇವತ್ತಿಗೂ ವಿಜಯದಶಮಿ ಎಂಬುದಾಗಿ ನಾವು ಕರೆಯುತ್ತೇವೆ, ಆಚರಿಸುತ್ತೇವೆ.ವೈದಿಕರೊಬ್ಬರ ಕೂಡ ನನ್ನ ಮಾತುಕತೆನಡೆದಿತ್ತು. ಕೆಲವು ವೈದಿಕರು ವೇದಪಾಠವನ್ನು ಗಿಣಿಪಾಠದಂತೇ ಕಂಠಪಾಠ ಮಾಡಿಕೊಂಡಿರುತ್ತಾರೆ, ಎಲ್ಲರಿಗೂ ವೇದಪಾಠಗಳ ಹುರುಳು ಕರಗತವಾಗಿರುವುದಿಲ್ಲ. ವೇದಪಾಠಗಳನ್ನು ಸಮರ್ಪಕವಾಗಿ ಅರ್ಥವಿಸಿಕೊಳ್ಳಲು ಶ್ರದ್ಧೆ ಮತ್ತು ಆಸಕ್ತಿ ಇವುಗಳ ಜೊತೆಗೆ ಸಂಸ್ಕೃತದ ಪ್ರೌಢಿಮೆಯ ಅಗತ್ಯತೆ ಇದೆ. ನಾನು ಮಾತನಾಡುತ್ತಿದ್ದುದು ಸ್ವಲ್ಪ ಗಂಧಗಾಳಿ ಇರುವ ವೈದಿಕರಲ್ಲಿ ಎಂಬುದನ್ನು ಮರೆಯುವಂತಿಲ್ಲ. ಮಾತುಕತೆಯ ಮಧ್ಯೆ ನಾನೊಂದು ಪ್ರಾಯೋಗಿಕ ಕಲ್ಪನೆಯನ್ನು ಪ್ರತಿಪಾದಿಸಿದ್ದೇನೆ. ಕೃಷ್ಣಯಜುರ್ವೇದದಲ್ಲಿ ದುರ್ಗಾ ಸೂಕ್ತ ಹೇಳಲ್ಪಟ್ಟಿದೆ. ಈ ದುರ್ಗಾ ಸೂಕ್ತದಲ್ಲಿ ಅಗ್ನಿಯನ್ನು ಧರಿಸಿದ ದೇವಿಯ ಬಗ್ಗೆ ತಿಳಿಸಿದ್ದಾರೆ. ಅಂಥಾ ಅಗ್ನಿಯನ್ನೇ ಉದರದಲ್ಲೂ ಕೈಯ್ಯಲ್ಲೂ ಜ್ವಲಿಸಿದ ಮಹತಾಯಿಯ ಈ ಸ್ತುತಿಯನ್ನು ಇಂದಿನ ನಮ್ಮ ವಾಹನಗಳನ್ನು ಚಲಾಯಿಸುವ ಪೂರ್ವ ಭಕ್ತಿಯಿಂದ ಪಠಿಸಿದರೆ/ ಅಥವಾ ಪುರೋಹಿತರ ದ್ವಾರಾ ಪಠಿಸುವಂತೇ ಕೇಳಿಕೊಂಡು ಪೂಜೆನಡೆಸಿದರೆ ಸಂಭವಿಸಬಹುದಾದ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತದೆ, ಮತ್ತು ಹಾಗೊಮ್ಮೆ ಸಂಭವಿಸಿದರೂ ಪ್ರಯಾಣಿಕರಿಗೆ, ಚಾಲಕರಿಗೆ ಯಾವುದೇ ಹಾನಿ ಸಂಭವಿಸಿದ ರೀತಿಯಲ್ಲಿ ಬಗೆಹರಿಯುತ್ತದೆ. ಇದು ಹಲವು ದಿನಗಳ ಅವಲೋಕನದಿಂದ ತಿಳಿದು ಬಂದಿದ್ದು ಈ ಬಗ್ಗೆ ಯಾರಾದರೂ ಸಂಶೋಧನೆ ಮಾಡುವವರಿದ್ದರೆ ಅವರಿಗೆ ಸ್ವಾಗತ ಬಯಸುತ್ತೇನೆ ! ಇದೇ ಕಾರಣಕ್ಕೂ ಇರಬಹುದು ಮಹಾನವಮಿಯ ದಿನ ಎಲ್ಲೆಡೆ ಯಂತ್ರಗಳ, ಆಯುಧಗಳ ಪೂಜೆ ನಡೆಯುತ್ತದೆ. ಪಂಚಭೂತಗಳನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯವಿಲ್ಲ. ಅವುಗಳ ಮೂಲವನ್ನು ಹುಡುಕುವುದೂ ನಮ್ಮಿಂದ ಆಗದ ಮಾತು. ಬಾವಿಯೊಂದನ್ನು ತೋಡಿದಾಗ ಕಾಣುವ ನೀರಿನ ಸೆಲೆಯೇ ಅಲ್ಲಿನ ಜಲಮೂಲ ಎಂದುಕೊಳ್ಳುತ್ತೇವೆಯೇ ಹೊರತು ಆ ನೀರಿನ ಸೆಲೆಯ ಆದಿ ಎಲ್ಲಿ ಎಂಬುದನ್ನು ಅಳೆಯಲು ನಾವು ಹೋಗುವುದೂ ಇಲ್ಲ, ಹೋದರೆ ಅದು ಮುಗಿಯುವ ಕೆಲಸವೂ ಅಲ್ಲ. ಕಣ್ಣಿಗೆ ಕಾಣುವ ನಾವು ನಿತ್ಯ ಉಪಯೋಗಿಸುವ ವಸ್ತು, ಪರಿಕರಗಳಲ್ಲಿ ಹೆಚ್ಚೇಕೆ ನಮ್ಮ ಈ ಭೌತಿಕ ಶರೀರದಲ್ಲೇ ಪಂಚಭೂತಗಳಿವೆ. ಆದರೆ ಆ ಶಕ್ತಿಗಳನ್ನು ನಾವು ಪರಿಗಣಿಸುವುದಿಲ್ಲ. ಶರೀರಕ್ಕೊಂದು ಕಾವು ಇರುತ್ತದೆ. ಆ ಶಾಖದಲ್ಲಿ ಏರಿಳಿತ ಇರುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆಯಾದರೂ ಆ ಶಾಖದ ಮೂಲ ಎಲ್ಲಿದೆ ಎಂಬುದು ನಮಗೆ ಅರ್ಥವಾಗಿದೆಯೇ ? ಇಲ್ಲ. ಆಹಾರ ಜೀರ್ಣಿಸುವ ಸಲುವಾಗಿ ಜಠರದಲ್ಲಿ ಸೃವಿಸುವ ದುರ್ಬಲ ಗಂಧಕಾಮ್ಲ ಅಗ್ನಿಯ ರೂಪವೇ ಆಗಿರುತ್ತದೆ; ತಿಂದ ಅನ್ನವನ್ನು ಕರಗಿಸುತ್ತದೆ. ವಿನಾಕಾರಣ ಅದೇ ದುರ್ಬಲ ಗಂಧಕಾಮ್ಲ ತೀಕ್ಷ್ಣವಾಗತೊಡಗಿ ಕೆಲವರಲ್ಲಿ ಹೊಟ್ಟೆ ಹುಣ್ಣಿಗೆ /ಕರುಳು ಹುಣ್ಣಿಗೆ ಕಾರಣವಾಗುತ್ತದೆ ! ಅಗ್ನಿಯಿಲ್ಲದೇ ನಮ್ಮ ಬದುಕು ಸಾಧ್ಯವಿಲ್ಲ. ನಿತ್ಯದ ಸೂರ್ಯನ ಬೆಳಕಿನಲ್ಲೂ ಅಗ್ನಿಯೇ ಅಡಗಿದೆ. ಹೀಗಿರುವಾಗ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಅಗ್ನಿಯೇ ಪ್ರಪಂಚದ ಅಳಿವು ಉಳಿವಿನಲ್ಲಿ ಪಾಲ್ಗೊಳ್ಳುತ್ತದೆ ಎಂಬುದು ತೋರಿಬರುವ ಸತ್ಯ. ಯಂತ್ರವೊಂದು ಚಾಲನೆಗೊಂಡಾಗ ಅಲ್ಲಿ ಶಾಖೋತ್ಫತ್ತಿಯಾಗುತ್ತದೆ. ಶಾಖೋತ್ಫತ್ತಿ ಜಾಸ್ತಿ ಇದ್ದಾಗ ಅಲ್ಲಿ ಅಗ್ನಿಯ ಆವಾಸ ಇದ್ದೇ ಇರುತ್ತದೆ--ಹೀಗೆ ಅರ್ಥವಿಸೋಣ ಪ್ರತಿಯೊಂದೂ ವಸ್ತುವಿನಲ್ಲೂ ಸುಪ್ತರೂಪದಲ್ಲಿ ಅಗ್ನಿ ಅಡಗಿದೆ! ಕರೆದರೆ ಜ್ವಲಿಸುತ್ತದೆ, ಇಲ್ಲವಾದರೆ ತಣ್ಣಗೆ ಕಾಣದಂತಿರುತ್ತದೆ. ಹೀಗಾಗಿ ಇರುವ ಎಲ್ಲಾ ಉಪಕರಣಗಳಿಗೆ ವಸ್ತುಗಳಿಗೆ ಪೂಜೆ ಸಲ್ಲುವುದು ಸಮರ್ಪಕವಾಗಿದೆ. ಅಗ್ನಿಯನ್ನೇ ಧರಿಸಿದ ಅಮ್ಮ ಅಲ್ಲೆಲ್ಲಾ ಇರುತ್ತಾಳೆ ಎಂಬ ಆಳವಾದ ಪರಿಕಲ್ಪನೆಯಿಂದ ಪೂರ್ವಜರು ಹಾಗೆ ಆರಂಭಿಸಿದರು; ಎಷ್ಟು ವೈಜ್ಞಾನಿಕವಲ್ಲವೇ ? ವರ್ಷಪೂರ್ತಿ ಅಮ್ಮ ನಮ್ಮ ಸೇವೆಗೆ ನಿಂತಿರುತ್ತಾಳೆ, ವರ್ಷದಲ್ಲಿ ಒಮ್ಮೆ ಅಮ್ಮನಿಗೆ ನಾವು ಗೌರವ ಸಲ್ಲಿಸಿ ಕೃತಜ್ಞರಾಗೋಣ ಎಂಬ ಗೌರವ ಸೂಚಕ ಪ್ರಕ್ರಿಯೆಯೇ ಆಯುಧಪೂಜೆ/ಮಹಾನವಮಿ ಪೂಜೆ. ಈಗೀಗ ನವರಾತ್ರಿಯಲ್ಲಿ ಆರಂಭದಲ್ಲೇ ಕಾರ್ಖಾನೆಗಳಲ್ಲಿ ಸ್ವಚ್ಛಗೊಳಿಸಿ, ಬಣ್ಣ-ಸುಣ್ಣ ಬಳಿದು, ಅಲಂಕರಿಸಿ, ಒಂದಷ್ಟು ಹೂವು ಹಣ್ಣು ಇಟ್ಟು ಪೂಜೆಮಾಡಿ, ಪಟಾಖಿ ಹಚ್ಚಿ, ಕುಂಬಳಕಾಯಿ ಒಡೆದು, ಸಿಹಿತಿಂದು ರಜಾ ಎಂದುಬಿಟ್ಟರೆ ವಾರದ ತನಕ ಯಾರೂ ಬರುವುದಿಲ್ಲ. ಆದರೆ ಈ ಪೊಜೆಯ ಮಹತ್ವದ ಅರಿವಿರುವ ಕೆಲವೇ ಜನ ಮಾತ್ರ ಮಹಾನವಮಿಯ ಆ ದಿನದಂದೇ ಯಂತ್ರಗಳನ್ನು ಪೂಜಿಸುತ್ತಾರೆ. ಯಾವಾಗಲೋ ಮಾಡುವುದನ್ನು ಯಾವಾಗ ಬೇಕಾದರೂ ಮಾಡುವ ಚಾಳಿಗೆ ಏನೂ ಹೇಳಲಾಗುವುದಿಲ್ಲ. ಆದರೆ ರೀತಿಯಲ್ಲಿ ಆಯುಧಪೂಜೆ ಮಾಡಬೇಕಾಗಿರುವುದು ಮಹಾನವಮಿಯಂದೇ. ಬಿಡಿ ಅಷ್ಟಾದರೂ ಮಾಡುತ್ತಾರಲ್ಲ, ಸುಮ್ಮನಾಗೋಣ. ಕೋಲ್ಕತಾದಲ್ಲಿ ಕಾಳಿಯಾಗಿ, ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿಯಾಗಿ, ಮೈಸೂರಿನಲ್ಲಿ ಚಾಮುಂಡಿಯಾಗಿ, ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ, ಶೃಂಗೇರಿಯಲ್ಲಿ ಶಾರದೆಯಾಗಿ ನೆಲೆಸಿದ ಅಮ್ಮ ಎಲ್ಲರನ್ನೂ ಹರಸಲಿ, ಜಗದ ಎಲ್ಲಾ ಮಕ್ಕಳಿಗೂ ಅವರ ಸದುದ್ದೇಶಪೂರಿತ ವಾಂಛಿತಗಳನ್ನು ದಯಪಾಲಿಸಿ ಕಷ್ಟದಲ್ಲಿರುವ ತನ್ನ ಮಕ್ಕಳನ್ನು ಪಾರುಮಾಡುವ ಕೃಪೆಮಾಡಲಿ ಎಂಬ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಶುಭ ಶರನ್ನವರಾತ್ರಿಯ, ವಿಜಯದಶಮಿಯ ಹಾರ್ದಿಕ ಶುಭಕಾಮನೆಗಳನ್ನು ತಮಗೆಲ್ಲಾ ಘೋಷಿಸುತ್ತಿದ್ದೇನೆ, ಶುಭಾಶಯಗಳು. ಅಯಿ ಸುಮನಃ ಸುಮನಃ ಸುಮನಃ
ಸುಮನಃ ಸುಮನೋಹರ ಕಾಂತಿಯುತೇ |
ಶ್ರಿತರಜನೀ ರಜನೀ ರಜನೀ
ರಜನೀ ರಜನೀಕರ ವಕ್ತ್ರವೃತೇ |
ಸುನಯನವಿಭ್ರಮರ ಭ್ರಮರ ಭ್ರಮರ
ಭ್ರಮರ ಭ್ರಮರಾಧಿಪತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ |
ಶರಣ್ಯೇ ತ್ರ್ಯಂಬಕೇ ದೇವೀ ನಾರಾಯಣಿ ನಮೋಸ್ತುತೇ ||
ಯಾ ದೇವಿ ಸರ್ವ ಭೂತೇಷು ಯಂತ್ರರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||
ಯಾ ದೇವಿ ಸರ್ವ ಭೂತೇಷು ಚಂಡೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||
ಯಾ ದೇವಿ ಸರ್ವ ಭೂತೇಷು ವಿದ್ಯಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||
ಯಾ ದೇವಿ ಸರ್ವ ಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||
ಯಾ ದೇವಿ ಸರ್ವ ಭೂತೇಷು ನಾನಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||
|| ಓಂ ಸ್ವಸ್ತಿ ||
Posted by ವಿ.ಆರ್.ಭಟ್ (vrbhat06@gmail.com) on October 06, 2011 12:01 PM· permalink
ಸುಟ್ಟ ರೆಕ್ಕೆಯ ಹೊತ್ತು
ಚಿಟ್ಟೆ ಅಳುತ್ತಿತ್ತು,
ಹಾರಲಾರದೆ ಕನಸ
ಕಟ್ಟಿಕ್ಕುತ್ತಿತ್ತು,
ನೂರಾರು ಬಣ್ಣಗಳ
ಹೂರಣದ ಚಹರಿಲ್ಲ,
ನಾನು ಹಾರುತ್ತಿದ್ದ
ಪಂತಂಗವೆಂಬ ಮೊಹರಿಲ್ಲ,
ಹೂವಿಂದೂವಿಗೆ ಜಿಗಿವ
ಕಸುವು ಕಳೆದಾಗಿದೆ,
ಗಾಳಿಗೆ ಮೈಯೊಡ್ಡುವ
ಸುಖವೂ ಬರಿದಾಗಿದೆ,
ಆಗ ಯಾರ ಹಂಗಿರದೇ
ಹಾರಿ ಹರಿದಾಡುತ್ತಿದ್ದ
ಪತಂಗವೀಗ, ತೆವಳುತ್ತ
ಸಾಗೊ ಹುಳವಾಗಿದೆ
Posted by ಪ್ರವರ ಕೆ ವಿ (pravarakumvee@gmail.com) on October 06, 2011 08:14 AM· permalink
ಈ ಸಲದ 'ಸುಧಾ'ದಲ್ಲಿ ಬಂದ ಕೆಲ ನಗೆ ಹನಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನನ್ನೊಂದಿಗೆ ನೀವೂ ನಕ್ಕು ಬಿಡಿ.ನಿಮಗೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
1) ಪುಟ್ಟನ ಪ್ರಶ್ನೆ;ಅಪ್ಪ,ಮೂರ್ಖ ಎಂದರೆ ಯಾರು?
ಅಪ್ಪ:ಯಾರು ಸರಳವಾಗಿ ಹೇಳೋದನ್ನು ತುಂಬಾ ಕ್ಲಿಷ್ಟವಾದ ಪದಗಳಿಂದ,ಉದ್ದುದ್ದ ವಾಕ್ಯ ಗಳಿಂದ ಒಂದಕ್ಕೊಂದು ಸಂಬಂಧವೇ ಇಲ್ಲದ ಪದಗಳಿಂದ ಹೇಳಿ ,ಕೇಳೋರನ್ನ ಗೊಂದಲಕ್ಕೀಡುಮಾಡಿ ,ಇವನನ್ನು ಯಾಕಪ್ಪಾ ಕೇಳಿದೆ ಅನಿಸುವಂತೆ ಮಾಡಿಬಿಡುತ್ತಾನೋ ಅವನನ್ನು ಮೂರ್ಖನೆಂದು ಕರೆಯಬಹುದು.ಅರ್ಥವಾಯಿತಾ?
ಪುಟ್ಟ:ಇಲ್ಲ!
2) ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ ಸೇರಬೇಕು!
3) ಮುಲ್ಲಾ ನಾಸಿರುದ್ದೀನ್ ರಸ್ತೆಯಲ್ಲಿ ಸತ್ತು ಹೋದ ತನ್ನ ಆನೆಯ ಪಕ್ಕ ಕುಳಿತು ಅಳುತ್ತಿದ್ದ.
ದಾರಿಹೋಕ:ಯಾಕಯ್ಯಾ ಅಳುತ್ತಿದ್ದೀ?
ಮುಲ್ಲಾ:ನನ್ನ ಅನೆ ಸತ್ತು ಹೋಗಿದೆ.
ದಾರಿಹೋಕ:ಅತ್ತರೆ ಸತ್ತ ಆನೆ ಬರುತ್ತದೆಯೇ?
ಮುಲ್ಲಾ:ಅನೆ ಬರುವುದಿಲ್ಲ.ಆದರೆ ಸತ್ತ ಆನೆಯನ್ನು ಹೂಳಲು ಗುಂಡಿ ತೋಡಲು ಯಾರಾದರೂ ನಿನ್ನಂತಹವರು ಸಹಾಯಕ್ಕೆ ಬರಬಹುದೆಂದು ಅಳುತ್ತಿದ್ದೇನೆ.
Posted by Dr.D.T.Krishna Murthy. (noreply@blogger.com) on October 05, 2011 10:52 AM· permalink
"ಹುಡುಗಿಯರ ವಯಸ್ಸು ಕೇಳಬಾರದು ಅಂತಾರೆ.."
ಅದಕ್ಕೇ ನಾವು ಅವರ Date of Birth ಕೇಳ್ತೀವಿ...
ಆದರೂ ಈ ಹಿರಿಯರೇ ಹೀಗೇ.. ಹೇಳಿದ್ ಮಾತ್ ಕೇಳೋಲ್ಲ ಅಂತಾ ನಮ್ಮನ್ನು ಮೂದಲಿಸ್ತಾರೆ..
Something is Wrong...
Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on October 05, 2011 07:21 AM· permalink
ದಿನ ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ, ಅದು ಮನುಷ್ಯನ ಹೊಸ ಹುಟ್ಟು ಅಂತಾರೆ.
ಇಂತಹ ಹೊಸ ಹುಟ್ಟುಗಳ ವರ್ಷಾಂತ್ಯದ ನೆನಪಿಗೆ ಹುಟ್ಟು ಹಬ್ಬ ಎನ್ನಬಹುದು.
-ಯಳವತ್ತಿ
Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on October 05, 2011 05:03 AM· permalink
ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು. ಇಂಥ ಅರೋಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು.
ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು. ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ವಿವರಿಸಿಬಿಡುತ್ತೇನೆ ಬಿಡಿ..
ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ. ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್ ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ. ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಸೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ್ಅ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ! ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಭಂದಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು. ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು "ಇದರಿಂದೇನು ಲಾಭವಿಲ್ಲ, ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ? ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..

ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ. ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ ೧೦% ಗಿಳಿಯುತ್ತದೆ.
ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.
ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.
ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ. ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ.
ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು.
ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ.
ಮತ್ತೇನು ಮಾಡಬಹುದು ಅಂತ ಬೇರ್ಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ. ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು. ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ, ನೂರು ಮನೆಗಳಿರುವ ಅಪಾರ್ಟ್ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.
ಮತ್ತೊಂದು ವಿಚಾರ್ಅವಿದೆ. ಅದು ಜಾಹಿರಾತಿಗೆ ಸಂಭಂದಿಸಿದ್ದು. ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ. ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ. ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್! ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ! ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ. ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ. ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.
ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್ ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ, ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರಾ, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ? ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ?
ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರ್ಅನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ.
ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.
ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾಧ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ "ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ"........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?
ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.
ಮತ್ತೊಂದು ವಿಚಾರವೇನೆಂದರೆ, ಈ ಲೇಖನದಲ್ಲಿರುವ ಕೆಲವು ಅಂಶಗಳನ್ನು ತುಂಬಾ ನೇರವಾಗಿ ಬರೆದಿರುವುದರಿಂದ ನನ್ನ ಪತ್ರಕರ್ತ ಗೆಳೆಯರು, ಪತ್ರಿಕೆಯಲ್ಲಿ ಕೆಲಸಮಾಡುವ ಡೆಸ್ಕ್ ಆಪರೇಟರುಗಳು, ಸಂಪಾದಕರು ಒಪ್ಪದಿರಬಹುದು. ಇಲ್ಲಿ ಇವೆರೆಲ್ಲ ಕೆಟ್ಟವರು ಅಂತ ಹೇಳಲು ಪ್ರಯತ್ನಿಸಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶವೂ ನನಗಿಲ್ಲ. ನಮ್ಮ ಮುಂಜಾನೆ ಸತ್ಯದ ನೋವುಗಳನ್ನು ಹೊರಜಗತ್ತಿಗೆ ತೋರಿಸಲು ಪ್ರಯತ್ನಿಸಿದ್ದೇನೆ. ಮತ್ತೆ ಸಮೂಹ ಸನ್ನಿ ಎನ್ನುವ ಪದಕ್ಕೂ ಚಳುವಳಿಗೂ ಹೋಲಿಸಿ ಇಲ್ಲಿ ಬರೆದಿರುವುದು ತಪ್ಪು ಅಂತ ನನಗೂ ಗೊತ್ತು. ಆದಕ್ಕಾಗಿ ಅದನ್ನು "ಆರೋಗ್ಯಕರ ಸಮೂಹ ಸನ್ನಿ" ಎಂದು ಹೇಳಿದ್ದೇನೆ. ನಾನು ಬರೆಯುವ ಸಮಯದಲ್ಲಿ ನನಗೆ ಹೊಳೆದ ಪದ ಇದೊಂದೆ. ಆ ಕಾರಣಕ್ಕೆ ಅದನ್ನೇ ಹೈಲೈಟ್ ಮಾಡಿ ಲೇಖನದ ದಿಕ್ಕು ತಪ್ಪಿಸಬಾರದಾಗಿ ವಿನಂತಿ. ಈ ಪದಕ್ಕಿಂತ ಉತ್ತಮ ಪದವಿದ್ದಲ್ಲಿ ತಿಳಿಸಿದರೆ ಸ್ವಾಗತಿಸುತ್ತೇನೆ ಮತ್ತು ನಾನು ಕಲಿತಂತಾಗುತ್ತದೆ.
ಮತ್ತೆ ಅನಾಮಧೇಯ ನಾಮದಲ್ಲಿ ವಿತಂಡವಾದ, ಇತ್ಯಾದಿ comments ನೀಡಿದರೆ ಅದಕ್ಕೆ ಉತ್ತರಿಸದೆ ಡಿಲಿಟ್ ಮಾಡಲಾಗುವುದು. ಇಲ್ಲಿರುವ ವಿಚಾರಗಳಿಗಾಗಿ ನಿಮ್ಮ ಪ್ರತಿಕ್ರಿಯೆಗಳು ಆರೋಗ್ಯಕರವಾಗಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಎಲ್ಲರಿಂದ ಎಲ್ಲರೂ ಕಲಿಯಲು ಅವಕಾಶವಾಗುತ್ತದೆ.
ಈ ಲೇಖನ "ಸಂಪಾದಕೀಯ" ಬ್ಲಾಗಿನಲ್ಲೂ ಪ್ರಕಟವಾಗಿದೆ ಬೇಕಿದ್ದವರು ಅಲ್ಲಿಯೂ ಓದಬಹುದು.
http://sampadakeeya.blogspot.com/2011/10/blog-post.html#comments
ಚಿತ್ರಗಳು ಮತ್ತು ಲೇಖನ
ಶಿವು.ಕೆ
Posted by shivu.k (shivuu.k@gmail.com) on October 04, 2011 05:40 PM· permalink

ನೀತಿ..ಪ್ರೀತಿ..
ಅದೇ ಕಥೆಯನ್ನು ಮುಂದುವರಿಸಿ ಬರೆದಿದ್ದೇನೆ...
ನಾನು ಪ್ರಶ್ನೆ ಕೇಳುವುದು ಸಹಜ......!!!
ಯಾಕೆ ಅಂದರೆ.... ನಾನು ಜೀವನದಲ್ಲಿ ಎಂದೂ ಇವರನ್ನ ನೋಡೇ ಇಲ್ಲ, ಇವರ ಬಗ್ಗೆ ಕೇಳಿಲ್ಲ, ಬಹಳ ದಿನಗಳ ಪರಿಚಯವಿಲ್ಲ ಅಥವಾ ನಮ್ಮ ನೆಂಟರೂ ಅಲ್ಲ... ದಿಢೀರ್ ಎಂದು ೨ ತಿಂಗಳಲ್ಲಿ ನೋಡಿದ್ದು ಆಯ್ತು ಮದುವೆನೂ ಆಯ್ತು ಈ ಎರಡು ತಿಂಗಳಲ್ಲಿ ಗಂಡನಾಗುವನನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ......
ಆ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಹೂ ಎನ್ನಲಿ.... ಇಲ್ಲವಾ ಖಡಾಖಂಡಿತವಾಗಿ ಇಲ್ಲ ಎಂದು ವಾದಿಸಿ ನನ್ನನ್ನ ಗೆಲ್ಲ ಬೇಕಿತ್ತು ಅದು ಬಿಟ್ಟು.... ಕೆಟ್ಟ ಕೋಪ ತೋರಿಸಿ ಮುಖ ತಿರುಗಿಸಿ ಮಲಗುವುದೇನು...?????
ಇವರೊಬ್ಬರಿಗೇ ಕೋಪ ಬರುವುದ.... ನನಗೂ ಬರುತ್ತೆ..... ನನ್ನಲ್ಲೂ ಸ್ವಾಭಿಮಾನವೆನ್ನುವುದು ಇದೆ......
ಮದುವೆಯಾದರೆ ಈ ತರಹ ಕದನ, ಕೋಪ ಎಲ್ಲಾ ಇರುತ್ತಾ...ಅಬ್ಬಾ!!! ಭಯವಾಗುತ್ತೆ... ಅಪ್ಪ ಅಮ್ಮನಿಗೆ ಹೇಳಿದ್ದೆ, ಪ್ರೀತಿಸಿ ಮದುವೆವಾಗತೀನಿ ಎಂದು ಆದರೆ ಅಪ್ಪ,ಅಮ್ಮ ಅದೇ ಓಭಿರಾಯನ ಕಾಲದಲ್ಲೇ ಇದ್ದಾರೆ.... ಜಾತಿ,ಮತ, ಹಣ, ಅಂತಸ್ತು ಎಂದು ಏನೋ ಮನೆಯವರೆಲ್ಲಾ ನೋಡಿ ಮಾಡಿದ ಮದುವೆ ಸಂಬಂಧ ಭದ್ರವಾಗಿರುತ್ತೆ ಎನ್ನೋ ಇರಾದೆ ಇವರದು...... ಏನೋ ನನಗೆ ನನ್ನ ಜೀವನವೇ ಗೊಂದಲದಲ್ಲಿದೆ... ಈಗಲೇ ನನ್ನ ಗಂಡನಿಗೆ ಇಷ್ಟು ಕೋಪ... ಮುಂದೆ ಹೇಗೋ ದೇವರೇ ಬಲ್ಲ..!!!!!!!! ಈ ರೀತಿ ಯೋಚನೆ ಆ ಹೆಣ್ಣು ಮಗಳದು...
ಮೌನ ಆವರಿಸಿದೆ ಆ ಬದಿ ಅವನು ಈ ಬದಿ ಇವಳು...... ನೀರವ ಮೌನ .... ಇಲ್ಲಿ ತಪ್ಪುನೆಪ್ಪುಗಳ ಪ್ರಶ್ನೆ ಇಲ್ಲ...... ಹುಸಿಮುನಿಸು ಮನೆ ಮಾಡಿದೆ.... ಆ ಮುನಿಸಲ್ಲೇ ಕಣ್ಣ ಕಂಬನಿಗಳು ತಲೆದಿಂಬನ್ನ ಒದ್ದೆಗೊಳಿಸುತ್ತಿತ್ತು ಇದು "ಮೌನದಿ ಕಣ್ಣೀರ ರಾಗ".........
--
ತನ್ನೆಲ್ಲಾ ಆಸೆ, ಪ್ರೀತಿ, ಬದುಕು, ನಂಬಿಕೆ, ನನ್ನವನೇ ಇವನು.. ಇವಳು ನನ್ನವಳು ಎಂದು ಒಬರಿಗೊಬ್ಬರಿದ್ದೇವೆ..... ಒಲವಿನ ಆಸರೆಯಾಗಿ ಹೊಸ ಬದುಕು ಪ್ರಾರಂಭಿಸುವ ದಿನ ಈ ಮೊದಲ ರಾತ್ರಿ ಇಂತಹದರಲ್ಲಿ ಎಲ್ಲವೂ ಅನುಮಾನದಲ್ಲಿ ದೂಡಿಬಿಡುತ್ತಾಳಲ್ಲ ಇವಳು... ಕನಸು ಕಟ್ಟಿದ್ದ ಮೊದಲ ರಾತ್ರಿ ಕನಸಾಗೇ ಉಳಿದು ಬಿಟ್ಟಂತಾಯ್ತು............ -ಈ ರೀತಿ ಇರಾದೆ ಗಂಡನದು
ಮತ್ತದೇ ನೀರವ ಮೌನ ಮಗ್ಗುಲು ಬದಲಿಸದೇ ಯೋಚಿಸಿದ್ದವನಿಗೆ ನಿದ್ರೆ ಆವರಿಸಿತ್ತು....
ಮಧ್ಯರಾತ್ರಿ....
ಏಕೋ ಗಂಟಲು ಒಣಗಿದೆ.... ಗಂಡನ ಮೇಲಿನ ಕೋಪ...ಕಣ್ಣಲ್ಲಿ ನೀರನ್ನು ತರಿಸಿತ್ತು... ಕಣ್ಣಲ್ಲಿ ಹೋದ ನೀರು ಬಾಯಾರಿಕೆಯನ್ನ ಎಳೆತಂದಿತು.. ಅಯ್ಯೋ ದೇವರೆ.. ಈಗಲೇ ಗಂಟಲು ಒಣಗಬೇಕೆ.... ಅತ್ತು ಅತ್ತು... ಗಂಟಲ್ಲಿಂದ ಕೆಮ್ಮು ಪಕ್ಕದಲ್ಲಿದ್ದ ಗಂಡನನ್ನ ಎಬ್ಬಿಸಿತು.....
ತಟ್ಟನೆ ಎದ್ದವನು ಒಂದು ಲೋಟದಲ್ಲಿ ನೀರನ್ನಿಡಿದು ಕೈಚಾಚಿದನು... ಕುಳಿತು ಕೆಮ್ಮುತ್ತಿದ್ದವಳು ಮಾತನಾಡಲಿಲ್ಲ... ಬೇಡವೆಂಬಂತೆ ಮುಖ ತಿರುಗಿಸಿದಳು... ಆದರು ಅವಳ ಮುಖ ತಿರುಗಿಸಿ ನೀರನ್ನ ಇವನೇ ಕುಡಿಸಿದ.... ಅವನ ಆ ಸೇವೆ ಇಷ್ಟವಾಯ್ತು.. ನನ್ನ ಮೇಲೂ ಕಾಳಜಿ ಇದೆ ಎನಿಸಿತು... ಆದರು ಯಾಕೋ ಆ ಕೋಪವಿಡಿಸಲಿಲ್ಲ....ಎಂದೆಲ್ಲಾ ಮನಸಿನಲ್ಲಂದುಕೊಂಡಳು
ಲೋಟದಿಂದ ನೀರು ಕುಡಿಸುತ್ತ ಅವಳ ಸೌಂದರ್ಯವನ್ನೇ ಸವಿಯಬೇಕೆನಿಸಿತು..... ಆದರೂ ಅವಳು ನನ್ನನೇ ಪ್ರಶ್ನಿಸಿದಳು... ನನ್ಗೆ ಕೋಪ ಬಂದಿದೆ ಈ ರೀತಿ ಅನುಮಾನ ಪಡುತ್ತಾಳಲ್ಲ ನನ್ನ ಮೇಲೆ... ಛೇ..!! ಬಿಡು ಮಾತ್ಯಾಕೆ ಈಗ..ಮಾತನಾಡೋದು ಎಂದುಕೊಂಡು ಮಲಗಿದನು....
ಗಂಟಲಿಗೆ ಧಣಿವಾರಿತು.... ಆದರೆ ಕೋಪ ಶಮನವಾಗಲಿಲ್ಲ..... ಮಬ್ಬು ಬೆಳಕಲ್ಲಿ ಒಬ್ಬರ ಮುಖ ಒಬ್ಬರು ನೋಡಿದರು ಮೌನ ಕರಗಿಲ್ಲ.... ಅವನ ಕಣ್ಣ ಭಾಷೆ ಅರ್ಥ ಮಾಡಿಕೊಳ್ಳಲಾಗಿಲ್ಲ ಇವಳಿಗೆ...... ಪ್ರೀತಿ ಇದೆ... ಅದನ್ನ ಕೋಪದಲ್ಲಿ ಕಳೆಯೋ ಮನಸ್ಸಿಲ್ಲ ಇಬ್ಬರಿಗೂ....... ಆದರೂ ಏನೋ ಸ್ವಾಭಿಮಾನ....
ಮುಖ ತಿರುವಿ ಮಲಗಿದ್ದ ಅವಳೀಗ ಗಂಡನತ್ತ ಮುಖ ಮಾಡಿ ಮಲಗಿದ್ದಳು ಆದರೆ ಅಂತರ ಮಾತ್ರ ಮುಂದುವರಿಸಿದ್ದಳು......
ಇತ್ತ ಇವನೂ ಅವಳ ಮೌನ ಮುರಿಯಲು ಸಾಧ್ಯವಾಗಲಿಲ್ಲ ತನ್ನಲಿದ್ದ ಕೋಪ ಸಹ ಕಡಿಮೆಯಾಗಿರಲಿಲ್ಲ..... ಮುಖ ತಿರುಗಿಸಿ ಮಲಗಿಬಿಟ್ಟಿದ್ದ...... ಒಂದೇ ಮಗ್ಗುಲಲಿ ಮಲಗಿದ್ದವಗೆ ಕೈ ಹಿಡಿದಂತೆ ನೋವಾಗಿದೆ......... ಇತ್ತ ಒರಳುತ್ತಾನೆ.... ಒಮ್ಮೆಲೇ ಬದಲಿಸಿದ ಕೈ ಪಕ್ಕದಲ್ಲೇ ಇದ್ದ ಮೃದು ತೋಳು ಅವನನ್ನ ಆಕರ್ಷಿಸಿದೆ........ ಮೆಲ್ಲಗೆ ನೇವರಿಸಿ.....ತಲೆದಡವಿದೊಡೆ....... ಅದೇನೋ ಮೋಹಕ ಭಾವ ಮನದಲ್ಲೇ ಅರಳುತ್ತದೆ.....
ಮಬ್ಬುಗತ್ತಲಲಿ ಕಣ್ಣು ಬಿಟ್ಟವಗೆ ಆ ಕೆಂಬಣ್ಣದ ತುಟಿಗಳು ಆಹ್ವಾನಿಸಿವೆ...... ಅವಳ ಮುಗ್ಧ ಮೊಗ ಅವಳತ್ತ ಸೆಳೆದಿದೆ......ಇತ್ತ ನಿದ್ರೆಯಲ್ಲಿರುವಂತೆ ನಟಿಸುತ್ತಿದ್ದವಳಿಗೆ... ಅವನ ಘಾಡ ಚುಂಬನ ಅವನನ್ನೇ ಬಾಚಿ ತಬ್ಬುವಂತೆ ಮಾಡಿದೆ...... ಆ ಕತ್ತಲ ರಾತ್ರಿ... ಇಬ್ಬರೂ ಮಾತಿಲ್ಲ ಕಥೆ ಇಲ್ಲ.... ನೀರವ ಮೌನದಲ್ಲೇ ಒಬ್ಬರಿಗೊಬ್ಬರು ಕ್ಷಮಾಪಣೆ ಸಲ್ಲಿಸಿ.........ಮಿಲನ ಮಹೋತ್ಸವದಲ್ಲಿ ತೇಲಿಬಿಡುತ್ತಾರೆ.... ಈ ಸಮ್ಮಿಲನ ಅವರಿಬ್ಬರಿಗೂ ಅರಿವೇ ಇಲ್ಲದೇ ಒಂದು ಮಾಡಿಸಿಬಿಟ್ಟಿದೆ...
ಒಬ್ಬರಿಗೊಬ್ಬರ ಪ್ರಶ್ನೆ ಅದು ಘಾಡವಾದ ವಿಷಯವೇನಲ್ಲ....... ಮಾತು ಸಹಜ... ಪ್ರೀತಿಯ ಬಂಧನ ಎಲ್ಲ ತಪ್ಪು ಮಾತುಗಳನ್ನ ಮುಚ್ಚಾಕಿ ಬಿಡುವಂತೆ ಎರಡು ಜೀವಗಳು ಪ್ರೀತಿಯಲ್ಲಿ ಇಬ್ಬರೂ ಬಂಧಿಯಾಗಿದ್ದರು......
ಆ ಕೋಪದ ರಾತ್ರಿ ಇಬ್ಬರಿಗೂ ಅರಿವಿಲ್ಲದೇ ಒಂದು ಮಾಡಿಸಿತ್ತು.........ಕೋಪ, ಮುನಿಸು.... ಮುಖ ತಿರುಗಿಸಿ ಮಲಗಿದ್ದೂ ಯಾವೊಂದು ವ್ಯತ್ಯಾಸ ಅರಿಯದೇ ಬೆಳಗಿನ ಸೂರ್ಯ ಕಿಟಕಿಯಲ್ಲಿ ನಾಚುತ್ತ ಇವರಿಬ್ಬರ ಮುಖಕ್ಕೆ ಬೆಳಕು ಚೆಲ್ಲಿದ್ದ......
ರೀತಿ: ಈ ರೀತಿನು ಇರುತ್ತಾರೆ ಜನ ಎಂಬುದು ಪ್ರಕಾಶಣ್ಣನ ಕಥೆ
ನೀತಿ: ಗಂಡ ಹೆಂಡಿರು ಜಗಳ ತಿಂದು ಮಲಗೋವರೆಗಷ್ಟೇ
ಪ್ರೀತಿ: ಗಂಡು ಹೆಣ್ಣು ಪ್ರೀತಿಯಲ್ಲಿ ಎಲ್ಲವನ್ನೂ ಮರೆಮಾಚಬಹುದು...
ತಪ್ಪುಗಳಿದ್ದರೆ ಕ್ಷಮೆ ಇರಲಿ...
Posted by ಮನಸು (noreply@blogger.com) on October 04, 2011 12:16 PM· permalink
ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?
ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!
ಪುರಂದರದಾಸರ ಜನಪ್ರಿಯ ಗೀತೆಯಿದು. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಅದೇ ತರಹ, ಮನುಷ್ಯನ ಮನಸ್ಸೂ ಸಹ ಮತ್ತೆ ಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ. ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದು ಹೋದ ನಾಯಿಗೆ ಒನಕೆಯ ಅಥವಾ ಸವಟಿನ ಪೆಟ್ಟು ತಪ್ಪಿದ್ದಲ್ಲ. ಅದೇ ರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ಸಹ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ! ಇದು ದಾಸರ ಸಂದೇಶ. ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಮನುಷ್ಯನನ್ನೇ ಸಂಪೂರ್ಣವಾಗಿ ದೂರುವಂತಿಲ್ಲ. ಮನುಷ್ಯನು ಭಗವಂತನ ಸೂತ್ರದ ಗೊಂಬೆ. ಆದುದರಿಂದ ಪುರಂದರ ವಿಠ್ಠಲನು ತೋರಿದ ಆಟಗಳನ್ನು ಈ ಗೊಂಬೆ ಆಡುತ್ತಿದೆ ಎನ್ನುವದು ದಾಸರು ಕೊಡುವ ಸಮಾಧಾನ.
ಪುರಂದರದಾಸರ ಗೀತೆಗಳೆಲ್ಲವೂ ಸರಳ ಗೀತೆಗಳು. ಅವುಗಳಲ್ಲಿಯ ಸಂದೇಶ ಅಥವಾ ನೀತಿಬೋಧೆ ಸರಳವಾಗಿಯೇ ಇರುತ್ತದೆ. ಆದರೆ ‘ಡೊಂಕು ಬಾಲದ ನಾಯಕರೆ’ ಎನ್ನುವ ಈ ಗೀತೆಯಲ್ಲಿ ಒಂದು ಸ್ವಾರಸ್ಯಕರವಾದ ಶ್ಲೇಷೆ ಇದೆ. ಅದೇ ಈ ಗೀತೆಗೆ ವಿಶೇಷ ಅರ್ಥವನ್ನು ಕೊಡಲು ಕಾರಣವಾಗಿದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು:
“ನಾಯಕಾ, ನೀನು ವೈರಾಗ್ಯವೃತ್ತಿಯನ್ನು ತಾಳಿ ದಾಸನಾದೆ ಎಂದು ಹೇಳಿಕೊಳ್ಳುತ್ತೀಯಾ. ಆದರೆ ನಿನ್ನ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಇದೆ. ಮತ್ತೆ ಮತ್ತೆ ನಿನ್ನ ಮನಸ್ಸು ಸಂಸಾರದ ಸುಖಗಳ ಕಡೆಗೆ ಹರಿಯುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ನೀನು ಮತ್ತೆ ಮತ್ತೆ ಪೆಟ್ಟು ತಿನ್ನುತ್ತೀಯಾ!
ಭಗವಂತಾ, ವಿಠ್ಠಲಾ! ನನ್ನ ಮನಸ್ಸಿನ ಆಟಗಳೆಲ್ಲಕ್ಕೂ ನೀನೆ ಹೊಣೆ. ನೀನು ಆಡಿಸಿದಂತೆ ನಾನು ಆಡುತ್ತಿದ್ದೇನೆ.”
ಆದುದರಿಂದ ‘ನಾಯಕರೆ’ ಎಂದು ಹೇಳುವ ಮೂಲಕ, ದಾಸರು ಈ ಹಾಡನ್ನು ಕೇವಲ ಪರರಿಗೆ ನೀತಿಬೋಧೆಯನ್ನು ಮಾಡಲು ಹಾಡಿಲ್ಲ, ತಮಗೆ ತಾವೇ ಆತ್ಮಬೋಧೆಗಾಗಿ ಹಾಡಿದ್ದಾರೆ ಎಂದೆನಿಸುವದು.
ಪುರಂದರದಾಸರ ಪರಿವರ್ತನೆಯ ಬಗೆಗಿರುವ ಜನಜನಿತ ಕತೆಯಿಂದಾಗಿ ಅವರ ವ್ಯಕ್ತಿತ್ವದ ಅನೇಕ ಆಯಾಮಗಳು ಮಸುಕಾಗಿ ಹೋಗಿವೆ. ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗುವದಕ್ಕಿಂತ ಮೊದಲಿನಿಂದಲೂ ಸಂಗೀತವಿದ್ವಾಂಸರು, ಅಧ್ಯಯನಶೀಲರು, ಬಹುಶ್ರುತರು ಹಾಗು ದೇವಭಕ್ತರು ಆಗಿರಬೇಕು. ಅವರ ಕೀರ್ತನೆಗಳಲ್ಲಿ ಬರುವ ಕೆಲವು ಸಾಲುಗಳನ್ನು ಗಮನಿಸಿರಿ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಹೂವ ತರುವರ ಮನೆಗೆ ಹುಲ್ಲ ತರುವ’, ‘ಉದರವೈರಾಗ್ಯವಿದು’,‘ದಾರಿ ಯಾವುದಯ್ಯಾ ವೈಕುಂಠಕೆ’, ‘ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ’ ಇಂತಹ ಅನೇಕ ಸಾಲುಗಳಲ್ಲಿ, ಗೀತೆಗಳಲ್ಲಿ ದಾಸರ ಸಾಹಿತ್ಯಪ್ರತಿಭೆ ವ್ಯಕ್ತವಾಗುತ್ತದೆ.
ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತಿದೆ. ದಾಸರಾಗುವ ಮೊದಲೂ ಸಹ ಅವರಿಗೆ ಸಾಹಿತ್ಯದಲ್ಲಿ ಹಾಗು ಸಂಗೀತದಲ್ಲಿ ಪರಿಣತಿ ಇರಲೇ ಬೇಕಲ್ಲವೆ? ಇಲ್ಲದೆ ಹೋದರೆ, ಅವರು ತಮ್ಮ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ದಾಸರಾಗುವ ಪೂರ್ವದಲ್ಲಿ ಶ್ರೀನಿವಾಸ ನಾಯಕರ ಐಹಿಕ ಆಸೆಗಳು ಏನೇ ಇರಲಿ, ಈ ಲೌಕಿಕಕ್ಕೆ ಅವರ ಮನಸ್ಸು ಎಷ್ಟೇ ಕಟ್ಟು ಬಿದ್ದಿರಲಿ, ತಮ್ಮ ಮನೆಯಲ್ಲಿ, ತಮ್ಮ ಮನದಲ್ಲಿ ಅವರು ದೇವರನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಿರಬಹುದು. ಆ ಸಮಯದಲ್ಲಿ ಸಂಗೀತದ ಮೂಲಕ ದೇವರನ್ನು ಭಜಿಸುತ್ತಿರಬಹುದು. ಅವರ ಕೀರ್ತನೆಯೊಂದನ್ನು ಗಮನಿಸಿದರೆ ಅವರಿಗಿರುವ ಅಪಾರ ಸಂಗೀತಜ್ಞಾನದ ಕಲ್ಪನೆಯಾಗುತ್ತದೆ:
“ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಸಿ
ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಘಣ ಘಣ್ ಘಣಿರೆಂದು ಹಿಡಿದು ಕುಣಿಸುವರು”
ಅವರು ಲೌಕಿಕರಿದ್ದಾಗ ದೇವರ ಪೂಜೆಯನ್ನು ಬಲು ಆಡಂಬರದಿಂದ ನೆರವೇರಿಸುತ್ತಿರಬಹುದು. ಜ್ಞಾನೋದಯವಾದ ಬಳಿಕ ಈ ಆಡಂಬರದ ವ್ಯರ್ಥತೆಯನ್ನು ಅರಿತ ಅವರು ‘ಉದರವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ಹಾಡಿರಬಹುದು. ಅಷ್ಟೇ ಏಕೆ, ತಾವೇ ಮೊದಲು ಮಾಡುತ್ತಿರಬಹುದಾದ ‘ಮಡಿ ಆಚರಣೆ’ ವ್ಯರ್ಥವೆಂದು ಅರಿತುಕೊಂಡೇ ಅವರು ‘ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ’ ಎಂದು ‘ಮಡಿವಂತ’ರನ್ನು ಹೀಯಾಳಿಸಿರಬಹುದು.
ಈ ಆಡಂಬರ, ಈ ಮಡಿ ‘ಈ ಆನೆ, ಕುದುರೆ, ಒಂಟೆ ಎಲ್ಲಾ’ ಲೊಳಲೊಟ್ಟೆ ಎಂದು ಶ್ರೀನಿವಾಸ ನಾಯಕರಿಗೆ ಅರಿವಾದದ್ದು ಹೇಗೆ? ಜನಪ್ರಿಯ ಕತೆಯು ಹೇಳುವಂತೆ ಶ್ರೀನಿವಾಸ ನಾಯಕರು ಜಿಪುಣಾಗ್ರೇಸರರು. ತಮ್ಮ ಹೆಂಡತಿಯು ತನ್ನ ಮೂಗುತಿಯನ್ನು ದಾನವಾಗಿ ಕೊಟ್ಟಿರಬಹುದು ಎನ್ನುವ ಸಂದೇಹದಿಂದ ಅವಳನ್ನು ಪರೀಕ್ಷಿಸುತ್ತಾರೆ. ವಿಷ ತೆಗೆದುಕೊಳ್ಳಲು ಹೋದ ಅವಳಿಗೆ ವಿಷದ ಬಟ್ಟಲಿನಲ್ಲಿ ಮೂಗುತಿ ದೊರೆತುದರಿಂದ, ಆ ವಿಷಮ ಸನ್ನಿವೇಷದಿಂದ ಅವಳು ಪಾರಾಗುತ್ತಾಳೆ. ಇದು ನಾಯಕರ ಮನಃಪರಿವರ್ತನೆಗೆ ಕಾರಣವಾಗುತ್ತದೆ. ಈ ಪವಾಡವು ನಿಜವೆ? ನಿಜವಾಗಿಯೂ ಏನಾಯಿತು ಎನ್ನುವದನ್ನು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಇದರ ಸಂಭಾವ್ಯತೆಗಳನ್ನು ಹೀಗೆ ಊಹಿಸಬಹುದು:
(೧) ಇದು ನಿಜವಾಗಿಯೂ ಆದಂತಹ ಪವಾಡ.
(೨) ಮನೋಚಲನ ಶಕ್ತಿ ಎನ್ನುವದು ಒಂದು ಇದೆ ಎನ್ನುವದನ್ನು ಪರಾಮನೋವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೂಗುತಿಯು ಬಟ್ಟಲಿನಲ್ಲಿ ಬಂದಿದ್ದು ಹಾಗು ಮರಳಿ ನಾಯಕರ ತಿಜೋರಿಗೆ ಹೋಗಿದ್ದು ಅವರ ಸಾಧ್ವಿ ಹೆಂಡತಿಯ ಮನೋಚಲನ ಶಕ್ತಿಯಿಂದ ಆಗಿರಬಹುದು.
(೩) ವಿಷಪ್ರಾಶನ ಮಾಡಲು ಉದ್ಯುಕ್ತಳಾದ ಅಥವಾ ಮಾಡಿದಂತಹ ಹೆಂಡತಿಯನ್ನು ಕಂಡು, ನಾಯಕರ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗಿ ಅವರು ಬದಲಾಗಿರಬಹುದು.
ಏನೇ ಆಗಿರಲಿ, ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ಅವರ ಮೊದಲಿನ ವ್ಯಾವಹಾರಿಕ ನಂಬಿಕೆಗಳು ಅಳಿದು, ಅವರಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮೂಡಿವೆ. ಈ ತರಹದ ಪರಿವರ್ತನೆಯನ್ನು ರಶಿಯದ ಖ್ಯಾತ ವರ್ತನಾವಿಜ್ಞಾನಿ ಪಾವ್ಲೋವ್(೧೮೪೯-೧೯೩೬) ಗಮನಿಸಿದ್ದಾನೆ. ಆತನ ಪ್ರಯೋಗಶಾಲೆಗೆ ಒಮ್ಮೆ ಪ್ರವಾಹದ ನೀರು ನುಗ್ಗಿದಾಗ, ಅಲ್ಲಿದ್ದ ನಾಯಿಗಳಲ್ಲಿ ಕೆಲವು ಸತ್ತೇ ಹೋದವು. ಬದುಕುಳಿದ ನಾಯಿಗಳಲ್ಲಿದ್ದ ‘ಸಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ(=strong conditioned reflexes) ನಶಿಸಿ, ದುರ್ಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ (= weak conditioned reflexes) ಮೇಲೆದ್ದವು’ ಎಂದು ಪಾವ್ಲೋವ್ ದಾಖಲಿಸಿದ್ದಾನೆ.
ಒಟ್ಟಿನಲ್ಲಿ ಶ್ರೀನಿವಾಸ ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಆಧ್ಯಾತ್ಮವನ್ನು ನಂಬದವರು ಈ ಘಟನೆಯು ಅವರ ಮೊದಲಿನ ನಂಬುಗೆಗಳನ್ನು ಅಂದರೆ ವ್ಯಾವಹಾರಿಕ ಮನೋಭಾವನೆಯನ್ನು ಬದಲಾಯಿಸಿತು ಎಂದು ಹೇಳಬಹುದು. ಆಧ್ಯಾತ್ಮಜೀವನದಲ್ಲಿ ನಂಬುಗೆ ಇದ್ದವರು ಈ ಘಟನೆಯಿಂದಾಗಿ ನಾಯಕರ ಕಣ್ಣು ತೆರೆಯಿತು ಎಂದು ಹೇಳಬಹುದು. ಏನೇ ಆಗಲಿ, ಈ ಆಘಾತಕಾರಿ ಘಟನೆಯಿಂದಾಗಿ ಕನ್ನಡಿಗರಿಗೆ ಓರ್ವ ಶ್ರೇಷ್ಠ ದಾರ್ಶನಿಕ ಮಾರ್ಗದರ್ಶಕರು ದೊರೆತರು, ಕರ್ನಾಟಕ ಸಂಗೀತ ಪಿತಾಮಹ ದೊರೆತರು. ಇದಕ್ಕೆಲ್ಲ ಕಾರಣಳಾದವರು ನಾಯಕರ ಹೆಂಡತಿ.
‘ಹೆಂಡತಿ ಸಂತತಿ ಸಾವಿರವಾಗಲಿ,
ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ದಾಸರೇ ತಮ್ಮ ಹೆಂಡತಿಯ ಉಪಕಾರವನ್ನು ಸ್ಮರಿಸಿದ್ದಾರೆ.
ಆ ಸಾಧ್ವಿಗೆ ಕನ್ನಡಿಗರು ಚಿರಕೃತಜ್ಞರು.
ಪ್ರತಿಯೊಬ್ಬ ಮಹಾನುಭಾವನ ಹಿಂದೆ ಒಬ್ಬ ಮಹಾನ್ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ಈ ಘಟನೆ ನಿದರ್ಶನವಾದೀತು. ಕೆಲವು ನಗೆಗಾರರು `ದಾರ್ಶನಿಕರಾಗಲು ಮದುವೆಯಾಗಬೇಕು’ ಎಂದು ಸಾಕ್ರೆಟೀಸನ ಉದಾಹರಣೆ ಕೊಟ್ಟು ಹಾಸ್ಯ ಮಾಡಲೂ ಬಹುದು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲನ್ನು ಓದಿದಾಗ ನನಗೆ ನೆನಪಾಗುವದು ಇಂಗ್ಲೀಶ ಕವನವೊಂದರ ಸಾಲು:
“Abou Ben Adhem
(may his tribe increase)”
ಲೀ ಹಂಟ್ ಎನ್ನುವ ಇಂಗ್ಲಿಶ್ ಕವಿ ಈ ಕವನವನ್ನು ಕ್ರಿ. ಶ. ೧೮೩೪ರಲ್ಲಿ ಬರೆದನು. ದಾಸರು ಕ್ರಿ.ಶ. ೧೪೮೪-೧೫೬೪ರಲ್ಲಿ ಬಾಳಿದವರು. ಇಬ್ಬರೂ ಬೇರೆ ಬೇರೆ ದೇಶ ಹಾಗು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದವರು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲಿಗೂ ‘may his tribe increase’ ಎನ್ನುವ ಸಾಲಿಗೂ ಎಂಥಾ ಸಾಮ್ಯತೆ ಇದೆಯಲ್ಲವೆ! ಕಾವ್ಯಕ್ಕೆ ಕಾಲ, ದೇಶ ಹಾಗು ಸಂಸ್ಕೃತಿಯ ಭೇದ ಇದ್ದೀತೆ?
ವೈರಾಗ್ಯವನ್ನು ತಾಳಿ, ಸನ್ಯಾಸವನ್ನು ಸ್ವೀಕರಿಸಿದವರು ಅನೇಕರಿದ್ದಾರೆ. ಇವರೆಲ್ಲ ತಮ್ಮ ಸಂಪತ್ತನ್ನು ತಮ್ಮ ಹೆಂಡತಿ, ಮಕ್ಕಳಿಗೆ ಬಿಟ್ಟು ಸನ್ಯಾಸಿಯಾದವರು. ಆದರೆ ಪುರಂದರದಾಸರು ತಾವಷ್ಟೇ ದಾಸರಾಗಲಿಲ್ಲ. ಅವರ ಜೊತೆಗೆ ಅವರ ಹೆಂಡತಿ ಹಾಗು ಮಕ್ಕಳೂ ಸಹ ಗೋಪಾಳಬುಟ್ಟಿಯನ್ನು ಹಿಡಿದರು. ತಾವು ಕಂಡ ಸತ್ಯದ ದಾರಿಯನ್ನು ತಮ್ಮವರೂ ತುಳಿಯಬೇಕು ಎನ್ನುವದು ಸತ್ಯಪ್ರಜ್ಞರ ತಿಳಿವು. ದಾಸರ ಬಳಿಕ ಐದು ಶತಮಾನಗಳ ನಂತರ ಮತ್ತೊಬ್ಬ ಸಂತ ಇಂತಹ ಸತ್ಯನಿಷ್ಠೆಯನ್ನು ತೋರಿಸಿದ. ಆತ ಮೋಹನದಾಸ ಗಾಂಧೀ.
ಪುರಂದರದಾಸರ ಒಂದು ಕೀರ್ತನೆ ತುಂಬ ಜನಪ್ರಿಯವಾಗಿದೆ. ಪ್ರತಿ ಶುಕ್ರವಾರವೂ ಅನೇಕರು ಈ ಭಜನೆಯನ್ನು ಹಾಡುತ್ತಾರೆ:
“ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ನಮ್ಮಮ್ಮಾ ನೀ ಸೌ-
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.”
ಲೌಕಿಕ ಸಂಪತ್ತೆನ್ನೆಲ್ಲ ಬಿಸುಟು ಹೋದ ದಾಸರು ಯಾವ ಭಾಗ್ಯಲಕ್ಷ್ಮಿಯನ್ನು ಕರೆಯುತ್ತಿರಬಹುದು?
“ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ”
ಈ ನುಡಿಯನ್ನು ನೋಡಿದಾಗ ದಾಸರು ಲೌಕಿಕ ಸಂಪತ್ತಿನ ಲಕ್ಷ್ಮಿಯನ್ನು ಕರೆಯುತ್ತಿರಬಹುದೆ ಎನ್ನುವ ಅನುಮಾನ ಬಾರದಿರದು. ಆದರೆ,
“ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ”
ಎನ್ನುವ ಸಾಲುಗಳನ್ನು ನೋಡಿದಾಗ, ದಾಸರು ಕರೆಯುತ್ತಿರುವದು ವೈರಾಗ್ಯಲಕ್ಷ್ಮಿಯನ್ನು ಎಂದು ಭಾಸವಾಗುತ್ತದೆ.
‘ಲಂಗೋಟಿ ಬಲು ದೊಡ್ಡದಣ್ಣ’ ಎಂದು ಹಾಡಿದ ದಾಸರು, ತಾವು ತ್ಯಜಿಸಿದ ಸಿರಿ ಸಂಪತ್ತನ್ನು ವಿಜೃಂಭಿಸಿ ಕೀರ್ತಿಸುವದು ಸಾಧ್ಯವಿಲ್ಲ. ಏನೇ ಆಗಲಿ, ಅವರವರ ಭಾವಕ್ಕೆ ತಕ್ಕಂತಹ ಫಲ ಅವರವರಿಗೆ ಲಭಿಸುತ್ತದೆ. ಆದುದರಿಂದ ಲೌಕಿಕ ಸಂಪತ್ತನ್ನು ಬಯಸುವವರು ದಾಸರ ಗೀತೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವದು ಶ್ರೇಯಸ್ಕರ:
ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?
ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!
Posted by sunaath (noreply@blogger.com) on October 04, 2011 04:07 AM· permalink
ಬದುಕಿನ ತುಂಬಾ ನೋವುಗಳಿವೆ, ಆಸೆಗಳಿವೆ, ಕೊಳಕು ಮನಸುಗಳಿವೆ, ಮೋಸದ ಮುಖಗಳಿವೆ. ಯಾರನ್ನು ನಂಬುವುದು, ಯಾರನ್ನು ಮೆಚ್ಚುವುದು, ಮುತ್ತುಗಳ ಆಸೆಯಲ್ಲಿ ಎಲ್ಲರೂ ಮತ್ತೇರಿದಂತೆ ನಶೆಯಲ್ಲಿ ಮುಳುಗಿದ್ದಾರೆ. ಎಷ್ಟು ಹಣ ಇದ್ದರೂ ಸುಖವಿಲ್ಲ. ಎರಡಗಲ ಭೂಮಿಯಲ್ಲಿ ಮಣ್ಣಾಗುವ ದೇಹವಿದು, ಅಂಥಹ ದೇಹ ಮಣ್ಣಾಗುವ ಮುನ್ನ, ಬಾಯಿ ತುಂಬಾ ನಗಲು ಕೂಡಾ ಹಿಂದೆ ಮುಂದೆ ನೋಡುವ ನಾವು ಸಾಧಿಸುವುದಾದರೂ ಏನನ್ನು?
ಇಲ್ಲಿ ಸಖ ತನ್ನ ಸಖಿಗೆ ಹೇಳುತ್ತಿದ್ದಾನೆ, ನಿನ್ನ ಮುಖದಲ್ಲಿ ನನಗೆ ನಗು ಕಂಡರೆ ಅದಕ್ಕೆ ಕಾರಣ ನಾ ಹುಡುಕುವುದಿಲ್ಲ, ನಿನ್ನ ಸುಂದರ ಮಾತುಗಳಿಗೆ ನನಗೆ ಟಿಪ್ಪಣಿ ಬೇಕಾಗಿಲ್ಲ, ಆದರೆ ನೀನು ಬಿಕ್ಕಳಿಸದಿರು ಗೆಳತಿ, ಅದು ನನಗೆ ಹಿಂಸೆ ನೀಡುತ್ತದೆ. ಬತ್ತದ ಅದೆಷ್ಟೋ ನದಿಗಳು, ಅವುಗಳ ದಂಡೆಯಲ್ಲಿ ಬೆಳೆಯ ಬೆಳೆಯುತ್ತ ಇರುವ ಅದೆಷ್ಟೋ ಜನರಿದ್ದಾರೆ. ಎಲ್ಲೆಡೆ ಭತ್ತದ ಬಿತ್ತನೆ ಮುಗಿದು ತೆನೆ ಹಸನಾಗಿ ತೋರುತ್ತಿದೆ, ಮತ್ತೆ ಚಿಂತೆ ಬೇಡ, ಸದಾ ನಗುವಿರಲಿ ಮುಖದಿ, ಎನ್ನುತ್ತಿದ್ದಾನೆ. ಮೇಲುನೋಟಕ್ಕೆ ಇದು ಕೇವಲ ಗೆಳತಿಯ ಸಮಾಧಾನ ನೀಡುವ ಗೆಳೆಯನ ಪ್ರೀತಿಯೇ ಆದರೂ ಇದು ಸಮಾಜಕ್ಕೆ ಹಿಡಿದ ಕನ್ನಡಿಯೂ ಹೌದು. ಇಲ್ಲಿ ಬತ್ತದ ನದಿಗಳೆಂದರೆ, ''ಮನಸು''. ಬಿತ್ತಿದ ಬೆಳೆ ''ಪ್ರೀತಿ''. ಹುಟ್ಟಿ ನಳ ನಳಿಸುತ್ತಿರುವ ತೆನೆಗಳೆಂದರೆ ''ನಾಳೆಯ ಕಂದಮ್ಮಗಳು''. ಅವುಗಳಿಗೆ ಸರಿಯಾದ ನೀರಿನ ಪೋಷಣೆ ಸಿಕ್ಕರೆ ನಾಳಿನ ಉತ್ತಮ ಫಸಲಿಗೆ ಚಿಂತಿಸುವ ಅಗತ್ಯವಿಲ್ಲ. ಹಾಗೆಯೇ ಪ್ರೀತಿ, ನಗು ತುಂಬಿದ್ದರೆ ಅಲ್ಲಿ ಬಿಕ್ಕಳಿಸುವ ಪ್ರಮೇಯವಿಲ್ಲ ಎಂದು ತನ್ನ ಸಖಿಗೆ ಪ್ರಿಯ ಸಖ ಹೇಳುತ್ತಿದ್ದಾನೆ.
ನಿನ್ನ ನಗು ಕಂಡಾಗ ಕಾರಣವು ಬೇಕಿಲ್ಲ
ಅಕ್ಕರೆಯ ನುಡಿಗಳಿಗೆ ಒಕ್ಕಣಿಕೆ ಬೇಕಿಲ್ಲ
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?
ಮುತ್ತಿನ ಮಾತುಗಳ ಮಾಲೆಯ ಹೆಣೆಯುವರು
ಕಿತ್ತಾಡುತಿಹರೆಲ್ಲ ಜಗದ ಒಳಗೆ
ಮುತ್ತುಗಳ ಆಸೆಯಲಿ ಮತ್ತೇರಿಹರೆಲ್ಲ
ಬಿಕ್ಕಳಿಸು ಗೆಳತಿ ಸುಖವು ಬೇಕೇ?
ಬತ್ತದ ನದಿಗಳಿವು ಬಿತ್ತುತಿರು ಬೆಳೆಯ
ಹೊತ್ತಲ್ಲದೊತ್ತಿನಲಿ ಹಸನು ಹಸನು
ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?
ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ
ನಿನ್ನ ನಗುವಿನಲೆನಗೆ ಕಾರಣವು ಬೇಕಿಲ್ಲ
ಮಗುವಿನ ಮೊಗವಿರಲಿ, ಬದುಕಿರುವುದ್ಯಾಕೆ?
Posted by ಸಾಗರದಾಚೆಯ ಇಂಚರ (koorsebabbi@gmail.com) on October 03, 2011 03:33 PM· permalink
ನಿರ್ಧಾರಗಳು ಯಾಕೆ ಬದಲಾಗುತ್ತವೆ?
ಉತ್ತರ ಬಲು ಕಷ್ಟ...
ನನ್ನಪ್ಪ ಊರಿಂದ ಬರುವಾಗ ಹೇಳಿದ್ದರು...
"ಮಗಾ..ಪಟ್ಟಣದಲ್ಲಿ ಇರ್ತೀಯಾ...ಹದಿಹರೆಯದ ವಯಸ್ಸು... ಮನಸ್ಸು ಹಿಡಿತದಲ್ಲಿರೋದಿಲ್ಲ..
ಮೊದಲಬಾರಿಗೆ ಊರಿಂದ... ಅಪ್ಪ,ಅಮ್ಮರಿಂದ ದೂರ ಇರ್ತಿದ್ದೀಯಾ..ಒಂಟೀತನ ಕಾಡಬಹುದು...
ಚಟಕ್ಕೆ ..ಹೆಣ್ಣುಮಕ್ಕಳ ಕಡೆಗೆ ಮನಸ್ಸು ಎಳೆಯ ಬಹುದು..
ನೀನು ಎಚ್ಚರಿಕೆಯಲ್ಲಿರಬೇಕು..."
ನಾನೂ ಗಟ್ಟಿಯಾಗಿ ನಿರ್ಧರಿಸಿದ್ದೆ... ಅಪ್ಪಹೇಳಿದಂತೆ ನಡೆಯಬೇಕು ಅಂತ...
ಆದರೆ...ಆ ಹುಡುಗಿ....ಸ್ವಲ್ಪ ಕುಳ್ಳಿ... ಕಣ್ಣಲ್ಲೇ ನಗುವ..ಚಂದದ ತುಟಿಗಳಿಗೆ ಮರುಳಾಗಿಬಿಟ್ಟೆ...
ಅರಳು ಹುರಿದಂತೆ ಅವಳು ಮಾತನಾಡುವಾಗ ನಾನೋ ಎಲ್ಲೋ ಕಳೆದು ಹೋಗುತ್ತಿದ್ದೆ...
ಅವಳ ಧ್ವನಿಯೂ ಇಂಪು...
ಅವಳು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಹಾಡಿದ್ದಳು...
"ನೀ...ನಿರಲು ಜೊತೆಯಲ್ಲಿ.. ಬಾಳೆಲ್ಲ ಹಸಿರಾದಂತೆ..."
ವಾಹ್ !!
ನಾನು ಏನು ಮಾಡಬಾರದಾಗಿತ್ತೋ... ಅದನ್ನು ಮಾಡಿದೆ...ನನ್ನ ಹೃದಯ ಢವ ಢವ ಅನ್ನುತ್ತಿತ್ತು...ಧೈರ್ಯಮಾಡಿ ಹುಡುಗಿ ಒಬ್ಬಳೆ ಇದ್ದಾಗ ಹೇಳಿದೆ..
"ಹುಡುಗಿ.. ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ..."
ಅವಳ ಜಿಂಕೆ ಕಣ್ಣುಗಳಲ್ಲಿ ಆಶ್ಚರ್ಯ.... !
"ಹೌದಾ...?ನನ್ನ ಪ್ರೀತಿಸ್ತಿದ್ದೀಯಾ...?
ಯಾಕೆ?"
"ಗೊತ್ತಿಲ್ಲ... ನೀನು ನನಗೆ ತುಂಬಾ ತುಂಬಾ ಇಷ್ಟ..ತುಂಬಾ ತುಂಬಾ ಪ್ರೀತಿಸ್ತಾ ಇದ್ದಿನಿ..."
"ಹುಡುಗಾ...ಸಿನೇಮಾ ಥರಹ ನನ್ನನ್ನು ತಬ್ಬಿಕೊ ಬೇಕು...ಹಾಡು ಹೇಳಬೇಕು ...ಅಂತೆಲ್ಲ ಅನ್ನಿಸ್ತಾ ಇದೆಯಾ...?"
ಅನಿರೀಕ್ಷಿತವಾದ ಅವಳ ಈ ನೇರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ...
ತಡಬಡಿಸಿದೆ... ಸಣ್ಣಗೆ ಹಣೆಯಲ್ಲಿ ಬೆವರು ಬಂತು...!
"ಹುಡುಗಾ...ಪ್ರೀತಿ ಎಂದರೆ ಏನು?"
ನಾನು ತಲೆ ಕೆರೆದು ಕೊಂಡೆ...
ಅಸಲಿಗೆ ಪ್ರೀತಿ ಎಂದರೇನು ಅಂತ ನನಗೂ ಗೊತ್ತಿಲ್ಲ...!
"ಗೊತ್ತಿಲ್ಲ ...ನಿನ್ನನ್ನು ನೋಡಬೇಕು ಅನ್ಸುತ್ತೆ...ನೀನು ನನಗೆ ಚಂದ ಕಾಣ್ತಾ ಇದ್ದೀಯ...
ನೋಡ್ತಾ ಇದ್ದೀನಿ...
ನೀನು ಖುಷಿಯಾಗಿರಬೇಕು...ನಿನ್ನ ಸಂತೋಷ ನಾನು ನೋಡಬೇಕು...
ನಿನಗೆ ಒಳ್ಳೆಯದನ್ನು ಬಯಸುತ್ತೇನೆ... ಹೃದಯಪೂರ್ವಕವಾಗಿ..."
" ಸರಿ...ಹಾಗಾದರೆ..ನೀನು ನನ್ನನ್ನು ಪ್ರೀತಿ ಮಾಡಬಹುದು...ಆದರೆ...ಒಂದು ಕಂಡೀಷನ್......."
"ಏನು...?"
" ನೀನು ನನ್ನಿಂದ ದೂರ ಇರಬೇಕು...
ನನ್ನ ಕಡೆಗೆ ಪೆಂಗನಂತೆ ನೋಡುತ್ತ.. ಹುಚ್ಚುರೀತಿಯಲ್ಲಿ ವರ್ತಿಸಬಾರದು...
ಅವಶ್ಯಕತೆ ಇದ್ದಷ್ಟೇ ಮಾತನಾಡಬೇಕು...ಕಾರಣವಿಲ್ಲದೆ ನನ್ನನ್ನು ಭೇಟಿ ಮಾಡಬಾರದು..."
ನಾನು ಮತ್ತೆ ತಲೆ ಕೆರೆದುಕೊಂಡೆ...
"ಆಯಿತು...ಓಕೆ..ಎಸ್ಸೆಮ್ಮೆಸ್ ಕಳಿಸ ಬಹುದಾ?"
ಹುಡುಗಿ ಈಗ ತುಂಬಾ ಕಠಿಣವಾದಳು...
" ಇಲ್ಲ...ನಾವಿಬ್ಬರೂ ಇಲ್ಲಿ ಓದಲಿಕ್ಕೆ ಬಂದಿದ್ದೇವೆ... ಚೆನ್ನಾಗಿ ಓದಬೇಕು...ಅದು ನಮ್ಮ ಮೊದಲ ಗುರಿ...
ನನ್ನ ಓದಿಗೆ ನೀನು ..ನಿನ್ನ ಪ್ರೀತಿ ...ನನಗೆ ತೊಂದರೆ ಕೊಡಬಾರದು..."
ನಾನು ಅವಳು ಹೇಳಿದುದಕ್ಕೆ "ಹೂಂ" ಅಂದೆ...
"ನೋಡು ಹುಡುಗಿ...
ನಾನೂ ಕೂಡ ಒಳ್ಳೆಯವನು... ಒಳ್ಳೆಯ ಮನೆತನದವನು...ಕೆಟ್ಟ ಅಭ್ಯಾಸಗಳಿಲ್ಲ..ದಯವಿಟ್ಟು ನನ್ನನ್ನೂ ಪ್ರೀತಿಸು.... ಪ್ಲೀಸ್...."
ಈ ಪ್ರೀತಿ ನಿವೇದನೆ ಬಲು ಕಷ್ಟ....
ಹುಡುಗಿ ಕಿರುಗಣ್ಣಿನಿಂದ ನೋಡಿದಳು...ತಕ್ಷಣ ಉತ್ತರ ಕೊಡಲಿಲ್ಲ...
"ಪ್ರೀತಿಗೆ ಬಲವಂತ ಮಾಡಬಾರದು.. .. ಹುಡುಗಾ...ಕಾದು ನೋಡೋಣ...
ನೀನು ನನ್ನನ್ನು ಪ್ರೀತಿಸಿಕೊ..
ಪರವಾಗಿಲ್ಲ...ಆದರೆ ನನಗೆ ತೊಂದರೆ ಕೊಡಬೇಡ...."
ಅಂದಿನಿಂದ ....ಅವಳನ್ನು ದೂರದಿಂದಲೇ ನೋಡುತ್ತಿದ್ದೆ...ಕಣ್ಣತುಂಬಾ... ಹೃದಯದ ತುಂಬಾ....
ನೋಡುತ್ತಿದ್ದೆ.. ಅವಳಿಗೆ ಗೊತ್ತಾಗದ ಹಾಗೆ... ಕವನ ಗೀಚುತ್ತಿದ್ದೆ.... ಕನಸು ಕಾಣುತ್ತಿದ್ದೆ....
ಏನೋ ಒಂಥರಾ ಖುಷಿ..!ಅವಳಿದ್ದಳು ನನ್ನ ಮನಸ್ಸಲ್ಲಿ ..ನಿದ್ದೆ ಕನಸುಗಳಲ್ಲಿ..
ಪ್ರೀತಿ ಎಂದರೆ ಇದೇನಾ?
ನೋಡು ನೋಡುತ್ತಿರುವಂತೆ... ನಮ್ಮ ಓದು ಮುಗಿಯಿತು...ಇಬ್ಬರೂ ಪಾಸಾಗಿದ್ದೆವು...
ನೌಕರಿಯೂ ಸಿಕ್ಕಿತು....
ಇನ್ನೇನು?
ಈ ಆಸೆಗಳದ್ದೇ ಸಮಸ್ಯೆ....!
ಅಸೆಗಳು ಮತ್ತೆ ಗರಿಗೆದರಿತು....
ಆಸೆಗಳಿಗೇನು...?ಯಾವಾಗಲೂ ಅವಕಾಶ ಹುಡುಕುತ್ತಿರುತ್ತವೆ....
"ಹುಡುಗಿ...ನನ್ನ ಪ್ರೀತಿ ಮರೆತುಬಿಟ್ಟೆಯಾ...?
"ಇಲ್ಲ ಕಣೋ...ಮರೆತಿಲ್ಲ... ನೀನು ತುಂಬಾ ಒಳ್ಳೆಯ ಹುಡುಗ...ನಾನು ಹೇಳಿದಂತೆ ನಡೇದುಕೊಂಡಿದ್ದೀಯಾ..."
"ಸರಿ...ಮುಂದೇನು...?
"ಹುಡುಗಾ...ನನ್ನ ಅಪ್ಪ ತುಂಬಾ ಕಷ್ಟ ಪಟ್ಟು ನನಗೆ ಓದಿಸಿದ್ದಾನೆ..ನನಗೂ ಒಂದಷ್ಟು ಕನಸಿದೆ..ನನ್ನ ಅಪ್ಪನಿಗೆ ಏನಾದರೂ ಕೊಡಬೇಕು...ಒಂದಷ್ಟು ದಿನ ಕೆಲಸ ಮಾಡಿ ....ಅಪ್ಪನಿಗೆ ಏನಾದರೂ ನನ್ನಿಂದ ಸಹಾಯ ಆಗಬೇಕು....."
ನಿಜ ಹೇಳ್ತೀನಿ...ಈಗ ಮಾತಾಡಿದ್ದು ನಾನಲ್ಲ...ನನ್ನ ಆಸೆಗಳು...
ನನ್ನ ಆಸೆಗಳೇ ಮಾತಾಡಿದವು...
" ಖಂಡಿತವಾಗಿ ಕೊಡು ಮಾರಾಯ್ತಿ...ನನ್ನ ಅಭ್ಯಂತರ ಏನೂ ಇಲ್ಲ...
ನಾನು ನಿನ್ನ ಕೈ ಹಿಡಿದುಕೊಂಡು ಪಾರ್ಕಿನಲ್ಲಿ ಓಡಾಡಬಹುದಾ?ನಿನ್ನ ಜೊತೆ ಪಾನಿ ಪುರಿ ತಿನ್ನ ಬಹುದಾ?
ನನಗೆ ನಿನ್ನ ಮೇಲೆ ಪ್ರೀತಿ ಇನ್ನೂ ಜಾಸ್ತಿಯಾಗಿದೆ..."
"ಇಲ್ಲ ಕಣೊ...ನೀನು ನನ್ನನ್ನು ಮುಟ್ಟಬಾರದು...ದೂರದಿಂದಲೇ ಮಾತನಾಡಬೇಕು...
ಆದರೆ..."
"ಏನು..?"
"ಆದರೆ..ನನ್ನೊಟ್ಟಿಗೆ ಓಡಾಡ ಬಹುದು...ವಾರಕ್ಕೊಮ್ಮೆ ಪಾರ್ಕು.. ಸಿನೇಮಾ ನೋಡಬಹುದು...
ಆದರೆ ಎಲ್ಲವೂ ದೂರ...ದೂರದಲ್ಲೇ.. ಇರಬೇಕು...!
ನಿನ್ನ ಪ್ರೀತಿ ನನ್ನ ಮೈ ಮುಟ್ಟಬಾರದು..."
ನನಗೆ ಬಹಳ ಸಂತೋಷವಾಯಿತು...!ಸ್ವರ್ಗ ಸಿಕ್ಕಿದಷ್ಟು ಖುಷಿಯಾಯಿತು....!
ನನ್ನ ಹುಡುಗಿ ನನಗೆ ಮಾತನಾಡಲು ಸಿಗುತ್ತಾಳಲ್ಲ...!
ವಾಹ್..!
"ಹುಡುಗಿ...ನಾನು ಫೋನ್ ಮಾಡಬಹುದಾ?"
"ಮಾಡು..ಸಾಯಂಕಾಲ ಮಾತ್ರ... ನಾನು ಆಫೀಸಿನಿಂದ ಬಂದಮೇಲೆ..."
ನಿಜ ಹೇಳ್ತಾ ಇದ್ದೀನಿ..ಆಡುವ ಮಾತುಗಳು ಇಷ್ಟು ಅಪ್ಯಾಯಮಾನವಾಗಿರುತ್ತವೆ ...ಅಂತ ನನಗೆ ಗೊತ್ತಾಗಿದ್ದು ಆವಾಗಲೇ...
ನಾವಿಬ್ಬರೂ ಹರಟಿದೆವು.... ಓಡಾಡಿದೆವು...ಸಿನೇಮಾ ನೋಡಿದೆವು...
ಪಾರ್ಕಿನ ಮೂಲೆಯಲ್ಲಿ ಕುಳಿತು ನನ್ನ ಹುಡುಗಿ ನನಗಾಗಿ ಹಾಡು ಹಾಡುತ್ತಿದ್ದಳು...ನನ್ನಿಷ್ಟದ ಹಾಡುಗಳು... !!
"ತುಮ್ ಸೆ.. ನಾರಾಜ್ ನಹೀ...ಜಿಂದಗೀ...ಹೈರಾನು ಹೂಂ... ಮೈ ಪರೇಶಾನು ಹೂಂ...
ತೆರೆ ಮಾಸೂಮ್ ಸವಾಲೋ ಸೆ ಪರೆಶಾನೂ ಹೂಂ..."
ಅವಳ ಧ್ವನಿ ಬಲು ಇಂಪು....
ಅವಳು ನನ್ನ ಪ್ರತಿಮಾತಿಗೂ ನಗುತ್ತಿದ್ದಳು...ನಗುವಾಗ ಅವಳ ಕಣ್ಣುಗಳು ಮುಚ್ಚುತ್ತಿದ್ದವು...
ಅವಳ ಜೊತೆಯಲ್ಲಿ ಏನೇನೋ ಕನಸು ಕಂಡೆ...!ಅವಳನ್ನು ದೂರದಿಂದ ಕಣ್ಣು ತುಂಬಿಸಿಕೊಳ್ಳುತ್ತಿದ್ದೆ...
ಅವಳು ನನಗೆ ಮತ್ತಷ್ಟು ಇಷ್ಟವಾದಳು... ಹತ್ತಿರವಾದಳು...
ವರುಷ ಕಳೆದು ಹೋಯಿತು....
"ಹುಡುಗಾ...ನಿನ್ನೆ ನನ್ನ ಅಪ್ಪ ....ನನ್ನ ಮದುವೆಯ ಬಗೆಗೆ ಮಾತನಾಡಿದ..ನನಗೆ ಗಂಡು ಹುಡುಕುತ್ತಾನಂತೆ...ನಾನು ನಿನ್ನ ಬಗೆಗೆ ಹೇಳಿಲ್ಲ...
ದಯವಿಟ್ಟು ನೀನು ನಿನ್ನ ಅಪ್ಪನೊಡನೆ ಮಾತನಾಡು...
ನಮ್ಮ ಮದುವೆಯ ಬಗೆಗೆ ಮಾತಾಡು..ನಮ್ಮ ಸಂಭಂಧಕ್ಕೊಂದು ಹೆಸರು ಕೊಡು..ಭದ್ರತೆ ಕೊಡು.."
"ಹುಡುಗಿ..ನಿನಗೆ ನಾನು ಇಷ್ಟನಾ?
ನಾನು ಪ್ರೀತಿಸಿದ ಹಾಗೆ ...ನೀನೂ ನನ್ನನ್ನು ಪ್ರೀತಿಸುತ್ತೀಯಾ?"
"ಹೌದು ಕಣೋ...
ನನ್ನ ಪ್ರೀತಿ ನನ್ನ ಕಣ್ಣಲ್ಲಿದೆ.. ಗೊತ್ತಾಗಲಿಲ್ಲವಾ?
ಹುಚ್ಚು ಹುಡುಗ ನೀನು...!
ನಿನ್ನ ಸಭ್ಯತೆ... ವಿನಯ...ಸಂಯಮ...ನೀನು ದೂರದಿಂದ ನನ್ನನ್ನು ಪ್ರೀತಿಸುವ ರೀತಿ..ನಿನ್ನ ಪ್ರೀತಿತುಂಬಿದ ಕಣ್ಣುಗಳು ನನಗಿಷ್ಟ ಕಣೊ...
ನಿನ್ನೊಂದಿಗೆ ನನ್ನ ಬದುಕು ಸಂತಸವಾಗಿರುತ್ತದೆ...ನನ್ನ ಬದುಕಿನ ಭರವಸೆ ನೀನು...
ದಯವಿಟ್ಟು ನಮ್ಮ ಮದುವೆಯ ಪ್ರಸ್ತಾಪ ನಿನ್ನಪ್ಪನೊಡನೆ ಮಾಡು..."
"ಹುಡುಗಿ...ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅಂತ ನನಗೇ ಗೊತ್ತಿಲ್ಲ...
ನಿನ್ನ ನೋಟ,,.. ಧ್ವನಿ... ಪ್ರೀತಿ... ಎಲ್ಲವನ್ನೂ..ಇಷ್ಟು ವರ್ಷ ನನ್ನ ಹೃದಯದಲ್ಲಿ ತುಂಬಿಟ್ಟುಕೊಂಡಿದ್ದೇನೆ...
ನಿನ್ನ ಪ್ರೀತಿಯನ್ನು ನಿನ್ನೊಡನೆ ಮಾತನಾಡದೇ ಅನುಭವಿಸಿದ್ದೇನೆ...
ಮಾತಾನಾಡಿಯೂ ಅನುಭವಿಸಿದ್ದೇನೆ...ನಿನ್ನ ಪ್ರೀತಿಯನ್ನು ನನ್ನೆದೆಯೊಳಗೆ ಪೂಜಿಸಿದ್ದೇನೆ..
ನಿನ್ನಂಥಹ ಹುಡುಗಿ ನನ್ನ ಸಂಗಾತಿಯಾಗುವದು ಎಷ್ಟೋ ಜನ್ಮದ ಪುಣ್ಯ..."
ನನಗೆ ಮುಂದೆ ಮಾತನಾಡಲಾಗಲಿಲ್ಲ...ಗಂಟಲು ಉಬ್ಬಿ ಬಂತು...
"ಹುಡುಗಾ ..ಏನಾಯ್ತೋ.....?ನಾನು ನಿನ್ನವಳು... ಇಬ್ಬರೂ ಮದುವೆಯಾಗೋಣ.. ಚಿಂತೆ ಮಾಡಬೇಡ..."
ಹುಡುಗಿ ನನ್ನ ತಲೆ ಸವರಿದಳು...
"ಹುಡುಗಿ...ಮದುವೆಯಾಗಿ ವಾಸ್ತವದ ಬದುಕಿನಲ್ಲಿ ನನ್ನ ಪ್ರೀತಿಯನ್ನು ಸಾಯಿಸುವದು ನನ್ನಿಂದ ಆಗದು...ಸಂಸಾರದ ಜಂಜಾಟದಲ್ಲಿ ನಾವು ಜಗಳಕಾದು...ಕೂಗಾಡುವದು.. ರೇಗಾಡುವದು ನನ್ನಿಂದಾಗದು...
ನಮ್ಮ ಪ್ರೀತಿ ಹೀಗೆಯೇ ಇರಲಿ...
ನಿನ್ನಪ್ಪ ನಿನಗೊಂದು ವರ ಹುಡುಕುತ್ತಾನೆ ಅವನನ್ನು ಮದುವೆಯಾಗು...ನನಗೂ ಒಬ್ಬಳು ಮಡದಿಯಾಗಿ ಬರುತ್ತಾಳೆ...
ನಮ್ಮ ಪ್ರೀತಿಯನ್ನು ಬಚ್ಚಿಟ್ಟುಕೊಂಡು...ಆಗಾಗ ತೆರೆದು ಅನುಭವಿಸೋಣ...
ಎಲ್ಲ ಸಂಬಂಧಗಳು... ಬಾಂಧವ್ಯಗಳು...ಪ್ರೀತಿ..ಪ್ರೇಮ ದೂರದಿಂದಲೇ ಚಂದ ...ಸುಂದರ...ಕಣೆ...
ಇಷ್ಟೆಲ್ಲಾ ಕನಸು ಕೊಟ್ಟ
ನೀನು...
ನಿನ್ನ ಪ್ರೀತಿ ನನ್ನೊಡನೆ ಯಾವಾಗಲೂ ಹೀಗೆಯೇ ಇರಲಿ...
ನಾವು ಮದುವೆಯಾಗುವದು ಬೇಡ.. ಕಣೆ...ಬೇಡ..."
ಹುಡುಗಿ ಮಾತನಾಡಲಿಲ್ಲ...
ನನಗೆ ಹುಡುಗಿಯ ಮುಖ ನೋಡಬೇಕಿತ್ತು...
ಹುಡುಗಿ ಸರಿಯಾಗಿ ಕಾಣಿಸುತ್ತಿರಲಿಲ್ಲ...
ನನ್ನ ಕಣ್ಣಂಚಲ್ಲಿ ನೀರಿತ್ತು....( ಚಂದದ ಪ್ರತಿಕ್ರಿಯೆಗಳು... ಪ್ರೀತಿ ಬಗೆಗಿನ ಸಂವಾದ ಚೆನ್ನಾಗಿದೆ...ದಯವಿಟ್ಟು ನೋಡಿ....)
Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on October 03, 2011 03:27 PM· permalink
ಎಲ್ಲಾ ಮರೆಯಬೇಕಿದೆ
ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇನೆ
ಅಲಾರಾಂ ಅದುಮಿದ್ದೇನೆ
ಕರೆಗಂಟೆ ಕಿತ್ತಿದ್ದೇನೆ
ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ
ಯಾರೂ ಬರಬೇಡಿ
ನಾನು ಒಳಗಿಲ್ಲ
ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ
ಬೆಳಕಿಲ್ಲ; ದೀಪ ಹಾಕುವಂತಿಲ್ಲ
ಫ್ಯಾನು, ಫೋನು, ಕುಕ್ಕರ್
ಊಹೂಂ
ನಲ್ಲಿ ತಿರುಗಿಸುವಂತಿಲ್ಲ,
ಹಾಡು ಗುನುಗುವಂತಿಲ್ಲ
ಒಳಗಿದ್ದೇನೆಂಬುದು ಹೊರಹೋಗುವಂತಿಲ್ಲ
ಸದ್ದೇ ಮಾಡದೇ ಕೂತರೂ
ಸೊಳ್ಳೆಗಳು ಮಾತಾಡಿಸುತ್ತವೆ
ಬಾಗಿಲು ಮುಚ್ಚಿದ್ದರೂ
ನೆನಪ ಕಿಟಕಿಗಳು ತೆರೆದುಕೊಳ್ಳುತ್ತವೆ
ಬೇಡವೆಂದ ಬೆಳಕು, ಶಬ್ದ
ಒಳ ಬಂದು ‘ಏನೀಗ?’ ಎಂಬಂತೆ
ಕೆಣಕುತ್ತವೆ, ಕೆರಳಿಸುತ್ತವೆ
ದುರುಗುಟ್ಟಿ ನೋಡಿದರೂ ಬೆದರುವುದಿಲ್ಲ
ಹೋಗಾಚೆ ಎಂದು ಒರಲಿದರೂ ಕೇಳುವುದಿಲ್ಲ
ಮರೆತ ಹಾಡುಗಳನ್ನು ನೆನಪಿಸಿ,
ಒರೆಸಿಹಾಕಿದ ಚಿತ್ರಗಳನ್ನು
ಎಲ್ಲೆಡೆ ಹರವುತ್ತವೆ; ಮನಸ ಕದಡುತ್ತವೆ
ಎಲ್ಲ ಮರೆಯಬೇಕೆಂದರೂ
ಎಲ್ಲಾ ನೆನಪಾಗುತ್ತದೆ
ಆ ಮಾತು, ಧ್ವನಿ, ಸಂದೇಶ, ಕನಸು
ಕವನ, ಕದನ, ಕಾಮನೆ, ಭಾವನೆ
ಒಂದೇ ಎರಡೇ
ಲೆಕ್ಕದ ಬೆಂಬತ್ತಿ, ಸೋತು ಸೋತು
ಮತ್ತೆ ಸುಮ್ಮನೇ ಕೂಡುತ್ತೇನೆ
ಬಾಗಿಲ ಮೇಲೆ ಬೆರಳಾಡಿಸಿದ ಸದ್ದು...
ಅದನ್ನೇ ಕಾಯುತ್ತಿದ್ದವನಂತೆ ಎದ್ದು
ಬಾಗಿಲು ತೆರೆದರೆ;
ಅವಳಿಲ್ಲ!
ಮರೆಯಬೇಕೆಂಬ, ಮರೆತ ಸಂಕಲ್ಪ
ಮತ್ತೆ ನೆನಪಾಗುತ್ತದೆ
- ಚಾಮರಾಜ ಸವಡಿ
Posted by Chamaraj Savadi (chamarajs@gmail.com) on October 03, 2011 12:52 PM· permalink
ಎಲ್ಲೆಲ್ಲೋ ಹುಟ್ಟಿದವರು
ಒಂದಾದರು ಇಲ್ಲಿ.
ಕಳಚಿ ನಾಮ, ಬಿಸುಟು ದಾರ
ಮರೆತು ಹೆಣ್ಣು-ಗಂಡೆಂಬುದ,
ಬೆತ್ತಲಾದರು ಬಟ್ಟೆಯಿದ್ದರೂ
ಕತ್ತಲಲ್ಲೂ ಬೆಳಕಾದರು
ಸುಟ್ಟಿದ್ದು ಮಾಂಸ, ಮೂಳೆಯಷ್ಟೇನಾ?
ಹೌದಂತೆ ಬಂಧನವೂ
ಹಂಬಲಿಸಿದ್ದರು ಯಾವುದಕ್ಕೆಲ್ಲ
ಪರದಾಡಿದ್ದರು, ಪಡೆದಿದ್ದರು
ಎಲ್ಲ ಮರೆತರವರಂತೆ
ಮಲಗಿ, ಉರಿದು ಮರೆಯಾದರು
ಸಿಗದಂತೆ ಮತ್ತೆ
ಚಿತೆಗೆಂಥದದು ಚಿಂತೆ?
ಆರಿಸುವುದಿಲ್ಲ ಕಣ್ಣೀರು ಉರಿ
ಕಣ್ಣೀರಿಡುವುದಿಲ್ಲ ಕೆನ್ನಾಲಗೆ
ಮೈಯೆಲ್ಲ ಕೈಕಾಲಿನ ಬೆಂಕಿ
ಎಲ್ಲವನ್ನೂ ನುಂಗಿ ನೊಣೆಯುವಾಗ
ಭವಬಂಧನಗಳು ಯಾವ ಲೆಕ್ಕ ಮರುಳೆ
ಗೊತ್ತಿದ್ದೂ ಎಲ್ಲ
ಬೆದರುವುದಿಲ್ಲ ಬೆಂಕಿಗೆ ಬದುಕು
ಚಿಂತಿಸುವುದಿಲ್ಲ ಚಿತೆಗೂ
ಕೆರಳುತ್ತದೆ ಮತ್ತೆ ಮತ್ತೆ
ಹೊರಳುತ್ತದೆ
ಕತ್ತಲ ಜಾರುದಾರಿಯಲ್ಲಿ
ಹೊರಡುತ್ತದೆ ಗುರಿಯಿಟ್ಟಂತೆ
ತಾಕುತ್ತದೆ, ತಣಿಯುತ್ತದೆ
ಬೇರಗರ್ಭದಲ್ಲೊಂದು
ಕಣ್ತೆರೆಯುತ್ತದೆ ಬೆಳಕು
ಕತ್ತಲಾಳದಲ್ಲಿ ಮೊಳಕೆಯೊಡೆವ ಬದುಕಿಗೆ
ಹುಟ್ಟಿನಿಂದ ಚಟ್ಟದವರೆಗೂ
ನಿತ್ಯ ಬೆಳಕಿನದೇ ಧ್ಯಾನ
ಚಿತೆಯಲ್ಲಿ ಬೆಳಕೂ ಮೌನ.
-ಶ್ರೀದೇವಿ ಕಳಸದ
Posted by ಆಲಾಪಿನಿ (shreevind@gmail.com) on October 03, 2011 11:57 AM· permalink
 |
| |ಶ್ರೀಶಾರದಾಮಾತೆ| |
ಶ್ರೀ ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣೇ|
ತ್ವಾಮಹಂ ಪ್ರಾರ್ಥನೆ ದೇವೀ ವಿದ್ಯಾದಾನಂ ಚ ದೇಹಿ ಮೇ||
ಯಾ ದೇವೀ ಸ್ತುತಯೇ ನಿತ್ಯಂ ವಿಭುಹೈರರ್ವೇದಪರಾಗೈ:|
ಸಮೇ ವಸತು ಜಿಹ್ವಾಗ್ರೇ ಬ್ರಹ್ಮರೂಪ ಸರಸ್ವತಿ||========================
ಶಾರದೆ, ನಿನ್ನಯ ದಯವಿಲ್ಲದೆ
ವಿದ್ಯೆಯಿಲ್ಲ, ವಿನಯವಿಲ್ಲ ನಮಗೆ
ನಿನ್ನೇ ಜಪಿಸುವೆವು, ಸದಾ ಸರ್ವದಾ
ವಿದ್ಯಾದಾನವನು ನೀಡು, ತಾಯೇ ಭಾರತೀ...
ಶ್ವೇತಾಂಬರಧಾರಿಣೀ, ಶುಭದೇ
ನೀ ದಾರಿ ತೋರದೇ, ಜ್ಞಾನಗಂಗೆ ಹರಿಸದೇ
ಅಜ್ಞಾನ ತೊಳೆಯದು ನಮಗೆ,
ಜ್ಞಾನವನು ನೀಡೆಮಗೆ, ತಾಯೇ ಭಾರತೀ...
ವಾಣೀ, ವಾಗೀಶ್ವರೀ, ನಮ್ಮ ಜಿಹ್ವಾಗ್ರದಲಿ
ಸವಿನುಡಿಗಳ ನುಡಿಸಿ, ಶಾಂತಿಮಂತ್ರವನುಳಿಸಿ
ಪೊರೆಯೆ, ಪರಮಬ್ರಹ್ಮನ ರಾಣಿ,
ಪರಮಾಪ್ತವಾಗಿರಲು ಮನಸುಕೊಡು, ತಾಯೇ ಭಾರತೀ...
ವೀಣಾಧಾರಿಣಿ, ಸಂಗೀತ ವಿಲಾಸಿನಿ,ನಮ್ಮಯ
ಬಾಳಿನೊಳು ಸಂತಸದ ಶೃತಿ ಸೇರಿಸಿ,
ಅದರಲಿ ತಾಳ ತಪ್ಪದ ಬಾಳು ಕೊಡು, ತಾಯೇ ಭಾರತೀ...
ಇದೋ ನಿನಗೆ ನಮನ, ನಿನ್ನ ನಾಮವೆ ನಮಗೆ ಮನನ
ಆಗಿರಲೆಂದು ಜೀವನ, ಪಾವನ ಎಂದು ಹಾರೈಸೆ, ಭಕ್ತಿಯಲಿ
ಬೇಡಿಕೊಂಬೆವು, ಕೊಡುತಾಯೆ ವರವನ್ನ, ತಾಯೇ ಭಾರತೀ...
===================
ಎಲ್ಲರಿಗೂ, ಶ್ರೀ ಸರಸ್ವತೀ ದೇವಿಯ ಕೃಪೆಯಿರಲಿ.
-ಚಂದ್ರಶೇಖರ ಬಿ.ಎಚ್. ೩/೧೦/೨೦೧೧
Posted by ಕ್ಷಣ... ಚಿಂತನೆ... (bhchandru@gmail.com) on October 03, 2011 09:17 AM· permalink
ಸಾಮಾನ್ಯವಾಗಿ ನಾವು ಏನನ್ನಾದರೂ ತಪ್ಪು ಮಾಡಿದಾಗ ಕ್ಷಮೆಯನ್ನು ಕೇಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತೇವೆ. `sorry' (ಸಾರಿ) ಎನ್ನುವ ಪದವನ್ನು ನಾವು ದಿನದಲ್ಲಿ ಹತ್ತಾರು ಬಾರಿ ಅದರ ಅಗತ್ಯವಿರಲಿ-ಬಿಡಲಿ ಹೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಅಭ್ಯಾಸವು ಹಾಸ್ಯಾಸ್ಪದವೂ ಆಗಿರುತ್ತದೆ. ಒಮ್ಮೆ ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರದಲ್ಲಿ ನನ್ನ ಪಕ್ಕವೇ ಕುಳಿತು ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕಿಯೊಬ್ಬರಿಗೆ ಬಿಕ್ಕಳಿಕೆ ಬರಲಾರಂಭಿಸಿತು. ಪ್ರತಿಭಾರಿಯೂ ಅವರು`sorry' ಎನ್ನುತ್ತಿದ್ದರು. ಅದು ಎಷ್ಟೊಂದು ಕಿರಿಕಿರಿಯಾಯ್ತೆಂದರೆ ಅವರು ಬಿಕ್ಕಳಿಸುವುದಕ್ಕಿಂತಲೂ ಕ್ಷಮೆಕೋರಿಕೆಯೇ ಅಸಹನೀಯವೆನಿಸಲಾರಂಭಿಸಿತು! ಕೆಲವೊಮ್ಮೆ ಈ `sorry'ಎನ್ನುವ ಪದವು ಕೇವಲ ಅಭ್ಯಾಸ ಬಲದಿಂದ ಬರುತ್ತಿದೆಯೋ, ನಿಜಕ್ಕೂ ಕೇಳುತ್ತಿದ್ದಾರೋ ಎಂದು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ! ಕ್ಷಮೆಯನ್ನು ಕೇಳುವ ರೀತಿಯನ್ನು ರ್ಯಾಂಡಿಪಾಶ್ ಅವರು ತಮ್ಮ ‘ಲಾಸ್ಟ್ ಲೆಕ್ಚರ್’ನಲ್ಲಿ ಬಹಳ ಚೆನ್ನಾಗಿ ತಿಳಿಸಿದ್ದಾರೆ:
‘ಜೀವನದಲ್ಲಿ ನಾವು ಸಾಕಷ್ಟು ತಪ್ಪುಗಳನ್ನು ಮಾಡುತ್ತೇವೆ. ತಪ್ಪು ಮಾಡಿದಾಗ ಕ್ಷಮೆ ಕೇಳುವುದು ಉತ್ತಮ ಅಭ್ಯಾಸ. ಆದರೆ ಒಂದು ಬಾರಿ ಕ್ಷಮೆ ಕೇಳಿದ ನಂತರವೂ ಮತ್ತೆ ಅದೇ ತಪ್ಪನ್ನು ಮಾಡುವುದು ಅಕ್ಷಮ್ಯ ಅಪರಾಧ. ಅರ್ಧ ಮನಸ್ಸಿನಿಂದ ಅಥವಾ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಿಜಕ್ಕೂ ಹಾನಿಕರ. ಸದಕ್ಕಿಂತ ಕ್ಷಮೆ ಕೇಳದಿರುವುದೇ ಮೇಲು. ಈ ರೀತಿ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಾವು ಮತ್ತೊಬ್ಬರಿಗೆ ಮಾಡುವ ಅಪಮಾನವೆಂದೇ ನನ್ನ ಭಾವನೆ. ನೀವು ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ತಪ್ಪುಗಳಾದರೆ ಅದು ನಿಮ್ಮಿಂದ ಸಂಬಂಧಕ್ಕೆ ತಗುಲುವ ಸೋಂಕು. ಪೂರ್ಣ ಮನಸ್ಸಿನಿಂದ ಕೇಳುವ ಕ್ಷಮೆ ಆ ಸೋಂಕಿಗೆ ಜೀವನಿರೋಧಕ (ಆಂಟಿಬಯೋಟಿಕ್) ಇದ್ದಂತೆ. ಅಂತೆಯೇ ಅರ್ಧ ಮನಸ್ಸಿನಿಂದ ಅಥವಾ ಅಸಭ್ಯತೆಯಿಂದ ಕೇಳುವ ಕ್ಷಮೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತೆ.
ನನ್ನ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಯಾವಾಗಲೂ ತಮ್ಮ ತಂಡದೊಂದಿಗೆ ಕೆಲಸ ಮಾಡಬೇಕಾಗಿತ್ತು. ಹೀಗೆ ಮಾಡುವಾಗ ಅನೇಕ ವಿಚಾರಗಳಿಗೆ ವಿದ್ಯಾರ್ಥಿಗಳಲ್ಲಿ ಸಂಘರ್ಷ ಉಂಟಾಗುತ್ತಿತ್ತು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ನಾನು ನೀಡುತ್ತದ್ದ ಕೆಲಸವನ್ನು ತಂಡದಲ್ಲಿದ್ದ ಕೆಲವೇ ಜನ ಮಾತ್ರ ಕಷ್ಟಪಟ್ಟು ಮಾಡುತ್ತಿದ್ದರು. ಇತರೆ ಕೆಲವರು ಸೋಮಾರಿಗಳಾಗಿ ಕಾಲಹರಣ ಮಾಡುತ್ತಿದ್ದರು. ಇದೇ ಸಂಘರ್ಷಕ್ಕೆ ಮುಖ್ಯಕಾರಣವಾಗಿತ್ತು. ಹಿಗಾಗಿ ಸೆಮಿಸ್ಟರ್ ನ ಮಧ್ಯದಲ್ಲಿ ಗದ್ದಲಗಳು, ನಂತರ ಕ್ಷಮೆಕೇಳುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಹಾಗೆ ಕ್ಷಮೆ ಕೇಳದೇ ವಿದ್ಯಾರ್ಥಿಗಳಲ್ಲಿ ಸಂಧಾನ ಏರ್ಪಡದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಗಳಿದ್ದವು. ಆದ್ದರಿಂದ ಇದನ್ನು ಪರಿಹರಿಸಲು ಆಗಿಂದಾಗ್ಗೆ ನಾನು ದೀರ್ಘ ಭಾಷಣಗಳನ್ನು ಮಾಡಬೇಕಾದ ಸಂದರ್ಭಗಳು ಎದುರಾಗುತ್ತಿದ್ದವು.
ನಾನು ವಿದ್ಯಾರ್ಥಿಗಳಿಗೆ ಅರ್ಧಮನಸ್ಸಿನ ಕ್ಷಮಾಪಣೆಯಲ್ಲಿ ಎರಡು ಬಗೆ ಇರುತ್ತದೆ ಎಂದು ಹೇಳುತ್ತಿದ್ದೆ.
ಮೊದಲನೆಯದು: ದಯವಿಟ್ಟು ಕ್ಷಮಿಸಿ, ನಾನು ಮಾಡಿದ ಕೆಲಸದಿಂದ ನಿಮಗೆ ಬೇಸರವಾಗಿದೆ ಎಂದು ತಾವು ಭಾವಿಸಿದ್ದೀರಿ.( ಈ ರೀತಿ ಕ್ಷಮೆ ಕೋರುವುದು ನೀವು ಅವರ ಭಾವನೆಗಳಿಗೆ ಸ್ಪಂದಿಸುವ ಪ್ರಯತ್ನವಷ್ಟೇ. ಆದರೆ ಇದರಿಂದ ಅವರಿಗಾದ ನೋವಿಗೆ ಯಾವುದೇ ಶಮನ ದೊರಕಿದಂತಾಗುವುದಿಲ್ಲ.)
ಎರಡನೆಯದು: ನಾನು ಮಾಡಿದ ತಪ್ಪಿಗೆ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ಆದರೆ ಈ ತಪ್ಪಿನಲ್ಲಿ ನಿಮ್ಮ ಪಾಲೂ ಇದೆ. ಹಾಗಾಗಿ ನೀವೂ ಕ್ಷಮೆ ಕೇಳಬೇಕು. (ಇದು ಕ್ಷಮೆ ಕೋರುವ ವಿಧಾನವಲ್ಲ. ಬದಲಾಗಿ ಮತ್ತೊಬ್ಬರು ಕ್ಷಮೆ ಕೇಳಲಿ ಎಂದು ನಿರೀಕ್ಷಿಸುವ ವಿಧಾನ.)
ಒಳ್ಳೆಯ ರೀತಿಯ ಕ್ಷಮೆ ಯಾಚನೆ ಮೂರು ಅಂಶಗಳನ್ನು ಒಳಗೊಂಡಿರುತ್ತದೆ.
೧. ನಾನು ತಪ್ಪು ಮಾಡಿದ್ದೇನೆ.
೨. ನಿಮ್ಮನ್ನು ನೋಯಿಸಿದೆನಲ್ಲಾ ಎಂಬ ನೋವು ನನ್ನಲ್ಲಿದೆ.
೩. ನನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ.
ನಿಜ.! ಇದರಲ್ಲಿ ಮೂರನೇ ಅಂಶವನ್ನು ಕೆಲವೊಂದು ಬಾರಿ ಜನ ದುರುಪಯೋಗಪಡಿಸಿಕೊಳ್ಳುತ್ತಾರೆ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಮಾಡುವ ಪ್ರಯತ್ನಕ್ಕೆ ಬಹುತೇಕ ಮಂದಿ ನಿಮ್ಮನ್ನು ಖಂಡಿತ ಅಭಿನಂದಿಸುತ್ತಾರೆ. ಅವರು ಅತ್ಯಂತ ಸರಳವಾಗಿ ನಿಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸುತ್ತಾರೆ. ಮುಂದೆ ಉತ್ತಮ ಕೆಲಸಗಳನ್ನು ಮಾಡಲು ನಿಮ್ಮೊಂದಿಗೆ ಕೈ ಜೋಡಿಸುತ್ತಾರೆ.
ಒಮ್ಮೊಮ್ಮೆ ವಿದ್ಯಾರ್ಥಿಗಳು, ‘ನಾವು ಕ್ಷಮೆ ಕೇಳಿದ ನಂತರವೂ ಮತ್ತೊಬ್ಬರು ಕ್ಷಮೆ ಕೇಳದಿದ್ದರೆ ಏನು ಮಾಡುವುದು?’ ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು.
‘ಆದರೆ ಇದು ನಿಮಗೆ ಸಂಬಂಧಿಸಿದ ವಿಚಾರವಲ್ಲ. ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.’ ಎಂದು ನಾನು ಉತ್ತರಿಸುತ್ತಿದ್ದೆ.
ಕೆಲವೊಮ್ಮೆ ನೀವು ಮತ್ತೊಬ್ಬರನ್ನು ಕ್ಷಮೆ ಯಾಚಿಸಿದಾಗ, ನಿಮ್ಮ ಮಾತುಗಳು ಸರಿಯಾಗಿದ್ದರೂ, ಮನಃಪೂರ್ವಕವಾಗಿ ಕ್ಷಮೆ ಕೋರಿದ್ದರೂ ಅವರಿಂದ ಯಾವ ಪ್ರತಿಕ್ರಿಯೆಯೂ ಬಾರದೇ ಇರಬಹುದು. ಅದಕ್ಕೆ ಕಾರಣ ನಿಮ್ಮ ಕ್ಷಮೆಗೆ ಪ್ರತಿಕ್ರಿಯಿಸಲು ಅದು ಸರಿಯಾದ ವೇದಿಕೆಯಲ್ಲ ಎಂಬ ಭಾವನೆ ಅವರಿಗಿರಬಹುದು. ಆದ್ದರಿಂದ ತಾಳ್ಮೆಯಿಂದಿರಿ. ಅನೇಕ ಬಾರಿ ನನ್ನನ್ನು ಒಂದು ಗುಂಪಿನ ವಿದ್ಯಾರ್ಥಿಗಳು ಬಂದು ಕ್ಷಮೆ ಕೇಳುತ್ತಾರೆ. ಅದಾದ ಎಷ್ಟೋ ದಿನಗಳ ನಂತರ ಮತ್ತೊಂದು ಗುಂಪಿನ ವಿದ್ಯಾರ್ಥಿಗಳು ಕ್ಷಮೆ ಯಾಚಿಸುವರು. ಇಂತಹ ಸಂದರ್ಭಗಳಲ್ಲಿ ನಿಮ್ಮ ತಾಳ್ಮೆಯನ್ನು ಜನ ಶ್ಲಾಘಿಸುವರು ಮತ್ತು ಅದಕ್ಕೆ ತಕ್ಕ ಪ್ರತಿಫಲವನ್ನು ನೀವು ಪಡೆದೇ ಪಡೆಯುವಿರಿ.’
ಪರಸ್ಪರ ಸೌಹಾರ್ದತೆಯಿಂದ ಇರಬೇಕಾದರೆ ಕ್ಷಮಾಗುಣ ಅಗತ್ಯವಾಗುತ್ತದೆ. ತಪ್ಪುಮಾಡಿದಾಗ ಕ್ಷಮೆ ಕೇಳುವುದನ್ನು ಅಪಮಾನ ಎಂದು ಭಾವಿಸುವ ಅಗತ್ಯವಿಲ್ಲ. ಕ್ಷಮೆ ಕೇಳುವಾಗ ನಾಟಕೀಯವಾಗಿ ಅಥವಾ ಕಾಟಾಚಾರಕ್ಕೆ ಕೇಳದೇ ಹೃದಯಾಂತರಾಳದಿಂದ, ಮನಃಪೂರ್ವಕವಾಗಿ ಕೇಳುವುದನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಘನತೆಯನ್ನು ಕಾಪಾಡಿಕೊಳ್ಳೋಣ.
Posted by prabhamani nagaraja (noreply@blogger.com) on October 02, 2011 11:13 AM· permalink
ಬಹಳ ಹಿಂದೆ ಟಿಬೆಟ್ಟಿನ BuddhistMonstery
(ಬುದ್ಧಾಶ್ರಮ)ಒಂದರಲ್ಲಿ ವಾಸಿಮಾಡಲಾಗದ hysteria(ಉನ್ಮಾದ)ರೋಗದಿಂದ
ಬಳಲುತ್ತಿದ್ದ ಮಾನಸಿಕ ಅಸ್ವಸ್ಥರನ್ನು ತಂದು ಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆ ತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ ,ಮೌನದಿಂದ ಇರುತ್ತಿದ್ದರಂತೆ.ಉನ್ಮಾದದ ರೋಗಿಗಳನ್ನು,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆ ಮಾಡಲು ಬಂದಿರುವ ಗುರುಗಳು ಎಂದು ಭಾವಿಸುತ್ತಿದ್ದರಂತೆ.ಉನ್ಮಾದದ ರೋಗಿಗಳು ಎಷ್ಟೇ ಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂ ಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನ ಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂ ವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇ ಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲವಂತೆ.
ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.
ಈ ಬರಹದಲ್ಲಿ ನಮಗೆಲ್ಲಾ ಒಂದು ಪಾಠವಿದೆ ಅನಿಸುತ್ತದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ಎಷ್ಟೋ ಜನ ಕೂಗಾಡಿ, ಗಲಾಟೆ ಮಾಡಿ,ನಮ್ಮ ನೆಮ್ಮದಿ ಕೆಡಿಸುವವರು ಸಿಗಬಹುದು.ಅವರನ್ನು ನಾವು ನಮಗೆ ತಾಳ್ಮೆಯನ್ನು ಕಲಿಸಲು ಬಂದಿರುವ ಗುರುಗಳು ಎಂದೇಕೆ ತಿಳಿಯಬಾರದು? ನಮ್ಮ ಬದುಕನ್ನು ನಾವೇ ಬದಲಿಸಿಕೊಳ್ಳಬೇಕಲ್ಲವೇ? ಅವರಂತೆ ನಾವೂ ಕೂಗಾಡಿದರೆ ನಮ್ಮ ನೆಮ್ಮದಿ ಹಾಳಾಗುವುದಿಲ್ಲವೇ?ನಾವೆಲ್ಲಾ ಈ ಬಗ್ಗೆ ಸ್ವಲ್ಪ ಯೋಚಿಸಬೇಕಲ್ಲವೇ?ನಮ್ಮೆಲ್ಲರ ಬದುಕಿನಲ್ಲಿ ಇನ್ನೂ ಹೆಚ್ಚಿನ ಶಾಂತಿ,ನೆಮ್ಮದಿ ಸಿಗುವಲ್ಲಿ ಈ ಲೇಖನ ಪ್ರಯೋಜನಕಾರಿಯಾಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
(ಸಾಧಾರಿತ)
Posted by Dr.D.T.Krishna Murthy. (noreply@blogger.com) on October 02, 2011 10:31 AM· permalink
ಪ್ರಕಾಶನ ಕಥೆ.....ಹೀಗೆ.....ಹೀಗೂ ಆಗಬಹುದು.....ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...
" ನೀನು..
ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."
ಹುಡುಗ ಕಿವಿಯಲ್ಲಿ ಉಸುರಿದ...
ಮೈ ಬಿಸಿಯಾಗ ತೊಡಗಿತು.................
ಇಲ್ಲಿಂದ......ಜಲನಯನದ.....ಪುಟ್ಟ ..ಮುಕ್ತಾಯ....ಯಾಕಂದ್ರೆ ಸುಂದರ ಕ್ಷಣಗಳು ಎಷ್ಟು ಪುಟ್ಟದ್ದು ಎನಿಸುತ್ತವೆಯೋ ಅಷ್ಟೇ ದೀರ್ಘ ಮತ್ತು ಮಧುರವಾಗಿರುತ್ತವೆ....ಅವರವರ ಭಾವಕ್ಕೆ ....ಅಲ್ವಾ...??.....ಸರಿ...ಕಥೆಗೆ ಬರ್ತೀನಿ..............ಮುಂದಕ್ಕೆ.....
ನನ್ನ ಕೆನ್ನೆಯನ್ನು ಅವನೆದೆಗೆ ಒತ್ತುವಂತೆ ಅವನೆದೆಯಲ್ಲಿ ಮುಖ
ಹುದುಗಿಸಿದೆ...ಅವನು ತನ್ನ ಬಲಿಷ್ಠ ಬಾಹುಗಳಿಂದ ನನ್ನ ಬಂಧಿಸಿದ...
ತೋಳ್ತೆಕ್ಕೆಯಲಿ ಅವನ ಬಿಸಿಯುಸಿರಲಿ...ಕಣ್ಮುಚ್ಚಿ ....ಮೈ ಮರೆತೆ....
ಆಹಾ ಎಂಥ ಹಿತವಾಗಿತ್ತು..! ಅವನ ತೋಳ್ಬಿಗಿತ....!!!ಎಲ್ಲೋ ತೇಲಿದ ಹಾಗೆ.....
..............................................................................
ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...
ನಡುಗುವ ಧ್ವನಿಯಲ್ಲಿ..
" ಒಂದು ವಿಷಯ ಕೇಳಲಾ...?"
"ಕೇಳು..ಪುಟ್ಟಣ್ಣಿ.."
ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು...
ಅಪ್ಯಾಯಮಾನವಾಯಿತು...
"ನೋಡಿ..
ನೀವೂ ಕೂಡ ತುಂಬಾ ಚಂದವಿದ್ದಿರಿ..
ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"
"ಛೇ.. ಛೇ... ನಾನು ಅಂಥವನಲ್ಲ..."
"ನಿಮ್ಮ ಕಾಲೇಜಿನಲ್ಲಿ..."
"ನಾನು ನಾಚಿಕೆ ಸ್ವಭಾವದವನು..
ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..
ರಾಜ್ಯಕ್ಕೆ ನಾನು ಎರಡನೆ Rank ಗೊತ್ತಾ...?"
ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು ಇಷ್ಟ...
"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"
"ಇದ್ದಾರೆ..
ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...
ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"
"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"
"ಹಾಂ...
ಒಬ್ಬಳಿದ್ದಾಳೆ..
ನನ್ನ ಅತ್ತಿಗೆಯ ತಂಗಿ.."
ನನಗೆ ಕುತೂಹಲ... !!
" ಹೇಗಿದ್ದಾಳೆ..??"
" ಚಂದ ಇದ್ದಾಳೆ...
ಒಂದು ವಿಷಯ ಹೇಳಿ ಬಿಡುತ್ತೇನೆ...
ಅವಳಿಗೂ ನಿನ್ನ ಹಾಗೆಯೇ..
ಕೆನ್ನೆ ಮೇಲೆ ಮಚ್ಚೆಯಿದೆ..
ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."
ಹೌದಾ... !!
ಅಬ್ಭಾ ಗಂಡಸೆ.. !!
ನನಗೆ ಅನುಮಾನ ಬರತೊಡಗಿತು...!
"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"
"ಬರುತ್ತಿದ್ದಳು..."
"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"
"ಛೇ.. ಛೇ.. ಹಾಗೇನಿಲ್ಲ"
"ಅದು ಹೇಗೆ ಸಾಧ್ಯ..?
ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"
"ಅವಳಿಗೆ ...
ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...
ನನ್ನ ಅತ್ತಿಗೆಯ ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."
"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"
" ಅವಳೂ ಕೆಲಸ ಮಾಡುತ್ತಾಳೆ..
ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."
ನನಗೆ ಕೋಪ ಬರತೊಡಗಿತು...
ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?..
ಛೇ..!!
"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"
"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?
ಅವಳ ಚಂದ ಇಷ್ಟಪಟ್ಟೆ ಅಷ್ಟೆ...
ಬಯಸಲಿಲ್ಲ..
ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...
ಪ್ರೀತಿಸ್ತಾ ಇರೋದು ನಿನ್ನನ್ನು..."
" ಇದನ್ನು ನಾನು ಹೇಗೆ ನಂಬಲಿ...? "
ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..
ಹುಡುಗನ ಧ್ವನಿ ಗಡುಸಾಯಿತು...
ಬಹಳ ಕಠಿಣವಾಗಿ ಹೇಳಿದ...
"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ..
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."
ಆತ ...
ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...
ನನಗೂ.. ಅಸಾಧ್ಯ ಕೋಪ ಬಂತು....
ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
ಇಲ್ಲಿಂದ ಮತ್ತೆ.....ಜಲನಯನದ ಪಯಣ...................ಕಿವಿಯಲ್ಲಿ..ಯಾರೋ ಪಿಸುಗುಟ್ಟಿದಂತೆ...... “ಏಯ್ ಚಿನ್ನಾ.... ಪುಟ್ಟಣ್ಣಿ....
ಏನು ...? ಇಷ್ಟೊಂದು ಗಾಢ ನಿದ್ದೇನಾ...?? ನಿಂತಲ್ಲೇ ನನ್ನ ಅಪ್ಪಿದವಳು...
ಹಾಗೇ...ಕಣ್ಮುಚ್ಚಿ ನಿಂತದ್ದು... ನಿನ್ನ ಈ ಮುಚ್ಚಿದ ಸುಂದರ ಗುಲಾಬಿ ದಳದಂತಹ
ಕಣ್ರೆಪ್ಪೆ..ನಿನ್ನ ಈ ಸುಂದರ ಮಚ್ಚೆ..., ನಿನ್ನ ಮಧುರ ತುಟಿಗಳು...ನೋಡುತ್ತಾ ನಾನೂ
ಮೈ ಮರೆತೆ.... ನಿನ್ನನ್ನು ಅನಾಮತ್ ಎತ್ತಿ.. ಹಾಗೇ ...ಕೋಮಲ ಹೂವಿನ
ಮಾಲೆಯನ್ನು ಇಡುವ ಹಾಗೆ ಹಾಸಿಗೆಮೇಲಿಟ್ಟು.....ನಾನೂ ಮಲಗಿದೆ. ಮದುವೆಯ
ಓಡಾಟ ತಡ ರಾತ್ರಿಯವರೆಗೂ ನಡೆದ ರಿಸಿಪ್ಷನ್..... ನೀನೂ ನನ್ನಂತೆ
ಆಯಾಸಗೊಂಡು ಮುಗುಳ್ನಗೆಯ ಸುಖ ನಿದ್ದೆಯಲ್ಲಿದ್ದೆ.. ನಿನ್ನ ಆ ಮುದ್ದುಮುಖವನ್ನು
ನೋಡುತ್ತಾ ನಾನೂ ನಿದ್ರಿಸಿದ್ದು ನನಗೂ ಅರಿವಾಗಿರಲಿಲ್ಲ..... ಈಗಷ್ಟೆ.. ಅಮ್ಮ
ಬಾಗಿಲು ಬಡಿದಂತಾಗಿ ಎಚ್ಚರ ಆಯ್ತು.....”
“ಹೌದಾ....ಅಯ್ಯೋ..... ನನ್ನ ಎತ್ತಿ ಮಲಗಿಸಿದ್ರಾ...??!!”
ಕೇಳಿದೆ ನಾಚಿಕೊಂಡೇ
ಹಾಗಾದ್ರೆ.....ಹಾಗಾದ್ರೆ....ಇವರ ಅತ್ತಿಗೆ ತಂಗಿ..? ಸ್ವೀಟ್ ಹಾರ್ಟು....???!!!
ಅಯ್ಯೋ ಬರೀ ನನ್ನ ಹುಚ್ಚು ಕನಸು.........
ಅವರ ಮುಖ ನೋಡಿದೆ.... ಮಗುವಿನ ಮುಗ್ಧತೆ ..ಮತ್ತು ತನ್ನ ಮುದ್ದು ಮಡದಿಯನ್ನೇ
ಮೆಚ್ಚುಗೆಯಿಂದ ನೋಡುತ್ತಿದ್ದ ಅವರ ಧನ್ಯತಾಭಾವ.... ನನ್ನೆಲ್ಲ ಕನಸಿನ ಕಲ್ಪನೆಗಳಿಗೆ
ತೆರೆಯೆಳೆಯಿತು.... ಛೇ...ಇಂತಹವರ ಬಗ್ಗೆ ನನ್ನ ಹುಚ್ಚು ಮನಸು ಏಕೆ ಅಂತಹಾ
ಯೋಚನೆ ಮಾಡಿತು..?? ...ತಲೆಕೊಡವಿದೆ..
ಹಾಸಿಗೆ ಬಿಟ್ಟೇಳುವ ನನ್ನನ್ನು ಹಾಗೇ ತನ್ನತ್ತ ಎಳೆದುಕೊಂಡು
ಅಪ್ಪಿಕೊಂಡರು....ಮತ್ತದೇ ಸುಖ ...!! ಅವರ ತೆಕ್ಕೆಯಲ್ಲಿ ಮತ್ತೆ
ಕರಗಿಹೋದೆ.....!!!!!!!!!!!
Posted by ಜಲನಯನ (suruaz@gmail.com) on October 02, 2011 06:47 AM· permalink

ಮತ್ತೆ ಹಾಡಿತು ಕೋಗಿಲೆ !
ನದಿಯಾ ತಮಿಳು ಮೂಲದ ಕೂಲಿ ಕಾರ್ಮಿಕಳು. ಕೃಷ್ಣ ಸುಂದರ ಷೋಡಶಿ. ಬಡತನದಲ್ಲೂ ಬೆಂಕಿಯಲ್ಲಿ ಅರಳಿದ ಹೂವಂತೇ ಅರಳಿದ ಹೂವು. ಕಪ್ಪು ಮುಖದಲ್ಲಿ ಮಲ್ಲಿಗೆ ದಂಡೆ ಅರಳಿದಂತೇ ಕಾಣುವ ತುಂಬುನಗು. ಹದವಾದ ನಿತಂಬ. ಸಪಾಟು ಹೊಟ್ಟೆಯ ತೀಕ್ಷ್ಣ ಕಣ್ಣಿನ ಚಟುವಟಿಕೆಯ ಹುಡುಗಿ. ಮೈಸೂರು ಮಲ್ಲಿಗೆಯ ಮಾಲೆಯನ್ನು ಮೊಳವೆರಡು ಮುಡಿದು ಗಾರೆ ಕೆಲಸಕ್ಕೆ ಬಂದರೆ ಕೆಲಸದ ಗಂಡುಹುಡುಗರಿಗೂ ಯಾವುದೋ ಇಲ್ಲದ ಚಾಲನೆ ಸಿಗುತ್ತಿತ್ತು; ಮೈಯ್ಯಲ್ಲಿ ಏನೋ ಸಂಚಲನವಾಗುತ್ತಿತ್ತು. ಎಷ್ಟೋ ದಿನ ಮನೆಕಟ್ಟಿಸುತ್ತಿದ್ದ ಯಜಮಾನಿ ನಂದಿನಿಗೇ ಸ್ವಗತದಲ್ಲಿ ಅನಿಸಿದ್ದಿದೆ ’ ಏನಪ್ಪಾ ಮಲ್ಲಿಗೆ ಮೊಳಕ್ಕೆ ೨೦ ರೂಪಾಯಿ ಆದರೂ ಕೂಲಿ ಮಾಡಿ ಹೊಟ್ಟೆಹೊರೆದುಕೊಳ್ಳುವ ಈ ಹುಡುಗಿ ಅದು ಹೇಗೆ ಪ್ರತಿನಿತ್ಯ ಎರಡೆರಡು ಮೊಳ ಮಲ್ಲಿಗೆ ಹೂ ಮುಡಿದುಬರ್ತಾಳೆ ? ’ ಉತ್ತರ ಸಿಕ್ಕಿರಲೇ ಇಲ್ಲ. ಹೋಗಲಿ ತಾವು ಮಧ್ಯಮವರ್ಗದವರಾಗಿಯೂ ಪ್ರತಿಯೊಂದನ್ನೂ ಲೆಕ್ಕಹಾಕಿ ಅಳೆದು ತೂಗಿ ಸಂಸಾರ ನಡೆಸುವಾಗ ಖರ್ಚಿಗೆ ಸಾಲದೇ ಸಾಲದ ಮೊರೆಹೋಗುವ ನಮಗೆ ಮೊಳ ಮಲ್ಲಿಗೆ ಅಪರೂಪಕ್ಕೆ ಕೊಳ್ಳುವುದಕ್ಕೂ ಆತಂಕ, ಅಂಥಾದ್ದರಲ್ಲಿ ಇವಳದ್ದೇನಪ್ಪಾ ಈ ವಿಚಿತ್ರ ಎಂದುಕೊಂಡೇ ಇದ್ದಳು. ಮನಸ್ಸಿದ್ದರೆ ಮಾರ್ಗ ಎನ್ನುವ ಉತ್ತರವೂ ಒಮ್ಮೆ ನೆನಪಿಗೆ ಬಂದಿತ್ತು.
ಆತನಿಗೆ ಗೊತ್ತು ತನಗೆ ಬೇಕಾದ ವಸ್ತು ಎಲ್ಲಿ ಹಿಡಿದರೆ ಸಿಗುತ್ತದೆ? ಯಾವಾಗ ಎಲ್ಲಿ ಹೇಗೆ ಹಿಡಿಯಬೇಕು ಎಂಬುದು. ಹೂವು ಮಾರುವ ದಾರಿಯಲ್ಲಿ ಸೈಕಲ್ ಓಡಿಸಿ ಬರುತ್ತಾ ಬರುತ್ತಾ ಕಂಡವಳೇ ನದಿಯಾ! " ಪರವಾಗಿಲ್ಲ, ನಲ್ಲ ಇರಕ್ಕು" ಎಂದುಕೊಂಡ ಆತನ ಮತೃಮೂಲವೂ ತಮಿಳೇ. ನದಿಯಾ ಕೂಲಿಮಾಡಿದರೇನಾಯ್ತು ಆಕೆಯಲ್ಲಿ ಆಕೆಯ ಹರೆಯದಲ್ಲಿ ಜಗನ್ಮೋಹಿನಿಯನ್ನೇ ಕಂಡ ಈ ಮುರುಗ ! ಹೇಗಾದರೂ ಮಾಡಿ ಆಕೆಯನ್ನು ಪಡೆಯುವ ಮನಸ್ಸು ಆತನಿಗೆ. ಆರಂಭದ ಮುಗುಳ್ನಗು ಬರುಬರುತ್ತಾ ೫ ನಿಮಿಷದ ಮಾತಿಗೆ ತಿರುಗಿ ಈಗೀಗ ಗಂಟೆಗಟ್ಟಲೆ ಮಾತೂ ಮಾತೂ ಮಾತು. ಆಕೆಗೆ ಜಾಸ್ತಿ ಏನೂ ತಿಳೀದು. ಹರೆಯದ ಮುಗ್ಧ ಸ್ನಿಗ್ಧ ಭಾವಗಳಿಗೆ ತೆರೆದುಕೊಂಡಿದ್ದಳಷ್ಟೇ. ಮುರುಗನನ್ನು ಕಂಡಾಗಲೆಲ್ಲಾ ’ಮುರಳೀಧರ’ನ ಮುರಳಿಗೆ ಮನಸೋತ ಗೋವಿನಂತಾಗುತ್ತಿದ್ದಳು! ಯಾಕೋ ಮುರುಗ ಬರುವ ಸಮಯ ಹತ್ತಿರ ಬಂದಾಗ ಹಾದಿಬದಿಯಲ್ಲೇ ನಿಂತಿರೋಳು. ಅಪ್ಪ-ಅಮ್ಮ ಬೇರೇ ಜಾಗದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಸಿಕ್ಕಿತ್ತು.
ಜೋಗುಪಾಳ್ಯದ ಮುರುಗೇಶ ನಿತ್ಯವೂ ಹೂ ಮಾರುತ್ತಾ ಬರುತ್ತಿದ್ದ. ಸೈಕಲ್ಲಿಗೆ ಹೂವಿನ ಬುಟ್ಟಿ ಏರಿಸಿ ಹೊರಟುಬಿಟ್ಟರೆ ಹೂ ಮಾರಿ ಮುಗಿದಮೇಲೇ ಮನೆ ಸೇರುವಾತ. ಆಗಾಗ ಆಗಾಗ ನಂದಿನಿಯ ನಿರ್ಮಾಣ ಹಂತದಲ್ಲಿರುವ ಮನೆಯ ಅಕ್ಕ-ಪಕ್ಕ ನಿಂತು ಹುಡುಗರ ಕೂಡ ಮಾತನಾಡಿಕೊಂಡು ಹೋಗುತ್ತಿರುವಾಗಲೇ ಅವನಿಗೆ ನದಿಯಾಳ ಸಲುಗೆ ಸಿಗಲು ಆರಂಭವಾಯ್ತು. ಆತನೋ ಈಕೆಗಿಂತ ಸ್ಥಿತಿವಂತ. ಹೊಟ್ಟೆಬಟ್ಟೆಗೆ ಮನೆಯ ಎಲ್ಲರೂ ಸೇರಿ ಅದೂ ಇದೂ ಯಾಪಾರ ಸಾಪಾರ ಮಾಡಿ ದುಡೀತಿದ್ರು-ಸಾಕಾಗ್ತಿತ್ತು. ಅಪ್ಪ ಹಳೇ ಲಾರಿ ಬಾಡಿಗೆ ಓಡಿಸಿ ಒಂದಷ್ಟು ಹಣ ಕೂಡಿಟ್ಟು ಸಣ್ಣ ಸೈಟುಕೊಂಡು ಗೂಡೊಂದ ಕಟ್ಟಿದ್ದ. ಇರುವ ಇಬ್ರು ಹೆಣ್ಮಕ್ಕಳ ಮದುವೆ ಅದಾಗಲೇ ಆಗಿಹೋಗಿತ್ತು. ಮುರುಗನಿಗೂ ಇನ್ನೇನು ಮದುವೆ ವಯಸ್ಸೇ ಆತನ ಅಪ್ಪನ ಲೆಕ್ಕದಲ್ಲಿ. ೨೧ ವರ್ಷ ಕಳೆದು ೨೨ ಮೆಟ್ಟಿತ್ತು. ಎಲ್ಲಾದರೂ ಸಲ್ಪ ಅನುಕೂಲ ಇರುವ ತಮಿಳು ಮನೆತನದಿಂದ ಹೆಣ್ಣೊಂದನ್ನ ಸೊಸೆಯಾಗಿ ತರುವ ಬಯಕೆ ಅವರಿಗಿತ್ತು.
ಗಾರೆ ಕೆಲಸಕ್ಕೆ ಸಹಾಯಕಳಾಗಿರುವ ಬಡ ನದಿಯಾಳನ್ನು ಮದುವೆಯಾಗುತ್ತೇನೆ ಎಂದರೆ ಮನೆಯಲ್ಲಿ ಹುರಿದುಮುಕ್ಕಿಬಿಡುತ್ತಾರೆ. ಅದೂ ಅಲ್ಲದೇ ಆಕೆಗೆ ಯಾವ ಆಸ್ತಿಯೂ ಇಲ್ಲ. ಇರುವ ಹರೆಯದ ದೇಹವೇ ಆಸ್ತಿ. ಮುರುಗನಿಗೂ ಆಸ್ತಿಬೇಕೆಂಬ ಆಸೆ ಇತ್ತು ಆದರೆ ಹರೆಯದ ಕರೆಯ ಜೋರಾಗಿತ್ತು, ಮೈಯಲಿ ಆಕೆಯನ್ನು ಕಂಡಾಗಲೆಲ್ಲ ಕರೆಂಟು ಹರಿಯುತ್ತಿತ್ತು. ’ಆಸ್ತಿ ಪಾಸ್ತಿ ಆಮೇಲೆ ನೋಡುವಾ ಮೊದಲೊಮ್ಮೆ ಸಿಕ್ಕರೆ’ ಎನ್ನುತ್ತಿತ್ತು ಮನಸ್ಸು. ಬಿಗಿದಪ್ಪಿ ಏನೇನೋ ಮಾಡುವ ಬಯಕೆಯೆಲ್ಲಾ ಚಿಗುರಿ ಬಹಳಕಾಲವಾಗಿತ್ತು. ಬುಟ್ಟಿಯೊಳಗಿನ ಹಾವು ಆಗಾಗ ಆಗಾಗ ಬುಸುಗುಡುತ್ತಲೇ ಇತ್ತು. ತಾಳಲಾಗದ ಕಿಚ್ಚಿಗೆ ಏನೆಲ್ಲಾ ಮಾಡಿದ್ದಿದೆ ಎಂದರೆ ಛೆ ಹೇಳುವುದು ಬೇಡಬಿಡಿ. ಅದು ಕೇಳುವುದಕ್ಕೆ ಲಾಯಕ್ಕಿಲ್ಲ. ತಡ್ಕೋಬೇಕು ತಡ್ಕೋಬೇಕು ಅಂದ್ರೆ ಎಲ್ಲೀವರೆಗೆ ತಡ್ಕೋಬೇಕು ? ಅದ್ಕೂ ಇತಿಮಿತಿ ಇಲ್ವೇ? ನಿರ್ಧಾರಕ್ಕೆ ಬಂದುಬಿಟ್ಟಿದ್ದ: ಮನೆಯವರು ಏನಾದ್ರೂ ಮಾಡ್ಕೊಳ್ಲಿ, ತನಗಂತೂ ಒಂದಷ್ಟ್ ದಿನ ಆಕೆ ಬೇಕು !
ನದಿಯಾಗೂ ಶರೀರ ಅದ್ಯಾಕೋ ಮುರುಗನನ್ನು ಕಂದಾಗೆಲ್ಲ ಕಾದ ಕಬ್ಬಿಣದಂತಾಗುತ್ತಿತ್ತು. ಕರಗಿ ನೀರಾಗಿ ಹರಿದ ಮಂಜು ಬಿಂದಿವಿನಿಂದ ತೊರೆ, ಹಳ್ಳ, ನದಿ ಎಲ್ಲಾ ಅಗಿ ಸಾಗರ ಸೇರುವಂತೇ ಒಳಗೊಳಗೆ ಒತ್ತರಿಸಿ ಓಡಾಡುವ ಭಾವನೆಗಳನ್ನು ಮುರುಗನ ಎದೆಗೊರಗಿ ಹಂಚಿಕೊಳ್ಳುವುದರಲ್ಲಿ ಇಷ್ಟವಿತ್ತು. ಆಕೆ ಟೆಂಟಿನಲ್ಲಿ ಸಿನಿಮಾಗಳನ್ನು ನೋಡುತ್ತಿದ್ದಳಲ್ಲಾ ಅಲ್ಲೆಲ್ಲಾ ನಾಯಕ ನಾಯಕಿ ರೋಮಾನ್ಸು ನೋಡಿದಾಗ ನಾಯಕನಲ್ಲಿ ಮುರುಗನನ್ನೇ ಕಾಣುತ್ತಿದ್ದಳು. ಹೇಳುವುದಕ್ಕೇ ಮರೆತೆ- ಬನ್ನೇರು ಘಟ್ಟ ರಸ್ತೆಯ ಬಿಳೇಕಳ್ಳಿ ಪಕ್ಕದ ಟೆಂಟಿನಲ್ಲಿ ಇತ್ತೀಚೆಗೆ ಮುರುಗ ಮತ್ತು ನದಿಯಾ ಸೇರಿ ಒಂದು ಸಿನಿಮಾ ನೋಡಿದ್ದರು. ಸಿನಿಮಾ ಅರಂಭದಿಂದ ಮುಗ್ಯೋವರೆಗೂ ಕಥೆಗಿಂತಾ ಆತ ಗಟ್ಟಿಯಾಗಿ ಆಗಾಗ ಅಪ್ಪಿಕೊಂಡು ಮೇಲೆಲ್ಲಾ ಏನೇನೋ ಮಾಡುತ್ತಿದ್ದುದು ನೆನಪಾದಗ ಜೀವನ ಸುಂದರವಾಗಿ ಕಾಣುತ್ತಿತ್ತು. ಪ್ರತೀದಿನವೂ ಸಿನಿಮಾ ನೋಡುವ ಮನಸ್ಸಾಗುತ್ತಿತ್ತು. ಯಾವಾಗಲೂ ಸಿನಿಮಾ ಟೆಂಟಿನಲ್ಲಿ ಕೂತೇ ಇರೋಣ ಎನ್ನಿಸುತ್ತಲೂ ಇತ್ತು. ಕರೆಂಟು ಹೋಗಿ ಕತ್ತಲಲ್ಲಿ ಮುರುಗ ಜೋರಾಗಿ ಮುತ್ತುಕೊಡುವಾಗ ಎಲ್ಲಿಂದಲೋ ಟಾರ್ಚ್ ಬೆಳಕೊಂದು ಹಾದುಹೋಗಿ ತಮ್ಮನ್ನು ಕಂಡ ಪಡ್ಡೆಗಳು ಸೀಟಿ ಹೊಡೆದು ಅದೇನೋ ಕೂಗಿದ್ದು ಈಕೆಗೆ ಈಗಲೂ ನಗುಬರಿಸುತ್ತಿತ್ತು.
ಅಂತೂ ಕಟ್ಟಡಕ್ಕೆ ಮೊದಲ ಹಂತದ ಮುಚ್ಚಿಗೆ ಮುಗಿದು ಮಹಡಿ ಕಟ್ಟುತ್ತಿರುವಾಗ ಕೆಲವು ಕೊಠಡಿಗಳನ್ನು ಕಟ್ಟುತ್ತಿದ್ದರು. ಬಹಳದಿನದಿಂದ ಬುಟ್ಟಿಯಿಂದ ಹೊರಬರಲೆತ್ನಿಸುತ್ತಿದ್ದ ಮುರುಗನ ಹಾವಿಗೆ ಅಂದುಬಿಡುಗಡೆಯ ಅವಕಾಶ ಒದಗಿಬಂದಿತ್ತು! ಮುರುಗನ ಆಸೆಗೆ ನದಿಯಾ ಬೇಡ ಎನ್ನಲಿಲ್ಲ. ನಿತ್ಯವೂ ಮಲ್ಲಿಗೆ ಮೊಳವೆರಡನ್ನು ಕೊಟ್ಟು ಅಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮುರುಗನಿಗೆ ಹಾಗೆಲ್ಲಾ ಯಾವುದನ್ನೂ ಬೇಡಾ ಎನ್ನುವ ದಾರ್ಷ್ಟ್ಯ ಅವಳಲ್ಲಿರಲಿಲ್ಲ. ಮದುವೆಯ ಬಗ್ಗೆ ಆಕೆಗೆ ತಿಳೀದು ಬಿಡಿ....ಅದನ್ನೆಲ್ಲಾ ಅಕೆ ಸದ್ಯ ಯೋಚಿಸಲೇ ಇಲ್ಲ. ಅಂದು ಕೃಷ್ಣ ಪಕ್ಷದ ಕ್ಷೀಣಚಂದ್ರನಿದ್ದ. ತಿಂಗಳು ಹಾಲು ಚೆಲ್ಲಿದಂತಿರಲಿಲ್ಲ, ಬದಲಾಗಿ ಅಲ್ಲಲ್ಲಿ ಅಲ್ಲಲ್ಲಿ ಮೋಡಗಳ ನೆರಳೂ ಸೇರಿದಂತೇ ಬಿಳೀ ಕಾಗದದಮೇಲೆ ವಾಟರ್ ಮಾರ್ಕ್ ಬಣ್ಣ ಬರೆದಂತಿತ್ತು. ನದಿಯಾ ಕೆಲಸಮುಗಿದು ಮನೆಗೆ ಹೊರಟವಳು ದಾರಿಯಲ್ಲಿ ಮುರುಗನನ್ನು ಭೇಟಿಮಾಡಿದಳು. ಮನೆಗಳಲ್ಲಿ ಏನು ಹೇಳಿದರೋ ಅರಿವಿಲ್ಲ. ಅಂತೂ ಇಬ್ಬರ ಮನೆಗಳಲ್ಲೂ ಹುಡುಕಾಟವೂ ನಡೆದಿರಬಹುದು. ಆದರೆ ಆ ರಾತ್ರಿಮಾತ್ರ ಹಾವು ಹುತ್ತಸೇರಿತ್ತು! ಕೀಲಿ ತಿರುಗಿಸಿದ ಭೂಪನ ಚಿಗುರುಮೀಸೆಯನ್ನು ಸ್ವತಃ ತಾನೇ ಕೈಯಿಂದ ನೀವುತ್ತ ಖುಷಿಪಟ್ಟಳು ನದಿಯಾ. ಎಂದೂ ಕಂಡಿರದ ಅದೇನೋ ಕಂಡಂತಾಗಿತ್ತು. ಬೆಳಗಿನ ಜಾವದವರೆಗೂ ’ಅರೆಮನೆ’ಯ ಮಹಡಿಯಲ್ಲಿ ರೂಪುಗೊಳ್ಳುತ್ತಿದ್ದ ಕೊಠಡಿದ ಗೋಡೆಯ ಪಕ್ಕದಲ್ಲಿ ದೇಹವೆರಡೂ ಒಂದಾಗಿತ್ತು. ಬೆಳಗಿನ ಐದುಗಂಟೆಗೆ ಜಾಗ್ ಮಾಡುವವರ ಮಾತುಕೇಳಿ ಎಚ್ಚೆತ್ತು ಇಬ್ಬರೂ ಅಗಲಲಾರದೇ ಅಗಲಿದರು!
ನದಿಯಾಳ ಅಪ್ಪ-ಅಮ್ಮ ಹುಡುಕಿ ಸೋತರು. ಬಡವರಾದ ತಮಗೆ ಮಗಳೂ ಕಳೆದು ಈ ರೀತಿ ತೊಂದರೆಯಾಗಬೇಕೇ ಎಂದು ಚಿಂತಿಸುತ್ತಿರುವ ವೇಳೆಗೆ ಬೆಳ್ಳಂಬೆಳಿಗ್ಗೆ ನದಿಯಾ ಬಂದುಬಿಟ್ಟಿದ್ದಳು. ಗದರಿಕೊಂಡ ಅಪ್ಪ-ಅಮ್ಮನಿಗೆ ಯಾರೋ ತೊಂದರೆಕೊಟ್ಟು ಅಟ್ಟಿಸಿಕೊಂಡು ಬಂದಾಗ ಅಲ್ಲೆಲ್ಲೋ ಅಡಗಿದ್ದು ರಾತ್ರಿ ಕಳೆದು ಬಂದೆ ಎಂದಳು. ಹುಡುಕಿದ ಅಪ್ಪ-ಅಮ್ಮನಿಗೆ ಗೆಳೆಯನೊಬ್ಬನಿಗೆ ಏನೋ ಅಪಘಾತಕ್ಕೆ ಈಡಾಗಿದ್ದು ರಾತ್ರಿಯೆಲ್ಲಾ ಆಸ್ಪತ್ರೆಯಲ್ಲಿ ಕಳೆದುದಾಗಿ ವರದಿ ಒಪ್ಪಿಸಿದ ಮುರುಗ! ಅಲ್ಲಿಗೆ ಆ ರಾತ್ರಿಯ ಕಥೆ ಹಾಗೆ ಕಳೆದು ಹೋಯ್ತು, ಮುಗಿದೂ ಹೋಯ್ತು.
ವಾರವೆರಡು ಕಳೆದಿರಲಿಲ್ಲ, ನದಿಯಾಗೆ ವಾಂತಿ ! "ಏನು ತಿಂದೆ ಯಾಕೆ ವಾಂತಿ ? " ಎಂದರು ಅಪ್ಪ-ಅಮ್ಮ. ತನಗೇನೂ ತಿಳಿದಿಲ್ಲವೆಂದೊ ಹೊರಗಡೆ ತಾನೇನೂ ತಿಂದಿಲ್ಲವೆಂದೂ ತಿಳಿಸಿದಳು. ವೈದ್ಯರಲ್ಲಿಗೆ ಹೋಗಲು ಜಾಸ್ತಿ ಕಾಸಿಲ್ಲ. ಸರಕಾರೀ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಹೋದಾಗ ಅಲ್ಲಿನ ವೈದ್ಯರು ಕೇಳಿದ್ದು " ನೋಡಮ್ಮಾ ನಿನಗೆ ಹುಡುಗ ಯಾರದರೂ ಗೊತ್ತಾ ? " , ಆಕೆಗೆ ಹೌದು ಅನ್ನಬೇಕೋ ಇಲ್ಲಾ ಅನ್ನಬೇಕೋ ತಿಳೀಲಿಲ್ಲ. ವೈದ್ಯರೇ ಮುಂದುವರಿಸಿದರು " ನೀನೀಗ ಬಸುರಿಯಾಗಿದೀಯ ಕಣಮ್ಮ...ಮದುವೆ ಆಗಿಲ್ವಾ ? " ಕುಸಿದುಹೋದ ಅವಳೆಂದಳು " ಆಗಿದೆ" . ವೈದ್ಯರು ವಾಂತಿ ತಹಬದಿಗೆ ಬರಲು ಸ್ವಲ್ಪ ಮಾತ್ರೆ ಪಡೆದುಹೋಗುವಂತೇ ಚೀಟಿ ನೀಡಿದರು. ಕಟ್ಟುತ್ತಿರುವ ಜಾಗದಲ್ಲೇ ಒಂದು ಸಣ್ಣ ಗೂಡು ಅವಳ ಮನೆ. ಮನಗೆ ಬಂದ ಆಕೆಗೆ ತಲೆಸುತ್ತು ಬರುತ್ತಿತ್ತು, ನಿದ್ದೆ ಬರುತ್ತಿತ್ತು. ಇನ್ನೂ ಏನೇನೋ ! " ವೈದ್ಯರು ಕಮ್ಮಿ ಆಗ್ತದೆ ಎಂದು ಹೇಳಿದ್ದಾರೆ " ಎಂದು ಸುಮ್ಮನಾಗಿಸಿಬಿಟ್ಟಿದ್ದಳು ಅಪ್ಪ-ಅಮ್ಮನ್ನ. ಮುರುಗನಿಗೆ ನಿಧಾನಕ್ಕೆ ವಿಷಯ ತಿಳಿಸಿದಳು. ಮುರುಗ ನಕ್ಕು ಅದೇನಾಗಲ್ಲ ಬಿಡು ಎಂದ, ತಾನು ನೋಡ್ಕೋತೀನಿ ಎಂದ. ಆ ನಂತರದ ದಿನಗಳಲ್ಲಿ ಮುರುಗ ಬಹಳ ಹೊತ್ತು ನಿಲ್ಲುತ್ತಿರಲಿಲ್ಲ. ಬರುತ್ತಿದ್ದ, ನಗುತ್ತಿದ್ದ, ಹೂ ನೀಡುತ್ತಿದ್ದ, ಸ್ವಲ್ಪವೇ ಸ್ವಲ್ಪ ಹೊತ್ತು ಹೊರಟುಹೋಗಿಬಿಡುತ್ತಿದ್ದ!
ಒತ್ತಾಯಕ್ಕೆ ಬಸಿರಾದರೆ ಹಡೆಯೋದು ದಾರೀಲಿ ಎಂಬೊಂದು ಗಾದೆ ಇದ್ಯಲ್ಲ ಹಾಗೇ ಮೂರು ತಿಂಗಳವರೆಗೆ ಹೇಗೋ ಮ್ಯಾನೇಜ್ ಮಾಡಿದಳು. ಆನಂತರ ಹೊಟ್ಟೆ ಉಬ್ಬರಿಸಿ ಕಾಣುತ್ತಿತ್ತು. ಕೆಲಸಮಾಡಲು ಆಸಕ್ತಿ ಇರಲಿಲ್ಲ. ಶರೀರ ನಿತ್ರಾಣವಾದಂತಿತ್ತು. ಕುಂತಲ್ಲೇ ನಿದ್ದೆ ಹೋಗೋಳು. ಅಪ್ಪ-ಅಮ್ಮಂಗೆ ಹೊಟ್ಟೆನೋಡಿ ಡೌಟು ಬಂತು. ಕೇಳೇ ಕೇಳಿದರು. ಅಪ್ಪ ಒಂದು ಇಟ್ಟೂ ಬಿಟ್ಟರು. ಒಡಲಾಳದ ಉರಿ ಬೇರೆ ಅಪ್ಪನ ಹೊಡೆತ ಬೇರೆ ನದಿಯಾ ಮರುಗಿದಳು. ಆಕೆಯ ಅಮ್ಮ ತಾನು ಸತ್ತುಹೋಗಬಾರದಿತ್ತೇ ಎಂದಳು. ಅಪ್ಪ-ಅಮ್ಮನ ಮನಸ್ಸನ್ನು ಇಷ್ಟೆಲ್ಲಾ ನೋಯಿಸಿ ತಾನು ಇರಬೇಕೆ ಎಂಬ ಅನಿಸಿಕೆಗೂ ಅವಕಾಶ ಕೂಡಿಬಂತು. " ಯಾರು ಬೊಗಳು ? " ಅಪ್ಪ ಗದರಿದರು. ಕಡೆಗಣ್ಣಿನಲ್ಲಿ ಅದು ಹೇಗೋ ಎಲ್ಲೆಲ್ಲೋ ನೋಡುತ್ತಾ " ಮುರುಗ " ಸಣ್ಣಗೆ ಉಲಿದಳು.
ಮಾರನೇ ಬೆಳಿಗ್ಗೆ ನಂದಿನಿಯ ನಿರ್ಮಾಣವಾಗುತ್ತಿರುವ ಆ ಮನೆಮುಂದೆ ನದಿಯಾಳ ಅಪ್ಪ ಅಡಗಿನಿಂತಿದ್ದ. ಯಾರು ಎಲ್ಲಿ ಏನು ಸೂಟುಕೊಟ್ಟರೋ ಗೊತ್ತಾಗಲಿಲ್ಲ, ಆ ದಿನ ಮುರುಗ ಬರಲೇ ಇಲ್ಲ. ಅದಕ್ಕೂ ಮಾರನೇ ದಿನವೂ ಬರಲಿಲ್ಲ. ಆ ನಂತರ ಆತ ಬರುವುದನ್ನೇ ನಿಲ್ಲಿಸಿಬಿಟ್ಟ. ಹೂ ಮಾರುವುದನ್ನು ಬೇರೇ ಪ್ರದೇಶಕ್ಕೆ ಸೀಮಿತಗೊಳಿಸಿಬಿಟ್ಟ. ನದಿಯಾ ನಲುಗಿದಳು. ಹೇಳಲೂ ಆಗದ ಕೇಳಲೂ ಆಗದ ಸ್ಥಿತಿ ಅವಳದು. ಮುರುಗನ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಬೇಡಿ ಕಾಡಿ ಪಡೆದ ಭಾವಚಿತ್ರವೊಂದೇ ಅವಳ ತಾಬಾ ಇದ್ದಿದ್ದು. ಭಾವಚಿತ್ರವನ್ನು ಅಪ್ಪನಿಗೆ ಕೊಟ್ಟಳು. ಮೇಸ್ತ್ರಿ ಮತ್ತು ಇನ್ನೊಂದಿಬ್ಬರಿಗೆ ಅಪ್ಪ ವಿಷಯ ಹೇಳಲೇಬೇಕಾಯ್ತು. ಅವರನ್ನೊಡಗೂಡಿ ಅಪ್ಪ ಪೋಲೀಸರಿಗೆ ವಿಷಯ ತಿಳಿಸಿದ. ಕಾಸಿಲ್ಲದ ಕೈಲಿ ಬಂದ ಅವರನ್ನು " ಆಯ್ತಪ್ಪಾ ನೋಡ್ತೀವಿ ಕಂಪ್ಲೇಂಟು ಕೊಟ್ಟು ಹೋಗಿ " ಎಂದರು. ಬಡತನ ಇಲ್ಲೂ ಹಾಗೇ ತನ್ನತನ ಕಾಪಾಡಿಕೊಂಡಿತ್ತು! ಫಿರ್ಯಾದಿ ಕೊಟ್ಟಿದ್ದು ಕೆಲಸಕ್ಕೆ ಬರಲಿಲ್ಲ. ಯಾರೋ ಹೇಳಿದರು ನೀವು ಮಾಧ್ಯಮದವರಿಗೆ ಹೇಳಿ ವಿನಂತಿಸಿಕೊಳ್ಳಿ.
ಮಾಧ್ಯಮದ ಮಂದಿ ನದಿಯಾಳನ್ನೂ ತಂದೆಯನ್ನೂ ಮಾತನಾಡಿಸಿ ಅದನ್ನು ಬಿತ್ತರಿಸಿದರು. ಮುರುಗನ ಛಾಯಾಚಿತ್ರವನ್ನು ಬಹಿರಂಗಗೊಳಿಸಿದರು. ಮುರುಗನ ಅಮ್ಮ ಲೋಕಲ್ ಚಾನೆಲ್ನಲ್ಲಿ ಇದನ್ನು ಕಂಡುಬಿಟ್ಟರು. ಆ ರಾತ್ರಿ ಮುರುಗ ಮನೆಗೆ ಬರುತ್ತಿದ್ದಂತೇ ಆತನಗೆ ಮಂಗಳಾರತಿ ಬೆಳಗಿದರು. " ಪೋಲೀಸರು ಹುಡುಕಿದರೆ ಏನು ಮಾಡ್ತೀಯಾ ? " ಕೇಳಿದರು. ಕೂಲಿಯವಳನ್ನು ಮುಟ್ಟಿದೆಯಾ ಮನೆಹಾಳನೆ ಎಂದು ಜರಿದರು. ಅಪ್ಪ-ಅಮ್ಮ ಪ್ಲಾನುಮಾಡಿ ಚೆನ್ನೈ ಹತ್ತಿರದ ಹಳ್ಳಿಯ ನೆಂಟರ ಮನೆಗೆ ಕಳಿಸಿಬಿಟ್ಟರು. ಅಲ್ಲಿಂದಲೇ ವ್ಯವಹಾರ ಕುದುರಿಸಿ ಮದುವೆ ಗೊತ್ತುಮಾಡಿ ಮುರುಗನ ಮದುವೆ ನಡೆದುಹೋಯಿತು. ಕಾಸಿರುವ ಕುಟುಂಬದ ಕನ್ಯೆ ಮುರುಗನ ಹೆಂಡತಿಯಾಗಿ ಮನೆಸೇರಿದಳು. ಮುರುಗ ಗಡ್ಡ ಮೀಸೆ ಬೆಳೆಸಿಕೊಂಡು ಚಹರೆ ಬದಲಿಸಿಕೊಂಡು ಬದುಕುತ್ತಿದ್ದ.
ಒಂದಷ್ಟು ದಿನ ಮಾಧ್ಯಮದವರು, ಪೋಲೀಸರು ತಡಕಾಡಿದರು. ಗಟ್ಟಿಇಲ್ಲದ ಕೇಸು ಎಂದು ಬಿಟ್ಟುಕೊಟ್ಟರು. ಸಾರ್ವಜನಿಕರಿಗೆ ನಿತ್ಯವೂ ಇಂಥದೇ ಯಾವುದೋ ಒಂದು ಕಥೆ ನಡೆದೇ ಇರುವುದರಿಂದ ಜಾಸ್ತಿ ತಲೆತೂರಿಸುವ ಮನಸ್ಸಾಗಲಿಲ್ಲ. ಮದುವೆಗೆ ಮೊದಲೇ ಬಸಿರಾದ ಹುಡುಗಿಯ ಅಪ್ಪ-ಅಮ್ಮನಿಗೆ ಅವರ ಜಾತಿಯವರು ಕಟ್ಟಿಕೊಟ್ಟರು ;ಬಹಿಷ್ಕಾರ ಹಾಕಿದರು. ಅಪ್ಪ-ಅಮ್ಮನ ಅಳಲು ಕಂಡು ತಾಳಲಾರದ ಗರ್ಭಿಣಿ ನದಿಯಾ ಮುರುಗನ ಪ್ರೀತಿಯನ್ನೂ ಮರೆಯಲಾಗದೇ ಮನೆಯನ್ನೇ ತೊರೆದಳು. ರೈಲುನಿಲ್ದಾಣ ಅಲ್ಲಿ-ಇಲ್ಲಿ ಅಂತ ಅಲೆದಳು. ಅದೆಲ್ಲೋ ಹೇಗೋ ಹಡೆದಳು. ಹೆತ್ತ ಕೂಸನ್ನು ಬಗಲಿನ ಜೋಳಿಗೆಗೆ ತುಂಬಿಸಿಕೊಂಡು ಬೇಡಿದಳು. ಜನವೆಲ್ಲ ಅಕೆಯನ್ನು ಅರೆಹುಚ್ಚಿ ಎಂದು ತಿಳಿದರು. ರಾತ್ರಿ ಹೊತ್ತು ಕಾಮುಕರ ಕಾಟ ತಪ್ಪಿಸಿಕೊಳ್ಳುವುದು ಹರಸಾಹಸವಾಗಿತ್ತು. ಆದರೂ ತನ್ನ ಶರೀರವನ್ನು ಇನ್ಯಾರಿಗೂ ಕೊಡದೇ ರಕ್ಷಿಸಿಕೊಂಡಳು. ಮಗುವಿನ ಭಾಗ್ಯವನ್ನು ನೆನೆದು ಮಮ್ಮಲ ಮರುಗಿದಳು. ಮಗು ಸ್ವಲ್ಪ ದೊಡ್ಡದಾಗುತ್ತಿರುವಂತೇ ಮತ್ತೆಲ್ಲೋ ಗಾರೆ ಕೆಲಸಕ್ಕೆ ಶುರುವಿಟ್ಟಳು.
ಮುರುಗನ ಅಪ್ಪ-ಅಮ್ಮ ವರದಕ್ಷಿಣೆ ಆಸೆಗೆ ಏನೋ ಮಾಡಲು ಹೋಗಿ ಮುರುಗನೋ ಸೇರಿದಂತೇ ಎಲ್ಲರೂ ಜೈಲುಸೇರಿದ್ದರು. ಬೀಗರ ಬಡಿತಕ್ಕೆ ಅಡ್ಡಡ್ಡ ಮಲಗಿಬಿಟ್ಟ ಮುರುಗನ ಅಪ್ಪ-ಅಮ್ಮ ತಪ್ಪಿನ ಅರಿವಿಗೆ ಬಂದರು. ಜೈಲುಹಕ್ಕಿಯಾಗಿ ಬಂಧಿಯಾಗಿರುವ ಮುರುಗನಿಗೆ ಕೃಷ್ಣಪಕ್ಷನ ಕ್ಷೀಣಚಂದ್ರನ ತಿಂಗಳ ಬೆಳಕು ಮತ್ತೆ ಚೆಲ್ಲಿದ ನೆನಪು ಕಾಡುತ್ತಿತ್ತು. ೫ ವರ್ಷಗಳ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ಮಹಾನಗರಪಾಲಿಕೆಯವರು ಮುರುಗನ ಅಪ್ಪ ಕೊಂಡಿರುವ ಜಾಗ ತಮ್ಮದೆಂದೂ ಅದರ ಖಾತೆಯಲ್ಲಿ ಮೋಸವಾಗಿದೆಯೆಂದೂ ಮನೆಯನ್ನೂ ಉರುಳಿಸಿದ್ದರು. ಮನೆಯಿರಲಿ ಅವರ ವಸ್ತುಗಳೆಲ್ಲಾ ಎಲ್ಲಿಗೆ ಹೋದವೋ ಅರಿವಿಲ್ಲ. ಕೈಲಿರುವ ಕಾಸು ಕರಗಿತ್ತು. ಮತ್ತೆ ದುಡಿತ ಬೇಕಿತ್ತು. ಕೆಲಸ ಹುಡುಕುತ್ತಾ ಹೊರಟ ಮುರುಗನ ಮನೆಯವರಿಗೆ ಸಸಾರದ ಕೆಲಸ ಮತ್ತದೇ ಗಾರೆ ಕೆಲಸವಾಗಿತ್ತು. ಮನೆಯ ಮೂರೂ ಜನ ಹಾಗೆ ಗಾರೆ ಕೆಲಸಕ್ಕೆ ಆತು ಜೀವನ ನಡೆಸಬೇಕಾಯಿತು.
ಕಟ್ಟುತ್ತಿರುವ ಕಟ್ಟಡದ ಹತ್ತಿರದಲ್ಲಿ ಮರಳಿನ ರಾಶಿಯಮೇಲೆ ಆಡುತ್ತಿರುವ ಮುದ್ದಾದ ಮಗುವನ್ನು ಕಂಡು ಮಾತನಾಡಿಸಿದ ಮುರುಗ. ಆತನಿಗೆ ಆಕೆ ತಮಿಳು ಮೂಲದವರ ಮಗಳೆಂಬುದು ಗೊತ್ತೇ ವಿನಃ ಮತ್ತೇನೂ ತಿಳಿದಿರಲಿಲ್ಲ. ಮಗುವನ್ನು ಬಿಟ್ಟು ಬಹಳಹೊತ್ತು ಒಳಗಡೆ ಕೆಲಸದಲ್ಲಿದ್ದ ಮಗುವಿನ ತಾಯಿ ಮಗು ಏನುಮಾಡುತ್ತಿರಬಹುದೆಂಬ ಸಹಜ ಕುತೂಹಲದಿಂದ ಬಂದು ನೋಡುತ್ತಾಳೆ--ಮುರುಗ ಮಗುವನ್ನು ಮಾತನಾಡಿಸುತ್ತಿದ್ದಾನೆ ! ಓಡೋಡಿ ಬಂದು ಮುರುಗನನ್ನು ಮಾತನಾಡಿಸಿದಳು. " ಹೇಗಿದ್ದೀರಿ ? " ಎಂಬ ಪ್ರೀತಿಯ ಹರವನ್ನು ಹೊರಸೂಸಿದಳು. ತನ್ನ ನೋವನ್ನೆಲ್ಲಾ ಅರೆಕ್ಷಣ ಮರೆತು ಮುರುಗ ಮಾಡಿದ್ದು ತಪ್ಪು ಎನ್ನುವುದನ್ನೂ ಮರೆತಳು. ಮಾತನಾಡಿದರು ಜೋಡಿ. ಮಗುವಿಗೆ ಒಂದೂ ಅರ್ಥವಿಲ್ಲ! ಬಹಳ ಹೊತ್ತಿನ ಮಾತು. ಮತ್ತೆ ಪ್ರೀತಿ, ಮತ್ತೆ ಬಯಕೆ! ಯಾರೋ ಪುಣ್ಯಾತ್ಮರು ಆಕೆಗೆ ಒಳ್ಳೆಯ ಕಂತ್ರಾಟುದಾರರ ಪರಿಚಯ ಮಾಡಿಸಿದ್ದರಿಂದ ಅನುದಿನವೂ ಕೆಲಸಕ್ಕೆ ಬರಗಾಲವಿರಲಿಲ್ಲ. ಮುರುಗನಿಗೂ ಅಲ್ಲೇ ಕೆಲಸ ಕೊಡಿಸುವ ಇಚ್ಛೆ ವ್ಯಕ್ತಪಡಿಸಿದಾಗ ಆತ ಒಪ್ಪಿಕೊಂಡ. ಮಗು ತನ್ನದೇ ಎಂಬುದನ್ನರಿತ ಆ ಕ್ಷಣ ಭುವಿಯೇ ಸ್ವರ್ಗದಂತಿತ್ತು. ಮಗುವನ್ನು ಎತ್ತಿ ಮುದ್ದಾಡಿದ ಮುರುಗ ನದಿಯಾಳ ಸಂಗಾತಿಯಾಗಿ ಶಾಶ್ವತವಾಗಿ ಅವಳೊಂದಿಗೆ ಬದುಕು ಕಟ್ಟುವ ಮನಸ್ಸುಮಾಡಿದ. ಇಬ್ಬರ ಮನದಲ್ಲೂ ಕೋಗಿಲೆ ಮತ್ತೆ ಹಾಡಿತು. ದೂರದ ಮಾಮರದಲ್ಲಿ ವಸಂತಾಗಮನವಾಗಿ ಹೊಸಹಸಿರು ಚಿಗುರೊಡೆದು ಕೋಗಿಲೆಯೊಂದು ಕುಳಿತು ಇಂಪಾಗಿ ಹಾಡಹತ್ತಿತ್ತು. ಕಣ್ಣಂಚಲ್ಲಿ ಹರಿದ ಮುತ್ತಿನಮಣಿಗಳು ಗಲ್ಲದಮೇಲೆ ಧುಮ್ಮಿಕ್ಕುತ್ತಿರುವಂತೇ ಹಾದಿಯಲ್ಲಿ ಹಾದುಹೋಗುತ್ತಿರುವ ಮಲ್ಲಿಗೆ ಹೂ ಮಾರುವವನನ್ನು ಕರೆದು ಮೊಳ ಮಲ್ಲಿಗೆ ಕೊಂಡು ನದಿಯಾಗೆ ಮುಡಿಸಿದ ಮುರುಗ.
Posted by ವಿ.ಆರ್.ಭಟ್ (vrbhat06@gmail.com) on October 01, 2011 02:27 PM· permalink
ವೃದ್ಧ ದಂಪತಿಗಳಿಬ್ಬರೇ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಾರೆ.ಮಕ್ಕಳಿಬ್ಬರೂ ಅಮೇರಿಕಾ ಸೇರಿದ್ದಾರೆ. ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು. 'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!
ಅಜ್ಜ ಹೋಗಿದ್ದು ನೀರು ಕುಡಿಯೋಕೆ!ಕುಡಿದು ಬಂದಿದ್ದು ಕಾಫಿ!!ಅಜ್ಜಿ ತರಲು ಹೇಳಿದ್ದು ಫ್ರಿಡ್ಜ್ ನಲ್ಲಿದ್ದ ಕೇಕನ್ನು.ಅಜ್ಜ ತಂದಿದ್ದು ಬಿಸಿ ಬಿಸಿ ಬ್ರೆಡ್ ಟೋಸ್ಟ್.ಅಜ್ಜಿ ಕೂಡ ತಾನು ಹೇಳಿದ ಕೇಕನ್ನು ಮರೆತು ,ತಾನು ಹೇಳಿದ್ದು ಬ್ರೆಡ್ ಟೋಸ್ಟೇ ಎಂದುಕೊಂಡಿದ್ದಾಳೆ!
ಒಟ್ಟಿನಲ್ಲಿ ಜಗಳವಿಲ್ಲ!ಒಬ್ಬರ ತಪ್ಪನ್ನು ಇನ್ನೊಬ್ಬರು ಮರೆತು 'ಮರೆವೆ .....ಜೀವನ ..ಸಾಕ್ಷಾತ್ಕಾರ 'ಎನ್ನುತ್ತಾ ಸುಖವಾಗಿ ಬಾಳುತ್ತಿದ್ದಾರೆ!
Posted by Dr.D.T.Krishna Murthy. (noreply@blogger.com) on October 01, 2011 02:23 AM· permalink
ಜೂನ್ ಹದಿನೆಂಟನೇ ತಾರೀಖು ಯಾವ ಗಳಿಗೆಯಲ್ಲಿ ನನ್ನ ಕಿರುಚಿತ್ರದ ಚಿತ್ರೀಕರಣ ಪ್ರಾರಂಭಿಸಿದೆನೋ...ಅದರಿಂದ ಏನೇನ್ ಆಗೋಯ್ತು..ಗೊತ್ತಾ? ಅನುಕೂಲ ಮತ್ತು ಅನಾನುಕೂಲಗಳೆರಡೂ ಆಗಿಬಿಟ್ಟಿವೆ
ಮೊದಲಿಗೆ ಅದರಿಂದಾದ ಅನುಕೂಲಗಳನ್ನು ಹೇಳಿಬಿಡುತ್ತೇನೆ.
ಕಿರುಚಿತ್ರದ ವಿಚಾರ ಸೆಪ್ಟಂಬರ್ ನಾಲ್ಕರ ವೆಂಡರ್ಸ್ ಡೇ ದಿನ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾಯ್ತಲ್ಲ, ಕನ್ನಡಪ್ರಭದಲ್ಲಿ ಪೋನ್ ನಂಬರ್ ಹಾಕಿಬಿಟ್ಟಿದ್ದರಿಂದ ಅವತ್ತು ನೂರಾರು ಫೋನ್ ಕರೆಗಳಲ್ಲಿ. ಅಭಿನಂದನೆಗಳ ಮಹಾಪೂರವೇ ಆಗಿಹೋಯ್ತು. ಕರ್ನಾಟಕದಾದ್ಯಂತ ಇರುವ ದಿನಪತ್ರಿಕೆ ವೆಂಡರುಗಳು ಫೋನ್ ಮಾಡಿ ಅಭಿನಂದಿಸಿದರು. ಮತ್ತೆ ಇದೇ ರೀತಿ ಕರ್ನಾಟಕದಾದ್ಯಂತ ಅದೆಷ್ಟೋ ಛಾಯಾಸಕ್ತರು ಈ ಸಿನಿಮಾ ಬಗ್ಗೆ ಫೋನ್ ಮಾಡಿ ವಿಚಾರಿಸಿದರು. ಕೆಲವು ನಾವು ಇಂಥ ಕಿರುಚಿತ್ರ ತೆಗೆಯಬೇಕು ನಮ್ಮಲ್ಲಿ ಕತೆ ಸಿದ್ದವಾಗಿದೆ, ನೀವು ತಯಾರು ಮಾಡಿದ ರೀತಿ ವಿವರಿಸಿ ಅಂತ ಕೇಳಿದರೆ ಇನ್ನೂ ಕೆಲವರು ನಾವು ಡಾಕ್ಯುಮೆಂಟರಿ ಮಾಡಬೇಕಿದೆ, ಬಂಡವಾಳ ನಾವೇ ಹಾಕುತ್ತೇವೆ, ನೀವು ಪೂರ್ತಿ ಜವಾಬ್ದಾರಿ ತೆಗೆದುಕೊಂಡು ನಮಗೆ ಹೊಸ ಕಿರುಚಿತ್ರ, ಡಾಕ್ಯುಮೆಂಟರಿ ಮಾಡಿಕೊಡಿ ಕೇಳಿದವರು ಅನೇಕರು. ಮತ್ತೆ ಬಳಸಿದ ಕ್ಯಾಮೆರ ಇತ್ಯಾದಿಗಳ ಬಗ್ಗೆ ತಿಳಿದುಕೊಂಡರು. ಬಹುಶಃ ನನಗೆ ಬಂದ ಮಾಹಿತಿ ಪ್ರಕಾರ ಸುಮಾರು ಇಪ್ಪತ್ತಕ್ಕೂ ಹೆಚ್ಚು Canon 550D ಕ್ಯಾಮೆರಗಳು ಮಾರಾಟವಾಗಿವೆ ಎಂದು ತಿಳಿದುಬಂತು. ಇದನ್ನು ತಿಳಿದ ಬೆಂಗಳೂರಿನಲ್ಲಿರುವ ಬ್ರಿಗೇಡ್ ರಸ್ತೆಯಲ್ಲಿರುವ ಕ್ಯಾನನ್ ಕ್ಯಾಮೆರ ಕಛೇರಿಯವರು ಈ ಸಿನಿಮಾ ನೋಡುವ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಮತ್ತಷ್ಟು ಗೆಳೆಯರು ಈ ಕ್ಯಾಮೆರ ಬಗ್ಗೆ, ಬೆಲೆಯ ಬಗ್ಗೆ, ಮಾರುಕಟ್ಟೆಯಲ್ಲಿ ದೊರೆಯುವ ಬಗ್ಗೆ ನನಗೆ ಫೋನ್ ಕರೆ ಮಾಡುತ್ತಿದ್ದಾರೆ.
ಈ ಚಿತ್ರದ ಸ್ಫೂರ್ತಿಯಿಂದ ದಾವಣೆಗೆರೆಯಲ್ಲಿ ಒಂದು ತಂಡ ಕಿರುಚಿತ್ರದ ಚಿತ್ರೀಕರಣದಲ್ಲ್ಲಿ ಮಗ್ನವಾಗಿದೆ. ಮುಂಡರಗಿ ಗೆಳೆಯ ಸಲೀಂ ಕಡೆಯ ಗೆಳೆಯರು ಕತೆಯನ್ನು ಸಿದ್ದಮಾಡಿಕೊಂಡು ಕಿರುಚಿತ್ರ ಮಾಡಲು ಸಿದ್ದರಾಗುತ್ತಿದ್ದಾರೆ. ಹೀಗೆ ಹತ್ತಾರು ಕಿರುಚಿತ್ರದ ತಯಾರಿಗಳು ನಡೆದಿವೆ. ನವೆಂಬರ್ ಅಥವ ಡಿಸೆಂಬರ್ನಲ್ಲಿ ನಮ್ಮ ಮಣಿಕಾಂತ್ ಚಿತ್ರವನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದ್ದಾರೆ.
ಹೊಸಪೇಟೆಯ ಆಕಾಶವಾಣಿ ರೇಡಿಯೋ ಕೇಂದ್ರವೂ ನನಗೆ ಫೋನ್ ಮಾಡಿ ಭಾನುವಾರ ಬೆಳಿಗ್ಗೆ ಬರುವ "ಉಪಹಾರ್" ಎನ್ನುವ ಕಾರ್ಯಕ್ರಮಕ್ಕಾಗಿ ಬೆಳಗಾಯ್ತು.... ಕಿರುಚಿತ್ರ ಮತ್ತು ನನ್ನ ವೃತ್ತಿಬದುಕಿನ ಬಗ್ಗೆ ೪೫ ನಿಮಿಷಗಳ ಕಾರ್ಯಕ್ರಮ ಮತ್ತು ಸಂದರ್ಶನವನ್ನು ದೂರವಾಣಿ ಮೂಲಕವೇ ನಡೆಸಿತ್ತು. ಅದು ಪ್ರಸಾರವಾದ ದಿನಾಂಕ ಸೆಪ್ಟಂಬರ್ ಹದಿನೆಂಟರ್ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆ.
ಪತ್ರಿಕೆಯಲ್ಲಿ ಈ ವಿಚಾರವನ್ನು ಓದಿದ ಆಕಾಶವಾಣಿ ರೈನ್ಬೌ ಎಫ್ ಎಂ ರೇಡಿಯೋ ವಾಹಿನಿಯವರು ನನ್ನನ್ನು ಕರೆದು ಪ್ರಖ್ಯಾತ "ಕಾಕಂಬಿ" ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಅದರಿಂದಾಗ ಪರಿಣಾಮ ಮಾತ್ರ ಅಪಾರವಾದದು. ಅವತ್ತು ಬೆಳಿಗ್ಗೆ ೯ ಗಂಟೆಯಿಂದ ಅಭಿನಂದನೆ ಕರೆಗಳು ಪ್ರಾರಂಭವಾಗಿ ಪೂರ್ತಿ ದಿನ ಫೋನಿನಲ್ಲಿ ಮುಳುಗುವಂತಾಗಿತ್ತು. ನಂತರದ ಎರಡು-ಮೂರು ದಿನಗಳು ಈ ವಿಚಾರವಾಗಿ ಕರೆಗಳು ಬರುತ್ತಲೇ ಇದ್ದವು. ಫೋನ್ ಮಾಡಿದ ಎಲ್ಲರೂ "ವೆಂಡರ್ ಕಣ್ಣು" ಪುಸ್ತಕವನ್ನು ಕೇಳುವವರೇ ಆಗಿದ್ದರು. ಪುಸ್ತಕವನ್ನು ಕೊಡೋಣವೆಂದರೆ ನನ್ನ ಬಳಿ ಒಂದೂ ಪುಸ್ತಕವಿರಲಿಲ್ಲ. ಎಲ್ಲಾ ಖಾಲಿಯಾಗಿಬಿಟ್ಟಿತ್ತು. ನಮ್ಮ ಪ್ರಕಾಶಕರನ್ನು ಕೇಳಿದರೆ ಅವರ ಬಳಿಯೂ ಖಾಲಿ. ಮತ್ತೆ ಯಾವ ಪುಸ್ತಕದ ಅಂಗಡಿಯಲ್ಲಿಯೂ ಇರಲಿಲ್ಲ. ಮೂರು ದಿನ ನನಗೆ ಬಂದ ಫೋನ್ ಕರೆಗಳನ್ನೆಲ್ಲಾ ಕಂಫ್ಯೂಟರಿನಲ್ಲಿ ಬರೆದು ಕೆಲ ಹಾಕಿದ್ದೆ. ಸುಮಾರು ಇನ್ನೂರು ವೆಂಡರ್ ಕಣ್ಣು ಪುಸ್ತಕಕ್ಕೆ ಬೇಡಿಕೆ ಬಂತಲ್ಲ! ಮರು ಯೋಚಿಸದೇ ನಾನೇ ಮೂರನೇ ಮರುಮುದ್ರಣಕ್ಕೆ ಸಿದ್ಧನಾಗಿಬಿಟ್ಟೆ. ಈ ಮೊದಲು ಮುದ್ರಣವಾದ ಪುಸ್ತಕಗಳಲ್ಲಿ ತುಂಬಾ ಅಕ್ಷರಗಳ ತಪ್ಪುಗಳಿದ್ದರಿಂದ ಮತ್ತೊಮ್ಮೆ ತಿದ್ದುಪಡಿಗಾಗಿ ಹಿರಿಯ ಆತ್ಮೀಯ ಗೆಳೆಯರಾದ ಸುನಾಥ್ ಸರ್ ಅವರನ್ನು ಕೇಳಿಕೊಂಡಾಗ ಅವರು ಪ್ರೀತಿಯಿಂದ ಮಾಡಿಕೊಟ್ಟರು. ಮೂರು ಹೊಸ ಲೇಖನಗಳು ಸೇರಿದಂತೆ ಈಗ ಪುಸ್ತಕದ ಗಾತ್ರ ದೊಡ್ಡದಾಯಿತು. ಇಷ್ಟೆಲ್ಲಾ ಬದಲಾವಣೆಯಾದ ಮೇಲೆ ಮುಖಪುಟವನ್ನು ಬದಲಾಯಿಸಬೇಕು ಅನ್ನಿಸಿತು. ಅದಕ್ಕಾಗಿ ಹೊಸ ಫೋಟೊ ತೆಗೆದು ಮುಖಪುಟವನ್ನು ಬದಲಾಯಿಸಿದೆ. ಕಳೆದ ಒಂದು ವಾರದಿಂದ ಆಗುತ್ತಿರುವ ವಿದ್ಯುತ್ ಕಣ್ಣು ಮುಚ್ಚಾಲೆಯ ನಡುವೆಯೇ ಮತ್ತೊಬ್ಬ ಆತ್ಮೀಯ ಗೆಳೆಯರಾದ ಡಾ.ಸತ್ಯನಾರಾಯಣರವರು ಖುಷಿಯಿಂದ ಪುಟವಿನ್ಯಾಸವನ್ನು ಮಾಡಿಕೊಟ್ಟರು. ನಿನ್ನೆ ಮದ್ಯಾಹ್ನದ ಹೊತ್ತಿಗೆ ಪುಸ್ತಕದ ಕೆಲಸ ಮುಗಿಸಿ ಪ್ರಿಂಟಿಗೆ ಕೊಟ್ಟು, ಸಂಜೆ ಈಟಿವಿಯವರ ರವಿ ಬೆಳಗೆರೆಯವರು ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೊಗ್ರಫಿ ಅಸೈನ್ ಮೆಂಟಿಗೆ ಹೋಗಿದ್ದೆ. ದಸರ ಮುಗಿಯುವ ಹೊತ್ತಿಗೆ ಹೊಸ ಮುಖಪುಟ ವಿನ್ಯಾಸದ "ವೆಂಡರ್ ಕಣ್ಣು" ಪುಸ್ತಕದ ಪ್ರತಿಗಳು ಮನೆಗೆ ತಲುಪಿರುತ್ತವೆ.
ವೆಂಡರ್ ಕಣ್ಣು ಮೂರನೆ ಮರುಮುದ್ರಣದ ಹೊಸ ಮುಖಪುಟ ಮತ್ತೆ ಇಷ್ಟೆಲ್ಲಾ ಹೇಳಿಯೂ ನೀವು ಕಿರುಚಿತ್ರವನ್ನು ನೋಡಲು ಅದನ್ನು ಫೇಸ್ಬುಕ್, ಯು ಟ್ಯೂಬ್ನಲ್ಲಿ ನನಗೆ ಹಾಕಲಾಗಿಲ್ಲ. ಕಾರಣ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವ ನಿಯಮಗಳ ಪ್ರಕಾರ ಅದು ಪ್ರದರ್ಶನವಾಗುವವರೆಗೆ ಎಲ್ಲಿಯೂ ಹಾಕುವಂತಿಲ್ಲವಾದ್ದರಿಂದ ಕೇವಲ ಒಂದು ನಿಮಿಷದ ಪೊಮೋ ಮಾತ್ರ ಹಾಕಿದ್ದೇನೆ. ಇದನ್ನು ಬೆಂಗಳೂರು, ನ್ಯೂಯಾರ್ಕ್, ಪ್ಯಾರಿಸ್, ಫಿಲಿಡೆಲ್ಫಿಯ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವಗಳಿಗೆ ಬೆಳಗಾಯ್ತು ಕಿರುಚಿತ್ರವನ್ನು ಕಳಿಸಿದ್ದೇನೆ.
ಇದೆಲ್ಲದರ ನಡುವೆ ನನ್ನ ಫೋಟೊಗ್ರಫಿಯ ವೆಬ್ಸೈಟ್ ಸಿದ್ದವಾಗುತ್ತಿದೆ. ಅದನ್ನು ಬ್ಲಾಗ್ ಗೆಳೆಯರೊಬ್ಬರು ಪ್ರೀತಿಯಿಂದ ಮಾಡಿಕೊಡುತ್ತಿದ್ದಾರೆ. ಇದೆಲ್ಲಾ ಕಿರುಚಿತ್ರದ ಪರಿಣಾಮದಿಂದಾದ ಅನುಕೂಲಗಳು. ಆದ್ರೆ ಅನಾನುಕೂಲಗಳು ಆಗಿವೇ ಆದ್ರೆ ನೀವು ನಂಬಲೇಬೇಕು. ಏನೇನು ಅನಾನುಕೂಲಗಳಾದವು ಅನ್ನುವುದನ್ನು ವಿವರಿಸಿಬಿಡುತ್ತೇನೆ.
ಈ ಕಿರುಚಿತ್ರದ ತಯಾರಿಕೆಗೆ ಸಿದ್ದನಾದೆನಲ್ಲ....ಒಂದು ಫೋಟೊ ತೆಗೆಯಬೇಕೆಂದರೆ ಅದೆಷ್ಟೋ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವಲ್ವಾ, ಅಂತದ್ದರಲ್ಲಿ ಈ ಕಿರುಚಿತ್ರದ ದೃಶ್ಯವಳಿಗಳನ್ನು ಚಿತ್ರಿಸಲು ಚಿತ್ರಕತೆ ಬೇಕಲ್ಲ, ನನ್ನ ಮನಸ್ಸಿನ ಕಲ್ಪನೆಯ ಚಿತ್ರಕತೆಯನ್ನು ಬರೆಯಲಾರಂಭಿಸಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ದೃಶ್ಯಗಳನ್ನು ಬರೆಯಬೇಕಿತ್ತು. ನೂರಕ್ಕೂ ಹೆಚ್ಚು ಪುಟಗಳಿದ್ದ ಇದನ್ನು ಬರೆದು ಮುಗಿಸಲು ಹತ್ತು ದಿನಗಳು ಬೇಕಾಯ್ತು. ಅಲ್ಲಿಗೆ ನನ್ನ ಎಲ್ಲಾ ಫೋಟೊಗ್ರಫಿ, ಬ್ಲಾಗ್, ಬಜ್, ಇತ್ಯಾದಿಗಳು ಬಂದ್. ಮತ್ತೆ ಅದನ್ನು ಚಿತ್ರೀಕರಿಸಿದ ಹತ್ತು ದಿನಗಳು, ಅದರ ಸಂಕಲನ, ಸಂಗೀತ, ಇತ್ಯಾದಿಗಳಿಂದಾಗಿ ಎರಡು ತಿಂಗಳೇ ಕಳೆದುಬಿಟ್ಟವು. ಹದಿನೆಂಟು ನಿಮಿಷದ ಕಿರುಚಿತ್ರಕ್ಕೆ ಎರಡು ತಿಂಗಳುಗಳು ಬೇಕಾ ಅನ್ನಿಸಬಹುದು ನಿಮಗೆ. ಈ ವಿಚಾರದಲ್ಲಿ ನಾನು ಪಕ್ಕಾ ವೃತ್ತಿಪರನಲ್ಲ. ನನ್ನ ವೃತ್ತಿಯೇ ಬೇರೆ ಇದು ಪ್ರವೃತ್ತಿ ಮಾತ್ರ ತಾನೆ. ಆ ಕಾರಣಕ್ಕೆ ನನ್ನ ವೃತ್ತಿಯ ನಡುವೆ ಬಿಡುವು ಮತ್ತು ನನಗೆ ಕೆಲಸ ಮಾಡಿಕೊಡುವವರ ಬಿಡುವು ನೋಡಿಕೊಂಡು ಅವರಿಂದ ಕೆಲಸ ತೆಗೆಸಬೇಕಿತ್ತಲ್ಲ ಅದಕ್ಕಾಗಿ ಚಿತ್ರ ಇಷ್ಟು ದಿನವಾಯ್ತು. ಪೂರ್ತಿ ಸಿದ್ದವಾಗುವವರೆಗೆ ನಾನು ಈ ಚಿತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗದ್ದರಿಂದ ನಮ್ಮ ಬ್ಲಾಗ್ ಬಜ್, ಬರೆಯುವುದಿರಲಿ, ಬೇರೆಯವರ ಬ್ಲಾಗುಗಳನ್ನು ಓದುವುದಕ್ಕೂ ಆಗಿರಲಿಲ್ಲ. ಈಗ ಅದೆಲ್ಲ ಗುಂಗಿನಿಂದ ಹೊರಬಂದಿದ್ದೇನೆ[ಹಾಗೆ ಅಂದುಕೊಂಡಿದ್ದೇನೆ]. ಮಾಡುವ ಕೆಲಸ ಬೇಕಾದಷ್ಟಿದೆ ಅನ್ನಿಸುತ್ತಿದೆ. ಮೊದಲಿಗೆ ಬ್ಲಾಗ್ ಲೋಕದೊಳಗೆ ಇಳಿಯಬೇಕು. ಗೆಳೆಯರ ಲೇಖನಗಳನ್ನು ಓದಬೇಕು. ಅದರಿಂದ ಸ್ಪೂರ್ತಿ ಪಡೆದು ಮತ್ತೆ ಬರೆಯಲು ಪ್ರಾರಂಭಿಸಬೇಕು. ಕಿರುಚಿತ್ರಕ್ಕೆ ಮೊದಲು ಐದಾರು ವಿಚಾರಗಳಿಗಾಗಿ ಲೇಖನಗಳನ್ನು ಪ್ರಾರಂಭಿಸಿದ್ದೆ. ಎಲ್ಲವೂ ಒಂದೊಂದು ಪ್ಯಾರ ಬರೆಸಿಕೊಂಡು ನಿಂತುಬಿಟ್ಟಿವೆ. ಅವೆಲ್ಲಾ ಈಗ ಔಟ್ ಡೇಟೆಡ್ ಆಗಿಬಿಟ್ಟಿದೆಯಾ? ಈಗಿನ ಪ್ರಸ್ತುತಕ್ಕೆ ತಕ್ಕಂತೆ ಬರೆಯಬಹುದಾ ನೋಡಬೇಕು. ಎರಡು ಸಿನಿಮಾಗಳ ಅವಲೋಕನ ಅರ್ಧದಷ್ಟಾಗಿದೆ. ಮತ್ತೊಮ್ಮೆ ಆ ಸಿನಿಮಗಳನ್ನು ನೋಡಬೇಕು. ಅದೆಲ್ಲಕ್ಕಿಂತ ನನ್ನ ಎರಡು ಫೋಟೊಗ್ರಫಿ ಪುಸ್ತಕಗಳಿಗಾಗಿ ಬರೆಯುತ್ತಿದ್ದ ಬರವಣಿಗೆ ನಿಂತು ಹೋಗಿದೆ. ಇದು ಅದೆಲ್ಲಕ್ಕಿಂತ ಮುಖ್ಯವಾದ್ದರಿಂದ ಅದನ್ನು ಶುರುಮಾಡಬೇಕು......
ಮತ್ತೆ ಈ ಮೂರು ತಿಂಗಳಿನಲ್ಲಿ ನನಗಿಷ್ಟವಾದ ಫಿಕ್ಟೋರಿಯಲ್, ಮ್ಯಾಕ್ರೋ...ಇತ್ಯಾದಿ ಫೋಟೊಗ್ರಫಿಯನ್ನು ಮಾಡಲಾಗಿಲ್ಲ. ಆದ್ರೆ ಸಾಲು ಸಾಲು ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಗಳು ಬರುತ್ತಿವೆ. ಫೋಟೊಗ್ರಫಿ ಗೆಳೆಯರೆಲ್ಲಾ ಕರೆದರೂ ಹೋಗಲಾಗಿರಲಿಲ್ಲ.
ಈ ಕಿರುಚಿತ್ರ ನನ್ನ ಇಷ್ಟೆಲ್ಲ ಬರೆವಣಿಗೆಯನ್ನು, ಫೋಟೊಗ್ರಫಿಯನ್ನು ನುಂಗಿ ನೀರು ಕುಡಿದಿದೆಯಲ್ಲಾ! ಇದೆಲ್ಲಾ ಅನಾನುಕೂಲಗಳೇ ತಾನೇ...
ಸದ್ಯ ಆ ಗುಂಗಿನಿಂದ ಹೊರಬಂದಿದ್ದೇನೆ. ಬರವಣಿಗೆಯನ್ನು ಎಲ್ಲಿಂದ ಪ್ರಾರಂಭಿಸಲಿ, ಬ್ಲಾಗ್ ಲೇಖನವನ್ನು ಬರೆಯಲಾ?, ಪುಸ್ತಕಗಳಿಗಾಗಿ ಫೋಟೊಗ್ರಫಿ ಲೇಖನವನ್ನು ಪ್ರಾರಂಭಿಸಲಾ? ಸ್ಪೂರ್ತಿಯನ್ನು ಎಲ್ಲಿಂದ ಪಡೆಯಲಿ? ಅಥವ ಹೊರಗೆ ಲೈಟಿಂಗ್ ತುಂಬಾ ಚೆನ್ನಾಗಿದೆ ಅಂತ ಒತ್ತಾಯ ಮಾಡುತ್ತಿರುವ ಫೋಟೊಗ್ರಫಿ ಗೆಳೆಯರೊಂದಿಗೆ ಓಡಿಹೋಗಲಾ?
ಯೋಚಿಸುತ್ತಿದ್ದೇನೆ........ಹೊಸಪೇಟೆಯ ಆಕಾಶವಾಣಿ ಕೇಂದ್ರವೂ ನನ್ನ " ಬೆಳಗಾಯ್ತು....ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಕಿರುಚಿತ್ರಕ್ಕಾಗಿ ದೂರವಾಣಿಯ ಮೂಲಕ ಸಂದರ್ಶಿಸಿದ "ಉಪಹಾರ್ ಕಾರ್ಯಕ್ರಮ. ಇದು ಪ್ರಸಾರವಾಗಿದ್ದು ಸೆಪ್ಟಂಬರ್ 18ರಂದು.ಸಂದರ್ಶನವನ್ನು ಪೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ..http://soundcloud.com/shivuk/track
ಬೆಂಗಳೂರಿನ ಆಕಾಶವಾಣಿಯ FM Rainbow ರೇಡಿಯೋ ವಾಹಿನಿಯವರು ನಡೆಸಿಕೊಡುವ ಜನಪ್ರಿಯ "ಕಾಕಂಬಿ" ಕಾರ್ಯಕ್ರಮದಲ್ಲಿ ನನ್ನನ್ನು ಸಂದರ್ಶಿಸಿದರು. ಸೆಪ್ಟಂಬರ್ 14 ರ ಬುದವಾರ ಪ್ರಸಾರವಾದ ಈ ಕಾರ್ಯಕ್ರಮವನ್ನು ಫೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ...http://soundcloud.com/omshivaprakash/shivu-k-in-fm-radioಚಿತ್ರಗಳು ಮತ್ತು ಲೇಖನ
ಶಿವು.ಕೆ
Posted by shivu.k (shivuu.k@gmail.com) on September 30, 2011 02:55 PM· permalink
ವಸ್ತು ಕಳೆದು ಹೋದಮೇಲೇನೇ ಅದರ ಬೆಲೆ ಗೊತ್ತಾಗೋದು..
ಹಾಗೇನೇ,
ಹುಡುಗಿ ಕೈ ಕೊಟ್ಟ ಮೇಲೇನೇ ಎಣ್ಲೆಯ ರುಚಿ ಹತ್ತೋದು..
Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on September 30, 2011 01:17 PM· permalink
- H O P E -
Never go gloomy, man with a mind,
Hope is a better companion than fear;
Providence, ever benignant and kind,
Gives with a smile what you take with a tear;
All will be right,
Look to the light.
Morning was ever the daughter of night;
All that was black will be all that is bright,
Cheerily, cheerily, then cheer up.
Many a foe is a friend in disguise,
Many a trouble a blessing most true,
Helping the heart to be happy and wise,
With love ever precious and joys ever new.
Stand in the van,
Strike like a man!
This is the bravest and cleverest plan;
Trusting in God while you do what you can.
Cheerily, cheerily, then cheer up.
- Anonymous
(Excerpted from: It can be done by Morris)/30092011
Posted by ಕ್ಷಣ... ಚಿಂತನೆ... (bhchandru@gmail.com) on September 30, 2011 10:30 AM· permalink
ನಾನು ನಿನ್ನ ಬಿಟ್ಟು ಬಿಡ್ತೀನಿ ಅಂತಾ ಅವಳೀಗೆ ಹೇಳಿದೆ... ನಾ ಬಿಟ್ಟರೂ, ನನ್ನ ಬಿಡೋಕೆ ನಿಂಗೆ ಶಕ್ತಿ ಇಲ್ಲ ಅಂತಾ ಚಾಲೆಂಜ್ ಮಾಡಿದಳು.. ಈ ಬಾರಿಯೂ ನನಗೆ ಮೋಸವಾಯಿತು. ಈ ಬಾರಿಯೂ ಸಹ ಸೋಲು ನನ್ನದಾಯಿತು.
-ಯಳವತ್ತಿ
Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on September 30, 2011 05:53 AM· permalink
ಹೊಸದಾಗಿ ಮದುವೆಯಾದ ಸ್ನೇಹಿತನ ಹೆಂಡತಿಯನ್ನು "ಅಕ್ಕಾ" ಎಂದು ಬಾಯಿ ತುಂಬಾ ಕರೆದು ಮಾತನಾಡಿಸಬೇಕೆಂದಕೊಂಡೆ.. ಆದರೆ,
ಅವಳ ಸುಂದರವಾದ ತಂಗಿಯನ್ನು ನೋಡಿ, "ಅತ್ತಿಗೆ" ಎಂದು ಕರೆದೆ..
Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on September 30, 2011 05:53 AM· permalink
ನನ್ನವಳು ಕೂಡಾ ಒಬ್ಬಳು ಭಯೋತ್ಪಾದಕಳು...!!!
"ಬೇರೇ ಹುಡುಗಿಯರನ್ನು ನೋಡಿದ್ರೆ,
ನಿನ್ ಕಣ್ಣು ಕಿತ್ತಾಕಿ ಬಿಡ್ತೀನಿ.."ಅಂತಾ ಆಗಾಗ ನನ್ನಲ್ಲಿ ಭಯವನ್ನು ಉತ್ಪಾದನೆ ಮಾಡ್ತಾ ಇರ್ತಾಳೆ..!!
Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on September 30, 2011 05:52 AM· permalink
ಮಾತೊಂದೆ ಎಲ್ಲವೂ ಅಲ್ಲ
ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ
ಮಾತು ಸಾಕಾದಾಗ ಮೌನ ಹಿತ
ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ
ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ
ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ
ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡ
ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ
ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ
ಮಾತು ಮೌನದ ನಡುವೆ ಅಂತರ ನಿರಂತರ
ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.
Posted by ಮನಸ್ವಿ (noreply@blogger.com) on September 29, 2011 04:17 PM· permalink
( ಇದು ಅಕ್ಟೋಬರ್ ೦೨, ೨೦೧೧ರ ‘ಕರ್ಮವೀರ' ಸಾಪ್ತಾಹಿಕದಲ್ಲಿ ಪ್ರಕಟವಾಗಿರುವ ಲಲಿತ ಪ್ರಬ೦ಧ. ಓದಿ ನಿಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿರಿ.)
`ಕನಸಿನ ನಂಟು
ಕನ್ನಡಿಯೊಳಗಿನ ಗಂಟು'
ಸಮಯಾನುಸಾರ ಅಜ್ಜಿ ಈ ನುಡಿಗಟ್ಟುಗಳನ್ನು ಬಳಸಿದಾಗ ಚಿಕ್ಕವಳಲ್ಲಿ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಪೂವಾರ್ಧ ನನ್ನನ್ನಷ್ಟು ಚಿಂತೆಗೀಡುಮಾಡುತ್ತಿರಲಿಲ್ಲ. ಹಳ್ಳಿಯಲ್ಲಿ ವಾಸವಾಗಿದ್ದ ನಮ್ಮ ಮನೆಯಲ್ಲಿ ಯಾರಾದರೂ ಅತಿಥಿ ಅಭ್ಯಾಗತರಿಲ್ಲದೆ ಊಟಮಾಡುತ್ತಿದ್ದುದರ ನೆನಪೇ ಇಲ್ಲ. ಬೇಸಿಗೆ ರಜೆ ಬಂತೆಂದರೆ ಮನೆಯ ತುಂಬಾ ಬಂಧು ಬಳಗ! ಮಕ್ಕಳ ಒಂದು ಸೈನ್ಯವೇ ನಿರ್ಮಾಣವಾಗಿ ಹಗಲೆಲ್ಲಾ ಗದ್ದೆಬಯಲುಗಳಲ್ಲಿ ಅಲೆದು, ರಾತ್ರಿಯಾಯಿತೆಂದರೆ ಲ್ಯಾಂಪಿನ ಅಥವಾ ಬುಡ್ಡಿದೀಪದ ಬೆಳಕಿನಲ್ಲಿ ಗುಡ್ಡೆಹಾಕಿಕೊಂಡು ಕುಳಿತು ಅಜ್ಜಿಯೋ, ತಾತನೋ, ಆಳು ಪುಟ್ಟಪ್ಪನೋ ಹೇಳುವ ಕಥೆಗಳನ್ನು ಕೇಳುತ್ತಾ, ಬೆಳದಿಂಗಳಿತ್ತೆಂದರೆ ಅಂಗಳದಲ್ಲಿ ಹಾಸಿದ್ದ ಚಾಪೆಯಮೇಲೆ ಉರುಳಿಕೊಂಡು ಹರಟುತ್ತಾ ಕಾಲ ಕಳೆಯುತ್ತಿದ್ದುದರ ಅರಿವೇ ನಮಗಾಗುತ್ತಿರಲಿಲ್ಲ! ವಾಸ್ತವದಲ್ಲೇ ನಂಟೆಂಬ `ಅಂಟು' ಸಹನಾತೀತವಾಗಿದ್ದುದರಿಂದ `ಕನಸಿನ ನಂಟು' ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. `ಗಂಟು' ಎನ್ನುವ ಪದ ಹಣಕ್ಕೇ ಸಂಬಂಧಿಸಿದುದೆಂಬ ಅರಿವಿದ್ದರಿಂದ- ಏಕೆಂದರೆ ನಾನು ಕೇಳುತ್ತಿದ್ದ ಕಥೆಗಳಲ್ಲೆಲ್ಲಾ ಸಾಮಾನ್ಯವಾಗಿ ಹಣದ ಗಂಟು-ಥೈಲಿಯ ಪ್ರಸ್ತಾಪವಿರುತ್ತಿದ್ದರಿಂದ ಮತ್ತು ಈ ಹಣದಿಂದ ನಾನು ಏನೇನೋ ಮಾಡಬೇಕೆಂಬ ಯೋಜನೆ ಇದ್ದುದರಿಂದ ಕನ್ನಡಿಯ ಒಳಗೆ ಹೇಗೆ ಈ ಗಂಟು ಹೋಗಿ ಸೇರಿಕೊಂಡಿತು? ಅದನ್ನು ಹೊರ ತೆಗೆಯುವ ಬಗೆ ಹೇಗೆ? ಎನ್ನುವುದೇ ನನ್ನ ಸಮಸ್ಯೆಯಾಗಿತ್ತು!
ನಾನು ವಿಜ್ಞಾನದ ವಿದ್ಯಾರ್ಥಿಯಾದ ನಂತರ ದರ್ಪಣ-ಪ್ರತಿಫಲನ ಎಂದೆಲ್ಲಾ ಓದುವಾಗ ಕನ್ನಡಿಯೊಳಗಿನ ಗಂಟು ಒಂದು ಪ್ರತಿಬಿಂಬ ಎಂದು ತಿಳಿದುಕೊಂಡೆ. ಪ್ರತಿಬಿಂಬ ಉಂಟಾಗಬೇಕಾದರೆ ಒಂದು ವಸ್ತು ಇರಲೇ ಬೇಕಲ್ಲ! `ಗಂಟು' ಹೊರಗಿದ್ದಾಗ ಮಾತ್ರ ಕನ್ನಡಿಯ ಒಳಗೂ ಅದು ಕಾಣಲು ಸಾಧ್ಯ ಎಂಬ ತರ್ಕ ಪ್ರಾರಂಭವಾಯಿತು!
`ನಂಟ'ನ್ನು ಸಾಮಾನ್ಯವಾಗಿ ಸ್ವೀಕರಿಸಿ `ಗಂಟು' ಬಗ್ಗೆ ತಲೆಕೆಡಿಸಿಕೊಳ್ಳುತ್ತಾ ಸಮಯ ವ್ಯರ್ಥಮಾಡುತ್ತಿದ್ದಾಗಲೇ ಅಜ್ಜಿಯ `ಗಂಟೂ ಪೋಯ, ನಂಟೂ ಪೋಯ' ಎನ್ನುವ ಮತ್ತೊಂದು ಆರ್ಯೋಕ್ತಿ ವಿರೋಧಾಭಾಸವನ್ನುಂಟುಮಾಡಿತು. ಈ ಪರಿಸ್ಥಿತಿ ಆಗಾಗ ನಮ್ಮ ಮನೆಯಲ್ಲಿ ಉಂಟಾಗುತ್ತಿದ್ದ ಘಟನೆಗಳಿಂದ ಮೂರ್ತರೂಪ ಪಡೆದದ್ದು ಎನ್ನುವುದು ನಂತರ ನನಗೆ ಗೋಚರಿಸುತ್ತಾ ಹೋಯಿತು. ಆದರೆ `ಗಂಟು ಪೋಯ' ಎನ್ನುವುದಷ್ಟೇ ಸತ್ಯವಾಗಿ ಬಹಳ ಉದಾರ ಮನಸ್ಕರಾದ ನಮ್ಮ ತಂದೆಯ ಸಹನಶೀಲತೆಗೆ, ಕ್ಷಮಾಗುಣಕ್ಕೆ ಪ್ರತಿಫಲವೋ ಎಂಬಂತೆ `ನಂಟೂ ಪೋಯ'ವಾಗಲು ಆಸ್ಪದವಾಗುತ್ತಿರಲಿಲ್ಲ. ಆ `ನಂಟು' ಮುಂದಿನ ಬೇಸಿಗೆ ರಜಕ್ಕೆ ಸಕುಟುಂಬ ಪರಿವಾರ `ಸಮೇತ'(!)ರಾಗಿ ನಮ್ಮ ಮನೆಯಲ್ಲಿ ಠಿಕಾಣಿ ( ತಂದೆಯ ಕ್ಷಮಾಗುಣ ಅವರ `ಕುಟುಂಬ'ಕ್ಕೆ ಸದಾಕಾಲ ಸಿದ್ಧಿಸಿಲ್ಲದಿದ್ದರಿಂದ ಅಥವಾ ಅವರನ್ನು ಪೊರೆಯುವ ಎಂದರೆ ಉದರ ಪೋಷಣೆ ಮಾಡುವ ಗುರುತರವಾದ ಜವಾಬ್ಧಾರಿ ಇದ್ದ ನಮ್ಮ ತಾಯಿಯ ಹೊಣೆಗಾರಿಕೆಯ ಸ್ಪಷ್ಟ ಅಭಿವ್ಯಕ್ತಿಯನ್ನೇ ಬಳಸುತ್ತಿದ್ದೇನೆ!) ಹೂಡುತ್ತಿದ್ದರು. ಎಲ್ಲಾ ಹೊಟ್ಟೆಗಳನ್ನೂ ತುಂಬುವಷ್ಟು ಧವಸ ಧಾನ್ಯಗಳನ್ನು ನಮ್ಮ ಜಮೀನು ಒದಗಿಸುತ್ತಿತ್ತು. ತರಕಾರಿ, ಸೊಪ್ಪು ಸೆದೆಗಳನ್ನು ನಮ್ಮ ಹಿತ್ತಿಲು ಪೂರೈಸುತ್ತಿತ್ತು. ಒಬ್ಬ ಭಕ್ತ `ದೇವರೇ ನಾನು ನಿನ್ನನ್ನು ಹೆಚ್ಚೇನನ್ನೂ ಕೇಳುವುದಿಲ್ಲ. ನನ್ನ, ನನ್ನ ಆಶ್ರಿತರ ಹೊಟ್ಟೆತುಂಬಿಸುವಷ್ಟು, ಅತಿಥಿಗಳನ್ನು ಸತ್ಕರಿಸುವಷ್ಟು ಕೊಟ್ಟರೆ ಸಾಕು.' ಎಂದು ಕೇಳುವಂತೆ ಸಾತ್ವಿಕರಾಗಿದ್ದ ನನ್ನ ತಂದೆಯ ಪ್ರಾರ್ಥನೆಯೂ ಆಗಿದ್ದಿರಬಹುದು.
ಓದಿ, ಕೆಲಸಕ್ಕೆ ಸೇರಿ ಆರ್ಥಿಕ ಸ್ವಾವಲಂಬಿಯಾಗಿ, ಗಂಡ-ಮಕ್ಕಳು-ಮನೆ ಎಂಬೆಲ್ಲಾ `ಸಕಲ'ಗಳ ನಡುವೆಯೂ ಇದ್ದಷ್ಟರಲ್ಲೇ ಸಾಕೆನ್ನುವಂತಿದ್ದ, ವೇತನಕ್ಕೆಂದೇ ಗೊತ್ತುಪಡಿಸಿದ, ತಿಂಗಳ ಕಡೆಗೆ ಬ್ಯಾಂಕ್ನವರು ನಿಗಧಿಪಡಿಸಿದ ಕನಿಷ್ಟ ಮೊತ್ತವನ್ನು ಮಾತ್ರ ಹೊಂದಿರುತ್ತಿರುವ ಎಸ್. ಬಿ. ಖಾತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ ಡಿಪಾಸಿಟ್ಸ್ ಹೊಂದಿಲ್ಲದ ನಮ್ಮ ಬೋಳೆ ಸ್ವಭಾವ ತಿಳಿದಿದ್ದ ನನ್ನ ಆಪ್ತ ಬ೦ಧುವೊಬ್ಬರು ತಾವು ಲಾಭದಾಯಕ ಎಂದು ಕಂಡುಕೊಂಡ `ಹಣದ್ವಿಗುಣ'ಗೊಳಿಸುವ ಒಂದು ಸ್ಕೀಮಿಗೆ ನನ್ನನ್ನು ಪರಿಚಯಿಸಿ ನಾನೂ ಅದರಲ್ಲಿ ಹಣವನ್ನು ತೊಡಗಿಸಲು ಒತ್ತಾಯಿಸಿದರು. ತಾವೇ ಮುಂದೆ ನಿಂತು ಶೂರಿಟಿಯನ್ನೂ ಕೊಟ್ಟು ಬ್ಯಾಂಕ್ ಒಂದರಲ್ಲಿ ಸಾಲವನ್ನು ಮಾಡಿಸಿ ಆ ಸ್ಕೀಮಿಗೆ ಹಣವನ್ನು ಕಟ್ಟಿಸಿ ನನ್ನನ್ನು ಆರ್ಥಿಕೋದ್ಧಾರಗೊಳಿಸಿದ ಕೃತಾರ್ಥ ಭಾವದಲ್ಲಿ ಅವರು ಇರುವಾಗಲೇ ಅವರ ಜೊತೆಗೆ ನನ್ನ... (ಕ್ಷಮಿಸಿ, ಹೊಸದಾಗಿ ಸೇರ್ಪಡೆಯಾದ ನನ್ನ ಕಾಲ್ಗುಣ ಅಲ್ಲ ಕೈಗುಣವಾದ್ದರಿಂದ ನನ್ನ ಜೊತೆಗೆ ಅವರ) `ಗಂಟೂ' ಮುಳುಗಿ ನಿಜಕ್ಕೂ `ಗಂಟೂ ಪೋಯ' ಆಗೇ ಹೋಯ್ತು! ಈಗ ಅಪ್ಪಿ ತಪ್ಪಿಯೂ ಯಾರೂ ನನ್ನೆದುರು ಹಣಕಾಸಿನ ಪ್ರಸ್ತಾಪವನ್ನು ಎತ್ತುವುದೇ ತಪ್ಪೆನ್ನುವಂತೆ ವರ್ತಿಸುತ್ತಾ ನನ್ನನ್ನು ವಿತ್ತಾಸ್ಪರ್ಶಳನ್ನಾಗಿಸಿದ್ದಾರೆ!
'ಗಂಟು' ಎನ್ನುವ ಬಗ್ಗೆ ಮೊದಲಿನಿಂದಲೂ ನನ್ನಲ್ಲಿ ಇದ್ದ ಜಿಜ್ಞಾಸೆಯ ಫಲವೋ, ಬಾಹ್ಯವಾಗಿ ಆರ್ಥಿಕವಾಗಿ `ಗಂಟು'ಮಾಡಲಾಗದ (ಅ!)ಸಾಮರ್ಥ್ಯವೋ ಏನೋ ಕ್ರಮೇಣ ನನ್ನೊಳಗೇ `ಗಂಟು'ಗಳು ಬೆಳೆಯಲಾರಂಭಿಸಿಬಿಟ್ಟವು! ಕತ್ತಿನಸುತ್ತ ಬೆಳೆಯಲಾರಂಭಿಸಿದ ಗಂಟುಗಳನ್ನು ಸಾಮಾನ್ಯ ಔಷಧಿಗಳಿಂದ ಜಗ್ಗಿಸಲಾಗದೇ (ಜಗ್ಗದ, ಕುಗ್ಗದ, ಕರಗದ....)ವಿಶೇಷ ತಜ್ಞರಿಗೆ ತೋರಿಸಿದಾಗ ಕ್ಷ-ಕಿರಣ, ರಕ್ತಪರೀಕ್ಷೆ, ಸ್ಕ್ಯಾನಿಂಗ್,... ಇತ್ಯಾದಿ ಎಲ್ಲರೀತಿಯ ಪ್ರಯೋಗಗಳನ್ನೂ ಮಾಡಿ ಬೆಟ್ಟ ಅಗೆದು ಇಲಿ ಹಿಡಿದಂತೆ `ಲಿಂಫ್ ನೋಡ್ಸ್' ಎನ್ನುವ ತೀರ್ಮಾನಕ್ಕೆ ಬಂದು ಔಷದೋಪಚಾರ ಪ್ರಾರಂಭವಾಯ್ತು. `ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ' ಎನ್ನುವ ಪ್ರಕೃತಿಯವಳಾದ್ದರಿಂದ `ಅಲರ್ಜಿ' ಭೂತದ ಹಾವಳಿಯುಂಟಾಗಿ ಒಂದಕ್ಕೆ ಒಂದು ಫ್ರೀ ಎನ್ನುವಂತೆ ಉಪ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಮತ್ತು ವರ್ಷಾನುಗಟ್ಟಲೆ ತೆಗೆದುಕೊಂಡ ಔಷಧಿಗಳ ಸಕಾರಾತ್ಮಕ ಪರಿಣಾಮಗಳೂ ಕಾಣದಂತಾಗಿ ಆಲೋಪತಿಗೆ ತಾತ್ಕಾಲಿಕ ವಿದಾಯ ಹೇಳಿ ಆಯುರ್ವೇದಿಕ್ ಮೊರೆಹೋದದ್ದಾಯ್ತು. ಲೇಹ್ಯ, ಚೂರ್ಣ, ಕಷಾಯ, ಗುಳಿಗೆ, ತೈಲಾದಿಗಳದೇ ಲೇಪ, ಧೂಪಗಳಿಂದ ಕತ್ತನ್ನು ಉಪಚರಿಸುವ ಸಡಗರದಲ್ಲಿ ಗಂಟೋತ್ಪಾಟನಾ ಕಾರ್ಯದಲ್ಲಿ ತೊಡಗಿದ್ದಾಗ `ಎಲ್ಲಿ ಗಂಟು ಬಿದ್ದಳೋ ಇವಳು' ಎಂದು ಗೊಣಗಿಕೊಳ್ಳುವಂತೆ (ಬ್ರಹ್ಮಗಂಟು!) ಪತಿಯ ಅವಕೃಪೆಗೊಳಗಾಗುವ ಕುತ್ತುಂಟಾಯಿತು. ಆದರೂ ಛಲಬಿಡದೇ ನಿಯಮಿತವಾಗಿ ವರ್ಷಗಟ್ಟಳೇ ವೈದ್ಯರ ಸಲಹೆಯಂತೆ ಮದ್ದುಗಳನ್ನು ಸೇವಿಸುತ್ತಾ `ಅನುವಂಶೀಯ' ಗುಣವೇ ಇರಬಹುದಾದ ವೈದ್ಯ ಸ್ನೇಹಕ್ಕೆ ಭಾಜನಳಾದೆ! ನಾವಿದ್ದ ಹಳ್ಳಿಗೆ ಯಾರೇ ವೈದ್ಯರು ಬಂದರೂ ನಮ್ಮ ತಂದೆ ಅವರ ಸ್ನೇಹ ಸಂಪಾದಿಸಿ ಅವರು ಅನೇಕ ವಿಷಯದಲ್ಲಿ ನಮ್ಮ ತಂದೆಯ ಸಲಹೆ ಪಡೆಯುವಷ್ಟು ಸಲಿಗೆಯುಂಟಾಗುತ್ತಿತ್ತು. ಹೊಸ ವೈದ್ಯನಿಗಿಂತ ಹಳೆಯ ರೋಗಿಯೇ ವಾಸಿ ಎನ್ನುವಂತೆ ನನ್ನ ಸ್ಥಾನ ಮಾನವೂ ದಿನೇ ದಿನೇ ಏರಲಾರಂಭಿಸಿದ್ದಕ್ಕೆ ನಾನು ನನ್ನ `ಗಂಟು'ಗಳಿಗೆ ವಂದನೆಗಳನ್ನು ಸಲ್ಲಿಸಲೇ ಬೇಕು! ಇದೇ ಧನ್ಯತಾ ಭಾವದಲ್ಲಿ ನಾನಿದ್ದಾಗ ಉಪಚಾರ ಹೆಚ್ಚಾದಾಗ ಕೆಲಸವಿಲ್ಲದ ಅಳಿಯ ಮಾವನ ಮನೆಯಲ್ಲಿಯೇ ಟೆಂಟ್ ಹಾಕುವಂತೆ ಕತ್ತನ್ನು ಸುತ್ತುವರಿದಿದ್ದ ಗಂಟುಗಳು ಕಿರಿದಾದ ಮರಿಗಳೊಡಗೂಡಿ ವಿಹರಿಸಲಾರಂಭಿಸಿದವು! ಹೇಗೋ ಒಬ್ಬ ಪರ್ಮನೆಂಟ್ ಗಿರಾಕಿ ಸಿಕ್ಕಿತೆಂದು ಹಾಯಾಗೇ ಇದ್ದ ವೈದ್ಯರೂ ಹೌಹಾರಿ ಮತ್ತೊಮ್ಮೆ ಎಲ್ಲಾ ರೀತಿಯ ಪರೀಕ್ಷೆಗಳನ್ನೂ ಮಾಡಿಸಬೇಕೆಂದು ಸಲಹೆ ನೀಡಿದರು. ಹಣವನ್ನು ನೀರಿನಂತೆ_ ಕ್ಷಮಿಸಿ ವಾರಕ್ಕೆ ಒಮ್ಮೆಯೋ, ಎರಡು ಭಾರಿಯೋ ನೀರು ಬರುವುದರಿಂದ ನೀರುಹಿಡಿಯುವುದರಲ್ಲಿ (ಬಿಂದು ಬಿಂದು ಸೇರಿ ಸಿಂಧು!) ಕಣ್ಣೀರೂ ಬಂದಿರುತ್ತದೆ!_ಖರ್ಚುಮಾಡಿದ್ದಾಯಿತೇ ವಿನಾ ಪ್ರಯೋಜನವೇನೂ ಆಗಲಿಲ್ಲ. ಮತ್ತೊಮ್ಮೆ ಮೊದಲಿನ ಎಲ್ಲಾ ಪರೀಕ್ಷೆಗಳೊಡನೆ ಸಿಟಿಸ್ಕಾನ್ ನ೦ಥಾ ನವನವೀನ ಪರೀಕ್ಷೆಗಳಿಗೆ ದೇಹವನ್ನು ಒಡ್ಡಿ ಹೊಸ ಅನುಭವಗಳನ್ನು ಪಡೆದುಕೊಂಡಿದ್ದಾಯ್ತು! ವೈದ್ಯರು ತೋರಿಸುತ್ತಿದ್ದ ಅನುಮಾನ, ಆತಂಕಗಳಿಂದ ಭಯಗೊಂಡ ಕುಟುಂಬವರ್ಗದವರು ಹಾಗೂ ಬಂಧುಬಾಂಧವರು ನನ್ನ ಬಗ್ಗೆ ತೋರಿಸುತ್ತಿದ್ದ ವಿಶೇಷ ಪ್ರೀತಿ, ಪ್ರಾಮುಖ್ಯತೆಗಳಿಂದ ನಾನೊಬ್ಬ ವಿ.ವಿ.ಐ.ಪಿ.ಯಾಗುವ ಅವಕಾಶ ಕೂಡಿ ಬಂದು ನನ್ನ ಈ ಗಂಟುಗಳಿಗೆ ಚಿರಋಣಿಯಾಗಿರುವ ಸಂದರ್ಭವೊದಗಿ ಬಂದಿದೆಯೆನಿಸಿತು! ಈ ಆಂತರಿಕ ಗಂಟುಗಳೊಡನೆಯೇ ರಾಜಿ ಮಾಡಿಕೊಂಡು ಜೀವನ ನಡೆಸಬೇಕೇನೋ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಸರಣಿ ಆಲೋಪತಿಕ್ ಔಷದೋಪಚಾರ ಪ್ರಾರಂಭವಾಯ್ತು! ಈಗಂತೂ ದಿನನಿತ್ಯದ ಆಹಾರ (ನನ್ನಂತೆಯೇ ಸಪ್ಪೆ!) ಸೇವನೆಯೊಂದಿಗೇ `ಗುಳಿಗಾ ಸ್ವಾಹಾ'ವನ್ನೂ ಅತ್ಯಂತ ಸಹಜವಾಗೇ ಸ್ವೀಕರಿಸಿ `ಗಂಟು'ಸೇವೆಯನ್ನು ಮುಂದುವರಿಸಲಾರಂಭಿಸಿದೆ! ತಮ್ಮದೇ ಅನೇಕ ಗೌರವಾನ್ವಿತ ಅನಾರೋಗ್ಯ ಸಮಸ್ಯೆಗಳ ರಾಜಯೋಗದಲ್ಲಿದ್ದು, ದಿನಕ್ಕೆ ಕಮ್ಮಿಯೆಂದರೂ ೨೦-೨೫ ಮಾತ್ರೆಗಳನ್ನು ಸೇವಿಸುತ್ತಿದ್ದ `ಇವರ' ಎದುರು ನಾನಂತೂ ‘ಯಃಕಚಿತ್' ಆಗೇ ಉಳಿಯಬೇಕಾಯಿತು!
ವಾಹನಗಳ ಬಳಕೆ ಕಡಿಮೆ ಇದ್ದ ಕಾಲದಲ್ಲಿ ಅಗಸರು ಒಗೆಯಬೇಕಾದ ಬಟ್ಟೆಗಳನ್ನು ಗಂಟುಕಟ್ಟಿ ಕತ್ತೆಯ ಮೇಲೆ ಹೇರಿಕೊಂಡು ಹೋಗುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯವನ್ನು ಕಾಣಬಹುದು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ `ನೀ ನನಗಿದ್ದರೆ ನಾ ನಿನಗೆ' ಎಂಬ ಪದ್ಯ ಓದಿದ್ದು, ಅದರಲ್ಲಿ ಕೊಟ್ಟಿದ್ದ ಚಿತ್ರ, ‘ಕತ್ತೆ ಬೆನ್ನ ಮೇಲಿನ ಹೊರೆಯ ಭಾರ ತಾಳಲಾರದೇ ಗೋಳಾಡುತ್ತಿರುವುದು, ಕುದುರೆ ತನಗೇನೂ ಸಂಬಂದಿಸಿಲ್ಲವೆನ್ನುವಂತೆ ನಿಂತಿರುವುದು,' ಇನ್ನೂ ಮನಃಪಟಲದಲ್ಲಿ ನಿಶ್ಚಳವಾಗಿದೆ! ಅಜ್ಞಾತ ವಾಸ ಪ್ರಾರಂಭವಾದಾಗ ಪಾಂಡವರು ತಮ್ಮ ಆಯುಧಗಳನ್ನೆಲ್ಲಾ ಗಂಟುಕಟ್ಟಿ ಬನ್ನಿಮರದ ಮೇಲೆ ಇಟ್ಟಿದ್ದರು ಎನ್ನುವುದನ್ನು ನೆನಪು ಮಾಡುತ್ತಾ ವಿಜಯದಶಮಿಯ ದಿನ ಬನ್ನಿ ಮುಡಿಯುವುದನ್ನು ಸಂಪ್ರದಾಯವಾಗಿಸಿದ್ದಾರೆ.
ನಾನು ಚಿಕ್ಕವಳಿದ್ದಾಗ (ಈಗಲೂ ಚಿಕ್ಕವಳೆಂದೇ ಭಾವಿಸಿದ್ದೇನೆ! ನೋಡಿದವರು ಸಹಿಸಿಕೊಳ್ಳಬೇಕು ಅಷ್ಟೆ! ನಿನ್ನೆ ಇವತ್ತಿಗಿಂತ ಚಿಕ್ಕವಳಿದ್ದೆ-ನಾಳೆಗಿ೦ತಾ ಇವತ್ತು ಚಿಕ್ಕವಳಾಗಿದ್ದೇನೆ! ಆದ್ದರಿಂದ ಕೆಲವು ವರ್ಷಗಳ ಹಿಂದೆ...) `ರಾಮದಾಸರು ಗಂಟು ಬಿಚ್ಚಿದರು' ಎನ್ನುವ ಒಂದು ಲೇಖನವನ್ನು ಓದಿದ್ದೆ. ಒಮ್ಮೆ ಸಮರ್ಥ ರಾಮದಾಸರು ರೈಲಿನಲ್ಲಿ ಪ್ರಯಾಣಮಾಡುವಾಗ ಚೆಕಿಂಗಿನವರು ಅನುಮಾನದಿಂದ ಗಂಟಿನಲ್ಲಿ ಏನಿದೆಯೋ ಎಂದು ಬಿಚ್ಚಿಸಿದಾಗ ಅದರೊಳಗಿದ್ದ ಆಧ್ಯಾತ್ಮಿಕ ಸಂಪತ್ತನ್ನು ನೋಡಿ ಆಶ್ಚರ್ಯಚಕಿತರಾದರೆಂಬ ನೆನಪು. ರಾಹುಲ ಸಾಂಕೃತ್ಯಾಯನ ಎಂಬ ಮಹಾಜ್ಞಾನಿ ಅನೇಕ ಭಾರಿ ಟಿಬೆಟ್ ಯಾತ್ರೆ ಮಾಡಿ ನಮ್ಮ ಭರತಖಂಡದಿಂದ ಟಿಬೆಟ್ಗೆ ಕೊಂಡೊಯ್ದಿದ್ದ ಅಮೂಲ್ಯ ಬೌದ್ಧಗ್ರಂಥಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಗಂಟುಕಟ್ಟಿಕೊಂಡು ತಂದು ನಮ್ಮ ಜ್ಞಾನ ಸಂಪತ್ತನ್ನು ಸಂರಕ್ಷಿಸಿದರು. 'ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ....'ವಿಶ್ವಾದ್ಯಂತ ಅನೇಕ ಭಾರಿ ಸಂಚರಿಸಿ, ಕಳೆದ ಸುಮಾರು ೨೫ವರ್ಷಗಳಿಂದ ಬಿಳಿಗಿರಿರಂಗನ ಬೆಟ್ಟದ ಪ್ರಶಾಂತ ತಾಣದಲ್ಲಿ ಏಕಾಂತವಾಸಿಗಳಾಗಿರುವ ಸ್ವಾಮಿ ನಿರ್ಮಲಾನಂದರ ಬಗ್ಗೆ ಓದುವಾಗ ಗಮನ ಸೆಳೆದ ವಾಕ್ಯಗಳಿವು. ಬಾಳಬಟ್ಟೆಯಲ್ಲಿ ವ್ಯಕ್ತ, ಅವ್ಯಕ್ತ ಗಂಟುಮೂಟೆಗಳನ್ನು ಹೊತ್ತು ಸಾಗುವ ನಾವು ಅವುಗಳೊಂದಿಗೇ ನಮ್ಮನ್ನು ನಾವು ತಾದ್ಯಾತ್ಮಗೊಳಿಸಿಕೊಂಡು ಬಿಟ್ಟಿರುತ್ತೇವೆ. ನಾವು ಬಿಡುತ್ತೇವೆಂದರೂ ನಮ್ಮನ್ನು ಬಿಡದ ಈ ಗಂಟು ಮೂಟೆಗಳು `ತಲೆನೋವು ಬಂದಾಗ ತಲೆ ಇದೆ' ಎಂದು ಸಾಬೀತಾಗುವಂತೆ ತಮ್ಮ ಇರವಿನಿಂದ ನಮ್ಮ ಬದುಕಿಗೊಂದು ಅರ್ಥ ಎನ್ನುವಂತೆ ನಮ್ಮನ್ನೇ ಆಳಲಾರಂಭಿಸಿಬಿಡುತ್ತವೆ. ಅವುಗಳ ತೂಕ ಸಹನೀಯವೆನಿಸುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳೋಣ, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು, ಬದುಕ ಕಗ್ಗಂಟುಗಳನ್ನು ಮೂಟೆಕಟ್ಟಿ ದೂರಬಿಸುಟು ಧನಾತ್ಮಕಗಳನ್ನು ನಮ್ಮದಾಗಿಸಿಕೊಂಡು ಮೂಟೆಯ ಭಾರವನ್ನು ಹಗುರಗೊಳಿಸಿಕೊಳ್ಳೋಣ. ನಗುತ, ನಗಿಸುತ ಬದುಕುವ ಕಲೆಯನ್ನು ಕಲಿಯೋಣ...ಎಂದುಕೊಳ್ಳುತ್ತಾ ಗಂಟು ಮೋರೆಯೊಂದಿಗೆ ನನ್ನನ್ನೇ ನಾನು ಸಂತೈಸಿಕೊಳ್ಳುವಂತಾಗಿಬಿಟ್ಟಿದೆ! `ಗಂಟು'ಗಳು ಉಂಟು ಮಾಡಿರುವ ನನ್ನ ಈ ಪರಿಸ್ಥಿತಿ!
ಹಿಂದೊಮ್ಮೆ ಅಜ್ಜಿಯು ಹೇಳುತ್ತಿದ್ದ `ಕನ್ನಡಿಯೊಳಗಿನ ಗಂಟು' ನನ್ನ ಎಳೆಮನದಲ್ಲಿ `ಆ ಗಂಟನ್ನು ಹೊರತೆಗೆಯುವುದು ಹೇಗೆ?' ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ಈಗಿನ ಎಲ್ಲಾ ಗೋಜಲುಗಳು `ಈ ಗಂಟನ್ನು ಪುನಃ ಕನ್ನಡಿಯ ಒಳಗೇ ಸೇರಿಸುವುದು ಹೇಗೆ?' ಎಂದು ನನ್ನನ್ನೇ ಪ್ರಶ್ನಿಸುತ್ತಿವೆ! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು'ಆಗೇ ಉಳಿದುಬಿಡಲಿ. ಅದರ ಸಹವಾಸವೇ ಬೇಡ. ಎಂದರೆ `ಪಲಾಯನವಾದ'ವೆನ್ನುತ್ತೀರಾ?
Posted by prabhamani nagaraja (noreply@blogger.com) on September 29, 2011 02:20 PM· permalink
ನನ್ನ ನೆಚ್ಚಿನ ದೇಶ ಭಕ್ತಿಯ ಗೀತೆಗಳಲ್ಲಿ ಒಂದು...
”ನಯಾ ದೌರ್” ಹಿಂದಿ ಚಿತ್ರದ ಹಾಡು ,...ಈ ಕರವೋಕೆಗೆ ಪ್ರೇರಣೆ...
ಭಾರತಿ - ತನುಜಾತೆ
ಈ ದೇಶವು ವೀರ ಜವಾನರದು, ರಣ ಧೀರರದು ಧೀಮಂತರದು
ಈ ದೇಶದ ಜಯವನು, ಈ ದೇಶದ ಜಯವನು ಬಯಸೋಣ
ಈದೇಶದ ಸೇವೆಗೆ ದುಡಿಯೋಣ....ಓ...ಓ...
//ಪ// ಈ ದೇಶವು ವೀರ ಜವಾನರದು //ಪ//
ಇಲ್ಲಿ ವೀರರ ಶೌರ್ಯಕೆ ಎಣೆಯಿಲ್ಲ, ಇಲ್ಲಿ ದೇಶ ದ್ರೋಹಿಗೆ ಮಣೆಯಿಲ್ಲ
ಪರಂಗಿ ಮಣಿದರು ... ಪರಂಗಿ ಮಣಿದರು ಅಹಿಂಸೆಗೆ,
ಬಾಪೂಜಿ ಕನಸಿನ ಸ್ವರಾಜ್ಯಕೆ.. ಓ...sss. ಓ.sssss//ಪ// ಈ ದೇಶವು ವೀರ ಜವಾನರದು //ಪ//
ಇಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು, ಜೈನ ಬೌದ್ಧ ಸಿಂಧಿ ಸಿಕ್ಖರು
ಎಲ್ಲಾ ಸೋದರರಂತೆ.. ಎಲ್ಲಾ ಸೋದರರಂತೆ ಸಾಗಿಹರು,
ದೇಶ ಪ್ರೇಮವ ಮೆರೆದಿಹರು...ಓ...sss. ..ಓ.sss//ಪ// ಈ ದೇಶವು ವೀರ ಜವಾನರದು //ಪ//
ಕನ್ನಡ ತೆಲುಗು ತಮಿಳು ಮಲೆಯ, ದಕ್ಷಿಣದ ಸವಿ ಭಾಷೆಗಳು
ಮರಾಠಿ ಬಂಗಾಲಿ..... ಮರಾಠಿ ಬಂಗಾಲಿ ಗುಜ್ರಾತಿ ಒರಿಯಾ
ನಮ್ಮ ಸುತ್ತಲ ಭಾಷೆಗಳು........ಓ.ssss ..ಓ....sss
//ಪ// ಈ ದೇಶವು ವೀರ ಜವಾನರದು //ಪ//
ಸಾಹಿತ್ಯ ಸಂಸ್ಕೃತಿಯ ಬೀಡು ಇದು, ಶಾಸ್ತ್ರಿಯ ಕನ್ನಡ ನುಡಿಯಿದು
ಜ್ಞಾನಪೀಠಗಳ... ಜ್ಞಾನಪೀಠಗಳ ಸಿರಿಯಿದು
ಮಾಹಿತಿ ತಂತ್ರದ ಸೆಲೆಯಿದು......ಓ..sssss ಓ...sss
//ಪ// ಈ ದೇಶವು ವೀರ ಜವಾನರದು //ಪ//
Posted by ಜಲನಯನ (suruaz@gmail.com) on September 28, 2011 07:47 PM· permalink
ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ಆಗ ನಾನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಸರ್ಜೆನ್ಸಿ ಮಾಡುತ್ತಿದ್ದೆ.ಮೆಡಿಸಿನ್ ಪೋಸ್ಟಿಂಗ್ ಇತ್ತು.ಒಂದು ದಿನ ಬೆಳಿಗ್ಗೆವಾರ್ಡಿನ ರೌಂಡ್ಸ್ ನಲ್ಲಿ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕಂಪ್ಲಿ ಯಿಂದ ಬಂದ ಸುಮಾರು ಎಪ್ಪತ್ತು ವರ್ಷ ವಯಸ್ಸಿನ ರೈತ,ಗೌಡಜ್ಜನಿಗೆ ಟ್ರೀಟ್ಮೆಂಟ್ ಹೇಳಿದರು.ಗೌಡಜ್ಜನಿಗೆ ಸುಮಾರು ದಿನಗಳಿಂದ ರಕ್ತ ಬೇಧಿಯಾಗುತ್ತಿತ್ತು.ಸುಮಾರು ಕಡೆ ತೋರಿಸಿಕೊಂಡು ಕಡೆಗೆ ಇಲ್ಲಿಗೆ ಬಂದಿದ್ದ.ನಮ್ಮ ಪ್ರೊಫೆಸರ್ ಅವನಿಗೆ 'ಅಲ್ಸರೇಟಿವ್ ಕೊಲೈಟಿಸ್' ಎನ್ನುವ ದೊಡ್ಡ ಕರುಳಿನ ಖಾಯಿಲೆಯಿದೆ ಎಂದು ರೋಗ ನಿರ್ಧಾರ(DIAGNOSIS) ಮಾಡಿ 'ಮಜ್ಜಿಗೆ ಎನೀಮ 'ಟ್ರೀಟ್ಮೆಂಟ್ ಕೊಡುವುದಕ್ಕೆ ಹೇಳಿದ್ದರು .ಆಗಿನ ಕಾಲದಲ್ಲಿ 'ಅಲ್ಸರೆಟಿವ್ ಕೊಲೈಟಿಸ್'ಖಾಯಿಲೆಗೆ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕೆಲವು ಮಾತ್ರೆಗಳನ್ನು ಪುಡಿ ಮಾಡಿ ರೋಗಿಯ ಕಡೆಯವರಿಂದ ಮಜ್ಜಿಗೆ ತರಿಸಿ,ಅದರಲ್ಲಿ ಮಾತ್ರೆಯ ಪುಡಿಯನ್ನು ಸೇರಿಸಿ ಗುದ ದ್ವಾರದ ಮೂಲಕ Retention Enema ಕೊಡುತ್ತಿದ್ದರು. ಈ ಟ್ರೀಟ್ ಮೆಂಟಿಗೆ ನಾವೆಲ್ಲಾ 'ಮಜ್ಜಿಗೆ ಎನೀಮ'ಟ್ರೀಟ್ಮೆಂಟ್ ಎನ್ನುತ್ತಿದ್ದೆವು.ಇದು ನಮ್ಮ ಯುನಿಟ್ಟಿನಲ್ಲಿ ಮಾತ್ರ ಚಾಲ್ತಿಯಲ್ಲಿ ಇದ್ದದ್ದರಿಂದ ಬೇರೆ ಯುನಿಟ್ಟಿನವರಿಗೆ ಹಾಸ್ಯದ ವಿಷಯವಾಗಿತ್ತು. ನಾನು ಕೇಸ್ ಶೀಟಿನಲ್ಲಿ ಟ್ರೀಟ್ಮೆಂಟ್ ಬರೆದು ಅಲ್ಲಿದ್ದ ನರ್ಸ್ ಗೆ ಟ್ರೀಟ್ಮೆಂಟ್ ಶುರು ಮಾಡುವಂತೆ ಹೇಳಿ ಬೇರೆಯ ವಾರ್ಡಿಗೆ ಹೋದೆ.ಅರ್ಧ ಗಂಟೆಯಲ್ಲೇ ಗೌಡಜ್ಜನ ವಾರ್ಡಿನಿಂದ ನನಗೆ ಕರೆ ಬಂತು.ಗೌಡಜ್ಜ ನೋವಿನಿಂದ ಬೊಬ್ಬಿಡುತ್ತಿದ್ದ.ಅವನ ಬಾಯಿಂದ ಹಳ್ಳಿ ಭಾಷೆಯ ಬೈಗಳು ಪುಂಖಾನು ಪುಂಖವಾಗಿ ಹೊರ ಬರುತ್ತಿದ್ದವು. "ಸಾಯ್....ಕೊಲ್ತಾರಲೇ ಸೂಳೀ ಮಕ್ಳು!! ಇದ್ಯಾವ ಸೀಮೆ ಔಷದೀಲೇ.....ಯಪ್ಪಾ ....ಸಾಯ್ತೀನೋ , ಮುಕುಳ್ಯಾಗ ಉರಿಯಕ್ ಹತ್ತೈತಲೇ !!!"ಎಂದು ಕೂಗುತ್ತಿದ್ದ .ತನ್ನ ಮಗನನ್ನು "ನೀನ್ಯಾವ ಹುಚ್ಚು ಸೂಳೀ ಮಗನಲೇ ...........ಇಲ್ಲೀಗೆ ನನ್ ...ಎದಕ್ ಕರ್ಕಂಡ್ ಬಂದೀಯಲೇ .......ದಡ್..ಸೂಳೀ ಮಗನೆ!!!'ಎಂದು ಬಾಯಿಗೆ ಬಂದ ಹಾಗೆ ಬೈದು ಸಿಟ್ಟು ತೀರಿಸಿಕೊಳ್ಳುತ್ತಿದ್ದ. ವಾರ್ಡಿನ ಇತರೆ ರೋಗಿಗಳು ಎದ್ದು ಕೂತು ತಮಾಷೆ ನೋಡುತ್ತಿದ್ದರು. ನರ್ಸ್ ಗಳು ಏನು ಮಾಡಲೂ ತೋಚದೆ, ಮಲಯಾಳಿ ರೀತಿಯ ಕನ್ನಡದಲ್ಲಿ 'ಎಂತ ಆಯ್ತೆ ಮಾರಾಯ್ತಿ!?'ಎಂದು ಮಾತನಾಡುತ್ತ ,ಅತ್ತಿಂದಿತ್ತ ಸರ ಬರನೆ ಏನೂ ಮಾಡದೆ ಗಡಿಬಿಡಿಯಿಂದ ಓಡಾಡುತ್ತಿದ್ದರು. ಗೌಡಜ್ಜನ ಪರದಾಟ ನೋಡಿ ನನಗೆ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನಿಸಿತು.ನರ್ಸ್ "ನಾನು ಎಂತದ್ದೂ ಮಾಡಿಲ್ಲಾ ಡಾಕ್ಟ್ರೆ.......ಪೇಶಂಟ್ ನ ಮಗ ...ಮಜ್ಜಿಗೆ ತಂದದ್ದು...ನಾನು ಅದರಲ್ಲಿ ಮಾತ್ರೆಯ ಪುಡಿಯನ್ನು ಮಿಕ್ಸ್ ಮಾಡಿ ಎನೀಮಾ ಕೊಟ್ಟದ್ದು !!......ಅಷ್ಟೇ!! "ಎಂದು ಮೊದಲೇ ಅಗಲವಾಗಿದ್ದ ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿ ಭಯ ಭೀತಳಾಗಿ ನಿಂತಳು.ಗೌಡಜ್ಜನ ಮಗ "ಸಿಸ್ಟರ್ ಮಜ್ಜಿಗೀ ತಾ ಅಂದರ್ರೀ ........ನಾನು ಈ ತಂಬಗೀ ತುಂಬಾ ಆಸ್ಪತ್ರೀ ಎದುರಿನ ಹೋಟೆಲ್ಲಿನಾಗೆ,ಹತ್ತು ರೂಪಾಯಿ ಮಜ್ಜಿಗಿ ತಂದು ಕೊಟ್ಟೀನ್ರೀ !!!"ಎಂದ.'ಹೋಟೆಲಿನ ಮಜ್ಜಿಗಿ!!!........' ನನಗೆ ಜ್ಞಾನೋದಯವಾಯಿತು!! ಗೌಡಜ್ಜನ ಮಗ "ಇನ್ನೂ ಮಜ್ಜಿಗೀ ಉಳಿದೈತೆ ನೋಡ್ರೀ"ಎಂದು ತಂಬಿಗೆಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ಮಜ್ಜಿಗೆ ತೋರಿಸಿದ.ಅದು ಹೋಟೆಲ್ಲಿನಲ್ಲಿ ಸಿಗುವ 'ಕುಡಿಯುವ ಮಸಾಲಾ ಮಜ್ಜಿಗೆ!'ಅದರಲ್ಲಿ ಚೆನ್ನಾಗಿ ಅರೆದು ಹಾಕಿದ ಹಸೀ ಮೆಣಸಿನ ಕಾಯಿ,ಕೊತ್ತಂಬರಿ,ಕರಿಬೇವು ತೇಲುತ್ತಿತ್ತು!!! ಸಿಸ್ಟರ್, ಕುಡಿಯುವ ಮಜ್ಜಿಗೆಯನ್ನೇ ಸರಿಯಾಗಿ ನೋಡದೆ ಎನೀಮಾಗೆ ಉಪಯೋಗಿಸಿ ಬಿಟ್ಟಿದ್ದರು!! ಗೌಡಜ್ಜನ ಬೊಬ್ಬೆಗೆ ಖಾರದ ಮಜ್ಜಿಗೆಯೇ ಕಾರಣವೆಂದು ಗೊತ್ತಾಗಿತ್ತು.ಆದರೆ ಕಾಲ ಮಿಂಚಿತ್ತು!!ಖಾರದ ಮಜ್ಜಿಗೆ ಗೌಡಜ್ಜನ ಗುದ ದ್ವಾರದಲ್ಲಿ ತನ್ನ ಕೆಲಸ ಶುರು ಮಾಡಿತ್ತು!! ನಿಜಕ್ಕೂ ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ!!!!! ಪ್ರೊಫೆಸರ್ ಅವರನ್ನೇ ಕೇಳೋಣವೆಂದು ಕೊಂಡು ಓ.ಪಿ.ಡಿ ಕಡೆ ಓಡಿದೆ.
Posted by Dr.D.T.Krishna Murthy. (noreply@blogger.com) on September 28, 2011 04:22 PM· permalink
ಗುಳಿ ಕೆನ್ನೆ.. ತುದಿ ಗಲ್ಲದಲಿ...
ನಿನ್ನ..
ನಾ...ನಿನ್ನಂದದ ಚಂದದ...
ನಿನ್ನಿಷ್ಟದ ...
ಬಣ್ಣಗಳಾಗಿ..
ನಲ್ಲೆ.. ನಿನ್ನೊಳಗೇ..
Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on September 28, 2011 03:09 PM· permalink
ನಮಗಂತೂ ಆಗಲಿಲ್ಲ ಮಕ್ಕಳಾದರು ಓದಲಿ. ಚೆನ್ನಾಗಿ ಓದಲಿ. ಓದಿ ಜ್ಞಾನ ಸಂಪಾದನೆ ಮಾಡ್ಲಿ. ಒಳ್ಳೆ ಮನುಷ್ಯ ಆಗ್ಲಿ. ನಮಗ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಮಗಳ ವಿದ್ಯಾಭ್ಯಾಸಕ್ಕೆ ಯಾವ್ದು ಆಡ್ದಿಯಾಗ್ಬಾರ್ದು. ಹೀಗೆ ಇದೆ ರೀತಿಯ ಹಲವಾರು ಆಸೆಗಳಿರುವ ಸಾಮಾನ್ಯ ಮದ್ಯಮ ವರ್ಗದ ತಂದೆ ತಾಯಿಗಳಂತೆ, ಅವರು ಕೂಡ. ತಮ್ಮ ಅದೆಷ್ಟೋ ಆಸೆ, ಕನಸುಗಳನ್ನ ಬಲಿಕೊಟ್ಟು ಓದಿಸಿದರು. ಮಗಳು ಈಗ ಬೆಂಗಳೂರಿನಲ್ಲಿ ಇಂಜೀನಿಯರ್ . "ಹುಡುಗೀನ ಯಾಕ ಓದಸ್ತೀರ ಮದುವೆ ಮಾಡಿ" ಆನ್ನೋ ಮಾತಿಗೆ ಗಮನ ಕೊಡದೆ ಮಗಳನ್ನ ಕಾಲೇಜಿಗೆ ಸೇರಿಸಿದ ಅವಳ, ಅಪ್ಪ-ಅಮ್ಮ ಎಂಬ ಆ ಎರಡು ಜೀವಗಳಿಗೆ ಅದೆಂಥದೋ ಹೇಳಲಾಗದ ಸಂಬ್ರಮ. ಅದೆಷ್ಟು ಕಷ್ಟ ಪಟ್ಟಿದ್ದವು ಆ ಜೀವಗಳು. ಬೆಂಗಳೂರಿನಿಂದ ಸರಿ ಸುಮಾರು 470 km ದೂರದ ಊರು ಅವರದು. ತಂದೆ-ತಾಯಿ ಇಬ್ಬರಿಗೂ ಬೆಂಗಳೂರು ಆಕಸ್ಮಿಕ ಮತ್ತು ಅಪಚಿತ.
ಆ ಊರಿನ ಮೊದಲ ಇಂಜೀನಿಯರ್ ಅವಳು, ಕಾಲೇಜಿನ ಕ್ಯಾಂಪಸ್ ಇಂಟರ್ವೀವ್ ನಲ್ಲೆ ಒಂದು ಕಂಪನಿಗೆ ಸೆಲೆಕ್ಟ್ ಆಗಿದ್ದಳು. ಡಿಗ್ರೀ ಕಂಪ್ಲೀಟ್ ಆದಮೇಲೆ ಸ್ವಲ್ಪ ದಿನ ಊರಲ್ಲಿ ಅಪ್ಪ-ಅಮ್ಮ ನೊಂದಿಗಿದ್ದು ಈಗ್ಗೆ ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಳೆ - ಕಂಪನಿಯವರು joining date ಕೊಟ್ಟಿದಾರೆ. ಹುಡುಗಿಯರ paying guest ನಲ್ಲಿದಾಳೆ. ಕಂಪನಿಯಲ್ಲಿ ಇನ್ನೂ ಟ್ರೈನಿಂಗ್ ನಡೀತಾಯಿದೆಯಾದ್ದರಿಂದ ಸಂಬಳ ಸ್ವಲ್ಪ ಕಡಿಮೆ ಅದರಲ್ಲೇ ಸ್ವಲ್ಪ ಮನೆಗೆ ಕೊಡ್ತಾಯಿದಾಳೆ. ಅಪ್ಪ-ಅಮ್ಮನಿಗೋ ಮಗಳು ದುಡಿದು ನೂರು ರುಪಾಯಿ ಕೊಟ್ಟರು ಅವರ ಸಂತೋಷಕ್ಕೆ ಪಾರಾವೆಯಿರುವುದಿಲ್ಲ. ಮಗಳು ಕೊಡುವ ಕೆಲವು ಸಾವಿರ ರೂಪಾಯಿಗಳನ್ನ ತಾಯಿ ಅದೆಷ್ಟು ಬಾರಿ ಮುಟ್ಟಿ ಕಣ್ಣಿಗೊತ್ತಿಕೊಂಡು ಕಣ್ಣೀರಾದರೋ ಏನೋ - ತೀರದ ಆನಂದ ಭಾಷ್ಪ. ತಂದೆಗೆ ಏನನ್ನೋ ಸಾಧಿಸಿದ ಸಮಾಧಾನ. ದೂರದಲ್ಲೆಲ್ಲೋ, ಮಗಳು ಕೊಟ್ಟ ಹಣದಲ್ಲಿ ಮಗಳಿಗೇ ಸಣ್ಣ ಪುಟ್ಟ ಚಿನ್ನದ ಒಡವೆ ಖರೀದಿಸುವ ಕನಸು ಕಾಣುವ ತಾಯಿ. ಇನ್ನೂ ಮದುವೆ ತಯಾರಿ ಮಾಡ್ಕೊಬೇಕು ಅಂತ ವಿಚಾರ ಮಾಡೋ ತಂದೆ. . . .
. . . . .ಆದರೆ ದುರಂತ
ಇಂಜೀನಿಯರಿಂಗ್ 3 ನೇ ವರ್ಷದ ಕೊನೆಯಲ್ಲಿ ಕಂಪನಿಯೊಂದಕ್ಕೆ ಸೆಲೆಕ್ಟ್ ಆದ ಆ ಹುಡುಗಿ ನಂತರ ಬದಲಾಗಿದ್ದಳು. ಕೋತಿಗೆ ಹೆಂಡ ಕುಡಿಸಿದಂತಾಯ್ತು. ಜೋರು ಜೋರು ಪಾರ್ಟಿಗಳು ಶುರುವಾದವು, ಪ್ರತಿ ಕಂಪನಿಯಲ್ಲಿ ಸೆಲೆಕ್ಟ್ ಆದವರೆಲ್ಲ ಕೊಡುವ ಪಾರ್ಟಿ. ಮತ್ತೊಮ್ಮೆ ತೀರ ಆತ್ಮೀಯರಿಗೆ ಒಂದು ಪಾರ್ಟಿ.ಪಾರ್ಟಿಗಳಲ್ಲಿ ಬೇರೆ ಬೇರೆ ರೀತಿಯ ಮೋಜು ಮಸ್ತಿಗಳು ಇಷ್ಟವಾದವು, ಯೌವನ ನೆತ್ತಿಗೇರಿತು ಹಾಗೆ ಚಟಗಳು ಮೈಯಿಗೇರಿದವು. ಬೆಂಗಳೂರಿಗೆ ಬಂದಿರುವ ಆ ಹುಡುಗಿ ಇನ್ನೂ ಕಂಪನಿಗೆ join ಆಗಿಲ್ಲ ! ಆ ಹುಡುಗಿ, ladies paying guest ನಲ್ಲಿ ಇಲ್ಲ !! ಬೆಂಗಳೂರಿನಲ್ಲಿ ಒಬ್ಬ ಹುಡುಗನ ರೂಮಿನಲ್ಲಿದಾಳೆ !!! ಮನೆಯಲ್ಲಿ ತಂದೆ-ತಾಯಿಗೆ ಸುಳ್ಳು ಹೇಳಿ ಬಂದಿದ್ದಾಳೆ. ಡಿಸೆಂಬರ್ ನಲ್ಲಿ ಕಂಪನಿಯವರು ಜಾಯ್ನಿಂಗ್ ಡೇಟ್ ಕೊಟ್ಟಿದಾರೆ ಆದ್ರೆ ಇವ್ಳು ಬಂದಿರೋದು ಜುಲೈ ನಲ್ಲಿ ! no news about any crash course or something like that.
ಅದೆಷ್ಟೋ ಜನರ ಕೈ-ಕಾಲು ಹಿಡಿದು ಅಮಾಯಕ ತಂದೆ-ತಾಯಿ ಓದಿಸಿದ್ದರು. ತಮ್ಮ ಜೀವನದ ಆಶಾಕಿರಣ ಅಂತ ಭಾವಿಸಿರುವ ನಿಷ್ಕಲ್ಮಶ ಮನದ ಜೀವಗಳ ಮುದ್ದಿನ ಮಗಳ ಮೈ ಚಟಕ್ಕೆ ಬಿದ್ದುಬಿಟ್ಟಿದೆ - ಕಾಮಾತುರಣಂ ನ ಭಯಂ ನ ಲಜ್ಜಾ. ಪ್ರತಿ ಸಲ ಕಾಮಕ್ರೀಡೆ ಮುಗಿದ ಮೇಲೆ ಆ ಹುಡುಗ ಸೋಸಿಯಲ್ ನೆಟ್ವರ್ಕ್ ನಲ್ಲಿ ಬೇರೆಯ ರೀತಿಯಲ್ಲಿ ಅಪ್ಡೇಟ್ ಮಾಡ್ತಾನೆ ಈ ಹುಡುಗಿ ಅದನ್ನ ಲೈಕ್ ಮಾಡ್ತಾಳೆ. ಆ ಹುಡುಗಿ ಮನೆಗೆ ಕೊಡುವ ಹಣ ಆ ಹುಡುಗನದ್ದೆ !! ತಮ್ಮಿಬ್ಬರ ಈ ಕಳ್ಳ ವ್ಯವಹಾರ ತಮ್ಮ ಕಾಲೇಜಿನ ಕೆಲವರಿಗೆ ತಿಳಿದಿದೆ ಅಂತಲೂ ಅವರಿಗೆ ಗೊತ್ತು, ಆದರೂ ಯಾವ ಭಯ,ಸಂಕೋಚ ಅವರಿಗಿಲ್ಲ. ಹೆತ್ತವರ ಅಮಾಯಕತೆ, ಮುಗ್ಧತೆಯನ್ನ ದುರುದ್ದೇಶಕ್ಕೆ ಬಳಸಿಕೊಂಡವರು ಯಾರಿಗೆ ತಾನೇ ಹೆದರ್ತಾರೆ. 'ಇದು ತಪ್ಪಲ್ವಾ ?' ಅಂತ ಕೇಳಿದ್ರೆ 'ಅವಳಿಗೆ ಏನ್ ಬೇಕೊ ಅದನ್ನ, ನಾ ಕೊಡ್ತಿನಲ್ಲ ಮಗ' ಅಂತಾನೆ ಆ ಹುಡುಗ. ಮದುವೆ ಬಗ್ಗೆ ಕೇಳಿದ್ರೆ, ಅಂಥದೊಂದು ಇದಿಯಾ ಅನ್ನುವ ಹಾಗೆ ಮುಖ ನೋಡ್ತಾರೆ. ಇದನ್ನ ಓದಿದ ಮೇಲೆ ಆ ಹುಡುಗಿ, ಏನೂ ತಿಳಿಯದ 'ಮಾಸೂಮ್' ಅಂತೂ ಅಲ್ಲ ಅನ್ನೋದು ನಿಮಗೂ ಮನವರಿಕೆಯಾಗಿದೆ ಅನ್ಕೊಂಡಿದಿನಿ. so, They are not cheating on each other but, just ENJOYING together.
ದೊಡ್ಡ ದುರಂತ . . . .
ಈವರೆಗೆ ನೀವು ಓದಿದ್ದು ಕಾಲ್ಪನಿಕ ಕಥೆಯಲ್ಲ.
ಪ್ರಶ್ನೆಗಳು ::
1) 22 ವರ್ಷ ಪ್ರೀತಿ, ವಾತ್ಸಲ್ಯ, ಮಮಕಾರ, ಕಾಳಜಿ, ವಿದ್ಯಾಭ್ಯಾಸ, ಊಟ, ಬಟ್ಟೆ, ಹಣ ಎಲ್ಲಕ್ಕಿಂತ ಮುಖ್ಯವಾಗಿ ಜನ್ಮ ಕೊಟ್ಟ ಅಪ್ಪ-ಅಮ್ಮನಿಗೆ ಈ ಮಟ್ಟದ ನಯವಂಚನೆ, ನಂಬಿಕೆ ದ್ರೋಹ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ?
2) ಅಪ್ಪ-ಅಮ್ಮನ ವಾತ್ಸಲ್ಯದ ಬಿಸುಪಿಗಿಂತ ಹಾಸಿಗೆಯ ಮೇಲಿನ SEX ಹೆಚ್ಚು ಸುಖ,ಶಾಂತಿ, ನೆಮ್ಮದಿ ನೀಡುತ್ತಾ ?
3) ಕೇವಲ ಎರಡು ವರ್ಷಗಳ ಹಿಂದೆ ಪರಿಚಯವಾದವರ ಪ್ರೇಮ, ಮೈಥುನ; ತಂದೆ-ತಾಯಿಯೊಂದಿಗೆ ಐದು ತಿಂಗಳು(ಜುಲೈ -- ಡಿಸೆಂಬರ್) ಇರಲಾರದಷ್ಟು ಕೆರಳಿಸುತ್ತವಾ ? ಅಥವಾ, ತಂದೆ-ತಾಯಿ ಬೇಡವಾಗಿಬಿಡುತ್ತಾರಾ ?
4) ಟ್ರೈನಿಂಗ್ ನಲ್ಲಿ ಕಡಿಮೆ ಸಂಬಳ ಅಂತ ಹೇಳಿದ ಮಗಳು ಯಾವುದರ ಟ್ರೈನಿಂಗ್ ನಲ್ಲಿದ್ದಾಳೆ, ಇದೆ ಟ್ರೈನಿಂಗ್ ಆದ್ರೆ ನಂತರದ ವೃತ್ತಿ ?
5) ಊರ ತುಂಬಾ ತಮ್ಮ ಮಗಳು ಕಂಪನಿಯಲ್ಲಿ ದುಡಿದು ಹಣ ಕಳಿಸಿದಾಳೆ ಅಂತ ಹೇಳಿಕೊಳ್ಳುವ ತಂದೆ-ತಾಯಿಗಿದು ತಿಳಿದರೆ ಅವರು ಏನಾಗ್ತಾರೆ ?
6) now we are in relationship ಅಂತ ಹೇಳುವ ಇವರದು ಇದೇನು ಹಾದರವಾ ? ಆತ್ಮವಂಚನೆಯಾ ? ಟೈಮ್ ಪಾಸ್ ?ಅಥವಾ, ಯಾಮಾರಿ ಅಪ್ಪಿ-ತಪ್ಪಿ ಇದಕ್ಕೆ LOVE ಅಂತಾರ?
7) ನಿಜ ಹೇಳಿ, ಇಂಥವರು ಮದುವೆಯಾಗಿ ನೆಟ್ಟಗೆ ಸಂಸಾರ ಮಾಡ್ತಾರೆ ಅಂತ ನಿಮಗನ್ನಿಸುತ್ತಾ ? (ನನಗಂತೂ ಇಲ್ಲ)
8) ಮುಂದೆ ಈ ಹುಡುಗ, ಹುಡುಗಿಯನ್ನ ಮದುವೆಯಾಗೋ ಯಾವುದೋ ಹುಡುಗಿ, ಹುಡುಗನ ಪಾಡೇನು ?
9) ನಮ್ಮನ್ನ ಹೆತ್ತವರು ನಮ್ಮೊಂದಿಗೆ ಸಮಯ ಕಳೀಬೇಕು ಅಂತ ಕಾಯ್ತಿರ್ತಾರೆ, ಕಾಲೇಜ್ ನಲ್ಲಿ ನಡೆದ ಸಣ್ಣ ಸಣ್ಣ ಘಟನೆಗಳನ್ನ ಹೇಳುವಾಗ ಬೆರಗುಗಣ್ಣಿನಿಂದ ಕೇಳ್ತಾರೆ; ಇವು ನಮಗೆ ನೆನಪಾಗಲ್ವಾ ?
10) ಯಾವ ನೆಲದವರು ನಾವು ? ಎಲ್ಲಿರುವೆವು ? ಎಲ್ಲಿಗೆ ಹೊರಟಿರುವೆವು ? ಅಸಲಿಗೆ ಯಾರು ನಾವು ?
ಹೀಗೆ ನನಗೆ ನಾನೇ ಪ್ರಶ್ನೆ ಹರವಿಕೊಂಡು ಉತ್ತರ ಕೊಡುವ ಪ್ರಯತ್ನ ಮಾಡುತ್ತಾ, ತುಂಬಾ ಬೇಜಾರಾಗಿ ಇದ್ಯಾಕೆ ಹಿಂಗ್ ಮಾಡ್ತು ಹುಡುಗಿ ಅಂತ ಯೋಚಿಸ್ತಿರುವಾಗಲೇ. ಚಕ್ಕನೆ ಹೆಸರೊಂದು ಮಿಂಚಿದಂತಾಯ್ತು, ಅದು ಕೂಡ ಹುಡುಗಿಯ ಹೆಸರೇ - 'ಐರೊಮ್ ಚಾನು ಶರ್ಮಿಲ'. ಆಕೆ Iron lady of Manipur. ತನ್ನ 28 ನೇ ವಯಸ್ಸಿನಿಂದ Armed Forces (Spacial Powers)Act, 1958 (AFSA) ವಿರುದ್ದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ ಶರ್ಮಿಲ. ಈಗ ಆಕೆಗೆ 39 ವರ್ಷ ವಯಸ್ಸು, ಅಂದ್ರೆ ಕಳೆದ ಹನ್ನೊಂದು ವರ್ಷಗಳಿಂದ ಶರ್ಮಿಲ ಉಪವಾಸವಿದ್ದಾಳೆ. ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ 'Hunger striker' ಈವರೆಗೂ ಊಟ ಇಲ್ಲ, ನೀರು ಇಲ್ಲ. ಶರ್ಮಿಲ ಅವರ ಮೂಗಿಗೆ ಒಂದು ಪೈಪ್ ಇರುತ್ತೆ ಆ ಪೈಪ್ ಮೂಲಕ ದಿನ ಸ್ವಲ್ಪ ಹಣ್ಣಿನ ರಸ ಹನಿಹನಿಯಾಗಿ ಆಸ್ಪತ್ರೆಯವರು ಕೊಡ್ತಾರೆ. 11 ವರ್ಷಗಳಿಂದ ಶರ್ಮಿಲ ಅವರ ಮೂಗಿನ ಪೈಪ್ ಆಕೆಯ ದೇಹದ ಒಂದು ಭಾಗವೇನೋ ಎಂಬಷ್ಟರಮಟ್ಟಿಗೆ ಒಗ್ಗಿಹೋಗಿದೆ. ಊಟ ಮೂಗಿನ ಮೂಲಕ ಅದೂ ಸ್ವಲ್ಪ ಹನಿ ಹಣ್ಣಿನ ರಸ ಅಷ್ಟೇ - Oh My God. ತನ್ನ ಜನರ ಸಲುವಾಗಿ ತನ್ನ ಜೀವನವನ್ನೇ ಮುಡಿಪಾಗಿತ್ತು ಅವಿರತ ಹೋರಾಡುತ್ತಿರುವ 'ಶರ್ಮಿಲ' ಅವರ ಆತ್ಮಸ್ಥೈರ್ಯಕ್ಕೆ ನಮೋನ್ನಮಃ.
=====
=====
Posted by "ನಾಗರಾಜ್ .ಕೆ" (NRK) (rajahridaya@gmail.com) on September 28, 2011 01:18 PM· permalink

ಆ ಬದಿಯಿಂದ ಈ ಬದಿಗೆ
ಭದ್ರವಾಗಿ ನಿಂತಿಹೆನು
ದಡ ಸೇರ ಬಯಸುವವಗೆ
ದಾರಿ ತೋರುವೆ ನಾನು
ಯಾರು ಬಂದು ಹೋದ ಕುರುಹಿಲ್ಲ
ಹೆಜ್ಜೆಗಳ ಸಪ್ಪಳ ಕೇಳುತಿಲ್ಲ
ಬರುವರೆಂಬ ನಿರೀಕ್ಷೆಯಲಿ ನಿಂತಿಹೆನು
ಬಾಯ್ತೆರದ ಬಕ ಪಕ್ಷಿಯಂತೆ.....
ಹೆಜ್ಜೆಗಳು ನಲುಗವು
ಆಯ ತಪ್ಪಿ ಬೀಳಿಸೆನು
ಸುತ್ತಲೂ ಕಬ್ಬಿಣ ಸಲಾಕೆ ಹೊಂದಿಹೆನು
ಇನ್ನೇಕೆ ಭಯವು ನೆಡೆದಾಡಲು...!!??
ಹೆಜ್ಜೆ ಮೂಡುವವರೆಗೂ
ಗೆಜ್ಜೆ ಸಪ್ಪಳ ಕೇಳುವವರೆಗೂ
ಈ ನೀರವ ಮೌನದಲಿರುವ
ಹಾದಿಗೆ ಮಾತು ಕಲಿಸ ಬನ್ನಿ..!!!
-----------
@ಚಿತ್ರ: ಮನುವಚನ್
Posted by ಮನಸು (noreply@blogger.com) on September 28, 2011 05:11 AM· permalink
Posted by Subrahmanya (noreply@blogger.com) on September 27, 2011 06:11 PM· permalink
ಪ್ರಕಾಶಣ್ಣ ಬರೆದ ರೀತಿ........ ಮತ್ತು ಅದನ್ನು ಮುಂದುವರೆಸಿ ದಿನಕರ್ ಸರ್ ಬರೆದ ಈ ರೀತಿ........ ಕಥೆಯನ್ನು ನಾನು ಮುಂದುವರೆಸುವ ಒಂದು ಸಣ್ಣ ಅಧಿಕಪ್ರಸಂಗತನ ಮಾಡಿದ್ದೇನೆ :)
'ONE MESSAGE RECEIVED.............!!!!!'
ಯಾವುದೋ MESSAGE ಬಂದಿದೆ.
ಯಾರದಿರಬಹುದು?
ಏನೋ ಇದೆ, INBOX ಖಾಲಿ ಆಗಿದೆ, SENT MAIL ಖಾಲಿ ಇದೆ, CALL LOG ಲ್ಲಿ ಯಾವ CALL ಗಳ ಸುಳಿವಿಲ್ಲ!
ಹಾಗಾದರೆ ಏನು ಇದರ ಅರ್ಥ? ಮನಸ್ಸು ಕಹಿಯನ್ನು ನೆನೆಯತೊಡಗಿತು. ಯೋಚಿಸುತ್ತಿದ್ದಂತೆಯೇ ಮತ್ತೊಮ್ಮೆ ಮೊಬೈಲ್ "ಟೀವ್.... ಟೀವ್......" ಎಂದು ಹಾಡಿತು.
ನೋಡುತ್ತಿದ್ದಂತೆ ಕಾತುರ ತಡೆಯಲಾಗಲಿಲ್ಲ! ಯಾರ MESSAGE ಇದು? ನಿನ್ನೆ ರಾತ್ರಿ, ಇಂದು ಬೆಳಿಗ್ಗೆ ಯಾರಿಗೋ MESSAGE ಕಳಿಸುತ್ತಿದ್ದರು, ಅವರದೇ ಇರಬಹುದೇ?
ತೆಗೆದು ನೋಡಿಬಿದಲೇ?
ಛೆ! ತಪ್ಪು! ಹಾಗೆಲ್ಲ ಅನುಮಾನ ಪಟ್ಟು ಇವರ ಮೊಬೈಲ್ ತೆಗೆದು ನೋಡಬಾರದು!
ಆದರೆ...........
ಕುತೂಹಲ............!
ಅದು ತಣಿಯಲಿಲ್ಲ...........!
ಮನಸ್ಸು ಕೇಳಲಿಲ್ಲ..........!
ಏನಾದರೂ ಅಗಲಿ ನೋಡೇ ಬಿಡುವುದು. ಇಷ್ಟು ಬೇಗ ಸ್ನಾನ ಮುಗಿಸಿ ಬರಲಾರರು. ಎಂದು ಆಲೋಚಿಸುತ್ತ ನಡುಗುವ ಕೈಗಳಿಂದ ಮೊಬೈಲ್ ಎತ್ತಿಕೊಂಡೆ.
ಎದೆ ಡವಗುಟ್ಟುತ್ತಿತ್ತು!
ಎರಡು Massage ಗಳು!
ತೆರೆಯುತ್ತಿದ್ದಂತೆಯೇ..................
ಮೊದಲನೆಯದು ಯಾವುದೊ ಜಾಹಿರಾತಿನ SMS ಆಗಿತ್ತು............!
ನೆಮ್ಮದಿಯ ನಿಟ್ಟುಸಿರೊಂದು ಹೊರಟಿತು.
ಆದರೆ ಅದು ಹೆಚ್ಚು ಹೊತ್ತು ಇರಲಿಲ್ಲ!
ಎರಡನೆಯ SMS ನೋಡುತ್ತಿದ್ದಂತೆಯೇ ಶಾಕ್.........!
ಅಲ್ಲಿ ಕಂಡಿದ್ದೇನು?
SWEET HEART........!
ಒಮ್ಮೆಲೇ ಗುಡುಗು ಸಿಡಿಲು ಬಿರುಗಾಳಿ ಬಡಿದ ಅನುಭವ!
ಕೋಪ ಇನ್ನೂ ಹೆಚ್ಚಾಯಿತು. ಎಷ್ಟು ಧೈರ್ಯ ಇವರಿಗೆ? ನಾನು ಬಂದ ಮೇಲೂ ಮೊಬೈಲಿನಲ್ಲಿ ಈ ತರ ಹೆಸರು ಇಟ್ಟುಕೊಂಡಿದ್ದಾರಲ್ಲ . ಇವರಿಗೆ ಯಾವುದೇ ಭಯವಿಲ್ಲವೇ?
ಯಾರು ಈ SWEET HEART, ಅವಳೇ ಇರಬಹುದೇ? ನನ್ನಲ್ಲಿ ಏನೂ ಇಲ್ಲ ಎಂದು ಹೇಳಿದ್ದರಲ್ಲ, ಹಾಗಾದರೆ ಇವರಿಗೂ ಅವಳಿಗೂ ಏನೋ ಸಂಬಂಧವಿದೆ. ನನಗೆ ತಿಳಿಯಲೇ ಇಲ್ಲ. ನಾನು ಮೋಸ ಹೋದೆ!
ಏನು MESSAGE ಕಳಿಸಿರಬಹುದು? ಕಣ್ಣೀರು ಕಣ್ಣ ತುದಿಯವರೆಗೂ ಬಂದಿತ್ತು, ಅಕ್ಷರಗಳು ಮಂಜಾಗಿ ಕಾಣುತ್ತಿವೆ,
'OK DEAR, THEN SEE YOU IN OFFICE!'
ಕಣ್ಣೀರು ಒರೆಸಿಕೊಳ್ಳುತ್ತಾ MESSAGE DELETE ಮಾಡಿ ಪಟಪಟನೆ ಅವಳ ನಂಬರ್ ಬರೆದುಕೊಂಡು ಮೊಬೈಲನ್ನು ಯಥಾಸ್ಥಾನದಲ್ಲಿಟ್ಟು ಮಂಚದ ಮೇಲೆ ಬೋರಲಾಗಿ ಮಲಗಿಕೊಂಡೆ.
ಪತಿರಾಯ ಸ್ನಾನ ಮುಗಿಸಿ ಸಿಳ್ಳು ಹಾಕುತ್ತ ಕನ್ನಡಿಯ ಮುಂದೆ ಸಿಂಗರಿಸಿಕೊಳ್ಳುತ್ತಿದ್ದರು. ವಾರೆಗಣ್ಣಿನಿಂದ ಅವರನ್ನೇ ನೋಡುತ್ತಿದ್ದ ನನಗೆ ಕೋಪ ಉಕ್ಕಿ ಬರುತ್ತಿತ್ತು.
ಮೋಸಗಾರ..............!
ನಂಬಿ ಬಂದ ನನಗೆ ಮೋಸ ಮಾಡಿದರು..............!
ದುಃಖ ಉಮ್ಮಳಿಸಿ ಬರುತ್ತಿತ್ತು.
'ಸರಿ ಹಾಗಾದ್ರೆ, ಮದುವೆಯ ಗಡಿಬಿಡಿಯಲ್ಲಿ ಮೂರು ದಿನ OFFICEಗೇ ಹೋಗಲಿಲ್ಲ. ನಾನು OFFICE ಗೆ ಹೊರಡುತ್ತೇನೆ. ಬೇಗ ತಿಂಡಿ ತಂದು ಕೊಡ್ತೀಯ PLEASE...........'
ಕೇಳುವುದು ನೋಡು, ಇವರ ಮನೆ ಆಳು ನಾನು..............
ಇರಲಿ, ಇವತ್ತು ಎರಡರಲ್ಲಿ ಒಂದು ತೀರ್ಮಾನ ಆಗಲೇ ಬೇಕು, ನಾನೋ ಇಲ್ಲ ಅವಳೋ ಅಂತ............
ತಂದು ಕೊಟ್ಟ ತಿಂಡಿಯನ್ನು ಬಕಾಸುರನಂತೆ ತಿಂದು ಮುಗಿಸಿದರು.
ಹೊರಡುತ್ತಾ ಹೇಳಿದರು.............
'ಸಂಜೆ ಬೇಗ ಮನೆಗೆ ಬರುತ್ತೇನೆ, ಸಿನೆಮಾ ನೋಡಲು ಹೋಗೋಣ, ಆಗಬಹುದಾ?'
ಓಹ್ಹೋ..............
ಬೆಣ್ಣೆ ಹಚ್ಚುವ ಬುದ್ಧಿಯೂ ಇದೆ, ಇರಲಿ ಬನ್ನಿ, ಯಾವ ಸಿನೆಮಾ ಅಂತ ತೀರ್ಮಾನ ಆಗಿರುತ್ತದೆ.
ಹ್ಞೂಂ.............., ನಿಧಾನಕ್ಕೆ ಹ್ಞೂಂಗುಟ್ಟಿದೆ ನೋವನ್ನು ತೋರ್ಪಡಿಸದೆ.
ಈಗ ನಿಜವಾದ ಚಡಪಡಿಕೆ ಆರಂಭವಾಗಿತ್ತು, ಏನು ಮಾಡುವುದು? ನಾನು ಮೋಸ ಹೋದೆನಲ್ಲ, ಮದುವೆಯಾದ ಮೊದಲದಿನದಿಂದಲೇ ಅನುಮಾನಕ್ಕೆ ಎಡೆ ಮಾಡಿಕೊಟ್ಟರಲ್ಲ?
ನಮ್ಮಿಬ್ಬರನ್ನೇ ಬಿಟ್ಟು ಇವರ ಅಮ್ಮ ಮತ್ತು ಅಪ್ಪ ನಗರದ ಹೊರವಲಯದಲ್ಲಿರುವ GUEST HOUSE ನಲ್ಲಿ ಉಳಿದುಕೊಂಡಿದ್ದಾರೆ. ಅವರಿದ್ದಿದ್ದರೆ ಅವರನ್ನೇ ದಬಾಯಿಸಿ ಅವರ ಮಗನ ಲೀಲೆಗಳನ್ನು ತೋರಿಸುತ್ತಿದ್ದೆ. ಛೆ! ಏನು ಮಾಡಲಿ? ಏನಾದವು ನನ್ನ ಆದರ್ಶಗಳೆಲ್ಲ?
ಅಮ್ಮನಿಗೆ ಹೇಳಿಬಿಡಲೇ?
ಉಪಯೋಗವಿಲ್ಲ, ಅಮ್ಮ ಏನು ಹೇಳಿಯಾಳು............
ಆದರೂ.........
ಅಮ್ಮನಿಗೆ ಹೇಳುವುದೇ ಸರಿ, ಅವಳೇ ಈ ಸಮಯದಲ್ಲಿ ನನಗೆ ಸ್ನೇಹಿತೆ.........
ಎಂದು ಯೋಚಿಸುತ್ತ ಅಮ್ಮನಿಗೆ PHONE ಮಾಡಿದೆ..........
"ಹಲೋ......."
ಅತ್ತ ಕಡೆಯಿಂದ ಅಮ್ಮನ ಧ್ವನಿ,
"ಹಲೋ.........ಅಮ್ಮ ನಾನಮ್ಮ........"
ಅಮ್ಮನ ಸ್ವರ ಕೇಳುತ್ತಿದ್ದಂತೆಯೇ ಕಣ್ಣೀರ ಕಟ್ಟೆ ಒಡೆದಿತ್ತು, ಬಿಕ್ಕಿ ಬಿಕ್ಕಿ ಅಳುತ್ತಿದ್ದ ನನ್ನ ಧ್ವನಿ ಕೇಳಿ ಅಮ್ಮ ಗಾಭಾರಿಯಾಗಿದ್ದಳು,
"ಯಾಕೆ ಮಗಳೇ ಅಳುತ್ತಿದ್ದೀಯಾ? ಏನಾಯ್ತು ಕಂದಾ?"
"ಅಮ್ಮ..............."
ಮಾತೇ ಹೊರಡುತ್ತಿಲ್ಲ!
"ಯಾಕೆ ಮಗಳೇ, ಏನಾಯ್ತೆ, ಅಲ್ಲಿ ಯಾರಾದ್ರೂ ಏನಾದ್ರೂ ಅಂದ್ರಾ?"
"ಇಲ್ಲಮ್ಮ, ಯಾಕೋ ನಿನ್ನ ನೆನಪಾಯ್ತು ಅದಕ್ಕೆ PHONE ಮಾಡಿದೆ"
"ಯಾಕೆ ಮಗಳೇ ಸುಳ್ಳು ಹೇಳ್ತೀಯ, ನಿನ್ನ ಹೆತ್ತಮ್ಮ ನಾನು, ಒಮ್ಮೆಯೂ ನೀನು ಅತ್ತ ನೆನಪಿಲ್ಲ. ಈಗ ಯಾಕೆ? ಏನಾಯ್ತು ಅಂತ ಹೇಳು"
ಅಮ್ಮನ ಪ್ರೀತಿಯ ಮಾತಿಗೆ ಕರಗಿ ಹೋದೆ, ಈ ಪ್ರೀತಿಯನ್ನು ನಾನೆಂದೂ ಅರ್ಥ ಮಾಡಿಕೊಳ್ಳಲಿಲ್ಲ, ನನ್ನ ಹಠ ಪ್ರೀತಿಯ ಅಪ್ಪ ಅಮ್ಮನನ್ನು ಅರ್ಥ ಮಾಡಿಕೊಳ್ಳಲೇ ಬಿಡಲಿಲ್ಲ! ಛೆ! ಎಂತಹ ಪಾಪಿಷ್ಟೆ ನಾನು?
ಅಮ್ಮನಿಗೆ ನಡೆದ ಎಲ್ಲಾ ಸಂಗತಿಗಳನ್ನೂ ವಿವರಿಸಿದೆ...........
"ನೋಡು ಮಗಳೇ, ನಿನ್ನಷ್ಟು ಓದಿಕೊಂಡ ವಿಧ್ಯಾವಂತೆ, ಬುದ್ಧಿವಂತೆ ನಾನಲ್ಲ. ಆದರೆ ಜೀವನದ ಎಲ್ಲ ಆಗುಹೋಗುಗಳನ್ನೂ ಅನುಭವಿಸಿದ್ದೇನೆ. ಆ ಅನುಭವದಲ್ಲೇ ಒಂದೆರೆಡು ಮಾತು ಹೇಳ್ತೇನೆ ಕೇಳು, ನಿನಗೆ ಮದುವೆಯಾಗಿ ಎರಡನೆಯ ದಿನ. ಇಷ್ಟು ಬೇಗ ಗಂಡನ ಜೊತೆ ಮುನಿಸು ಕಟ್ಟಿಕೊಳ್ಳಬೇಡ. ಗಂಡು ಯಾವತ್ತಿದ್ದರೂ ಗಂಡಸೇ, ಹೊರಗೆ ದುಡಿಯುವ ಅವರಿಗೆ ಎಲ್ಲರೊಂದಿಗೂ ಒಡನಾಟ ಬೇಕು. ಇಷ್ಟಕ್ಕೂ ನೀನು ಏನು ನೋಡಿದೆ ಅಂತ ಅಷ್ಟು ಅನುಮಾನ ಪಡ್ತೀಯ? ಕೇವಲ MESSAGE ನೋಡಿದ ಮಾತ್ರಕ್ಕೆ ಅಲ್ಲಿ ಏನೋ ನಡೆಯುತ್ತಿರಬಹುದೆಂದು ಅನುಮಾನ ಪಡುವುದು ಸರಿಯಲ್ಲ. ಮೊದಲು ನೀನು ನೋಡಿದ್ದನ್ನು ಪ್ರರೀಕ್ಷಿಸಿ ನೋಡು. ಒಂದು ವೇಳೆ ನಿಜವೇ ಆಗಿದ್ದಲ್ಲಿ ನಿನಗದು ಪರೀಕ್ಷೆಯ ಕಾಲ. ಗಂಡನ ಪ್ರೀತಿಯನ್ನು ಗೆಲ್ಲು. ಹೆಂಗಸರಾದ ನಾವು ಸಹನೆ ತಾಳ್ಮೆಯಿಂದ ವರ್ತಿಸಬೇಕು.
ಗಂಡನಾದವನಿಗೆ ಮನೆಯಲ್ಲಿ ಪ್ರೀತಿ ಸಿಗಲಿಲ್ಲ ಅಂದರೆ ಆ ಪ್ರೀತಿಯನ್ನು ಹೊರಗೆ ಹುಡುಕುವ ಮನಸ್ಸು ಮಾಡುತ್ತಾನೆ.
ಅದಕ್ಕೆ ಎಂದಿಗೂ ನಿನ್ನ ಕಯ್ಯಾರೆ ಅವಕಾಶ ಕೊಡಬೇಡ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಮ್ಮೆ ಚನ್ನಾಗಿ ಯೋಚಿಸು."
"ಹಾಗೆ ಆಗ್ಲಮ್ಮಾ" ಎಂದಷ್ಟೇ ಹೇಳಿ PHONE ಇಟ್ಟೆ.
ಅಮ್ಮನ ಮಾತುಗಳೇ ನನ್ನ ತಲೆಯಲ್ಲಿ ಕೊರೆಯುತ್ತಿದ್ದವು.
ಹೌದು............
ನಾನು ತಪ್ಪು ಮಾಡಿದೆ, ಅನುಮಾನ ಒಳ್ಳೆಯದಲ್ಲ.
ಹಾಲಿನಂತ ಸಂಸಾರದಲ್ಲಿ ಹುಳಿ ಹಿಂಡುವುದು ಈ ಅನುಮಾನ
ಚಂದದ ಪ್ರೇಮಿಗಳು ಬೆರಾಗುವುದಕ್ಕೆ ಕಾರಣ ಈ ಅನುಮಾನ
ಹೆಚ್ಚು ಯಾಕೆ, ಸೀತೆಯ ಅಗ್ನಿಪರೀಕ್ಷೆಗೂ ಕಾರಣ ಈ ಅನುಮಾನವೇ ಅಲ್ಲವೇ?
ನನ್ನ ಮನಸ್ಸಿನಲ್ಲಿ ಮೂಡಿದ ಅನುಮಾನವನ್ನು ನಾನೇ ಪರಿಹರಿಸಿಕೊಳ್ಳಬೇಕು
ಆದರೆ ಹೇಗೆ?
ಬೆಳಗ್ಗಿನ ತಿಂಡಿ ಮುಗಿಸಿ ಟೀವಿ ನೋಡುತ್ತಾ ಕುಳಿತಿದ್ದೆ.........
ಮನೆಯಲ್ಲಿ ಏನೂ ಕೆಲಸವಿರಲಿಲ್ಲ. ಯಾಂತ್ರಿಕವಾಗಿ ಟೀವಿ ನೋಡುತ್ತಾ ಆಲೋಚನೆಯಲ್ಲಿ ಮುಳುಗಿ ಹೋದೆ.
ಟ್ರಿಣ್ ಟ್ರಿಣ್........
ಟ್ರಿಣ್ ಟ್ರಿಣ್..........
ಮನೆಯ PHONE ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು.
ಅತ್ತ ಕಡೆಯಿಂದ ಅವರ ಧ್ವನಿ,
"ಪುಟ್ಟಣ್ಣಿ........., ಯಾಕೆ ನಿನ್ನ ಮೊಬೈಲ್ ಎತ್ತುತ್ತಿಲ್ಲ? ಅಡುಗೆ ಮನೆಯಲ್ಲಿದ್ಯಾ?"
ಹೆಂಗಸರೆಂದರೆ ಅಡುಗೆ ಮನೆಗೆ ಮಾತ್ರ ಸೀಮಿತವೇ?
"ಹ್ಞಾಂ.........ಹೌದು............"
ಮಾತಾಡುವ ಮನಸ್ಸಿಲ್ಲದೆ ಸಮಯಕ್ಕೊಂದು ಸುಳ್ಳು ಹೇಳಿದೆ.
"ಏನಿಲ್ಲ, ನಾನು ಊಟಕ್ಕೆ ಮನೆಗೆ ಬರ್ತೇನೆ, ಜೊತೆಗೆ ನನ್ನ SWEET HEART ಕೂಡ ಬರ್ತಾ ಇದ್ದಾಳೆ"
ಇವರಿಗೆ ತಲೆ ಸರಿ ಇಲ್ವಾ?
ಎಷ್ಟು ಧೈರ್ಯ?
ನನ್ನ ಎದುರಿಗೇ ಅವರ SWEET HEART ಅನ್ನೋ ಹೆಸರು? ಆ ಹಾಳಾದವಳು ಬೇರೆ ಬರಬೇಕಾ? SWEET HEART ಅಂತೆ SWEET HEART.......!
"ಹಾಗೆ ಅಪ್ಪ ಕೂಡ ಬರ್ತಾ ಇದ್ದಾರೆ........... "
ಅಂದರೆ.........
ಓ ದೇವರೇ,
ಇದೆಂತ ಸಂಸಾರವಪ್ಪ, ಇವರ ಅಪ್ಪನಿಗೆ ಗೊತ್ತಿದ್ದೂ ನನ್ನ ಜೀವನ ಹಾಳುಗೆಡವಿದರೆ????
"ಹಲೋ, ಕೇಳಿಸ್ತಾ? ನೀನು ಊಟಕ್ಕೆ ಏನಾದರೂ ಅಡುಗೆ ಮಾಡು, ಅಪ್ಪನಿಗೆ ಕೆಲಸದವರ ಅಡುಗೆ ಹಿಡಿಸುವುದಿಲ್ಲ. ಆಯ್ತಾ, ಇಡ್ತೇನೆ. ಮಧ್ಯಾಹ್ನ ಸಿಗ್ತೇನೆ, ಬೈ ಬೈ............"
ಇಷ್ಟು ಕೆಲಸದವರಿದ್ದೂ ನಾನೇ ಅಡುಗೆ ಮಾಡಬೇಕಂತೆ, ಯಾಕೆ ಇವರಿಗೆ ಕೆಲಸದವರು ಮಾಡಿದ ಅಡುಗೆ ಗಂಟಲ ಕೆಳಗೆ ಇಳಿಯುವುದಿಲ್ಲವೇ?
ಇರಲಿ, ಎಲ್ಲರೂ ಬರಲಿ, ಮಾವನವರ ಮುಂದೆಯೇ ತೀರ್ಮಾನವಾಗಲಿ, ನಾನು ಇನ್ನು ಈ ಮನೆಯಲ್ಲಿ ಇರಲಾರೆ. ಅಮ್ಮನ ಮನೆಗೆ ಹೋಗುತ್ತೇನೆ. ನನ್ನ ಕಾಲಮೇಲೆ ನಾನು ನಿಂತುಕೊಳ್ಳುತ್ತೇನೆ.
ನನಗೆ ಆಲೋಚನೆ ಶುರುವಾಯ್ತು. ಹೇಗಿರಬಹುದು ಮಿಟುಕಲಾಡಿ, ನನಗಿಂತಾ ಚನ್ನಾಗಿದ್ದಾಳ? ಮದುವೆಗೂ ಮೊದಲೇ ಹೇಳಬಹುದಿತ್ತಲ್ಲಾ? ನನ್ನನ್ನು ಮದುವೆಯಾಗಿ ನನ್ನ ಜೀವನ ಯಾಕೆ ಹಾಳು ಮಾಡಿದರು?
ಅಡುಗೆಯ ಕೆಲಸವನ್ನೆಲ್ಲಾ ಮುಗಿಸಿ ಬರುವಷ್ಟರಲ್ಲಿ ಕರೆಗಂಟೆ ಶಬ್ದ ಮಾಡಿತು,
ಅವರೇ ಇರಬೇಕು. ನನಗೆ ಕುತೂಹಲ ತಡೆಯಲಾಗಲಿಲ್ಲ, ಹೇಗಿರಬಹುದು ಅವಳು?
"ರಾಮೂ....... ಯಾರು ನೋಡು?" ಕುತೂಹಲವನ್ನು ತಡೆದುಕೊಂಡು ಕೆಲಸದವನಿಗೆ ಹೇಳಿದೆ............
ಬಾಗಿಲಲ್ಲಿ ನಗುಮುಖದ ಸುಂದರಾಂಗ ನಿಂತಿದ್ದರು!
ಅವರ ಆ SWEET HEART ಗಾಗಿ ಕಣ್ಣಾಡಿಸಿದೆ, ಮಾವಯ್ಯ ಕಾರಿನಿಂದ ಇಳಿಯುತ್ತಿದ್ದರು,
ಅವರ ಜೊತೆಗೆ...........
ಹಿಂದಿನಿದ ಬಂಗಾರದ ಬಣ್ಣದ ರೇಷ್ಮೆ ಸೀರೆ ಉಟ್ಟ ಮಹಾ ಲಕ್ಷ್ಮಿಯಂತೆ ಅತ್ತೆ ನಡೆದು ಬರುತ್ತಿದ್ದರು!
ದಾರಿಯುದ್ದಕ್ಕೂ ಕಣ್ಣರಳಿಸಿ ನೋಡಿದೆ ಬೇರಾರೂ ಕಾಣಲಿಲ್ಲ..............!
ಎಲ್ಲಿ ಇವರ SWEET HEART? ಬರಲಿಲ್ಲವೇ?
ಅಥವಾ ಹಿಂದಿನಿಂದ ಬರುತ್ತಿದ್ದಾಳೆಯೇ?
ಎಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಕುಳಿತರು.
"ನೀನ್ಯಾಕೆ ನಿಂತಿದ್ದೀಯಮ್ಮ, ಬಾ ಕುಳಿತುಕೋ, ಕೆಲಸದವರು ಬಡಿಸುತ್ತಾರೆ" ಅತ್ತೆ ಪ್ರೀತಿಯಿಂದ ಕರೆದರು.
"ಇಲ್ಲ ನೀವು ಊಟ ಮಾಡಿ, ಇವರ ಸ್ನೇಹಿತೆ ಬರ್ತಾರಲ್ಲ, ನಾನು ಅವರ ಜೊತೆ ಊಟ ಮಾಡುತ್ತೇನೆ"
"ನನ್ನ ಸ್ನೇಹಿತೆಯಾ? ಯಾರು?"
ಇದೇನಿದು? ಹೀಗೆ ಕೇಳ್ತಾ ಇದ್ದಾರೆ? ಅಮ್ಮ ಬಂದಿದ್ದಾರೆ ಅಂತ ರಾಯರು ಮಾತು ಬದಲಿಸಿದರೋ ಹೇಗೆ? ಹಾಗಾದ್ರೆ ಈಗಲೇ ಹೇಳಿಬಿಡಬೇಕು.
"ಅದೇ............
ನಿಮ್ಮ SWEET HEART ಬರ್ತಾರೆ ಅಂದಿದ್ರಲ್ಲ?"
SWEET HEART ಅನ್ನುವುದನ್ನು ಒತ್ತಿ ಹೇಳಿದೆ.
"ನನ್ನ SWEET HEART ಇಲ್ಲೇ ಇದ್ದಾರಲ್ಲ?"
ಬಿಟ್ಟ ಬಾಯಿ ಬಿಟ್ಟಂತೆಯೇ ಇತ್ತು..............
ಮಾತೇ ಹೊರಡಲಿಲ್ಲ..............
ಅಘಾತದಿಂದ ಹೊರಬರಲು ಕೆಲವು ಕಾಲವೇ ಬೇಕಾಯಿತು.................!
"ಈಗ ಬಂದೆ, ಕೈ ಕಾಲು ತೊಳೆದು ಬರುತ್ತೇನೆ" ಎಂದಷ್ಟೇ ಹೇಳಿ ಓಡುವ ನಡಿಗೆಯಲ್ಲಿ ರೂಮಿಗೆ ಬಂದು ದಪ್ಪನೆ ಬಿದ್ದೆ..........
ಕಣ್ಣೇರು ಕೋಡಿಯಾಗಿ ಹರಿಯುತ್ತಿತ್ತು.
"ಯಾಕೆ ಪುಟ್ಟಣ್ಣಿ........... ಏನಾಯ್ತು?"
ನನ್ನವರು ನನ್ನ ಹಿಂದೆಯೇ ಬಂದಿದ್ದರು.......
ತಿರುಗಿ ನೋಡಿದೆ, ಮಹಾಪುರುಷ ಶ್ರೀರಾಮನಂತೆ ದಿವ್ಯರೂಪನಾಗಿ ನಿಂತಿದ್ದರು.
ಓಡಿ ಹೋಗಿ ತಬ್ಬಿಕೊಂಡೆ, ಮನದಲ್ಲಿ ಮೂಡಿದ ಅನುಮಾನವೆಂಬ ವಿಷ ಕಣ್ಣೀರಾಗಿ ಕರಗಿ ಬೀಳುತ್ತಿತ್ತು.
"ರೀ, ನನ್ನ ಕ್ಷಮಿಸ್ತೀರಾ?"
ಕಷ್ಟಪಟ್ಟು ನನ್ನ ಬಾಯಿಂದ ಹೊರಟಿದ್ದು ಇಷ್ಟೇ!
"ಅಯ್ಯೋ ಹುಚ್ಚಿ, ಯಾಕೆ ಹೀಗೆ ಮಗು ತರ ಆಡ್ತೀಯ? ನೀನು ಮಗೂನೆ ಬಿಡು, ಒಂದು ಕ್ಷಣ ಕೋಪ, ಒಮ್ಮೊಮ್ಮೆ ಪ್ರೀತಿ, ಇನ್ನೊಮ್ಮೆ ಅಳು............ ನನ್ನ ಮುದ್ದು ಕಣೆ ಪುಟ್ಟಣ್ಣಿ ನೀನು, ಏಳು, ಅಳಬಾರದು,
ಅದ್ಸರಿ........... ವಿಷಯ ಏನೂ ಅಂತ ಹೇಳಲೇ ಇಲ್ಲ?"
ನನ್ನವರ ಪ್ರೀತಿಯ ಮುಂದೆ ನಾನು ಕುಬ್ಜಲಾಗಿ ಹೋಗಿದ್ದೆ, ನಿನ್ನೆಯಿಂದ ನನ್ನ ಮನದಲ್ಲಿ ಮೂಡಿದ ಎಲ್ಲಾ ಅನುಮಾನವನ್ನು ಒಂದೂ ಬಿಡದಂತೆ ಹೇಳಿದೆ.
ನನ್ನ ಮನ್ಮಥ ಗಹಗಹಿಸಿ ನಗಲಾರಂಭಿಸಿದರು.
"ಹ್ಹ ಹ್ಹ ಹ್ಹಾ..........
ಒಳ್ಳೆ ಕತೆ ನಿನ್ನದ್ದು. ಅಷ್ಟಕ್ಕೂ ತಪ್ಪು ನನ್ನದೇ, ಅಮ್ಮನೊಂದಿಗೆ ಯಾವಾಗಲೂ ಮೊಬೈಲಲ್ಲಿ MESSAGE ಕಳಿಸ್ತಾ ಇರ್ತೇನೆ. ನಿನ್ನೆ ನೀನು ಸಿಟ್ಟು ಮಾಡಿಕೊಂಡಿದ್ದು ಅಮ್ಮನಿಗೆ ಹೇಳಿದ್ದೆ. ನನ್ನ ಅಭ್ಯಾಸ ಬಲದಂತೆ ಎಲ್ಲಾ CALL ಮತ್ತು MESSAGE ಅನ್ನು ಮಾಡಿದ್ದೆ........
ಮತ್ತೆ ನನ್ನ ಅಮ್ಮ ಅಂದ್ರೆ ನನಗೆ ಪಂಚಪ್ರಾಣ. ಎಲ್ಲರೂ ತಾವು ಇಷ್ಟಪಟ್ಟ ಹುಡುಗಿಗೆ ಚಿನ್ನ ರನ್ನ ಮುದ್ದು ಬಂಗಾರ ಅಂತ ಏನೇನೋ ಹೆಸರಿಟ್ಟು ಕರಿತಾರೆ. ಆದರೆ ಒಂಬತ್ತು ತಿಂಗಳು ಹೊತ್ತು, ಹೆತ್ತು ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ ನಮ್ಮ ಜೀವನ ರೂಪಿಸುವ ದೇವತೆಗೆ ಯಾಕೆ ಕರೆಯಬಾರದು?
ಅದಕ್ಕೆ ನಾನು ಅಮ್ಮನಿಗೆ SWEET HEART ಅಂತ ಕರೆಯುವುದು. ಅದನ್ನು ನಿನಗೆ ಹೇಳದೆ ನಾನು ತಪ್ಪು ಮಾಡಿದೆ.
ಏಳು, ಅಪ್ಪ ಅಮ್ಮ ಕಾಯ್ತಾ ಇದ್ದಾರೆ, ಊಟಕ್ಕೆ ಬಾ, ಆಮೇಲೆ ನಿಧಾನಕ್ಕೆ ಎಷ್ಟು ಬೇಕೋ ಅಷ್ಟು ಅಳುವಿಯಂತೆ!"
ನನ್ನಿನಿಯನ ತೋಳ್ತೆಕ್ಕೆಯಲ್ಲಿ ಹುದುಗಿದ ನನಗೆ ನನ್ನ ಮನಸ್ಸಿಗೆ ಮುಸುಕಿದ ಮೋಡ ಪಶ್ಚಾತ್ತಾಪದ ಕಣ್ಣೀರಾಗಿ ಕರಗಿ ಹೋಗಿತ್ತು. ಈ ಜನ್ಮದಲ್ಲಿ ಇವರ ಬಾಹುಬಂಧನ ಬಿಡಿಸಿಕೊಳ್ಳಬಾರದೆಂದು ಮನಸ್ಸು ದೃಢ ನಿರ್ಧಾರ ಮಾಡಿತು!
ಟೀವಿಯಲ್ಲಿ ಹಾಡು ಮೊಳಗುತ್ತಿತ್ತು.................
"ಈ ಬಂಧನ....................
ಜನುಮ ಜನುಮದ ಅನುಬಂಧನ......................"
ಇದನ್ನೂ ಓದಿ.....
ಭಾಗ ಒಂದು: ಪ್ರಕಾಶಣ್ಣನ ಕಥೆ
ಭಾಗ ಎರಡು: ದಿನಕರಣ್ಣನ ಕಥೆ


Posted by ಮನದಾಳದಿಂದ............ (praveen.r.gowda.1982@gmail.com) on September 27, 2011 11:00 AM· permalink
ಈ ಪ್ರಪಂಚದ ಅರಿವಿಲ್ಲದೆ ಮಲಗಿದ್ದ ರಾಮಯ್ಯನ ಮಂಚದ ತುದಿಯಲ್ಲಿ ಕುಳಿತಿದ್ದರು ಸೀತಮ್ಮ. ಕಣ್ಣಂಚು ಒದ್ದೆಯಾಗಿತ್ತು. ತಮ್ಮ ಐವತ್ತು ವರ್ಷಗಳ ದಾಂಪತ್ಯದಲ್ಲಿ ಅವರೆಂದೂ ಹೀಗೆ ಮಲಗಿದ್ದು ನೆನಪಿಲ್ಲ ಸೀತಮ್ಮನಿಗೆ. ನಿನ್ನೆ ಬಚ್ಚಲಿನಿಂದ ಬರುತ್ತಿದ್ದಾಗ ಜಾರಿ ಬಿದ್ದದ್ದೇ ನೆಪವಾಗಿ ಎಚ್ಚರವೇ ಇಲ್ಲದಂತೆ ಮಲಗಿಬಿಟ್ಟಿದ್ದಾರೆ. ತಕ್ಷಣ ಬಂದು ನೋಡಿದ ಡಾಕ್ಟರು ಮಗನನ್ನು ಅಂಗಳಕ್ಕೆ ಕರೆದೊಯ್ದು ಏನೋ ಮಾತನಾಡಿದ್ದರು. ನಂತರ ಇಲ್ಲೇ ಏನೇನೋ ಕೊಳವೆಗಳನ್ನೆಲ್ಲ ಅವರ ದೇಹಕ್ಕೆ ಜೋಡಿಸಿ ಹೋಗಿದ್ದರು. ಏಕೋ ಮಕ್ಕಳ್ಯಾರೂ ತಮಗೇನೂ ಬಿಡಿಸಿ ಹೇಳುತ್ತಿಲ್ಲ. ದೊಡ್ಡಸ್ಪತ್ರೆಗಾದರೂ ಕರೆದೊಯ್ಯೆಂದು ಮಗ ರಾಘವನಲ್ಲಿ ಗೋಗರೆದಿದ್ದರು. ನಾಳೆ ಕರೆದುಕೊಂಡು ಹೋಗುತ್ತೇನೆನ್ನುತ್ತಾನೆ ಅವನು. ಯಾರ ಆರೋಗ್ಯದ ವಿಚಾರದಲ್ಲೂ ಅಸಡ್ಡೆ ಮಾಡುವವನಲ್ಲ ಅವನು. ಆದರೂ....ಯಾಕೆ ಹೀಗೆ? ಇಂದಾದರೂ ತಾನೇ ಡಾಕ್ಟರ್ ಬಳಿ ಕೇಳಬೇಕೆಂದು ನಿಶ್ಚಯಿಸಿಕೊಂಡರು ಸೀತಮ್ಮ.
"ಅಮ್ಮ ಸ್ವಲ್ಪ ತಿಂಡೀ ತಿನ್ನು ಬಾ , ನಿನ್ನೆಯಿಂದ ಏನೂ ತಿಂದಿಲ್ಲ ನೀನು" ಹತ್ತಿರ ಬಂದು ಕೈ ಹಿಡಿದು ಕರೆದ ಹಿರಿಮಗಳ ಮುಖವನ್ನೇ ನೋಡಿದರು ಸೀತಮ್ಮ. ಹೌದಲ್ಲ ಈಗ ತನಗೆ ಹೊಟ್ಟೆಯಲ್ಲೇನೋ ತಳಮಳವಾಗುತ್ತಿದೆಯಲ್ಲ , ಗಂಡ ಈ ಸ್ಥಿತಿಯಲ್ಲಿದ್ದಾಗಲೂ ತನಗೆ ಹಸಿವೆಯಾಗುತ್ತಿದೆಯೆ? ನಿನ್ನೆಯೇನೋ ಹೊಟ್ಟೆಯ ಬಗ್ಗೆ ಗಮನವೇ ಹೋಗಿರಲಿಲ್ಲ ... ಆದರಿಂದು ... ಛೆ ಎಂತಹ ಹಾಳು ಹೊಟ್ಟೆಯಪ್ಪ... ಯೋಚಿಸುತ್ತಲೇ ಮಗಳನ್ನು ಹಿಂಬಾಲಿಸಿದರು
ಹಿರಿ ಮಗಳು ಪ್ಲೇಟಿಗೆ ಹಾಕಿಕೊಟ್ಟ ಉಪ್ಪಿಟ್ಟು ತಿನ್ನುತ್ತಿರುವಾಗ ಕೊನೆಯ ಮಗಳ ನೆನಪಾಗಿ ಮತ್ತೊಮ್ಮೆ ಕಣ್ತುಂಬಿತು ಸೀತಮ್ಮನಿಗೆ . ಛೆ ಎಷ್ಟು ಪ್ರೀತಿ ಅವರಿಗೆ ಆ ಮಗಳನ್ನು ಕಂಡರೆ ... ಆದರೆ ಕೊನೆಗಾಲಕ್ಕಾದರೂ ಅವಳ ಮುಖ ಕಾಣುತ್ತಾರೋ ಇಲ್ಲವೋ ... ಛೆ ಇದೇನು ಯೋಚಿಸುತ್ತಿದ್ದೇನೆ ತಾನು ... ಇದೇನು ಅವರ ಕೊನೆಗಾಲವೆ? ಹಾಗೆ ನನ್ನ ಮನಸ್ಸಿಗನ್ನಿಸುತ್ತಿದೆಯೆ? ಇರಬಹುದೇನೂ ನಿನ್ನೆ ಹೀಗಾದೊಡನೆ ಮಗ ಹತ್ತಿರದಲ್ಲೇ ಇರುವ ದೊಡ್ಡ ಮಗಳು ಲಕ್ಷ್ಮಿಯನ್ನು ಫೋನ್ ಮಾಡಿ ಕರೆಸಿದ್ದ. ಬಂದವಳನ್ನು ಅಂಗಳದಲ್ಲೇ ನಿಲ್ಲಿಸಿಕೊಂಡು ಏನೋ ಗುಸು ಗುಸು ಮಾತನಾಡಿದ್ದರು ಮಗ ಮತ್ತು ಸೊಸೆ. ಕಣ್ಣೊರೆಸಿಕೊಳ್ಳುತ್ತಲೇ ಒಳಬಂದಿದ್ದಳು ಮಗಳು. ಎಲ್ಲರೂ ಸೇರಿ ನನ್ನಿಂದ ಏನೋ ಮುಚ್ಚಿಡುತ್ತಿದ್ದಾರೆ ಎನ್ನಿಸಿ ಮತ್ತಷ್ಟು ದುಖಃ ಒತ್ತರಿಸಿ ಬಂತು ಸೀತಮ್ಮನಿಗೆ.
ಕೈ ತೊಳೆದು ಸೊಸೆ ಕೊಟ್ಟ ಬಿಸಿ ಕಾಫಿ ಗುಟುಕರಿಸುತ್ತಿರುವಾಗ " ಅಮ್ಮ ಆಶಂಗೆ ಫೋನ್ ಮಾಡಿದ್ದೆನಮ್ಮ . ಇವತ್ತು ಬಂದರೂ ಬರಬಹುದು ಅವಳು ಅಪ್ಪನನ್ನು ನೋಡಲಿಕ್ಕೆ ..." ಸಣ್ಣ ದ್ವನಿಯಲ್ಲಿ ಅಳುಕುತ್ತಲೇ ಮಗಳು ಲಕ್ಷ್ಮಿ ಹೇಳಿದಳು.
ಲಕ್ಷ್ಮಿಯ ಮಾತುಗಳು ಸೀತಮ್ಮನಿಗೆ ಅರ್ಥವಾಗಲು ಕೆಲ ಕ್ಷಣಗಳೆ ಬೇಕಾಯಿತು. "ಆಂ ಏನೆಂದೆ ಆಶಾ ಬರುತ್ತಾಳ .... ರಾಘವ ಕೂಡ ಮನೆಯಲ್ಲೇ ಇರುತ್ತಾನಲ್ಲೆ.... ಯಾಕೆ ರಾಮಾಯಣ ... ನೀನ್ಯಾಕೆ ಅವಳಿಗೆ ಪೋನ್ ಮಾಡಿದ್ದು? ನಿಮ್ಮಪ್ಪನಿಗೇನಾಗಿದೆ ನಿಜ ಹೇಳು?
ಆಶಾ ಬರೋದು ಅವರಿಗೂ ಗೊತ್ತಿದೆ ಅತ್ತೆ ....ಒಪ್ಪಿದ್ದಾರೆ ಅವರು...ಅತ್ತೆ ನೀವೀಗ ಸಮಾಧಾನ ಮಾಡಿಕೊಳ್ಳಬೇಕು .... ಮಾವನಿಗೆ ಬ್ರೈನ್ ಹೆಮರೇಜ್ ಆಗಿದೆ ಎಲ್ಲಿಗೆ ಕರೆದುಕೊಂಡು ಹೋದರೂ ಹುಷಾರಾಗೋದಿಲ್ಲ ಅಂತ ಹೇಳ್ತಿದ್ದಾರೆ ಡಾಕ್ಟರ್......ಹೀಗೆ ಕೆಲ ದಿನ ಇದ್ದರೂ ಇರಬಹುದೆಂದು ಹೇಳುತ್ತಿದ್ದಾರೆ ....ಸೊಸೆ ನಿಧಾನವಾಗಿ ಹೇಳಿದ್ದನ್ನು ಕೇಳಿದ ಸೀತಮ್ಮ ಕಲ್ಲಾದರು. ಇಂತದ್ದೊಂದು ಅನುಮಾನ ಇದ್ದರೂ ಅದೇ ನಿಜವಾಗಿಹೋಯ್ತಲ್ಲವೆಂಬ ಸಂಕಟದಲ್ಲಿ ಮಾತೇ ಹೊರಡಲಿಲ್ಲ. ಒಳಬಂದ ಮಗನೂ ತಾಯಿಯ ಭುಜ ಬಳಸಿ ಧೈರ್ಯ ತಗೋ ಅಮ್ಮ ...ಇದು ಸಹಜ ಅಲ್ವಾ... ಅಪ್ಪ ಎಂಬತ್ತು ವರ್ಷಗಳ ಸಾರ್ಥಕ ತುಂಬು ಜೀವನ ನಡೆಸಿದ್ದಾರೆ..... ಅವರು ಬಯಸಿದಂತೆಯೆ ಪರಾಧೀನರಾಗದೆ ನರಳಾಟವೇ ಇಲ್ಲದೆ ಹೋಗುತ್ತಿದ್ದಾರೆ.... ನಾವು ಗೌರವದಿಂದ ಬೀಳ್ಕೊಡೋಣ ಅಮ್ಮ ಧೈರ್ಯ ತಗೋ.....ಹೇಳಿ ಹೊರನಡೆದ.
ಈಗ ಸೀತಮ್ಮ ಮತ್ತೆ ಬಂದು ಗಂಡನ ಬಳಿ ಕುಳಿತರು, ಅವರಿರುವ ಪ್ರತೀ ಕ್ಷಣವನ್ನೂ ಅವರ ಜೊತೆ ಕಳೆಯ ಬೇಕೆಂದು ತೀರ್ಮಾನಿಸಿದವರಂತೆ.
ನಿನ್ನೆ ಬೆಳಿಗ್ಗೆ ಬಿದ್ದ ಸ್ವಲ್ಪ ಹೊತ್ತು ಕಣ್ಣು ಬಿಟ್ಟು ನೋಡುತ್ತಿದ್ದ ಅಸ್ಪಷ್ಟವಾಗಿ ಏನೋ ಗೊಣಗುತ್ತಿದ್ದ ಇವರು ಮಧ್ಯಾನ್ಹದ ವೇಳೇಗಾಗಲೇ ಕಣ್ಣು ಮುಚ್ಚಿ ಸುಮ್ಮನೆ ಮಲಗಿಬಿಟ್ಟಿದ್ದರು ...ಇಂದು ಮಧ್ಯಾನ್ಹವಾಗುತ್ತ ಬಂತು ಇನ್ನೂ ಕಣ್ತೆರೆದಿಲ್ಲ....ಹಾಗಾದರೆ ಹೀಗೇ ಹೋಗಿಬಿಡುತ್ತಾರ? ನನಗೊಂದು ವಿದಾಯವನ್ನೂ ಹೇಳದೇ ...ಇಂದು ಬರುತ್ತಿದ್ದಾಳಂತೆ ಅವಳು ....ಇವರಿಗೆ ಅವಳ ಮುಖವನ್ನು ನೋಡಲಾಗುತ್ತದೆಯೋ ಇಲ್ಲವೋ ...
ಎಷ್ಟು ಪ್ರೀತಿಯ ಮಗಳು ಅವಳು....ಹುಂ , ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳೇ ಕಳೇದುಹೋಯ್ತಲ್ಲ ಅವಳನ್ನು ನೋಡಿ....ಕೊನೆಯ ಮಗಳೆಂದು ಮನೆಯವರೆಲ್ಲರ ಮುದ್ದು ಹೆಚ್ಚಾಯ್ತಲ್ಲ ಅವಳಿಗೆ ...ಅವಳಿಗಿಂತ ಹತ್ತು ವರ್ಷಕ್ಕೆ ದೊಡ್ಡವನಲ್ಲವೇ ರಾಘವ ....ಅವಳು ಹುಟ್ಟಿದಾಗ ಎಲ್ಲರಿಗಿಂತ ಸಂತೋಷಪಟ್ಟವನು ಅವನೇ ಅಲ್ಲವೇ.. ಸಣ್ಣಗೆ ನರಳಿದ ಧ್ವನಿ ಕೇಳಿದಂತಾಗಿ ಸೀತಮ್ಮನ ಯೋಚನಾ ಸರಣಿ ತುಂಡಾಯ್ತು. ಗಂಡನ ಮುಖದ ಬಳಿ ಬಾಗಿ ಕೇಳಿದರು ಉಸಿರಾಟದ ಶಬ್ದದ ವಿನಃ ಬೇರೇನೂ ಕೇಳಿಸದೆ ಮತ್ತೆ ಮಂಕಾಗಿ ಕುಳಿತರು ಸೀತಮ್ಮ.
ಪಾಪ ಮಗ ರಾಘವ ಸ್ವಲ್ಪ ಸಿಟ್ಟು ಜಾಸ್ತಿ, ಆದರೂ ತುಂಬ ಒಳ್ಳೆಯ ಗುಣ. ಚಿಕ್ಕ ವಯಸ್ಸಿಗೇ ಸಣ್ಣದಾಗಿ ಅಡಿಕೆ ವ್ಯಾಪಾರ ಶುರು ಮಾಡಿದ. ಕಷ್ಟಪಟ್ಟು ದುಡಿದ. ಮನೆಯ ಜವಾಬ್ದಾರಿಗೆ ಹೆಗಲು ಕೊಟ್ಟ. ಇಲ್ಲವಾದರೆ ಕೇವಲ ಇವರ ವೈದಿಕ ವೃತ್ತಿಯಲ್ಲಿ ಮನೆ ನಡೆಸುವುದು ಕಷ್ಟವಿತ್ತು.ಈಗೇನೋ ಅವನ ವ್ಯಾಪಾರ ಚೆನ್ನಾಗಿ ನಡೆದು ಒಳ್ಳೆಯ ಸ್ಥಿತಿಯಲ್ಲಿದ್ದೇವೆ. ಅದರೆ ಅಗ ಹೀಗಿರಲಿಲ್ಲ. ದೊಡ್ಡ ಮಗಳ ಮದುವೆಗೆ ಅವನೇ ದುಡ್ಡು ಹೊಂದಿಸಿದ. ಕೊನೆಯ ತಂಗಿ ಆಶಾಳನ್ನು ಕಂಡರೆ ತುಂಬ ಪ್ರೀತಿ ...ಓದಿನಲ್ಲಿ ತುಂಬ ಚುರುಕಿದ್ದ ಅವಳು ಪಿಯುಸಿ ಮುಗಿಸಿ, ಡಾಕ್ಟರ್ ಆಗಬೇಕೆಂದು ಆಸೆಪಟ್ಟಳು. ಅಷ್ಟೆಲ್ಲಖರ್ಚು ಭರಿಸುವ ಶಕ್ತಿ ತಮಗಿರಲಿಲ್ಲ. ಆದರು ಅದರ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡು , ನಮ್ಮಿಬ್ಬರನ್ನು ಒಪ್ಪಿಸಿ, ಸಾಲ ಮಾಡಿ ಅವಳನ್ನು ದೂರದ ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ಸೇರಿಸಿ , ಉಳಿಯಲು ಹಾಸ್ಟೆಲ್ ವ್ಯವಸ್ಥೆ ಮಾಡಿದ. ತನ್ನ ತಂಗಿ ದಾಕ್ಟರ್ ಆಗುತ್ತಾಳೆಂದು ಎಲ್ಲರ ಬಳಿ ಎಷ್ಟು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ! ತಾನು ಓದಲಾಗದ್ದನ್ನು ತನ್ನ ತಂಗಿ ಓದುತ್ತಿದ್ದಾಳೆಂಬ ತೃಪ್ತಿ ಅವನಿಗೆ.
ಅವಳೂ ಚೆನ್ನಾಗಿ ಓದಿದಳು. ಅವಳ ಓದು ಮುಗಿಯುವ ವೇಳೆಗೆ ರಾಘವ ಅವಳ ಓದಿಗೆಂದು ಮಾಡಿದ ಸಾಲವನ್ನೆಲ್ಲ ತೀರಿಸಿದ್ದ. ಇನ್ನೇನು ನಮ್ಮ ಊರಿನಲ್ಲೆ ಕ್ಲಿನಿಕ್ ತೆಗೆದು ಒಳ್ಳೆಯ ಗಂಡನ್ನು ನೋಡಿ ಮದುವೆ ಮಾಡಿಬಿಟ್ಟರೆ ತನ್ನ ಜವಾಬ್ದಾರಿ ಮುಗಿದಂತೆ ಎಂದು ಕನಸು ಕಾಣುತ್ತಿದ್ದವನಿಗೆ ಆಶಾ ದೊಡ್ಡ ಆಘಾತ ನೀಡಿದ್ದಳು. ಓದು ಮುಗಿಸಿ ಬಂದವಳೇ ಬೆಂಗಳೂರಿನಲ್ಲಿ ತನಗೆ ಕೆಲಸ ಸಿಕ್ಕಿರುವುದಾಗಿಯೂ ಅಲ್ಲಿಗೇ ಹೋಗುತ್ತೇನೆಂದು ಹಠ ಹಿಡಿದಳು. ಅದಕ್ಕೂ ಒಪ್ಪಿಯಾಯಿತು. ನಂತರ ನಿಧಾನವಾಗಿ ತನ್ನ ಸಹಪಾಠಿಯಾದ ಜೋಸೆಫ್ ಅನ್ನು ಇಷ್ಟಪಟ್ಟಿರುವುದಾಗಿಯೂ ಅವನನ್ನೇ ಮದುವೆಯಾಗುತ್ತೇನೆಂದು ಹೇಳಿದಳು.
ಆಗ ರಾಘವನಿಗೆ ಬಂದ ಸಿಟ್ಟನ್ನು ನೋಡಿ ತನಗೂ ಭಯವಾಗಿತ್ತಲ್ಲವೇ , ಚಿಕ್ಕವಳಿದ್ದಾಗ ಕೂಡ ನನಗೂ ಅವಳ ಮೇಲೆ ಕೈ ಮಾಡಲು ಬಿಡದಿದ್ದವ ಅಂದು ಕೆನ್ನೆಗೊಂದು ಬಿಗಿದಿದ್ದ.
ಅವಳು ಜಗ್ಗದಿದ್ದಾಗ ಕುಳಿತು ಕಣ್ಣೀರಿಟ್ಟಿದ್ದ. ಮಾತನಾಡುವುದು ಸುಲಭ ಪುಟ್ಟಿ ಬೇರೆ ಜಾತಿ ಧರ್ಮದವರನ್ನು ಮದುವೆಯಾಗಿ ಅವನ ಜೊತೆ ಅವನ ಮನೆಯವರ ಜೊತೆ ಹೊಂದಿಕೊಂಡು ಬಾಳುವುದು ಕಷ್ಟ ಅರ್ಥ ಮಾಡಿಕೋ ಎಂದು ಗೋಗರೆದ... ಆದರೆ ಅವಳಿಗೇನಾಗಿತ್ತೋ ಯಾಕಷ್ಟು ಹಠ ಹಿಡಿದಳೋ.... ನಮ್ಮ ಯಾರ ಮಾತೂ ಕೇಳಲೇ ಇಲ್ಲ.
ಅಂದು ಈ ಚಿಕ್ಕ ಊರಿನಲ್ಲಿ ಅಂತರಜಾತೀಯ ವಿವಾಹ ಚಿಕ್ಕ ವಿಷಯವಾಗಿರಲಿಲ್ಲವಲ್ಲ ...ಊರಿನಲ್ಲಿ ವೈದಿಕ ಮನೆತನವೆಂದು ಹೆಸರಾಗಿದ್ದ ಮನೆ ನಮ್ಮದು. ಇವರಿಗೆ , ರಾಘವನಿಗೆ ಊರ ಜನರನ್ನೆದುರಿಸುವುದು ಹೇಗೆಂಬ ಚಿಂತೆಯಿತ್ತು.
ಅವಳು ಆ ಮದುವೆಯಾದರೆ ಇನ್ನೆಂದು ಈ ಮನೆಗೆ ಈ ಊರಿಗೆ ಕಾಲಿಡುವಂತಿಲ್ಲ, ತಮ್ಮ ಪಾಲಿಗೆ ಅವಳು ಸತ್ತಂತೆಯೆ ಸರಿ ಎಂದುಬಿಟ್ಟ ರಾಘವ. ಅವನು ಹೇಳುವುದು ಸರಿಯೂ ಇತ್ತು. ಈ ಊರಿನಲ್ಲಿ ನಾವು ಬದುಕಿ ಬಾಳಬೇಕಿತ್ತು.
ಅವಳು ಮನೆ ಬಿಟ್ಟು ಹೊರಟಳು... ತಮ್ಮ ಪ್ರೀತಿಯ ಮಗಳ ಈ ನಿರ್ಧಾರ ಇವರಿಗೆಷ್ಟು ಆಘಾತ ನೀಡಿತ್ತೆಂದರೆ ಅನೇಕ ದಿನಗಳವರೆಗೆ ಮಂಕಾಗಿಬಿಟ್ಟಿದ್ದರಲ್ಲವೆ ..ತನ್ನ ಸ್ಥಿತಿಯೂ ಹಾಗೇ ಆಗಿತ್ತು.
ನಂತರ ರಾಘವನಂತೂ ಅವಳ ಹೆಸರೆತ್ತಿದರೆ ಉರಿದು ಬೀಳುತ್ತಿದ್ದ. ಅವಳ ಓದಿಗಾಗಿ ತನ್ನ ಮದುವೆಯನ್ನೂ ಮುಂದೆ ಹಾಕಿದ್ದ ಪಾಪ. ಹತ್ತು ವರ್ಷದ ಹಿಂದಿರಬೇಕು ...ಒಮ್ಮೆ ಫೋನ್ ಮಾಡಿದ್ದಳಲ್ಲವೆ ... ನಿಮ್ಮನ್ನೆಲ್ಲ ನೋಡಬೇಕೆನ್ನಿಸುತ್ತಿದೆಯಮ್ಮ ಬರಲಾ ..ಕೇಳಿದ್ದಳು. ಕಾಲ ಎಷ್ಟೋ ಬದಲಾಗಿತ್ತು . ನಮ್ಮಿಬ್ಬರಿಗೂ ಅವಳ ಮೇಲಿದ್ದ ಕೋಪ ಕಡಿಮೆಯಾಗಿ ವಾತ್ಸಲ್ಯ ತಲೆಯೆತ್ತಿತ್ತು. ಅವಳ ಆಗಿನ ಅನಿವಾರ್ಯತೆ ಏನಿತ್ತೋ ಏನೋ...ಪಾಪ ಬಾ ಮನೆಗೆ ಎನ್ನಬೇಕೆಂದು ನಾಲಿಗೆ ತುದಿಗೆ ಬಂದರೂ, ರಾಘವನನ್ನು ಕೇಳದೆ ಬಾ ಎನ್ನುವ ಧೈರ್ಯವಿರಲಿಲ್ಲ ತಮಗಿಬ್ಬರಿಗೂ.... ವಿಷಯ ತಿಳಿದ ರಾಘವ ಕೂಗಾಡಿಬಿಟ್ಟಿದ್ದ. ಅವಳು ಬಂದರೆ ತಾನೇ ಮನೆ ಬಿಟ್ಟು ಹೋಗಿಬಿಡುತ್ತೇನೆ ಎಂದು ಹೇಳಿಬಿಟ್ಟಿದ್ದ. ಪಾಪ ಸೊಸೆ ಮೀನಾ ಅವನ ಮನವೊಲಿಸಲು ಎಷ್ಟೋ ಪ್ರಯತ್ನ ಪಟ್ಟಿದ್ದಳು. ಆದರೂ ಅವ ಒಪ್ಪಲಿಲ್ಲ.
ಇತ್ತೀಚೆಗೆ ನಾಲ್ಕಾರು ವರ್ಷಗಳಿಂದಂತೂ ಇವರಿಗೆ ಆ ಮಗಳ ಹಂಬಲ ಹೆಚ್ಚಾಗಿತ್ತು. ತಾನು ಕಣ್ಮುಚ್ಚುವುದರೊಳಗಾಗಿ ಒಮ್ಮೆ ಅವಳನ್ನು ನೋಡಬೇಕೆಂದು ಹೇಳುತ್ತಿರುತ್ತಿದ್ದರು. ಇಂದು ಬರುತ್ತಿದ್ದಾಳಂತೆ , ಯಾವ ಸೌಭಾಗ್ಯಕ್ಕೆ? ಇವರಿಗೆ ಎಚ್ಚರವಾಗಿ ನೋಡಲಾಗುತ್ತದೆಯೋ ಇಲ್ಲವೋ....ಇಬ್ಬರೂ ಹಠಮಾರಿಗಳೇ ..ಅವಳು ಆಗ ತನ್ನ ಹಠ ಬಿಡದೇ ನಮ್ಮನ್ನು ನೋಯಿಸಿದಳು. ಇವನು ಈಗ ತನ್ನ ಹಠ ಸಾಧಿಸುತ್ತಿದ್ದಾನೆ. ಇವರಿಬ್ಬರ ಹಠ ಸಾಧನೆಗೆ ಬಲಿಯಾದದ್ದು ತಮ್ಮಿಬ್ಬರ ಮಮತೆ ...... ಮತ್ತೊಮ್ಮೆ ನರಳಿದ ಧ್ವನಿ ಕೇಳಿ ಸೀತಮ್ಮ ತಮ್ಮ ನೆನಪಿನಂಗಳದಿಂದ ಹೊರಬಂದರು.
ಉಸಿರಾಡಲು ತೊಂದರೆ ಪಡುತ್ತಿದ್ದವರನ್ನು ನೋಡಿ ಗಾಭರಿಯಾದ ಸೀತಮ್ಮ ಮಗನನ್ನು ಕೂಗಿದರು...ಮಕ್ಕಳು ಮೊಮ್ಮಕ್ಕಳೆಲ್ಲ ಓಡಿ ಬಂದರು ...ಎಲ್ಲರೂ ನೋಡುತ್ತಿದ್ದಂತೆ ಒಮ್ಮೆ ಕಣ್ಬಿಟ್ಟ ರಾಮಯ್ಯ ಸುತ್ತಲೂ ದೃಷ್ಟಿ ಹರಿಸಿ ಎಲ್ಲರನ್ನೂ ನೋಡಿದರು...ನಂತರ ಅವರ ಕಣ್ಣು ಮುಚ್ಚಿತು. ಉಸಿರಾಟ ನಿಂತಿತು.
ಆಗಷ್ಟೇ ಗಂಡ ಮತ್ತು ಎದೆಯೆತ್ತರ ಬೆಳೆದ ಮಗನೊಡನೆ ಆಟೋ ಇಳಿದು ಹೊರಬಾಗಿಲು ಪ್ರವೇಶಿಸಿದ ಆಶಾಳಿಗೆ ಅಪ್ಪನ ಕೋಣೆಯಿಂದ ಕೇಳಿಬರುತ್ತಿದ್ದ ಅಮ್ಮನ ಅಳು ಸ್ವಾಗತಿಸಿತು.
Posted by ಸುಮ (noreply@blogger.com) on September 27, 2011 10:12 AM· permalink
ಚೆಹರೆ ಪೆ ಚಾಂದನಿ
ನಜರ್ ನ ಲಗ್ ಜಾಯೆ
ಚಂದಾ ನ ಛುಪ್ ತೂ
ನಜರ್ ನ ಹಟ್ ಜಾಯೆ
ಇಂತಜಾರ್ ಕೀ ಘಡಿಯಾಂ
ಸೂನಿ ಸೂನಿ ಎ ಗಲಿಯಾಂ
ಢಲ್ ಗಯಾ ಸೂರಜ್ ಭೀ
ಘರ್ ಲೌಟೀ ಹೈಂ ಸಖಿಯಾಂ
ಅಬ್ ತೋ ಆಜಾವೋ
ಐಸೆ ನ ಸತಾವೋ
ಬೆ ರಹಮೀ ಇಸ್ ಕದರ್
ಜಾಲಿಮ್ ಭೀ ನ ಕರ್ತಾ ಹೋ
ಕೈಸೆ ಕಹೂಂ
ಕಟಾ ಕೈಸೆ ದಿನ್
ಲಮ್ಹಾಭೀ ಲಗೆ
ಬರಸ್ ಪಿಯಾಬಿನ್
ತುಮ್ಕೋ ಭೀ ಹೋಗಾ
ಐಸಾ ಹೀ ಕುಚ್
ಆಂಖೋಂಸೆ ಕಹ್ ದೋ
ಯೆಹೀ ಹೈ ಒಹ್ ಸಚ್
चांद् और् चॆहरा
चॆहरॆ पॆ चांदनि
नजर् न लग् जायॆ
चंदा न छुप् तू
नजर् न हट् जायॆ
इंतजार् की घडियां
सूनि सूनि ऎ गलियां
ढल् गया सूरज् भी
घर् लौटी हैं सखियां
अब् तो आजावो
ऐसॆ न सतावो
बॆ रहमी इस् कदर्
जालिम् भी न कर्ता हो
कैसॆ कहूं
कटा कैसॆ दिन्
लम्हाभी लगॆ
बरस् पियाबिन्
तुम्को भी होगा
ऐसा ही कुच्
आंखोंसॆ कह् दो
यॆही है ऒह् सच्
Posted by ಜಲನಯನ (suruaz@gmail.com) on September 26, 2011 01:04 PM· permalink
ಆ ದಿನಗಳೇ ಹಾಗಿತ್ತು, ಒಂದು ಬೈದರೆ ಕಡಿಮೆ , ಎರಡು ಬೈದರೆ ಹೆಚ್ಚು. ಕ್ಲಾಸಿನ ಬಾಗಿಲ ತುದಿಯಲ್ಲಿ ಹುಡುಗಿಯೊಬ್ಬಳು ನಕ್ಕರೆ ಅವಳು ನಮ್ಮನ್ನೇ ನೋಡಿ ನಕ್ಕಳೋ? ಅವಳಿಗೆ ನಮ್ಮ ಕಂಡರೆ ಇಷ್ಟವೇನೋ? ಎಂದೆಲ್ಲ ಚಿಂತಿಸಿ ಅವಳಿಗೆ ನಮ್ಮ ಮೇಲೆ ಪ್ರೀತಿ ಬಂದಿದೆ ಎಂದು ತರ್ಕಿಸಿ ಅದನ್ನು ಎಲ್ಲ ಗೆಳೆಯರಲ್ಲಿ ಟಂ ಟಂ ಮಾಡುವ ವಯಸ್ಸದು. ತರಗತಿಯಲ್ಲಿ ಉಪನ್ಯಾಸಕರು ಸಿಟ್ಟಿನಿಂದ ನಮಗೆ ಅವಮಾನ ಮಾಡಿದರೆ ಅವರು ನಮ್ಮ ಆಜನ್ಮ ಶತ್ರುಗಳು ಎಂದು ಭಾವಿಸಿ ಅವರ ಮೇಲೆ ಸೇಡು ಹೇಗೆ ತೀರಿಸಿಕೊಳ್ಳಬೇಕು ಎಂದು ಮನದೊಳಗೆ ಲೆಕ್ಕ ಹಾಕುವ ಮನಸ್ಸದು. ರಸ್ತೆಯಲ್ಲೆಲ್ಲೋ ಮಂತ್ರಿ ಮಾಗಧರು ಭಾಷಣ ಮಾಡುತ್ತಿದ್ದರೆ ನಾವೇ ಮಂತ್ರಿಗಳೆನೋ ಎಂದು ಭಾವಿಸಿ ಮನದೊಳಗೆ ಮಂತ್ರಿಯಾದಂತೆ ಭವಿಷ್ಯದ ರಾಷ್ಟ್ರ ರೂಪಿಸುವ ಹೊಸ ಕನಸ್ಸದು. ಒಟ್ಟಿನಲ್ಲಿ ಬದುಕಿಗೆ ಸರ್ವಸ್ವವನ್ನೂ ಬಯಸುವ ತುಂಟ ಮನಸಿನ ಸೊಗಸು ಅದು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ದಿನಗಳ ನೆನಪು ನನಗೆ ಸದಾ ಮನದಲ್ಲಿ ಉಳಿಯುವಂತಾದ್ದು. ಅದಕ್ಕೆ ಅನೇಕ ಕಾರಣಗಳಿವೆ. ಆ ದಿನಗಳಲ್ಲಿ ಕಷ್ಟವಿತ್ತು, ಸುಖವಿತ್ತು, ಸಾಧನೆಯಿತ್ತು , ನೋವಿತ್ತು, ನಲಿವಿತ್ತು, ಕಲಿಯುವ ಅದಮ್ಯ ಉತ್ಸಾಹವಿತ್ತು. ಬಹುಶ: ಉಡುಪಿಗೆ ನಾನು ಅಂದು ಹೋಗದೇ ಇದ್ದಿದ್ದರೆ ಇಂದು ಇಲ್ಲಿ ನಾನು ಇರುತ್ತಿರಲಿಲ್ಲ. ಪೂರ್ಣಪ್ರಜ್ಞ ಕಾಲೇಜು ನೆನಪಾದ ಕೂಡಲೇ ನೆನಪಾಗುವ ವ್ಯಕ್ತಿತ್ವ ಪ್ರೊಫೆಸರ್ ಡಿ ಜಿ ಹೆಗಡೆ ಅವರದ್ದು. ನಾನು ಅಲ್ಲಿರುವಷ್ಟು ಕಾಲ ನನ್ನನ್ನು ಮಗನಂತೆ ಅವರು ನೋಡಿಕೊಂಡಿದ್ದರು. ಅನೇಕ ಸಂದರ್ಭಗಳಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿದ ಮಹಾನ್ ವ್ಯಕ್ತಿತ್ವ ಅವರದ್ದು. ಉಡುಪಿಯ ಕಾಲೇಜಿನ ನೆನಪಾದಾಗಲೆಲ್ಲ ನಮ್ಮನ್ನಗಲಿದ ಅವರ ನೆನಪು ಕಾಡುತ್ತದೆ. ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವರ ಪಾಲು ಬಹು ದೊಡ್ಡದು. ಕಾಲೇಜಿನ ದಿನಗಳೆಂದರೆ ಒಂಥರಾ ಮರ ಹತ್ತುವ ಮಂಗನ ಮನಸ್ಸು. ಎಲ್ಲ ಮರವೂ ನಮ್ಮದೇ ಎನ್ನುವ ಹುಂಬತನ. ಎಲ್ಲ ವಿಷಯಗಳಲ್ಲೂ ಪ್ರಾವೀಣ್ಯತೆ ಸಾಧಿಸುವ ಭಂಡತನ. ಅದು ಸರಿಯಾಗಿ ಅರ್ಥ ಆಗುವಷ್ಟರಲ್ಲಿ ನಾವು ಇಳಿಯುವ station ಬಂದಿರುತ್ತದೆ. ತಿರುಗಿ ಹೋಗುವಂತಿಲ್ಲ.ಮುಂದುವರೆಯಲು ಬೇರೆ ರಸ್ತೆಗಳು ಹೆಚ್ಚಿಲ್ಲ ಎನ್ನುವ ಸ್ಥಿತಿ. ಆದರೆ ಸಾಂಸ್ಕ್ರತಿಕ ರಾಜಧಾನಿ ಉಡುಪಿಯಲ್ಲಿ ಶಿಕ್ಷಣದ ಜೊತೆಗೆ ಕಲಿಯುವ ಪಾಠವಿದೆಯಲ್ಲ ಅದನ್ನು ಬೇರೆ ಎಲ್ಲಿಯೂ ಕಲಿಯುವುದು ಕಷ್ಟ. ಉಡುಪಿ ಶಿಕ್ಷಣದ ಜೊತೆ ಬದುಕನ್ನು ಕಲಿಸುತ್ತದೆ. ಪ್ರತಿದಿನ ಬರುವ ಲಕ್ಷಾಂತರ ಭಕ್ತಾದಿಗಳು, ಶ್ರೀ ಕ್ರಷ್ಣನ ಸನ್ನಿಧಾನದಲ್ಲಿ ಭಕ್ತಿ ಪರವಶರಾಗಿ ತಮ್ಮನ್ನು ಆ ಜಗನ್ನಿಯಾಮಕನಿಗೆ ಅರ್ಪಿಸಿಕೊಳ್ಳುವ ಪರಿ, ಅವನಿಗಾಗಿ ಮಾಡುವ ಸೇವೆ ಇವೆಲ್ಲವೂ ನೋಡಿಯೇ ಕಣ್ಣು ತಣಿಸಿಕೊಳ್ಳಬೇಕು.
ಕಾಲೇಜಿನ ಆ ದಿನಗಳಲ್ಲಿ ನಾನು ಬಹಳಷ್ಟು ಚರ್ಚಾ ಸ್ಪರ್ಧೆಗಳಲ್ಲಿ , ಭಾಷಣ ಸ್ಪರ್ಧೆಗಳಲ್ಲಿ, ಭಾಗವಹಿಸಿದ್ದೇನೆ. ನನ್ನೊಂದಿಗೆ ನನ್ನ ಆತ್ಮೀಯ ಸ್ನೇಹಿತರಾದ ಅಶ್ವಥ್ ಭಾರದ್ವಾಜ ಮತ್ತು ಕಮಲಾಕರ್ ಕೂಡಾ ಇದ್ದರು. ನಾವು ಮೂರು ಜನ ಬಹಳಷ್ಟು ಪ್ರಶಸ್ತಿ ಗೆದ್ದಿದ್ದೇವೆ. ಇಂದಿಗೂ ಅಲ್ಲಿಗೆ ಹೋದರೆ ಇದನ್ನೆಲ್ಲಾ ನೆನಪಿಸಿಕೊಳ್ಳುವ ಉಪನ್ಯಾಸಕರ ಸಮೂಹವಿದೆ, ಅದಕ್ಕೆ ನಾನು ಋಣಿ. ತಿಂಗಳಿಗೆ ಸುಮಾರು 7 -8 ದಿನ ಕೇವಲ ಅದು ಇದು ಸ್ಪರ್ಧೆಗಳಲ್ಲೇ ಕಾಲ ಕಳೆಯುವ ನಾನು ನಮ್ಮ ವಿಜ್ಞಾನ ವಿಭಾಗದ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದೆ. ನಮ್ಮಲ್ಲಿ ಒಂದು ಮಾತಿದೆ ''ವಿಜ್ಞಾನದ ವಿಧ್ಯಾರ್ಥಿಯೆಂದರೆ ಆತ ಪುಸ್ತಕ ಬಿಟ್ಟು ಏಳುವಂತಿಲ್ಲ, ಅವನಿಗೆ ಆಟ ಅಲರ್ಜಿ, ಊಟ ಬೇಕಿದ್ದರೆ ಮಾತ್ರ, ಸದಾ ಪುಸ್ತಕದ ಬದನೇಕಾಯಿ ತಿಂದೆ ಆತ ಬದುಕಬೇಕು, 90 % ಗಿಂತ ಕಡಿಮೆ ಬಂದರೆ ಆತ ಬದುಕಲು ಅನರ್ಹ'' ಹೀಗೆಯೇ ಪಟ್ಟಿ ಸಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಭೆಟ್ಟಿ ಕೊಟ್ಟಾಗ ಎಲ್ಲ ತಂದೆ ತಾಯಿಗಳ ಮಾನಸಿಕ ಒತ್ತಡ ಗಮನಿಸಿದ್ದೇನೆ. ಅವರ ಮಾತುಗಳೇನು ಗೊತ್ತ ''ನನ್ನ ಮಗಳು/ಮಗ ಓದುತ್ತಿಲ್ಲ, ಅವರು ಇಂಜಿನಿಯರ್ ಅಥವಾ ವೈದ್ಯರು ಆಗಬೇಕು. ಆದರೆ ಹಿಂದಿನ ಸಲದ ಪರೀಕ್ಷೆಯಲ್ಲಿ 95 % ಮಾತ್ರ ತೆಗೆದುಕೊಂಡಿದ್ದಾರೆ. ಹೀಗಾದರೆ ನಾವು ದುಡಿದದ್ದು ವ್ಯರ್ಥ. ಇಡೀ ದಿನ ಟ್ಯುಶನ್ ಗೆ ಹೋದರು ಮಾರ್ಕ್ಸ್ ತೆಗೆಯುವುದಿಲ್ಲ ಎಂದು'' ನಾವು ಮಕ್ಕಳಿಗೆ ಬದುಕಿನ ಪಾಠ ಹೇಳುತ್ತಿಲ್ಲ ಬದಲಿಗೆ ಹಣದ ಪಾಠ ಹೇಳುತ್ತಿದ್ದೇವೆ. ಅವರಿಗೆ ಆಡುವ ಮನಸ್ಸು ಹೋಗುತ್ತಿದೆ, ಪಾಲಕರ ಒತ್ತಾಯಕ್ಕೆ ಓಡುವ ಕುದುರೆಗಳು ಆಗಿವೆ ಅವೆಲ್ಲ. ಇಂಥಹ ಒತ್ತಡವೇ ಅವರನ್ನು ಆತ್ಮಹತ್ಯೆ ಯಂತ ಹೇಡಿತನಕ್ಕೆ ದಾರಿ ಮಾಡಿಕೊಡುತ್ತದೆ. ಮೊದಲಿಗೆ ಬದುಕನ್ನು ಅವರು ಕಲಿಯಲಿ, ನಂತರ ಬದುಕೇ ಅವರಿಗೆ ಎಲ್ಲವನ್ನು ಕಲಿಸುತ್ತದೆ.
ಉಡುಪಿಯ ಕಾಲೇಜಿನ ರಸಾಯನ ಶಾಸ್ತ್ರದ ಉಪನ್ಯಾಸಕರಲ್ಲಿ ಕೆಲವರಿಗೆ ನನ್ನ ಮೇಲೆ ಬಹಳ ಕೋಪವಿತ್ತು. ಸದಾ ಭಾಷಣಕ್ಕೆ ಹೋಗುವ ನಾನು ನನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇನೆ, ನಾನು ಏನು ಸಾಧಿಸುವುದಿಲ್ಲ ಎಂಬ ಕೊರಗಿತ್ತು. ಸಿಟ್ಟು ಯಾವಾಗಲೂ ಪ್ರೀತಿ ಇರುವವರಲ್ಲಿ ಹೆಚ್ಚಾಗಿ ಸುಳಿಯುತ್ತದೆ. ಆ ಮಟ್ಟಿಗೆ ನಾನು ತುಂಬಾ ಅದ್ರಷ್ಟವಂತ. ಆ ಎಲ್ಲ ರಸಾಯನ ಶಾಸ್ತ್ರ ದ ಉಪನ್ಯಾಸಕರಿಗೆ ನನ್ನ ಮೇಲೆ ಕೋಪ, ಸೊ ನಾನು ಅಂದುಕೊಂಡೆ ನನ್ನ ಮೇಲೆ ವಿಪರೀತ ಪ್ರೀತಿ ಅದಕ್ಕೆ ಕೋಪ ಎಂದು :)
ಕೆಲವೊಮ್ಮೆ ಹೀಗೆ ಅಂದುಕೊಳ್ಳೋದು ಮನಸನ್ನ ಹಗುರ ಮಾಡತ್ತೆ. ಇಲ್ದೆ ಇದ್ರೆ ಚಿಂತೇನೆ ತಲೆ ಹೊಕ್ಕಿ ನಮ್ಮನ್ನ ಚಿತೆ ಮಾಡಿ ಹಾಕುತ್ತೆ. ನನಗೆ ಇನ್ನು ನೆನಪಿದೆ, ನಾನಾಗ ಬಿ ಎಸ್ಸ್ ಸಿ ಕೊನೆಯ ವರ್ಷದಲ್ಲಿದ್ದೆ. ಪರೀಕ್ಷೆ ಹತ್ತಿರ ಬರ್ತಾ ಇತ್ತು. ಜನವರಿ ತಿಂಗಳ ಅನಿಸತ್ತೆ. ರಸಾಯನ ಶಾಸ್ತ್ರದ ಉಪನ್ಯಾಸಕರು (chemistry ಗೆ ನಾನು ಕರೆಯೋದು ಕೆಮ್ಮು ಎಷ್ತ್ರಿ ಅಂತಾನೆ ಯಾವಾಗಲು) ಪ್ರಾಕ್ಟಿಕಲ್ ತಗೋತ ಇದ್ರು. ಆ ದಿನಗಳಲ್ಲಿ ನನ್ನ ಮೇಲೆ ಅವ್ರಿಗೆಕೋ ವಿಪರೀತ ಕೋಪ. ತುಂಬಾ ಸಿಡುಕ್ತ ಇದ್ರು, ಬಹುಶ: ಈಗ ಆಗಿದ್ರೆ ಅವರ ಸಿಡುಕಿನ ಮುಖ ಫೋಟೋ ತೆಗೆದು facebook ನಲ್ಲಿ ಹಾಕ್ತಿದ್ನೇನೋ. ಆದರೆ ಆ ದಿನಗಳು ಹಾಗಿರಲಿಲ್ಲ. ನಾನು ಭಾಷಣಕ್ಕೆ ಹೋಗೋದು ಬೇಡಾ ಅಂತ ತುಂಬಾ ಸಲ ಕ್ಲಾಸಿನಲ್ಲಿ ಹೇಳಿದ್ರು. ಆದ್ರೂನು ಅವರ ಮಾತನ್ನ ಮೀರಿ ನಾನು ತುಂಬಾ ಸಲ ಹೋಗಿದ್ದೆ. ಅದು ಒಂತರ ಗಣಪತಿ ದೇವಸ್ಥಾನಕ್ಕೆ ಹೋಗಿ ಆಮೇಲೆ, ದೇವಿ, ದುರ್ಗೆ, ಶ್ರೀ ಹರಿ ಹೀಗೆ ಬೇರೆ ಬೇರೆ ದೇವಸ್ಥಾನಕ್ಕೆ ಹೋದ ಹಾಗೆ, ಇವರು ಬೈದರು ಅಂತ ಇನ್ನೊಂದು ಕಡೆ ಹೋಗೋದು ಬಿಡೋಕೆ ಆಗುತ್ತ ಅನ್ನೋ ಹುಂಬ ಮನಸ್ಸು ಅದು.
ಪ್ರಾಕ್ಟಿಕಲ್ ಪ್ರಾರಂಭ ಆಗಿತ್ತು. ಎಲ್ಲರ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡ್ತಾ ಬಂದ್ರು. ನಾನು ಎಷ್ಟೇ ಭಾಷಣಕ್ಕೆ ಹೊದ್ರುನು ಕ್ಲಾಸಿನ ಕೆಲಸನ ಕರೆಕ್ಟ್ ಆಗಿ ಮಾಡಿರ್ತಿದ್ದೆ. ಆ ದಿನ ನನ್ನ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡೋಕೆ ತಗೊಂಡ್ರು. ಏನೋ, ಅದು ಇದು ಅಂತ 4 ಪೇಜ್ ತಿರುಗಿಸಿ ಕಸದ ಬುಟ್ಟಿಯ ಕಡೆ ಬಿಸಾಕಿ ಬಿಟ್ರು. ನನಗೆ ಥರ ಥರ ನಡುಕ. ಇದೇನಾಯ್ತು ಇವರಿಗೆ ಅಂತ. ಅವರಿಗೆ ಅದೆಲ್ಲಿಂದ ಸಿಟ್ಟು ಬಂದಿತ್ತೋ ಗೊತ್ತಿಲ್ಲ, ''ನೀನು ಇನ್ನು ಮೇಲೆ ನನ್ನ ಕ್ಲಾಸ್ ಗೆ ಆಗಲಿ, ಲ್ಯಾಬ್ ಗೆ ಆಗಲಿ ಬರಬೇಡ. ಇದೇನು ಪ್ರಾಕ್ಟಿಕಲ್ ಬುಕ್, ಗಬ್ಬೆದ್ದು ಹೋಗಿದೆ, ನೀನು ಬದುಕಲ್ಲಿ ಉದ್ದಾರ ಆಗಲ್ಲ, ಹಾಳಾಗಿ ಹೋಗ್ತಿಯ, ನಿನಗೆ ವಿಜ್ಞಾನ ದ ವಿಷಯ ಯಾಕೆ ಬೇಕಿತ್ತು, ಹೋಗು ಎಲ್ಲಾದರು ಭಾಷಣ ಮಾಡ್ಕೊಂಡೆ ಜೀವನ ಮಾಡು'' ಅಂತ ಒಂದೇ ಸಮನೆ ರುದ್ರಾಭಿಷೇಕ ಮಾಡೋಕೆ ಆರಂಭ್ಸಿದ್ರು. ನನಗೋ ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ. ಕೆಲವೊಮ್ಮೆ ಧೋ ಅಂತ ಸುರಿಯೋ ಮಳೇನ ನಿಲ್ಲಿಸಿದರೆ ಮತ್ತೆ ಅದು ತನ್ನ ಆಟ ತೋರಿಸತ್ತೆ. ಅದ್ಕೆ ಎಷ್ಟು ಬೇಕಾದರು ಬೈಕೊಳ್ಳಿ ಅಂತ ಬೈಸ್ಕೊತ ಇದ್ದೆ, ತಿರುಗಿ ಒಂದೇ ಒಂದು ಮಾತು ಹೇಳಲಿಲ್ಲ. ಹಾಗೆಯೇ ಅವರು 20 ನಿಮಿಷ ಉಗಿದು ನನ್ನ ಪ್ರಾಕ್ಟಿಕಲ್ ಬುಕ್ ನ 4 ಪೇಜ್ ಹರಿದು ಲ್ಯಾಬ್ ನಿಂದ ಹೊರಗೆ ಹಾಕಿದ್ರು.
ಹೊರಗೆ ಬಂದವನಿಗೆ ನಿಜವಾಗಿ ನಡುಕ ಆರಂಬವಾಯ್ತು. ನನ್ನ ಬದುಕನ್ನ ಸರ್ವನಾಶ ಮಾಡಿಕೊಂಡು ಬಿಟ್ನ ಅಂತ. ಗುರುವಿನ ಶಾಪ ಒಳ್ಳೇದಲ್ಲ ಅಂತಾರೆ ನಮ್ಮ ಹಿರಿಯರು. ಅವತ್ತು ಅವರು ಉಪಯೋಗಿಸಿದ ಶಬ್ದಗಳು ಇನ್ನು ನೆನಪಾದಾಗ ಕಿವಿಯ ಮೇಲೆ ಬಿಳತ್ವೆ. ಅವರು ಯಾವತ್ತು ಯಾರಿಗೂ ಅಷ್ಟೊಂದು ಬೈದಿರಲಿಲ್ಲ ಅಂತೆ. ನಾನೇ ಫಸ್ಟ್ ಮತ್ತು ನಾನೇ ಲಾಸ್ಟ್. ಮನಸ್ಸಿಗೆ ತುಂಬಾನೇ ಬೇಜಾರು ಆಗಿ ಹೋಯ್ತು. ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ಹೇಳೋದು ಕಷ್ಟ, ಒಬ್ಬ ಭಾಷಣಕ್ಕೆ ಹೋದ ವಿಧ್ಯಾರ್ಥಿಯನ್ನು ಬೈದಿದ್ದು ಅವರದು ತಪ್ಪು ಹಾಗೆ ಓದೋಕೆ ಅಂತ ಬಂದ ನಾನು ಭಾಷಣಕ್ಕೆ ಹೋಗಿದ್ದು ನನ ತಪ್ಪು. ಅಂತೂ ಎಲ್ಲ ರಸಾಯನ ಶಾಸ್ತ್ರದ ಉಪನ್ಯಾಸಕರು ಸೇರಿ ನನಗೆ ಅವರಿಗೆ ರಾಜಿ ಮಾಡಿಸಿ ಕೊಟ್ರು. ಅದಾದ ಮೇಲೆ ಅವರು ನನ್ನನ್ನು ಅಷ್ಟೊಂದು ಬಯ್ಯಲಿಲ್ಲ. ಅಷ್ಟೊಂದು ವಿಚಾರಿಸಲು ಇಲ್ಲ.
ಆದರೆ ಪೂರ್ಣಪ್ರಜ್ಞ ಕಾಲೇಜು ಬಿಟ್ಟು ಬಂದ ಎಷ್ಟೋ ದಿನಗಳ ನಂತರ ಅವರ ಬೈಗುಳದ ನಿಜ ಅರ್ಥ ತಿಳಿಯಿತು. ಕೊನೆಗೆ ಅವರಿಷ್ಟದಂತೆ ಪಿ ಎಚ್ ಡಿ ಮಾಡಿ ಕೆಲಸದಲ್ಲಿದ್ದೇನೆ, ಈಗ ಆ ಗುರು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ಅಂದು ಅವರ ''ಬೈಗುಳ ತಾಗದೆ ಹೋಗಿದ್ದರೆ'' ಇಂದು ನಾ ಇಲ್ಲಿರುತ್ತಿರಲಿಲ್ಲ. ಇಂದಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂತಾದರೆ ಅವರ ಬೈಗುಳದ ನೆನಪು ಆಗುತ್ತದೆ. ನನ್ನ ಬದುಕಿನ ಬಗ್ಗೆ ವಿಪರೀತ ತಲೆಕೆಡಿಸಿಕೊಂಡು ಅವರು ಬೈದಿದ್ದರು. ಯಾರಿಗೂ ಬಯ್ಯದ ಅವರ ಆ ನಡವಳಿಕೆ ಅಂದು ಕೋಪ ತರಿಸಿದರೂ ಇಂದು ಅವರು ಸಿಕ್ಕರೆ ಅವರ ಪಾದಗಳಲ್ಲಿ ಎರಗಿ ಆಶಿರ್ವಾದ ಪಡೆಯುವ ಆಸೆ. ಆದರೆ ಅವರು ಕಾಲೇಜು ನಿಂದ ನಿವ್ರತ್ತರಾಗಿ ಮಕ್ಕಳೊಂದಿಗೆ ಭಾರತದ ಯಾವುದೋ ಕಡೆ ಇದ್ದಾರೆ ಎಂಬ ಸುದ್ದಿಯಿದೆ.
ಕವಿಯ ಮಾತುಗಳು ನೆನಪಿಗೆ ಬರುತ್ತಿದೆ,
''ಗುರುವಿನ ಗುಲಾಮ
ನಾಗದ ಹೊರತು
ದೊರೆಯದಣ್ಣ ಮುಕುತಿ ''
ಬದುಕು ಕೇವಲ ಪುಸ್ತಕದ ಬದನೇಕಾಯಿ ಅಲ್ಲ, ಅದು ಎಲ್ಲಕ್ಕೂ ಮೀರಿದ್ದು. ಬದುಕನ್ನ ನಾವು ಕಲಿತರೆ, ಉಳಿದೆಲ್ಲವೂ ನಮ್ಮ ಹಿಂದೆಯೇ ಬರುತ್ತದೆ. ಇಂದು ಶಾಲೆಗಳಲ್ಲಿ ಶಿಕ್ಷರು ಮಕ್ಕಳನ್ನು ಬೈಯ್ಯುವ ಹಾಗಿಲ್ಲ. ಬೆದರಿಸುವ ಹಾಗೆ ಇಲ್ಲ.
ಗದರಿಸಿ ಬೆದರಿಸಿ ಹೇಳಿದ ಪಾಠ
ನಡುಗಿಸಿ ಗುಡುಗಿಸಿ ಕಲಿತ ವಿದ್ಯೆ
ನಗುತ ನಲಿಯುತ ಆಡಿದ ಆಟ
ವಂದಿಸಿ, ಆಲಿಸಿ ಪಡೆದ ಬದುಕು
ಇವೆಲ್ಲವೂ ಪರಿಪಕ್ವ ಮಾನವನನ್ನಾಗಿಸುತ್ತವೆ. ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬೇಕಾದರೆ ಅಲ್ಲಿ ಸಣ್ಣ ಹೆದರಿಕೆಯೂ ಇರಬೇಕು.
ಮತ್ತದೇ ಕವಿವಾಣಿ ಕಿವಿಯಲ್ಲಿ ಸುಳಿಯುತ್ತಿದೆ,
ಅಂದು,
ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ
ಸಾಗಿತ್ತು ಧೀರರ ಹಿಂಡು ಹಿಂಡು
ಇಂದು,
ಮುಂದಕ್ಕೆ ಗುರಿಯಿಲ್ಲ
ಹಿಂದಕ್ಕೆ ಗುರುವೂ ಇಲ್ಲ
ಸಾಗುತಿದೆ ರಣ ಹೇಡಿಗಳ ದಂಡು ದಂಡು
Posted by ಸಾಗರದಾಚೆಯ ಇಂಚರ (koorsebabbi@gmail.com) on September 26, 2011 05:28 AM· permalink
ಆಕೃತಿ ಪುಸ್ತಕ ರಾಜಾಜಿನಗರಈ-ಕವಿ ಕ್ಯಾಲಿಫೋರ್ನಿಯಾಪ್ರಸ್ತುತ ಪಡಿಸುವ"ಹೇಳತೇನೆ ಕೇಳ"ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶ್ರೀ ಚಂದ್ರಶೇಖರ ಕಂಬಾರರ ಜೊತೆ ಸಂವಾದ ಮತ್ತು ಸನ್ಮಾನಸಂವಾದದಲ್ಲಿ:ಶ್ರೀ ಜಿ ಬಿ ಹರೀಶ್ಶ್ರೀ ಎಂ ಎಸ್ ಮೂರ್ತಿ27/09/2011 ಮಂಗಳವಾರಸಂಜೆ 6 ರಿಂದ 7:30ಸ್ಥಳ: ಆಕೃತಿ ಪುಸ್ತಕ ಮಳಿಗೆ ನಂ 31/1, 12ನೇ ಮುಖ್ಯರಸ್ತೆ 3ನೇ ಬ್ಲಾಕ್, ರಾಜಾಜಿನಗರ ಬೆಂಗಳೂರು-೫೬೦೦೧೦ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹತ್ತಿರವಿವರಗಳಿಗಾಗಿ: 9886694580ಎಲ್ಲರಿಗೂ ಆದರದ
Posted by guruve (noreply@blogger.com) on September 26, 2011 05:25 AM· permalink
ಈ ಕಥೆಯನ್ನು ಪ್ರಕಾಶಣ್ಣ ಬರೆದ ಕಥೆ( http://ittigecement.blogspot.com/ )ಯನ್ನು ಮುಂದುವರೆಸಿ ಬರೆಯುವ ಪ್ರಯತ್ನ ಮಾಡಿದ್ದೇನೆ....
ನಾನ್ಯಾಕೆ ಹಾಗೆ ಮಾಡಿದೆ ಎಂದು ತಿಳಿಯಲಿಲ್ಲ..........
ಮನುಷ್ಯ ಸಹಜವಾಗಿ ಎಲ್ಲರ ಜೊತೆ ಬೆರೆಯುತ್ತಾನೆ......
ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಜೊತೆ ಬೆರೆಯದಿದ್ದರೆ ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ...
ಸಂಬಂಧಿಕರ ಜೊತೆ ಸೇರದಿದ್ದರೆ ಅವರೆಲ್ಲ ದೂರ ಹೋಗುತ್ತಾರೆ....
ಛೆ...ತಪ್ಪು ಮಾಡಿದೆ ಎನಿಸಿತು.... ಬೆನ್ನು ತಿರುಗಿಸಿ ನೋಡಿದೆ....
ಆತ ಮೊಬೈಲ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಎನಿಸುತ್ತದೆ.... ನಾನು ತಿರುಗಿದ್ದನ್ನು ನೋಡಿಯೂ ಸಹ ಆತ ಮೆಸೇಜ್ ಕುಟ್ಟುವುದು ಮುಂದುವರಿಸಿದ........
ನನ್ನ ಕೋಪ ಇಳಿದಿತ್ತಾದರೂ ತೋರಿಸಲು ಹೋಗಲಿಲ್ಲ..... ಹೆಣ್ಣು ಯಾವಾಗಲೂ ಗಂಡೇ ಸೋಲಲಿ ಎಂದು ಬಯಸುತ್ತಾಳೆ....
ಆತ ಏನೂ ಪ್ರತಿಕ್ರೀಯಿಸದೇ ಇರಲು ನಾನೂ ಸೋಲಲು ಬಯಸಲಿಲ್ಲ.... ಬೆನ್ನು ತಿರುಗಿಸಿ ಮಲಗಿದೆ....
ಮಲಗೇ ಇದ್ದರೂ ನಿದ್ದೆ ಬರಲಿಲ್ಲ....
ಮನಸ್ಸು ನನ್ನನ್ನು ನನ್ನ ಕಾಲೇಜಿನ ದಿನಗಳತ್ತ ಕೊಂಡೊಯ್ದಿತು....
ಪದವಿಯ ಕೊನೆಯ ವರ್ಷದಲ್ಲಿದ್ದೆ...........
ಇದೇ ನನ್ನ ಕಾಲೇಜಿನ ಅಂತಿಮ ವರ್ಷವೆಂದೇ ಇರಬೇಕು...
ಎಲ್ಲರ ಜೊತೆಯೂ ಖುಷಿ ಖುಷಿಯಿಂದ ಇರುತ್ತಿದ್ದೆ.....
ಅದರಲ್ಲೂ ಒಬ್ಬ ಹುಡುಗನ ಜೊತೆ ನನಗೆ ತುಂಬಾ ಖುಶಿ ಕೊಡುತ್ತಿತ್ತು.... ನನಗೆ ಒಳ್ಳೆಯ ಗೆಳೆಯನಾಗಿದ್ದ....
ನನ್ನ ಧುಖ್ಹಕ್ಕೆ ಹೆಗಲಾಗುತ್ತಿದ್ದ... ಖುಷಿಗೆ ಕಿವಿಯಾಗುತ್ತಿದ್ದ....
ಆದರೂ ನಾನು ಅವನನ್ನು ತೀರಾ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ......
ಗಂಟೆಗಟ್ಟಲೆ ಹರಟಿದರೂ ಸಹ ನನ್ನ ಮನೆಯ ವಿಳಾಸ ಅವನಿಗೆ ಹೇಳಿರಲಿಲ್ಲ... ಅವನೂ ಕೇಳಿರಲಿಲ್ಲ.....
ಒಮ್ಮೆ ಕಾಲೇಜಿನ ಪ್ರವಾಸವಿತ್ತು....... ಆತನೂ ಬಂದಿದ್ದ....
ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆತ ಪದೇ ಪದೇ ಬಂದು ನನ್ನ ಬಳಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದ..... ನಾನು ಅದನ್ನು ಒಪ್ಪಿರಲಿಲ್ಲ.....
ಗೋವಾದ ಪ್ರವಾಸವಾಗಿತ್ತು... ಒಂದು ದಿನ ಅಲ್ಲೇ ಉಳಿಯುವ ವ್ಯವಸ್ಥೆ ಸಹ ಇತ್ತು.......
ಎಲ್ಲರೂ ಬೀಚ್ ನಲ್ಲಿ ಕುಣಿಯುತ್ತಿದ್ದೆವು.... ಆತ ನನ್ನನ್ನು ಸಮೀಪಿಸಲು ಪ್ರಯತ್ನಿಸುತ್ತಿದ್ದಾನೆ ಅನಿಸುತ್ತಿತ್ತು......
ಯಾಕೋ ಆತನನ್ನು ದೂರವಿಡಬೇಕು ಎನಿಸುತ್ತಿತ್ತು.... ಹಾಗೆ ಮಾಡಿದೆ....
ಕುಣಿದು ಕುಣಿದು ಸುಸ್ತಾಗಿತ್ತು.... ರೂಮಿಗೆ ಬಂದು ಸ್ನಾನ ಮಾಡಿ ಊಟ ಮಾಡಿದೆವು....
ಮಲಗುವವರಿದ್ದೆವು... ನನ್ನ ರೂಮ್ ನಲ್ಲಿ ನನ್ನ ಗೆಳತಿ ಒಬ್ಬಳಿದ್ದಳು...
ಅಷ್ಟರಲ್ಲಿ ಆತ ಅಲ್ಲಿಗೇ ಬಂದ...
ಆತ ತನ್ನ ಗೆಳೆಯರ ಜೊತೆ ಬಿಯರ್ ಕುಡಿದು ಬಂದಿದ್ದ ಎನಿಸುತ್ತಿತ್ತು...... ಬೀಯರ್ ವಾಸನೆಯೇ ವಾಕರಿಕೆ ತರಿಸುತ್ತಿತ್ತು....
ಬಂದವನೇ ನನ್ನ ಬೆಡ್ ಮೇಲೆ ಕುಳಿತ.... ನನ್ನ ಗೆಳತಿ ಬಾತ್ ರೂಮಿಗೆ ಹೋದಳು...
ಅದೇ ಸಮಯದಲ್ಲಿ ಆತ ನನ್ನ ಕೈ ಹಿಡಿದ.....
ನನಗೆ ಶಾಕ್ ಹೊಡೆದ ಹಾಗಾಯಿತು.....
ಇದು ನನ್ನ ಗೆಳೆತನಕ್ಕೆ ಮಾಡಿದ ಅಪಮಾನವಾಗಿತ್ತು..... ನಂಬಿಕೆಗೆ ಮಾಡಿದ ದ್ರೋಹವಾಗಿತ್ತು.....
ಯಾವ ನಿರೀಕ್ಷೆಯೂ ಇಲ್ಲದೆ ಸ್ನೇಹ ಮಾಡಿದ್ದೆ.....
ಈತನ ವರ್ತನೆ ನನ್ನನ್ನು ಕೆಣಕಿತ್ತು..... ಸಿಟ್ಟು ಬಂತು...
ಫಟೀರೆಂದು ಎರಡು ಕೆನ್ನೆಗೆ ಬಿಟ್ಟೆ......
ಆತನ ನಷೆ ಇಳಿದಿರಬೇಕು ಎನಿಸತ್ತೆ....
ಮಾತನಾಡದೆ ಹೊರಗೆ ಹೋದ....
ಬಾತ್ ರೂಮಿಗೆ ಹೋದ ಗೆಳತಿ ಹೊರಗೆ ಓಡಿ ಬಂದಳು" ಏನದು ಸದ್ದು.." ಎಂದಳು...
"ಸೊಳ್ಳೆ ಹೊಡೆದೆ" ಎಂದೆ... ನನ್ನ ಸಿಟ್ಟು ಹಿಡಿತಕ್ಕೆ ಬಂದಿತ್ತು.....
ಎಂದಿಗೂ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳದ ಆತ ಇಂದೇಕೆ ಹೀಗಾದ ಎನಿಸುತ್ತಿತ್ತು.... ನಾಳೆ ಕೇಳಿದರಾಯಿತು ಎಂದುಕೊಂಡು ಮಲಗಿದೆ....
ಬೆಳಿಗ್ಗೆ ಬೇಗನೇ ಎದ್ದೆ....
ಆತನಲ್ಲಿ ಹೋಗಿ ಕೇಳಬೇಕು ಎಂದಿಕೊಂಡು ಆತನ ರೂಮ್ ಹುಡುಕಿಕೊಂಡು ಹೋದೆ....
ಒಂದು ರೂಮಿನ ಬಾಗಿಲು ಅರ್ಧ ತೆರೆದಿತ್ತು....
ಇಣುಕಿದೆ...
ನನ್ನದೇ ಕಾಲೀಜಿನ ಹುಡುಗರು ಎಲ್ಲರೂ ಇದ್ದರು....
ಇದೇನಿದು ಎಲ್ಲರೂ ಇಷ್ಟು ಬೇಗ ಸೇರಿದ್ದಾರೆ ಎಂದುಕೊಂಡು ಒಳಗೆ ಹೋದೆ.... ಬೆಡ್ ಮೇಲೆ ಆತ ಕುಳಿತಿದ್ದ.... ಆತನ ಸುತ್ತಲು ಎಲ್ಲರೂ ನಿಂತಿದ್ದರು... ಅವರ ಹಿಂದೆ ನಾನು ನಿಂತಿದ್ದೆಯಾದ್ದರಿಂದ ನನ್ನನ್ನು ಯಾರೂ ಗಮನಿಸಲಿಲ್ಲ.....
ಆತ ಮೆಲ್ಲಗೆ ಮಾತನಾಡುತ್ತಿದ್ದ...... ನಾನು ಕಿವಿಗೊಟ್ಟು ಕೇಳಿದೆ..." ನನಗೆ ಎನೂ ಮನಸ್ಸಿರಲಿಲ್ಲ...ಅವಳೇ ನನ್ನನ್ನು ರೂಮಿಗೆ ಕರೆದಿದ್ದಳು.... ನನಗೆ ನಮ್ಮ ಸ್ನೇಹವನ್ನು ಹಾಳು ಮಾಡುವ ಮನಸಾಗಲಿಲ್ಲ..... ನೀವೇ ನೋಡಿದ್ದಿರಲ್ಲ, ಡಾನ್ಸ್ ಮಾಡುವಾಗ ಸಹ ನನ್ನ ಹತ್ತಿರವೇ ಬರುತ್ತಾ ಇದ್ದಳು.... ರಾತ್ರಿ ರೂಮಿಗೆ ಬರಲು ಹೇಳಿದ್ದಳು..... ಎನೋ ವಿಷಯ ಇರಬೇಕೆಂದುಕೊಂಡು ಹೋದೆ.... ಅವಳ ಗೆಳತಿ ಬಾತ್ ರೂಮಿಗೆ ಹೋಗಿದ್ದಾಗ ನನ್ನ ಕೈ ಹಿಡಿದು ಬಾ ಎಂದಳು.... ಕೆನ್ನೆಗೆ ಎರಡು ಬಿಗಿದು ಬಂದೆ... ಸ್ನೇಹವನ್ನು ಹೀಗೆ ದುರುಪಯೋಗ ಮಾಡಿಕೊಳ್ಳುವುದು ನನಗೆ ಇಷ್ಟ ಇರಲಿಲ್ಲ....." ಎಂದು ಇನ್ನೆನೋ ಹೇಳುವವನಿದ್ದ......
ನಾನು ಆತನ ಗೆಳೆಯರ ಮಧ್ಯದಲ್ಲೇ ನುಸುಳಿಕೊಂಡು ಆತನ ಎದುರಿಗೆ ನಿಂತೆ...
ಆತನ ಬಾಯಿಗೆ ಬೀಗ ಬಿದ್ದಿತ್ತು.......
ನನ್ನ ಮೈ ಕಂಪಿಸುತ್ತಿತ್ತು.... ನನ್ನ ನಡುಕ ನನಗೇ ಕೇಳಿಸುತ್ತಿತ್ತು....
ಏನು ಹೇಳಬೇಕೋ ತಿಳಿದಿರಲಿಲ್ಲ...
ಥೂ..... ಎಂದು ಮುಖಕ್ಕೆ ಉಗಿದೆ.....
ಹೊರಗೆ ಬಂದೆ.....
ಬೇರೆಯದೇ ಬಸ್ ಹಿಡಿದು ಊರಿಗೆ ಬಂದಿದ್ದೆ....
ನಂತರ ಕಾಲೇಜಿನ ಕಡೆ ತಲೆ ಹಾಕಿರಲಿಲ್ಲ....
ಎಲ್ಲಾ ನೆನಪಾಯಿತು....... ಇದೆಲ್ಲವನ್ನು ನಾನೂ ಸಹ ಗಂಡನಿಗೆ ಹೇಳಿರಲಿಲ್ಲ....
ನನ್ನದೇನೂ ತಪ್ಪಿಲ್ಲ ಎಂದರೂ ಆತ ನಂಬಬಹುದು ಎನಿಸಿರಲಿಲ್ಲ..... ಮತ್ತೆಲ್ಲಾ ವಿಷಯದ ಬಗ್ಗೆ ಹೇಳಿಕೊಂಡರೂ ಈ ವಿಷಯ ಮುಚ್ಚಿಟ್ಟಿದ್ದೆ.....
ಯಾಕೊ ಹೇಳಬೇಕು ಎನಿಸಿರಲಿಲ್ಲ........
ಫೋನ್ ರಿಂಗ್ ಆದ ಹಾಗಾಯಿತು....
ನನ್ನ ಯೋಚನಾ ಸರಣಿಗೆ ಕತ್ತರಿ ಬಿತ್ತು......
ಕಿರುಗಣ್ಣಲ್ಲೇ ನೋಡಿದೆ...
ಆತ ಫೋನ್ ಕಿವಿಗಿಟ್ಟು ಪಿಸುಗುಟ್ಟಿದ... ಮತ್ತೆ ಕಟ್ ಮಾಡಿ.... ಮೆಸೇಜ್ ಕುಟ್ಟತೊಡಗಿದ...
ನಾನು ಸುಮ್ಮನೇ ಮಲಗಿದೆ.....
ಬೆಳಿಗ್ಗೆ ಬೇಗ ಎದ್ದು ತುಳಸಿಕಟ್ಟೆ ತೊಳೆದು ದೀಪ ಹಚ್ಚಿದೆ....
ಎಲ್ಲರಲ್ಲೂ ತಪ್ಪಿರತ್ತೆ.... ಕೆಲವೊಂದು ಹುಳುಕುಗಳು ಇರುತ್ತವೆ....
ಅದರ ಜೊತೆ ಹೊಂದಿಕೊಂಡು ಹೋದರೆ ಜೀವನ ಎಂದು ಅಮ್ಮ ಹೇಳುತ್ತಿದ್ದುದು ನೆನಪಾಯಿತು....
ನಿನ್ನೆ ಆತನ ಜೊತೆ ನಡೆದ ಜಗಳ ಮರೆತು ಸರಿಯಾಗೋಣ ಎನಿಸಿತು....
ಒಳ್ಳೆಯ ಕಾಫಿ ಮಾಡಿಕೊಂಡು ಬೆಡ್ ರೂಮಿಗೆ ಹೋದೆ....
ಆತ ಬೇಗನೇ ಎದ್ದಿದ್ದ... ಯಾರದೋ ಜೊತೆ ಮೆಲ್ಲ ದನಿಯಲ್ಲಿ ಮಾತನಾಡುತ್ತಿದ್ದ..... ನಾನು ಒಳಗೆ ಬಂದ ನಂತರ ಫೋನ್ ಕಟ್ ಮಾಡಿದ.....
ನಾನು " ಕಾಫಿ ಕುಡಿಯಿರಿ" ಎಂದೆ.....
"ಇದೇನು ಜಗಳ ಎಲ್ಲಾ ಮುಗೀತಾ..? ನಿನ್ನೆ ತುಂಬಾ ಸಿಟ್ಟಲ್ಲಿದ್ದೆ..... " ಎಂದರು.....
" ಅದೆಲ್ಲಾ ಬಿಟ್ಟುಬಿಡಿ... ಜಗಳ ಮರೆತು, ಜತೆಯಾಗಿ ಬಾಳೋಣ... ಮೊದಲು ಕಾಫಿ ಕುಡಿಯಿರಿ" ಎಂದೆ......
"ನಿನ್ನದೂ ಸಹ ತಪ್ಪಿಲ್ಲ , ಎಲ್ಲಾ ಕಡೆಯಲ್ಲೂ ಸಂಬಂಧ ಕೆಟ್ಟು ಹೋಗಿದೆ... ಯಾರನ್ನೂ ನಂಬುವ ಹಾಗಿಲ್ಲ... ಇದನ್ನೆಲ್ಲಾ ಸರಿ ಮಾಡೊದು ಹೇಗಂದ್ರೆ, ಏನನ್ನು ಮುಚ್ಚಿಡದೇ ಎಲ್ಲವನ್ನೂ ಹಂಚಿಕೊಳ್ಳೋದು.... ನನ್ನ ಜೀವನ ತೆರೆದ ಪುಸ್ತಕದ ಹಾಗೆ.... ನಿನ್ನಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದೇನೆ.... ಇಷ್ಟೆಲ್ಲಾ ಮಾಡಿದರೂ ನೀನು ನನ್ನ ಮೇಲೆ ತಪ್ಪು ತಿಳಿದೆ...... ಇರಲಿ, ಈಗ್ಲಾದ್ರೂ ಎಲ್ಲಾ ಅರ್ಥ ಆಯ್ತಲ್ಲಾ.... ಸರಿ..... ಇದೇ ರೀತಿ ಇರು.... ಎರಡೇ ನಿಮಿಷ ಬಂದೆ.." ಎಂದವರೇ ಬಾತ್ ರೂಮಿಗೆ ಓಡಿದರು..... ಬಾಗಿಲು ಹಾಕಿಕೊಳ್ಳುವವರಿದ್ದರು.....
ಅಷ್ಟರಲ್ಲೇ ವಾಪಸ್ ಬಂದು ಮೊಬೈಲ್ ತೆಗೆದುಕೊಂಡು ಏನೋ ಕುಟ್ಟಿದರು...... ಮತ್ತೆ ಮೊಬೈಲ್ ನ್ನು ಬೆಡ್ ಮೇಲಿಟ್ಟು ಬಾತ್ ರೂಮಿಗೆ ಹೋದರು.....
ನನಗೆ ಮತ್ತೆ ತಲೆಯಲ್ಲಿ ಹುಳ.......
ಇದ್ಯಾಕೆ ಇಷ್ಟೊಂದು ಮೊಬೈಲ್ ಹುಚ್ಚು ಎನಿಸಿತು.....
ಮೊಬೈಲ್ ಕೈಯಲ್ಲಿ ತೆಗೆದುಕೊಂಡೆ....
ನೊಕಿಯಾ ಮೊಬೈಲ್ ಆಗಿತ್ತು.....
ದುಬಾರಿಯದೇ ಆಗಿತ್ತು.....
ನಿನ್ನೆ ರಾತ್ರಿ ಮೊಬೈಲ್ ನಲ್ಲಿ ಮಾತನಾಡಿದ್ದು ಮತ್ತು ಮೆಸೇಜ್ ನೆನಪಾಯಿತು.....
ಯಾರ ಜೊತೆ ಎನಿಸಿ....INBOX ನೋಡಿದೆ....... EMPTY... ಎಂದಿತ್ತು..!! ಅರೆ... ಇದೇನಿದು.... ನಿನ್ನೆ ರಾತ್ರಿಯಿಡಿ ಮೆಸೇಜ್ ಮಾಡಿದ್ದರಲ್ಲ.....
SENT MESSAGE ನೋಡಿದೆ.......... ಅದೂ EMPTY ಎಂದಿತ್ತು......!!
ಅದ್ಸರಿ.....
ನಾನು ಬೆಳಿಗ್ಗೆ ಕಾಫಿ ತರುವ ಮೊದಲು ಯಾರದೋ ಜೊತೆ ಮಾತನಾಡುತ್ತಿದ್ದರಲ್ಲ ಎನಿಸಿ Dialed call list ನೋಡಿದೆ......
Empty ಎಂದಿತ್ತು.......!!
Received call list ನೋಡಿದೆ..............
Empty ಎಂದಿತ್ತು..... !!
ಫೋನ್ ತೆಗೆದು ಪಕ್ಕದಲ್ಲಿಟ್ಟೆ....
"ಟಿವ್...ಟಿವ್" ಎಂದು ಮೆಸೇಜ್ ಅಲರ್ಟ್ ಆಯ್ತು.....
ನಾನು ಬಗ್ಗಿ ನೋಡಿದೆ......
ONE MESSAGE RECEIVED.....!!!!
Posted by ದಿನಕರ ಮೊಗೇರ (noreply@blogger.com) on September 25, 2011 05:33 PM· permalink

---------------ಜಾಹೀರಾತು--------------
ಆತ್ಮೀಯ ಓದುಗ ಮಿತ್ರರೇ, ನವೆಂಬರ್ ಮೊದಲವಾರದಿಂದ ನೇಚರ್ ಕೌನ್ಸೆಲಿಂಗ್ ಮತ್ತು ಪರ್ಸೊನಾಲಿಟಿ ಡೆವಲಪ್ಮೆಂಟ್ ತರಬೇತಿ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ಆರಂಭವಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಹೊಸ ಬ್ಲಾಗ್ ಯಾ ಜಾಲತಾಣದ ಮುಖಾಂತರ ಮಾಹಿತಿ ನೀಡಲಾಗುವುದು. ಪರಿಣತರು ಸೂಚಿಸುವ ಮಾರ್ಗಗಳು/ ಸಮಸ್ಯೆಗಳ ಪರಿಹಾರಕ್ಕೆ ಸುಲಭ ಸೂತ್ರಗಳು ಇಲ್ಲಿ ಲಭ್ಯ. ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಆಶಿಸುವ, ಸಮಸ್ಯೆಗಳಲ್ಲಿ ತೊಳಲಾಡಿ ಸರಿಯಾದ ಪರಿಹಾರ ಕಾಣದ ಪ್ರತೀವ್ಯಕ್ತಿಯನ್ನೂ ಪ್ರತ್ಯೇಕ ಸಮಯಾಧಾರಿತ ಸೆಶನ್ಗಳಲ್ಲಿ ಸಂದರ್ಶಿಸಿ ತರಬೇತಿ ನೀಡಲಾಗುತ್ತದೆ / ಪರಿಹಾರ ಮಾರ್ಗ ಸೂಚಿಸಲಾಗುತ್ತದೆ. ವ್ಯಕ್ತಿಗಳ ವೈಯ್ಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಮತ್ತು ವಿದ್ಯಾರ್ಹತೆ ಮತ್ತು ಅನುಭವಗಳ ಆದ್ಯತೆ ಮೇಲೆ ವೃತ್ತಿಯ ಉತ್ಕರ್ಷದಬಗ್ಗೆ/ಹೆಚ್ಚಿನ ಆದಾಯವನ್ನು ಪಡೆಯುವ ಬಗ್ಗೆ ಸೂತ್ರಗಳನ್ನು ತಿಳಿಸಲಾಗುತ್ತದೆ. ದ್ವಂದದಲ್ಲಿ ಸಿಲುಕಿರುವ, ಓದಿಗೆ ಗಮನವೀಯದ ವಿದ್ಯಾರ್ಥಿಗಳಿಗೆ, ಪದವಿ ಪಡೆದು ಯಾವುದೇ ಉದ್ಯೋಗ ಮಾಡಲು ಸಿಗದೇ ಇರುವವರಿಗೂ ಕೂಡ ಮಾರ್ಗದರ್ಶನವಿದೆ.
ಪಬ್ಲಿಕ್ ರಿಲೇಶನ್ಸ್ ಮ್ಯಾನೇಜ್ಮೆಂಟ್ ಮತ್ತು ಇನ್ನಿತರ ಸೇವೆಗಳು:
ಇದಲ್ಲದೇ ಯಾರಾದರೂ ಅದಾಗಲೇ ಸ್ವಯಂ ಉದ್ಯೋಗಮಾಡುತ್ತಿದ್ದವರು, ಕಲಾವಿದರು, ನೃತ್ಯಪಟುಗಳು, ಸಂಗೀತಗಾರರು, ವಸ್ತುಗಳ ಉತ್ಫಾದಕರು, ಉದ್ದಿಮೆದಾರರು, ಬೇರೇ ಬೇರೇ ರಂಗಗಳಲ್ಲಿ ಸರ್ವಿಸ್ ಕೊಡುವವರು ಸಾರ್ವಜನಿಕ ಪರಿಚಯ, ಪ್ರಚಾರ ಇವುಗಳ ಬಗ್ಗೆ ಆಸಕ್ತರಗಿದ್ದಲ್ಲಿ ಅಂಥವರಿಗೆ ಆ ಯಾ ಸರ್ವಿಸ್ಗಳನ್ನು ಒದಗಿಸಲಾಗುತ್ತದೆ. ಕಳೆಗುಂದಿರುವ ಹಳೆಯ ದಂಧೆಯಲ್ಲಿ ಬೇಸತ್ತಿರುವವರಿಗೆ ಹೊಸ ಮಾರುಕಟ್ಟೆಯ ವೈಖರಿಗಳನ್ನು ಅಳವಡಿಸಿಕೊಳ್ಳಲು ತಿಳಿಸಿಕೊಡಲಾಗುತ್ತದೆ. ಹೊಸಹೊಸ ಆಯೋಜನೆಗಳನ್ನು ಮತ್ತು ಉದ್ದಿಮೆಗಳನ್ನು ಮಾಡುವವರಿಗೆ ಅದರ ಲಾಭಾಲಾಭದ ಬಗ್ಗೆ ವಿವರಣೆ ಒದಗಿಸಲಾಗುತ್ತದೆ. ಹೊಸ ಉತ್ಫನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿ ತ್ವರಿತಗತಿಯಲ್ಲಿ ಅದಕ್ಕೆ ಮಾರುಕಟ್ಟೆ ಒದಗುವಂತೇ ಯೋಜನೆಗಳನ್ನು ರೂಪಿಸಕೊಡಲಾಗುತ್ತದೆ.
ವ್ಯಕ್ತಿತ್ವ ವಿಕಸನದ ಸಾಮೂಹಿಕ ತರಬೇತಿ ಶಿಬಿರಗಳು ಮತ್ತು ಕಾರ್ಪೋರೇಟ್ ಐಟಿ ಟ್ರೇನಿಂಗ್ಗಳು ಲಭ್ಯವಿರುತ್ತವೆ. ಇವುಗಳನ್ನು ಸಂಘಸಂಸ್ಥೆಗಳವರು, ಕಂಪನಿಗಳವರು ಪಡೆದುಕೊಳ್ಳಬಹುದಾಗಿದೆ. ಇನ್ನೂ ಹಲವಾರು ತೆರನಾದ ಸರ್ವಿಸ್ಗಳು ಲಭ್ಯವಾಗುವಂತೇ ನಮ್ಮ ಕಾರ್ಯವೈಖರಿ ವಿಸ್ತಾರಗೊಂಡಿದೆ. ಅಂತೂ ಒಂದು ಉತ್ತಮ ವೇದಿಕೆಯನ್ನು ರೂಪಿಸುತ್ತಿದ್ದೇವೆ ಎಂಬ ಹೆಮ್ಮೆ ನಮ್ಮದಾಗಿದೆ. ಇದು ವೃತ್ತಿ ಸಂಬಂಧಿತ ವಿಷಯವಾದ್ದರಿಂದ ಇದಕ್ಕೆ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಶುಲ್ಕ ವ್ಯಕ್ತಿಗಳು ಮತ್ತು ಅವರು ಕೇಳುವ ವಿಷಯಗಳನ್ನಾಧರಿಸಿರುತ್ತದೆ. ನವೆಂಬರ್ ಮೊದಲವಾರದಲ್ಲಿ ಆರಂಭಗೊಳ್ಳಲಿರುವ ಈ ಸೇವೆಗಳಲ್ಲಿ ಆಸಕ್ತಿ ತಳೆದಿರುವವರು ಈ ಕೆಳಗಿನ ಮಿಂಚಂಚೆ ವಿಳಾಸಕ್ಕೆ ಮಿಂಚಂಚೆ ಕಳಿಸಿ, ತಮ್ಮ ವಿವರಗಳನ್ನು ತಿಳಿಸಿ ನಮ್ಮಿಂದ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ, ಮತ್ತು ಹೆಸರು ನೋಂದಾಯಿಸುವ ಮಾರ್ಗವನ್ನು ತಿಳಿಯಬಹುದಾಗಿದೆ. ಟರ್ನಿಂಗ್ ಪಾಯಿಂಟ್ಗಾಗಿ ನಿರೀಕ್ಷಿಸುತ್ತಿರುವ ಜನ ಉಪಯೋಗಿಸಿಕೊಳ್ಳಬಹುದಾದ ಸೇವೆಗಳು ಲಭ್ಯ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇನೆ. ನಮ್ಮ ಸಂಸ್ಥೆಯ ಮಿಂಚಂಚೆ ಹೀಗಿದೆ :
uddime@gmail.com
ಧನ್ಯವಾದಗಳು.
Posted by ವಿ.ಆರ್.ಭಟ್ (vrbhat06@gmail.com) on September 25, 2011 02:21 PM· permalink
ಎರಡು ಹೆಜ್ಜೆ ಮುಂದಿಟ್ಟಿದ್ದೇನೆ..
ತುಂಬಾ ಚಿಕ್ಕದು ನನ್ನ ಅಕ್ಷರ ಪ್ರಪಂಚ. ಇಲ್ಲಿಯ ವರೆಗೆ ನಾನು ಪೋಸ್ಟಿಸಿದ್ದು; ಅದು ಯಾವ ಪ್ರಾಕಾರ ಅನ್ನುವುದು ಕೆಲವೊಮ್ಮೆ ನನಗೆ ಗೊಂದಲ ಉಂಟಾಗುತ್ತದೆ. ನಾನು ಬರೆದಿದ್ದು ಕಥೆಯೋ ಕವನವೋ, ಕಾದಂಬರಿಯೋ, ಹಾಸ್ಯವೋ, ಹರಟೆಯೋ, ಅಂತೂ ನಾನು ಅದನ್ನು ಏನೆಂಬುದಾಗಿ ತಿಳಿದುಕೊಂಡಿದ್ದೇನೆ ಎನ್ನುವುದನ್ನು ಕಥೆ, ಹರಟೆ, ಕವನ ಎನ್ನುವ ಲೇಬಲ್ ಹಚ್ಚಿ ನಿಮಗೆ ತಿಳಿಸಿದ್ದೇನೆ.ಸಹ ಬ್ಲಾಗಿಗರಿಂದಲೇ ನಾನು ಬರೆಯುವುದನ್ನು ಕಲಿತಿದ್ದು. ಸಾಹಿತ್ಯ ಅದು, ಇದು, ಮಣ್ಣು ಮಸಿ ಎನ್ನುವ ತೀರಾ ಗೋಜಿಗೆ ಹೋಗುವವಳೇನೂ ನಾನಲ್ಲ.. ಆದರೆ ಬಾಲ್ಯದಿಂದಲೂ ವಿಪರೀತ ಓದುವ ಹುಚ್ಚು. ಪಾಠದ ಪುಸ್ತಕಕ್ಕಿಂತ ಬೊಂಬೆಮನೆ, ಚಂದಮಾಮ, ಬಾಲಮಿತ್ರ, ಮಯೂರ, ತುಷಾರ, ತರಂಗ, ವಾರಪತ್ರಿಕೆ, ಪ್ರಜಾಮತ, ಲೆಕ್ಕವಿಲ್ಲದಷ್ಟು ಕಾದಂಬರಿಗಳು, ವಿಧ ವಿಧ ಪುಸ್ತಕಗಳು ಹೀಗೆ ಕಾಲಕ್ಕೆ ತಕ್ಕಂತೆ ವಯಸ್ಸಿಗನುಗುಣವಾಗಿ ಪುಸ್ತಕಗಳ ಸಂತೆಯೇ ನನ್ನೆದುರು.
ಆದರೆ ಈಗೀಗ ಓದಲು ಸಮಯ ಸಾಲುತ್ತಿಲ್ಲ ಎನ್ನುವ ನೆವವಿದೆ..! ಓದದಿದ್ದರೆ ಬರೆಯುವಾಗ ತಡವರಿಸುತ್ತದೆ, ಮೊದಲೆಲ್ಲಾ ಬ್ಲಾಗು ವಾರಕ್ಕೊಮ್ಮೆ ಹೊಸ ಪೋಸ್ಟಿನಿಂದ ಕಂಗೊಳಿಸುತ್ತಿತ್ತು. ಈಗ ವಾರ ಮುಗಿದು ತಿಂಗಳು ಕಳೆದರೂ ಬಾಗಿಲು ಬಳಿದು ರಂಗೋಲೆ ಇಡಲು ಸಾಧ್ಯವಾಗುತ್ತಿಲ್ಲ. ಆದರೂ ಚಿತ್ತಾರದರಮನೆಗೆ ಎರಡು ತುಂಬಿದ ಸಂಭ್ರಮ ಸಡಗರದಿಂದ ಬರೆಯಲು ತೊಡಗಿದ್ದೇನೆ.ಏನು ಬರೆಯಲಿ? ಹೇಗೆ ಬರೆಯಲಿ? ಎನ್ನುವ ಹುಡುಕಾಟದಲ್ಲಿಯೇ ಓಡಾಡುತ್ತಿದ್ದೇನೆ.ಚುನಾವಣೆ ಬಂದಾಗ ರಾಜಕಾರಣಿಗಳು ಎಲ್ಲಾ ತೋರಿಕೆಯ ಕಾಮಗಾರಿಗಳನ್ನೂ ಮಾಡಿ ಮುಗಿಸಲು ಹವಣಿಸುವುದಿಲ್ಲವೇ..? ಹಾಗೆಯೇ. ಬರೆಯಲು ಸುಮಾರು ವಿಷಯ, ವಿಶೇಷ ಇದ್ದರೂ.... ಬರೆಯಬೇಕು ಅಂದುಕೊಂಡ ವಿಚಾರವನ್ನು ಮತ್ಯಾರೋ ಬರೆದಿದ್ದಾರೆ, ಮತ್ತೆ ಅದನ್ನೇ ಬರೆಯುವುದೇನು ಅನ್ನುವ ಪಲಾಯನವಾದ ಕೂಡಾ ಇದೆ....!
ಎಲ್ಲರಿಗೂ ನನ್ನಂತೆ ಆಗುತ್ತಿದೆಯೇನೋ ?ಬ್ಲಾಗ್ ಬರೆಯುವವರ ಉತ್ಸಾಹ ಕಡಿಮೆಯಾದಂತಿದೆ, ಮಾತಿಗೆ ಸಿಕ್ಕವರಲ್ಲಿ , ಏನ್ರೀ ಹೊಸಾ ಪೋಸ್ಟ್ ಇದೆಯಾ ? ..
ನಿಮ್ಮದಿದೆಯಾ..? ಎಂದು ಪುನಃ ಪ್ರಶ್ನಿಸಿ ಎರಡೂ ಕಡೆಗೂ ಇಲ್ಲಪ್ಪಾ .. ಎನ್ನುವ ಉತ್ತರದೊಂದಿಗೆ ಇವರು ನಮ್ಮೊಂದಿಗಿದ್ದಾರೆ ಎನ್ನುವ ಕೆಟ್ಟ ಸಮಾಧಾನ ಹೊಂದುವುದೇ ಆಗಿದೆ.ಇಲ್ಲ ಅಂದರೆ ಅವರೆಲ್ಲಾ ಬರೆದು ಬಿಡುತ್ತಾರೆ ಅನ್ನುವ ಹುಳುಕಿಗಾದರೂ ನಾನೂ ತಡಕಾಡಿ ಬರೆದುಬಿಡಬಹುದಿತ್ತು!
ಇರಲಿ, ನಾನು ತೀರ್ಮಾನಿಸಿದ್ದೇನೆಂದರೆ, ಮೂರು ತುಂಬುವುದರೊಳಗಾಗಿ ಇನ್ನೂ ನಾಲ್ಕಾರು ಪೋಸ್ಟ್ ಹಾಕಿಬಿಡಬೇಕೆಂದು!
ಅರಮನೆಯನ್ನೇ ಕಟ್ಟಲು ಹೋಗಿ ಈಗ 'ಅರ' ಮನೆಯಾಗಿದೆ. ಆಕಾಶದೆತ್ತರಕ್ಕೆ ಕಟ್ಟ ಬೇಕೆಂಬ ಆಸೆ.. ಪುರಸೊತ್ತಿಲ್ಲ..!
ಒಂದಷ್ಟು ಮಳೆಯ ಫೋಟೋಗಳು .. ಚೌತಿಗೆ ಊರಿಗೆ ಹೋದವಳು ಮಳೆಗಾಲದ ಅಬ್ಬರಾಟ ಕಂಡು ಮರಳಿ ಬಂದಿದ್ದೇನೆ. ಬಹಳ ದಿನಗಳೇ ಆಗಿತ್ತು. ನಿಜ ಮಳೆಗಾಲವನ್ನು ಅನುಭವಿಸದೆ. ನಾನು ಊರಿಗೆ ಕಾಲಿಟ್ಟಿದ್ದೆ ತಡ.. ಮಳೆ ಸುರಿಯಲು ಶುರುಮಾಡಿದ್ದು ಬರುವವರೆಗೂ ಹನಿ ಕಡಿಯಲಿಲ್ಲ.
ಸೂರಂಚಿನ ನೀರಿನಲ್ಲಿ ಕಾಲು ತೊಳೆದುಕೊಳ್ಳುವುದು ಮಜಾ ಅಲ್ವೇ..?
ಒಂದು ದೊಡ್ಡ ಮಳೆ, ಹಾಗೆ ಚಿಕ್ಕ ಮಳೆ, ಮತ್ತೊಂದು ಸುಮಾರಿನ ಮಳೆ. ಹೀಗೆ ಮಳೆ, ಮಳೆ, ಮಳೆ, ಹೇಳಲು ಹೊರಟರೆ ಮೂರು ಪೇಜು ಮಳೆಯೇ ಆಗಿಬಿಡುತ್ತದೆ...! ಹೊರ ಹೋಗಲು ಆಗದಿದ್ದುದಕ್ಕೆ ಎಲ್ಲಾ ಮಳೆಯನ್ನೂ ಶಪಿಸುತ್ತಾ, ಕೆಲವರು ಹಳೆ ಕಾಲದ ಮಳೆಯನ್ನು ಹಾಡಿ ಹೊಗಳುತ್ತಾ ಕುಳಿತು ಕೊಂಡದ್ದಾಯ್ತು.
ನಾವು ಶಾಲೆಗೆ ಹೋಗುವಾಗಿನ ಕಾಲದ ಮಳೆ ನಿಜಕ್ಕೂ ನಮಗೆ ಸಂತಸವನ್ನೇ ತರುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಎಲ್ಲರೂ ಸರತಿಯ ಸಾಲಿನಲ್ಲಿ ಮಳೆ ನೀರು ಕಲೆಯುತ್ತಾ ಹೋಗುತ್ತಿದ್ದೆವು ರಸ್ತೆ ಪಕ್ಕದ ಕಾಲುವೆಯಲ್ಲಿ! ಒಬ್ಬರಾದರೂ ರಸ್ತೆಯಲ್ಲಿ ಹೋಗುವವರಿಲ್ಲ. ನೀರು ತುಂಬಿದ ಚಿಕ್ಕ ಚಿಕ್ಕ ಹೊಂಡದಲ್ಲಿ ಪಚ್ಚಂತ ಕಾಲಿಟ್ಟು ಕಾಲಿನ ಪಕ್ಕದಲ್ಲಿ ಮೂಡುವ ನೀರಿನ ರೆಕ್ಕೆಯನ್ನು ನೋಡಿ ಬೆರಗಾಗುತ್ತಿದ್ದೆವು. ನೀರು ಸ್ವಲ್ಪ ಎತ್ತರದಲ್ಲಿ ಬೀಳುವ ಜಾಗಕ್ಕೆ ದರಕಿನ ಕಡ್ಡಿಯನ್ನು ಹಿಡಿದು ಅದು ಕಡ್ಡಿಯ ಕವಲುಗಳಲ್ಲಿ ಹರಡಿಕೊಳ್ಳುವ ವಿನ್ಯಾಸಕ್ಕೆ ಮುದಗೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ಬಿಸಿಲು ಬಿದ್ದಾಗ ಮೂಡುವ ಕಾಮನಬಿಲ್ಲು ರೋಮಾಂಚನ ಮೂಡಿಸುತ್ತಿತ್ತು.
ಮುಂದೆ ಹೋಗುವವರಿಗೆ ಹಿಂದಿನ ಹುಡುಗರು ತಮಗೆ ಮುಂದೆ ಬಿಡಲಿಲ್ಲ ಎನ್ನುವ ಸಂಕಟಕ್ಕೆ ನೀರು ಚಿಮ್ಮಿ ಮೈ ಎಲ್ಲ ಒದ್ದೆ ಮಾಡುವುದು. ನೀರಿನಲ್ಲಿ ಹೋಗುತ್ತಾ ಹೋಗುತ್ತಾ ಪಾದಗಳನ್ನ ನೋಡಿಕೊಳ್ಳುತ್ತಾ ಅದರ ಗುಲಾಬಿ ಬಿಳುಪಿಗೆ ಮೈ ಮರೆಯುತ್ತಿದ್ದೆವು.ಮನೆಗೆ ಬಂದು ನುಣ್ಣನೆಯ ನೆಲಕ್ಕೆಕಾಲು ತೀಡಿ ಚೀಕ್, ಚೀಕ್ ಎನ್ನುವ ಶಬ್ದ ಹೊರಡಿಸುವುದು, ಜೋರು ಮಳೆ ಬರಲೆಂದು ದೇವರಿಗೆ ಒಂದು ಕಟ್ಟು ದೂರ್ವೆ ಹರಕೆ ಮಾಡಿಕೊಳ್ಳುವುದು ಇತ್ತು. ಶಾಲೆಗೆ ರಜೆ ಕೊಡುತ್ತಾರೆಂದು. ರಜೆ ಕೊಟ್ಟರೆ ಮತ್ತೆ ಶಾಲೆ ಯಾವತ್ತು ಶುರುವಾಗತ್ತಪ್ಪಾ ಮನೇಲಿ ಬೇಜಾರು, ಅನ್ನುವ ವೇದನೆ.
ಒಂದೇ ಒಂದಾದರೂ ಮಳೆಯ ಫೋಟೋ ಚನ್ನಾಗಿ ತೆಗೆಯಲಾಗಲಿಲ್ಲ. ನನ್ನವರಲ್ಲಿ ದುಃಖ ತೋಡಿಕೊಂಡರೆ,'' ಮಳೆಯನ್ನು ಅಲುಗಾಡದಂತೆ ನಿಲ್ಲಿಸಿ ಫೋಟೋ ಹೊಡಿ, ಮಳೆ ನಿಂತಿದ್ದಾಗ ಹೊಡಿ,'' ಎನ್ನುವ ಸಲಹೆಯನ್ನೆಲ್ಲಾ ಕೊಟ್ಟರು.
ಮೋಜಿಗೆ ಎಲ್ಲಾ ಚನ್ನಾಗಿತ್ತು ಆಗ. ಬೆಂಗಳೂರಲ್ಲಿ ಮಳೆ ಬಂದರೂ ಬೇಸರ, ಬರದಿದ್ದರೂ ಚಿಂತೆ, ಮಕ್ಕಳಿಗೆ ನೀರು ಆಡಲು ಟೆರೆಸೆ ಗತಿ.
ಮನೆಯಲ್ಲಿಯೇ ಕುಳಿತು ಟೈಮ್ ಪಾಸ್ ಮಾಡಲು ಮಾಡಿದ ಕಜ್ಜಾಯವೆಲ್ಲಾ ಮೆಂದಿದ್ದಾಯ್ತು. ನನ್ನವರು, '' ಹೀಗೆ ಆದರೆ ಮತ್ತೆ ಕೂತವರನ್ನು ಎಬ್ಬಿಸಲು ಯಾವುದಾದರೂ ಮಿನಿ ಕ್ರೈನ್ ಬಾಡಿಗೆಗೆ ಸಿಗುತ್ತಾ ಕೇಳಬೇಕು'' ಎಂದು ನನ್ನನ್ನು ಉದ್ದೇಶಿಸಿಯೇ ಹೇಳಿದರು..! ಎಲ್ಲರೆದುರು ಯಾಕೆ ಅಂತ ನಾನೂ ಸುಮ್ಮನಾದೆ..!
ನನ್ನವರ ಊರಿಗೆ ಹೋಗುವಾಗ ಲಾಂಚಲ್ಲಿ ಹೋಗಬೇಕು.. ಅಲ್ಲೂ ಮಳೆ.ಮಳೆ. ಶರಾವತಿ ಕೂಡಾ ಅಬ್ಬರಿಸುತ್ತಿದ್ದಳು.
ಮನೆ ಒಳಗಿನಿಂದಲೇ ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆದಿದ್ದಾಯ್ತು.. ಹೊತ್ತು ಹೋಗದೆ.
ಅಂತೂ ಹಬ್ಬಕ್ಕೆ ಸುಲಭದ ಕೆಲಸ ಹಮ್ಮಿಕೊಂಡು ಸಂಭ್ರಮಿಸುತ್ತಿದ್ದೇನೆ. ಈ ಸಲ ಮಳೆಯ ಹೆಳೆಯೊಂದಿಗೆ ಚಿತ್ತಾರದರಮನೆಯಲ್ಲಿ ಹುಟ್ಟು ಹಬ್ಬ..!!
Posted by ಚುಕ್ಕಿಚಿತ್ತಾರ (noreply@blogger.com) on September 25, 2011 01:37 PM· permalink
ಸಾಮಾನ್ಯವಾಗಿ ಮಕ್ಕಳ ಮನಸ್ಸನ್ನು ‘ಖಾಲಿ ಹಾಳೆ'ಗೆ ಹೋಲಿಸುತ್ತಾರೆ. ಬಹುಷಃ ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿದ್ದು, ಏನನ್ನಾದರೂ ಕಲಿಯಲು ಸಮರ್ಥರಾಗಿರುತ್ತಾರೆ ಎಂಬ ಕಾರಣಕ್ಕಾಗಿ ಹಾಗೆ ಹೇಳಿರಲೂಬಹುದು. ‘ಖಾಲಿ'ಯಾಗಿರುವುದು ಎಂದರೆ ಮುಂದೆ ಭರ್ತಿಯಾಗಲು ಸಿದ್ಧವಾಗಿರುವುದು ಎಂದು ತಿಳಿಯಬಹುದೇನೋ! ಖಾಲಿಯಾಗಿರುವುದು ಖಾಲಿಯಾಗೇ ಉಳಿದುಬಿಟ್ಟರೆ ನಿಷ್ಪ್ರಯೋಜಕವೆನಿಸಿಬಿಡಲೂಬಹುದು ಎನ್ನುವ ಆಶಯದ ಒಂದು ‘ಹನಿ' ಹೀಗಿದೆ:
‘ಬರೆಯಲೆಂದೇ ಭದ್ರಪಡಿಸಿದ್ದೆ
ಈ ಬಿಳಿಹಾಳೆಯ
ಸಮಯ ಸಿಕ್ಕಾಗ,
ಆದರೀಗ ಸುಕ್ಕು
ನಿಷ್ಪ್ರಯೋಜಕ
ಕಾಲ ಕೂಡಿಬಂದಾಗ!'
ಆದರೆ ಖಾಲಿಯು ಭರ್ತಿಯಾಗುವಾಗ ಯಾವುದರಿಂದ ಆಗಬೇಕು? ಎನ್ನುವುದೂ ಮುಖ್ಯವಾಗುತ್ತದೆ. ಕೇವಲ ಭರ್ತಿಗೊಳಿಸಲೆಂದು ಮನಸ್ಸಿಗೆ ಬಂದದ್ದನ್ನೆಲ್ಲಾ ಗೀಜಿದರೆ ಆಗುತ್ತದೆಯೆ? ಎಂದು ನಾವು ಅಂದುಕೊಳ್ಳಬಹುದು. ಈ ನಿಟ್ಟಿನಲ್ಲಿ ಚಿಂತಿಸುವಂತೆ ಮಾಡುವ ಸುಷ್ಮಸಿಂಧು ಅವರ ವಿಶಿಷ್ಟ ಕನಸಿನ ಒಂದು ತುಣುಕು ಈ ರೀತಿ ಇದೆ:
'ಆತ ಉನ್ನತ ಧೇಯೋದ್ದೇಶ ಹೊಂದಿರುವವನು ತಾನು ಎಂದು ಭಾವಿಸಿದ್ದ ವ್ಯಕ್ತಿ. ಆದರೆ ಅವನಿಗೆ ದೊರಕಿದ್ದು ಒಂದು 'ಪುಸ್ತಕ' ಮತ್ತು 'ಲೇಖನಿ'. ಅವನಿಗೆ ಅದರಲ್ಲಿ ಏನನ್ನೂ ಬರೆಯುವ ಅವಕಾಶವಿತ್ತು. ನಿಯಮವೆಂದರೆ 'ದಿನವೂ ಒಂದು ಪುಟ ತೆರೆಯುವುದು, ಅಲ್ಲಿ ಬರೆದ ನಂತರ ಮುಂದಿನಪುಟ. ಆತನೇನಾದರೂ ಅಂದು ಏನೂ ಬರೆಯದೇ ಇದ್ದರೂ ಮರುದಿನ ನಂತರದ ಪುಟ ತೆರೆದುಕೊಂಡುಬಿಡುವುದು. ಮತ್ತೆ ಹಿಂದೆ ಹೋಗುವುದು ಅಸಾದ್ಯ!' ಆತ ಪುಸ್ತಕ ಸಿಕ್ಕಿದ ತತ್ತಕ್ಷಣವೇ ಚಿಂತಿಸಲಾರಂಭಿಸಿದ. ಎಷ್ಟಾದರೂ ತನ್ನ ಪ್ರಕಾರ ಆತ ಮಹಾನ್ ವ್ಯಕ್ತಿ! ಏನೇನೋ ಬರೆಯುವುದು ಸಾಧ್ಯವಿಲ್ಲ. ಹಾಗಾಗಿ ಚಿಂತನೆ ಜಾರಿಯಲ್ಲಿತ್ತು! ಅಂದು ಪುಸ್ತಕದ ಕಡೆಯ 'ಪುಟ', ಅವನ 'ಮಸ್ತಕ'ದ ಪದಗಳಿಗಾಗಿ ಕಾದು ಕುಳಿತಿತ್ತು. ಏನೋ ಹೊಳೆದಂತಾಗಿ ಕಡೆಯ ಕ್ಷಣದ ತದನಂತರದ ಗಳಿಗೆಯಲ್ಲಿ ಲೇಖನಿಯನ್ನು ಪುಟದ ಮೇಲಿರಿಸಿದ. ಅದು ಇದ್ದಕ್ಕಿದ್ದಂತೆ ಮಾಯವಾಗಿ ಅಲ್ಲೊಬ್ಬ ಮನುಷ್ಯ ನಿಂತು ಹೀಗೆಂದ, 'ಎಷ್ಟೋ ಮಹತ್ಕಾರ್ಯಗಳು ಮಹಾನ್ ತಪ್ಪುಗಳ ನಂತರ ಘಟಿಸುತ್ತವೆ. ಸಣ್ಣ ತಪ್ಪುಗಳ ದೊಡ್ಡತನವನ್ನು, ಮಹತ್ವವನ್ನು ಅರಿತವನು ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾದ್ಯ..' ಅವನೊಡನೆ ಲೇಖನಿಯೂ ಕಣ್ಮರೆಯಾಯಿತು!' ಈ ಕಥೆಯೂ ಮುಗಿದಿತ್ತು.
ಜೀವನದ ಮಹತ್ವದ ಮೌಲ್ಯಗಳೇ ಸುಧೀರ್ಘ ಕಥಾರೂಪವಾದಂತಿರುವ ವಿಶಿಷ್ಟ ಕನಸುಗಳ ಕಥಾ ಸಂಕಲನ ‘ಪಯಣ ಸಾಗಿದಂತೆ........'ಯನ್ನು ತನ್ನ ಹದಿವಯಸ್ಸಿನಲ್ಲೇ ಪ್ರಕಟಿಸಿರುವ ಸುಷ್ಮಸಿಂಧು ಅವರ ಈ ಕನಸು ಚಿಂತನಯೋಗ್ಯವಾಗಿದೆ. ಏನೋ ಮಹತ್ತರವಾದದ್ದನ್ನೇ ಸಾಧಿಸಬೇಕು ಎಂದು ಅಪೇಕ್ಷಿಸುವ ನಾವು ನಮ್ಮ ಎಷ್ಟೋ ಅಮೂಲ್ಯ ಆಯುಷ್ಯವನ್ನು ಏನನ್ನೂ ಮಾಡದೆಯೇ ಕಳೆದೂಬಿಡಬಹುದು.
ಪರಿಶುದ್ಧರಾಗೇ ಇರಬೇಕೆಂದು ಹಂಬಲಿಸುವರಿಗೆ ಕಡೆಗೆ ‘ಖಾಲಿ'ಯಾಗಿಯೇ ಉಳಿಯುವುದು ಹೇಗೆ ಅನಿವಾರ್ಯವಾಗುತ್ತದೆ ಎನ್ನುವುದನ್ನು ಖಲೀಲ್ ಗಿಬ್ರಾನ್ ರ ‘ಮಂಜು ಬಿಳಿಯ ಹಾಳೆಯೊಂದು ಹೀಗೆ ಹೇಳಿತು........'(Said a Sheet of Snow-white Paper.......) ಎನ್ನುವ ಕಥೆಯು ಮಾರ್ಮಿಕವಾಗಿ ತಿಳಿಸುತ್ತದೆ. ಮಹಾನ್ ದಾರ್ಶನಿಕ, ಕವಿ ಖಲೀಲ್ ಗಿಬ್ರಾನ್ ೧೯೨೦ರಲ್ಲಿ ಪ್ರಕಟಿಸಿದ ‘ಅಗ್ರಗಾಮೀ' ಅಥವಾ ‘ಮುಂದೆ ನಡೆಯುವವನು' (The Forerunner- His Parables and Poems) ಎಂಬ ಅರವತ್ನಾಲ್ಕೇ ಪುಟಗಳ ಪುಟ್ಟ ಪುಸ್ತಕದಲ್ಲಿ ಅತ್ಯಂತ ಕಿರಿದಾದದ್ದೂ, ಕಾವ್ಯಮಯವಾದದ್ದೂ ಆದ ಈ ಕಥೆ ಹೀಗಿದೆ:
‘ಮಂಜು ಬಿಳಿಯ ಹಾಳೆಯೊಂದು ಹೀಗೆ ಹೇಳಿತು: ‘ಶುದ್ಧವಾಗಿ ನಾನು ಸೃಷ್ಟಿಯಾದೆ. ಎಂದೆಂದೂ ನಾನು ಶುದ್ಧವಾಗೇ ಇರುತ್ತೇನೆ. ಕತ್ತಲು ನನ್ನನ್ನು ಮುಟ್ಟುವುದಾಗಲೀ, ಅಶುದ್ಧವಾದದ್ದು ನನ್ನನ್ನು ಸಮೀಪಿಸುವುದನ್ನಾಗಲೀ ಅನುಭವಿಸುವುದಕ್ಕಿಂತಾ ಸುಟ್ಟು ಬಿಳಿಯ ಬೂದಿಯಾದೇನು!'
ಕಾಗದ ಹೇಳುತ್ತಿದ್ದುದನ್ನು ಮಸಿಕುಡಿಕೆ ಕೇಳಿತು. ತನ್ನ ಕಪ್ಪು ಹೃದಯದಲ್ಲಿ ಅದು ನಕ್ಕಿತು. ಆದರೆ ಅದಕ್ಕೆ ಕಾಗದವನ್ನು ಸಮೀಪಿಸುವ ಧೈರ್ಯ ಬರಲಿಲ್ಲ. ಬಹು ಬಣ್ಣದ ಪೆನ್ಸಿಲ್ಲುಗಳೂ ಅದರ ಮಾತನ್ನು ಕೇಳಿದವು. ಆದರೆ ಹತ್ತಿರ ಹೋಗಲೇ ಇಲ್ಲ.
ಆ ಮಂಜು ಬಿಳಿಯ ಹಾಳೆ ಎಂದೆಂದೂ, ಉಳಿದೇ ಉಳಿಯಿತು, ಶುದ್ಧವಾಗಿ, ಶುಚಿಯಾಗಿ-ಆದರೆ ಖಾಲಿಯಾಗಿ!'
ತಮ್ಮ ‘ಖಲೀಲ್ ಗಿಬ್ರಾನ್' ಪುಸ್ತಕವನ್ನು ಪ್ರಕಟಿಸುವಾಗ ಮೊದಲ ಮಾತಿನಲ್ಲಿ ಪ್ರಭುಶಂಕರ ಅವರು ಹೀಗೆ ಹೇಳುತ್ತಾರೆ: ‘ನಾನು ಗಿಬ್ರಾನ್ನನ್ನು ಮೆಚ್ಚಿದ್ದೇನೆ ಎಂಬ ಕಾರಣದಿಂದ ಮಾತ್ರ ಅವನನ್ನು ನಾನು ಕನ್ನಡಿಗರಿಗೆ ಪರಿಚಯ ಮಾಡಿಕೊಡುತ್ತಿಲ್ಲ. ಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯಮಯವಾದ ಚಿಂತನೆಯ ರೀತಿಗಳುಂಟು, ಗದ್ಯದ ಶೈಲಿಗಳುಂಟು ಎಂಬುದನ್ನು ನಮ್ಮ ಕನ್ನಡ ಜನ ತಿಳಿಯಬೇಕು ಎಂಬುದು ನನ್ನ ಆಶೆ....'
‘ತುಂಬಿದ ಬಟ್ಟಲು' ಎಂಬ ಅತ್ಯಂತ ಪ್ರಚಲಿತದಲ್ಲಿರುವ ಝೆನ್ ಕಥೆಯಲ್ಲಿ ಈ ರೀತಿ ಇದೆ: ‘ನಾನ್ಇನ್ ಎನ್ನುವ ಒಬ್ಬ ಜಪಾನೀ ಝೆನ್ ಗುರು ಇದ್ದರು. ಇವರಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯಲೆಂದು ದೂರದೂರದ ಊರುಗಳಿಂದ ವಿದ್ವಾಂಸರು ಬರುತ್ತಿದ್ದರು. ಒಮ್ಮೆ ಒಬ್ಬ ಪ್ರಾಧ್ಯಾಪಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವವರಾಗಿದ್ದ ವಿದ್ವಾಂಸರು ಇವರ ಬಳಿ ಬಂದು ಝೆನ್ ಕುರಿತು ಶಿಕ್ಷಣವನ್ನು ನೀಡುವಂತೆ ವಿನಂತಿಸಿಕೊಂಡರು. ಗುರುಗಳು ಮುಗುಳ್ನಗುತ್ತಾ ಅವರಿಗೆ ಚಹಾ ಕುಡಿಯುವಂತೆ ಹೇಳಿ, ಚಹಾ ತಂದರು. ವಿದ್ವಾಂಸರ ಮುಂದೆ ಚಹಾ ಬಟ್ಟಲನ್ನು ಇಟ್ಟು, ಅದಕ್ಕೆ ಪಾತ್ರೆಯಿಂದ ಚಹಾ ಸುರಿಯಲಾರಂಭಿಸಿದರು. ಬಟ್ಟಲಿನಲ್ಲಿ ಚಹಾ ತುಂಬಿ ಸುರಿಯಲಾರಂಭಿಸಿದರೂ ಗುರುಗಳು ಚಹಾ ಸುರಿಯುವುದನ್ನು ನಿಲ್ಲಿಸಲಿಲ್ಲ. ವಿದ್ವಾಂಸರಿಗೆ ಆಶ್ಚರ್ಯವಾಯಿತು. ‘ಗುರುಗಳೇ, ಬಟ್ಟಲಿನಲ್ಲಿ ಚಹಾ ತುಂಬಿಕೊಂಡಿದೆ. ನೀವು ಮತ್ತೆ ಸುರಿಯುತ್ತಿದ್ದರೆ ಅದು ಬಟ್ಟಲಿನೊಳಗೆ ಸೇರುವ ಬದಲು ನೆಲದ ಮೇಲೆ ಚೆಲ್ಲಿಹೋಗುತ್ತದೆ,' ಎಂದರು.
‘ಈ ಬಟ್ಟಲಿನ ಹಾಗೆಯೇ ನೀನೂ ಸಹ ನಿನ್ನದೇ ಅಭಿಪ್ರಾಯಗಳಿಂದ ತುಂಬಿಹೋಗಿದ್ದೀಯ. ಅದನ್ನೆಲ್ಲಾ ನೀನು ಹೊರಹಾಕಿ ಖಾಲಿಯಾಗುವವರಗೆ ನಾನು ಏನು ಹೇಳಿದರೂ ಅದು ನಿನ್ನೊಳಗೆ ಸೇರುವ ಬದಲು ಹೊರಗೆಲ್ಲೋ ಚೆಲ್ಲಿಹೋಗುತ್ತದೆ,' ಎಂದು ಹೇಳಿದರು ಗುರುಗಳು.
ಹೊಸತನ್ನು ಕಲಿಯಲು ನಮ್ಮ ಮನಸ್ಸು ಮಗುವಿನ ಮನಸ್ಸಿನಂತೆ ‘ಖಾಲಿ'ಯಾಗಬೇಕು. ಆದರೆ ಕಡೆತನಕ 'ಖಾಲೀ ಹಾಳೆ'ಯಂತೆ ಉಳಿಯಬಾರದು ಎಂದು ತಿಳಿಯಬಹುದಲ್ಲವೆ?
Posted by prabhamani nagaraja (noreply@blogger.com) on September 25, 2011 01:18 PM· permalink
ಇಂದು ಮುಂಜಾನೆ ಸುಮಾರು ಹನ್ನೊಂದು ಗಂಟೆಗೆ ಆಸ್ಪತ್ರೆಯ O.P.D. ಯಲ್ಲಿ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದೆ.ಸುಮಾರು ಹದಿನೆಂಟು ವರ್ಷ ವಯಸ್ಸಿನ ಹುಡುಗನನ್ನು ಜ್ವರ ಮತ್ತು ಕೆಮ್ಮಿಗೆ ಚಿಕಿತ್ಸೆ ಕೊಡಿಸಲು ಅವನ ತಾಯಿ ಕರೆದುಕೊಂಡು ಬಂದಿದ್ದರು.ಆ ಹುಡುಗನ್ನು ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನೋಡಿದ್ದರಿಂದ ಅವನ ಓದಿನ ಬಗ್ಗೆ ವಿಚಾರಿಸಿದೆ.ಹುಡುಗ ಸಾಗರದಲ್ಲಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ .ಅವನನ್ನು ಪರೀಕ್ಷೆ ಮಾಡಿ ಔಷದಿ ಬರೆದು ಕೊಟ್ಟೆ.ಹೋಗುವಾಗ ಅವನ ತಾಯಿ "ಸರ್.....,ಹದಿನೆಂಟು ವರ್ಷದ ಹಿಂದೆ ಚಕ್ರಾನಗರದಲ್ಲಿದ್ದಾಗ
ಈ ಹುಡುಗನ ಡೆಲಿವರಿ ಮಾಡಿದ್ದು ನೀವೇ ಸರ್.ನಿಮಗೆ ನೆನಪಿಲ್ಲಾ ಅಂತ ಕಾಣುತ್ತೆ.ಮಗು ಹುಟ್ಟಿದ ತಕ್ಷಣ ಉಸಿರಾಟವಿಲ್ಲದೆ ಮೈ ಎಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು.ನೀವು ತಕ್ಷಣ ಬಾಯಿಯಿಂದ ಮಗುವಿನ ಬಾಯಿಗೆ ಉಸಿರು ಕೊಟ್ಟು ಮಗುವನ್ನು ಉಳಿಸಿ ಕೊಟ್ಟಿರಿ.ನಿಮ್ಮ ಉಪಕಾರವನ್ನು ನಾವು ಯಾವತ್ತೂ ಮರೆಯೋದಿಲ್ಲಾ ಸರ್"ಎಂದು ಕಣ್ಣಿನಲ್ಲಿ ನೀರು ತಂದು ಕೊಂಡರು.ಹುಡುಗ ಬಗ್ಗಿ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ.ಇದ್ದಕ್ಕಿದ್ದಂತೆ ಅವನು ನನ್ನ ಕಾಲು ಮುಟ್ಟಿದ್ದರಿಂದ ನಾನು ಕೊಂಚ ಗಲಿಬಿಲಿ ಗೊಂಡೆ.ನನಗೆ ಏನು ಹೇಳಬೇಕೋ ತೋಚದೆ ಮಾತು ಹೊರಡಲಿಲ್ಲ.ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾ ಭಾವವಿತ್ತು.ಅವ್ಯಕ್ತ ಆನಂದದ ಒಂದು ವಿಶಿಷ್ಟ ಅವಿಸ್ಮರಣೀಯ ಅನುಭೂತಿ ಉಂಟಾಗಿತ್ತು!!
Posted by Dr.D.T.Krishna Murthy. (noreply@blogger.com) on September 23, 2011 01:04 AM· permalink
‘ದೇಹಂ ಭದ್ರಾಣಿ ಪಶ್ಯಂತಿ' ಎನ್ನುವಒಂದು ಸಂಸ್ಕೃತದಉಕ್ತಿ ಇದೆ. ‘ನಮ್ಮದೇಹವನ್ನು ನಾವು ಸುಸ್ಥಿತಿಯಲ್ಲಿಇರಿಸಿಕೊಳ್ಳಬೇಕು' ಎಂದು ಈ ಮಾತು ಅರ್ಥೈಸುತ್ತದೆ. ‘ಶರೀರಮಾಧ್ಯಂ ಖಲು ಧರ್ಮಸಾಧನಂ' ಎನ್ನುವ ಮಾತಿನ ಆಶಯವೂ ನಮ್ಮ ಯಾವುದೇ ಕಾರ್ಯ ನಿರ್ವಹಣೆಗೂ, ಸಾಧನೆಗೂ ನಮ್ಮ ಈ ಶರೀರದ ಉತ್ತಮವಾದ ಅಸ್ಥಿತ್ವ ಬಹಳ ಪ್ರಮುಖವಾಗುತ್ತದೆ ಎಂದೇ ಇದೆ.
ಹುಟ್ಟಿದ ತಕ್ಷಣವೇ ಶಿಶುವಿನ ದೇಹವು ತನ್ನ ಸ್ವತಂತ್ರ ಕ್ರಿಯೆಗಳನ್ನು ಪ್ರಾರಂಭಿಸುತ್ತದೆ. ತಾಯಿಯು ಅದರ ಎಲ್ಲಾ ದೈನಂದಿನ ದೈಹಿಕ ಚಟುವಟಿಕೆಗಳೂ ಸಮರ್ಪಕವಾಗಿ ನಡೆಯುತ್ತಿದೆಯೇ ಎನ್ನುವುದನ್ನು ಗಮನಿಸುತ್ತಾ, ಬೇಕು-ಬೇಡಗಳನ್ನು ಪ್ರೀತಿಯಿಂದ ಪೂರೈಸುತ್ತಿರುತ್ತಾಳೆ. ಇಲ್ಲಿ ಆ ‘ಪ್ರೀತಿ'ಎನ್ನುವುದು ಮಗುವಿಗೆ ಎಲ್ಲಾ ರೀತಿಯ ಭದ್ರತೆಯನ್ನೂ ನೀಡಿ ಅದು ತನ್ನ ಅಸ್ಥಿತ್ವವನ್ನು ಆನಂದಿಸಲಾರಂಭಿಸುತ್ತದೆ. ಬೆಳೆದಂತೆ ಕ್ರಮೇಣ ತನ್ನನ್ನು ತಾನು ನಿರ್ವಹಿಸಿಕೊಳ್ಳುವ ಜವಾಬ್ಧಾರಿ ತಾಯಿಯ ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ ವರ್ಗಾವಣೆಯಾಗಲಾರಂಭಿಸುತ್ತದೆ. ಒಂದು ಹಂತದಲ್ಲಿ ಸಂಪೂರ್ಣವಾಗಿ ತನ್ನನ್ನು ತಾನೇ ನಿಭಾಯಿಸಿಕೊಳ್ಳಬೇಕಾಗುತ್ತದೆ. ಅಲ್ಲಿಂದಲೇ ಸಮಸ್ಯೆಗಳೂ ಪ್ರಾರಂಭವಾಗುತ್ತವೆ!
ಈ ‘ದೇಹ' ಎನ್ನುವುದು ದೇಹ ಮಾತ್ರವಲ್ಲ. ಅದರ ಆರೋಗ್ಯದ ಸ್ಥಿತಿ ಮನಸ್ಸಿನ ಏರುಪೇರುಗಳೊಂದಿಗೆ ಮಿಳಿತವಾಗಿರುತ್ತದೆ.
Posted by prabhamani nagaraja (noreply@blogger.com) on September 22, 2011 04:29 PM· permalink
ನಗು ಮುಖ...
ನಾ..
ಒಳಗೊಳಗೆ ಉಮ್ಮಳಿಸಿ..
ನರಳಿ..
ನರಳುವ..
ನೆರಳುಗಳು..
ನಲ್ಲಾ...
ನಿನಗೆ ಕಾಣದ..
Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on September 22, 2011 03:42 PM· permalink

ವಾದ್ಯದಮೇಲೆ ಓಡಾಡುವ ’ನಡೆ’ ಇದೆ !
ಕವಳದ ಸಂಚಿ[ಎಲೆಯಡಿಕೆ ಚೀಲ] ಬಗಲಲ್ಲಿ ಇಟ್ಟುಕೊಂಡು ಹೊರಟುಬಿಟ್ಟರೆ ಕೆಲವರ ಕೆಲಸವೇ ಮನೆ ಮನೆ ಸುತ್ತುವುದು. ಹಕ್ಕೆಚಡಿ ಪುರಾಣ ಹೇಳುತ್ತಾ ಇದ್ದಿದ್ದಕ್ಕೆ ಕೈಕಾಲು ಸೇರಿಸಿಯೋ ಅಥವಾ ಇಲ್ಲದಿದ್ದುದನ್ನೋ ಊದ್ದುದ್ದ ನಾಲಿಗೆ ಎಳೆಯುತ್ತಾ ಹೇಳುವುದರಲ್ಲಿ ಇಂಥಾ ಜನ ನಿಸ್ಸೀಮರಿರುತ್ತಾರೆ. ಹೆರೋಲೆ ಅಪ್ಪಚ್ಚಿ ಸತ್ತಮೇಲೆ ಚೌಡೀ ಮತ್ತು ಜಟ್ಗ, ಕೀಳು ವಗೈರೆ ದೇವತೆಗಳನ್ನು ಪೂಜೆಮಾಡಿ ಆದರಿಸುವವರು ಕಮ್ಮಿ ಆಗಿದ್ದಾರೆ ಎಂಬುದು ಕೆಲವರ ಹೇಳಿಕೆಯಾದರೂ ಪೂಜೆಗಳಂತೂ ನನಗೆ ತಿಳಿದ ಮಟ್ಟಿಗೆ ಇನ್ನೂ ನಡೆದೇ ಇವೆ.
ನಾನೇನಾದರೂ ಬಿದ್ದು ಕಲ್ಲಿಗೆ ತಲೆಬಡಿದು ತಲೆಯೊಡೆದು ಸತ್ತುಹೋಗದೇ ಬದುಕಿ ನಿಮ್ಮೆದುರು ಬರೆಯುತ್ತಿದ್ದರೆ ಅದಕ್ಕೆ ಕಾರಣ " ನಿನಗೆ ಹೆದರಿಕೆಯಾಗದಂತೇ ಜೊತೆಗೇ ಶ್ರೀಧರಸ್ವಾಮಿಗಳಿದ್ದಾರೆ " ಎಂದ ಮನೆಯ ಹಿರಿಯರ ಮಾತು. ಇಲ್ಲದಿದ್ದರೆ ಈಲೋಕಕ್ಕೆ ಬಂದಷ್ಟೇ ವೇಗದಲ್ಲಿ ನಾನು ಮರಳಿಯೂ ಬಿಡುತ್ತಿದ್ದೆ! ಚಿಕ್ಕವರಿರುವಾಗ ನಮಗೇನು ಪೇಟೇ ಮಕ್ಕಳ ಥರ ಯೂನಿಫಾರ್ಮು, ಸಾಕ್ಸು ಶೂ ಹಾಕಿ ಶಾಲೆಗೆ ಕಳಿಸುವುದು ಕರಕೊಂಡುಬರುವುದು ಇದೆಲ್ಲಾ ಇರಲಿಲ್ಲ. ಸಿಕ್ಕಿದ ಚಡ್ಡಿಯನ್ನು ಸಿಗಿಸಿಕೊಂಡು ಸವೆದ ಹವಾಯಿಯಿದ್ದರೆ ಅದನ್ನೆ ಮೆಟ್ಟಿಕೊಂಡು ಹತ್ತು ಹರದಾರಿ ನಡೆದೇ ಹೋಗಬೇಕಾಗಿತ್ತು ಶಾಲೆಗೆ. ಅದುಬಿಡಿ ಶಾಲೆಗೆ ಹೋಗುವುದಕ್ಕಿಂತಾ ಹೆಚ್ಚಾಗಿ ನೆನೆಸಿದ ಭತ್ತ ತೆಗೆದುಕೊಂಡು ಮಿಲ್ಲುಮಾಡಿಸಿ ಅವಲಕ್ಕಿತಯಾರಿಸಿಕೊಂಡು ಬರುವುದು, ಅಂಗಡಿಯಿಂದ ರವೆ, ಹಿಟ್ಟು, ತರಕಾರಿ ಇತ್ಯಾದಿಗಳನ್ನು ಅರ್ಜೆಂಟಿಗೆ ತಂದುಕೊಡುವುದು, ಕೊಟ್ಟಿಗೆಯಲ್ಲಿರುವ ನಮ್ಮ ಹಸುಗಳು ಹಾಲು ಬತ್ತಿಸಿಕೊಂಡಾಗ ನಿತ್ಯ ನಿಗದಿತವೇಳೆಗೆ ಹಾಲು ಸಿಗುವ ಬೇರೇ ಮನೆಯಿಂದ ಹಾಲು ತರುವುದು, ಬೇಸಿಗೆಯಾದರೆ ಅಡಕೆ ತೋಟಕ್ಕೆ ನೀರುಬಾರಿ ಮಾಡುವುದು, ಭಟ್ಟರ[ಪುರೋಹಿತರ] ಮನೆಗೆ ಹೋಗಿ ಅವರು ನಮ್ಮಲ್ಲೇ ಬಿಟ್ಟುಹೋಗಿದ್ದ ಸಿದ್ದಕ್ಕಿ-ಕಾಯಿಗಳನ್ನು ತಲ್ಪಿಸಿಬರುವುದು ಇತ್ಯಾದಿ ’ಕುನ್ನಿಗೆ ಕೆಲಸವಿಲ್ಲ ಕೂರಲು ಪುರುಸೊತ್ತಿಲ್ಲ’ ಎಂಬ ರೀತಿ ಕೆಲಸಗಳು ಅಡರಿಕೊಂಡೇ ಇರುತ್ತಿದ್ದವು.
ಕೊಟ್ಟ ಯಾವುದೇ ಕೆಲಸಗಳನ್ನು ಸ್ವಲ್ಪ ಆಟವಾಡುತ್ತ ತಡವಾಗಿ ಮಾಡುವುದಿತ್ತು ಬಿಟ್ಟರೆ ಕೆಲಸ ಮಾಡುವುದಿಲ್ಲ ಎನ್ನುವುದು ನಮ್ಮ ಜಾಯಮಾನವೇ ಅಲ್ಲ. ಕೆಲಸದ ಜೊತೆಜೊತೆಗೆ ಆಗಾಗ ಹಕ್ಕೆಚಡಿ ಪುರಾಣಿಕರ ಕಥೆಗಳನ್ನು ಕೇಳುವುದೂ ಅಭ್ಯಾಸವಾಗಿಬಿಟ್ಟಿತ್ತು! ತಂಬೂರಿಯಂಥಾ ಬಾಯಿತುಂಬಾ ಕವಳದ ಕೆಂಪುಎಂಜಲನ್ನು ತುಂಬಿಕೊಂಡು ಮಧ್ಯೆ ಮಧ್ಯೆ " ಗಾಗಾಕ್ ಗಾಗಾಕ್ " ಎಂದು ಗಂಟಲಿಗೆ ಹೋಗುವ ಆ ಮಿಶ್ರಣವನ್ನು ವಾಪಾಸು ಬಾಯಿಗೆ ಎಳೆಯುತ್ತಾ ತಮ್ಮದೇ ಲೋಕದಲ್ಲಿ ಆನಂದತುಂದಿಲರಾಗಿ ವಿಹರಿಸುತ್ತಾ ಕಥಾಕಾಲಕ್ಷೇಪಮಾಡುವ ಜನ ಬಂದುಬಿಟ್ಟರೆ, ಹಾಗೆ ಬಂದ ಅವರನ್ನು ಜಾಸ್ತಿಹೊತ್ತು ಕೂರಿಸಿಕೊಳ್ಳಲೂ ಆಗದೇ ಎದ್ದುಹೋಗು ಎಂದು ಹೇಳಲೂ ಆರದೇ ತಮ್ಮೊಳಗೇ ಒದ್ದಾಡುವ ನಮ್ಮ ಹಿರಿಯರು ಬರಿದೇ ಹೂಂ ಗುಟ್ಟಿದರೂ ಸಾಕು ಅವರು ಕಥೆಹೇಳುತ್ತಲೇ ಇರುತ್ತಿದ್ದರು! ಕೆಲವು ಕಥೆಗಳು ನಮ್ಮನೆಯ ಹಿರಿಯರಿಗೆ ಬೇಡವಾದರೂ ನಮಗೆ ಬೇಕಾಗಿಬಿಡುತ್ತಿದ್ದವು !!
ಗುಂಡಬಾಳೆಯಲ್ಲಿ ವರ್ಷದ ೫ ತಿಂಗಳು ಒಂದೇ ವೇದಿಕೆಯಲ್ಲಿ ಹರಕೆಬಯಲಾಟ[ಯಕ್ಷಗಾನ]ನಡೆಯುತ್ತದೆ-ಅದು ಕರ್ನಾಟಕದ ಮಂದಿ ಸೇರಿದಂತೇ ಬೇರೇ ರಾಜ್ಯಗಳವರಿಗೂ ಗೊತ್ತು. ಯಾಕೆಂದರೆ ಜಿ.ಎಸ್.ಬಿ ಸಮುದಾಯದ ಸಂಪರ್ಕ ಎಲ್ಲೆಲ್ಲಾ ಇದೆಯೋ ಅಲ್ಲೆಲ್ಲಾ ಆ ಸುದ್ದಿ ಹಬ್ಬಿರುತ್ತದೆ. ಮೊದಲು ಎಲ್ಲಿನೋಡಿದರೂ ಗದ್ದೆಯೋಗದ್ದೆ ಎನ್ನುವ ಸುಮಾರು ೪೦-೫೦ ಎಕರೆಗಿಂತಾ ಹೆಚ್ಚಿನ ಬಹುದೊಡ್ಡ ಬಟಾಬಯಲಿನ ನಡುವೆ ಒಂದುಜಾಗದಲ್ಲಿ ಸಣ್ಣಗೆ ಚಪ್ಪರಕಟ್ಟಿ ಅದನ್ನೇ ವೇದಿಕೆ ಎಂದು ತಿಳಿದು ಆಟ ನಡೆಸುತ್ತಿದ್ದರು. ನಾವೆಲ್ಲಾ ಹುಟ್ಟುವುದಕ್ಕೂ ಮುಂಚೆ ರಾತ್ರಿ ಬೆಳಕಿನ ಸಲುವಾಗಿ ದೊಡ್ಡ ದೊಂದಿಗಳನ್ನೂ ಸೀಮೇಎಣ್ಣೆ ಗ್ಯಾಸ್ ಲೈಟ್ಗಳನ್ನೂ ಬಳಸಲಾಗುತ್ತಿತ್ತಂತೆ. ವೇದಿಕೆಯ ಇಕ್ಕೆಲಗಳಲ್ಲಿ ಅವುಗಳನ್ನು ಜೋಡಿಸಿ ಬೆಳಕು ಕಾಣುವಂತೇ ಮಾಡಲಾಗುತ್ತಿತ್ತಂತೆ. ಆದರೆ ನಾವೆಲ್ಲಾ ಚಿಕ್ಕವರಿರುವಾಗ ವಿದ್ಯುತ್ತು ಅದಾಗಲೇ ಬಂದಿತ್ತಾದ್ದರಿಂದ ಕಗ್ಗಾಡಿನ ಕುಗ್ರಾಮಗಳಲ್ಲೂ ಕೆಲವುಮಟ್ಟಿಗೆ ವಿದ್ಯುದ್ದೀಪಗಳು ಬಳಕೆಗೆ ಬಂದುಬಿಟ್ಟಿದ್ದವು.
ಗುಂಡಬಾಳೆಯ ಮುಖ್ಯಪ್ರಾಣ ಎಂದೇ ಹೆಸರಾದ ಹನುಮ ಒಂದಾನೊಂದು ಕಾಲಕ್ಕೆ ಪಕ್ಕದಲ್ಲೇ ಹರಿವ ನದಿಯಲ್ಲಿ ಯಾರೋ ಹವ್ಯಕ ಬ್ರಾಹ್ಮಣನೋರ್ವನಿಗೆ ಸ್ನಾನಮಾಡುವಾಗ ಸಿಕ್ಕನಂತೆ. ಸಿಕ್ಕ ಚಿಕ್ಕ ವಿಗ್ರಹವನ್ನು ನದೀ ಮುಖಜ ಭೂಮಿಯಿಂದ ಅನತಿದೂರದಲ್ಲಿ ಪ್ರತಿಷ್ಠಾಪಿಸಿ ಪೂಜೆಮಾಡುತ್ತಿದ್ದ ಆ ಬ್ರಾಹ್ಮಣ ಯಾವಕಾಲದಲ್ಲೋ ವಿಧಿವಶನಾದ. ಆತನ ವಂಶಸ್ಥರೂ ಯಾರೂ ಸರಿಯಾಗಿ ಇರಲಿಲ್ಲವಾಗಿ ಸಹಜವಾಗಿ ಆ ಪ್ರದೇಶದಕ್ಕೆ ಒಲಸೆಬಂದ ಜಿ.ಎಸ್.ಬಿ ಸಮುದಾಯದ ಒಂದೆರಡು ಕುಟುಂಬಗಳು ಹನುಮನ ಪೂಜೆ-ಪುನಸ್ಕಾರಗಳನ್ನು ನೋಡಿಕೊಂಡವು. ಕಾಲಕ್ರಮೇಣ ಹನುಮ ಕುಂತಲ್ಲಿಂದಲೇ ತನ್ನ ಪರಾಕ್ರಮವನ್ನು ತೋರಿಸಿದ. ಯಾವಮಾಯೆಯಲ್ಲಿ ಆಟಬೇಕೆಂದು ಕೇಳಿದನೋ ಗೊತ್ತಿಲ್ಲ ಅಂತೂ ಆಟ ಹರಕೆಯ ರೂಪದಲ್ಲಿ ಕಾಯಂ ಆಗಿಬಿಡ್ತು.
ಯಾರೋ ತಮ್ಮ ಜೀವನದ ಸಮಸ್ಯೆಗಳನ್ನು ಮುಂದಿಟ್ಟು " ಅಪ್ಪಾ ಹನುಮಾ ನಿನಗೆ ಹರಕೆಯಾಟವಾಡಿಸಿ ದಶಾವತಾರದ ದೃಶ್ಯಗಳನ್ನು ತೋರಿಸುವೆನಪ್ಪಾ ದಯಮಾಡಿ ನಮ್ಮ ಕೋರಿಕೆ ನೆರವೇರಿಸಿಕೊಡುತ್ತೀಯಾ ಸ್ವಾಮೀ ? " ಎಂದು ಹರಕೆಮಾಡಿಕೊಂಡು ಹೋದವರಿಗೆ ಅವರ ವಾಂಛೆಗಳು ನೆರವೇರಿದವು,ಕೆಲಸಗಳು ಕೈಗೂಡಿದವು. ಅಂಥಾ ಜನ ಹರಕೆಯಾಟವನ್ನು ನಡೆಸಿಕೊಟ್ಟರು. ಅವರನ್ನು ನೋಡಿ ಮತ್ತಷ್ಟು ಮಂದಿ ಹರಕೆ ಹೊತ್ತುಕೊಂಡರು---ಪಟ್ಟಿ ಬೆಳೆಯುತ್ತಲೇ ಹೋಯಿತು. ಈಗ ನೀವು ಆಟ ಆಡಿಸಲು ಬುಕ್ ಮಾಡಿದರೆ ಪ್ರಾಯಶಃ ಎಳಬರಾದರೆ ನಿಮ್ಮ ಮುಪ್ಪಿನ ವಯಸ್ಸಿಗೆ ಅವಕಾಶ ಸಿಗಬಹುದು, ಹಳಬರಾದರೆ ಹನುಮನ ಹುಟ್ಟೂರುಸೇರಿದಮೇಲೆ ಮುಂದಿನ ತಮ್ಮ ಪೀಳಿಗೆಯವರು ಆ ಅವಕಾಶ ಪಡೆಯಬಹುದು!! ಯಾವುದಕ್ಕೂ ಹನುಮ ಕೃಪೆದೋರಬೇಕು.
ಅಲ್ಲಿನ ಆಟದ ೫ ತಿಂಗಳದ ಅವಧಿಯಲ್ಲಿ ಹುಬ್ಬಾಸಿ ಮತು ವೀರಭದ್ರ ಈ ಎರಡು ಎಕ್ಸ್ಟ್ರಾ ವೇಷಗಳು ನಿಗದಿತ ಕಾಲದಲ್ಲಿ ಬಂದುಗೋಗುತ್ತವೆ-ಅದು ಎಲ್ಲಾ ದಿನಗಳಲ್ಲೂ ಅಲ್ಲ, ಬದಲಾಗಿ ಆ ಸಂಪೂರ್ಣ ಅವಧಿಯಲ್ಲಿ ಆಟದ ಪ್ರಸಂಗಗಳು ಜೋರುಜೋರಾಗಿ ನಡೆಯುತ್ತವೆ ಎನ್ನುವ ದಿನಗಳಲ್ಲಿ ಹುಬ್ಬಾಸಿ ಬರುತ್ತಾನೆ, ಆಟಗಳ ಸೀಸನ್ ಮುಗಿಯುತ್ತಾ ಬರುವಾಗ ವೀರಭದ್ರ ಬರುತ್ತಾನೆ. ಈ ಎರಡೂ ವೇಷಗಳು ವೇದಿಕೆಯಿಂದ ಬಹುದೂರದಲ್ಲಿ ಗುರುತಿಸಿದ ಜಾಗದಿಂದ ವಿಜೃಂಭಣೆಯ ಮೆರವಣಿಗೆಯಲ್ಲಿ ಬರುತ್ತವೆ. ಈ ವೇಷಗಳನ್ನು ಕಟ್ಟಿದವರಿಗೆ ಮೈಮೇಲೆ ಆವೇಶಬರುತ್ತದೆ ಎಂಬುದೊಂದು ಕಲ್ಪನೆ ಇದೆ. ಅದು ಬರಲಿ ಬಿಡಲಿ ಇದೆಲ್ಲಾ ಒಂದು ಭಗವಂತನ ಸೇವೆ. ಹುಬ್ಬಾಸಿ ಎಂಬ ರಕ್ಕಸ ಕರಾವಳಿ-ಮಲೆನಾಡು ಪ್ರಾಂತಗಳಲ್ಲಿ ಹಿಂದೆ ಬಹಳ ಮೆರೆದಿದ್ದಬಗ್ಗೆ ದಾಖಲೆ ಇದೆ. ಬನವಾಸಿಯ ರಾಜಾ ಮಯೂರವರ್ಮ ತನ್ನ ಮಾಂಡಲಿಕರೊಡಗೂಡಿ ಆತನನ್ನು ಸದೆಬಡಿದ ಎಂಬುದು ಇವತ್ತಿಗೆ ಇತಿಹಾಸ. ಅಂತಹ ಹುಬ್ಬಾಸಿಯ ನೆನಪಿನಲ್ಲಿ ಒಮ್ಮೆ ಆ ವೇಷ ಆವೇಶಭರಿತವಾಗಿ ಹನುಮನ ಮುಂದೆ ಗದ್ದೇಬಯಲಿನಲ್ಲಿ ನಿರ್ಮಿತವಾಗಿರುವ ವೇದಿಕೆಯನ್ನೇರಿ ನಡೆದುಹೋಗುತ್ತದೆ. ಈ ಎರಡೂ ವೇಷಗಳಿದ್ದ ದಿನ ಜನ ೫-೬ ಸಾವಿರಕ್ಕೂ ಹೆಚ್ಚುಸಂಖ್ಯೆಯಲ್ಲಿ ಸೇರುತ್ತಾರೆ! ಆವೇಶ ಭರಿತವಾಗಿ ಆ ವೇಷಗಳು ಹೆಜ್ಜೆಹಾಕಿ ಖಡ್ಗ ಝಳಪಿಸಿ ಅಬ್ಬರಿಸಿ ಕೂಗಿ ಗೆಜ್ಜೆಕಾಲನ್ನು ಘಲಿರುಘಲಿರೆಂದು ಬಡಿದು ಹುಬ್ಬು ಹಾರಿಸಿ ಕೇಕೇ ಹಾಕಿಹಾಕಿ ಕೆಂಪುಕಣ್ಣನ್ನು ತಿರುವಿದಾಗ ಜನ ನಿಬ್ಬೆರಗಾಗಿ ನೋಡುತ್ತಾರೆ! ಮಕ್ಕಳ ಚಡ್ಡಿ ಒದ್ದೆಯಾಗುವುದರಲ್ಲಿ ಅನುಮಾನವಿಲ್ಲ!! ವೇಷಗಳು ಇಳಿದುಹೋದ ಬಳಿಕ ನಿಟ್ಟುಸಿರುಬಿಡುವ ಜನರೂ ಇದ್ದಾರೆ. ಇಲ್ಲೊಂಥರಾ ಭಯ-ಭಕ್ತಿಗಳ ಮಿಶ್ರಛಾಪು ! ಎದುರು ದೂರದಲ್ಲಿ ತನ್ನ ದೇವಾಲಯದಲ್ಲೇ ಕುಳಿತ ಹನುಮ ಎಲ್ಲವನ್ನೂ ದಿಟ್ಟಿಸಿ ನೋಡುತ್ತಾನೆ ಎಂಬುದು ಅನಿಸಿಕೆ. ಅದು ಹೌದೂ ಹೌದು. [ಗುಂಡಬಾಳೆಯ ಬಗ್ಗೆ ಮತ್ತೊಮ್ಮೆ ನೋಡೋಣ ಬಿಡಿ, ಇಲ್ಲದಿದ್ರೆ ನಮ್ಮ ಕಥೆ ಕಾದಂಬರಿಯಾದೀತು ! ]
ಇಂಥಾ ಗುಂಡಬಾಳೆಯಲ್ಲಿ ಆಟಗಳ ಸೀಸನ್ ಮುಗಿದು ಓಕುಳಿಯಾಡಿದಮೇಲೆ ಪ್ರತೀ ಅಮವಾಸ್ಯೆಯ ರಾತ್ರಿ ಅದೇ ರಂಗಸ್ಥಳದಲ್ಲಿ ದೆವ್ವಗಳು-ಭೂತಪ್ರೇತಗಳು ತಮ್ಮ ಸೇವೆಯ ಆಟಗಳನ್ನು ನಡೆಸುತ್ತವೆ ಎಂಬುದು ನಮ್ಮ ತಾಂಬೂಲಾನಂದರುಗಳು ಹೇಳುವ ಪುರಾಣ. ಕತ್ತಲಲ್ಲಿ ಅಕಸ್ಮಾತ್ ಎಚ್ಚೆತ್ತು ನೋಡಿದರೆ ಭೂತಗಳು ಗೆಜ್ಜೆಕಟ್ಟಿ ಕುಣಿಯುವುದು ಕಾಣಿಸುವುದಂತೆ. ಥೇಟ್ ಮನುಷ್ಯರ ರೀತಿಯಲ್ಲೇ ಪ್ರಸಂಗಗಳನ್ನು ನಡೆಸುವ ಅವುಗಳು ಏನೋ ಸಂಭಾಶಿಸುವುದು ಕುಣಿಯುವುದು ಎಲ್ಲಾ ಕಂಡರೂ ಯಾವುದೂ ಅರ್ಥವಾಗುವುದಿಲ್ಲವಂತೆ. ಒಂದೊಮ್ಮೆ ಆಗ ಯಾರದರೂ ಅಲ್ಲಿಗೇನಾದರೂ ಹೋದರೆ ಅಪಾಯ ಕಟ್ಟಿಟ್ಟದ್ದು ಎಂಬುದು ನಮ್ಮ ಹಕ್ಕೆಚಡಿ ಪುರಾಣಿಕರ ಅಂಬೋಣ.
ಹೀಗೇ ಕೆಲವು ಆಯಕಟ್ಟಿನ ಜಾಗಗಳನ್ನು ಹೆಸರಿಸುತ್ತಾ ಅವುಗಳ ಸುತ್ತಾ ಬಣ್ಣಬಣ್ಣದ ಕಥೆಗಳನ್ನು ರೋಚಕವಾಗಿ ಹೇಳುತ್ತಾ ಕೂತಿರುವಾಗ ಮಕ್ಕಳಾದ ನಮಗೆ ಒಳಗೊಳಗೇ ಅವ್ಯಕ್ತ ಭಯ, ಆತಂಕ! ಒಬ್ಬರೇ ಓಡಾಡುವಾಗಿನ ಸಂಭವನೀಯತೆಗಳ ಬಗ್ಗೆ ನೆನೆದು ಮೈನಡುಕ. ಇಂಥಾ ಪುಕ್ಕಲು ಶರೀರಿಗಳಾಗಿದ್ದ ನಾವು ಎಲ್ಲಾದರೂ ಒಂಟಿಯಾಗಿ ಬಿಡುವ ಸಾಧ್ಯತೆಗಳನ್ನು ಆದಷ್ಟೂ ತಪ್ಪಿಸಿಕೊಳ್ಳುತ್ತಿದ್ದೆವು. ಆದರೂ ಹಳ್ಳಿಯ ಜೀವನದಲ್ಲಿ ಕೊನೇಪಕ್ಷ ಓಡಾಡುವಾಗಲಾದರೂ ಒಂಟಿಯಾಗಿ ಇರಬೇಕಾಗಿ ಬರಬಹುದಾದ ಪ್ರಮೇಯಗಳು ಹೆಚ್ಚು. ಮೂರು ರಸ್ತೆ ಕೂಡುವ ಜಾಗದಲ್ಲಿ ಎಳನೀರು ಅರಿಷಿನ ಕುಂಕುಮ ಇತ್ಯಾದಿ ಏನಾದರೂ ಕಂಡರೆ ನಮ್ಮ ಪ್ರಸಾದ ಒಣಗಿ ಮೂರು ಮೂರು ದಿನ ನಮಗೆ ಕಕ್ಕಸಿಗೆ ಹೋಗುವ ಗೊಡವೆಯೇ ಇರುತ್ತಿರಲಿಲ್ಲ! ಮೇಲಾಗಿ ಚಿಕ್ಕವರಿರುವಾಗ ಕಟ್ಟಡ ರೂಪದ ಕಕ್ಕಸುಮನೆ ಇರಲಿಲ್ಲ, ನಾವೆಲ್ಲಾ ಯಾರೋ ಹೇಳಿದ್ದನ್ನು ಕೇಳಿಕೊಂಡು ’ಲಂಡನ್ನಿ’ಗೆ ಹೋಗಿಬರ್ತೇವೆ ಎನ್ನುತ್ತಾ ಹೋಗುವುದಾಗಿತ್ತು. ಲಂಡನ್ನಿಗೆ ಹೋಗುವಾಗ ಕೂಡ ಓರಗೆಯ ನಾಕಾರು ಜನ ಮಕ್ಕಳು ಸೇರಿದರೇ ಧೈರ್ಯ. ಯಾಕೆಂದರೆ ನಮ್ಮ ’ಲಂಡನ್ನು’ ಇರುವುದು ಹತ್ತಿರದ ಬೆಟ್ಟದಲ್ಲಿ ! ಬೆಟ್ಟದ ಮರಗಳ ಸಂದಿಯಲ್ಲಿ ಅವಿತು ಕೂತು ನಿರಾಳವಾಗಿ ಹೊರದೂಡಿಬಿಟ್ಟರೆ ಜಗವೇ ಸುಖಮಯ !
’ಲಂಡನ್ನಿಗೆ’ ಕೂತಾಗ ಇಲ್ಲದ ಆಲೋಚನೆಗಳು ಬರುವುದೇ ಜಾಸ್ತಿ! ಕೆಲವು ಕವಿಗಳಿಗೆ, ಕಥೆಗಾರರಿಗೆ ಎಲ್ಲಾ ಸ್ಫೂರ್ತಿ ನೀಡುವ ಸಮಯ ಅದೇ ಅಂತೆ. ನಮಗೆ ಅದು ಹಾಗಾಗಿರದೇ ದೆವ್ವಗಳ ವಿರಾಟ್ ರೂಪಗಳ ಬಗ್ಗೆ ಆಲೋಚಿಸುವ ಕಾಲವಾಗಿರುತ್ತಿತ್ತು. ದೆವ್ವಗಳು ಹೇಗೆಲ್ಲಾ ಇರಬಹುದು, ವಿಕಾರ ಮುಖ, ಹಿಂದೆಮುಂದಾದ ಕಾಲುಪಾದಗಳು, ಊದ್ದುದ್ದ ಉಗುರು ಬೆಳೆದಿರುವ ಕೈಗಳು, ಪೀಚಲು ಶರೀರದ ತುಂಬಾ ಬಿಳೀಬಟ್ಟೆ .....ಇನ್ನೂ ಏನೇನೋ ! ನೆನೆದಾಗ ಒಳಗೆ ಸ್ಟಾಕ್ ಇರುವ ಅಷ್ಟೂ ಚಾಚಿ ಹೊರಬಿದ್ದು ಹೋಗುತ್ತಿತ್ತು-ಮಲಬದ್ಧತೆಯೂ ಇಲ್ಲ ಏನೂ ಇಲ್ಲ; ಎಂಥಾ ಒಳ್ಳೇ ಔಷಧ ನೋಡಿ ! ಲಂಡನ್ನಿಗೆ ಹೋಗುವ ಕೆಲಸ ಮಳೆಗಾಲದಲ್ಲಿ ಸ್ವಲ್ಪ ಪರಿಶ್ರಮದಾಯಕವಾಗಿತ್ತು. ಶಾಲೆಯ ಸಮಯ, ಮಳೆಯಿರದ ಸಮಯ, ಕತ್ತಲೆಯಾಗದ ಸಮಯ, ಜೊತೆಗಾರರು ಸಿಗುವ ಸಮಯ ---ಈ ಎಲ್ಲಾ ಸಮಯಗಳ ಅವಲಂಬನೆ ಅವಲೋಕನ ನಡೆದೇ ಲಂಡನ್ ಕೆಲಸ ಆಗಬೇಕಾಗುತ್ತಿತ್ತು. ಆಮೇಲೆ ನಾವೆಲ್ಲಾ ಸುಮಾರು ಹೈಸ್ಕೂಲಿಗೆ ಹೋಗುವ ಹೊತ್ತಿಗೆ ನಿಧಾನವಾಗಿ ಕಕ್ಕಸುಮನೆಗಳು ತಲೆ ಎತ್ತಿದವು. ಆದರೂ ಹಳೆತಲೆಯಾಗಿದ್ದ ಈಗ ಶಿವನಪಾದ ಸೇರಿರುವ ತಲಗೆರೆ ವೆಂಕಟ್ರಮಣ ಭಟ್ಟರು ಹೇಳಿದ್ದಿಷ್ಟು :
" ನೋಡೋ ಯಾರಾದ್ರೂ ಹೋದ ಜಾಗದಲೆಲ್ಲಾ ಮತ್ತೊಬ್ರು ಹೋಪ್ಲಾಗ ಮಾರಾಯಾ, ಒಂದು ಬಾಣ ಹೊಡದ್ರೆ ಎಷ್ಟು ದೂರ ಹೋಗ್ತೋ ಅಷ್ಟು ದೂರ ಹೋಗಿ ಮಣ್ಣಿನಲ್ಲಿ ಸಣ್ಣ ಕುಳಿ ತೆಗೆದು ಅಲ್ಲಿ ಕಕ್ಕಸುಮಾಡಿ ಮೇಲಿಂದ ಮಣ್ಣುಮುಚ್ಚಿ ತೊಳೆದುಕೊಳ್ಳವು. ಕೈಗೆ ಕಾಲಿಗೆ ಹುತ್ತದ ಮಣ್ಣಿನ್ನು ಹಚ್ಚಿ ತೊಳೆದುಕೊಂಡು ೧೦-೧೨ಸಲ ಬಾಯಿ ಮುಕ್ಕಳಿಸಿ ತೂಪವು. ಆಗಮಾತ್ರ ಅದು ಸರಿಯಾದ ಕೆಲ್ಸ, ಅಲ್ದಿದ್ರೆ ದೋಷ ತಟ್ತು " ಕೊನೇವರೆಗೂ ಕಟ್ಟಿದ ಕಕ್ಕಸುಮನೆಯನ್ನು ಬಳಸುವ ಗೋಜಿಗೆ ಅವರು ಹೋಗಲಿಲ್ಲ; ಬೇಕಾಗಿಯೂ ಬರಲಿಲ್ಲ. ಧೋ ಎಂದು ಸುರಿವ ಮಳೆಗಾಲದಲ್ಲಿ ಸೂರ್ಯ ಕಾಣುವುದೇ ಅಪರೂಪವಾಗಿರುವಾಗ ಒಂದು ಬಾಣ ಹೊಡೆದರೆ ಅದು ತಲ್ಪುವಷ್ಟು ದೂರ ಇರಲಿ, ಪರ್ಯಾಯ ವ್ಯವಸ್ಥೆ ಇದ್ದರೆ ಲಂಡನ್ನಿಗೆ ಹೋಗುವ ಬವಣೆಯೇ ಇರದಿದ್ದರೆ ಎಂಬ ಅಲೋಚನೆಯೂ ಬರುತ್ತಿತ್ತು.
ಮಸುಕಲ್ಮಕ್ಕಿ ಜಟ್ಗ, ಹರ್ನಮೂಲೆ ಜಟ್ಗ ಇಂಥಾ ಜಟ್ಗಗಳೇನೂ ಕಮ್ಮಿ ಅಲ್ಲ ಎಂಬ ಮಾತು ’ತಂಬೂರಿದಾಸರ’ ಬಾಯಿಂದ ಅದಾಗಲೇ ಬಂದಿದ್ದಾಗಿತ್ತು. ರಾತ್ರಿ ಜಟ್ಗನ ಬಲೆಯಲ್ಲಿ ಸದ್ದಾಗುವುದನ್ನು ಕೇಳಬೇಕಂತೆ ! ಚಿತ್ರ-ವಿಚಿತ್ರ ಸದ್ದುಗಳು ಬರುತ್ತವಂತೆ. " ಕುಪ್ಪಯ್ಯ ಶೆಟ್ಟರ ಮಗ ಎಲ್ಲಿಗೋ ಹೋದೋನು ಸರಿರಾತ್ರಿ ಹನ್ನೆರಡು ಗಂಟೆಗೆ ಆ ದಾರಿಯಾಗಿ ಬರುವಾಗ ವಾಹನ ನಿಲ್ಲಿಸಿ ಇಳಿದು ನೋಡಿದನಂತೆ, ನೋಡಿದ್ದೊಂದು ಗೊತ್ತಿ ಬಿಟ್ಟರೆ ಎಚ್ಚರತಪ್ಪಿ ಬಿದ್ದುಬಿಟ್ಟಿದ್ದನಂತೆ. ಅದೆಷ್ಟೋ ಹೊತ್ತಿನ ನಂತರ ಎಚ್ಚರವಾದಾಗ ಯಾರೋ ತಂದು ವಾಹನದಲ್ಲಿ ಹಾಕಿದ್ದರಂತೆ. ಮಾರನೇ ದಿನದಿಂದ ವಾರದದಿನ ಮೇಲೇಳಲೇ ಇಲ್ವಂತೆ.....ಜ್ವರಾ ಅಂದ್ರೆ ಜ್ವರ...ಕತ್ತುರ್ಯೋಜ್ವರ...ಆಮೇಲೆ ಪೂಜೆಕೊಡ್ತೇನೆ ಅಂತ ಹೇಳ್ಕೊಂಡ್ ಮೇಲೆ ಆರಾಮಾಯ್ತಂತೆ " ಇದನ್ನೆಲ್ಲಾ ಕೇಳುವಾಗ ಯಾವ ಮಕ್ಕಳಿಗೆ ಮನಸ್ಸಲ್ಲಿ ಅಲೋಚನೆ ಬರದೇ ಹೋಗುತ್ತದೆ ಹೇಳಿ?
ಹೀಗೇ ಒಮ್ಮೆ ಹಾಲು ತರಲು ಕಬ್ಬಿನಗದ್ದೆಗೆ ಹೋಗಿದ್ದೆ. ಕಬ್ಬಿನಗದ್ದೆ ಎಂದರೆ ಅದು ಈಗ ಕಬ್ಬು ಬೆಳೆಯುವ ಗದ್ದೆಯಲ್ಲ ಬದಲಿಗೆ ಈಗಿರುವುದು ಅಡಕೆ ತೋಟ ಮತ್ತು ಅದರ ಪಕ್ಕ ಎತ್ತರದಲ್ಲಿ ಒಂದು ಮನೆ. ಹಿಂದ್ಯಾವಗ್ಲೋ ಕಬ್ಬು ಬೆಳೆದ ಪ್ರದೇಶ ಅದಾಗಿತ್ತಂತೆ ಅದ್ಕೇ ಆಗಿಂದ ಚಾಲ್ತಿಯಲ್ಲಿರುವ ಹೆಸರು ಕಬ್ಬಿನಗದ್ದೆ. ಕಬ್ಬಿನಗದ್ದೆಯ ಆ ಮನೆಗೆ ನಮ್ಮನೆಯಿಂದ ಒಂದೂವರೆ ಫರ್ಲಾಂಗು ದೂರ. ಸಾಗುವ ಹಾದಿಯ ಒಂದೆ ಅಡಕೆ ತೋಟದ ಸಾಲು, ಇನ್ನೊಂದೆಡೆ ಬೆಟ್ಟ. ನಡುವೆ ಇರುವ ಕಾಲುದಾರಿಯಲ್ಲಿ ನಡೆದುಹೋದರೆ ಕಬ್ಬಿನಗದ್ದೆ ಸೇರಬಹುದು. ಹಾದಿಯ ಮಧ್ಯೆ ಒಂದಷ್ಟು ದೂರ ಯಾವುದೇ ಜನವಸತಿ ಸಿಗುತ್ತಿರಲಿಲ್ಲ. ಅದೂ ಮಳೆಗಾಲದ ದಿನಗಳಲ್ಲಿ ಅಲ್ಲಲ್ಲಿ ಹರಿಯುವ ನೀರಿನ ಝರಿಗಳ ಸದ್ದುಬಿಟ್ಟರೆ ಬೆಟ್ಟದ ಹಕ್ಕಿಗಳ ಕಲರವವೋ ಎಂಥದೋ ನಮಗದೆಲ್ಲಾ ಅಂದು ಬೇಡವಗಿತ್ತು;ಬಚಾವದರೆ ಸಾಕಿತ್ತು ಅಷ್ಟೇ ! " ಹಾಲು ತಂದ್ಯನೋ ? " ಎಂದು ಕೇಳುವ ಹಿರಿಯರಿಗೆ ಹೇಗಾದರೂ ಮಾಡಿ ತಂದುಕೊಡಬೇಕಾಗಿತ್ತು; ಉಪಾಯ ಇರಲಿಲ್ಲ. ನಿರ್ವಾಹವಿಲ್ಲದೇ ಓಡುತ್ತಾ ದಾರಿಗುಂಟ ಕಲ್ಲಿಗೆ ಜಪ್ಪಿ ಗಾಯಗೊಂಡ ಕಾಲುಬೆರಳನ್ನು ಉಜ್ಜುತ್ತಾ ಮತ್ತೆ ತಿರುತಿರುಗಿ ಬೆನ್ನತ್ತಿ ಏನಾದರೂ ಬಂತೋ ಎಂದು ನೋಡಿಕೊಳ್ಳುತ್ತಾ ಸಾಗುವ ನಮ್ಮ ಪಾಡು ನಮಗೆ!
ಅದೂ ಅಮಾವಾಸ್ಯೆಯ ರಾತ್ರಿಯಲ್ಲಿ ಜಟ್ಗ, ಕೀಳು ಎಲ್ಲಾ ಸೇರಿ ಭಜನೆ ಹಾಡುತ್ತಾ ಶಂಖ ಊದುತ್ತಾ ಜಾಗಟೆ ಪಂಚವಾದ್ಯಗಳ ಸಮೇತ ತಮ್ಮ ಜಾಗದಿಂದ ಅದೇ ದಾರಿಯಲ್ಲಿ ಸಾಗಿ ಮತ್ತೊಂದು ಜಾಗಕ್ಕೆ ತೆರಳುತ್ತಿದ್ದವಂತೆ. " ಸುಳ್ಳು ಹೇಳಡ ನೀನು ಕಂಡವರಿದ್ದೊ " ಎಂದು ಹೇಳಿದ್ದ ’ಪುರಾಣಿಕರ’ ಮಾತು ಆಗಾಗ ಜ್ಞಾಪಕಕ್ಕೆ ಬರುತ್ತಿರುತ್ತಿತ್ತು. ಅಕರಾಳ ವಿಕರಾಳ ಮುಖ, ರುಂಡವಿಲ್ಲದ ಶರೀರ ಕುದುರೆಮೇಲೆ ಕುಳಿತು ಓಡುವುದು ಇತ್ಯಾದಿ ವಿಚಿತ್ರ ಕಲ್ಪನೆಗಳನ್ನು ನಮ್ಮಲ್ಲಿ ಸೃಜಿಸಿ ನಮ್ಮ ಜಂಘಾಬಲವೇ ಉಡುಗಿಹೋಗುವಂತೇ ಮಾಡಿದ್ದ ಪುರಾಣಿಕ ಜನ ರಾತ್ರಿಯವೇಳೆ ಮನೆಯಿಂದ ಆಚೆಬಂದು ಮೂತ್ರವಿಸರ್ಜಿಸಲೂ ಆಗದ ಇಕ್ಕಟ್ಟಿನಲ್ಲಿ ನಮ್ಮನ್ನು ಸಿಗಿಸಿಹಾಕಿದ್ದರು! ಆಗೆಲ್ಲಾ ಮನೆಯೊಳಗೇ ಶೌಚಾಲಯ ಬಚ್ಚಲುಮನೆ ಇರಲಿಲ್ಲವಾಗಿ ಒಂದಕ್ಕೋ ಎರಡಕ್ಕೋ ಅಂತೂ ಮನೆಯ ಹೊರಗಡೆ ತೆರಳಲೇ ಬೇಕಾಗಿತ್ತು. " ನಡೆ ಇಪ್ಪ ಜಾಗಕ್ಕೆ ರಾತ್ರಿ ಹೋಪ್ದು ಒಳ್ಳೇದಲ್ಲ, ಅವ್ಕೆ ತೊಂದ್ರೆಕೊಟ್ಟಂಗಾಗಿ ಅವು ತಿರುಗಿ ಬೀಳ್ತೊ " ಎಂದಿದ್ದ ಆ ಜನರ ಮಾತು ಮನದಲ್ಲಿ ಹಗಲಿಗೂ ಪ್ರತಿಧ್ವನಿಸುತ್ತಿತ್ತು.
ಒಂದು ದಿನ ಹಾಲು ತರುವಾಗ ಹಿಂದಿನಿಂದ ಬಸಕ್ಕನೆ ಕಲ್ಲೊಂದು ಬಂದು ಬಿತ್ತು. ಶಿವನೇ ಶ್ರೀರಾಮಚಂದ್ರ, ಇಡಗುಂಜಿ ಮಾಗಣಪತಿ, ಗುಂಡಬಾಳೆ ಹನ್ಮಂತ,ಮುಗ್ವಾ ಸುಬ್ರಹ್ಮಣ್ಯ.....ಕ್ಷಣಮಾತ್ರದಲ್ಲಿ ಅಷ್ಟೂ ದೇವರುಗಳು ನೆನಪಾಗಿದ್ದರು. " ನನ್ನ ರಕ್ಷಣೆ ನಿನ್ನ ಹೊಣೆಯಪ್ಪಾ " ಎಂದು ಪ್ರಾರ್ಥಿಸಿದ್ದೇ ಪ್ರಾರ್ಥಿಸಿದ್ದು ಹೊರತಾಗಿ ತಿರುಗಿ ನೋಡುವ ಯಾವುದೇ ಧೈರ್ಯ ಇರಲಿಲ್ಲ. ಇನ್ನೇನು ಓಡಿ ಹೇಗಾದರೂ ತಪ್ಪಿಸಿಕೊಳ್ಳಲು ಸಾಧ್ಯವೋ ನೋಡಬೇಕು ಎನ್ನುವಷ್ಟರಲ್ಲಿ ಜೋರಾಗಿ ನಗು ಕೇಳಿಸಿತು! ಮತ್ತೂ ಕಂಗಾಲು ಇನ್ನೂ ಕಂಗಾಲು ! ಮುಂದೆ ಇರುವುದು ಮೆಟ್ಟಿಲುಗಳ ದಾರಿ, ಮೆಟ್ಟಿಲು ತಪ್ಪಿ ಕೆಳಗೆ ಬಿದ್ದರೆ ಕೆಳಗಡೆ ಇರುವ ಶಿಲೆಕಲ್ಲುಗಳ ರಾಶಿಗೆ ತಲೆಬಡಿದರೆ ಪರಿಣಾಮ ಏನು ಎಂದು ಹೇಳುವುದು ಕಷ್ಟ. ಹೇಗೂ ಸಾಯುವುದೇ ಎಂದುಕೊಂಡು ಶ್ರೀಧರಸ್ವಾಮಿಗಳನ್ನು ನೆನೆಯುತ್ತಾ ತಿರುಗಿ ನೋಡಿದರೆ ಆಚೆಮನೆ ಮಾಚಣ್ಣ ನಗುತ್ತಾ ನಿಂತಿದ್ದ ! ಆತನಿಗೆ ಮಕ್ಕಳನ್ನು ಹೆದರಿಸಿ ಗೋಳುಹುಯ್ದುಕೊಳ್ಳೋದು ಹವ್ಯಾಸ. ಅದ್ರಲ್ಲೂ ನನ್ನಂಥಾ ಪರದೇಶಿ ಸಿಕ್ಕಿದ್ದಕ್ಕೆ ಬಾಳ ಮಜವಾಗಿತ್ತು ಆತನಿಗೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ!
ಇಂದಿಗೂ ಊರಿಗೆ ಹೋದಾಗ ದಿನವೆರಡು ತಂಗಲು ಅವಕಾಶ ಸಿಕ್ಕರೆ ಆ ಜಾಗಗಳಿಗೆ ಹೋಗುತ್ತೇನೆ. ಜಾಗದ ರೂಪಗಳು ಬದಲಾದರೂ ನನ್ನ ನೆನಪಲ್ಲಿ ಹಾಗೇ ಉಳಿದಿವೆ. ಅಂದಿನ ದಿನಗಳ ಪೇಚಾಟಗಳನ್ನು ನೆನೆದು ನಗುಬರುತ್ತದೆ. ನನ್ನಂಥಾ ಮಕ್ಕಳು ಈಗ ಯಾರಾದರೂ ಹಾಗೇ ಅದೇ ಸ್ಥಿತಿಯಲ್ಲಿ ಇರಬಹುದೇ ಎಂದುಕೊಳ್ಳುತ್ತೇನೆ. ಜಟ್ಗಗಳು ಸ್ವಲ್ಪ ಕಾಯಿದೆ ಬದಲಿಸಿದ ಹಾಗಿದೆ! ಅವುಗಳ ಬಗ್ಗೆ ಪುರಾಣಕೊರೆಯಲು ಜನರಿಗೆ ಸಮಯ ಇರುವುದಿಲ್ಲವೋ ಏನೋ ! ಅಂತೂ ಪೂಜೆ-ಪುನಸ್ಕಾರಗಳಲ್ಲಿ ಬದಲಾವಣೆ ಇಲ್ಲ. ವಾದ್ಯದ ಮೇಲೆ ಓಡಾಡುವ ’ನಡೆ’ ಬಗ್ಗೆ ಜಾಸ್ತಿ ಮಾತು ಕೇಳಿಬರುವುದಿಲ್ಲ.
Posted by ವಿ.ಆರ್.ಭಟ್ (vrbhat06@gmail.com) on September 22, 2011 10:46 AM· permalink
ಬಡ ರೈತನೊಬ್ಬ ತನ್ನ ಹೊಲವನ್ನು ಉಳುತ್ತಿರುವಾಗ ಒಂದು ಮಾಯಾ ದೀಪ ಸಿಕ್ಕಿತು.ಅದನ್ನು ಮುಟ್ಟಿದ ತಕ್ಷಣವೇ ದೈತ್ಯಾಕಾರದ ಭೂತವೊಂದು ಎದುರಿಗೆ ಕೈ ಕಟ್ಟಿ ನಿಂತಿತು.ರೈತ ಹೆದರಿ ಕಂಗಾಲಾದ.ಭೂತ ಮಾತನಾಡ ತೊಡಗಿತು "ಹೆದರ ಬೇಡ,ಇನ್ನು ಮೇಲೆ ನೀನೇ ನನಗೆ ಯಜಮಾನ.ನೀನು ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ.ಆದರೆ ನೀನು ನನಗೆ ಸದಾ ಕೆಲಸ ಕೊಡುತ್ತಿರಬೇಕು.ನನಗೆ ಕೆಲಸ ಇಲ್ಲದಿದ್ದರೆ ನಿನ್ನನ್ನು ತಿಂದು ಮುಗಿಸುತ್ತೇನೆ.ಹೇಳು ಏನು ಮಾಡಲಿ?"ಎಂದಿತು.ರೈತ ಬೇಡಿದ್ದನ್ನೆಲ್ಲ ಭೂತ ಕ್ಷಣಾರ್ಧದಲ್ಲಿ ನೆರವೆರಿಸುತ್ತಿತ್ತು.ಆಹಾರ ,ಅರಮನೆಯಂತಹ ಮನೆ,ಐಶ್ವರ್ಯ,ಆಳು ಕಾಳು ಎಲ್ಲವೂ ಸಿಕ್ಕಿದ ಮೇಲೆ ರೈತನಿಗೆ ಭೂತಕ್ಕೆ ಕೆಲಸ ಒದಗಿಸುವುದೇ ದೊಡ್ಡ ಕೆಲಸವಾಯಿತು!ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ "ಕೆಲಸ ಕೊಡು ,ಇಲ್ಲದಿದ್ದರೆ ನಿನ್ನನ್ನು ಮುಗಿಸುತ್ತೇನೆ"ಎಂದು ದುಂಬಾಲು ಬೀಳುತ್ತಿತ್ತು.ರೈತನಿಗೆ ಜೀವ ಭಯ ಕಾಡತೊಡಗಿತು.The servant had become a master!ಈ ಭೂತದ ಕಾಟದಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಊರಿನ ಬುದ್ಧಿವಂತನೊಬ್ಬನ ಸಲಹೆ ಕೇಳಿದ.ಸೂಕ್ತ ಸಲಹೆ ಸಿಕ್ಕಿತು.ಭೂತ ಅವನನ್ನು ಅಟ್ಟಿಸಿಕೊಂಡು ಬಂದು"ಕೆಲಸ ಕೊಡು"ಎಂದಿತು.ಅದಕ್ಕೆ ತನ್ನ ಮನೆಯ ಮುಂದೆ ಉದ್ದನೆಯ ಕೋಲೊಂದನ್ನು ನೆಡುವಂತೆ ಹೇಳಿದ.ಭೂತ ಕ್ಷಣಾರ್ಧದಲ್ಲಿ ಕೋಲು ನೆಟ್ಟಿತು."ಕೋಲು ನೆಟ್ಟು ಆಯಿತು.ಮುಂದೆ?"ಎಂದಿತು ಭೂತ."ನಾನು ಮುಂದಿನ ಕೆಲಸ ಹೇಳುವ ತನಕ ಈ ಕೋಲನ್ನು ಹತ್ತಿ ಇಳಿಯುತ್ತಿರು"ಎಂದ ರೈತ.ಭೂತ ತನ್ನ ಕೆಲಸ ಶುರುವಿಟ್ಟು ಕೊಂಡಿತು.ರೈತ ಭೂತದ ಕಾಟ ತಪ್ಪಿದ್ದಕ್ಕೆ ನೆಮ್ಮದಿಯ ಉಸಿರು ಬಿಟ್ಟ.
ಸ್ನೇಹಿತರೇ,ಈ ಕಥೆಯಲ್ಲಿ ನಮಗೊಂದು ಅದ್ಭುತ ಪಾಠವಿದೆ.ನಮ್ಮೆಲ್ಲರ ಮನಸ್ಸೂ ಈ ಭೂತದಂತೆ.ಸದಾ ಕಾಲ ಏನನ್ನಾದರೂ ಯೋಚಿಸುತ್ತಲೇ ಇರುತ್ತದೆ.ಕೆಲವೊಮ್ಮೆ ಆಲೋಚನೆಗಳಿಂದ ತಲೆ ಚಿಟ್ಟು ಹಿಡಿದರೂ,ಅವುಗಳಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುತ್ತೇವೆ!Again here the servant becomes a master! a bad master!! ಈ ಮನಸ್ಸೆಂಬ ಭೂತಕ್ಕೆ ಭಗವನ್ನಾಮ ಸ್ಮರಣೆ ಎನ್ನುವ 'ಕೋಲನ್ನು ಹತ್ತುವ' ಕೆಲಸ ಕೊಟ್ಟರೇ ನಮಗೆ ಅದರಿಂದ ಮುಕ್ತಿ!! ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
Posted by Dr.D.T.Krishna Murthy. (noreply@blogger.com) on September 21, 2011 10:31 AM· permalink

ನಮ್ಮ ಕಛೇರಿಯಲ್ಲಿ ಒಬ್ಬರು ಒಂದು ವಾರದ ಮಟ್ಟಿಗೆ ತವರೂರಾದ ಭಾರತಕ್ಕೆ ತೆರಳಿದ್ದರು... ಅವರು ಊರು ತಲುಪಿದ ಕೆಲವೇ ಘಂಟೆಗಳಲ್ಲಿ ಸುಮಾರು ೪,೫ ಮಿಸ್ ಕಾಲುಗಳು ಬಂದವಂತೆ, ಆ ಕರೆಯನ್ನು ಸ್ವೀಕರಿಸಿದ್ದೇ ತಡ ಯಾರೂ ಮಾತನಾಡುತ್ತಲಿರಲಿಲ್ಲ... ಯಾವುದೇ ಮಾತಿಲ್ಲ ಕಥೆಯಿಲ್ಲ, ಹೀಗೆ ಸುಮಾರು ಸರಿ ಕರೆಮಾಡಿದ್ದರಿಂದ ಪೋನ್ ಸ್ವಿಚ್ ಆಫ್ ಮಾಡಿಬಿಟ್ಟಿದ್ದಾರೆ.
ಆ ಪೋನ್ ಸ್ವಿಚ್ ಆಫ್ ಆಗಿದ್ದೇ ತಡ ೧೦ ನಿಮಿಷಗಳ ನಂತರ ಅವರ ಹೆಂಡತಿಯ ಮೊಬೈಲ್ ಗೆ ಬೇನಾಮಿ ಕರೆಗಳು ಬರಲು ಪ್ರಾರಂಭವಾಯಿತು. ಕರೆ ಸ್ವೀಕರಿಸಿದರೆ ಮಾತಿಲ್ಲ ಮೌನದಲ್ಲೇ ಧ್ವನಿ ಕೇಳುವ ಖಯಾಲಿ ಆ ಜನರಿಗೆ... ಒಂದೇ ದಿನದಲ್ಲಿ ಸುಮಾರು ೧೦,೧೫ ಕರೆ ಬರುವುದು ಮಾತಿಲ್ಲದೇ ಧ್ವನಿ ಕೇಳುವುದು ಇದೇ ನೆಡೆಯುತ್ತಲಿತ್ತು. ಕೊನೆಗೆ ಆ ಫೋನ್ ಕೂಡ ಸ್ವಿಚ್ ಆಫ್ ಮಾಡಿ... ಮನೆಗೆ ಬಂದು ಇನ್ನೇನು ನೀರು ಕುಡಿಯ ಬೇಕು ಎನ್ನುವಾಗಲೇ ಮನೆಯಲ್ಲಿದ್ದ ದೂರವಾಣಿಗೆ ಮತ್ತೆ ಕರೆ ಬಂದು ಸ್ವೀಕರಿಸಿದರೆ ಮತ್ತದೇ ಮೌನ....... ಮಾತಿಲ್ಲ ಕಥೆ ಇಲ್ಲ... ಆ ದೂರವಾಣಿಗೂ ಸುಮಾರು ಸರಿ ಕರೆ ಬರುವುದು ಸ್ವೀಕರಿಸುವುದು ಇದೇ ನೆಡೆದಿತ್ತು....... ತಾಳ್ಮೆ ಕಳೆದುಕೊಂಡ ಇವರು ಫೋನ್ ಲೈನ್ ತೆಗೆದು ಬಿಟ್ಟರು....
ಎಲ್ಲರಿಗೂ ಚಿಂತೆ ಕಾಡಲು ಪ್ರಾರಂಭವಾಯಿತು ಯಾರು ಮಾಡುತ್ತಿದ್ದಾರೆ ಏಕೆ ಹೀಗೆ ಎಂದು.... ಕೊನೆಗೆ ಮನೆಯಲ್ಲಿದ್ದ ಅವರ ಅಮ್ಮನ ಹತ್ತಿರ ವಿಚಾರಿಸುವಾಗ ಹೇಳಿದರು ನೀವುಗಳು ಭಾರತಕ್ಕೆ ಬರುವ ಸ್ವಲ್ಪ ಘಂಟೆಗಳ ಒಳಗೆ ಯಾರೋ ಕರೆ ಮಾಡಿದರು... ಬಂದಿದ್ದಾರ ಎಂದು, ಇನ್ನು ಬಂದಿಲ್ಲ ಎಂದೆ. ಸ್ವಲ್ಪ ಸಮಯದ ನಂತರ ಮತ್ತೂ ಕರೆ ಮಾಡಿ ಕೇಳಿದರು ಏನೋ ವಿಷಯವಿರಬೇಕೆಂದು ನಿಮ್ಮಗಳ ಮೊಬೈಲ್ ನಂಬರ್ ಕೊಟ್ಟೆ ಎಂದರು..... ಈ ಲ್ಯಾಂಡ್ ಲೈನ್ ನಂಬರ್ ಹೇಗೆ ಸಿಕ್ಕಿತು ಎಂದು ಯೋಚಿಸುವಾಗ ನೆನಪಾಗಿದ್ದು "ಫೇಸ್ ಬುಕ್", ಕುವೈತಿನಿಂದ ಭಾರತಕ್ಕೆ ಹೊರಡುವ ಮುನ್ನ ತಮ್ಮ ಫೇಸ್ ಬುಕ್ಕಿನಲ್ಲಿ ಅವರ ಮನೆಯ ದೂರವಾಣಿ ಸಂಖ್ಯೆಯನ್ನು ಹಾಕಿದ್ದಾರೆ ಅದರಿಂದಲೇ ಈ ಕೆಲಸವಾಗಿರಬಹುದು ಎಂದು ಊಹಿಸಿಕೊಂಡಿದ್ದಾರೆ.
ಇನ್ನು ಪೋಲೀಸಿಗೆ ತಿಳಿಸೋಣ ಎಂದರೆ ಅಲ್ಲಿ ಒಮ್ಮೆ ಹೋಗಿ ಸೇರಿಕೊಂಡರೆ ಮುಗಿಯಿತು ಮತ್ತೆ ಹೊರಗೆ ಬರೋಕ್ಕೆ ಆಗೋಲ್ಲ.... ೧ ವಾರ ಮಾತ್ರ ರಜೆಯಲ್ಲಿರುವುದು ಎಂದು ಯೋಚಿಸಿ ಸುಮ್ಮನಾಗಿದ್ದಾರೆ. ನಂತರ ಇಷ್ಟೂ ಕರೆಗಳು ಬಂದಿದ್ದ ದೂರವಾಣಿ ಸಂಖ್ಯೆಗಳನ್ನೆಲ್ಲವನ್ನೂ ಬರೆದಿಟ್ಟುಕೊಂಡು ಅವರ ಸ್ನೇಹಿತರೊಬ್ಬರಿಗೆ ಕೊಟ್ಟು ಬಂದಿದ್ದಾರೆ. ಈ ವಿಷಯವೆಲ್ಲವನ್ನೂ ಒಮ್ಮೆ ಪರಿಶೀಲಿಸುವಂತೆ ಹೇಳಿ ಬಂದಿದ್ದಾರೆ...
ಇದು ನಿಜವೇ ಎಂದು ನನಗೆ ಆಶ್ಚರ್ಯವಾಗಿ..!!! ಮತ್ತೊಮ್ಮೆ ಅವರನ್ನೇ ಕೇಳಿದೆ. ಹೌದು!!! ನಾನು ಊರಿಗೆ ಹೋಗಬೇಕೆಂದು ತೀರ್ಮಾನಿಸಿದ್ದೇ ಹೊರಡುವ ಹಿಂದಿನ ದಿನ ನಂತರ ಟಿಕೆಟ್, ಪ್ಯಾಕಿಂಕ್ ಹೀಗೆ ಬ್ಯುಸಿ ಇದ್ದೆ.. ಯಾರಿಗೂ ಹೇಳೇ ಇರಲಿಲ್ಲ... ಅಮ್ಮನಿಗೆ ಹೇಳಿದ್ದೇ ನಾನು ವಿಮಾನ ಹತ್ತುವ ೧ಗಂಟೆಯ ಮುನ್ನ, ಸ್ನೇಹಿತರಾಗಲಿ, ಸಂಬಂಧಿಕರಿಗಾಗಲಿ ಯಾರಿಗೂ ಹೇಳೇ ಇರಲಿಲ್ಲ ನಾನು ಬರುತ್ತೇನೆಂದು... ಇನ್ನು ನನ್ನ ಎರಡೂ ಹೊಸ ಸಿಮ್ ಗಳು ಸ್ನೇಹಿತ ವಿಮಾನ ನಿಲ್ದಾಣಕ್ಕೆ ತಂದು ಕೊಟ್ಟಿದ್ದು... ಆ ಸ್ನೇಹಿತ ಹೀಗೆ ಮಾಡುವವನೇ ಅಲ್ಲ... ಆದರೆ ನನಗೆ ಅನುಮಾನವಿರುವುದು ಈ ಫೇಸ್ ಬುಕ್ ಮಾತ್ರ... ಇದರಿಂದ ಹಲವು ಅನಾಹುತ ನೆಡೆದಿವೆ ಎಂದು ಕೇಳಿದ್ದೇನೆ ಎಂದರು. ನನ್ನ ಅನುಮಾನ ಖಂಡಿತಾವಾಗಿಯೂ ಸುಳ್ಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ...!!
ಪಾಪ ಅವರು ರಜೆಯನ್ನು ಈ ಪೋನಿನ ರಾಮಾಯಣದಲ್ಲೇ ದಿನ ಕಳೆದು ಬಂದಿದ್ದಾರೆ.... ಇದು ಫೇಸ್ ಬುಕ್ ರಾಮಾಯಣವೋ..ಫೋನ್ ರಾಮಾಯಣವೋ... ಏನೋ ಒಂದು ತಿಳಿದಿಲ್ಲ ಆದರೆ ಈಗ ಮಾತ್ರ ಅವರು ಕರೆಗಳನ್ನು ಸ್ವೀಕರಿಸಿದ್ದರಲ್ಲ ಅಷ್ಟೂ ಸಂಖ್ಯೆಗಳನ್ನು ನೋಡುತ್ತ ನಂಬರಾಯಣದಲ್ಲಿ ಮುಳುಗಿದ್ದಾರೆ... (ಅವರು ಊರಿಂದ ಬಂದು ೩ ದಿನವಾಯಿತು ದಿನಕ್ಕೆ ಎರಡು ಬಾರಿಯಾದರೂ ಬರೆದಿಟ್ಟಿರುವ ಫೋನ್ ನಂಬರ್ ಗಳನ್ನು ಮಾತ್ರ ನೋಡುತ್ತಲೇ ಇದ್ದಾರೆ... ಯಾರು ಇರಬಹುದು, ಏಕೆ ಕರೆ ಮಾಡಿದರು ಎಂಬ ಪ್ರಶ್ನೆಗಳನ್ನು ಮನಸ್ಸಲ್ಲೇ ಹಾಕಿಕೊಂಡು ಗೊಣಗುತ್ತಲಿದ್ದಾರೆ).
ಆದರೆ ಇನ್ನೊಂದು ವಿಷಯವೆಂದರೆ ಅವರು ಊರು ಬಿಟ್ಟು ಕುವೈಟಿಗೆ ಬಂದ ನಂತರ ಅಲ್ಲಿ ಮನೆ ನಂಬರಿಗೆ ಮತ್ತಾವು ಬೇನಾಮಿ ಕರೆಗಳು ಬರುಲ್ಲಿಲ್ಲವೆಂದು ಹೇಳಿದ ಮೇಲೆ ಫೇಸ್ ಬುಕ್ಕಿನ ಮೇಲೆ ಹೆಚ್ಚು ಅನುಮಾನ ಪ್ರಾರಂಭವಾಗಿದೆ
ಇದು ನಿಜವೋ ಏನೋ ಗೊತ್ತಿಲ್ಲ ಆದರೆ ಆದಷ್ಟು ಮುಖ್ಯ ವಿಷಯಗಳನ್ನು ಮಾತ್ರ BUZZ , Google+, FACEBOOK, twitter ಇತ್ಯಾದಿ.... ಎಲ್ಲಿಯೂ ಬಿತ್ತರಿಸದೇ ಇರುವುದು ಒಳ್ಳೆಯದು.... ಅಲ್ಲವೇ..?
@ಫೋಟೋ - ಅಂತರ್ಜಾಲ
Posted by ಮನಸು (noreply@blogger.com) on September 21, 2011 07:42 AM· permalink

ಮನುಷ್ಯರ ಕಥೆ ಇಷ್ಟೆ ಅಲ್ಲವೇನು
ಯೋಚನೆ ಮಾಡಿ ಲಾಭಾ ಏನಿದೆ..!!??
ನೋಟಿಗೊಂದು ಓಟು ಗಿಟ್ಟಿಸಿ
ಜನರ ಆಯ್ಕೆಯಲ್ಲಿ ಸೀಟು ಪಡೆದು
ದೇವರೆಸರಲಿ ಪ್ರಮಾಣ ಮಾಡಿ
ಮಣ್ಣು ಮುಕ್ಕಿಸಲೊರಟ ಜನರ ಕಥೆ ಎಲ್ಲಿಗೆ ನಿಲ್ಲಿತು..!!
ಕೋಟಿಗಟ್ಟಳೆ ಹಣವ ದೋಚಿ
ಐಶಾರಾಮಿ ಜೀವನ ನಡೆಸಿ
ರಾಜ ಠೀವಿಯಲ್ಲಿ ಮೆರೆದ
ರಾಜಕೀಯ ಕೀಚಕರ ಕಥೆ ಎಲ್ಲಿಗೆ ಬಂದಿದೆ.!!
ಪೂಜೆಗೈವ ದೇವಗೂ ಸಿಡಿಮದ್ದು ಸಿಡಿಸಿ
ಬಡಪಾಯಿ ಜನರ ಕಣ್ಣುಬಾಯಿಗೆ ಮಣ್ಣ ಎರಚಿ
ವಜ್ರಕಚಿತ ಸಿಂಹಾಸನದಿ ದರ್ಬಾರು ನೆಡೆಸಿದರು
ಆದರಿಂದು ಎಲ್ಲ ಇದ್ದು ಕಲ್ಲ ಮಂಚದಿ ಮಲಗುವವನ ಜೀವನ ಎಲ್ಲಿದೆಯೋ.!!!
ಜೈಲ ಬಾಗಿಲು ತೆರೆದಿದೆ
ಹೊರಗೆ ತಿಂದು ತೇಗುತಿರುವ
ರಾಜಕೀಯ ಖೈದಿಗಳ ಒಳಗೆ ತಳ್ಳಲು
ಸದ್ಯಕಿರುವ ಕೋಣೆಗಳು ಸಾಲದಾಗಿದೆಯೇನೋ...!!
ಇಲ್ಲೇ ಇದ್ದು ಬಿಡುವರಂತೆ ಸಂಪಾದಿಸಿದರು
ಆಯುಷ್ಯ ಎಷ್ಟೋ ಏನೋ ತಿಳಿಯದವರು
ಸಾವಿನ ಬಾಗಿಲು ತಟ್ಟೋ ಮುನ್ನ ಜೈಲ ಬಾಗಿಲು ತೆರೆಯಿತು
ಏನಾದರೇನು ನಾ ಮಾಡಿದ ಕರ್ಮ ಕಾಡದೇ ಬಿಡುವುದೇನು..!!!
ಈ ಮನುಷ್ಯನ ಕಥೆ ಇಷ್ಟೆ ಎನಿಸಿದೆ
ಆಮಿಷಕೆ ಬಲಿಯಾದವನ ವ್ಯಥೆ ಕೇಳುವವ ಇಲ್ಲವೆನಿಸಿದೆ...

@ಫೋಟೋಗಳು- ಅಂತರ್ಜಾಲ
Posted by ಮನಸು (noreply@blogger.com) on September 21, 2011 07:38 AM· permalink
ನನ್ನ ಅಪ್ಪನ ಬಗೆಗೆ ನಿಮಗೆ ಗೊತ್ತಿಲ್ಲ..
ತುಂಬಾ ಹಠದ ಸ್ವಭಾವದವನು..ಅವನ ಮಗಳಾದ ನಾನೂ ಕೂಡ ಹಾಗೇನೆ..ಅಪ್ಪ , ಅಮ್ಮರ ಮುದ್ದಿನ ಮಗಳು ನಾನು.. ನನ್ನ ಎಲ್ಲ ಬೇಕು ಬೇಡಗಳನ್ನು ನನ್ನ ಅಪ್ಪ, ಅಮ್ಮ ಗೌರವಿಸಿದರು..
ಎಲ್ಲವನ್ನೂ... ನನ್ನ ಇಚ್ಛೆಯಂತೆ ಬೆಳೆಸಿದ್ದಾರೆ..
ಮತ್ತೇನು ಸಮಸ್ಯೆ ಅಂತೀರಾ?
ನನ್ನಪ್ಪ ನನಗೆ ಮದುವೆ ಗಂಡು ಹುಡುಕುತ್ತಿದ್ದಾರೆ...
"ಅಪ್ಪಾ..ನನ್ನಿಷ್ಟದ ಗಂಡು ನನಗೆ ಬೇಕು..ನನ್ನ ಸ್ವಭಾವ, ರುಚಿಗಳಿಗೆ ಹೊಂದಿಕೊಳ್ಳುವಂಥಹ ಗಂಡು ನನಗೆ ಬೇಕು..ನನ್ನ ಗಂಡ ಹೇಗಿರ ಬೇಕು ಅಂತ ನನ್ನದೇ.. ಆದ ಕನಸುಗಳಿವೆ..
ಇದು ನನ್ನ ಮದುವೆ..ಗಂಡನನ್ನೂ ನಾನೇ ಹುಡುಕಿಕೊಳ್ಳುತ್ತೇನೆ..."
ಅಪ್ಪ ಒಪ್ಪಲಿಲ್ಲ..
"ಮಗಳೆ..ಪ್ರೇಮ ವಿವಾಹ ಯಶಸ್ಸು ಕಾಣುವದು ಕಷ್ಟ.."
" ಯಾಕೆ ಹಾಗೆ..? ಅರೇಂಜ್ ಮದುವೆ ಹೇಗೆ ಯಶಸ್ಸಾಗುತ್ತದೆ..?ಇದೆಲ್ಲ ನಾನು ಒಪ್ಪೋದಿಲ್ಲ ಅಪ್ಪಾ..."
"ಮಗಳೆ..ಅರೇಂಜ್ ಮದುವೆಗಳಲ್ಲಿ ಗಂಡು, ಹೆಣ್ಣು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆರೆಂಟು ತಿಂಗಳಾಗಿರುತ್ತದೆ..ಯೌವ್ವನದ ಬಿಸಿ....ಅಷ್ಟರಲ್ಲಿ ಮಕ್ಕಳಾಗಿ ಬಿಡುತ್ತದೆ..ಮಗುವನ್ನು ದೊಡ್ಡ ಮಾಡುತ್ತಿದ್ದಹಾಗೆ ಪರಸ್ಪರ ಹೊಂದಾಣಿಕೆ ಅನಿವಾರ್ಯವಾಗುತ್ತದೆ..
ಇಂಥಹ ಅನಿವಾರ್ಯತೆಗಳು ಪ್ರೀತಿಯನ್ನು ಬೆಳೆಸಿ ....ದಾಂಪತ್ಯ ಯಶಸ್ವಿಯಾಗುತ್ತದೆ....."
ಅಪ್ಪ ಹೇಳಿದ್ದು ಹೌದಾಗಿರಬಹುದು...
"ಅಪ್ಪಾ...ಸರಿ... ನೀನೇ ಗಂಡು ಹುಡುಕು...ಮದುವೆಗೆ ಮೊದಲು ನೀನು ಹುಡುಕಿದ ಗಂಡಿನೊಡನೆ ನನಗೆ ಮುಕ್ತವಾಗಿ ಮಾತನಾಡಲು ಬಿಡು..ಮದುವೆ ನಂತರ ಬದುಕುವವರು ನಾವು...ಹಾಗಾಗಿ..ಮದುವೆಗೆ ಮುನ್ನ ಹುಡುಗನನ್ನು ಅರ್ಥ ಮಾಡಿಕೊಳ್ಳುವದು ಅತ್ಯವಶ್ಯ...."
ಅಪ್ಪ ಗಂಡು ಹುಡುಕತೊಡಗಿದ..ಹುಡುಕಿಯೂ ಬಿಟ್ಟ..ಹುಡುಗ ನನ್ನನ್ನು ಒಪ್ಪಿಯೂ ಬಿಟ್ಟ..
ನಮ್ಮಿಬ್ಬರ ಭೇಟಿಯೂ ನಿಶ್ಚಯವಾಯಿತು..
"ನೋಡಿ..ನಾನು ಪುರುಷ ಸಮಾಜ ಬಯಸುವಂಥಹ ಹೆಣ್ಣು ನಾನಲ್ಲ..ನಾನೂ ಕೆಲಸ ಮಾಡುತ್ತೇನೆ.. ಗಳಿಸುತ್ತೇನೆ..ಮನೆಗೆ ಬಂದ ಮೇಲೆ ಒಬ್ಬಳೇ ...ಅಡಿಗೆ ಕೆಲಸ ಮಾಡ ಬೇಕೆಂದರೆ ನನ್ನಿಂದ ಆಗುವದಿಲ್ಲ..
ಬಚ್ಚಲು ಮನೆಯಲ್ಲಿ ...ನಿಮ್ಮ ಒಳ ಚಡ್ಡಿಯನ್ನು ತೊಳೆಯುವಂಥಹ ಹೆಂಡತಿ ನಾನಾಗಲಾರೆ.."
" ಇದನ್ನು ನಾನೂ ಒಪ್ಪುತ್ತೇನೆ..ನನ್ನ ಅಪ್ಪ, ಅಮ್ಮ ..ನನ್ನನ್ನೂ.. ಮುದ್ದಿನಿಂದ ಬೆಳೆಸಿದ್ದಾರೆ...ಆದರೆ..ಅಡಿಗೆ ಕೆಲಸ ನನಗೂ ಗೊತ್ತು.. ನನ್ನಮ್ಮನಿಗೆ ನಾನು ಸಹಾಯ ಮಾಡುತ್ತೇನೆ..ಗಂಡ ಹೆಂಡತಿಯೆಂದರೆ ಮೇಲು ಕೀಳುಗಳಿಲ್ಲ..ಇಬ್ಬರೂ ಸಮಾನರು..ಇಬ್ಬರೂ ಸ್ನೇಹಿತರಂತೆ ಇರಬೇಕು..."
ಹುಡುಗ ನನಗೆ ಇಷ್ಟವಾಗತೊಡಗಿದ..ಚಿಗುರು ಮೀಸೆಯ ಹುಡುಗ ಬೆಳ್ಳಗೂ ಇದ್ದ...
ಹುಡುಗನ ಬಗೆಗೆ ನನಗೆ ಇನ್ನೂ ತಿಳಿದುಕೊಳ್ಳಬೇಕಿತ್ತು...ಅವನ ನೀಲಿ ಕಣ್ಣುಗಳನ್ನೇ ನೋಡುತ್ತ ಕೇಳಿದೆ..
" ನಿಮ್ಮ ಸ್ವಭಾವದ ಬಗೆಗೆ ಹೇಳಿ.."
"ನನ್ನ ಸ್ವಭಾವ ತುಂಬಾ ಒಳ್ಳೆಯದು..
ಪ್ರತಿಯೊಬ್ಬರೂ ಹೀಗೇಯೇ ಹೇಳುತ್ತಾರೆ..ಮಾತನಾಡುವಾಗ ನಾವು ಏನು ಅಲ್ಲವೋ ಅದನ್ನು ನಾವು ಹೇಳುತ್ತೇವೆ..ಹಾಗಾಗಿ ಮಾತು ಕೇಳುವಾಗ.."ಏನು ಹೇಳುತ್ತಾರೋ ಅದನ್ನು ಕೇಳಬಾರದು..ಅವರು ಏನು ಹೇಳುತ್ತಿಲ್ಲವೋ ಅದನ್ನು ಕೇಳಬೇಕು"ಇದು ನನ್ನ ಅನುಭವ.."
"ಅಂದರೆ ಏನು ಅರ್ಥ..?"
"ನೋಡಿ..
ಮದುವೆಗೆ ಮುನ್ನ ಎಲ್ಲವು ಬಣ್ಣ ಬಣ್ಣದ ಮಾತುಗಳು...ಅವುಗಳ ಸತ್ಯದ ಬಣ್ಣ ಮದುವೆಯ ನಂತರ ಗೊತ್ತಾಗುತ್ತದೆ..
ಮದುವೆಗೆ ಮುನ್ನ ಏನೆಲ್ಲ ಮಾತನಾಡಿದರೂ..ಮದುವೆಯಾದ ಮೇಲೆ ಪರಸ್ಪರ ಹೊಂದಾಣಿಕೆ..ವಿಶ್ವಾಸ ಬಹಳ ಮುಖ್ಯ..ನಿಮಗಾಗಿ ನಾನು ..ನನಗಾಗಿ ನೀವು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು...
ಮದುವೆಯೆಂದರೆ " ನಮ್ಮದಲ್ಲದ ಅಪರಿಚಿತ ಸ್ವಭಾವದೊಡನೆ ಹೊಂದಾಣಿಕೆ ಮಾಡಿಕೊಳ್ಳುವದು"ನಾವು ಎಷ್ಟು ಅಡ್ಜಸ್ಟ್ ಆಗುತ್ತೇವೋ ಅಷ್ಟರ ಮಟ್ಟಿಗೆ ದಾಂಪತ್ಯ ಯಶಸ್ಸಾಗುತ್ತದೆ..ಹಾಗೆಯೇ ಪರಸ್ಪರ ವಿಶ್ವಾಸ..ಇಬ್ಬರೂ ದುಡಿಯುವದರಿಂದ ನಂಬಿಕೆ ಬಹಳ ಮುಖ್ಯ.."
ಹುಡುಗ ಚಂದವಷ್ಟೇ ಅಲ್ಲ.. ಬುದ್ಧಿವಂತ ಕೂಡ...
ಹುಡುಗನನ್ನು ಇನ್ನೂ ಮಾತನಾಡಿಸಬೇಕು ಅನ್ನಿಸಿತು...
"ನೀವು... ನನ್ನಲ್ಲಿ ಏನನ್ನು ಇಷ್ಟ ಪಟ್ಟಿದ್ದೀರಿ..?"
ಹುಡುಗ ಸ್ವಲ್ಪ ನಾಚಿ ಕೆಂಪಗಾದ..ತಡವರಿಸಿದ..
"ನನಗೆ....ನಿಮ್ಮ ತುಂಬು ಕೆನ್ನೆ.. ಕೆನ್ನೆಯ ಮೇಲಿನ ಮಚ್ಚೆ..ನಿಮ್ಮ ಮುಗುಳು ನಗೆ...ಕೆನ್ನೆಯ ಮೇಲಿನ ಮಚ್ಚೆಯ ಹುಡುಗಿಯನ್ನು ನಾನು ಹುಡುಕುತ್ತಿದ್ದೆ..
ನನ್ನ ಅದೃಷ್ಟ ನೀವು ಸಿಕ್ಕಿದ್ದೀರಿ..."
ನನಗೂ ನಾಚಿಕೆಯಾಯಿತು.. ಒಳಗೊಳಗೆ ಖುಷಿಯೂ ಆಯಿತು..
ಸರಿ .. ಇನ್ನೇನು..?
ಮದುವೆ ನಿಶ್ಚಯವಾಯಿತು..
ಎಷ್ಟೆಲ್ಲ ಸಡಗರ.. ಸಂಭ್ರಮದ ನಡುವೆ..ಹೆದರಿಕೆಯ ಢವ ಢವದೊಡನೆ ಮದುವೆಯೂ ಆಯಿತು...!!
ಮೊದಲ ರಾತ್ರಿಯ ಸನ್ನಿವೇಶಗಳನ್ನು ...ಸಿನೇಮಾದಲ್ಲಿ ನೋಡಿದ್ದೆ...
ಇಂದು ಆ ಅನುಭವ ನನ್ನದಾಗಲಿದೆ !!
ಏನೋ ಒಂದು ರೀತಿಯ ಥ್ರಿಲ್ಲು...!ಗಂಡು ಬೀರಿಯಾದ ನನಗೂ ಹೆದರಿಕೆ.. ನಾಚಿಕೆ.. ಆತಂಕ.. ಆಗತೊಡಗಿತು...
ಹುಡುಗ ನನ್ನ ಹತ್ತಿರ ಬಂದ..ನನಗೆ ಹೇಗೋ ಹೇಗೋ ಆಯಿತು....ಕೈ ಕಾಲು ಬೆವರ ತೊಡಗಿತು...
ಎಷ್ಟೆಂದರೂ ಗಂಡಿನ ಮೊದಲ ಸ್ಪರ್ಷ...! ರೋಮಾಂಚನ... !
ಹುಡುಗ ನನ್ನ ಕೆನ್ನೆ ಮುಟ್ಟಿದ...ಕೆನ್ನೆಯ ಮೇಲಿನ ಮಚ್ಚೆಯನ್ನು ಮೃದುವಾಗಿ ಸವರಿದ..
ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...
" ನೀನು..ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."
ಹುಡುಗ ಕಿವಿಯಲ್ಲಿ ಉಸುರಿದ...ಮೈ ಬಿಸಿಯಾಗ ತೊಡಗಿತು...
ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...ನಡುಗುವ ಧ್ವನಿಯಲ್ಲಿ..
" ಒಂದು ವಿಷಯ ಕೇಳಲಾ...?"
"ಕೇಳು..ಪುಟ್ಟಣ್ಣಿ.."
ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು... ಅಪ್ಯಾಯಮಾನವಾಯಿತು...
"ನೋಡಿ..ನೀವೂ ಕೂಡ ತುಂಬಾ ಚಂದವಿದ್ದಿರಿ..ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"
"ಛೇ.. ಛೇ... ನಾನು ಅಂಥವನಲ್ಲ..."
"ನಿಮ್ಮ ಕಾಲೇಜಿನಲ್ಲಿ..."
"ನಾನು ನಾಚಿಕೆ ಸ್ವಭಾವದವನು..ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..ರಾಜ್ಯಕ್ಕೆ ನಾನು ಎರಡನೆ Rank ಗೊತ್ತಾ...?"
ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು ಇಷ್ಟ...
"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"
"ಇದ್ದಾರೆ..ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"
"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"
"ಹಾಂ...ಒಬ್ಬಳಿದ್ದಾಳೆ..ನನ್ನ ಅತ್ತಿಗೆಯ ತಂಗಿ.."
ನನಗೆ ಕುತೂಹಲ... !!
" ಹೇಗಿದ್ದಾಳೆ..??"
" ಚಂದ ಇದ್ದಾಳೆ...ಒಂದು ವಿಷಯ ಹೇಳಿ ಬಿಡುತ್ತೇನೆ...ಅವಳಿಗೂ ನಿನ್ನ ಹಾಗೆಯೇ..ಕೆನ್ನೆ ಮೇಲೆ ಮಚ್ಚೆಯಿದೆ..ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."
ಹೌದಾ... !!ಅಬ್ಭಾ ಗಂಡಸೆ.. !!ನನಗೆ ಅನುಮಾನ ಬರತೊಡಗಿತು...!
"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"
"ಬರುತ್ತಿದ್ದಳು..."
"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"
"ಛೇ.. ಛೇ.. ಹಾಗೇನಿಲ್ಲ"
"ಅದು ಹೇಗೆ ಸಾಧ್ಯ..?ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"
"ಅವಳಿಗೆ ...ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...ನನ್ನ ಅತ್ತಿಗೆಯ ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."
"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"
" ಅವಳೂ ಕೆಲಸ ಮಾಡುತ್ತಾಳೆ.. ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."
ನನಗೆ ಕೋಪ ಬರತೊಡಗಿತು...
ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?..
ಛೇ..!!
"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"
"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?
ಅವಳ ಚಂದ ಇಷ್ಟಪಟ್ಟೆ ಅಷ್ಟೆ... ಬಯಸಲಿಲ್ಲ..ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...ಪ್ರೀತಿಸ್ತಾ ಇರೋದು ನಿನ್ನನ್ನು..."
" ಇದನ್ನು ನಾನು ಹೇಗೆ ನಂಬಲಿ...? "
ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..ಹುಡುಗನ ಧ್ವನಿ ಗಡುಸಾಯಿತು... ಬಹಳ ಕಠಿಣವಾಗಿ ಹೇಳಿದ...
"ನಾನು ಮೊದಲೇ ಹೇಳಿದ್ದೇನೆ..ನಂಬಿಕೆ.. ವಿಶ್ವಾಸ ಇರಬೇಕು ಅಂತ...ನನಗೆ ಇದೆಲ್ಲ ಇಷ್ಟವಾಗೊಲ್ಲ..."
ಆತ ...ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...
ನನಗೂ.. ಅಸಾಧ್ಯ ಕೋಪ ಬಂತು..
ನಾನು .....ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇದು ಕಥೆ...ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ... ಚೆನ್ನಾಗಿವೆ...)
Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on September 21, 2011 02:45 AM· permalink
ಮಗುವೊಂದು ಮಲಗುತ್ತಿತ್ತು.
ಪಕ್ಕದಲ್ಲಿ ಮಲಗಿಕೊಂಡು ಮಗುವಿನ ಮಾತುಗಳನ್ನು ಕೇಳುತ್ತಿದ್ದ ಆತ. ಶಾಲೆಯಲ್ಲಿ ಆಕೆಯ ಮಿಸ್ ಹೇಳಿದ್ದು, ಸಹಪಾಠಿಗಳ ಬಟ್ಟೆ, ಊಟದ ಡಬ್ಬ, ತರಹೇವಾರಿ ಚಿತ್ರಗಳಿರುವ ಆಕೆಯ ಶಾಲೆಯ ಕೊಠಡಿ, ಮಿಸ್ ಹೇಳಿಕೊಟ್ಟಿದ್ದ ಡ್ರಿಲ್ ಎಲ್ಲವನ್ನೂ ಗಿಣಿಪಾಠ ಒಪ್ಪಿಸುತ್ತಿದ್ದ ಮಗು, ನಿನಗೆ ಡ್ರಿಲ್ ಬರುತ್ತಾ ಅಪ್ಪ? ಎಂದಳು.
ಈತ ಇಲ್ಲವೆಂದ.
ಆಕೆ ತಕ್ಷಣ ಎದ್ದು ನಿಂತು, ಸಾವಧಾನ್, ವಿಶ್ರಾಮ್ ತೋರಿಸಿದಳು. ಒಂದೆರಡು ಎಕ್ಸರ್ಸೈಜ್ಗಳ ಪ್ರದರ್ಶನವೂ ನಡೆಯಿತು. ನೀನು ಮಾಡು ನೋಡೋಣ ಎಂದು ಸವಾಲೆಸೆದಳು. ಇವನಿಗೆ ಆಗಲೇ ಅರ್ಧ ನಿದ್ದೆ. ನಾಳೆ ಬೆಳಿಗ್ಗೆ ನೀನೇ ಹೇಳಿಕೊಡುವೆಯಂತೆ ಎಂದ. ಮಗಳು ಮತ್ತೆ ಮಲಗಿದಳು. ಮತ್ತೆ ಮಾತು.
ಹೊರಗೆ ಸಣ್ಣಗೇ ಶುರುವಾಗಿದ್ದ ಮಳೆ ಜೋರಾಯಿತು. ಅರೆತೆರೆದಿದ್ದ ಕಿಟಕಿಯ ಮೂಲಕ ತಣ್ಣನೆಯ ಗಾಳಿ ಒಳ ನುಗ್ಗಿದಾಗ ಫ್ಯಾನ್ ಆಫ್ ಮಾಡಿದ್ದಾಯ್ತು. ಅಪ್ಪಾ ನನಗೆ ಚಳಿ ಎಂದಳು ಮಗಳು. ಈತ ಬೆಚ್ಚಗೆ ಹೊದಿಕೆ ಹೊದಿಸಿದ. ಸರಿ, ಈಗ ರಗ್ ಹೊತ್ಕೊಂಡಿದ್ದೀನಿ. ನಾಳೆ ಸ್ಕೂಲಿಗೆ ಹೋಗುವಾಗ ಚಳಿ ಆದರೆ ಏನು ಮಾಡಲಿ? ಎಂದಿತು ಮಗು.
ನಾಳೆ ನಿಂಗೆ ಸ್ವೆಟರ್ ಕೊಡಿಸ್ತೀನಿ ಎಂದು ಈತ ಭರವಸೆ ಕೊಟ್ಟ.
ಈಗ ಮಾತು ಸ್ವೆಟರ್ ಕಡೆ ತಿರುಗಿತು. ಎಂಥ ಬಣ್ಣದ ಸ್ವೆಟರ್ ತನಗಿಷ್ಟ? ತನ್ನ ಗೆಳತಿಯರು ಎಂತೆಂಥ ಬಣ್ಣದ ಸ್ವೆಟರ್ ಇಟ್ಟುಕೊಂಡಿದ್ದಾರೆ ಎಂದೆಲ್ಲ ಮಾತಾಡಿದ ಮಗು, ಸ್ವೆಟರ್ ತರೋವಾಗ ನನ್ನನ್ನೂ ಕರ್ಕೊಂಡು ಹೋಗ್ತೀಯಾ? ಎಂದಿತು. ಏಕೆ ಎಂದ ಈತ. ನನಗಿಷ್ಟವಾದ ಬಣ್ಣದ ಸ್ವೆಟರ್ ನಾನೇ ಆರಿಸಬೇಕಲ್ವಾ? ಎಂದು ಕೇಳಿತು ಮಗು. ಈತ ಹೂಂ ಅಂದ.
ನಂಗೆ ಚಳಿಯಾದ್ರೆ ಸ್ವೆಟರ್ ಹಾಕ್ಕೊಂಡು ಮಲ್ಕೋಬಹುದು ಎಂದು ಅದಕ್ಕೆ ರೋಮಾಂಚನ. ನಿಜ್ವಾಗ್ಲೂ ನಂಗೆ ಸ್ವೆಟರ್ ಕೊಡಿಸ್ತೀಯಾ ಅಪ್ಪ? ಎಂದು ಮತ್ತೆ ಕೇಳಿ ಖಚಿತಪಡಿಸಿಕೊಂಡಿತು. ಮರುದಿನ ಸ್ವೆಟರ್ ಖರೀದಿ ಮಾಡುವ ಬಗ್ಗೆಯೇ ಮಾತಾಡುತ್ತ ಹಾಗೇ ನಿದ್ದೆಗೆ ಜಾರಿತು.
ಈತನಿಗೆ ನಿದ್ದೆ ಬರಲಿಲ್ಲ. ಹಾಗಂತ ಪೂರ್ತಿ ಎಚ್ಚರದಲ್ಲೂ ಇರಲಿಲ್ಲ.
ಹೊರಗೆ ಜೋರು ಮಳೆ. ಇತ್ತ ಮಗುವಿಗೆ ಜೋರು ನಿದ್ರೆ.
ಬೀಸಿದ ತಣ್ಣನೆಯ ಗಾಳಿಗೆ ಮಂಪರು ಹಾರಿಹೋಗಿ ಎಚ್ಚರವಾಯಿತು. ಎದ್ದು ಕಿಟಕಿಯ ಹತ್ತಿರ ಬಂದು ಮಳೆ ನೋಡುತ್ತ ನಿಂತ. ಮುಂಗಾರಿನ ಕೊನೆಯ ಮಳೆ ಇದು ಎಂಬಂತೆ ಆಗಸ ಸೋರುತ್ತಿತ್ತು.
ಬೀದಿ ದೀಪದ ಮೇಲೆ ನೀರಿನ ಹನಿಗಳು ಬಿದ್ದು ಸಿಡಿಯುತ್ತಿದ್ದ ದೃಶ್ಯ ಗಮನ ಸೆಳೆಯಿತು. ಡಾಂಬರು ರಸ್ತೆಯುದ್ದಕ್ಕೂ ತರಹೇವಾರಿ ವಿನ್ಯಾಸದ ಹರಿಯುವ ನೀರು. ಅವಸರಕ್ಕೆ ಬಿದ್ದಂತೆ ಸರಿದು ಹೋಗುತ್ತಿದ್ದ ನೀರಿಗೆ ಹಳದಿ ಬೀದಿ ದೀಪದ ಚಿತ್ತಾರ. ನಿಲ್ಲುವುದಿಲ್ಲವೇನೋ ಎಂಬಂತೆ ಒಂದೇ ರೀತಿ ಬೀಳುತ್ತಿದ್ದ ಮಳೆ ಸಂಮೋಹನ ಮಾಡುವಂತಿತ್ತು. ಗುಡುಗಿಲ್ಲ, ಮಿಂಚಿಲ್ಲ, ಸಿಡಿಲುಗಳಿಲ್ಲ. ಕೇವಲ ಶುದ್ಧ ಜೋರು ಮಳೆ. ಸೈನಿಕರಂತೆ ಒಂದೇ ರೀತಿ ಕಾಣುವ ಮಳೆಯ ಹಳದಿ ಎಳೆಗಳು. ಹರಿಯುವ ನೀರಿನ ಮೇಲ್ಮೈಗೆ ಅಪ್ಪಳಿಸಿದಾಗ ಆಗುತ್ತಿದ್ದ ಸೊಗಸಾದ ಕುಳಿಗಳು. ಅವುಗಳ ಒಡಲಿಂದ ಪಕ್ಕಕ್ಕೆ ಛಲ್ಲನೇ ಸಿಡಿಯುವ ಮರಿ ಹನಿಗಳು. ರಸ್ತೆಯುದ್ದಗಲಕ್ಕೂ ಮಳೆ ಹನಿಗಳು ಹರಿಯುವ ನೀರಿನ ಮೇಲೆ ಮೂಡಿಸುತ್ತಿದ್ದ ಸಾವಿರಾರು ನೀರ ಕುಳಿಗಳು.
ಈತ ಮಂತ್ರಮುಗ್ಧನಂತೆ ಅವನ್ನೇ ನೋಡುತ್ತ ನಿಂತ.
ರಾತ್ರಿಯ ನೀರವತೆಯ ಜಾಗದಲ್ಲೀಗ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಶಬ್ದ. ಕಿವಿಗೆ ಹಿತವಾಗಿಸುವ, ಕಣ್ಣಿಗೆ ತಂಪೆನಿಸುವ ಚೇತೋಹಾರಿ ದೃಶ್ಯ. ಎದುರಿಗೆ ಕಾಣುತ್ತಿದ್ದ ಮನೆಗಳ ಕಿಟಕಿಗಳಿಂದ ಬೆಳಕು ಬರುತ್ತಿಲ್ಲ. ಎಲ್ಲಾ ಮಲಗಿರಬೇಕು. ಅಥವಾ ಮಲಗಿದ್ದುಕೊಂಡೇ ಮಳೆಯ ಗಾನ ಕೇಳುತ್ತಿರಬೇಕು. ಅಥವಾ ಮಳೆ ಗಾನ ಕೇಳುತ್ತ ಮಲಗುತ್ತಿರಬೇಕು.
ನಾನೂ ಮಲಗಬೇಕು ಎಂದುಕೊಂಡ. ಮಳೆ ನಿಲ್ಲುವ ಮುನ್ನವೇ, ಅದರ ವಿಶಿಷ್ಟ ಗಾನ ಕೇಳುತ್ತ ನಿದ್ದೆಗೆ ಜಾರಬೇಕು. ಸ್ವೆಟರ್ ಕನಸು ಕಾಣುತ್ತ ಮಲಗಿದ ಮಗಳಂತೆ, ನಾನೂ ಚೆಂದನೆಯ ಕನಸು ಕಾಣುತ್ತ ಮಲಗಬೇಕೆಂದುಕೊಳ್ಳುತ್ತ ವಾಪಸ್ ಬಂದ.
ತಕ್ಷಣ ನಿದ್ರೆ ಬರಲಿಲ್ಲ. ಮಳೆಯ ಸದ್ದು ಹಾಗೇ ಇತ್ತು. ಮುಚ್ಚಿದ ಕಣ್ರೆಪ್ಪೆಯ ಒಳಗೆಲ್ಲ ಮಳೆಯ ಹನಿಗಳು ಉಂಟು ಮಾಡುತ್ತಿದ್ದ ಸಾವಿರ ಸಾವಿರ ನೀರಕುಳಿಗಳು. ಏನು ಕನಸು ಕಾಣಲಿ ಎಂದು ಯೋಚಿಸಿದ.
ಆಕೆ ನೆನಪಾದಳು. ಆಕೆಯ ಸ್ನಿಗ್ಧ ಮುಖ ಕಣ್ಮುಂದೆ ಬಂದಿತು. ಮಿನುಗುವ ನಕ್ಷತ್ರದಂಥವಳು ಎಂದು ಮತ್ತೆ ಮತ್ತೆ ಅಂದುಕೊಂಡ. ಆಕೆಯ ಮುಂದೆ ಹಾಗೆ ಕರೆದರೆ ‘ಹುಚ್ಚ’ ಎಂಬಂತೆ ನೋಡಿಯಾಳು ಎಂಬುದು ಅರಿವಾಗಿ, ಮುಚ್ಚಿದ ಕಣ್ಣೊಳಗೇ ಸುಮ್ಮನಾದ. ಆಕೆಯೂ ಮಳೆ ನೋಡುತ್ತಿರಬಹುದೇ ಎಂಬ ಪ್ರಶ್ನೆ ಹುಟ್ಟಿತು. ಮಳೆಯ ಕುಳಿಗಳನ್ನು, ಹಳದಿ ಎಳೆಗಳನ್ನು, ಒಂದೇ ರೀತಿ ಬೀಳುತ್ತಿರುವ ಹಿತಕರ ಶಬ್ದವನ್ನು ಅನುಭವಿಸುತ್ತಿರಬಹುದೇ?
ಇದ್ದಕ್ಕಿದ್ದಂತೆ ಮಗಳು ಕನವರಿಸಿದಳು. ಅಸ್ಪಷ್ಟ ಶಬ್ದಗಳು. ಬಹುಶಃ ಸ್ವೆಟರ್ ಕನಸು ಕಾಣುತ್ತಿರಬಹುದು ಅಂತ ಅಂದುಕೊಂಡ. ಪಕ್ಕಕ್ಕೆ ತಿರುಗಿ, ತಲೆ ನೇವರಿಸಿ, ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ. ಆತುಕೊಂಡು ಮಲಗಿದ ಮಗು ಕನವರಿಕೆ ನಿಲ್ಲಿಸಿ ಮತ್ತೆ ಆಳ ನಿದ್ದೆಗೆ ಜಾರಿತು.
ಇವನಿಗೂ ಮಂಪರು. ಕನಸು ಕಾಣಬೇಕೆಂಬುದೂ ಮರೆತು ಹೋಗಿ ನಿಧಾನವಾಗಿ ನಿದ್ದೆಗೆ ಜಾರತೊಡಗಿದ. ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಸದ್ದು, ಸಣ್ಣಗೇ ನುಗ್ಗುತ್ತಿದ್ದ ತಂಗಾಳಿ, ದಿನದ ಆಯಾಸ ಎಲ್ಲ ಸೇರಿ ನಿದ್ದೆ ಕವಿಯತೊಡಗಿತು.
*****
ಬಹುಶಃ ದೆಹಲಿಯಿಂದ ಹಿಂತಿರುವಾಗ ಇರಬೇಕು.
ಆಗಲೂ ಇಂಥದೇ ಒಂದು ರಾತ್ರಿ. ಮಳೆ ಬೀಳುತ್ತಿದ್ದಿಲ್ಲ ಎಂಬುದನ್ನು ಬಿಟ್ಟರೆ, ಮಳೆಯ ಸದ್ದಿನ ಜಾಗದಲ್ಲಿ ರೈಲು ಚಲಿಸುವ ವಿಶಿಷ್ಟ ಶಬ್ದ. ಏಕೋ ನಿದ್ದೆ ಬರಲಿಲ್ಲ ಎಂದು ರಾತ್ರಿ ಯಾವುದೋ ಜಾವ ಬರ್ಥ್ನಿಂದ ಕೆಳಗಿಳಿದಿದ್ದ. ಡಬ್ಬಿಯೊಳಗೆ ಎಲ್ಲೆಡೆ ಹರಡಿಕೊಂಡಿದ್ದ ಮಂಕು ನೀಲಿ ಬೆಳಕಲ್ಲಿ, ಮಲಗಿದ್ದ ಜನರೆಲ್ಲ ಶವಗಳಂತೆ, ಇಡೀ ರೈಲು ಚಲಿಸುವ ಶವಾಗಾರದಂತೆ ಭಾಸವಾಗಿ ಇದ್ದಕ್ಕಿದ್ದಂತೆ ಗಾಬರಿಯಾಗಿದ್ದ. ಹೇಗ್ಹೇಗೋ ಮಲಗಿದ್ದ ಜನರು ಥೇಟ್ ಶವಗಳಂತೆ ಕಾಣುತ್ತಿದ್ದರು. ಕೆಲವರ ಕಾಲುಗಳು ಸೀಟ್ನಿಂದ ಹೊರಗೆ ಬಂದಿದ್ದು, ಚಲಿಸುವ ರೈಲಿನ ಲಯಕ್ಕನುಗುಣವಾಗಿ ಅಲುಗುತ್ತಿದ್ದವು.
ಇಳಿದವ ಹಾಗೇ ಕಕ್ಕಾವಿಕ್ಕಿಯಾಗಿ ನಿಂತುಬಿಟ್ಟಿದ್ದ. ಕಾಣುತ್ತಿರುವುದು ಕನಸೋ ಅಥವಾ ವಾಸ್ತವವೋ ಅರಿಯದೇ ದಿಗ್ಭ್ರಮೆಗೊಂಡಿದ್ದ. ಮಂಪರು ತಿಳಿಯಾದಂತೆ ತಾನಿರುವುದು ರೈಲಿನಲ್ಲಿ ಎಂಬುದು ಅರಿವಾಗಿತ್ತು. ಸಧ್ಯ... ಎಂದುಕೊಳ್ಳುತ್ತ ಟಾಯ್ಲೆಟ್ಗೆ ಹೋಗಿ ವಾಪಸ್ ಬಂದು ಮತ್ತೆ ಬರ್ಥ್ ಏರಿದ.
ನಿದ್ದೆ ಬರಲಿಲ್ಲ.
ಚಲಿಸುವ ಶವಾಗಾರ ಎಂಬ ಕಲ್ಪನೆ ಕೂತುಬಿಟ್ಟಿತ್ತು. ಬಹುಶಃ ಇಡೀ ಡಬ್ಬಿಯಲ್ಲಿ ನಾನೊಬ್ಬನೇ ಎಚ್ಚರಿರಬಹುದು. ಈ ರೈಲು ಈಗ ಎತ್ತ ಹೋಗುತ್ತಿದೆಯೋ. ಒಂದು ವೇಳೆ ರೈಲು ಎಲ್ಲಿಯೋ ಒಂದೆಡೆ ನಿಂತು, ಮಲಗಿದ ಈ ಜನರೆಲ್ಲ ಶವವಾಗಿದ್ದರೆ, ಆಗ ಯಾರೂ ಇಳಿಯುವುದೇ ಇಲ್ಲವಲ್ಲ ಎಂದು ಕಲ್ಪಿಸಿಕೊಂಡ. ಖುಷ್ವಂತ್ ಸಿಂಗ್ ಬರೆದ ಟ್ರೇನ್ ಟು ಪಾಕಿಸ್ತಾನ ಕಾದಂಬರಿ ನೆನಪಾಯ್ತು. ಅದರಲ್ಲಿಯೂ ಹೀಗೇ ಆಗುತ್ತದೆ. ಇದ್ದದ್ದನ್ನೆಲ್ಲ ಹಿಂದೆ ಬಿಟ್ಟು ಹೊಸ ದೇಶಕ್ಕೆ ಗುಳೆ ಹೊರಟವರಿದ್ದ ರೈಲನ್ನು ಮಧ್ಯೆಯೇ ತಡೆದ ದುಷ್ಕರ್ಮಿಗಳು ಎಲ್ಲರನ್ನೂ ಸಾಯಿಸಿ ಶವಗಳಿದ್ದ ರೈಲನ್ನಷ್ಟೇ ಮುಂದೆ ಹೋಗಲು ಬಿಡುತ್ತಾರೆ. ನಿಲ್ದಾಣ ಬಂದರೂ ಯಾರೂ ಇಳಿಯುವುದಿಲ್ಲ.
ಏಕೋ ಈ ಕಲ್ಪನೆ ಕೆಟ್ಟದ್ದಾಯ್ತು ಎಂದು ಅನ್ನಿಸಿತು.
ನಿದ್ದೆ ಬರುವುದಿಲ್ಲ ಎಂಬುದು ಖಾತರಿಯಾದಾಗ, ಸುಮ್ಮನೇ ಕಣ್ತೆರೆದುಕೊಂಡೇ ಮಲಗಿದ. ಯಾವ್ಯಾವ ಊರಿನ ಜನರೋ, ಎಲ್ಲೆಲ್ಲಿ ಹೊರಟಿದ್ದಾರೋ, ಏನೇನು ಕನಸು ಕಾಣುತ್ತಿದ್ದಾರೋ. ಇಂಥ ಸಾವಿರಾರು ಜನರನ್ನು ಪ್ರತಿ ದಿನ ಹೊತ್ತೊಯ್ಯುವ ರೈಲು ನಿಜಕ್ಕೂ ವಿಚಿತ್ರ ಅನಿಸಿತು. ನಿಲ್ದಾಣ ಬಂದಂತೆ, ಕೆಲವರು ಇಳಿಯುತ್ತಾರೆ; ಕೆಲವರು ಹತ್ತುತ್ತಾರೆ. ರೈಲು ಹೋಗುತ್ತಲೇ ಇರುತ್ತದೆ. ಇದೆಂದಿಗೂ ನಿಲ್ಲದ ಕ್ರಿಯೆ. ನಾನೂ ಒಂದು ಸ್ಟೇಶನ್ನಲ್ಲಿ ಇಳಿಯುತ್ತೇನೆ. ಅಲ್ಲಿಂದ ಮನೆಯತ್ತ ಹೊರಡುತ್ತೇನೆ. ಬಹುಶಃ ಎಲ್ಲರೂ ಹೀಗೇ ಮಾಡುತ್ತಾರೆ. ಎಲ್ಲರೂ ಮನೆ ಸೇರುವ ಕನಸಿನಲ್ಲೇ ನಿದ್ದೆ ಹೋಗಿದ್ದಾರೇನೋ ಅಂತ ಅಂದುಕೊಂಡ.
ರೈಲು ಹಳಿ ಬದಲಿಸಿದ ಶಬ್ದವಾಯಿತು.
ಯಾವುದೋ ಸ್ಟೇಶನ್ ಬರುತ್ತಿದೆ ಎಂದು ಮಲಗಿದ್ದವ ಎದ್ದು ಕೂತ. ಚಹ ಮಾರುವವನು ಬಂದರೆ ಒಂದು ಕಪ್ ತೆಗೆದುಕೊಳ್ಳಬೇಕು. ಹೇಗಿದ್ದರೂ ನಿದ್ದೆ ಬರುವುದಿಲ್ಲ. ಚಹ ಕುಡಿದು ಇನ್ನಷ್ಟು ಫ್ರೆಶ್ ಆಗಿ ಯೋಚಿಸಬಹುದು ಎಂದು ಉತ್ಸಾಹಗೊಂಡ.
ರೈಲೇನೋ ನಿಂತಿತು. ಆದರೆ, ಅಪರಾತ್ರಿಯಲ್ಲಿ ಚಹ ಮಾರುವ ಒಬ್ಬನೂ ಕಾಣಲಿಲ್ಲ. ಅವನಂತೆ ನಿದ್ದೆಗೇಡಿಗಳಾಗಿದ್ದ ಅಲ್ಲೊಬ್ಬರು ಇಲ್ಲೊಬ್ಬರು ಇಳಿದು ದಿಕ್ಕೆಟ್ಟವರಂತೆ ಡಬ್ಬಿಯ ಹತ್ತಿರವೇ ನಿಂತಿದ್ದರು. ಯಾವುದೋ ಒಂದು ಸ್ಟೇಶನ್ ಅದು. ನೋಡಲು ದೊಡ್ಡದಾಗೇ ಇದ್ದರೂ ಜನ ಕಾಣಲಿಲ್ಲ.
ಸಿಳ್ಳೆ ಹೊಡೆದು ಸೂಚನೆ ಕೂಡ ನೀಡದೇ ರೈಲು ನಿಧಾನವಾಗಿ ಚಲಿಸತೊಡಗಿದ್ದನ್ನು ಕಂಡು ಲಗುಬಗೆಯಿಂದ ಏರಿ ನಿಂತ. ಸ್ಟೇಶನ್ ದಾಟುವವರೆಗೂ ಬಾಗಿಲ ಹತ್ತಿರ ನಿಂತವ, ಮತ್ತೆ ಬೋಲ್ಟ್ ಬಿಗಿದು ತನ್ನ ಬರ್ಥ್ ಏರಿ ಮಲಗಿದ. ಮತ್ತೆ ರೈಲಿನ ಗಾನ ಶುರುವಾಯ್ತು. ಅದುವರೆಗೆ ಸ್ತಬ್ದವಾಗಿದ್ದ ಹೊರಚಾಚಿದ ಕಾಲುಗಳು ಮತ್ತೆ ಲಯಬದ್ಧವಾಗಿ ಅಲುಗತೊಡಗಿದವು.
*****
ಧಕ್ಕನೇ ಎಚ್ಚರವಾಯಿತು.
ಎಲ್ಲಿದ್ದೇನೆ ಎಂಬುದು ತಿಳಿಯಾಗಲು ಕೊಂಚ ಸಮಯವೇ ಬೇಕಾಯಿತು. ಮೈ ಬೆವೆತುಹೋಗಿತ್ತು. ಹೊರಗೆ ಮಳೆ ನಿಂತಿದ್ದರಿಂದ, ಕೋಣೆಯೊಳಗೆ ಒಂಥರಾ ಧಗೆ. ಹೊದ್ದುಕೊಂಡಿದ್ದ ರಗ್ ಒದ್ದಿದ್ದ ಮಗಳು, ಒಂದು ಕೈಯಿಂದ ಕತ್ತು ಬಳಸಿಕೊಂಡು ಮಲಗಿದ್ದಳು.
ಓಹ್... ಎಂದುಕೊಂಡ. ತಿಳಿಯಾಗುತ್ತಿದ್ದ ಮನಸು ಆಗ ತಾನೆ ಕಂಡಿದ್ದ ಕನಸಿನ ವಿವರಗಳನ್ನು ಹೆಕ್ಕುತ್ತಿತ್ತು. ನಾನೀಗ ಮನೆಯಲ್ಲಿದ್ದೇನೆ. ಶವದ ರೈಲು ಕೇವಲ ಕನಸು ಎಂಬುದು ಮನವರಿಕೆಯಾದಾಗ ನೆಮ್ಮದಿ ಮೂಡಿತು. ಎದ್ದು ಫ್ಯಾನ್ ಹಾಕಿದ. ತಂಗಾಳಿ ಕೋಣೆ ಸುತ್ತತೊಡಗಿದಾಗ ನಿದ್ದೆ ಪೂರ್ತಿ ಹರಿದುಹೋಗಿ ಸುಮ್ಮನೇ ಕೂತ.
ಬದುಕು ಎಷ್ಟು ವಿಚಿತ್ರ. ನಿತ್ಯ ಒಂದಿಷ್ಟು ಕನಸುಗಳು ಬೀಳುತ್ತವೆ. ಕೆಲವೊಂದು ನನಸಾಗದೇ ಕಾಡುತ್ತವೆ. ಕೆಲವೊಂದು ಕನಸಾಗಿದ್ದರೂ ಕಾಡುತ್ತವೆ.
ಮಗಳು ಮತ್ತೆ ಕನವರಿಸಿದಳು. ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟ ಆತ, ಮಗಳ ಕನಸು ಏನಿರಬಹುದು ಎಂದು ಯೋಚಿಸಿದ.
ಸ್ವೆಟರ್ ನೆನಪಾಯ್ತು.
‘ಆಯ್ತು ಪುಟ್ಟಾ, ನಾಳೆ ನಿನಗೆ ಖಂಡಿತ ಸ್ವೆಟರ್ ಕೊಡಿಸ್ತೀನಿ’ ಎಂದು ಗಟ್ಟಿಯಾಗಿ ಹೇಳಿದ. ಆತನ ಮಾತು ಕೇಳಿತೇನೋ ಎಂಬಂತೆ, ಮಲಗಿದ್ದ ಮಗು, ನಿದ್ದೆಯಲ್ಲೇ ಆತನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.
ಮನಸ್ಸು ತಿಳಿಯಾದಂತಾಗಿ ಮೆಲ್ಲಗೇ ಆತ ಒರಗಿಕೊಂಡ. ಏನೊಂದು ಪ್ರಯತ್ನವೂ ಇಲ್ಲದೇ ಕೆಲ ಹೊತ್ತಿನಲ್ಲೇ ಗಾಢ ನಿದ್ದೆ ಆವರಿಸಿತು.
ಕನಸುಗಳೇ ಇಲ್ಲದ ಮಾಯಾ ನಿದ್ದೆ!
- ಚಾಮರಾಜ ಸವಡಿ
Posted by Chamaraj Savadi (chamarajs@gmail.com) on September 20, 2011 10:15 PM· permalink
ಇತ್ತೀಚೆಗೆ ನಡೆದ ಒಂದು ಶೈಕ್ಷಣಿಕಸಮ್ಮೇಳನದಲ್ಲಿ ಮುಖ್ಯ ಅತಿಥಿಗಳು ಸಂಸ್ಕೃತದ ಶ್ಲೋಕವೊಂದನ್ನುಉದಾಹರಿಸಿ ಆಡಿದ ಮಾತುಗಳುಚಿಂತನಯೋಗ್ಯವಾಗಿದ್ದವು. ‘ಕಲಿಕೆ ನಿರಂತರ’ ಎಂದು ಸಾರುವ ಆಶ್ಲೋಕದ ಅರ್ಥ ಹೀಗಿದೆ :‘ಆಚಾರ್ಯರಿಂದ೧/೪ಭಾಗ, ಸ್ವಂತವಾಗಿ ೧/೪ ಭಾಗ, ಸಹಪಾಠಿಗಳಿಂದ ೧/೪ ಭಾಗ ಹಾಗೂ ಉಳಿದ ೧/೪ಭಾಗವನ್ನು ಜೀವನಾನುಭವಗಳಿಂದಕಲಿಯುತ್ತಾ ಸಾಗಬೇಕು.’ ಅಂದರೆ ನಾವುಇಲ್ಲಿ ಚರ್ಚೆ ಮಾಡುತ್ತಲಿರುವುದು ೧/೪ಭಾಗ ಕಲಿಕೆಯ ಬಗ್ಗೆ ಮಾತ್ರ! ಕಲಿಯುವುದು-ಕಲಿಸುವುದು ಎನ್ನುವುದರಬಗ್ಗೆಯೇ ಸದಾ ಮಾತನಾಡುವ ನಾವು ಈಪದಗಳ ಅಂತರಾಳವನ್ನು ಎಂದಾದರೂಪ್ರವೇಶಿಸಿ ಅರ್ಥಮಾಡಿಕೊಂಡಿದ್ದೇವೆಯೆ? ಎನಿಸಲಾರಂಭಿಸಿತು. ಈ ಸಂದರ್ಭದಲ್ಲಿಕಲಿಕೆಯನ್ನು ಕುರಿತು ಜಿಡ್ಡುಕೃಷ್ಣಮೂರ್ತಿಯವರ ಚಿಂತನೆ ಹೆಚ್ಚುಸೂಕ್ತವೆನಿಸಿ ಅದನ್ನು ನಿಮ್ಮಮುಂದಿಡುತ್ತಿದ್ದೇನೆ. ನಾವುಸಾಧಾರಣವಾಗಿ ಅನುಭವದಿಂದಲೇ ಕಲಿಕೆಎಂದು ತಿಳಿದಿದೇವೆ. ಮುಖ್ಯ ಅತಿಥಿಗಳುಉದಾಹರಿಸಿದ ಸಂಸ್ಕೃತಶ್ಲೋಕದ ತಾತ್ಪರ್ಯವೂ ಅದೇ ಆಗಿದೆ. ಆದರೆ ಜಿಡ್ಡು ಕೃಷ್ಣಮೂರ್ತಿಯವರು ‘ಕಲಿಕೆ ಎಂದರೆ ಅನುಭವವಲ್ಲ’ ಎಂದು ತಿಳಿಸುತ್ತಾ ಹೀಗೆ ವಿವರಿಸುತ್ತಾರೆ:
‘ಕಲಿಕೆ ಎಂಬ ಮಾತಿಗೆ ಬಹಳ ಮಹತ್ವವಿದೆ. ಎರಡು ಬಗೆಯ ಕಲಿಕೆಗಳಿವೆ. ನಮ್ಮಲ್ಲಿ ಅನೇಕರ ಪಾಲಿಗೆ ಕಲಿಕೆ ಎಂದರೆ ಜ್ಞಾನ, ಅನುಭವ, ತಾಂತ್ರಿಕತೆ, ಕೌಶಲ ಅಥವಾ ಭಾಷೆಗಳ ಸಂಗ್ರಹ ಮಾತ್ರವಾಗಿ ಕಾಣುತ್ತದೆ. ಮಾನಸಿಕವಾದ ಕಲಿಕೆಯೂ ಇದೆ. ಅನುಭವಗಳ ಮೂಲಕ ಕಲಿಯುವ ದಾರಿ ಅದು. ಅನುಭವಗಳು ನಮ್ಮ ಬದುಕಿನ ಪ್ರತ್ಯಕ್ಷ ಸಂಗತಿಗಳಿಂದ ಮೂಡಿದವಾಗಿರಬಹುದು. ಇವು ಕೆಲವು ಬಗೆಯ ಶೇಷಗಳನ್ನು ನಮ್ಮಲ್ಲಿ ಉಳಿಸುತ್ತವೆ. ಅಥವಾ ಸಂಪ್ರದಾಯ, ಕುಲ, ಸಮಾಜದಿ೦ದ ದತ್ತವಾದ ಅನುಭವಗಳೂ ಇರುತ್ತವೆ. ಬದುಕುವುದು ಹೇಗೆ ಎಂದು ಕಲಿಸುವ ಎರಡು ಬಗೆಯ ಕಲಿಕೆಗಳು ಇವು: ದೈಹಿಕವಾದ ಕಲಿಕೆ ಮತ್ತು ಮಾನಸಿಕವಾದ ಕಲಿಕೆ. ಒಂದು ಹೊರಗಿನ ಕೌಶಲ, ಇನ್ನೊ೦ದು ಒಳಗಿನ ಕೌಶಲ. ಆದರೆ ಇವೆರಡರ ನಡುವೆ ವಿಭಜನೆಯ ರೇಖೆ ಇರುವುದಿಲ್ಲ. ಒಂದು ಇನ್ನೊಂದರೊಡನೆ ಬೆರೆತಿರುತ್ತದೆ. ಅಧ್ಯಯನ ಮತ್ತು ಅಭ್ಯಾಸದ ಮೂಲಕ ನಾವು ಸಂಗ್ರಹಿಸಿಕೊಳ್ಳುವ ತಾಂತ್ರಿಕ ಕೌಶಲ್ಯದ ಬಗ್ಗೆ ನಾವೀಗ ಮಾತನಾಡುತ್ತಿಲ್ಲ. ನಮಗೆ ಮುಖ್ಯವಾದದ್ದು ಮಾನಸಿಕ ಕಲಿಕೆ. ಇದನ್ನು ನಾವು ಅನೇಕ ಶತಮಾನಗಳಿಂದ ಸಂಗ್ರಹಿಸಿಕೊ0ಡು ಬಂದಿದ್ದೇವೆ. ಅದನ್ನು ಪರಂಪರೆಯೆಂದೋ, ಜ್ಞಾನವೆಂದೋ, ಅನುಭವವೆಂದೋ ಬಳುವಳಿಯಾಗಿ ಪಡೆದಿದ್ದೇವೆ. ಇದನ್ನು ನಾವು `ಕಲಿಕೆ' ಎನ್ನುತ್ತಿದ್ದೇವೆ. ಇದು ನಿಜವಾಗಿ ಕಲಿಕೆ ಹೌದೇ ಎನ್ನುವುದೇ ನನ್ನ ಪ್ರಶ್ನೆ.......ಮನಸ್ಸು ಎಂದಾದರೂ ಹೊಸತಾಗಿ ಕಲಿಯುತ್ತದೆಯೇ? ಈಗಾಗಲೇ ಮನಸ್ಸು ಏನನ್ನೋ ಕಲಿತುಬಿಟ್ಟಿದೆ. ಹಾಗೆ ಕಲಿತದ್ದನ್ನು ಬಳಸಿಕೊಂಡು ಬದುಕಿನ ಸವಾಲುಗಳನ್ನು ಎದುರಿಸುತ್ತದೆ. ನಾವೀಗ ಮಾಡುತ್ತಿರುವುದು ಅದನ್ನೇ. ಇದು ಕಲಿಕೆಯೇ? ಕಲಿಕೆಯೆಂದರೆ ಹೊಸತಾದುದನ್ನು ಕಲಿಯುವುದು ಎಂದು ಅರ್ಥವಲ್ಲವೇ? ನನಗೆ ಈಗಾಗಲೇ ಗೊತ್ತಿಲ್ಲದಿರುವುದನ್ನು ಕಲಿಯುವುದು ಎಂದ ಅರ್ಥವಲ್ಲವೇ? ಈಗಾಗಲೇ ಗೊತ್ತಿರುವುದಕ್ಕೆ ಮತ್ತೆ ಒಂದಷ್ಟು ಸೇರಿಸಿಕೊಳ್ಳುತ್ತಾ ಹೋಗುವುದು ಕಲಿಕೆಯಲ್ಲ.’
ನಾವು ಹೆಚ್ಚು ಕಲಿತವರು ಎನ್ನುವುದನ್ನು ಸಾಬೀತುಪಡಿಸಲು ನಮ್ಮ ಹೆಸರಿನ ಮುಂದೆ ಪದವಿಗಳನ್ನು ಸೇರಿಸಿಕೊಳ್ಳುವ ಪ್ರಯತ್ನವನ್ನು ನಡೆಸುತ್ತೇವೆ. ಮಾಹಿತಿಗಳನ್ನು ಸಂಗ್ರಹಿಸುತ್ತಾ ನಮ್ಮ ಕಲಿಕೆಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೇವೆ. ಹಿರಿಯರು ಮಕ್ಕಳಿಗೆ ವಿವಿಧ ರೀತಿಯ ಒತ್ತಾಯಗಳಿಂದ ಕಲಿಸುವ ಪ್ರಯತ್ನ ನಡೆಸುತ್ತಾರೆ. ಬೇರೊಬ್ಬರೊಡನೆ ಹೋಲಿಸಿ ಸ್ಪರ್ಧೆಗೆ ಒಡ್ಡುತ್ತಾರೆ...... ಇವೆಲ್ಲವನ್ನೂ ಜೆ.ಕೆ. ಅವರ ಚಿಂತನ ಈ ರೀತಿಯಾಗಿ ಒರೆಗೆ ಹಚ್ಚುತ್ತದೆ:
‘ಕಲಿಕೆ ಸಂಗ್ರಹವಲ್ಲ. ನಿರಂತರವಾದ ಚಲನೆ. ಕಲಿಕೆ ಎಂದರೇನು? ಜ್ಞಾನಸಂಗ್ರಹವೆಂದರೆ ಏನು? ಎಂಬ ಪ್ರಶ್ನೆಯನ್ನು ಎಂದಾದರೂ ಕೇಳಿಕೊಂಡಿದ್ದೀರೋ ಇಲ್ಲವೋ, ಗೊತ್ತಿಲ್ಲ. ಕಲಿಕೆಯನ್ನು ಹಾಗೆ ಸಂಗ್ರಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಕಲಿಕೆ ಎಂಬುದು ಒಂದು ಉಗ್ರಾಣದಂತಲ್ಲ. ಏನನ್ನು ಕಲಿತರೂ ಮಾಡುತ್ತಾ ಮಾಡುತ್ತಾ ಕಲಿಯುತ್ತೇವೆ. ಕ್ರಿಯೆಯಲ್ಲಿ ತೊಡಗಿರುವಾಗಲೇ ಕಲಿಯುತ್ತೇವೆ. ಆದ್ದರಿಂದಲೇ ಕಲಿಕೆಯಲ್ಲಿ ಹಿಂತಿರುಗಿ ನೋಡುವುದು ಎಂಬುದಿಲ್ಲ, ಕೊಳೆಯುವುದು ಎಂಬುದಿಲ್ಲ, ಪತನ ಎಂಬುದು ಇಲ್ಲ.’
‘ವಿಚಾರದಲ್ಲಿ ತೊಡಗುವುದು ಮತ್ತು ಕಲಿಯುವುದು, ಇವೆರಡೂ ಮನಸ್ಸಿನ ಕಾರ್ಯಗಳು. ಕಲಿಯುವುದೆಂದರೆ ನೆನಪಿನ ಶಕ್ತಿಯನ್ನು ಬೆಳೆಸಿಕೊಳ್ಳುವುದಲ್ಲ, ಜ್ಞಾನಸಂಗ್ರಹವು ಅಲ್ಲ .ಭ್ರಮೆಗಳಿಲ್ಲದೇ ಸ್ಪಷ್ಟವಾಗಿ ಆಲೋಚಿಸುವ ಸಾಮಾರ್ಥ್ಯ, ನಂಬಿಕೆ ಅಥವಾ ತೀರ್ಮಾನಗಳಿಂದ ಹೊರಡದೇ ಸತ್ಯ ಸಂಗತಿಗಳನ್ನು ಗಮನಿಸುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದೇ ನಿಜವಾದ ಕಲಿಕೆ. ಕೇವಲ ಮಾಹಿತಿಯನ್ನೋ, ಜ್ಞಾನವನ್ನೋ ಸಂಗ್ರಹಿಸಿಕೊಳ್ಳುವುದರಿಂದ ಏನನ್ನೂ ಕಲಿತಂತಾಗುವುದಿಲ್ಲ. ಕಲಿಕೆ ಎಂಬುದು ತಿಳುವಳಿಕೆಯ ಬಗ್ಗೆ ಇರುವ ಪ್ರೀತಿಯನ್ನು, ಯಾವುದೇ ಕೆಲಸವನ್ನು ಆ ಕೆಲಸಕ್ಕಾಗಿಯೇ ಮಾಡುವ ಪ್ರೀತಿಯಿಂದ ಮಾಡುವುದನ್ನು ಸೂಚಿಸುತ್ತದೆ. ಯಾವುದೇ ರೀತಿಯ ಒತ್ತಾಯವಿದ್ದಾಗ ಕಲಿಕೆ ಸಾಧ್ಯವಾಗುವುದಿಲ್ಲ. ಒತ್ತಾಯಕ್ಕೆ ಹಲವಾರು ರೂಪಗಳಿರುತ್ತದೆ, ಅಲ್ಲವೇ? ಪ್ರಭಾವದ ಒತ್ತಾಯ, ವ್ಯಾಮೋಹದ ಒತ್ತಾಯ, ಭಯದ ಒತ್ತಾಯ, ಪ್ರೋತ್ಸಾಹದ ಒತ್ತಾಯ, ಸೂಕ್ಷ್ಮವಾದ ಲಾಭಗಳ ಒತ್ತಾಯ ಇವೆಲ್ಲಾ ಇರುತ್ತವೆ.’
ಹೋಲಿಕೆಯ ಮುಖಾಂತರ ಕಲಿಕೆಗೆ ಉತ್ತೇಜನ ದೊರೆಯುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದು ಸರಿಯಲ್ಲ. ಹೋಲಿಕೆಯಿಂದ ಹತಾಶೆ ಹುಟ್ಟುತ್ತದೆ. ಅಸೂಯೆ ಬೆಳೆಯುತ್ತದೆ. ಈ ಅಸೂಯೆ ಸ್ಪರ್ಧೆಯ ರೂಪ ತಾಳುತ್ತದೆ. ಇತರ ಒತ್ತಾಯಗಳಂತೆಯೇ ಹೋಲಿಕೆ ಕೂಡ ಕಲಿಕೆಗೆ ಅಡ್ಡಿ ಮಾಡಿ ಭಯವನ್ನು ಹುಟ್ಟಿಸುತ್ತದೆ.
ಕಲಿಕೆ ಎಂಬುದು ಸದಾ ಈ ಹೊತ್ತಿನ, ಈ ಕ್ಷಣದ ಚಟುವಟಿಕೆಯಲ್ಲಿ ಅನುಭವಿಸುತ್ತಾ ಇರುತ್ತದೆ. ಅದಕ್ಕೆ ಭೂತಕಾಲವೆಂಬುದಿಲ್ಲ. ‘ನಾನು ಕಲಿತೆ’ ಎಂದು ನೀವು ಹೇಳಿದ ಕ್ಷಣದಲ್ಲೇ ಕಲಿಕೆಯು ಜ್ಞಾನವಾಗಿ ಬದಲಾಗಿಬಿಟ್ಟಿರುತ್ತದೆ.
ಕಲಿಯಬೇಕೆಂದರೆ, ಮನಸ್ಸು ಸುಮ್ಮನೆ ಇರಬೇಕು. ಕಾಲಾತೀತವಾದುದನ್ನು ಕಾಣಬಯಸುವವರಿಗೆ ಜ್ಞಾನ ಮತ್ತು ಕಲಿಕೆಗಳೇ ಬಹುದೊಡ್ಡ ಆತಂಕಗಳಾಗಿರುತ್ತವೆ.’
Posted by prabhamani nagaraja (noreply@blogger.com) on September 20, 2011 03:56 PM· permalink
ನೂರು ದಿನಗಳೇ ಆಗಿ ಹೋದವು ನನ್ನ ಬ್ಲಾಗ್ನತ್ತ ಮುಖ ಮಾಡಿ.
ಈಗ ಬದುಕು, ವೃತ್ತಿಗೇ ಬೆನ್ನು ಮಾಡುವಂತೆ ಮಾಡುತ್ತಿದೆ. ಮತ್ತೆ ಮನದಾಳದಲ್ಲಿ ದುಗುಡ. ತಲೆ ಎತ್ತಲು ಹವಣಿಸುತ್ತಿರುವ ಖಿನ್ನತೆ ಎಂಬ ಹಳೇ ಮಿತ್ರ. ಇಷ್ಟು ವರ್ಷಗಳ ಕನಸು ಇಷ್ಟು ಬೇಗ ಮುಗಿಯಿತೇ ಎಂಬ ಪ್ರಶ್ನೆಯ ಜೊತೆಗೆ, ಮುಂದೇನು ಎಂಬ ತೀವ್ರತೆ ಕಳೆದುಕೊಳ್ಳದ ಹಳೆಯ ಪ್ರಶ್ನೆ.
ಪ್ರವೃತ್ತಿಯನ್ನೇ ವೃತ್ತಿನ್ನಾಗಿಸಿಕೊಳ್ಳುವ ಕನಸು ಹೊತ್ತು ಈ ಕ್ಷೇತ್ರಕ್ಕೆ ಬಂದ ನನಗೆ, ಈಗ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡು, ಬೇರೆ ವೃತ್ತಿ ಹುಡುಕುವ ಅನಿವಾರ್ಯತೆ. ಮಧ್ಯವಯಸ್ಸಿನ ಸಮಸ್ಯೆಯೇ ಇದು ಎಂಬ ಪ್ರಶ್ನೆಯ ಜೊತೆಗೆ, ನಾನು ವಿಫಲನಾದೆನಾ ಎಂಬ ನೋವು ಕೂಡ. ಇಷ್ಟು ವರ್ಷಗಳ ವೃತ್ತಿ ಜೀವನ, ಬರೀ ಸಂಬಳದ ಕೆಲಸವಾಗಿತ್ತಾ ಎಂಬ ಗೊಂದಲ. ಇದೇ ಸಮಯವನ್ನು ಬೇರೆ ಯಾವುದಾದರೂ ವ್ಯಾಪಾರದಲ್ಲಿ ಅಥವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ, ಬಹುಶಃ ಆರ್ಥಿಕವಾಗಿಯಾದರೂ ಸಾಕಷ್ಟು ಸುಭದ್ರವಾಗಿರುತ್ತಿದ್ದೆನೇನೋ ಎಂಬ ಅನಿಸಿಕೆ.
ಇವೆಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳು ಒಟ್ಟೊಟ್ಟಿಗೇ ಆವರಿಸಿಕೊಳ್ಳುತ್ತಿವೆ. ಕೆಲಸದ ಒತ್ತಡ ಮಾನಸಿಕವಾಗಿಯಷ್ಟೇ ಅಲ್ಲ, ದೈಹಿಕವಾಗಿಯೂ ಹೈರಾಣಾಗಿಸಿದೆ. ಎಂದಿಗೂ ಕೈಗೊಡದ ನನ್ನ ಆರೋಗ್ಯ ಕೈಕೊಟ್ಟು ಮೊದಲ ಬಾರಿ ವಾರಗಟ್ಟಲೇ ಮಲಗುವಂತಾಯಿತು. ಮಲಗಿದಾಗಲೂ ಒತ್ತಡ. ಬಾರದ ನಿದ್ರೆ. ಭವಿಷ್ಯದ ಆತಂಕ. ಹೊಸ ದಾರಿ ತುಳಿಯಬೇಕಾದ ಅನಿವಾರ್ಯತೆ ಹಾಗೂ ಅದು ತರುವ ಗೊಂದಲ. ಇನ್ನು ಇವೆಲ್ಲವನ್ನೂ ತಾಳಲಾರೆ ಎಂದು ಬಲವಾಗಿ ಅನಿಸತೊಡಗಿದಾಗ ಮತ್ತೆ ನೆನಪಾಗಿದ್ದು ನನ್ನ ಬ್ಲಾಗ್.
ನನ್ನನ್ನು ಅತ್ಯಂತ ನೋವಿನ ದಿನಗಳಲ್ಲಿ, ಕುಸಿದುಹೋಗದಂತೆ ಕಾಪಾಡಿದೆ ಇದು. ವೃತ್ತಿ ಕಾರಣವಾಗಿ ಮುದ್ರಣ ಮಾಧ್ಯಮ ಬಿಟ್ಟು ದೃಶ್ಯ ಮಾಧ್ಯಮಕ್ಕೆ ಬಂದಾಗ, ಬರವಣಿಗೆ ಕೈತಪ್ಪಿಹೋಗದಂತೆ ಕಾಪಾಡಿದ ಆಪತ್ಬಾಂಧವ ಇದು. ಕಳೆದ ನಾಲ್ಕು ವರ್ಷದಿಂದ ನಾನು ಇದರೊಂದಿಗೆ ಬರೆಯುತ್ತ, ಮನಸ್ಸು ತೆರೆಯುತ್ತ ನೆಮ್ಮದಿ ಅನುಭವಿಸಿದ್ದೇನೆ. ನನ್ನಾಳದ ಕನಸುಗಳನ್ನು, ಕಳವಳಗಳನ್ನು, ಅಪರೂಪದ ಧನ್ಯತೆಯ ಕ್ಷಣಗಳನ್ನು ಇಲ್ಲಿ ತೆರೆದಿಟ್ಟಿದ್ದೇನೆ. ಈ ತಂತು ನನಗೆ ಹೊಸ ಪರಿಚಯಗಳನ್ನು ಮಾಡಿಸಿದೆ, ಕೆಲವು ಗಟ್ಟಿ ಸಂಬಂಧಗಳನ್ನು ತಂದಿದೆ. ಒಂದೆರಡು ಸಣ್ಣಪುಟ್ಟ ಮನಸ್ತಾಪಗಳನ್ನೂ, ಅದರಿಂದ ಕಲಿಯಬಹುದಾದ ಪಾಠಗಳನ್ನೂ ಕಲಿಸಿದೆ. ನನ್ನನ್ನು ಮತ್ತೆ ಮತ್ತೆ ಕರೆಯುತ್ತ, ತೆರೆದುಕೊಳ್ಳುವಂತೆ ಮಾಡುತ್ತ, ನನ್ನೊಳಗೆ ನಾನೇ ಹೋಗಿ ನೆಮ್ಮದಿ ತಂದುಕೊಳ್ಳುವ ದಿವ್ಯವಿದ್ಯೆಯನ್ನು ನೀಡಿದೆ.
ಈಗ ಮತ್ತೆ ನನ್ನ ಈ ನೆಚ್ಚಿನ ಬ್ಲಾಗ್ಗೆ ಮೊರೆ ಹೋಗುತ್ತಿದ್ದೇನೆ.
ವೃತ್ತಿ ಸ್ಥಿತ್ಯಂತರಗಳು ಏನೇ ಆದರೂ, ನಾನು ಮತ್ತೆ ಮತ್ತೆ ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಬ್ಲಾಗ್ ನಂಟಿನೊಂದಿಗೆ ಮೂಡಿದೆ. ಈಗ ಪತ್ರಿಕೋದ್ಯಮವನ್ನು ವೃತ್ತಿಯನ್ನಾಗಿ ಕೈಬಿಡಲು ನಿರ್ಧರಿಸಿರುವ ಈ ಕ್ಷಣದಲ್ಲಿ, ಈ ಬ್ಲಾಗೇ ನನಗೆ ಆಪತ್ಬಾಂಧವ. ನನಗನಿಸಿದ್ದನ್ನು ಅನಿಸಿದಂತೆ, ನಿಸ್ಸಂಕೋಚವಾಗಿ, ನೇರವಾಗಿ ಹೇಳಲು ಇರುವ ಅಪೂರ್ವ ವೇದಿಕೆ. ಇನ್ಮುಂದೆ ನಾನು ಕಾಣಿಸಿಕೊಳ್ಳಬಹುದಾಗಿದ್ದರೆ ಅದು ಇಲ್ಲಿ ಮಾತ್ರ.
ಏಕೋ ಪತ್ರಿಕೋದ್ಯಮ ಸಾಕಾಯ್ತು. ಸಾಕಷ್ಟು ಕಾರಣಗಳಿವೆ ಅದಕ್ಕೆ. ಪತ್ರಿಕೋದ್ಯಮ ನನಗೆ ಸಂಬಳದ ಕೆಲಸವಾಗುತ್ತಿದೆ ಎಂದು ತೀವ್ರವಾಗಿ ಅನಿಸತೊಡಗಿದೆ. ಒಂದು ಸಂಸ್ಥೆಯನ್ನು ಸೇರಿಕೊಂಡ ಕೆಲವೇ ದಿನಗಳಲ್ಲಿ, ಅಲ್ಲಿಯ ಒಳಸಂಚುಗಳು, ವೈಯಕ್ತಿಕ ದೂಷಾರೋಪಗಳು, ಸಣ್ಣತನ, ವೃತ್ತಿಧರ್ಮಕ್ಕಿಂತ ಪ್ರವೃತ್ತಿಯನ್ನು ಆಚರಿಸುವ ರೀತಿ ಕಂಡು ಬೇಸರವಾಗಿ ಹೆಚ್ಚು ಸಂಬಳ ಕೊಡುವ ಸಂಸ್ಥೆಗೆ ವಲಸೆ ಹೋಗುವದು, ಅಲ್ಲಿಯೂ ಅಂಥವೇ ಸಮಸ್ಯೆಗಳು ಎದುರಾದಾಗ ರಾಜೀನಾಮೆ ಕೊಟ್ಟು ಕೆಲ ಕಾಲ ಮನೆಯಲ್ಲಿ ಕೂಡುವುದು ನಡೆದೇ ಇತ್ತು. ಆದರೆ, ತುಂಬ ದಿನ ನಿಶ್ಚಿತ ಆದಾಯವಿಲ್ಲದೇ ಮನೆಯಲ್ಲೇ ಕೂಡುವುದಾದರೂ ಹೇಗೆ? ಹೆಚ್ಚುತ್ತಿರುವ ಜವಾಬ್ದಾರಿ, ಆಟಿಸಂ ಇರುವ ದೊಡ್ಡ ಮಗಳ ಚಿಕಿತ್ಸೆ, ನಿತ್ಯದ ಕೌಟುಂಬಿಕ ಖರ್ಚು ಮತ್ತೆ ಹೊಸ ಕೆಲಸ ಹುಡುಕುವಂತೆ ಮಾಡುತ್ತಿತ್ತು. ಈ ಚಕ್ರದೊಳಗೆ ಸಿಲುಕಿ, ತಿರುಗಿ ತಿರುಗಿ ಸಾಕಾಗಿದೆ. ಇನ್ನು ಸಾಕು, ಹೊಟ್ಟೆಪಾಡಿಗೆ ಬೇರೆ ಏನಾದರೂ ಕೆಲಸ ಮಾಡಿದರಾಯ್ತು, ಅಥವಾ ಯಾವುದಾದರೂ ವ್ಯಾಪಾರ ಪ್ರಾರಂಭಿಸಿದರಾಯ್ತು. ಬರೆಯುವುದನ್ನು ಕೇವಲ ಹವ್ಯಾಸವಾಗಿಟ್ಟುಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ.
ಹಾಗೆ ನಿರ್ಧರಿಸಿದಾಗಿನಿಂದ, ಹೊಸ ವೃತ್ತಿಗಳ ಸಾಕಷ್ಟು ಸಾಧ್ಯತೆಗಳೂ ತೆರೆದುಕೊಳ್ಳುತ್ತಿವೆ. ಬರವಣಿಗೆಯಲ್ಲೇ ಹೊಸ ಹೊಸ ಅವಕಾಶಗಳೂ ಬರುತ್ತಿವೆ. ಎಂದಿನಂತೆ, ಅನುವಾದದ ಕೆಲಸಗಳು ತೆರೆದುಕೊಂಡಿವೆ. ಮನೆಯ ಕಂಪ್ಯೂಟರ್ನೊಂದಿಗೆ ಮತ್ತೆ ನಂಟು ಬೆಳೆದಿದೆ. ನಿಶ್ಚಿತ ಆದಾಯ ಎಂಬ ಮಾಯಾಕುದುರೆಯನ್ನು ಇಳಿದಾಗಿನಿಂದ, ಬದುಕುವ ಸಾವಿರ ಸಾವಿರ ಸಾಧ್ಯತೆಗಳು ರೋಮಾಂಚನ, ಗೊಂದಲ, ಕಳವಳವನ್ನು ಹುಟ್ಟಿಸುತ್ತಿವೆ.
ಇನ್ನು ಮುಂದೆ ಇದೇ ಬದುಕು. ಇದೇ ಭವಿಷ್ಯ. ಈ ತಿಂಗಳ ಅಂತ್ಯಕ್ಕೆ ವೃತ್ತಿಜೀವನದ ಬಾಧ್ಯತೆಗಳೊಂದಿಗೆ ಮುಕ್ತನಾಗಿ, ಪ್ರವೃತ್ತಿಗೆ ಅಂಟಿಕೊಂಡು ಬದುಕುವುದನ್ನು ಪ್ರಾರಂಭಿಸಬೇಕೆಂದಿದ್ದೇನೆ. ಪ್ರತಿಯೊಂದು ಹೊಸತನವೂ ತರುವ ರೋಮಾಂಚನ ಹಾಗೂ ತಲ್ಲಣ ಮತ್ತೆ ಮತ್ತೆ ಕಾಡತೊಡಗಿದೆ. ರಾತ್ರಿಯಿಡೀ ಕೂತು ಯೋಚಿಸುವಂತೆ ಮಾಡುತ್ತಿದೆ. ರಾತ್ರಿಯ ನೀರವತೆಯಲ್ಲಿ, ನನ್ನೊಳಗೇ ನಾನು ಕಳೆದುಹೋಗುವಂತಾದಾಗ, ಬ್ಲಾಗ್ ಎಂಬ ಮಿತ್ರ ಮತ್ತೆ ಆಹ್ವಾನಿಸುತ್ತಿದ್ದಾನೆ. ಎಂದಿಗೂ ನಿರಾಶೆಗೊಳಿಸದ ಈ ಸನ್ಮಿತ್ರನ ಹತ್ತಿರ ನನ್ನೆಲ್ಲ ದುಗುಡಗಳನ್ನು, ಕನಸುಗಳನ್ನು ಹಂಚಿಕೊಳ್ಳುತ್ತ ಹೋಗಬೇಕಿದೆ.
ನನ್ನ ವೃತ್ತಿಜೀವನದ ಗೆಳೆಯರ ನೇರ ಸಂಪರ್ಕವನ್ನು ಮಿಸ್ ಮಾಡಿಕೊಳ್ಳುವ ನೋವಿನ ಜೊತೆಗೆ, ಹೊಸ ಬದುಕಿನ ತಲ್ಲಣಗಳಿಗೆ, ರೋಮಾಂಚನಗಳಿಗೆ ಒಡ್ಡಿಕೊಳ್ಳಲಿದ್ದೇನೆ. ಈ ಹೊಸ ಪ್ರಯತ್ನ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೋ ಗೊತ್ತಿಲ್ಲ. ಬಹುಶಃ ನಾನು ಬೆಂಗಳೂರು ಬಿಡಬೇಕಾಗಬಹುದು. ಬೇರೆ ಎಲ್ಲಿಗೋ ಹೋಗಬೇಕಾಗಬಹುದು. ಹೊಸ ಜಾಗ, ಹೊಸ ಕೆಲಸ ಅಥವಾ ಉದ್ಯಮ, ಹೊಸ ಬಳಗವನ್ನು ನನ್ನದಾಗಿಸಿಕೊಳ್ಳಬಹುದು. ಆದರೆ, ನಾನು ಎಲ್ಲೇ ಹೋಗಲಿ, ಏನೇ ಮಾಡಲಿ, ಈ ಬ್ಲಾಗ್ಮಿತ್ರ ಜೊತೆಗಿರುತ್ತಾನೆ- ಹಳೆಯ ಮತ್ತು ಹೊಸ ಜಗತ್ತಿನ ಸಂಪರ್ಕಸೇತುವಾಗಿ.
ನನಗೆ ಅಕ್ಷರ ಕಲಿಸಿದ, ಬೆನ್ತಟ್ಟಿ ಬೆಳೆಸಿದ, ಕರೆದು ಅವಕಾಶ ನೀಡಿದ, ಜೊತೆಗಿದ್ದು ನೆಮ್ಮದಿ ತಂದ, ವಿನಾಕಾರಣ ಹೀಯಾಳಿಸಿದ, ಅವಕಾಶಗಳನ್ನು ನಿರಾಕರಿಸಿದ, ಅಸೂಯೆಪಟ್ಟ, ಅಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತ-
ಹಾಗೂ, ಹೇಳತೀರದ ನೂರಾರು ಭಾವನೆಗಳೊಂದಿಗೆ ನನ್ನ ಈ ಸಂಬಳದ ವೃತ್ತಿಗೆ ವಿದಾಯ ಹೇಳುತ್ತಿದ್ದೇನೆ.
- ಚಾಮರಾಜ ಸವಡಿ
Posted by Chamaraj Savadi (chamarajs@gmail.com) on September 18, 2011 03:36 PM· permalink
ಪ್ರೀತಿಯ ಸ್ನೇಹಿತರೆ, ಕಳೆದ ತಿಂಗಳು ನಮ್ಮ ಪ್ರೀತಿಯ ಮಗ ಹುಟ್ಟಿದ್ದು ನಿಮಗೆ ತಿಳಿದೇ ಇದೆ. ಗುರುಹಿರಿಯರ ಆಶೀರ್ವಾದ ದಿಂದ ''ಅಭಿನವ್'' ಎಂದು ಹೆಸರು ಇಟ್ಟಿದ್ದೇವೆ. ಅವನು ಹುಟ್ಟಿದ ಕಥೆ ಅವನ ಬಾಯಿಂದಲೇ ಕೇಳಿ :)
ಅಬ್ಬಾ, 9 ತಿಂಗಳು ಕತ್ತಲೆ ನಲ್ಲಿ ಇದ್ದಿದ್ದೆ, ಇದೇನಪ್ಪ, ಒಂದು ಲೈಟ್ ಕೂಡಾ ಹಾಕದೆ ಕಂಜೂಸ್ ಮಾಡ್ತಾರೆ ಅಂತ ಅಂದ್ಕೊಂಡಿದ್ದೆ,
ಎಲ್ಲಿ ನೋಡಿದ್ರುನು ಕತ್ತಲೆ, ಬರೆ ಆಚೆಯಿಂದ ಈಚೆ ಗೆ ಓಡೋದು, ಒದೆಯೋದು ಇದೆ ನನ್ನ ಪ್ರಪಂಚ ಆಗಿತ್ತು. ಬದುಕು ಅಂದ್ರೆ ಇದೇನಾ, ಜಗತ್ತು ಅಂದ್ರೆ ಇದೇನಾ ಅಂತ ಆಶ್ಚರ್ಯ ಆಗಿತ್ತು. ನನ್ನೊಳಗಿನ ನಾನು ದೊಡ್ಡ ಆಗ್ತಾ ಇದ್ದೆ ಹೊಟ್ಟೆ ಒಳಗೆ. ''ಬದುಕು ಅಂದ್ರೆ ಬೆಳೆಯೋದು, ಬಾಳು ಅಂದ್ರೆ ಬೆಳಗೋದು'' ಅಂತ ಇದ್ದವನಿಗೆ ಎಲ್ಲ ಕಡೆ ಕತ್ತಲೆ ಮಾತ್ರ ಕಾಣುತ್ತ ಇತ್ತು. ಕತ್ತಲೆ ಮನಸ್ಸನ್ನು ತುಂಬಾ ನೋಯಿಸ್ತ ಇತ್ತು. ದೊಡ್ಡ ಆಗ್ತಾ ಇದ್ದಂತೆ ಗೊತ್ತಾಗ್ತಾ ಹೋಯ್ತು, ನನ್ನ ಪ್ರಪಂಚ ಇದಲ್ಲ, ಇದು ಅಮ್ಮನ ಪ್ರೀತಿಯ ಪ್ರಪಂಚ. ಜಗತ್ತಿನ ಎಲ್ಲ ಕೆಟ್ಟ ಶಕ್ತಿಗಳಿಂದ ನನ್ನನ್ನು ರಕ್ಷಿಸಿ ಪ್ರಪಂಚಕ್ಕೆ ಯೋಗ್ಯವಾಗಿ ಬರಲು ಶ್ರಮಿಸಿದ ಅಮ್ಮನ ಪ್ರೀತಿಯ ಪ್ರಪಂಚ ಇದು ಎಂದು ನಿಧಾನ ಅರಿವಾಗತೊಡಗಿತು.
ಅಮ್ಮನಿಗೆ ಆ ದಿನಗಳಲ್ಲಿ ತುಂಬಾ ಕಷ್ಟ ಕೊಟ್ಟೆ. ಪಾಪ, ನನ್ನ ಪ್ರಪಂಚಕ್ಕೆ ತರಲು ಸ್ವೀಡನ್ನಿನಿಂದ ಭಾರತಕ್ಕೆ ಬರುವಂತೆ ಮಾಡಿದೆ. ನನಗೋ ಭಾರತದಲ್ಲೇ ಹುಟ್ಟುವ ಬಯಕೆ ಇತ್ತು. ಅಪ್ಪ, ಅಮ್ಮನ ಆಸೆಯೂ ಅದೇ ಆದದ್ದರಿಂದ ವಿದೇಶದ ಮಣ್ಣಿನಲ್ಲಿ ಹುಟ್ಟುವ ಸಂಕಷ್ಟ ತಪ್ಪಿತು.
ಮಣ್ಣಿನ ಸುಗಂಧ, ಬದುಕನ್ನೇ ಬದಲಿಸುತ್ತದಂತೆ.
ಗಂಗೆ ಹರಿದ, ತುಂಗೆ ನಲಿದ, ನಾಡಿನ ಮಣ್ಣಿನ ಸತ್ವವೇ ಅಂತದ್ದು. ಹುಟ್ಟಿದ ಘಳಿಗೆ ಇನ್ನು ನೆನಪಿದೆ, ಅಮ್ಮನ ಹೊಟ್ಟೆಯಿಂದ ಹೊರಗೆ ಬರಲು ತುಂಬಾ ಚಡಪಡಿಸುತ್ತಿದ್ದೆ. ಅಮ್ಮನಿಗಂತೂ ನೋವು ತಡೆಯಲು ಆಗುತ್ತಿರಲಿಲ್ಲ. ಅಮ್ಮನ ಬಾಯಿಯಿಂದ ''ಅಮ್ಮ'' , ''ಅಮ್ಮ'' ಎಂಬ ನೋವು ಕಿವಿಗೆ ತಟ್ಟುತಿತ್ತು. ಅವಳಿಗೆ ನೋವು ಕೊಟ್ಟು ನಾನು ಹೊರಗೆ ಬರುವ ಆಸೆ ಖಂಡಿತ ನನಗೆ ಇರಲಿಲ್ಲ. ಆದರೆ ಏನು ಮಾಡಲಿ, ಕತ್ತಲೆ ಯಲ್ಲಿ ಇದ್ದು ಇದ್ದು ನನಗೂ ಬೇಸರ ಬಂದಿತ್ತು. ಅಂತೂ ಆಗಸ್ಟ್ 16 ನೆ ತಾರೀಖು ಮಧ್ಯಾನ್ಹ 3 ಘಂಟೆ ಸುಮಾರಿಗೆ ನಾನು ಜನಿಸಿದೆ. ಸುಮಾರು 3.4 kg ಇದ್ದ ನನ್ನನ್ನು ಹೊರ ತರುವಲ್ಲಿ ವೈದ್ಯರು ತುಂಬಾ ಶ್ರಮಿಸಿದರು.
ಜನಿಸಿದ ಹೊತ್ತು ಅಮ್ಮನಿಗೆ ಅರ್ಧ ಎಚ್ಚರ ಇತ್ತು. ಕಣ್ಣಲ್ಲಿ ನೀರಿತ್ತು. ಬಹುಶ: ಬದುಕಿನ ಎಲ್ಲ ಘಟ್ಟದಲ್ಲಿ
''ನಿನ್ನ ನೋವು ನನಗಿರಲಿ, ನನ್ನೆಲ್ಲ ನಲಿವು ನಿನಗಿರಲಿ''
ಎಂದು ಅಮ್ಮ ನನಗೆ ಹೇಳುತ್ತಿದ್ದಂತೆ ಕಿವಿಯಲ್ಲಿ ಭಾಸವಾಗುತ್ತಿತ್ತು.
9 ತಿಂಗಳು ಹೊತ್ತು, ನೋವನ್ನು ನುಂಗಿ , ನನ್ನನ್ನು ಈ ಪ್ರಪಂಚಕ್ಕೆ ತಂದ ಅಮ್ಮನ ಪ್ರೀತಿಗೆ ಕೋಟಿ ಕೋಟಿ ನಮನಗಳು. ಆ ಹೊರಗೆ ಬಂದ ಮೊದಲ ಕ್ಷಣ ಅಪ್ಪನಿಗೆ ನನ್ನ ನೋಡುವ ತವಕ. ಅಪ್ಪನ ಕಣ್ಣಲ್ಲಿ ಆನಂದದ ಕಣ್ಣೀರು ಬಂದಿದ್ದು ಕಾಣುತ್ತಿತ್ತು. ಅಪ್ಪಂದಿರ ಪ್ರೀತಿಯೇ ಅಂತಾದ್ದು. ಅಮ್ಮನ ಮಡಿಲ ಸಾಂತ್ವನ ಇಲ್ಲದಿದ್ದರೂ, ಬದುಕಿಗೆ ಸವಾಲು ಹಾಕುವ ವಿಶ್ವಾಸವಿರುತ್ತದೆ. ಅಂದು ಅಪ್ಪನ ಕೈ ನನ್ನ ಕೆನ್ನೆ ಸವರಿದಾಗ ಅನಿಸಿದ್ದು ಅದೇ.
ಹುಟ್ಟಿದ ಕೆಲವು ದಿನಗಳು ಬರೆ ಅಳುವುದು. ನಿದ್ದೆ ಮಾಡುವುದು. ಅಪ್ಪ, ಅಮ್ಮನಿಗೆ ಕೊಟ್ಟ ಕಾಟವನ್ನು ಅವರಿಂದಲೇ ದೊಡ್ಡವನಾದಾಗ ಕೇಳುವ ಆಸೆಯಿದೆ.
ನನ್ನ ಹಠ ತುಂಬಾ ಇತ್ತು. ಅಮ್ಮನಿಗಂತೂ ನಿದ್ದೆ ಇಲ್ಲ, ಬೆನ್ನು ನೋವು ಬೇರೆ, ನನ್ನ ಹಠ ಒಂದೇ ಸಮನೆ. ಆದರೆ ನಾನು ಏನು ಮಾಡಲಿ, ನನಗೆ ಆಗ ಅಳುವುದು ಬಿಟ್ಟು ಬೇರೇನೂ ಬಾರದು. ಅದು ಬಿಟ್ಟರೆ ನಂಗೆ ಗೊತ್ತಿದದ್ದು ನಿದ್ದೆ ಮಾಡುವುದು ಮಾತ್ರ. ಹಠ ನನಗೆ ಆಟವಿದ್ದಂತೆ, ಕಾರಣ ನನ್ನ ಬಗ್ಗೆ ಯಾರಾದರೂ ಲಕ್ಷ ಕೊಡದಿದ್ದರೆ ಅತ್ತು ಹೆದರಿಸುತ್ತಿದ್ದೆ. ಅಂತೂ ಹುಟ್ಟಿದ 11 ನೇ ದಿನ ಅಪ್ಪ, ಅಮ್ಮ ಇಬ್ಬರು ಸೇರಿ ನನಗೆ ''ಅಭಿನವ್' ಎಂಬ ಸುಂದರ ಹೆಸರನ್ನು ಇಟ್ಟರು.
ನಂತರದ ದಿನಗಳಲ್ಲಿ ನಾನು ಅಳುವುದನ್ನು ಕಡಿಮೆ ಮಾಡದಿದ್ದರೂ ಅಮ್ಮನಿಗೆ ಕಾಟ ಕೊಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ. ಅಪ್ಪನಂತು ನನ್ನ ಬಿಟ್ಟು ಕೆಲಸಕ್ಕೆಂದು ಮಲೇಶಿಯಾ ಕ್ಕೆ ಹೋಗಿದ್ದಾರೆ. ಅವರ ನೆನಪಿನಲ್ಲಿ ಇದ್ದೇನೆ. ಅಪ್ಪನಿಗೂ ನನ್ನ ತುಂಬಾ ನೆನಪು,,,, ಪಾಪ, ಅಪ್ಪ ಬೇಗನೆ ಬರುತ್ತಾರೆ ಎಂಬ ನೀರೀಕ್ಷೆ ನನ್ನದು.
ಪುಟ್ಟ ಕಾಲುಗಳನ್ನು ಇಟ್ಟು ನಡೆಯುವ ತವಕ ನನಗೆ, ಆದರೆ ಏನು ಮಾಡಲಿ, ಇನ್ನು ಕಾಯಬೇಕಂತೆ, ಅಮ್ಮನ ಅಪ್ಪಣೆಯಿದೆ, ನಾನಿನ್ನೂ ಚಿಕ್ಕವನಂತೆ, ಸರಿ, ಅಮ್ಮನ ಮಾತು ನನಗೆ ವೇದ ವಾಕ್ಯ ಇದ್ದಂತೆ. ಬೇಗ ದೊಡ್ಡವನಾಗುವ ಆಸೆ ಇದೆ :)
ಅಪ್ಪನ ಅಪ್ಪಣೆಯ ಮೇರೆಗೆ ಅಪ್ಪನ ಬ್ಲಾಗ್ ನಲ್ಲಿ ನನ್ನ ಹುಟ್ಟಿದ ಕಥೆ ಹೇಳಿದ್ದೇನೆ. ಸದ್ಯದಲ್ಲಿಯೇ ಅಪ್ಪನ ಸಹಾಯದಿಂದ ''ಅಭಿನವ ಉವಾಚ'' ಎಂಬ ಬ್ಲಾಗ್ ನಲ್ಲಿ ಇನ್ನು ಹೆಚ್ಚು ಬರೆಯುತ್ತೇನೆ. ನನ್ನ ಬ್ಲಾಗ್ ''
http://gurubabbigadde.blogspot.com/'' ಇಲ್ಲಿಯೇ ಬರೆಯುತ್ತೇನೆ. ಸದ್ಯಕೆ ನನ್ನ ಕೆಲವು ಫೋಟೋಗಳು ನಿಮಗಾಗಿ ಹಾಕಿದ್ದೇನೆ. ನೋಡುತ್ತಿರಲ್ಲ,
ಬೇಡ ಅಂದ್ರು ಕೇಳೋಲ್ಲ, ಏನೋ ಹಚ್ಚಿದ್ದಾರೆ ತಲೆಗೆ
ಯಾರೋ ಇಣುಕಿ ನೋಡ್ತಾ ಇದಾರೆ ನನ್ನ, ಎದುರಿಗೆ ಬರೋಕೆ ಏನು ಕಷ್ಟ?
ಏನು ಮಾಡೋದು, ಅಮ್ಮ ಯಾರತ್ರನೋ ಮಾತಾಡ್ತಾ ಇದಾಳೆ, ಈಗ ಹಠ ಮಾಡಿದ್ರೆ ಬರ್ತಾಳೆ ನೋಡೋಕೆ, ಆದ್ರೆ ಪಾಪ ಯಾಕೆ ತೊಂದ್ರೆ ಕೊಡೋದು?
ಸರಿ ನಿದ್ದೆ ಬರೋ ಟೈಮ್ ಆಯಿತು
ಮಲಗ್ತಿನಪ್ಪ ನಾನು, ನೀವು ಮಲ್ಕೊಳ್ಳಿ, ಮತ್ತೆ ಸಿಗೋಣ, ಟಾ ಟಾ
ಅಲ್ಲಿಯತನಕ ನಿಮ್ಮೆಲ್ಲರ ಪ್ರೀತಿ ಹಾರೈಕೆ ನನ್ನ ಮೇಲೆ ಇರಲಿ ,
ಪ್ರೀತಿಯ
ಅಭಿನವ
Posted by ಸಾಗರದಾಚೆಯ ಇಂಚರ (koorsebabbi@gmail.com) on September 18, 2011 01:25 PM· permalink
"ಆತ್ಮನಿಗೆ ಆತ್ಮನೇ ಮಿತ್ರ,ಆತ್ಮನಿಗೆ ಆತ್ಮನೇಶತ್ರು!ಆತ್ಮನಿಂದಲೇ ಆತ್ಮನ ಉದ್ಧಾರ!ಆತ್ಮನಿಂದಲೇ ಆತ್ಮನ ಅವಸಾನ!"ಹೀಗೆನ್ನುತ್ತದೆ ಭಗವದ್ಗೀತೆ(೬ ನೇ ಅಧ್ಯಾಯ ೫ ನೇ ಶ್ಲೋಕ).
ಇದೇ ಭಾವ ಕೆ.ಸಿ.ಶಿವಪ್ಪ ನವರ 'ಮುದ್ದುರಾಮನ ಮನಸು'ಪುಸ್ತಕದ ಈ ಕೆಳಗಿನ ಚೌಪದಿಯಲ್ಲಿದೆ:
ಯಾರು ಮುನಿದರೆ ಏನು?ಯಾರು ಒಲಿದರೆ ಏನು?
ನಿನ್ನರಿವು ನಿನಗೆ ಮುದ ತರದಿರುವ ತನಕ ?
ಸಂಗ ಸುಖ ಶಾಶ್ವತವೆ?ಕಡಲ ಸೇರದೆ ಹೊನಲು?
ನೀ ಅತ್ಮಸಖನಾಗು-ಮುದ್ದು ರಾಮ. (333)
ನಾವು ಎಲ್ಲಿಯವರೆಗೆ ನಮ್ಮ ಸಂತೋಷಕ್ಕಾಗಿ ಹೊರಗಿನ ಪ್ರಪಂಚದ ಆಗು ಹೋಗು ಗಳ ಮೇಲೆ,ಇತರ ವ್ಯಕ್ತಿಗಳ ಮೇಲೆ ಅವಲಂಬಿತರಾಗಿರುತ್ತೆವೋ ಅಲ್ಲಿಯವರೆಗೆ ನಮಗೆ ದುಃಖ ತಪ್ಪಿದ್ದಲ್ಲ ಎನ್ನುತ್ತದೆ ಗೀತೆ.ಆತ್ಮದ ಅರಿವನ್ನು ಧ್ಯಾನದಿಂದ ಪಡೆದು 'ಆತ್ಮ ಸಖ'ನಾದರೆ ನಮಗೂ ಆನಂದ ,ನಮ್ಮ ಸುತ್ತಲಿನವರಿಗೂ ಆನಂದ!ಏನಂತೀರಿ?ನಿಮ್ಮ ಅನಿಸಿಕೆ ತಿಳಿಸಿ.
Posted by Dr.D.T.Krishna Murthy. (noreply@blogger.com) on September 18, 2011 12:58 PM· permalink
ಮಧ್ಯ ರಾತ್ರಿಯಲಿ ಮುದ್ದಾಗಿ ಮಲಗಿರುವ ನಿನ್ನ ಕರೆದೆಬ್ಬಿಸಿ, ಒಮ್ಮೆ ಪ್ರೀತಿಸಬೇಕೆನಿಸಿದೆ ಎಂದು ನಾ ಬಿಕ್ಕುವಾಗ ನನ್ನ ಸಂತೈಸಿದ ನಿನ್ನೊಲವು ಎಷ್ಟೊಂದು ಚೆಂದವಿತ್ತು. ಯಾವ ದುಃಸ್ವಪ್ನ ಕಾಡಿತೋ ನನ್ನವಳ ಎಂದು ನನ್ನ ಸ್ವಪ್ನವ ಮನದಲ್ಲೇ ನೀ ಶಪಿಸಿದ ರೀತಿ ಎಷ್ಟು ಚೆಂದವಿತ್ತು. ನಿನ್ನೆದೆಗೆ ಕಿವಿಗೊಟ್ಟು ಮಲಗಿದ್ದೆ ಇನಿಯ, ನನಗೆ ಆ ದನಿ ಕೇಳಿಸಿತ್ತು. ನನ್ನ ತಲೆ ನೇವರಿಸುತ್ತಿದ್ದ ಆ ಕೈಗಳ ಬಿಸುಪಲ್ಲಿ ಜನ್ಮಕ್ಕಾಗುವಷ್ಟು ಒಲವಿತ್ತು.
ನಮ್ಮ ಪ್ರೇಮವ ಕದ್ದು ನೋಡಲೆಂದೇ ಸೊಳ್ಳೆ ಪರದೆಯ ಒಳಗೆ ಕಳ್ಳನಂತೆ ಸೇರಿಕೊಂಡ ಖದೀಮ ಸೊಳ್ಳೆಯನ್ನು ಸದ್ದಾಗದಂತೆ ಹೊಡೆಯಲೆತ್ನಿಸುವಾಗ ನನ್ನ ನಿದ್ರೆಗೆ ಭಂಗವಾದೀತೆಂಬ ನಿನ್ನ ಕಾಳಜಿಯಲ್ಲಿ ಎಷ್ಟೊಂದು ಒಲವಿತ್ತು.
ಯಾರೋ ಪ್ರೀತಿಸಿ ಮದುವೆಯಾದವರು ಹೆಂಡತಿಯನ್ನು ಕಳೆದುಕೊಂಡದ್ದನ್ನು ನೆನೆದು ಅರೆನಿದ್ರೆಯಲ್ಲಿದ್ದು ಕುಳಿತು ನಾನು ಅಳುವಾಗ, ನಮ್ಮಿಬ್ಬರನ್ನು ಯಾರೂ ಬೇರೆ ಮಾಡಲಾರರು, ಸಾವು ಕೂಡ....ಎಂದು ನೀ ಸಂತೈಸುವಾಗ ನಿನ್ನ ಕಂಗಳ ಕೊಳದ ಹನಿಯಲ್ಲಿ ಹೃದಯಾಂತರಾಳದ ಪ್ರೇಮವೆಷ್ಟು ಚೆಂದವಾಗಿ ಪ್ರತಿಫಲಿಸಿತ್ತು.
ಜೀವಗಳು ದೇವರೇ ಬೆಸುಗೆ ಹಾಕಿದಂತೆ ಬೆಸೆದುಕೊಂಡ ಕ್ಷಣಗಳಲ್ಲಿ ಜಗತ್ತಿನ ಪರಿವೆಯೇ ಇಲ್ಲದೇ, ಒಬ್ಬರಿಗೊಬ್ಬರು ಸಂಪೂರ್ಣ ಸಮರ್ಪಿತರಾಗಿ ಪ್ರೀತಿಸುವಾಗಲೂ ನನ್ನ ಪ್ರೀತಿಗಿಂತ ನಿನ್ನ ಪ್ರೀತಿಯೇ ಚೆಂದವಿತ್ತೇನೋ ಎಂದೆನಿಸಿದಾಗ ನಿನ್ನ ಪ್ರೀತಿಯ ಮೇಲೆ ನನ್ನ ಪ್ರೀತಿಗೆ ಸಣ್ಣಗೆ ಹೊಟ್ಟೆ ಕಿಚ್ಚಾಗಿತ್ತು.
ಯಾರೋ ಯಾರನ್ನೋ ಪ್ರೀತಿಸಿಕೊಳ್ಳುತ್ತ ಬರೆದ ಸಾಲುಗಳಲ್ಲಿ ಭಾವಗಳು ತುಂಬಿ ತುಳುಕಿದ್ದು ಗೊತ್ತಾದದ್ದು ನಿನ್ನ ಪ್ರೀತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಓದಿದಾಗಲೇ. ನಿನ್ನ ಪ್ರೀತಿಯೇ ಈ ಜಗತ್ತನ್ನು ಇಷ್ಟು ಸುಂದರವಾಗಿಸಿದ್ದು ಅಂತ ಅರ್ಥವಾದಾಗ, ಖುಷಿಯ ಬೆನ್ನಲ್ಲೇ ನಿನ್ನ ಹೊರತು ಜಗತ್ತು ಬರಡು, ಭಾವರಹಿತ ಕಲ್ಲು ಮಣ್ಣುಗಳ ಸಂಗ್ರಹಣಾಲಯ ಎನ್ನಿಸಿ, ಮರುಭೂಮಿಯಲ್ಲಿ ಮಧ್ಯಾಹ್ನ ಒಂಟಿಯಾಗಿ ನಿಲ್ಲಲಾರದೇ ನಿಂತ ಹೆಣ್ಣಿನ ದೀನ ಮುಖ ಕಣ್ಣೆದುರು ಬರುತ್ತದೆ. ಆ ಮುಖ ನನ್ನದಾ? ಎನಿಸಿದಾಗ ಭಯ ತಾಳಲಾರದೇ ನಿನ್ನ ಎದೆಯಲ್ಲಿ ಹುದುಗಿಕೊಳ್ಳುತ್ತೇನೆ. ಮತ್ತದೇ ಒಲವು ತುಂಬಿದ ನಿನ್ನ ಕೈಗಳು ಬಲವಾಗಿ ನನ್ನ ಅಪ್ಪಿಕೊಳ್ಳುತ್ತವೆ. ಮತ್ತೆ ಜಗತ್ತು ಸುಂದರವಾಗುತ್ತದೆ.
ಯಶೋಧರೆಗೂ ಸಿದ್ಧಾರ್ಥನ ಜೊತೆ ಹೀಗೆಲ್ಲ ಆಗಿದ್ದಿರಬಹುದಾ? ಅವನೂ ಅವಳನ್ನು ನೀ ನನ್ನ ಪ್ರೀತಿಸಿದ ಹಾಗೇ ಪ್ರೀತಿಸಿದ್ದನಾ? ಎನ್ನಿಸಿ ತುಂಬ ಅಳು ಬರುತ್ತಿದೆ ಈಗ...
Posted by ಜ್ಯೋತಿ ಶೀಗೆಪಾಲ್ (jojasmin@gmail.com) on September 17, 2011 06:25 AM· permalink
Posted by Subrahmanya (noreply@blogger.com) on September 17, 2011 04:49 AM· permalink

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಹಸುರಿನ ಮರಗಿಡಗಳ ನಡುವೆ ಟೆರ್ರಾಕೋಟಾ ಕೆಂಪು ಬಣ್ಣದ ಆಕರ್ಷಕ ಗ್ರಾಮ ಪಂಚಾಯಿತಿಯ ಕಟ್ಟಡ.
ಗ್ರಾಮ ಪಂಚಾಯಿತಿ ಕಚೇರಿ ಎಂದ ಕೂಡಲೇ ತಟ್ಟನೇ ನೆನಪಾಗುವಂತದ್ದು ಕಿರಿದಾದ ಕಟ್ಟಡ ಮತ್ತು ಮೇಜುಕುರ್ಚಿಗಳು. ಕಚೇರಿ ಎದುರು ಸ್ವಲ್ಪ ಜಾಗ ಮತ್ತು ಆಗಾಗ್ಗೆ ಬಣಗುಡುವಂತಹ ವಾತಾವರಣ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಚೇರಿಗೆ ಒಮ್ಮೆ ಭೇಟಿ ನೀಡಿದರೆ, ಗ್ರಾಮ ಪಂಚಾಯಿತಿ ಕುರಿತ ಹಳೆಯ ಕಲ್ಪನೆ ಮತ್ತು ಭಾವನೆಯೇ ಹೊರಟುಹೋಗುತ್ತದೆ. ಕಾರಣ, ಕಚೇರಿ ಸುತ್ತಮುತ್ತಲೂ ಹಸಿರು ಮತ್ತು ಮನಸ್ಸಿಗೆ ಮುದ ನೀಡುವಂತಹ ಹಿತವಾದ ವಾತಾವರಣ.
ಕಚೇರಿ ಸುತ್ತಲೂ ಗಿಡಮರಗಳನ್ನು ಬೆಳೆಸಲಾಗಿದೆ. ಒಪ್ಪವಾಗಿ ಕತ್ತರಿಸಿ ಬೇಲಿ ಗಿಡಗಳಿಗೆ ವಿಶಿಷ್ಟ ಆಕಾರ ನೀಡಲಾಗಿದೆ. ಮೆತ್ತನೆಯ ಹುಲ್ಲುಹಾಸು, ಅದರ ಬಳಿಯೇ ಕೆಂಪು ಬಣ್ಣದ ಕಟ್ಟಡ ಆಕರ್ಷಕವಾಗಿ ಕಾಣುತ್ತದೆ. ಹಸಿರು ವಾತಾವರಣದ ಜೊತೆಗೆ ಗ್ರಾಮ ಪಂಚಾಯಿತಿಯವರು ಸೌರವಿದ್ಯುತ್ ಸೌಲಭ್ಯ ಕೂಡ ಕಲ್ಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಅಂಗನವಾಡಿ ಮತ್ತು ಗ್ರಂಥಾಲಯ ಒಂದೇ ಆವರಣದಲ್ಲಿ ಗಿಡಮರಗಳ ಮಧ್ಯದಲ್ಲಿ ಇರುವುದು ವಿಶೇಷ. ಪಂಚಾಯಿತಿ ಕಚೇರಿಯೊಳಗೆ ಗಣಕಯಂತ್ರ ಕೊಠಡಿ, ಅಧಿಕಾರಿಗಳು ಮತ್ತು ಅಧ್ಯಕ್ಷರ ಕೊಠಡಿ ಮತ್ತು ಸಭಾಂಗಣವು ವಿಶಾಲವಾಗಿದೆ.

ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿರುವ ಹಸಿರು ಉದ್ಯಾನ ಮತ್ತು ಹೂಗಿಡಗಳು.
"ಎಚ್.ಎಂ.ಕೃಷ್ಣಮೂರ್ತಿ ಅವರು ಪ್ರಧಾನರಾಗಿದ್ದ ಕಾಲದಲ್ಲಿ ಡಿಸೆಂಬರ್ ೧೯೯೦ ರಲ್ಲಿ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆಯನ್ನು ಮಾಡಿ ಕಟ್ಟಡವನ್ನು ಕಟ್ಟಲಾಗಿತ್ತು. ಹಿಂದೆ ಹತ್ತಿರದಲ್ಲಿ ಕುಂಟೆ ಇದುದರಿಂದಾಗಿ ಕಟ್ಟಡ ಬಿರುಕು ಬಿಟ್ಟು ಶಿಥಿಲವಾಗತೊಡಗಿತ್ತು. ೨೦೦೯ರಲ್ಲಿ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಅವಧಿಯಲ್ಲಿ ನವೀಕರಣ ಮಾಡಲಾಯಿತು. ಗ್ರಾಮದ ರಾಜ್ಕುಮಾರ್ ಸಂಘದ ಸದಸ್ಯರು ಕಟ್ಟಡಕ್ಕೆ ಟೆರ್ರಾಕೋಟ ಬಣ್ಣವೇ ಇರಬೇಕು ಎಂದು ಕಟ್ಟಡದ ಅಂದಚಂದಕ್ಕಾಗಿ ಬಣ್ಣಗಳ ಆಯ್ಕೆಯನ್ನು ಮಾಡಿದರು. ಹಸಿರು ಪರಿಸರವನ್ನು ನಿರ್ಮಿಸಲು ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ನೆರವಾದರು. ಪಂಚಾಯಿತಿಗೆ ನಿಶ್ಚಿತ ವರಮಾನವಿದ್ದರೆ ಮಾತ್ರ ಇವೆಲ್ಲವುಗಳ ನಿರ್ವಹಣೆ ಸಾಧ್ಯವೆಂದು ಐದು ಅಂಗಡಿಗಳನ್ನು ಕಟ್ಟಿದೆವು. ಈಗ ಅದರಿಂದ ತಿಂಗಳಿಗೆ ೭,೫೦೦ ರೂಪಾಯಿ ಬಾಡಿಗೆ ಬರುತ್ತಿದೆ. ರುದ್ರಭೂಮಿಯಲ್ಲಿ ಅರ್ಧ ಎಕರೆಯಷ್ಟು ಮುಳ್ಳು ಹಾಗೂ ಕಳ್ಳಿಗಿಡ ಆವರಿಸಿತ್ತು. ಅವನ್ನು ಸ್ವಚ್ಛಗೊಳಿಸಿ ೪೦ ಸಸಿಗಳನ್ನು ನೆಡಿಸಿದ್ದೆವು. ಈಗ ಅವು ಮರಗಳಾಗಿವೆ. ಅಲ್ಲಿ ಕೈಕಾಲು ತೊಳೆಯಲು ನೀರಿನ ಸಿಸ್ಟರ್ನ್ ಕೂಡ ಇರಿಸಿದ್ದೇವೆ. ನಮ್ಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆಂದೇ ಟಿಲ್ಲರನ್ನು ಹೊಂದಿದ್ದೇವೆ" ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಮಂಜುನಾಥ್ ತಿಳಿಸಿದರು.

"ಹಿಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಅವರ ಅವಧಿಯಲ್ಲಿ ಪ್ಲಾಸ್ಟಿಕ್ ರಹಿತ ಪಂಚಾಯಿತಿಯನ್ನಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸಿದೆವು. ವಿದ್ಯುತ್ ಉಳಿತಾಯ ಮಾಡಲು ಮೊದಲಿದ್ದ ಟ್ಯೂಬ್ಲೈಟುಗಳ ಬದಲಿಗೆ ಈಗ ಸಿಎಫ್ಎಲ್ ಬಲ್ಬ್ಗಳನ್ನು ಅಳವಡಿಸುತ್ತಿದ್ದೇವೆ. ಮೇಲೂರಿನ ಆಸ್ಪತ್ರೆ ಆವರಣದಲ್ಲಿರುವ ಸ್ಥಳದಲ್ಲಿ ಗಿಡಗಳನ್ನು ನೆಡಲು ಯೋಜನೆ ಹಮ್ಮಿಕೊಂಡಿದ್ದೇವೆ. ನಮ್ಮ ಗ್ರಾಮದಿಂದ ಚೌಡಸಂದ್ರದವರೆಗೂ ರಸ್ತೆಬದಿ ತಂಪಾದ ನೆರಳು ನೀಡುವ ಮರಗಳಿವೆ. ಅದೇ ಮಾದರಿಯಲ್ಲಿ ಗಂಗನಹಳ್ಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನೂ ರೂಪಿಸಿದ್ದೇವೆ" ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಹೇಳಿದರು.

ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಿಬ್ಬಂದಿ.
Posted by ಮಲ್ಲಿಕಾರ್ಜುನ.ಡಿ.ಜಿ. (malli7997@gmail.com) on September 16, 2011 01:42 PM· permalink

" ತಮ್ಮಾ ವಿಶೂ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡುತ್ತೀಯಾ ? "
ಕಾರಿರುಳ ಕತ್ತಲಲ್ಲಿ ಜೀರುಂಡೆಗಳ ಕೂಗು, ಬಾವಲಿಗಳ ಹಾರಾಟ, ಕಾಡುಪ್ರಾಣಿಗಳ ಸರಸರ ಸಂಚಲನ, ಅಲ್ಲಲ್ಲಿ ನರಿಗಳ ಊಳು, ಕರಡಿಗಳೂ ಇದ್ದಿರಬಹುದಾದ ಪರಿಸರ-ಗೊತ್ತಿಲ್ಲದ ಸಂಗತಿ ! --ಇಂಥಾ ಮಣ್ಣರಸ್ತೆಯಲ್ಲಿ ಯಾವ ಬೆಳಕಿನ ಸಹಾಯವೂ ಇಲ್ಲದ ಆ ಕತ್ತಲಲ್ಲಿ ಬಾಳದೀವಿಗೆಯಾದ ಜ್ಞಾನನದೀವಿಗೆಯನ್ನು ಬೆಳಗುವ ಸಲುವಾಗಿ, ವ್ಯಾಸಂಗಮಾಡುತ್ತಿರುವ ವಿದ್ಯಾಲಯಕ್ಕೆ ತನ್ನ ಓದಿನಲೆಕ್ಕದ ಹಣಪಾವತಿಸುವ ಸಲುವಾಗಿ ಆ ಹಣವನ್ನು ಪಡೆಯಲು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ನಡೆದಿದ್ದ ವಿದ್ಯಾರ್ಥಿಯ ಮನದಲ್ಲಿ ಕಠಿಣ ನಿರ್ಧಾರವೊಂದಿತ್ತು---ತಾನು ಪ್ರಯತ್ನಿಸಿ ಹಲವರ ಬಾಳಿಗೆ ಬೆಳಕಾಗುವುದು ! ಅದೇ ದೃಢವಿಶ್ವಾಸ ಅದೇ ಅಚಲ ನಂಬಿಕೆ ಅದೇ ಸಾಧಿಸುವ ಛಲ ಹುಡುಗನನ್ನು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೂ ಅಲ್ಲಿಂದ ಮರಳಿ ಬೆಂಗಳೂರಿಗೂ ನಡೆದೇ ಸಾಗುವಂತೇ ಮಾಡಿತ್ತು. ವಿದ್ಯಾರ್ಜನೆಗೆ ಮನೆಯಲ್ಲಿ ಪಡೆದ ಶುಲ್ಕದ ಹೊರತಾಗಿ ಬಿಡಿಗಾಸೂ ಇಲ್ಲದ ಬಡತನಕ್ಕೆ ಆತ ಮರುಗಲಿಲ್ಲ, ಬದಲಾಗಿ ಅದರಿಂದ ನೇರಮಾರ್ಗದಲ್ಲಿ ಬಿಡುಗಡೆ ಬಯಸಿದರು, ಯೋಚಿಸಿದರು, ಯೋಜಿಸಿದರು, ಬೆಳೆದರು, ಹಲವರನ್ನು ಬೆಳೆಸಿದರು ಮತ್ತು ಸ್ವತಃ ತನ್ನ ಜೀವನವನ್ನೇ ದೇಶಕ್ಕಾಗಿ ರಾಜ್ಯಕ್ಕಾಗಿ ದುಡಿಸಿದರು ! ಅಂತಹ ಭಾರತದ ಸುಪುತ್ರ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಹುಟ್ಟಿ ನೂರೈವತ್ತು ವರ್ಷಗಳು ಕಳೆದುಹೋದವು !!
ಜನಸಾಮಾನ್ಯರಾದ ನಾವು ಜಲಪಾತವನ್ನು ಕಂಡರೆ " ಆಹಾಹಾ ಎಂತಹ ಸೌಂದರ್ಯ " ಎನ್ನುತ್ತಾ ಯಾರೋ ತಯಾರಿಸಿದ ಡಿಜಿಟಲ್ ಕ್ಯಾಮರಾ ಹಿಡಿದು ಕ್ಲಿಕ್ಕಿಸುತ್ತಿರುತ್ತೇವೆ ಬಿಟ್ಟರೆ ಅಂತಹದ್ದೇ ಆದ ಜೋಗ ಜಲಪಾತವನ್ನು ಕಂಡಾಗ ಈ ಮಹಾತ್ಮ ಹೇಳಿದ್ದು " ವ್ಹಾಟ್ ಎ ವೇಸ್ಟ್ " ! ಹರಿದು ಪೋಲಾಗುವ ನೀರಿನ ಶಕ್ತಿಯನ್ನೇ ಬಳಸಿ ವಿದ್ಯುತ್ತನ್ನು ತಯಾರಿಸುವ ಅತಿ ದೊಡ್ಡ ಮಟ್ಟದ ಯಂತ್ರಾಗಾರವನ್ನು ರೂಪಿಸಿದ ಸ್ಥಾಪಿಸಿದ ಆ ಮನುಷ್ಯ ಸ್ವತಃ ಅತ್ಯಂತ ಸಣಕಲು ಶರೀರಿ ಎಂಬುದನ್ನು ನೋಡಿದಾಗ ನಾವೆಷ್ಟು ದಂಗಾಗುತ್ತೇವೆ ಅಲ್ವೇ ? ಈ ರಾಜ್ಯದ ಯಾ ದೇಶದ ಯಾರನ್ನೇ ಮರೆತರೂ ವಿಶ್ವೇಶ್ವರಯ್ಯನವರನ್ನು ಮರೆಯಲು ಮತ್ತು ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಯಾಕೆಂದರೆ ದೀಪಕ್ಕೆ ’ಇದು ದೀಪ ಇರುತ್ತದೆ ’ ಎಂದು ಯಾರೂ ಹೊಸದಾಗಿ ಬೋರ್ಡುಹಾಕುವುದು ಬೇಕಾಗುವುದಿಲ್ಲ!
ಬಡತನದಲ್ಲಿ ಕಷ್ಟಪಟ್ಟು ಎಲ್ಲೆಲ್ಲೋ ಹೋಗಿ, ರಾಜರ ಕಾಲದ ಬೀದಿ ದೀಪದಲ್ಲಿ[ಹರಳೆಣ್ಣೆ ದೀಪ] ಓದಿ ಸಿವಿಲ್ ವಿಭಾಗದಲ್ಲಿ ತಾಂತ್ರಿಕ ಪದವಿಯನ್ನು ಪೂರೈಸಿದ ಶ್ರೀಯುತರು ಮೈಸೂರು ರಾಜ್ಯದಲ್ಲಿ ಅಂದಿಗೆ ಇರುವ ಕೊರತೆಗಳನ್ನು ನೀಗಿಸಲು ಯೋಜನೆಗಳನ್ನು ತನ್ನೊಳಗೇ ನಿಯೋಜಿಸಿಕೊಂಡರು. ಆ ಸಮಯದಲ್ಲಿ ಹಿ ಈಸ್ ಒನ್ ಮ್ಯಾನ್ ಆರ್ಮಿ ! ಕರ್ನಾಟಕಕ್ಕೆ ಕುಡಿಯುವ ನೀರಿನ, ವಿದ್ಯುತ್ತಿನ್ನ ಅವಶ್ಯಕತೆಯಿತ್ತು. ಹಡೆದ ಅಮ್ಮ ಮನೆಯಲ್ಲಿ " ತಮ್ಮಾ ವಿಶೂ ಜನರಿಗೆ ಕುಡಿಯಲು ನೀರನ್ನು ಪೂರೈಸುವ ಯಾವುದಾದರೂ ಕೆಲಸವನ್ನು ಮಾಡಪ್ಪಾ " ಎಂದು ಹರಸಿದ್ದರು, ಹಡೆದಮ್ಮನ ಹರಕೆಯ ಫಲ ಕಾವೇರಿ ನದಿಗೆ ಸೇತುವೆಯ ನಿರ್ಮಾಣ! ಕನ್ನಂಬಾಡಿಕಟ್ಟೆ ನಿರ್ಮಾಣಕ್ಕೂ ಮುನ್ನ ಮೈಸೂರಿಗೆ ತೆರಳಿದ್ದ ಅವರನ್ನು ಕಂಡ ರಾಜರಿಗೆ ಅನಿಸಿದ್ದು ’ಯಾವನೋ ಪೋರ ನದಿಗೆ ಗೋಡೆ ಕಟ್ಟಿ ನೀರು ಶೇಖರಿಸುತ್ತಾನಂತೆ ಎಲ್ಲಾದರೂ ಉಂಟೇ ? ’ ಎಂಬಂಥದು. ಆದರೂ ತಮ್ಮ ಸಹಜ ರಾಜಸ ಮನೋವೃತ್ತಿಯಿಂದ ರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು " ಆಗಲಿ ತಮ್ಮಾ ಇದೋ ಹಣ ನೀಡುತ್ತೇನೆ ಆದರೆ ಮತ್ತೆ ಕೇಳಬೇಡ-ಇಷ್ಟರಲ್ಲೇ ಮುಗಿಸಬೇಕು ಅಥವಾ ನಿಲ್ಲಿಸಿಬಿಡಬೇಕು ಅಲ್ಲದೇ ಇದು ಮೇಲಾಗಿ ಮೈಸೂರು ರಾಜ್ಯದ ಪ್ರಜೆಗಳ ಮಾನಾಪಮಾನದ ಪ್ರಶ್ನೆ ಅದನ್ನೇ ಪಣವಾಗಿಸಿದ್ದೇನೆ ಕಟ್ಟು ಹೋಗು " ಎಂದು ಹೇಳಿಬಿಟ್ಟರಂತೆ ! ಕಟ್ಟೆ ಪೂರ್ತಿಯಾಗುವುದಕ್ಕೂ ಮುನ್ನ ಹಣ ಖಾಲಿಯಾಯಿತು. ಮತ್ತೆ ರಾಜರನ್ನು ಕಂಡಿದ್ದಾಯ್ತು. ರಾಜರು ನೋಡುತ್ತಿದ್ದಂತೆಯೇ
" ಇನ್ನು ಹಣಕೊಡಲು ಸಾಧ್ಯವಿಲ್ಲ " ಎಂದುಬಿಟ್ಟರು.
" ಹಣವಲ್ಲ ಸ್ವಾಮೀ, ಸದ್ಯಕ್ಕೆ ಕನ್ನಡನಾಡಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿಯಿಲ್ಲ, ನಮ್ಮ ಕಟ್ಟೆ ಕಟ್ಟುವ ಆ ಪ್ರದೇಶದಲ್ಲಿ ೫-೬ ಮದ್ಯದ ಅಂಗಡಿಗಳನ್ನು ಇಡಲು ಅನುಮತಿ ಬೇಕು "
" ಅಲ್ಲಯ್ಯಾ ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧವಯ್ಯಾ ? "
" ಮಹಸ್ವಾಮೀ, ಕಟ್ಟೆ ಕಟ್ಟುವ ಕೂಲಿ ಕೆಲಸದವರು ಶನಿವಾರದ ಸಂಬಳ ಪಡೆದು ನೆರೆರಾಜ್ಯವಾದ ತಮಿಳು ಪ್ರಾಂತದಲ್ಲಿರುವ ಸೆರೆ ಅಂಗಡಿಗಳಿಗೆ ಹೋಗಿ ಅಲ್ಲಿ ಕುಡಿದು ಕಾಲಹರಣಮಾಡುತ್ತಾರೆ ಮತ್ತು ಸೋಮವಾರದ ತನಕ ನಮಗೆ ಅವರು ಮರಳಿ ಸಿಗುವುದಿಲ್ಲ. ಅವರು ದುಡಿದ ಹಣ ಇಲ್ಲೇ ಈ ರಾಜ್ಯದ ಅಂಗಡಿಯನ್ನೇ ಸೇರಿದರೆ ಅದೇ ಹಣವನ್ನು ಮರುವಿನಿಯೋಗಿಸುವುದರ ಜೊತೆಗೆ ಅವರನ್ನೂ ಇಲ್ಲೇ ಇರಿಸಿಕೊಂಡು ಜಾಸ್ತಿ ಕಾಲಹರಣವಾಗದಂತೇ ಬೇಗ ಮುಗಿಸಲು ಅನುಕೂಲವಾಗುತ್ತದೆ "
ರಾಜರು ತಲೆದೂಗಿದರು ! ಕನ್ನಂಬಾಡಿ ಎದ್ದು ನಿಂತಿತು, ಹಲವರಿಗೆ ಅನುಕೂಲವಯಿತು.
ಅವರು ಬದುಕಿದ್ದ ಕಾಲಘಟ್ಟದಲ್ಲೇ ಒಮ್ಮೆ ಕೃಷ್ಣರಾಜಸಾಗರ ಬತ್ತಿಹೋಯಿತು! ಜನರೆಲ್ಲಾ ಬೊಬ್ಬಿಟ್ಟರು, ಹಲವು ಮೇಧಾವಿಗಳು " ಏನು ಮಾಡೋದು ವಿಶ್ವೇಶ್ವರಯ್ಯನೋರೇ ? " ಎನ್ನುತ್ತಾ ಬಂದರು. ಆಗ ನಿಧಾನವಾಗಿ ಸರ್ ನೀಡಿ ಉತ್ತರ ಒಂದೇ " ಇದು ಸಕಾಲ, ದೇವರೇ ನೀಡಿದ್ದು-ಹಾಗೆಲ್ಲಾ ಮತ್ತೆ ಮತ್ತೆ ಲಭಿಸುವುದಿಲ್ಲ, ಹೋಗಿ ಜಲಾಶಯದ ಹೂಳನ್ನು ತೆಗೆಸಿಬಿಡಿ " !
೨೦೦೪ರ ಬೇಸಿಗೆಯಲ್ಲೂ ಜಲಾಶಯ ಖಾಲೀ ಆಗಿತ್ತು, ಆದರೆ ಹೂಳೆತ್ತುವ ಯಾವುದೇ ಸಾಹಸಕ್ಕೆ ಯೋಜನೆಗಳಿರಲಿ ಜಾಸ್ತಿ ನೀರು ನಿಂತರೆ ಒತ್ತಡದಿಂದ ಶತಮಾನದಷ್ಟು ಹಳತದ ಕಟ್ಟೆ ಒಡೆದರೆ ಎಂಬ ಹೆದರಿಕೆಗೆ ಯಾವ ರಾಜಕಾರಣಿಯೂ ಯಾವ ಎಂಜಿನೀಯರೂ ಮನಸ್ಸುಮಾಡಲಿಲ್ಲ! ಸರಕಾರಕ್ಕೇ ಸವಾಲು ಎಸೆಯುವ ಛಾತಿ ಇದ್ದುದು ಒಬ್ಬರಲ್ಲೇ ಅದು ಆಗಿಹೋಗಿರುವ ನಮ್ಮ ವಿಶ್ವೇಶ್ವರಯ್ಯನವರಲ್ಲಿ ಮಾತ್ರ!
ಮೈಸೂರಿನ ದಿವಾನರಾಗಿ ನೇಮಕಗೊಳ್ಳುವ ಮುನ್ನಾದಿನ ಹತ್ತಿರದ ಬಂಧು-ಮಿತ್ರ-ಆಪ್ತೇಷ್ಟರನ್ನು ಕರೆದು ಅವರು ಹೇಳಿದ್ದೇನು ಬಲ್ಲಿರೋ ? " ನಾಳೆಯಿಂದ ಮಹಾರಾಜರು ನನಗೆ ಅತ್ಯಂತ ದೊಡ್ಡ ಜವಾಬ್ದಾರಿಯೊಂದನ್ನು ಕೊಡಲಿದ್ದಾರೆ. ನನ್ನ ಹೆಸರನ್ನು ಬಳಸಿಕೊಂಡು ಅದನ್ನು ಎಲ್ಲೂ ದುರುಪಯೋಗಮಾಡದಂತೇ ಇರಿ ಎನ್ನಲು ನಿಮ್ಮನ್ನೆಲ್ಲಾ ಕರೆದಿದ್ದೇನೆ " ಹೇಳಿದ್ದು ಮಾತ್ರವಲ್ಲ ದಿವಾನಖಾನೆಯಿಂದ ಹಿಡಿದು ರಾಜರ ಸರಕಾರದ ಯಾವುದೇ ಅಂಗಗಳಲ್ಲೂ ತಮ್ಮ ಕುಟುಂಬ-ಬಳಗದ ಯಾರಿಗೂ ತನ್ನ ಪ್ರಭಾವದಿಂದ ನೌಕರಿ ಕೊಡಿಸುವ ಸರ್ಕಸ್ಸು ಮಾಡಲಿಲ್ಲ. ಪ್ರತಿಭಾನ್ವಿತರಿಗೆ ಎಲ್ಲಿದ್ದರೂ ಆದ್ಯತೆಯಿದೆ ಎಂಬುದು ಅವರ ಅನಿಸಿಕೆಯಾಅಗಿತ್ತು, ಅಭಿಪ್ರಾಯವಾಗಿತ್ತು.
ಸರಕಾರದ ಬೇರೇ ವಿಭಾಗದಲ್ಲಿ ಕೆಲಸಮಡುತ್ತಿರುವಾಗ ಒಮ್ಮೆ ಮಹಾರಾಜರು ಅವರನ್ನು ಕರೆದು
" ವಿಶ್ವೇಶ್ವರಯನೋರೇ, ನೀವು ಸ್ಥಾಪಿಸಿದ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಈಗ ನಷ್ಟದಲ್ಲಿ ನಡೆಯುತ್ತಿದೆಯಂತೆ ಅದಕ್ಕೇನಾದರೂ ಮಾಡಲು ಸಾಧ್ಯವೇ ? " ಎಂದರು. ಅಲ್ಲಿಗೆ ತೆರಳಿ ಅಲ್ಲಿನ ನ್ಯೂನತೆಗಳನ್ನು ಅವಲೋಕಿಸಿದ ಸರ್ ಎಂ.ವಿ ನಷ್ಟ ಭರಿಸುವ ಹಲವು ಮಾರ್ಗಗಳನ್ನು ತೋರಿಸಿಕೊಟ್ಟರಲ್ಲದೇ ಸ್ವತಃ ತಾನೇ ನಿಂತು ಅಮೇರಿಕಾದಂತಹ ರಾಷ್ಟ್ರಕ್ಕೆ ಕಬ್ಬಿಣ-ಉಕ್ಕು ಪೂರೈಸುವ ದೊಡ್ಡ ಆರ್ಡರ್ ಪಡೆದು ನಷ್ಟವನ್ನು ನಿವಾರಿಸಿಯೂ ಬಿಟ್ಟರು!
ವಿದೇಶವೊಂದರಲ್ಲಿ ಕನ್ಸಲ್ಟಂಟ್ ಆಗಿ ಮುದಿಪ್ರಾಯದ ಎಂಬತ್ತರಲ್ಲಿ ಭೇಟಿ ನೀಡಿದ್ದಾಗ, ಅಲ್ಲಿಯೂ ಯಾವುದೋ ಕಟ್ಟೆ[ಡ್ಯಾಮ್] ಕಟ್ಟುವ ಬಗ್ಗೆ ಮಾಹಿತಿ ನೀಡಬೇಕಾಗಿತ್ತಂತೆ. ಅಲ್ಲಿನ ತಜ್ಞರು ತಂದುಹಾಕಿರುವ ದೇಶವಿದೇಶಗಳ ಶಿಲೆಯ ಕಲ್ಲುಗಳ ಪೈಕಿ ಅತ್ಯಂತ ಉತ್ಕೃಷ್ಟವೆಂದು ಪರಿಗಣಿಸಿ ಹೆಚ್ಚಿನ ಹಣಕೊಟ್ಟು ತರಿಸಿದ್ದ ಒಂದು ರಾಶಿಯ ಕೆಲವು ಕಲ್ಲುಗಳನ್ನು ತಮ್ಮ ಊರುಗೋಲಿನಿಂದ ಬಡಿದು ನೋಡಿದ ಸರ್ ಎಂ.ವಿ " ಈ ರಾಶಿ ಸುತರಾಂ ಬಳಕೆಗೆ ಸಲ್ಲ " ಎಂದುಬಿಟ್ಟರಂತೆ! ಕೆಲವರು ಸರ್ ಎಂ.ವಿ.ಗೆ ವಯಸ್ಸಾಯ್ತು ಅರಳು-ಮರುಳು ಎಂದುಕೊಂಡು ನಕ್ಕರೆ ಅವರಲ್ಲಿಯೇ ಕೆಲವರು ’ದೆರ್ ಮಸ್ಟ್ ಬಿ ಎ ಬ್ರೇನ್ ಬಿಹೈಂಡ್ ದಿಸ್ ರಾಂಡಮ್ ಚೆಕಿಂಗ್’ ಎಂದುಕೊಂಡು ಆ ಕಲ್ಲುಗಳಮೇಲೆ ಪ್ರಮಾಣಿಸಲು ಒತ್ತಡಹಾಕಿದಾಗ ಇನ್ನೂ ಸಾಕಷ್ಟು ಒತ್ತಡ ಬೀಳುವ ಮೊದಲೇ ಕಲ್ಲುಗಳು ಪುಡಿಪುಡಿಯಾದವಂತೆ ! ಇಂತಹ ವಿಶ್ವೇಶ್ವರಯ್ಯ ಕೇವಲ ಕರ್ನಾಟಕ ಎಂದು ಪಕ್ಷಪಾತ ಮಾಡದೇ ಇಡೀ ದೇಶಕ್ಕಾಗಿ ದುಡಿದರು. ವಿದೇಶಗಳಿಗೂ ಸಹಕರಿಸಿದ ಏಕೈಕ ತಜ್ಞ ಅವರಾಗಿದ್ದಾರೆ. ಒರಿಸ್ಸಾ, ಹೈದರಾಬಾದ್, ಬಿಹಾರ್ ಮುಂತಾದ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆಗಳಿದ್ದವು; ಉತ್ತರವಾದುವೊಂದೇ ಸರ್. ಎಂ.ವಿಯವರ ಸಲಹೆ!
ಕೇವಲ ಸಿವಿಲ್ ಎಂಬ ವಿಭಾಗದಲ್ಲಿ ಗುರುತಿಸಿಕೊಳ್ಳದೇ ಎಲ್ಲಾರಂಗಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದವರು ಸರ್. ಎಂ.ವಿ. ಜನತೆಗೆ ಅಂದಿನಕಾಲದಲ್ಲೇ ಮೈಸೂರು ಬ್ಯಾಂಕ್ ಸ್ಥಾಪಿಸಿಕೊಟ್ಟರು, ಮೈಸೂರು ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯನ್ನು ಆರಂಭಿಸಿದರು, ತನಗೆ ರಾಜರು ಬಹುಮಾನವಾಗಿ ನೀಡಿದ ಹಣದಲ್ಲಿ ಮೈಸೂರಿನಲ್ಲಿ ಜಯಚಾಮರಜೇಂದ್ರ ಪಾಲಿಟೆಕ್ನಿಕ್ ಮತ್ತು ಬೆಂಗಳೂರಿನಲ್ಲಿ ಸಿಲ್ವರ್ ಜ್ಯೂಬಿಲಿ ಪಾಲಿಟೆಕ್ನಿಕ್ ಹೀಗೇ ಎರಡು ಪಾಲಿಟೆಕ್ನಿಕ್ಗಳನ್ನು ನಿರ್ಮಿಸಿ ತಾಂತ್ರಿಕ ವಿದ್ಯೆ ಹಲವರಿಗೆ ಸುಲಭದಲ್ಲಿ ದೊರೆಯುವಂತೇ ಮಾಡಿದರು ಮಾತ್ರವಲ್ಲ ಎಲ್ಲಿಯೂ ತಮ್ಮ ಹೆಸರನ್ನು ಇಡಗೊಡಲಿಲ್ಲ ! ಎಂಜಿನೀಯರಿಂಗ ಕಾಲೇಜು ಆರಂಭಿಸಿದರು, ಭದ್ರಾವತಿ ಕಬ್ಬಿಣ-ಉಕ್ಕು ಕಾರ್ಖಾನೆ ಆರಂಭಿಸಿದರು ಹೀಗೇ ಒಂದೇ ಎರಡೇ ಆನೆ ನಡೆದದ್ದೇ ದಾರಿ ಎನ್ನುವ ಹಾಗೇ ಸರ್. ಎಂ.ವಿ. ನಡೆಸಿದ್ದೆಲ್ಲವೂ ಫಲಪ್ರದವಾಗಿವೆ; ಲಕ್ಷೋಪಲಕ್ಷ ಜನರಿಗೆ ಅನುಕೂಲ ತಂದಿವೆ.
ಇಂತಹ ಮಹಾನ ವ್ಯಕ್ತಿ ಜಪಾನಿಗೆ ಒಮೆ ಭೇಟಿ ನೀಡಿದ್ದಾಗ ಅಲ್ಲಿನ ಮುತ್ಸದ್ಧಿಯೊಬ್ಬರು ಇವರನ್ನು ಕಂಡು ಮಾತನಡಿದರಂತೆ " ನೀವು ಭಾರತೀಯರಿ ಅತಿ ಬುದ್ಧಿವಂತರು, ಆದರೆ ನೀವು ತೋರಿಸಿದ ಗುಣಮಟ್ಟದ ವಸ್ತುಗಳನ್ನು ಕಳಿಸುವಾಗ ಗುಣಮಟ್ಟವನ್ನು ಬದಲಿಸುವುದರಲ್ಲೂ ನಿಷ್ಣಾತರು ಹಾಗಾಗಿ ನಾವು ನಿಮ್ಮನ್ನು ನಂಬುವಹಾಗಿಲ್ಲ " ---ಈ ವಿಷಯ ಸರ್. ಎಂ.ವಿ.ಗೆ ಮನದಲ್ಲಿ ಕೊನೇವರೆಗೂ ಕೊರೆಯುತ್ತಿತ್ತಂತೆ. ಇನ್ನೊಮ್ಮೆ ಅಮೇರಿಕಾಕ್ಕೆ ಹೋದಾಗ ನ್ಯೂಯಾರ್ಕ ನಗರದಲ್ಲಿ ಅವರಿಗೆ ಹಲ್ಲಿನ ತೊಂದರೆ ಕಾಡಿತಂತೆ. ಅಲ್ಲಿನ ಹಲ್ಲಿನ ವೈದ್ಯರೊಬ್ಬರಲ್ಲಿಗೆ ತೆರಳಿದ ಸರ್.ಎಂ.ವಿ ಚಿಕಿತ್ಸೆ ಪಡೆದು ವೈದ್ಯರ ಶುಲ್ಕವನ್ನು ಒಂದು ಲಕೋಟೆಯಲ್ಲಿಟ್ಟು ಪಾವತಿಸಿ ಬಂದರಂತೆ. ಅದಾದ ವಾರದಲ್ಲೇ ಸರ್. ಎಂ.ವಿ ಭಾರತಕ್ಕೆ ಮರಳುತ್ತಿರುವಾಗ ವಿಮಾನ ನಿಲ್ದಾಣದಲ್ಲಿ ಯಾರೋ ತಮ್ಮನ್ನು ಹುಡುಕಿಬಂದ ಸಂದೇಶವನ್ನು ಪಡೆದು ನೋಡಲಾಗಿ ಆ ಹಲ್ಲಿನ ವೈದ್ಯರು ನಿಂತಿದ್ದರಂತೆ. ವಿಚಾರಿಸಲಾಗಿ ತಮಗೆ ಶುಲ್ಕಕ್ಕಿಂತ ತುಸು ಜಾಸ್ತಿ ಹಣ ಪಾವತಿಸಿರುವುದರಿಂದ ಅದನ್ನು ಮರಳಿ ಕೊಡುವ ಸಲುವಾಗಿ ಸರ್.ಎಂ.ವಿಯವರನ್ನು ಹುಡುಕಿಕೊಂಡು ಆ ವೈದ್ಯ ಅಲ್ಲಿಗೆ ಹಾಗೆ ಬಂದಿದ್ದರು! " ಇರಲಿ ಬಿಡಿ, ತಮ್ಮ ಉತ್ತಮ ಚಿಕಿತ್ಸೆಗೆ ಅದು ಹೆಚ್ಚೇ ? " ಎಂದು ಸರ್ ಕೇಳಿದರೂ ಆ ವೈದ್ಯರು ಅದನ್ನು ಇಟ್ಟುಕೊಳ್ಳದೇ ಮರಳಿಸಿರುವುದು ಅಲ್ಲಿನ ಜನರ ನಿಯತ್ತನ್ನು ತೋರಿಸುತ್ತದೆ ಎಂಬುದನ್ನು ಸರ್. ಎಂ.ವಿ ಆಗಾಗ ಹೇಳುತ್ತಿದ್ದರಂತೆ. ನಾವು ಬಿಡಿ ಭಾರತೀಯರು ಯಾರನ್ನು ಬಿಟ್ಟಿದ್ದೇವೆ ನಾವು? ಸಾರ್ವಜನಿಕ ಬೀದಿಯಲ್ಲಿ ನಿಂತು ಅಣ್ಣಾಹಜಾರೆಗೆ ಜೈ ಎನ್ನುವ ನಮ್ಮೆಲ್ಲರೊಳಗೇ ನಿಯತ್ತಿಲ್ಲದ ಸ್ವಾರ್ಥದ ರಕ್ಕಸ ಆಗಾಗ ಎದ್ದು ನಿಂತು ಮೈಕೊಡವಿ ತನ್ನ ಇರುವನ್ನು ಬೇರೆಯವರಿಗೆ ತೋರಿಸುತ್ತಾನೆ. ಪ್ರಾಮಾಣಿಕತೆ ಇಲ್ಲದ ಜೀವನ ಎಲ್ಲಕ್ಕಿಂತ ಹೀನ ಎಂಬುದು ಸರ್. ಎಂ.ವಿ.ಯವರ ಅಂಬೋಣವಾಗಿತ್ತು.
ಇಡೀ ಬೆಂಗಳೂರು ಕೊಳೆಗೇರಿ ಆಗದಿರಲು ಕಾರಣ ಹಳೆಯ ಬೆಂಗಳೂರು ನಗರದ ರೂಪುರೇಷೆಗಳನ್ನು ಸರ್. ಎಂ.ವಿ. ತಿದ್ದಿದರು, ನಗರಕ್ಕೆ ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಕೆಯ ಸೂತ್ರಗಳನ್ನು ನಿರ್ಮಿಸಿದರು. ಇದೂ ಅಲ್ಲದೇ ಇಂದಿನ ಬೃಹತ್ತಾಗಿ ಬೆಳೆದ/ಬೆಳೆಯುತ್ತಲೇ ಇರುವ ಬೆಂಗಳೂರಿನ ಇನ್ನರ್ ಮತ್ತು ಔಟರ್ ರಿಂಗ್ ರೋಡ್ಗಳನ್ನು ಸರ್.ಎಂ.ವಿ ಮೊದಲೇ ಗುರುತಿಸಿ ತಿಳಿಸಿದ್ದರಂತೆ ಎಂದರೆ ಅವರೆಷ್ಟು ಪಂಡಿತರಬಹುದು. ನಾವು ಚಿಕ್ಕವರಿದ್ದಾಗ ಕೆಲವು ಕಥೆಗಳನ್ನು ಕೇಳಿದ್ದೆವು. ಅವುಗಳಲ್ಲಿ ಒಂದು ಬ್ರಿಟಿಷರು ವಿಶ್ವೇಶ್ವರಯ್ಯನವರ ಮೆದುಳಿಗೆ ಹಣಕೊಟ್ಟು ಕೊಂಡುಕೊಳ್ಳಲು ಮುಂದಾಗಿದ್ದರಂತೆ ಎಂಬುದು ! ಅದು ನಿಜವೋ ಸುಳ್ಳೋ ಅರಿವಿಲ್ಲ ಆದರೆ ಸಮಗ್ರ ಜಗತ್ತಿನ ಸಕಲದೇಶಗಳ ತಜ್ಞ-ವಿಜ್ಞಾನಿಗಳ, ಅಭಿಯಂತರರುಗಳ ದೃಷ್ಟಿ ಆ ಕಾಲಕ್ಕೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೃಶಕಾಯದ ವಿಶ್ವೇಶ್ವರಯ್ಯನವರಮೇಲೆ ನೆಟ್ಟಿದ್ದುದಂತೂ ನಿಜ.
ಇಂತಹ ಮಹಾನ್ ವ್ಯಕ್ತಿಗಳನ್ನು ನೋಡಿದರೆ ನಮಗನ್ನಿಸುವುದು " ಸಂಭವಾಮಿ ಯುಗೇ ಯುಗೇ " ಎಂಬ ಭಗವಂತನ ಗೀತಯ ವಚನ! ಎಲ್ಲಿ ಪ್ರಜೆಗಳಿಗೆ ಆಪತ್ತು-ವಿಪತ್ತು ಅತಿರೇಕಕ್ಕೆ ಹೋಗುತ್ತದೋ ಆಗ ತನ್ನ ಆವಿರ್ಭಾವ ಮಾನವ ಶರೀರದಲ್ಲಿ ಆಗುತ್ತದೆ ಎಂಬುದು. ಸರ್.ಎಂ.ವಿ ಯವರ ಮನೆತನದಲ್ಲಿ ಹಿಂದಕ್ಕೆ ನೋಡಿದರೆ ಅಂತಹ ಪ್ರಕಾಂಡ ಪಂಡಿತರಾಗಲೀ ಮೇಧಾವಿಗಳಾಗಲೀ ಜಾಸ್ತಿ ಆಂಗ್ಲವಿದ್ಯೆ/ಪದವಿ ಪಡೆದವರಾಗಲೀ ಇರಲಿಲ್ಲ. ಅವರ ನಂತರದಲ್ಲೂ ಮುಂದೆ ಇಲ್ಲೀವರೆಗೆ ಅವರ ವಂಶದಲ್ಲಿ ಯಾರೂ ಅಂತಹ ಮೇಧಾವಿ ಹುಟ್ಟಿ ಬರಲಿಲ್ಲ. ಒಂದೊಮ್ಮೆ ಸರ್.ಎಂ.ವಿ ಹುಟ್ಟಿಬರದಿದ್ದರೆ ಇಂದು ನಾವೆಲ್ಲಾ ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು ? --ಅದು ಊಹಿಸಲಸಾಧ್ಯ. ಕರ್ನಾಟಕದ ಬಹುಭಾಗಕ್ಕೆ ವಿದ್ಯುತ್ತು ಪೂರೈಸುವ ಶರಾವತಿ ಜಲವಿದ್ಯುತ್ ಯೋಜನೆಯನ್ನು ರೂಪಿಸಿದ ಆ ಪುಣ್ಯಾತ್ಮನ ಅನುಗ್ರಹದಿಂದ ಮನೆಮನೆಯಲ್ಲೂ ಇಂದು ಟಿವಿ,ಫ್ರಿಜ್ಜು, ವಾಶಿಂಗ್ ಮಶಿನ್, ಮಿಕ್ಸರ್, ಗ್ರೈಂಡರ್, ಓವನ್, ಗೀಸರ್, ಕಂಪ್ಯೂಟರ್ .....ಈ ಎಲ್ಲಾ ಯಂತ್ರಗಳನ್ನು ನಡೆಸುವ ಅನುಕೂಲ ಲಭ್ಯವಾಗಿದೆ, ಕತ್ತಲೆಯ ಮನೆಗಳು ಬೆಳಕು ಕಂಡಿವೆ!
ಸರ್.ಎಂ.ವಿಯನ್ನು ಉತ್ತಮ ಆಡಳಿತಗಾರನೆನ್ನಬಹುದೇ? ಉತ್ತಮ ತಂತ್ರಜ್ಞಾನಿ ಎನ್ನಬಹುದೇ ? ನಿಜವಾದ ದೇಶಭಕ್ತ ಎನ್ನಬಹುದೇ? ನಿಸ್ವಾರ್ಥ ಕರ್ಮಯೋಗಿ ಅನ್ನಬಹುದೇ? ಉತ್ತಮ ವಾಗ್ಮಿ ಎನ್ನಬಹುದೇ? ಉತ್ತಮ ನಿರ್ದೇಶಕ ಎನ್ನಬಹುದೇ? ಉತ್ತಮ ಮಾರ್ಗದರ್ಶಕ ಎನ್ನಬಹುದೇ? ಉತ್ತಮ ಮಾರ್ಕೆಟರ್ ಎನ್ನಬಹುದೇ ? ಭಗವದ್ಗೀತೆಯ ಹಲವು ಅಂಶಗಳನ್ನು ತನ್ನ ಕೃತಿಗಳಲ್ಲಿ ತೋರಿಸಿದ ಅವರಿಗೆ ಯಾವ ಹೆಸರಿನಿಂದ ಕರೆದರೂ ಅದು ಸಮಂಜಸವೆನಿಸುತ್ತದೆ. ಕೆಲವು ವಿಗ್ರಹಗಳ ದೃಷ್ಟಿ ಎಲ್ಲಿನಿಂತರೂ ನಮ್ಮನ್ನೇ ನೋಡುವ ಭಾಸವಾಗುವಂತೇ ಇನ್ನೂ ಕೆಲವು ಗುಡ್ಡಗಳು ಪರ್ವತಗಳು ಒಂದೊಂದು ಕಡೆಯಿಂದ ಒಂದೊಂದು ಆಕಾರದಿಂದ ಕಂಗೊಳಿಸುವಂತೇ ಸರ್ ಎಂ.ವಿ ಕೂಡ ಸರ್ವತ್ರ ಕಾಣಿಸಿಕೊಳ್ಳುತ್ತಾರೆ. ಬಡಕಲು ಶರೀರದ ಸಣ್ಣತಲೆಯೊಳಗಿನ ’ದೊಡ್ಡ ತಲೆ’ಯಲ್ಲಿ ಅದೇನಿತ್ತೋ ಜಗನ್ನಿಯಾಮಕನೇ ಬಲ್ಲ ! ಇವತ್ತಿನ ಬೆಂಗಳೂರಿನ ’ವಿಶ್ವೇಶ್ವರಯ್ಯ ಟಾವರ್’ ಎಂಬ ಜಾಗದಲ್ಲಿ ಮನೆಮಾಡಿಕೊಂಡು ವಾಸವಿದ್ದ ಸರ್.ಎಂ.ವಿ ತಮ್ಮ ಇಳಿಜೀವನವನ್ನು ಕೊನೆಯವರೆಗೂ ಅಲ್ಲೇ ಕಳೆದರಂತೆ. ದೇಹವಿಸರ್ಜಿಸಿದಾಗ ಅವರ ಖಾತೆಯಲ್ಲಿದ್ದ ೩೨೦೦೦ ರೂಪಾಯಿಗಳನ್ನು ಅವರ ಮುಪ್ಪಿನಲ್ಲಿ ಜೊತೆಯಲ್ಲಿ ಸಹಕರಿಸಿಕೊಂಡಿದ್ದ ಒಂದಿಬ್ಬರು ಹುಡುಗರಿಗೆ ಸೇರಬೇಕು ಎಂದು ಬರೆದಿದ್ದರಂತೆ! ಅದು ಬಿಟ್ಟರೆ ಇನ್ನೇನೂ ಅವರದಾದ ಆಸ್ತಿ ಇಲ್ಲ ! ಇಂದಿನ ಅಭಿಯಂತರರುಗಳು ಹೊಡೆಯುವ ಕೋಟಿಗಟ್ಟಲೆ ಹಣ ಆಸ್ತಿ-ಪಾಸ್ತಿ ನೋಡಿದರೆ ನಿಜಕ್ಕೂ ಸರ್.ಎಂ.ವಿ ದೇವಮಾನವರಾಗಿ ಕಾಣುತ್ತಾರೆ! ನಮ್ಮಪುಣ್ಯ ನಾವು ಅವರನ್ನು ಕನ್ನಡನಾಡಿನಲ್ಲಿ ಪಡೆದಿದ್ದೆವು; ನಮ್ಮ ಭಾಗ್ಯ ಅವರು ನಮಗಾಗಿ ಬಹಳಷ್ಟು ಕಟ್ಟಿಕೊಟ್ಟರು.
ಸರ್ ಎಂ.ವಿ ಒಮ್ಮೆ ಎಲ್ಲಿಗೋ ಹೋಗಿದ್ದಾಗ ಮಾರ್ಗಮಧ್ಯೆ ತಮ್ಮ ಮುದ್ದೇನಹಳ್ಳಿ ಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಆಗಬೇಕಾಯಿತು. ಮಕ್ಕಳಮೇಲಿನ ಪ್ರೀತಿಯಿಂದ ಅಂದಿನ ಕಾಲಕ್ಕೆ ಹತ್ತುಸಾವಿರದಲ್ಲಿ ಸಿಹಿತಿನಿಸು/ಚಿಕ್ಕ ಕೊಡುಗೆ ತರಿಸಿ ಎಲ್ಲಾ ಮಕ್ಕಳಿಗೂ ವಿತರಿಸಿದ ಸರ್ ಎಂ.ವಿ ಅಲ್ಲಿನ ಜನರ ಒತ್ತಾಯದ ಮೇಲೆ ಹತ್ತು ನಿಮಿಷ ಭಾಷಣಮಾಡಬೇಕಾಗಿ ಬಂತಂತೆ. ಯಾವಾಗಲೂ ಪೂರ್ವತಯಾರಿಯಿಲ್ಲದೇ ಭಾಷಣಮಾಡಲು ನಿರಾಕರಿಸುತ್ತಿದ್ದ ಅವರು ಅಂದು ಹಾಗೆ ಮಾಡದಾದರು. ಸಭೆ ಮುಗಿಯಿತು. ಅವರು ಮರಳಿ ಬೆಂಗಳೂರಿಗೆ ಬಂದಮೇಲೆ ತಮ್ಮ ಮಾತು ಮಕ್ಕಳಿಗೆ ರುಚಿಸಿತೋ ಇಲ್ಲವೋ ಎಂಬ ಅನಿಸಿಕೆಯಿಂದ ಇನ್ನೊಮ್ಮೆ ತಾವು ಅಲ್ಲಿಗೆ ಬರುವುದಾಗಿ ಘೋಷಿಸಿ ಮತ್ತೆ ತೆರಳಿ ಮತ್ತೆ ಸಿಹಿತಿನಿಸುಗಳನ್ನು ವಿತರಿಸಿ ತಯಾರಿಸಿಕೊಂಡ ಭಾಷಣವನ್ನು ಮಂಡಿಸಿದರಂತೆ ! ಮಕ್ಕಳನ್ನೂ ಅವಗಣನೆ ಮಾಡದ ಅವರ ಮನಸ್ಸು ಯಾವುದೇ ಕೆಲಸವನ್ನು ಮಾಡುವಾಗಲೂ ಪರಿಪೂರ್ಣತೆಯನ್ನು ಬಯಸುತ್ತಿತ್ತು ಎಂಬುದಕ್ಕೆ ಇದು ಉದಾಹರಣೆ. ಹೇಳುತ್ತಾ ಹೋದರೆ ಮುಗಿಯದ ಚರಿತ್ರೆ, ಸರ್.ಎಂ.ವಿ ವ್ಯಕ್ತಿ ಎನ್ನುವುದಕ್ಕಿಂತ ದಂತಕಥೆಯಾದ ಶಕ್ತಿ ಎನ್ನುವುದು ಉತ್ತಮ. ಜೀವನದಲ್ಲಿ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದು ಮತ್ತು ಉದ್ಯೋಗಶೀಲರಾಗಿ ಪರಿಪೂರ್ಣವಾಗಿ ತೊಡಗಿಕೊಂಡು ನಮ್ಮನ್ನೇ ನಾವು ಆಗಾಗ ಅವಲೋಕಿಸಿಕೊಳ್ಳುತ್ತಾ ಮಾಡುವ ಕೆಲಸಗಳಲ್ಲಿ ಪರಿಪಕ್ವತೆ ಪಡೆದರೆ ಅದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ. ಹಾಗೆ ಬದುಕೋಣ ಅಲ್ಲವೇ ? ನಮಸ್ಕಾರ.
Posted by ವಿ.ಆರ್.ಭಟ್ (vrbhat06@gmail.com) on September 16, 2011 12:07 PM· permalink
ಮೊನ್ನೆ ರಸ್ತೆಯಲಿ ಒಬ್ಬಳೇ ಹೊರಟಿದ್ದೆ. ನಡೆವಾಗ ನನ್ನದೇ ಲಹರಿಯಲ್ಲಿರುವುದು ಹೆಚ್ಚು. ಒಮ್ಮೊಮ್ಮೆ ಅದೆಂಥ ಜಾತ್ರೆಯ ಜನ ಜಂಗುಳಿಯಾದರೂ ಏಕಾಂತವನ್ನುಅನುಭವಿಸಬಲ್ಲ ಪಿಶಾಚಿ ನಾನು.! ನನ್ನ ಕೊಡೆಯ ಚೀಲವ ಹೆಗಲಿಗೇರಿಸಿ, ಪರ್ಸನ್ನು ತೆಗೆದುಕೊಂಡು ಹೊರಟೇ ಬಿಡುತ್ತೇನೆ. (ಅಂದ ಹಾಗೆ ನನ್ನ ಬಣ್ಣದ ಕೊಡೆಗೆ ಹೊಸತಾದ ಚೀಲವನ್ನು ತಯಾರಿಸಿದ್ದೇನೆ. ಕೈಯಲ್ಲಿ ಹಿಡಿಯಬೇಕೆಂಬ ರಗಳೆಯೇ ಇಲ್ಲ. ಹೆಗಲಿಗೆ ಆರಾಮವಾಗಿ ತೂಗಿಬಿಡಬಹುದು. ದೋಸ್ತಿಗಳೆಲ್ಲ 'ಇಂದ್ರ ಧನಸ್ಸು' ಎಂದು ಕಿಚಾಯಿಸುತ್ತಾರೆ. ಹೊಟ್ಟೆ ಕಿಚ್ಚು ಅಲ್ವಾ ?) .
ಹಾಗೆ ನಡೆದು ಹೋಗುತ್ತಿರುವಾಗ ಹಿಂದಿನಿಂದ ಕೇಳಿದ "ಅಕ್ಕಾ.. "ಎಂಬ ಕೂಗು ನನ್ನನ್ನು ವಾಸ್ತವಕ್ಕೆ ಎಳೆದು ತಂದಿತ್ತು. ತೀರಾ ಪರಿಚಯದ ಧ್ವನಿಯಾಗಿತ್ತದು. ಮನಸ್ಸಿಗೆ ಅದ್ಯಾರದ್ದೆಂದು ಗುರುತು ಸಿಗದೇ ಹೋದಾಗ ಹಿಂದಿರುಗಿ ನೋಡಿದೆ. ಮೊಳಕಾಳುದ್ದದ ಜೀನ್ಸ್ ಧರಿಸಿದ ಪೋರಿಯೋಬ್ಬಳು ನನ್ನತ್ತಲೇ ಓಡಿ ಬರುತ್ತಿದ್ದಳು. "ಓಹ್ ರಶ್ಮಿ..." ಅವಳ ಕಂಡೊಡನೆ ತಾನಾಗಿ ನನ್ನ ಬಾಯಿಯಿಂದ ಬಂದ ಉದ್ಗಾರವಿದು. ಹತ್ತಿರ ಬಂದವಳೇ ನನ್ನ ಕೈಹಿಡಿದುಕೊಂಡಳು. "ಅಕ್ಕಾ ನಿಮ್ಮನ್ನು ಅಲ್ಲೇ ನೋಡ್ದೆ.. ಆದರೆ ನಾನು ಆಟೋದಲ್ಲಿದ್ದೆ. ನಿಲ್ಲಿಸಿ ಹಣ ಕೊಟ್ಟು ಬರೋವಷ್ಟ್ರಲ್ಲಿ ನೀವು ಇಷ್ಟು ದೂರ ಬಂದ್ಬಿಟ್ಟಿದ್ರಿ. ಹೇಗಿದ್ದೀರಿ ? ಡ್ರೆಸ್ ತುಂಬಾ ಚೆನ್ನಾಗಿದೆ.hairstyle ಛೇಂಜ್ ಮಾಡಿಸಿದ್ರಾ ಅಕ್ಕಾ. ನಾನು ಇಲ್ಲೇ ವೈಯೋಲಿನ್ ಕ್ಲಾಸ್ ಗೆ ಹೋಗ್ತಿದೇನೆ. ನಿಮ್ ಜೊತೇನೆ ಬರ್ತೇನೆ..."ಹೀಗೆ ಸಾಗಿತ್ತು ಅವಳ ಮಾತಿನ ಝರಿ. ನಾನು ನಗುತ್ತಲಿದ್ದೆ. ಹೆಚ್ಚಾಗಿ ವಟಗುಡುತ್ತಲೇ ಇರುವ ನಾನು ಮೌನಿಯಾಗಿದ್ದೆ.
ಮಾತು ಕೇಳುತ್ತಲೇ ಒಮ್ಮೆಹೀಗೆ ಅವಳತ್ತ ದೃಷ್ಟಿ ಹಾಯಿಸಿದೆ. ಗುಲಾಬಿ ಬಣ್ಣದ ಟೀ-ಶರ್ಟ್, ಮೊಳಕಾಲುದ್ದದ ನೀಲಿ ಜೀನ್ಸ್ ಹಾಕಿದ್ದಳು. ಜಗತ್ತಿನ ಕುತೂಹಲಗಳೆಲ್ಲವನ್ನೂ ತುಂಬಿಕೊಂಡ ಜೊತೆ ಬಟ್ಟಲು ಕಂಗಳು. ಕುತ್ತಿಗೆಯವರೆಗೆ ಬಂದು ಕುಣಿಯುತ್ತಿದ್ದ ಜುಟ್ಟು. ನನ್ನ ಭುಜದ ಎತ್ತರಕ್ಕೆ ಬೆಳೆದುಬಿಟ್ಟಿದ್ದಳು ಹುಡುಗಿ. ನನ್ನ ಬಲಗೈಯನ್ನು ಹಿಡಿದಿದ್ದ ಅವಳ ಮೆದುವಾದ ಕೈ. ಅವಳ ಕಂಗಳು, ಕುಣಿಯುತ್ತಲೇ ನಡೆದಂತೆ ಇರುವ ಅವಳ ನಡಿಗೆ. ಅಮಾಯಕ ನಗು. ಅದೇನೆಲ್ಲ ಬಚ್ಚಿಕೊಂಡಿರುತ್ತದೆ ಈ ಬಾಲ್ಯ ಅಥವಾ ಬಾಲ್ಯದಿಂದ ಯೌವ್ವನ ಮೆಟ್ಟಿಲೇರುವುದರ ನಡುವಿನ ಅವಧಿ ..! ಅನಿಸಿ ಬಿಟ್ಟಿತು..! ಅವಳು ಮಾತನಾಡುತ್ತಲೇ ಇದ್ದಳು ನನ್ನ ಮನಸ್ಸು ಹಿಂದಕ್ಕೆ ಓಡಿತ್ತು.
ಎರಡು ವರ್ಷಗಳ ಹಿಂದೆ ಹಿಂದಿನ ಮಾತದು . ಸೆಮಿಸ್ಟರ್ ನಡುವಿನ ರಜೆಯಲ್ಲಿ, ನನ್ನ ಪರಿಚಯದವರೊಬ್ಬರು ನನ್ನನ್ನು ಮಕ್ಕಳ ಶಿಬಿರಕ್ಕೆ ಕರೆದಿದ್ದರು. ಒಂಭತ್ತು ದಿನಗಳ ಶಿಬಿರವಾಗಿತ್ತದು. ನಾಲ್ಕರಿಂದ ಐದು ಗಂಟೆ ಮಕ್ಕಳ ಜೊತೆ ಇರುತ್ತಿದ್ದೆ. ಬಾಲ್ಯ ನನ್ನ ಜೊತೆಯಿದ್ದಂತೆ ಅನಿಸಿದ್ದ ದಿನಗಳಾಗಿದ್ದವು ಅವು. ಮಕ್ಕಳಿಗೆ ಕಥೆ ಹೇಳಿ, ಅವರಿಂದ ಹೇಳಿಸಿ, ಕವನ ಬರೆಯಿಸಿ. ಓದಿಸಿ, ಗಾಳಿಪಟ ಮಾಡಿ ಹಾರಿಸಿ. ಮಣ್ಣಿನ ಅದೇನೇನೋ ಗೊಂಬೆ ತಯಾರಿಸಿ, ಬಣ್ಣಗಳಲ್ಲಿ ಅದ್ಭುತವಾಗಿ ಆಟವಾಡುವ ಕೆಲವರನ್ನು ಬೆರಗುಗಣ್ಣಿನಿಂದ ನೋಡಿ ನಕ್ಕಿದ್ದ ದಿನಗಳಲ್ಲೇ ಪರಿಚಯವಾದವಳು ಈ ರಶ್ಮಿ.
ಶಿಬಿರದಲ್ಲಿ ಹೆಚ್ಚಾಗಿ ಗಂಡು ಮಕ್ಕಳ ಗುಂಪಲ್ಲೇ ಇರುತ್ತಿದ್ದೆ ನಾನು. ಒಣಗಿದ್ದ ಆಲದೆಲೆಯ ಹಿಡಿದು ನವಿಲುಗರಿಯಂತೆ ಮಾಡುತ್ತೇನೆ ಎಂದು, ಬಣ್ಣ- ಕುಂಚ ಹಿಡಿದು ಕೂತಿದ್ದ 'ನಿಶಾಂತ' ನ ಎದುರು ಕುಳಿತಿದ್ದೆ. ಅಷ್ಟರಲ್ಲಿ ಗೆಜ್ಜೆಯ ದನಿ ಕೇಳಿತ್ತು. "ಅಕ್ಕಾ ನಿಮಗೆ ಏನೋ ತೋರಿಸಬೇಕಿತ್ತು....." ಕತ್ತೆತ್ತಿ ನೋಡಿದರೆ, ಕಂಗಳ ತುಂಬಾ ಕನಸನ್ನು ತುಂಬಿಕೊಂಡ ಬಾಲೆ. ತಿಳಿ ನೇರಳೆ ಬಣ್ಣದ frock ಧರಿಸಿ, ಜುಟ್ಟು ಕಟ್ಟಿ, ಮಲ್ಲಿಗೆಯ ಪುಟ್ಟ ದಂಡೆಯೊಂದನ್ನು ಮುಡಿದು ಘಮ ಘಮಿಸುತ್ತಿದ್ದಳು. ಅರೆ ಘಳಿಗೆ ಅವಳನ್ನೇ ನೋಡುತ್ತಿದ್ದಿರಬೇಕು ನಾನು. "ಅಕ್ಕಾ ಬರ್ತೀರಾ .."ಎಂದು ನನ್ನ ಕೈ ಹಿಡಿದಾಗ. ಕಂಡಿದ್ದು.. ಪುಟ್ಟ ಕೈಗಳ ತುಂಬಾ ಬಳೆಗಳು. ಅದೇನೋ ಆಕರ್ಷಣೆಗೆ ಒಳಗಾದವಳಂತೆ ಎದ್ದು ಅವಳ ಜೊತೆ ನಡೆದಿದ್ದೆ.
ಕರೆದುಕೊಂಡು ಹೋದ ಹುಡುಗಿ ಒಂದು ಹಾಳೆಯನ್ನು ನನ್ನ ಮುಂದೆ ಹಿಡಿದಿದ್ದಳು. ಮುದ್ದಾದ ಅಕ್ಷರದಲ್ಲಿ ಒಂದು ಪುಟ್ಟ ಕವನ "ಛಳಿಯಾದಾಗಲೆಲ್ಲ
ಮೋಡಗಳ ಚಾದರವ ಹೊದ್ದು
ಮಲಗಿಬಿಡುವ ತಾರೆಗಳು.
ಆಗಾಗ ಕಿಟಕಿಯಲ್ಲಿ ಇಣುಕುವ ಚಂದಿರನಿಗೆ ಬೋರು ಬೋರು..."
ಅನಾಯಾಸವಾಗಿ ಮುಗುಳು ನಗೆಯೊಂದು ಹಾದು ಹೋಗಿತ್ತು ನನ್ನ ಮೊಗದಲ್ಲಿ. ಎಂಟರ ಹರೆಯದ ಹುಡುಗಿಯ ಕವನ. ಅದೇನೋ ಆಕರ್ಷಣೆಯಿತ್ತು, ಮುಗ್ಧತೆಯಿತ್ತು, ಪ್ರೀತಿಯಿತ್ತು,ಸುಂದರ ಕಲ್ಪನೆಯಿತ್ತು ಆ ಸಾಲುಗಳಲ್ಲಿ..
ಆ ದಿನವೆಲ್ಲ ನೆನಪಾಗಿ ಕಾಡಿದ್ದಳು ಹುಡುಗಿ.ಅಂಥ ಪೋರಿಯರನ್ನು ಕಂಡಾಗ 'ನನಗೆ ನಾನೇ' ನೆನಪಾಗುತ್ತೇನೆ ಅಥವಾ ಅಮ್ಮನ ಪುಟ್ಟಿ ನೆನಪಾಗುತ್ತಾಳೆ. ನಾನು ಹಾಗೆಯೇ ಇದ್ದೆ. ಬಣ್ಣ ಬಣ್ಣದ frock ಹಾಕುತ್ತಿದ್ದೆ, ಕೈತುಂಬಾ ಬಳೆ ಹಾಕುತ್ತಿದ್ದೆ, ನಡೆದರೆ 'ಝಿಲ್ ಝಿಲ್' ಎನ್ನುತ್ತಿದ್ದ ಗೆಜ್ಜೆ ಕಟ್ಟುತ್ತಿದ್ದೆ. ಅಮ್ಮನ ಹತ್ತಿರ ಜಗಳವಾಡಿ ಜುಟ್ಟಿಗೆ ಹೂ ಮುಡಿಯುತ್ತಿದ್ದೆ.ನೀ ಜುಟ್ಟು ಕಟ್ಟಿದ್ದೇ ಸರಿ ಆಗಿಲ್ಲವೆಂದು ಅಮ್ಮನ ಕಾಡುತ್ತಿದ್ದೆ.
ಕಾಲೇಜಿಗೆ ಹೋಗುವ ಹುಡುಗಿಯರನ್ನು ಕಂಡಾಗಲೆಲ್ಲ ನಾನೂ ಉದ್ದವಾಗಬೇಕು, ದೊಡ್ಡವಳಾಗಬೇಕು. ಉದ್ದನೆಯ ದುಪಟ್ಟಾ ಇರುವ ಚೂಡಿದಾರ್ ಹಾಕಬೇಕೆಂದು ಅನಿಸುತ್ತಿತ್ತು..! ಹೌದು ಎಲ್ಲ ನೆನಪಿದೆ ನನಗೆ...!
ಆದರೆ ನಾನು ಕಾಲೇಜಿಗೆ ಬರುವ ಹೊತ್ತಿಗೆ, ಉದ್ದನೆಯ ಕೂದಲು ಅದ್ಯಾವ ಯಾವುದೋ ಕಾರಣಗಳಿಗೆ ಸಿಕ್ಕು. ಭುಜದ ವರೆಗೆ ಬ೦ದಿತ್ತು. ಇನ್ನು ಹೂ ಮುಡಿಯುವುದ೦ತೂ ದೂರದ ಮಾತಾಗಿತ್ತು. ಲ್ಯಾಬಿನಲ್ಲಿ ಪ್ರೋಗ್ರಾಮ್ಸ್ ಬರೆಯಲು ಕಷ್ಟ ಎ೦ದು ಬಳೆ ಹಾಕುವುದನ್ನು ಬಿಟ್ಟಿದ್ದೆ. ಒ೦ದು ಕಾಲಿಗೆ ಒ೦ದೆಳೆಯ ಚೈನು ಬ೦ದು ಕೂತಿತ್ತು. ಅಪರೂಪಕ್ಕೆ ಚುಡಿದಾರ್ ಹಾಕುತ್ತಿದ್ದೆ.ಹುಡುಗಿಯರ ಜೊತೆ ಅಷ್ಟಕ್ಕಷ್ಟೆ ಇರುತ್ತಿದ್ದ ನಾನು. ಅವಳೊ೦ದಿಗೆ ಆತ್ಮೀಯಳಾಗುತ್ತಿದ್ದೆ. ದಿನಗಳೆದ೦ತೆ ಹುಡುಗಿ ಆಪ್ತಳಾಗುತ್ತಲೇ ಹೋದಳು. ಕಾಲು,ಕೈ,ಹಣೆ ಎಲ್ಲ ಬೋಳು ಬೋಳು ಇರುವ, ಜೀನ್ಸ್,ಪುಟ್ಟ ಸ್ಕರ್ಟ್ ತೊಟ್ಟ ಪೋರಿಯರಿಗಿಂತ ಇವಳು ಭಿನ್ನವಾಗಿ ತೋರುತ್ತಿದ್ದಳು. ಅವರೆಲ್ಲ ಬಾರ್ಬಿ ಗೊಂಬೆಯ೦ತೆ ಕ೦ಡರೆ, ಇವಳು ನನ್ನ ಜುಟ್ಟು ಗೊ೦ಬೆಯ೦ತೆ ಕಾಣುತ್ತಿದ್ದಳು. ಚುರುಕುತನ, ಆತ್ಮೀಯತೆ, ಮುಗ್ಧತೆ. ಕುತೂಹಲ ಎಲ್ಲವೂ ಮೆಳೈಸಿದ ರಶ್ಮಿಯ ಕಂಡರೆ ನನ್ನ ಮನದೊಳಗೆ ಅದೇನೋ ಒಂದು ಬಗೆಯ ಕುತೂಹಲ, ಪ್ರೀತಿ, 'ಒಂದು ಎಳೆಯ ಪಾಕ'ದಂಥ ಸಣ್ಣ ಹೊಟ್ಟೆಕಿಚ್ಚು..! ಇಂದು ಯಾವ ಡ್ರೆಸ್ ಹಾಕಿರಬಹುದು, ಅದ್ಯಾವ ಹೂ ಮುಡಿದಿರಬಹುದು ಎಂದು ಶಿಬಿರದ ಗೇಟಿನ ಒಳಗೆ ಹೋಗುವ ಮೊದಲೇ ಕುತೂಹಲಿಸುತ್ತಿತ್ತು ಮನಸ್ಸು.!
ಕಳೆದು ಹೋದ ನನ್ನನ್ನು ಅವಳಲ್ಲಿ ಹುಡುಕುತ್ತಿದ್ದೆನೋ ಏನೋ ಗೊತ್ತಿಲ್ಲ. ಶಿಬಿರ ಮುಗಿಯುವಷ್ಟರಲ್ಲಿ ಅವಳ೦ತೂ ಆತ್ಮೀಯವಾಗಿದ್ದಳು. ಜೊತೆಗೆ ಅವಳ ಕವನಗಳು. ಕೊನೆಯ ದಿನದ ಸಮಾರಂಭಗಳೆಲ್ಲ ಮುಗಿದ ಮೇಲೆ ನನ್ನ ಕೈಹಿಡಿದು ಕೇಳಿದ್ದಳು ಹುಡುಗಿ " ನಾಳೆಯಿಂದ ನೀವು ಸಿಗೋದಿಲ್ಲ ಅಲ್ವಾ? ಅಕ್ಕಾ... ನಮಗೂ ನಿಮ್ಮಂಥ Miss ಬೇಕಿತ್ತು..ಸ್ಕೂಲ್ನಲ್ಲಿ ....ನೀವೇ ಯಾಕೆ ಬರಲ್ಲ? " ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ಹುಡುಗಿಯ ಕೆನ್ನೆಯ ಮೇಲೆ ನೀರಿಳಿಯುತ್ತಿತ್ತು. ಅವಳ ಆ ಪ್ರಶ್ನೆಗೆ ಉತ್ತರ ಇರಲಿಲ್ಲ ನನ್ನ ಬಳಿ. ಕೆನ್ನೆ ತಟ್ಟಿ ಮುಗುಳು ನಕ್ಕಿದ್ದೆ. ಕಣ್ಣಂಚನ್ನು ಒರೆಸಿಕೊಳ್ಳುತ್ತ...!
ಇವೆಲ್ಲ ನಡೆದು ಎರಡು ವರ್ಷಗಳ ನಂತರ ಸಿಕ್ಕಿದ್ದಳು ಹುಡುಗಿ. ಒಂದಿಷ್ಟು ಬದಲಾವಣೆಯೊಂದಿಗೆ. ಕೂದಲು ಚಿಕ್ಕದಾಗಿತ್ತು, ಹೂ ಮುಡಿಯುತ್ತಿರಲಿಲ್ಲ, ಕಾಲಲ್ಲಿ ದಪ್ಪನೆಯ ಗೆಜ್ಜೆಗಳೂ ಇರಲಿಲ್ಲ. ಆದರೆ ಅದೇ ಅಮಾಯಕ ನಗು, ಮಾತು..! ಅದೆಷ್ಟು ಬೇಗ ಬೆಳೆಯುತ್ತಾರೆ ಈ ಹುಡುಗಿಯರು. ಅಡುಗೆ ಆಟ ಆಡುತ್ತಲೇ... ಅಡುಗೆ ಮನೆಕಡೆ ಸೇರಿ ಬಿಡುತ್ತಾರೆ.! ಪಪ್ಪನ ಎದೆಯ ಮೇಲೆ ಮುಗುಮ್ಮಾಗಿ ಮಲಗುತ್ತಿದ್ದ ಹುಡುಗಿ, ಈಗೀಗ ಅಮ್ಮನ ಹಿಂದೆ ಇರುತ್ತಾಳೆ ..! ಸೌಂದರ್ಯ, ನಾಜೂಕುತನ, ಚಾಂಚಲ್ಯ, ಮೃದು ಮನಸ್ಸು, ತಾಳ್ಮೆ ಇವೆಲ್ಲ ದೈವದತ್ತ ಗುಣಗಳು ಪ್ರಕೃತಿಗೆ.. ಹೆಣ್ಣಿಗೆ ...ಅಲ್ವಾ? ಹಾಗೆ ಹೋಲಿಸಿದರೆ ಬದಲಾವಣೆಗಳು ಹೆಣ್ಣಿನಲ್ಲೇ ಜಾಸ್ತಿ. ಹುಟ್ಟಿದಾಗಿನಿಂದ ಅದೆಷ್ಟು ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು ನೋಡಿ ಒಂದು ಹೆಣ್ಣಲ್ಲಿ..! ಮಗು- ಹುಡುಗಿ-ಪೋರಿ-ಯುವತಿ- ಹೆಂಗಸು-ಮುದುಕಿ ಇಷ್ಟೆಲ್ಲಾ ಬದಲಾವಣೆಗಳ ಜೊತೆಗೆ ಹೆಣ್ಣು 'ಹೆಣ್ಣೇ' ಆಗಿರುತ್ತಾಳೆ..! ಪ್ರಕೃತಿಯಂತೆ ಹೆಣ್ಣೂ ನಿಘೂಡ, ಪ್ರೇಮಮಯಿ, ಚಂಚಲೆ ..... ಹೀಗೆ ಇನ್ನೂ ಏನೇನೋ.
ಮನಸ್ಸು ಏನೇನೋ ಯೋಚಿಸುತ್ತಿತ್ತು ರಶ್ಮಿಯ ನೆಪದಲ್ಲಿ. ಅಷ್ಟರಲ್ಲಿ "ಅಕ್ಕ ಇಲ್ಲೇ ನನ್ನ ವಯೋಲಿನ್ ಕ್ಲಾಸ್ ಇರೋದು. ಸಿಗ್ತೇನೆ ಮತ್ತೊಮ್ಮೆ.. ಅಂದಹಾಗೆ ನಮಗೆ ಹೊಸ ಮಿಸ್ ಒಬ್ರು ಬಂದಿದ್ದಾರೆ ಅವರ ಹೆಸರೂ ನಿಮ್ಮ ಹೆಸರೂ ಒಂದೇ..." ಅಂದಳು..! ಮತ್ತೊಮ್ಮೆ ನಗುವೊಂದು ಅನಾಯಾಸವಾಗಿ ಬಂದಿತ್ತು. ಅವಳಿಗೆ ಟಾ ಟಾ ಮಾಡುತ್ತಾ ನನ್ನ ನಡಿಗೆಯ ವೇಗವನ್ನು ಹೆಚ್ಚಿಸಿದೆ..!
Posted by Soumya. B (noreply@blogger.com) on September 16, 2011 11:12 AM· permalink
೧)ಮುಲ್ಲಾ ನಸೀರುದ್ದೀನನಿಗೆ ಎಲ್ಲಾ ವಿಷಯಕ್ಕೂ ವಿಪರೀತ ಭಯವಾಗುತ್ತಿತ್ತು .ಅವನ ಸ್ನೇಹಿತ ಅವನನ್ನು ಮನೋವೈದ್ಯರೊಬ್ಬರ ಬಳಿಗೆ ಕಳಿಸಿದ.ಕೆಲ ತಿಂಗಳುಗಳ ಬಳಿಕ ಸ್ನೇಹಿತ ಮುಲ್ಲಾನನ್ನು ಭೇಟಿಯಾದಾಗ ಕೇಳಿದ "ಈಗ ಹೇಗಿದ್ದೀಯ ಮುಲ್ಲಾ?".ಅದಕ್ಕೆ ಮುಲ್ಲಾ ಹೇಳಿದ "ಮೊದಲೆಲ್ಲಾ ಟೆಲಿಫೋನ್ ರಿಂಗ್ ಆದರೆ ಟೆಲಿಫೋನ್ ಎತ್ತಲು ಹೆದರುತ್ತಿದ್ದೆ "ಎಂದ.ಸ್ನೇಹಿತ ಕೇಳಿದ"ಈಗ?".ಅದಕ್ಕೆಮುಲ್ಲಾ ಉತ್ತರಿಸಿದ "ಈಗ ತುಂಬಾ improve ಆಗಿದ್ದೀನಿ.ಟೆಲಿ ಫೋನ್ ರಿಂಗ್ ಆಗದಿದ್ದರೂ ಅದರಲ್ಲಿ ಮಾತನಾಡುತ್ತೇನೆ ! ". .........ಚಿಕಿತ್ಸೆಯ ಫಲ !
೨)ನಮ್ಮ ದಿನ ನಿತ್ಯದ ವ್ಯವಹಾರಗಳು ಹೇಗಿರುತ್ತವೆ ನೋಡಿ;
ಕಮಲಮ್ಮ(ಸಿಟ್ಟಿನಿಂದ );"ಏನ್ರೀ ರಾಧಮ್ಮ .......!ನನಗೆ ಶಾಂತಮ್ಮ ಹೇಳಿದರು.....,ನಾನು ಅವರಿಗೆ ಹೇಳಬೇಡಿ ಎಂದು ನಿಮಗೆ ಹೇಳಿದ ವಿಷಯವನ್ನು ನೀವು ಅವರಿಗೆ ಹೇಳಿ ಬಿಟ್ಟಿರಂತೆ!ಹೌದೇ!!"
ರಾಧಮ್ಮ ;"ಛೆ !ಛೆ!ಎಂತಹ ಕೆಟ್ಟ ಹೆಂಗಸೂ ರೀ ಆ ಶಾಂತಮ್ಮ!ನಾನು ನೀವು ಹೇಳಿದಿರಿ ಅಂತ ಅವಳಿಗೆ ಹೇಳಿದ ವಿಷಯವನ್ನುನಿಮಗೆ ಹೇಳಬೇಡಿ ಎಂದು ಹೇಳಿದ್ದೆ!"
ಕಮಲಮ್ಮ;"ಆಯಿತು ಬಿಡಿ....,ಅವಳು ಈ ವಿಷಯ ನನಗೆ ಹೇಳಿದಳು ಅಂತನಾನು ನಿಮಗೆ ಹೇಳಿದೆ ಅಂತ ಅವಳಿಗೆ ಹೇಳಬೇಡಿ....ಆಯ್ತಾ!!"............(.ದೇವರೇ ಗತಿ!!!)
(ಇದು ಓಶೋ ರವರ yoga-the science of living ಪುಸ್ತಕದಿಂದ ಆಯ್ದುಕೊಂಡಿದ್ದು .ಅಭಿಪ್ರಾಯ ತಿಳಿಸಿ.)
Posted by Dr.D.T.Krishna Murthy. (noreply@blogger.com) on September 16, 2011 02:08 AM· permalink
Posted by ಜಲನಯನ (suruaz@gmail.com) on September 15, 2011 05:55 PM· permalink
ಹೃದಯದ..
ಮಾತೆಲ್ಲ ಕಣ್ಣಲ್ಲಿ ತುಂಬಿ..
ನೀ..
ನೋಡುವ ನೋಟ..
ನನ್ನೆದೆಯಲ್ಲಿ ಬಿಟ್ಟಿರುವೆಯಲ್ಲ..
ಈ
ರಂಗು ರಂಗಿನ..
ಸಂಜೆಯಲಿ..
ತುಸು ತುಸು.. ನಷೆಯೇರುವ..
ನಿನ್ನಯ ಗುಂಗು..
ನಲ್ಲೆ...
ಸಾಕೆನಗೆ..
ಈ..
ತುಟಿಗೆ ಬಾರದ..
ನನ್ನ..
ಗಾಢ ಮೌನದ ಪ್ರೇಮಕೆ...
Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on September 15, 2011 01:42 PM· permalink
ಶೇಷ ಶಯನನೆ, ಪಾಪ
ಯಾವಾಗಲೂ ಶೇಷನ ಮೇಲೆ
ಮಲಗುವೆಯಲ್ಲಾ, ಒಮ್ಮೆ ಯೋಚಿಸು
ಅದಕೂ ಜೀವವಿಲ್ಲವೇನೋ?
ಇಷ್ಟೆಲ್ಲಾ ತರತರದ
ಹಾಸಿಗೆ ಮಂಚಗಳಿರುವಾಗ
ಅದೇನು ಹೇಸಿಗೆ ಹಾವೇ ಹಾಸಿಗೆ
ಅದರ ಮೇಲೆ ಕರುಣೆ ಇಲ್ಲವೇನೋ?
ಲಕ್ಷ್ಮಿಯ ಕೈ ನೋಯದೇನೋ
ಒತ್ತಿ ಒತ್ತಿ ನಿನ್ನ ಕಾಲ
ನಾಲ್ಕು ದಿವಸ ರಜೆ
ಅವಳಿಗೂ ಕೊಡಬಾರದೇನೋ?
ಅಲ್ಲಲ್ಲಿ ನೋಡಲ್ಲಿ ಕಾಣಿಸದೆ
ಪಾರ್ಲರುಗಳು ಮಸ್ಸಾಜು
ಸೆಂಟರುಗಳು ಈ ಕಾಲದಲ್ಲೂ
ಅವಳಿಗೆ ಸುಖ ಬೇಡವೇನೋ?
ವಾಕಿಂಗು ಜಾಗಿಂಗು ರನ್ನಿಂಗು
ಒಂದೂ ಇಲ್ಲದೆ ಹಾಗೆ ಇರುವೆಯಲ್ಲಾ
ಬೊಜ್ಜು ಬಂದರೆ ಲಕುಮಿ
ಸಿಡುಕುವುದಿಲ್ಲವೇನೋ?
ಸಾಗರವ ಬಿಟ್ಟು ಭುವಿಗಿಳಿದು ಬಾ
ಇಲ್ಲಿ ಮೈದಾನವಿಲ್ಲ ರಸ್ತೆಯಲ್ಲೇ
ಜಾಗಿಂಗು ವಾಕಿಂಗು ಮಾಡಿ
ಜಿಮ್ಮುಗಳಲ್ಲಿ ಮೆಂಬರ್ ಆಗ್ಬಾರದೇನೋ?
ಬ್ರಹ್ಮನನು ನಾಭಿಯ
ಕಮಲದ ಮೇಲೆ ಕೂರಿಸಿಕೊಂಡೆ,
ನಿನ್ನೊಂದಿಗೆ ಏಕಾಂಗಿತನ
ಲಕುಮಿಗೆ ಬೇಡವೇನೋ?
ಸಿಂಗಲ್ ಫ್ಲೋರಿನ ಫ್ಲಾಟಲ್ಲಿ
ಲಕುಮಿಯೊಂದಿಗೆ ಸಂಸಾರ
ಮಾಡಿ ಮಾಡರ್ನ್ ಹರಿ
ನೀನಾಗಬಾರದೇನೋ?
ಸರ್ಕಾರಿ ಕೆಲಸವೂ ಸಿಗಬಹುದು
ಪ್ರೈವೆಟಲ್ಲೂ ದುಡ್ಡಿದೆ
ಏನೂ ಇಲ್ಲದಿದ್ದರೆ
ರಾಜಕೀಯ ನೀ ಮಾಡಬಾರದೇನೋ?
(ಲಕ್ಷ್ಮಿವೆಂಕಟರಮಣನಲ್ಲಿ ಕ್ಷಮೆ ಕೋರಿ...........)


Posted by ಮನದಾಳದಿಂದ............ (praveen.r.gowda.1982@gmail.com) on September 15, 2011 08:59 AM· permalink
ನೆನ್ನೆಯ ಪ್ರಜಾವಾಣಿಯಲ್ಲಿ ಗುರುರಾಜ್ ಕರ್ಜಗಿಯವರ 'ಕರುಣಾಳು ಬಾ ಬೆಳಕೆ'ಓದಿದೆ .ಅದರಲ್ಲಿದ್ದ ವಿಚಾರಗಳು ನಮ್ಮೆಲ್ಲರ ಕಣ್ಣು ತೆರೆಸುವಂತಹದ್ದು.ನಮ್ಮ ಅತಿಯಾದ ಪ್ರೀತಿ ನಮ್ಮ ಪ್ರೀತಿ ಪಾತ್ರರನ್ನು ಕಟ್ಟಿ ಹಾಕುತ್ತಿದೆಯೇ?ನಾವೆಲ್ಲಾ ಯೋಚಿಸ ಬೇಕಾದಂತಹ ವಿಷಯ.ಲೇಖಕರು ಸಣ್ಣವರಿದ್ದಾಗ ಅವರ ಮನೆಯಲ್ಲಿ ಸಾಕಿದ ನಾಯಿ, ಬೆಳ್ಳಗಿರುವ ಬೆಣ್ಣೆಯ ಮುದ್ದೆಯಂತಿದ್ದ ಮರಿಯೊಂದನ್ನು ಹಾಕಿತ್ತು.ಇವರಿಗೆ ಅದನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.ಸದಾಕಾಲ ಅದನ್ನು ಎದೆಗೆ ಅವುಚಿಕೊಂಡೇ ಓಡಾಡುತ್ತಿದ್ದರು .ಆ ನಾಯಿಮರಿಗೋ ಹಿಂಸೆಯಾಗಿ ಕುಂಯ್ ಗುಡುತ್ತಿತ್ತಂತೆ.ಅವರಜ್ಜ ಅವರಿಗೆ'ನೀನು ನಿಜವಾಗಿ ನಾಯಿ ಮರಿಯನ್ನು ಪ್ರೀತಿಸುತ್ತಿದ್ದರೆ,ಅದನ್ನು ಕೆಳಗೆ ಬಿಡು.ಅದು ಸುಖವಾಗಿ ಆಟವಾಡಿಕೊಂಡು ಇರುವುದನ್ನು ನೋಡಿ ಸಂತಸಪಡು' ಎಂದರು.ಅಜ್ಜನ ಮಾತು ಕೇಳಿ,ಅದನ್ನು ಕೆಳಗೆ ಬಿಟ್ಟು ಅದು ಅಲ್ಲಿ ಇಲ್ಲಿ ಬಾಲ ಅಲ್ಲಾಡಿಸಿಕೊಂಡು ಓಡಾಡುವುದನ್ನು ನೋಡಿ ಖುಷಿ ಪಟ್ಟರಂತೆ.ಈ ಘಟನೆ ಯಿಂದ ನಾನು ದೊಡ್ಡದೊಂದು ಪಾಠ ಕಲಿತೆ ಎನ್ನುತ್ತಾರೆ ಲೇಖಕರು.ನೀವು ನಿಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೀರಾ? ಹಾಗಾದರೆ ಆಕೆ ನಿಮ್ಮ ಆಜ್ಞೆಯಂತೆಯೇ ನಡೆಯ ಬೇಕೆಂಬ ಹಠ ಬಿಡಿ.ಆಕೆಯ ಮೇಲೆ ನಿಮ್ಮ ಅಧಿಕಾರ ಚಲಾಯಿಸಬೇಡಿ.ನಿಮ್ಮ ಗಂಡನ ಬಗ್ಗೆ ನಿಮಗೆ ಪ್ರೀತಿಯೇ?ಹಾಗಾದರೆ ಅವರ ಬಗ್ಗೆ ಸಂಪೂರ್ಣ ನಂಬಿಕೆಯಿರಲಿ.ಅವರ ಎಲ್ಲಾ ಸಮಯವನ್ನೂ ನನಗೆ ಮೀಸಲಿಡಬೇಕೆಂಬ ಹಠ ಬೇಡ.
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
(ಇದು ಲೇಖಕರ ಅಭಿಪ್ರಾಯ.ನಿಮ್ಮ ಅಭಿಮತ ತಿಳಿದುಕೊಳ್ಳುವ ಕುತೂಹಲ ನನಗೆ.ನಿಮ್ಮ ಪ್ರತಿಕ್ರಿಯೆ ತಿಳಿಸಿ.)
Posted by Dr.D.T.Krishna Murthy. (noreply@blogger.com) on September 14, 2011 01:15 PM· permalink

ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!
[ನಾಕಾರು ದಿನ ಕೆಲವರನ್ನು ಹೀಗೇ ಸ್ತುತಿಸೋಣ ಎಂಬ ತುಂಬುಹೃದಯದ ಹಂಬಲದಿಂದ ಮೊದಲನೆಯದಾಗಿ ಇಂದು ಜನಾರ್ದನ ಭಜನೆ!]
ಗದರಿದನು ಗಣಿರಾಯನುದಯಿಸಿ
ಹೆದರಿಸುತ ಹಲವರನು ಹಣದೊಳು
ಒದರಿದನು ತಾಂ ’ಕೃಷ್ಣರಾಯುಡು’ ವಿಜಯನಗರಧಿಪ !!
ಸದರಿ ಮಾನವ ಹುದುಗಿ ನಿಧಿಗಳ
ಬದರಿನಾರಾಯಣನ ಮೀರಿಸೆ
ಚದುರಿನಿಂತನು ರಾಜಕೀಯದ ಬಿದಿರು ಬೊಂಬೆಗಳ !
ಎದುರು ಜಾವದ ಮೂರುಗಂಟೆಗೆ
’ಖದರು’ ವೇಷವದೈದು ಕೋಟಿದು
ನಿದಿರೆ ತೊರೆದರು ನೆಂಟರಿಷ್ಟರು ಅದನು ನೋಡುವೊಲು !
ಮಧುರ ನುಡಿಗಳ ಕೇಳಿ ವಿನಯದಿ
ಅಧರವಾಡದೆ ಶರಣು ನಿಂದರು
ಪದರಪದರದಿ ಕಾಸನಿರಿಸಿದ ದೊರೆಗೆ ವಂದಿಸುತ !!
ಗೆದರಿ ದಾಖಲೆ ಕಾಗದಂಗಳ
ಮುದುರಿ ಸಿಬಿಐ ಜನಂಗಳು
ಉದಯನುದಿಸುವ ಮೊದಲೆ ಹಾಜರು ಬದಲಿ ಗುರುತಿನಲಿ !
ಮದಿರೆ ಮಾನಿನಿ ಹಣದ ಥೈಲಿಯ
ಉದುರಿಸಿದರದನೊಲ್ಲೆನೆಂದರು
ಅದಿರು ದಂಧೆಯ ಪ್ರಮುಖ ಕುಳವನು ಹದನೆ ಕರೆದೊಯ್ದು !!
ಉದರ ಭರ್ತಿಗೆ ಎದುರು ಖರ್ಚಿಗೆ
ಮೊದಲಿರುವ ಮೂವತ್ತು ಸಾವಿರ
ಅದರಲೇ ಅತಿಕಡಿಮೆ ಬಳಸುತ ಸರಳ ತಾನೆಂದ !
ಕುದುರದಾಯಿತು ಯಾವ ಆಮಿಷ
ಕುದುರೆಗಳು ಮಾರಾಟಗೊಳ್ಳವು
ಬೆದರಿನಿಂದನು ಕಂಬಿಯೆಣಿಸುತ ತಾ ಜನಾರ್ದನನು !!
Posted by ವಿ.ಆರ್.ಭಟ್ (vrbhat06@gmail.com) on September 14, 2011 05:50 AM· permalink

ಕಾಲೇಜಿನಲ್ಲಿ ಬೋರ್ ಹೊಡಿಸೋ ಕ್ಲಾಸಿನಲ್ಲಿ ಕುಳಿತು ನೋಟ್ ಬುಕ್ ನ ಕೊನೆಯ ಪೇಜಿನಲ್ಲಿ ಗೀಚಿದ ಸಾಲುಗಳಿವು. ಬ್ಲಾಗಿನಲ್ಲಿ ಹಾಕಲೋ ಬೇಡವೋ ಅಂತಿದ್ದೆ. ಮೊನ್ನೆ ನನ್ನ ಹಳೆ note books ಎಲ್ಲ ಜೋಡಿಸಿಡುತ್ತಿರುವಾಗ ಕೊನೆಯ ಪೇಜಿನಲ್ಲಿ ಕಂಡವು. ಅದೇನೋ ಅಕ್ಕರೆ ಈ ಕೊನೆಯ ಹಾಳೆಯ ಮೇಲೆ. ಶಾಲಾ ದಿನದಿಂದಲೂ ಕೊನೆಯ ಪೇಜಿನಲ್ಲಿ ಬರೆಯುವ ಚಟ ಇತ್ತು. ಮನದಲ್ಲಿ ಮುಚ್ಚಿಟ್ಟ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಈ ಕೊನೆಯ ಪೇಜು. ತುಂಬಾ ಜನರಿಗೆ ಈ ಹವ್ಯಾಸ ಅಥವಾ ಚಟ ಇದೆ ಅಂದು ಕೊಂಡಿದ್ದೇನೆ. ಶಾಲಾ ದಿನಗಳ stupid crushಗಳ ಹೆಸರನ್ನು ಬರೆಯಲು ಬಳಕೆಯಾಗುತ್ತಿದ್ದ ಆ ಕೊನೆಯ ಹಾಳೆ. ನಂತರ ಮನದ ಭಾವಗಳನ್ನು ಸಾಲಾಗಿ ನಿಲ್ಲಿಸಿ ಅದೇನೋ ಒಂದು ವಿಚಿತ್ರ ರೂಪ ಕೊಟ್ಟು ಬಿಡುವಷ್ಟು ಬೆಳೆದು ನಿಂತಿತ್ತು.
ನಿಮಗೂ ನಿಮ್ಮ note bookನ ಕೊನೆಯ ಪೇಜು ನೆನಪಿಗೆ ಬರಬಹುದು. ಅದರಲ್ಲೂ ಒಂದಿಷ್ಟು ಸಾಲುಗಳಿರಬಹುದು ಅಲ್ವಾ ? ಒಂದೊಂದು ಸಾಲು ವಿಚಿತ್ರ ಎನಿಸಬಹುದು. ಅದಾವ ಭಾವವಿದೆ ಎಂದು ಅರಿಯುವ ಮೊದಲೇ ನಿಮ್ಮ ಹಳೆಯ ಪ್ರೀತಿ ನೆನಪಾಗಬಹುದು. ಕಳೆದು ಹೋದ ಒಂದಿಷ್ಟು ದಿನಗಳು ನೆನಪಾಗಬಹುದು...!
ಬೇಸರದ ಮನದ ಭಾವಗಳಿಗೆ "ಮುರಿದ ಸಾಲುಗಳು " "broken lines "ಎಂಬ ತಲೆ ಬರಹದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನೋಡಿ ಪ್ರತಿಕ್ರಿಯಿಸಿ.
** ಮುರಿದು ಬಿದ್ದ ಹಕ್ಕಿಯ ಗೂಡೊಂದರ ಮೇಲೆ ಮಂಜಿನ ಹನಿಯೊಂದು ಕೂತು ಕನಸು ಕಾಣುತ್ತಿತ್ತು.
**ಅಮಾವಾಸ್ಯೆಯ ಇರುಳಲ್ಲೂ ಶಶಿಗಾಗಿ ಕಾದು ಕುಳಿತಿರುವ ಚುಕ್ಕಿ, ಚುಕ್ಕಿಯ ನೆನಪಲ್ಲೇ ಬೆಳಗುವ ಮಿಂಚು ಹುಳು ..!
**ನಾನು ಕಾಡಿಸಿದೆ, ಪ್ರೀತಿಸಿದೆ, ಕೊನೆಗೆ ನಿನಗಾಗಿ ಕಾದೆ ... ನೀನು ನನ್ನ ಬದುಕಿಂದ ಎದ್ದೆ ...!
**ಮೊನ್ನೆ ಮೊನ್ನೆ, ಕನ್ಯತ್ವ ಕಳೆದುಕೊಂಡೆ, ಎಂದು ಬಿಕ್ಕಿದ ಕನ್ಯಾ ರಾಶಿಯ ಹುಡುಗಿ ...!
** ಹುಡುಗಿಯ ಕೆನ್ನೆ ಮೇಲಿನ ಕಣ್ಣ ಹನಿಯಲಿ ನಕ್ಷತ್ರವೊಂದು ತನ್ನ ಬಿಂಬವ ನೋಡಿ ನಕ್ಕಿತು ..!
** ಒಂದಿಷ್ಟು ನೆನಪುಗಳ ಹೂತು ಗೋರಿ ಮಾಡಿದೆ. ರಾತ್ರೆ ಬಿದ್ದ ಕನಸೊಂದು ಗೋರಿಯೊಳಗಿದ್ದ ನೆನಪುಗಳ ಎಬ್ಬಿಸಿ ಬಿಟ್ಟಿತ್ತು ..!
**ಉಸಿರೊಂದಕ್ಕೆ ತಾನು ದನಿಯಾಗಬಹುದು ಎಂಬುದನ್ನು ಮರೆತು, ದನಗಾಹಿ ಹುಡುಗನೊಬ್ಬನ ಕೊಳಲ ಗಾನವ ಕೇಳುತ್ತ ಮೈಮರೆತ ಬಿದಿರ ಕೋಲು ..!
**ವರ್ತಮಾನದಲಿ ಕುಳಿತ ಮನಸಿಗೆ ಭೂತ-ಭವಿಷ್ಯಗಳ ಚಿಂತೆ ..!
**ಸಂಜೆ ಮುದುಡುವ ಚಿಂತೆ ಇಲ್ಲದೆ, ಅರಳುವ ಹೂಗಳು..!
**ಮುಟ್ಟಿನ ದಿನ ಹತ್ತಿರ ಬಂದ ಶಾಲಾ ಹುಡುಗಿಗೆ. ಶನಿವಾರದ ಬಿಳಿ ಸ್ಕರ್ಟಿನ ಚಿಂತೆ ...!
** ಮನದ ಗೋರಿಯೊಳಗೆ ಹೂತು ಹಾಕಿದ್ದ ಕನಸುಗಳು ಮತ್ತೆ ಎದ್ದು ಬರದಂತೆ ಕಾದು ಕುಳಿತವು ನೆನಪುಗಳು ..
**ಕೆರೆಯ ನೀರಲ್ಲಿ ಕಲ್ಲೆಸೆದು ಅಲೆಯ ಉಂಗುರವನ್ನು ನೋಡುತ್ತಾ ಕುಳಿತ ಹುಡುಗನಿಗೆ, ತನ್ನ ಕೈಯಲ್ಲಿನ ಉಂಗುರ ಕಳೆದದ್ದೇ ಗೊತ್ತಿರಲಿಲ್ಲ .!
**ಭಾವನೆಗಳಿಗೆ ಆಣೆಕಟ್ಟು ಕಟ್ಟಿದೆ ಮನಸು ಮರುಭೂಮಿಯಾಯ್ತು,ಮಾತಿಗೆ ಮೌನದ ಫ್ರೇಮು ಹಾಕಿದೆ ಕಣ್ಣೀರಾಯ್ತು...!
**ಹಸಿ ಮಣ್ಣಿಗೂ,ಹಸಿ ಮನಸಿಗೂ ಎಲ್ಲಿಯ ಸಂಬಂಧ ? ಎರಡರಲ್ಲೂ ಹೆಜ್ಜೆ ಗುರುತುಗಳು ಮೂಡುವುದು ಬೇಗ ..!
**ಅದ್ಯಾರದೋ ಕನಸು ಉರಿದು ಉಲ್ಕೆಯಾಗಿ ಬೀಳುತ್ತಿರುವಾಗ ಹುಡುಗನೊಬ್ಬ ಕನಸೊಂದರ ನನಸಿಗಾಗಿ ಪ್ರಾರ್ಥಿಸುತ್ತಿದ್ದ ..!
**ಪಕ್ಕಾ ಪಾತರಗಿತ್ತಿಯಂತಿರುವ ಈ ಕನಸುಗಳು ..!
** ಅವಳ ನೆನಪಿನ ನಗು-ಅಳುವಿನ ಮೋಡಿಗೆ ಹುಡುಗನ ಮನದಲ್ಲೊಂದು ಕಾಮನ ಬಿಲ್ಲು ...!
** ಅದಾವುದೋ ಹಾಡಿನ ರಾಗದೊಂದಿಗೆ ಹುಡುಗಿ ನೆನಪಾಗುತ್ತಿದ್ದಾಳೆ ಅವನಿಗೆ, ಹಾಡಿನೆ ಸಾಲುಗಳೇ ಮರೆತುಹೋಗಿವೆ ಜೊತೆಗೆ ಹುಡುಗಿಯ ಮುಖವೂ ....!
ಅದ್ಯಾವ ಭಾವದಲ್ಲಿ ಬರೆದಿದ್ದೆ ನನಗೆ ಗೊತ್ತಿಲ್ಲ ಕೆಲವನ್ನು ಈಗ ಓದಿದರೆ ನನಗೆ ಅರ್ಥವಾಗ್ತಾ ಇಲ್ಲ .....!
ಹೆಚ್ಚಿನವು ಕ್ಲಾಸಿನಲ್ಲಿ ಕುಳಿತು ಬರೆದದ್ದು. ಅಷ್ಟೊಂದು ಶಕ್ತಿಯಿದೆಯಾ? ಈ ಬೋರ್ ಹೊಡಿಸೋ subjectsಗಳಿಗೆ? ಲೆಕ್ಚರರುಗಳಿಗೆ??
Posted by Soumya. B (noreply@blogger.com) on September 14, 2011 04:43 AM· permalink
ಗುಡಿಸಿ, ನೀರೆರಚಿ
ರಂಗೋಲಿ ಹುಡಿಯ
ಗೆರೆಯಾಗಿಸುವಾಗ
ಚಿತ್ರ ಅರಳುತ್ತದೆ
ಎದೆಯೊಳಗೆ.
ಕಣ್ರೆಪ್ಪೆಯಾಚೆ ಈಚೆ
ತಿಳಿ ಕನಸೊಂದರ
ಎಳೆ ರಂಗೋಲಿ
ಅರಳುತ್ತ, ಹೊರಳುತ್ತ
ಜೀವಂತಿಕೆಯ ಮಿಸುಕು
ಒಳಗೊಳಗೆ.
ಮಿಂಚೊಂದು ಮೈ ಹೊಕ್ಕಂತೆ
ತನು ಝಲ್ ಎಂದರಳಿದ್ದು
ಸುಳ್ಳೆ?
ಹಣಿಗೆಯಾಡಿಸುವಾಗ
ಕನ್ನಡಿ ದಿಟ್ಟಿಸುವಾಗ
ಅರಳಿದ ಮೊಗದಲ್ಲರಳಿದ್ದು
ಯಾವ ಕಾಡು ಹೂ ಪಕಳೆ?
ಬಿಡು ಮರುಳೆ
ಎಂದು ಗುಂಗು ಕೊಡವಿ
ಗಾಡಿಯೇರಿ, ಬೀಗ ತಿರುವಿ
ಪಥಿಕರಲ್ಲೊಂದಾಗಿ ಹೊರಟು
ಕರ್ಕಶ, ಕಿರುಚುವಿಕೆಯ
ಹೆದ್ದಾರಿಯಬ್ಬರದಲೂ
ಸ್ಫುಟವಾಗಿ ಕೇಳಿದ ಮೆಲುನಗೆ
ಯಾವ ಮರುಳು?
ತಿರುವಿನಲಿ, ಏರಿನಲಿ, ಇಳಿವಿನಲಿ,
ತಂಗುದಾಣದಲಿ, ಲಿಫ್ಟಿನಲಿ
ಏರಿಳಿಯುವ ಪ್ರತಿಯೊಂದು ಕ್ಷಣದಲಿ
ಅರಳುತ್ತಳಿಯುತ್ತ ಅರಳಿ ನಿಂತಿದ್ದು
ಹೊರಳುತ್ತರಳುತ್ತ ಎದ್ದು ನಿಂತಿದ್ದು
ಯಾವ ಮರುಳು?
ಅಂಗಳದಿ ಬಿಡಿಸಿದ ರಂಗೋಲಿ
ಹುಡಿಯಾಗಿ ಹರಡುತ್ತ
ಇಡಿಯಾಗಿ ಅರಳಿದ್ದು
ಮನ ಮಾಮರದ ಘಮವಾಗಿ
ಹಕ್ಕಿಯುಲಿಯ ಇಂಪಾಗಿ,
ಹೂವಿನ ಕೆಂಪಾಗಿ, ಕಂಪಾಗಿ
ಊದುಬತ್ತಿಯ ಹೊಗೆಯಂತೆ
ಕದಲುತ್ತಲೇ ಬದಲಾಗಿದ್ದು
ಹರಡುತ್ತಲೇ ಸ್ಥಿರವಾಗಿದ್ದು
ಬರೀ ಮರುಳೆ?
ಎದೆಯೊಳಗೆ ಅಡಗಿ ಅರಳಿದ
ರಾಗಗಳಂತೆ,
ಒಳಗೆ ಮಿಡಿದರೂ ಹೊರದೋರದ
ನಾಡಿಗಳಂತೆ,
ಹಾಡಾಗದ ಸಾಲುಗಳು
ಮಾತಾಗದ ಭಾವಗಳು
ಅಕ್ಷರವಾಗಿ ಅರಳಿ,
ಭಾವನೆಯಾಗಿ ಕೆರಳಿ
ಎದೆಗೂಸು ನಿದ್ದೆಯಲಿ ನಸು ಬಿರಿದಂತೆ
ತುಳುಕಿದೆ ಚಿತ್ರ
ಎಂಥಾ ವಿಚಿತ್ರ!
Posted by ಆಲಾಪಿನಿ (shreevind@gmail.com) on September 13, 2011 03:44 PM· permalink